www.dgnsgreenworld.blogspot.com

Saturday, December 25, 2021

ಯಾರಿಗಾದರೂ ಸಹಾಯವಾಗಬಹುದೆಂದು

ಯಾರಿಗಾದರೂ ಸಹಾಯವಾಗಬಹುದೆಂದು.
ನನ್ನ ಹೆಸರು ಹೇಮ, ಸಾಫ್ಟ್ವೇರ್ ಉದ್ಯೋಗಿ ಬೆಂಗಳೂರಿನ ಬನಶಂಕರಿಯಲ್ಲಿ ವಾಸವಿದ್ದೇನೆ,ನಮ್ಮ ತಂದೆಗೆ 50 ವರ್ಷ ವಯಸ್ಸು ನನ್ನೊಂದಿಗೆ ಇಲ್ಲೇ ವಾಸವಿದ್ದಾರೆ ಅವರಿಗೆ ಮಧುಮೇಹ ಕಾಯಿಲೆ ಕೂಡ ಇದೆ,ಇತ್ತೀಚಿಗೆ ನಮ್ಮ ತಂದೆ ಕಾಲು ಎಡವಿಕೊಂಡು ಕಾಲಿನ ಬೆರಳಿಗೆ ಚಿಕ್ಕ ಗಾಯ ಮಾಡಿಕೊಂಡಿದ್ದರು,ಆಸ್ಪುತ್ರೆಗೆ ತೋರಿದೆ ಗಾಯಕ್ಕೆ ಬ್ಯಾಂಡೇಜ್ ಕಟ್ಟಿ ಇಂಜೆಕ್ಷನ್ ಕೊಟ್ಟಿ ಕಳುಹಿಸಿದರು ಎರಡು ಮೂರು ದಿನ ಆದರೂ ಗಾಯ ವಾಸಿಯಾಗಲಿಲ್ಲ ಬದಲಿಗೆ ಗಾಯ ದೊಡ್ಡದಾಗತೊಡಗಿತು ಮೂರು ವಾರ ಕಳೆಯಿತು ಕೊನೆಗೆ ಆಸ್ಪತ್ರೆಯವರು ಶುಗರ್ ಇದ್ದ ಕಾರಣ ಗ್ಯಾಂಗ್ರೇನ್’ಗೆ ತಿರುಗಿದೆ ತಕ್ಷಣ ಬೆರಳು ಕಟ್ ಮಾಡಬೇಕು ಇಲ್ಲದಿದ್ರೆ ಸಮಸ್ಯೆಯಾಗುತ್ತೆ ಅಂದರು ನನಗಂತೂ ದಿಕ್ಕೇ ತೋಚದಂತಾಗಿತ್ತು.

ಈ ಎಲ್ಲಾ ವಿಚಾರವನ್ನು ನನ್ನ ಗೆಳತಿ ಸುಮಾಳ ಬಳಿ ಹೇಳಿಕೊಂಡೆ ಅವಳು ನಮ್ಮ ಊರಾದ ಶಿವಮೊಗ್ಗದಲ್ಲಿ ಒಬ್ಬರು ಪಂಡಿತರಿದ್ದಾರೆ ಹೆಸರು ಮೋಹನಗೌಡ, ಪಾರಂಪರಿಕ ನ್ಯಾಚುರೋಪತಿ ಆಯುರ್ವೇದ ಗಿಡಮೂಲಿಕೆ ಚಿಕಿತ್ಸೆ ನೀಡುತ್ತಾರೆ ಅವರು ಇಂತಹಾ ಹಲವು ಕಾಯಿಲೆಗಳನ್ನು ಸುಲಭವಾಗಿ ಗುಣಪಡಿಸಿದ್ದಾರೆ,ಅವರ ಬಳಿ ಹೆಚ್ಚು ಬರುವುದೇ ಆಸ್ಪತ್ರೆ ರಿಜೆಕ್ಟ್ ಕೇಸ್ಗಳೇ,ಹಾರ್ಟ್,ಲಿವಿರ್,ಕಿಡ್ನಿ, ಕ್ಯಾನ್ಸರ್ ,ಥೈರಾಡ್ ಹೀಗೆ ಹಲವು ಸಮಸ್ಯೆಗಳನ್ನು ಬಗೆಹರಿಸುತ್ತಾರೆ, ಒಮ್ಮೆ ಅವರನ್ನು ಭೇಟಿ ಮಾಡು ಖಂಡಿತಾ ನಿಮ್ಮ ತಂದೆಯ ಕಾಲಿನ ಬೆರಳನ್ನು ಉಳಿಸಿಕೊಡುತ್ತಾರೆ ಅಂದರು ತಕ್ಷಣ ಅವಳ ಬಳಿ ಅವರ ಮೊಬೈಲ್ ಪಡೆದು ಕಾಲ್ ಮಾಡಿ ಮಾತನಾಡಿದೆ ಅವರು ನನಗೆ ಧೈರ್ಯ ಹೇಳಿದರು ಮತ್ತು ಗುಣಪಡಿಸುವ ಸಂಪೂರ್ಣ ಭರವಸೆ ಕೊಟ್ಟರು ನೀವು ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ ನಮ್ಮ ಮಗಳು ರಮ್ಯಾ ಅಲ್ಲೇ ಬೆಂಗಳೂರಿನಲ್ಲೇ ವೈದ್ಯ ವೃತ್ತಿ ಮಾಡುತ್ತಿದ್ದು ಅವಳ ಬಳಿಯೇ ತೋರಿಸಿ ಗುಣವಾಗುತ್ತದೆ ಎಂದರು, ಮರುದಿನವೇ ನನ್ನ ತಂದೆ ಮತ್ತು ತಾಯಿಯೊಂದಿಗೆ ಜಾಲಹಳ್ಳಿ ಕ್ರಾಸ್ ನಲ್ಲಿರುವ ಅವರ ಮಗಳನ್ನು ಭೇಟಿ ಮಾಡಿದೆ ಅವರು ತಂದೆಯ ಕಾಲಿನ ಗ್ಯಾಂಗ್ರೇನ್ ನ್ನು ನೋಡಿ ತಲೆಕೆಡಿಸಿಕೊಳ್ಳುವಂತದ್ದೇನು ಇಲ್ಲ ಸರಿಯಾಗುತ್ತಾರೆ ಬೆರಳು ಕಟ್ ಮಾಡಿಸಬೇಡಿ ನಮ್ಮಲ್ಲಿ ಮತ್ತು ಔಷದಿಯಲ್ಲಿ ವಿಶ್ವಾಸವಿಡಿ ಖಂಡಿತಾ ಗುಣವಾಗುತ್ತದೆ ಎಂದು ಧೈರ್ಯ ಹೇಳಿ ಔಷದ ಕೊಟ್ಟು ಕಳುಹಿಸಿದರು ,ನಮಗೆ ಪೂರ್ತಿಯಾಗಿ ನಂಬಿಕೆ ಬರದಿದ್ದರೂ ಅನಿವಾರ್ಯತೆ ನಮ್ಮ ತಂದೆಯ ಕಾಲು ಬೆರಳು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು ಅವರು ಹೇಳಿದಂತೆ ಸರಿಯಾಗಿ ಔಷದ ತೆಗೆದುಕೊಂಡೆವು ಒಂದು ವಾರದಲ್ಲೇ ಬೆರಳು ಕೊಳೆಯುವುದು ನಿಂತಿತ್ತು ಎರಡನೇ ವಾರದಲ್ಲಿ ಗಾಯ ಗುಣವಾಗಲು ಪ್ರಾರಂಭವಾಗಿ ಮಾಂಸ ಬೆಳೆಯತೊಡಗಿತು ಇವತ್ತಿಗೆ 60 ದಿನವಾಗಿದೆ ಸಂಪೂರ್ಣ ಗುಣಮುಖವಾಗಿದೆ, ನಮ್ಮ ತಂದೆ ಇಂದು ತುಂಬಾ ಖುಷಿಯಾಗಿದ್ದಾರೆ.ನಾನು ಹೆಮ್ಮೆಯಿಂದ ಹೇಳುತ್ತೇನೆ ನಮ್ಮ ಪುರಾತನ ಚಿಕಿತ್ಸೆ ಮತ್ತು ಗಿಡಮೂಲಿಕೆಯಿಂದ ಗುಣಪಡಿಸಲಾಗದ ಯಾವ ರೋಗವು ಇಲ್ಲ ,ನಿಮಗೆ ಯಾವುದೇ ಸಮಸ್ಯೆ ಇದ್ದರು ಇಂತಹಾ ವೈದ್ಯರನ್ನು ಭೇಟಿ ಮಾಡಿ ಕಾಯಿಲೆ ಗುಣಪಡಿಸಿಕೊಳ್ಳಿ ಯಾವುದೇ ಅಡ್ಡಪರಿಣಾಮವಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಿ,ಈ ಸಂದೇಶವನ್ನು ಶೇರ್ ಮಾಡಿ ಇದರಿಂದ ಹಲವು ಜನರಿಗೆ ಉಪಯೋಗವಾಗುತ್ತದೆ.

ಅವರ ಬೆಂಗಳೂರಿನ ವಿಳಾಸ.

ಜೀವ ಸಂಜೀವನಿ ಆಯುರ್ವೇದ ಪ್ರತಿಷ್ಠಾನ.
ಜಾಲಹಳ್ಳಿ ಕ್ರಾಸ್-ಬೆಂಗಳೂರು
-Jeeva sanjeevani Ayurveda foundation
Jalahalli cross,Bengaluru

ಫೋನ್ -9206380092/7892107018
ಯಾರಿಗಾದರೂ ಉಪಯೋಗವಾಗಬಹುದು. ದಯವಿಟ್ಟು ಕಾಪಿಪೇಸ್ಟ್ ಮಾಡಿಕೊಳ್ಳಿ...🙏🙏🙏

Thursday, December 23, 2021

*ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು ಭಾರತೀಯ ದಂಡ ಸಂಹಿತೆಯ ಕಲಮುಗಳು( IPC ಸೆಕ್ಷನ್ಸ್)*

*ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು ಭಾರತೀಯ ದಂಡ ಸಂಹಿತೆಯ ಕಲಮುಗಳು( IPC ಸೆಕ್ಷನ್ಸ್)*

*ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,*
*ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,*
*ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.*
*ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ,* *ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.*

ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಕಾನೂನಿನ ಅಡಿಯಲ್ಲಿ ಬರುವ ಸೆಕ್ಷನ್ಸ್….👇🏻

೧)ಕಳಬೇಡ, ಕಳ್ಳತನ ಮಾಡಬೇಡ ಇದು ಐಪಿಸಿ ಸೆಕ್ಷನ್- 378ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.

೨) ಕೊಲಬೇಡ, ಜೀವಹತ್ಯೆ ಮಾಡಬೇಡ ಇದು ಐಪಿಸಿ ಸೆಕ್ಷನ್- 300ರ ಪ್ರಕಾರ ಶಿಕ್ಷಾರ್ಹ  ಅಪರಾಧವಾಗಿದೆ.

೩)ಹುಸಿಯ ನುಡಿಯಲು ಬೇಡ, ಸುಳ್ಳು ಹೇಳಬೇಡ ಇದು ಐಪಿಸಿ ಸೆಕ್ಷನ್ - 415 ಮತ್ತು 420ರ ಪ್ರಕಾರ ಅಪರಾಧವಾಗಿದೆ.

೪)ಮುನಿಯಬೇಡ,

ಇದು ಐಪಿಸಿ ಸೆಕ್ಷನ್ - 319ರ ಪ್ರಕಾರ ಇದು ಇನ್ನೊಬ್ಬರ ಮನಸ್ಸಿದೆ ನೋವುಂಟು (hurt)ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

೫)ಅನ್ಯರಿಗೆ ಅಸಹ್ಯಪಡಬೇಡ,

ಇದು ಐಪಿಸಿ ಸೆಕ್ಷನ್- 295, 295A, 296, 297, 298,ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ

೬) ತನ್ನ ಬಣ್ಣಿಸಬೇಡ,

ಇದು ಐಪಿಸಿ ಸೆಕ್ಷನ್-192, 

ಪ್ರಕಾರ ತನ್ನ ಬಣ್ಣಿಸಿಕೊಂಡು ಸುಳ್ಳು ಸಾಕ್ಷಿ ಹೇಳಿಕೊಳ್ಳುವುದು ಇದು ಅಪರಾಧವಾಗಿದೆ.

೭)ಇದಿರ ಹಳಿಯಲು ಬೇಡ.

ಇದು ಐಪಿಸಿ ಸೆಕ್ಷನ್ -499ರ ಪ್ರಕಾರ ಇದು ಮಾನನಷ್ಟ, ಮೊಕದ್ದಮೆ ಅಪರಾಧವಾಗಿದೆ.

ಈ ಸಪ್ತಸೂತ್ರಗಳನ್ನು ಅಳವಡಿಸಿಕೊಂಡಲ್ಲಿ 

ನಿನಗಾವ ಭಯವಿಲ್ಲ,

ಇದೇ ಅಂತರಂಗಶುದ್ಧಿ,

ಇದೇ ಬಹಿರಂಗಶುದ್ಧಿ ,

ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ, ಎಂದು ಹೀಗೆ ಜಗತ್ತಿನ ಯಾರೂ ಯೋಚಿಸದ ಯೋಜಿಸದ ರೀತಿಯಲ್ಲಿ,

೯೦೦ ವರ್ಷಗಳ ಹಿಂದೆಯೇ ಕಾನೂನು,ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ, ಅರ್ಥಿಕತೆ, ಶಿಕ್ಷಣ, ಜ್ಞಾನ ವಿಜ್ಞಾನದ ಪರಿಕಲ್ಪನೆಯಲ್ಲಿ ಅನುಭವ ಮಂಟಪ ಎಂಬ ಸಂಸತ್ತನ್ನು ರಚಿಸಿ ಅಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿ ಪ್ರಸ್ಥಾಪಿಸಿ ಅನುಷ್ಟಾನಕ್ಕೆ ತಂದರು ಬಸವಾದಿ ಶರಣರು,

ಯಾವ ದೇಶದಲ್ಲೂ , ಎಲ್ಲೂ ಕೂಡ, ಯಾವ ಕಾನೂನು ರಚನೆಯಾಗದ ಮುನ್ನವೇ ಈ ರೀತಿಯಲ್ಲಿ ಅತ್ಯಂತ ವೈಜ್ಞಾನಿಕವೂ, ಸರ್ವಕಾಲಿಕ ಸತ್ಯವೂ, ವಾಸ್ತವವೂ ಆದ ವಚನಗಳ ಮೂಲಕ ಜನರಲ್ಲಿ ಜಾಗ್ರತಿ ಮೂಡಿಸಿದ,

ಜಗತ್ತಿನ ಪ್ರಥಮ ಪ್ರಜಾಸತ್ತಾತ್ಮಕ ಚಿಂತಕರು ದಾರ್ಶನಿಕರು ಯಾರೆಂದರೆ, ಅವರೇ  ಭಾರತವನ್ನು ವಿಶ್ವಗುರುವಾಗಿಸಿದ ಮಹಾಮಾನವತಾವಾದಿ,

ವಿಶ್ವಗುರು ಜಗಜ್ಯೋತಿ ಭಕ್ತಿಭಂಡಾರಿ  ಬಸವಣ್ಣನವರು.👏🏻👏🏻👏🏻👏🏻

ಬರಿ ಭಾರತಕ್ಕೆ ಮಾತ್ರವಲ್ಲ , ಇಡೀ ಈ ವಿಶ್ವಕ್ಕೆ ಗುರು, ನಮ್ಮ ಅಣ್ಣಾ ಬಸವಣ್ಣನವರು..
ವಂದನೆಗಳೊಂದಿಗೆ ,,,, 🙏🏻

Sunday, December 19, 2021

ಒಂದು ದಿನ ಅಲ್ಬರ್ಟ್ ಐನ್‍ಸ್ಟೈನ್ ಬೋರ್ಡ್ ಮೇಲೆ ಬರೆದರು:

ಒಂದು ದಿನ ಅಲ್ಬರ್ಟ್ ಐನ್‍ಸ್ಟೈನ್ ಬೋರ್ಡ್ ಮೇಲೆ ಬರೆದರು:
9 x 1 = 09
9 x 2 = 18
9 x 3 = 27
9 x 4 = 36
9 x 5 = 45
9 x 6 = 54
9 x 7 = 63
9 x 8 = 72
9 x 9 = 81
9 x 10 = 91
ಅವರ ಸ್ಟೂಡೆಂಟ್ಸ್ ಗಳಲ್ಲಿ ಗೊಂದಲ ಉಂಟಾಯಿತು ಏಕೆಂದರೆ ಆಲ್ಬರ್ಟ್ ಐನ್‌ಸ್ಟೈನ್ ತಪ್ಪು ಮಾಡಿದ್ದರು! 
9 x 10 ಗೆ ಸರಿಯಾದ ಉತ್ತರ 90 
ಎಲ್ಲಾ ವಿದ್ಯಾರ್ಥಿಗಳು ಅವರನ್ನು ಗೇಲಿ ಮಾಡಿದರು.ಆದರೆ ಆಲ್ಬರ್ಟ್ ಐನ್‌ಸ್ಟೈನ್ ಎಲ್ಲರೂ ಮೌನವಾಗಿರಲು ಕಾಯ್ದು  ಹೇಳಿದರು:
“ನಾನು ಒಂಬತ್ತು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೂ, ಯಾರೂ ನನ್ನನ್ನು ಅಭಿನಂದಿಸಲಿಲ್ಲ ಆದರೆ ನಾನು ಒಂದು ಪ್ರಶ್ನೆಗೆ  ತಪ್ಪು ಉತ್ತರ ಬರೆದಾಗ, ಎಲ್ಲರೂ ನಗಲು ಪ್ರಾರಂಭಿಸಿದಿರಿ. ಇದರರ್ಥ ಒಬ್ಬ ವ್ಯಕ್ತಿಯು ತುಂಬಾ ಯಶಸ್ವಿಯಾಗಿದ್ದರೂ, ಸಮಾಜವು ಅವನ ಸಣ್ಣ ತಪ್ಪನ್ನು ಗಮನಿಸುತ್ತದೆ ಮತ್ತು ಅದನ್ನು ಆನಂದಿಸುತ್ತಾದೆ. ಆದ್ದರಿಂದ ಟೀಕೆಗಳು ನಿಮ್ಮ ಕನಸುಗಳನ್ನು ನಾಶಮಾಡಲು ಬಿಡಬೇಡಿ, ಎಂದಿಗೂ ತಪ್ಪು ಮಾಡದ ವ್ಯಕ್ತಿ ಏನನ್ನೂ ಮಾಡದವನು. ”

Sunday, December 12, 2021

ಭಾರತದ ದಂಡನಾಯಕರಾಗಿದ್ದ CDS ಸ್ವರ್ಗಿಯ ಬಿಪಿನ್ ರಾವತ್ ಅವರ ಮನೆಯಿದು.....

ಭಾರತದ ದಂಡನಾಯಕರಾಗಿದ್ದ CDS ಸ್ವರ್ಗಿಯ ಬಿಪಿನ್ ರಾವತ್ ಅವರ ಮನೆಯಿದು.....

ಉತ್ತರಾಖಂಡ್ ರಾಜ್ಯದ ಪೌರೀಗರ್ವಾಲ್ ನ ಪ್ರಾಂತದಲ್ಲಿರುವ ಈ ಮನೆ ಬಿಪಿನ್ ರಾವತ್ ಅವರದ್ದು.
ನಿವೃತ್ತಿಯ ನಂತರ ಇಲ್ಲಿಯೇ ಒಂದು ನೂತನವಾದ ಮನೆ ನಿರ್ಮಾಣ ಮಾಡಿಸಿ, ಒಂದಷ್ಟು ದಿನ ವ್ಯವಸಾಯ ಮಾಡಿಕೊಂಡು ನಿವೃತ್ತಿಯ ಜೀವನ ಸವೆಸಬೇಕು ಎಂದು ಅವರು ಯೋಜನೆ ಹಾಕಿಕೊಂಡಿದ್ದರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಕೂಡ ತಿಳಿಸಿದ್ದರು.

ನಮ್ಮ ದೇಶದಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಅನುಭವಿಸಿದವರು ದೊಡ್ಡ ದೊಡ್ಡ ನಗರಗಳಲ್ಲಿ ಅಥವಾ ವಿದೇಶಗಳಲ್ಲಿ ಆಸ್ತಿಪಾಸ್ತಿ ಮಾಡಿದವರೇ ಜಾಸ್ತಿ, ಅಂತವರ ನಡುವೆ ಇಂತಹ ಒಂದು ಜೀವ ಕೂಡ ಇತ್ತು....

ಪ್ರಧಾನಿ ನರೇಂದ್ರ ಮೋದಿಜಿಯೇ ಸಾಮಾನ್ಯ ಅವರ ದಂಡನಾಯಕ ಅವರಿಗಿಂತ ಸಾಮಾನ್ಯ.....

Sunday, November 28, 2021

*NETWORK MARKETING INDUSTRY'S 2025 ಕ್ಕೆ ಎಷ್ಟು ಅವಶ್ಯಕತೆ ಇದೆ...??*

*NETWORK MARKETING INDUSTRY'S 2025 ಕ್ಕೆ ಎಷ್ಟು ಅವಶ್ಯಕತೆ ಇದೆ...??*

2000 ಇಸವಿಯಲ್ಲಿ ಡಾ.A.P.J. ಅಬ್ದುಲ್ ಕಲಾಂ ಜಿ ನಮ್ಮ ದೇಶ ಮುಂದುವರಿದ ರಾಷ್ಟ್ರ ಆಗಬೇಕು ಅಂದರೆ..? ಪ್ರತಿಯೊಬ್ಬ ಭಾರತೀಯರು ಗೌರ್ನಮೆಂಟ್ ಗೆ ಟ್ಯಾಕ್ಸ್ ಕಟ್ಟಬೇಕು, ಆಗ ನಮ್ಮ ದೇಶ ಮುಂದುವರಿದ ರಾಷ್ಟ್ರ ಆಗುತ್ತೆ  ಅಂತ ಹೇಳಿದ್ದರು, 2025 ಕ್ಕೆ ನಮ್ಮ ದೇಶ ಮುಂದುವರಿದ ರಾಷ್ಟ್ರ ಆಗುತ್ತೆ ಯಾವ  ಇಂಡಸ್ಟ್ರಿಯಿಂದ ಅಂದರೆ  ನೆಟ್ವರ್ಕ್ ಮಾರ್ಕೆಟಿಂಗ್ ಇಂಡಸ್ಟ್ರಿಯಿಂದ ಮಾತ್ರ ಸಾಧ್ಯ ಅಂತ ಹೇಳಿದ್ದರು, ಇವತ್ತು  40% ಜನಕ್ಕೆ ಉದ್ಯೋಗ ಇಲ್ಲ, 2025 ಕ್ಕೆ 60% ಜನಕ್ಕೆ ಉದ್ಯೋಗ ಇರಲ್ಲ, ಆಗಾ ಒಂದೇ ಒಂದು ಇಂಡಸ್ಟ್ರಿ  Welcome ಕೋರುತ್ತೆ ಅದೇ ನೆಟ್ವರ್ಕ್ ಮಾರ್ಕೆಟಿಂಗ್, 60% youth ಗೆ 2025 ಕ್ಕೆ ಜಾಬ್ ಸಿಗದೆ ಅಲೆದಾಡುವ ಪರಿಸ್ಥಿತಿ ಬರುತ್ತದೆ, ಏಕೆಂದರೆ 2025 ಕ್ಕೆ ಮನುಷ್ಯ ಮಾಡುವ ಕೆಲಸವನ್ನು ರೋಬೋಸ್ ಮಾಡುತ್ತವೆ, ಎಲ್ಲಾ ಉದ್ಯಮದಲ್ಲೂ ರೋಬೋಸ್ ಗಳ ಆವಳಿ ಜಾಸ್ತಿ ಆಗುತ್ತೆ, 
 ನೆಟ್ವರ್ಕ್ ಮಾರ್ಕೆಟಿಂಗ್ ಇದು ಒಂದು ಹೊಸ ಆವಿಷ್ಕಾರ , ಬದಲಾವಣೆಯ, ಸಮಯ ಯಾಕಂದರೆ? ಆನ್ಲೈನ್ ಅಂದರೆ ಜನ ನಂಬುತ್ತಿರಲಿಲ್ಲ, ಈಗ ಊಟ ಬೇಕು ಅಂದ್ರು ಆನ್ಲೈನ್ ಲ್ಲೆ ಬುಕ್ ಮಾಡ್ತಿದ್ದೀವಿ, ATM ಅಂದ್ರೆ ಜನ ನಂಬುತ್ತೀರಲಿಲ್ಲ, ಈಗ ಒಂದು ಅಜ್ಜಿ ಹತ್ರ ATM Card ಇದೆ, ATM Card ಬಳಸೋರ್ ಸಂಖ್ಯೆನು ಕಡಿಮೆ ಆಗ್ತಿದೆ, ಯಾಕೆಂದರೆ..? ನೆಟ್ ಬ್ಯಾಂಕಿಂಗ್ ಜಾಸ್ತಿ ಬಳಸುತ್ತಿದ್ದಾರೆ,  ಪಾನೀಪೂರಿ ತಿಂದಮೇಲೆ 10 ರೂ ಚೇಂಜ್ ಇಲ್ಲ ಅಂದರೆ No Problem "ಫೋನ್ ಪೆ, ಗೂಗಲ್ ಪೆ" ಕಳ್ಸಿ ಸರ್ ಅಂತಾರೆ, 100 ರೂಪಾಯಿ , 500ರೂಪಾಯಿ, 1000 ರೂಪಾಯಿ , ಬೇಕು ಅಂದ್ರೆ ಬ್ಯಾಂಕ್ ನಲ್ಲಿ ಪಾಸ್ ಬುಕ್ ಇಡಿದುಕೊಂಡು ಚಲನ್ ನಲ್ಲಿ ಬರೆದು ಟೋಕನ್ ಕಾಯಿನ್ ಇಡಿದುಕೊಂಡು ಕ್ಯೂ ನಿಂತಿದ್ದಂತ ಜನ, ಇವತ್ತು 1 ಸೆಕೆಂಡ್ ಸಾಕು "ಫೋನ್ ಪೆ, ಗೂಗಲ್ ಪೆ"  ನಲ್ಲಿ ಬೇರೆಯವರಿಗೆ ಕಳಿಸಬಹುದು, ಈಗ 2035 ಕ್ಕೆ Advance Technology ಬರ್ತಿದೆ digital india concept ಮೂಖಾಂತರ Bit Coins Technology, Cash(Less) Transaction , Banking Sectors ಯಾವುದು ಇರಲ್ಲ, Workers  ಯಾರು ಇರಲ್ಲ, governament ಯಿಂದ  App ಬಿಡ್ತರೆ, ನಿಮ್ಮ ಆಧಾರ್ ಕಾರ್ಡ್ , ಪ್ಯಾನ್ ಕಾರ್ಡ್ , ಅಡ್ರೆಸ್ ಪ್ರೂಫ್, ನಿಮ್ಮ App ನಲ್ಲಿ Upload ಮಾಡ್ಬೇಕು,  ನೀವು ಏನಾದ್ರು ಶಾಪಿಂಗ್ ಮಾಡುದ್ರೆ ಯಾರಿಗಾದ್ರು 50Rs.ಕೊಡಬೇಕು ಅಂದರೆ Just Transfer  ಅಷ್ಟೇ, ನೀವು ಏನೇ Transaction ಮಾಡುದ್ರು IT Department ಗೆ Update ಆಗ್ತಿರುತ್ತೆ..   Block Money ಯಾರೆಲ್ಲ ಇಟ್ಟಿದರೆ, ಪೈಪ್ ಒಳಗೆ, ಮಂಚದ ಕೆಳಗೆ, ಸೋಫಾ ಒಳಗೆ, ಮುಚ್ಚಿಟ್ಟಿದ್ದಾರೆ... 2035 ಕ್ಕೆ ಬೆಂಕಿ ಅಚ್ಚಬೇಕಾಗುತ್ತೆ, digital india(ಕ್ಯಾಶ್ ಲೆಸ್)  ಈ ಎಲ್ಲಾ Technology ನ ನಾವು ಹೇಗೆ ನಂಬಿದ್ದಿವೋ ಹಾಗೆ ನೆಟ್ವರ್ಕ್ ಮಾರ್ಕೆಟಿಂಗ್ ನು ಕೂಡ ನೀವೂ ನಂಬಲೇಬೇಕು, ಇವತ್ತು ಜನಗಳನ್ನ ಹುಡುಕಿಕೊಂಡು ಹೋಗಿ ತಿಳಿಸುತ್ತಿದ್ದೀವಿ.. 2025 ಕ್ಕೆ ಅವರೇ ಹುಡುಕಿಕೊಂಡು ಬಂದು ಅವತ್ತು ಏನೋ ಹೇಳ್ತಿದ್ರಲ್ಲ ಹೇಳಿ, ನಂಗೆ ಜಾಬ್ ಇಲ್ಲ ಅಂತ ಕೇಳಿಕೊಂಡು ಬರೋದಿನ ಬಂದೆ ಬರುತ್ತೆ, wait And see.....

ಡೆಲ್ಲಿ ಯೂನಿವರ್ಸಿಟಿ ನಲ್ಲಿ ಕೋರ್ಸ್ ಲಾಂಚ್ ಹಾಗಿದೆ, *MBA in Networking* 

*Master of Networking* 

*Bachelor of Networking* 
  
ಬಗ್ಗೆ ಕೋರ್ಸ್ ಲಾಂಚ್ ಆಗಿದೆ , 

ಈಗ ಬಂದ್ರೆ ಆಧಾರ್ ಕಾರ್ಡ್ , 2025 ಕ್ಕೆ ಬಂದ್ರೆ ಡೈರೆಕ್ಟ್ ಮಾರ್ಕೆಟಿಂಗ್ ಕೋರ್ಸ್ ಮಾಡ್ಕೊಂಡು ಪಾಸ್ ಆಗಿ ಸರ್ಟಿಫಿಕೇಟ್ ಹಿಡಿದುಕೊಂಡು 
ನೆಟ್ವರ್ಕ್ ಮಾರ್ಕೆಟಿಂಗ್ ಮಾಡಬೇಕಾಗುತ್ತದೆ... ನೀವು ಈಗ ನಂಬಲಿಲ್ಲ ಅಂದ್ರೇ, ಮುಂದೆ ಜಗತ್ತೇ ನಂಬೋ ಹಾಗೆ ಮಾಡುತ್ತೆ....,,,,,,

Monday, November 22, 2021

*"ಮಧ್ಯವಯಸ್ಸಿನ ಅನುಭವ"*

*"ಮಧ್ಯವಯಸ್ಸಿನ ಅನುಭವ"*

ಹೌದು, ಬದಲಾಗಿದ್ದೇನೆ. ನನ್ನ ಬದುಕಿನಲ್ಲಿ ಬಂದ ಎಲ್ಲರನ್ನೂ ಪ್ರೀತಿಸಿದ ಅವಧಿ ಮುಗಿದಾಯ್ತು, ಈಗ ನನ್ನನ್ನು ಪ್ರೀತಿಸುವ ಸರಧಿ ಬಂದಿದೆ

ಹೌದು , ಬದಲಾಗಿದ್ದೇನೆ..ಇಡೀ ಜಗತ್ತನ್ನು ನನ್ನ ಭುಜದ ಮೇಲೆ ಹೊರಲು ನಾನೇನು ಅಟ್ಲಾಸ್ ನಕ್ಷೆಯಲ್ಲ,,, ನನಗೂ ಮಿತಿಯಿದೆ

ಹೌದು ಬದಲಾಗಿದ್ದೇನೆ,, ತರಕಾರಿ, ಹಣ್ಣುಗಳನ್ನು ಚೌಕಾಸಿ ಮಾಡಿ ಕೊಳ್ಳುವುದನ್ನು ನಿಲ್ಲಿಸಿದ್ದೇನೆ...ಅದರಿಂದ ನನ್ನ ಕಿಸಿಯೇನು ಬರಿದಾಗುವುದಿಲ್ಲ,ಒಬ್ಬ ಬಡವ್ಯಾಪಾರಿಯ ಮಗಳ ಶಾಲಾ ಫೀಸ್ ತುಂಬಲು ಸಹಾಯವಾಗಬಹುದು

ಹೌದು ಬದಲಾಗಿದ್ದೇನೆ,,,ಒಬ್ಬ ಟ್ಯಾಕ್ಸಿ ಚಾಲಕನ ಹತ್ತಿರ ಚಿಲ್ಲರೆ ಕೇಳುವುದನ್ನು ನಿಲ್ಲಿಸಿದ್ದೇನೆ, ಅವನು ಬದುಕು ನನಗಿಂತ ಸಂಕಷ್ಟದಲ್ಲಿರಬಹುದು

ಹೌದು, ಬದಲಾಗಿದ್ದೇನೆ,,ಇತರರು ತಪ್ಪು ಮಾಡಬಹುದು, ಹಾಗೆಂದ ಮಾತ್ರಕ್ಕೆ ಅವರನ್ನು ತಿದ್ದುತ್ತಾ ಕೂರುವುದು ನನ್ನ ಕೆಲಸವಲ್ಲ ಎಂದು ಅರ್ಥವಾಗಿದೆ, ಎಲ್ಲರಲ್ಲೂ ಪರಿಪೂರ್ಣತೆ ಹುಡುಕುತ್ತಾ ಕುಳಿತುಕೊಳ್ಳುವ ಬದಲು ನೆಮ್ಮದಿಯತ್ತ ಮೊರೆ ಹೋಗುತ್ತೇನೆ..ನೆಮ್ಮದಿಯೆಂದರೆ ಪರಿಪೂರ್ಣತೆಗೂ ಮಿಗಿಲು

ಹೌದು, ಬದಲಾಗಿದ್ದೇನೆ,,, ಈಗ ಮೊದಲಿಗಿಂತ ಹೆಚ್ಚಾಗಿ ಒಳ್ಳೆಯದನ್ನು ಪ್ರಶಂಸಿಸಲು ಕಲಿತಿದ್ದೇನೆ. ಅದು ನನ್ನೆದುರಿನ ವ್ಯಕ್ತಿಯ ಚೈತನ್ಯವನ್ನು ಮಾತ್ರವಲ್ಲ, ನನ್ನ ಜೀವನೋತ್ಸಾಹವನ್ನು ಪುಷ್ಠಿಗೊಳಿಸುತ್ತದೆ

ಹೌದು, ಬದಲಾಗಿದ್ದೇನೆ,,, ನನ್ನ ಅಂಗಿ ಚೂರು ಅರಿದಿದ್ದರೆ ಅಥವಾ ಕಲೆಯಾಗಿದ್ದರೆ ಅದರ ಬಗ್ಗೆ ತಲೆ ಕೆಡಸಿಕೊಳ್ಳುತ್ತಿಲ್ಲ..ಅದೇನೆ ಆಗಲಿ ನನ್ನ ವ್ಯಕ್ತಿತ್ವ ಹೊರನೋಟಕ್ಕಿಂತ ಮಿಗಿಲು

ಹೌದು, ಬದಲಾಗಿದ್ದೇನೆ...ನನ್ನನ್ನು ಗೌರವಿಸದವರಿಂದ ಬಹುದೂರ ಉಳಿದುಬಿಡುತ್ತೇನೆ...ನನಗೆ ನನ್ನ ಮೌಲ್ಯದ ಅರಿವುಳ್ಳಷ್ಟು ಅವರಿಗೆ ಎಲ್ಲಿ ಇರಬೇಕು ಅಲ್ಲವೇ...

ಹೌದು, ಬದಲಾಗಿದ್ದೇನೆ..ನನ್ನನ್ನು ಹತ್ತಿಕ್ಕಲು ಬರುವವರ ಮುಂದೆ ಪ್ರಶಾಂತವಾಗಿ ವರ್ತಿಸುತ್ತೇನೆ...ಅವರೇ ಮುಂದೆ ಹೋಗಲಿ...ಅಷ್ಟಕ್ಕೂ ನಾನ್ಯಾವ ಓಟದ ಸ್ಪರ್ಧಿಯಲ್ಲ

ಹೌದು, ಬದಲಾಗಿದ್ದೇನೆ...ನನ್ನದೇ ಭಾವನೆಗಳಿಂದ ನಾನು ಕಸಿವಿಸಿಗೊಳ್ಳುವುದನ್ನು ನಿಲ್ಲಿಸಿದ್ದೇನೆ. ಅಷ್ಟಕ್ಕೂ ಅವುಗಳಿಂದಲೇ ನಾನು ಮನುಷ್ಯನೆನ್ನಿಸಿಕೊಂಡಿರುವುದು...

ಹೌದು, ನಾನು ಬದಲಾಗಿದ್ದೇನೆ...ಸಂಬಂಧಗಳೊಂದಿಗೆ ರಾಜಿಯಾಗುವುದನ್ನು ಕಲಿತಿದ್ದೇನೆ..ಅಷ್ಟಕ್ಕೂ ಸಂಬಂಧಗಳಿಗಿಂತ ನನ್ನ ಅಹಂಕಾರ ದೊಡ್ಡದೇನಲ್ಲ

ಹೌದು, ಬದಲಾಗಿದ್ದೇನೆ..ಈ ಕ್ಷಣದಲ್ಲಿ ಬದುಕುವುದು ಕಲಿತಿದ್ದೇನೆ...ಯಾರಿಗೆ ಗೊತ್ತು? ಈ ಕ್ಷಣವೇ ನನ್ನ ಬದುಕಿನ ಅಂತಿಮ ಕ್ಷಣವಾಗಿರಬಹುದು

ಹೌದು..ಬದಲಾಗಿದ್ದೇನೆ..

ನನಗೆ ಸಂತೋಷ ಕೊಡುವುದನ್ನು ನಾನು ಮಾಡುತ್ತೇನೆ...ಇದು ನನ್ನ ಸಂತೋಷದ ಸರಧಿ...ಅದಕ್ಕೆ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ...ಸಂತೋಷಕ್ಕೆ ನ್ಯಾಯ ಒದಗಿಸುವುದೆಂದರೆ, ನನಗೆ ನಾನು ನ್ಯಾಯ ಒದಗಿಸುವುದು ಎಂದರ್ಥ...

ಧನ್ಯವಾದಗಳು 🙏

Tuesday, November 16, 2021

*ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️*

*ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️*

*ಆಗ :* ಕೊಳ, ಬಾವಿಯ  ನೀರನ್ನು ಸೇದಿ ನೇರವಾಗಿ ಕುಡಿದು ನೂರು ವರ್ಷ ಬದುಕುತ್ತಿದ್ದರು. 
*ಈಗ :* ಶುದ್ಧೀಕರಿಸಿದ RO ನೀರು‌ ಕುಡಿದರೂ 40 ವರ್ಷಕ್ಕೇ ರೋಗಗಳು.
*ಆಗ :* ಗಾಣದಿಂದ ತೆಗೆದ‌ ಎಣ್ಣೆಯನ್ನು ಉಪಯೋಗಿಸಿದರೂ ಮುದುಕರಾಗುವವರೆಗೂ ಶ್ರಮವಹಿಸಿ ದುಡಿಯುತ್ತಿದ್ದರು. 
*ಈಗ :* ಡಬಲ್ ಫಿಲ್ಟರ್ಡ್ ಎಣ್ಣೆಯನ್ನು ಉಪಯೋಗಿಸಿದರೂ ಹೃದಯಾಘಾತದಿಂದ ಆಸ್ಪತ್ರೆಗೆ ಸೇರೋದು ತಪ್ತಿಲ್ಲ.
*ಆಗ :* RAW SALT ಬಳಸಿ ಸಹ ಚೆನ್ನಾಗಿ ಬದುಕುತ್ತಿದ್ದರು. 
*ಈಗ :* ಅಯೋಡಿನ್ ಉಪ್ಪು ಬಳಸಿದರೂ ಬಿಪಿಯಂತ ಸಮಸ್ಯೆಗಳು.
*ಆಗ :* ಇದ್ದಿಲು, ಇಟ್ಟಿಗೆ, ಬೇವಿನ ಕಡ್ಡಿ ಉಪಯೋಗಿಸಿ 80 ವರ್ಷದವರೆಗೂ ಅಗಿದು ತಿನ್ನೋ ಗಟ್ಟಿ ಹಲ್ಲುಗಳು.  
*ಈಗ :* ಸೂಪರ್ ಬ್ರಾಂಡ್ ಟೂತ್ ಪೇಸ್ಟ್ ಗಳನ್ನು ಉಪಯೋಗಿಸಿದರೂ ಸಹ ಡೆನ್ಟಿಸ್ಟ್ ಗಳ ಹತ್ತಿರ ಸಾಲು ಸಾಲು.
*ಆಗ :* ನಾಡಿ ಹಿಡಿದು ರೋಗವೇನೆಂದು ತಿಳಿದುಕೊಳ್ಳುತ್ತಿದ್ದರು. 
*ಈಗ :* ಅಲ್ಟ್ರಾ ಸೌಂಡ್, CT ಸ್ಕ್ಯಾನ್, ಬ್ರೈನ್ ಮ್ಯಾಪಿಂಗ್, ಡಿಜಿಟಲ್ ಎಕ್ಸ್ ರೇ ಗಳಿಂದಾಗ್ಯೂ ಸಹ ರೋಗವೇನೆಂದು ತಿಳಿಯುತ್ತಿಲ್ಲ.
*ಆಗ :* 10 ಮಕ್ಕಳನ್ನು ಹೆತ್ತು, ವೃದ್ಧಾಪ್ಯದಲ್ಲಿಯೂ ಹೊಲದ ಕೆಲಸಕ್ಕೆ ಹೋಗುವಷ್ಟು ಗಟ್ಟಿಮುಟ್ಟು. *ಈಗ :* ಮೊದಲ ತಿಂಗಳಿನಿಂದಲೇ ಡಾಕ್ಟರ್ ಚೆಕಪ್ ಗಳೆಲ್ಲಾ ಇದ್ದಾಗ್ಯೂ ಸಿಜೇರಿಯನ್ ಮತ್ತು ಒಂದು ಹೆರಿಗೆಗೆ ಸುಸ್ತೊ ಸುಸ್ತು.
*ಆಗ :* ವರ್ಷವಿಡೀ ಸಿಹಿಗಳನ್ನು ತಿನ್ನುತ್ತಾ ಉಲ್ಲಾಸದ ಜೀವನ... 
*ಈಗ :* ಸಿಹಿಯ ಹೆಸರು ತೆಗೆದರೇ ಸಾಕು, ಮಧುಮೇಹವೇ ಬಂದಂತ ನಿರುತ್ಸಾಹ ಜೀವನ...
*ಆಗ :* ಕೀಲುನೋವು ಇಲ್ಲದ ವೃದ್ಧರು. 
*ಈಗ :* ಯೌವನದಲ್ಲಿಯೇ ಮೊಣಕಾಲು, ಸೊಂಟ, ಮೈ ಕೈ ನೋವುಗಳು.
*ಆಗ :* ಕತ್ತಲೆಯಲ್ಲಿರುತ್ತಾ, ಕಡಿಮೆ ಬೆಳಕಿನಲ್ಲಿ ಓದಿದರೂ ಹತ್ತಿರ ಬಾರದ ಕಣ್ಣಿನ ಸಮಸ್ಯೆಗಳು. 
*ಈಗ :* ಚಿಕ್ಕ ಮಕ್ಕಳೂ ಕನ್ನಡಕಧಾರಿಗಳು.

ಹಾಗಿದ್ರೆ ಒಂದು ಪ್ರಶ್ನೆ -  *ಇಷ್ಟಕ್ಕೂ ನಮ್ಮದು ವಿಜ್ಞಾನ ಯುಗವೇ ⁉️ ಅಥವಾ ಅಜ್ಞಾನ ಯುಗವೇ ⁉️*
(ಸಂಗ್ರಹ)
🌷🌷🌷🌷🌷

Monday, November 15, 2021

💰ಬಿಟ್ ಕಾಯಿನ್ ಎಂದರೇನು?*

*💰ಬಿಟ್ ಕಾಯಿನ್ ಎಂದರೇನು?*
ಬಿಟ್ ಕಾಯಿನ್ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿದೆ. ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾರಿ ಹಗರಣ ನಡೆದಿದೆ ಎಂದು ರಾಜಕೀಯ ಪಕ್ಷಗಳು ದಿನ ನಿತ್ಯ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಆದರೆ ಬಿಟ್ ಕಾಯಿನ್ ಎಂದರೇನು ಎಂಬುದು ಶ್ರೀಸಾಮಾನ್ಯನಿಗೆ ತಿಳಿದಿಲ್ಲವೆಂಬುದು ಮಾತ್ರ ಸರಳ ಸತ್ಯ. 

ಬಿಟ್ ಕಾಯಿನ್ ಎಂಬುದೊಂದು 'ವಿದ್ಯುನ್ಮಾನ ಹಣ (digital currency).' ಬಿಟ್ ಕಾಯಿನ್   ಕೊಳ್ಳುವ, ಮಾರುವ ಮತ್ತು ಹಣವನ್ನು ಸಂಗ್ರಹಿಸಿಡುವ (investment) ಸಾಧನವೆಂದು ಈಗಾಗಲೇ ಪ್ರಪಂಚಾದ್ಯಂತ ಮಾನ್ಯತೆ ಪಡೆದಿದೆ. ಬಿಟ್ ಕಾಯಿನಿನ ವ್ಯವಹಾರವನ್ನು 'ಗುಪ್ತ ಲಿಪಿ ಶಾಸ್ತ್ರ (Cryptography),' ಎಂಬ ತಂತ್ರಜ್ಞಾನದ ಮುಖಾಂತರ ನಡೆಸಲಾಗುತ್ತದೆ.  
 
ಚಾಲ್ತಿಯಲ್ಲಿರುವ ಹಲವಾರು ವಿದ್ಯುನ್ಮಾನ ಹಣಗಳಲ್ಲಿ, ಬಿಟ್ ಕಾಯಿನ್ ಮುಂಚೂಣಿಯಲ್ಲಿದೆ.  ಲಿಟೆಕಾಯ್ನ್, ಪೀರ್ ಕಾಯಿನ್, ನೋವ ಕಾಯಿನ್ ಮುಂತಾದ ಬೇರೆ ಬೇರೆ  ವಿದ್ಯುನ್ಮಾನ ಹಣಗಳೂ ಚಲಾವಣೆಯಲ್ಲಿ ಇವೆ. 

ಬಿಟ್ ಕಾಯಿನಿನ ಸೃಷ್ಟಿಯಲ್ಲೇ ನಿಗೂಢತೆ ಇದೆ. ಯಾರಿಗೂ ಪರಿಚಯವಿರದ  'ಸತೋಷಿ  ನಕಾಮೋಟೋ' ಎಂಬ ವ್ಯಕ್ತಿ, ೨೦೦೯ರಲ್ಲಿ ಬಿಟ್ ಕಾಯಿನನ್ನು ಕಂಡು ಹಿಡಿದನು ಎಂದು ಹೇಳಲಾಗುತ್ತಿದೆ. ಜನವರಿ ೨೦೧೧ರಂದು, ಅಮೆರಿಕಾದ ಡಾಲರ್ ೧ ರಸ್ಟು ಬೆಲೆಯಿದ್ದ ಒಂದು ಬಿಟ್ ಕಾಯಿನಿನ ಬೆಲೆ, ೨೦೧೭ರ ಹೊತ್ತಿಗೆ ಡಾ. ೧೮,೦೦೦ಕ್ಕೇರಿ, ವಿಶ್ವದೆಲ್ಲರ ಹುಬ್ಬೇರುವಂತೆ ಮಾಡಿದ್ದು ಈಗ ಇತಿಹಾಸ. ಅದರ ಬೆಲೆ ಈಗ ಸುಮಾರು ಡಾ. ೭೫,೦೦೦ದಷ್ಟಿದೆ (ಅಂದರೆ ರು. ೫೨ ಲಕ್ಷ) ಎನ್ನುವುದು ಸೋಜಿಗದ ಸಂಗತಿ.   

'ವಿದ್ಯುನ್ಮಾನ ಹಣ' ಎಂದರೇನು?
 ಸಾವಿರಾರು ವರುಷಗಳ ಹಿಂದೆ, ಕವಡೆ(seashells)ಗಳನ್ನೂ ಹಣವೆಂದು ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಅಂದಿನ ಜನರುಗಳು ಕವಡೆಗಳನ್ನು(ಅಂದರೆ ಹಣವನ್ನು) ಗಳಿಸಲು ಸರಕುಗಳನ್ನು ಮಾರಾಟ ಮಾಡಬೇಕಿತ್ತು ಅಥವಾ ದೈಹಿಕ ಶ್ರಮದ ಕೆಲಸಗಳನ್ನು ಮಾಡಬೇಕಿತ್ತು. ಮತ್ತೆ ಕೆಲವು ಸಾಹಸಿಗಳು ಸಮುದ್ರದ ನಡುವೆ ಸಾಗಿ, ಕವಡೆಗಳನ್ನೇ ನೇರವಾಗಿ ಸಂಗ್ರಹಿಸಿ ಹಣವಂತರಾಗುತ್ತಿದ್ದರು. ಇದೇ ಅಂದಿನ ದಿನಗಳಲ್ಲಿ 'ಕವಡೆಗಳ ಗಣಿಗಾರಿಕೆ (mining seashells)' ಎನ್ನಿಸಿಕೊಳ್ಳುತ್ತಿತ್ತು. 

ಈಗ ನಾವು ಕಂಪ್ಯೂಟರ್ ಯುಗದಲ್ಲಿದ್ದೇವೆ. ಕಂಪ್ಯೂಟರ್ ಒಗಟು (puzzles)ಗಳು ಮತ್ತು ಆಟಗಳಿಗೆ ಪರಿಹಾರ(solution)ವನ್ನು ಕಂಡು ಹಿಡಿಯುವುದರಲ್ಲೇ ದಿನವಿಡೀ ಮಗ್ನರಾಗಿ, ಪರಿಹಾರ ದೊರಕಿದಾಗ ಗೆಲುವಿನ ನಗೆ ಬೀರುವ ನಮ್ಮ ಯುವಕರನ್ನು ನಾವೀಗ ನೋಡುತ್ತಿದ್ದೇವೆ. ಆ ಗೆಲುವಿನ ಅಂಕಗಳನ್ನು ದಾಖಲಿಸಿಡುವ ಕಂಪ್ಯೂಟರ್ ಜಾಲತಾಣಗಳು ಇಲ್ಲದಿಲ್ಲ. ಈ ರೀತಿಯ ಪ್ರಕ್ರಿಯೆಯೇ ವಿದ್ಯುನ್ಮಾನ ಹಣಗಳ ಮೂಲವೆಂದು ಹೇಳಬಹುದು. 

ಬಿಟ್ ಕಾಯಿನಿನಂತಹ ವಿದ್ಯುನ್ಮಾನ ಹಣದ ಪ್ರವರ್ತಕರು(promoters), ಗುಪ್ತಲಿಪಿ ಶಾಸ್ತ್ರ(Cryptography) ತಂತ್ರ ಜ್ಞಾನವನ್ನು ಬಳಸಿ, ಅತ್ಯಂತ ಕ್ಲಿಷ್ಟ ಒಗಟು(puzzles)ಗಳನ್ನು ಸೃಷ್ಟಿಸುತ್ತಾರೆ. ಅಪಾರವಾದ ಬುದ್ಧಿಶಕ್ತಿ ಮತ್ತು ಕಷ್ಟಸಹಿಷ್ಣುತೆಯುಳ್ಳ ತಂತ್ರಜ್ಞರು, ಅತ್ಯಾಧುನಿಕ ಯಂತ್ರ (sophisticated hardware)ಗಳನ್ನು ಬಳಸಿ ಅಂತಹ ಒಗಟುಗಳಿಗೆ ಪರಿಹಾರವನ್ನು ಕಂಡುಹಿಡಿಯಬಲ್ಲರು. ಅಂತಹ ಪರಿಹಾರದ ಅಂಕಗಳಿಗೆ ಈಗ 'ವಿದ್ಯುನ್ಮಾನ ಹಣ(cryptocurrency)'ವೆಂಬ ಮಾನ್ಯತೆ ದೊರೆತು, ವಿನಿಮಯದ ಮಾಧ್ಯಮವಾಗಿ ಬೆಳೆದು ನಿಂತಿದೆ.  ಅಂತಹ ಪರಿಹಾರಗಳು 'ಬ್ಲಾಕ್ ಚೈನ್ (block chain)'ನ ವಿನ್ಯಾಸದಲ್ಲಿದ್ದು, ಅದು ಒಂದು ನಿರ್ಧಿಷ್ಟ ಸಂಖ್ಯೆಯ ವಿದ್ಯುನ್ಮಾನದ ಅಂಕಗಳನ್ನು, ಅಂದರೆ 'ವಿದ್ಯುನ್ಮಾನ ಹಣ/ನಾಣ್ಯ(cryptocurrency)'ವನ್ನು  ಹೊಂದಿರುತ್ತದೆ. ಈ ಶೋಧನೆಯನ್ನೇ 'ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency)' ಎನ್ನುತ್ತಾರೆ. ಬಿಟ್ ಕಾಯಿನಿನ ಬ್ಲಾಕ್ ಚೈನಿನಲ್ಲಿ ೨೧ ದಶ ಲಕ್ಷ ಬಿಟ್ ಕಾಯಿನ್ಗಳಿದ್ದು, ಅವುಗಳ ಪೈಕಿ ಸುಮಾರು ೧೭ ದಶ ಲಕ್ಷ ಬಿಟ್ ಕಾಯಿನ್ಗಳು  ಮಾತ್ರ ಶೋಧಕರ ಕೈವಶವಾಗಿದ್ದು, ಗಣಿಗಾರಿಕೆ ಮುಂದುವರೆದಿರುತ್ತದೆ. ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency) ಕಷ್ಟದಾಯಕವಾಗಿದ್ದು, ಆ ಪ್ರಕ್ರಿಯೆಗೆ ಅಪಾರವಾದ ಹಣ ಮತ್ತು ವಿದ್ಯುಚ್ಛಕ್ತಿಯ ವ್ಯಯವಾಗುವುದಂತೂ ಖಂಡಿತ. 

ವಿದ್ಯುನ್ಮಾನ ಹಣದ ಗಣಿಗಾರಿಕೆ(mining of cryptocurrency)ಯನ್ನು ಶ್ರೀಸಾಮಾನ್ಯರು ಮಾಡಲಾರರು. ಅಂತಹ ವಿದ್ಯುನ್ಮಾನ ಹಣವನ್ನು, ಅವುಗಳನ್ನು ಹೊಂದಿರುವವರಿಂದ, ಅದರ ಬೆಲೆಯನ್ನು ತೆತ್ತು, ಶ್ರೀಸಾಮಾನ್ಯರು ಖರೀದಿಸಬೇಕಾಗುತ್ತದೆ. ಈ ರೀತಿಯ ವ್ಯವಹಾರ ಕುದುರಿ ವಿದ್ಯುನ್ಮಾನ ಹಣಕ್ಕೆ ಭಾರಿ ಬೇಡಿಕೆಯುಂಟಾಗಿದೆ. 

ಬ್ಲಾಕ್ ಚೈನ್ (block chain) ಎಂದರೇನು?
ವಿದ್ಯುನ್ಮಾನ ಹಣ, ನಾಣ್ಯದ ಅಥವಾ ನೋಟಿನ ರೂಪದಲ್ಲಿರುವುದಿಲ್ಲ. ಅವುಗಳು ಇ-ಚೀಲ(e-wallet)ದಲ್ಲಿ ವಿದ್ಯುನ್ಮಾನ(electronic) ರೂಪದಲ್ಲಿರುತ್ತವೆ. ವಿದ್ಯುನ್ಮಾನ ಹಣವನ್ನು ಹೊಂದಿರುವವರ ವಿವರಗಳ ದಾಖಲೆಯನ್ನು ಗುಪ್ತವಾಗಿ ಇಟ್ಟಿರುವ ವಿದ್ಯುನ್ಮಾನ ಸಾಧನವನ್ನೇ ಬ್ಲಾಕ್ ಚೈನ್(block chain) ಎನ್ನುತ್ತಾರೆ. ವಿದ್ಯುನ್ಮಾನ ಹಣದ ಮಾರಾಟ,  ಖರೀದಿ ಮತ್ತು ಸಂಗ್ರಹದ ವಿವರಗಳು  ಬ್ಲಾಕ್ ಚೈನಿನಲ್ಲಿ ಅಡಕವಾಗಿದ್ದು, ಅದನ್ನು ಹೊಂದಿದವರ ಹೆಸರುಗಳು ಯಾರಿಗೂ ತಿಳಿದಿರುವುದಿಲ್ಲ. ವಿದ್ಯುನ್ಮಾನ ಹಣದ ಬಳಕೆ ಅತ್ಯಂತ ಕ್ಲಿಷ್ಟವಾದ ಗುಪ್ತಪದ(password)ದ ಬಳಕೆಯಿಂದ ಮಾತ್ರ ಸಾಧ್ಯ. ಅಂತಹ ಕ್ಲಿಷ್ಟಕರವಾದ  ಗುಪ್ತಪದವನ್ನು ಮರೆತು/ಕಳೆದುಕೊಂಡು, ಕೋಟ್ಯಂತರ ರೂಪಾಯಿಗಳಷ್ಟರ ಹಣವನ್ನು ಕಳೆದುಕೊಂಡವರಿಲ್ಲದಿಲ್ಲ. ಗುಪ್ತಪದಗಳ ಗುಟ್ಟನ್ನು ಬೇಧಿಸಿ, ಕೋಟ್ಯಂತರ ಬೆಲೆಯ ವಿದ್ಯುನ್ಮಾನ ಹಣವನ್ನು ಲಪಟಾಯಿಸಿದ ಖದೀಮರೂ ಇಲ್ಲದಿಲ್ಲ!

ವಿದ್ಯುನ್ಮಾನ ಹಣದ ನಿಯಂತ್ರಣ ಸಾಧ್ಯವೇ?
ವಿದ್ಯುನ್ಮಾನ ಹಣವೆಂಬುದು ಪ್ರಪಂಚದ ಯಾವುದೇ ಸರಕಾರದ ನಿಯಂತ್ರಣಕ್ಕೂ ಒಳಪಟ್ಟಿಲ್ಲ. ಹಾಗಾಗಿ ಯಾವ ಸರಕಾರವೂ ವಿದ್ಯುನ್ಮಾನ ಹಣದ ಬೆಲೆಗೆ ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ!  ಅದರ ಪ್ರವತಕರು ಮತ್ತು ದಾಖಲೆಗಳ ವಿವರಗಳೇ ನಿಗೂಢ. ವಿದ್ಯುನ್ಮಾನ ಹಣದ ದಾಖಲೆಗಳ ಜಾಲತಾಣವೇ ಕುಸಿದು (crashing of cryptocurrency sites) ಬಿದ್ದರೆ, ಹೂಡಿಕೆದಾರರೆಲ್ಲರೂ ಮುಗ್ಗರಿಸಿ ಬಿದ್ದಂತೆಯೇ ಸರಿ. ಒಮ್ಮಲೇ ಬಲಿಷ್ಠ ಸರಕಾರಗಳು ಮುಂದಾಗಿ, ವಿದ್ಯುನ್ಮಾನ ಹಣದ ಮೇಲೆ ನಿಯಂತ್ರಣ ಸ್ಥಾಪಿಸಬಲ್ಲ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.  ಖದೀಮರಿಂದ ಲಪಟಾಯಿಸಲ್ಪಡುವ(swindling by hackers) ಸಾಧ್ಯತೆಯೂ ಸೇರಿದಂತೆ, ವಿದ್ಯುನ್ಮಾನ ಹಣದ ವ್ಯವಹಾರದಲ್ಲಿ ಭಾರಿ ಅಪಾಯ ಅಡಗಿದೆ ಎಂಬುದು ನಾವೆಲ್ಲರೂ ಅರಿಯಬೇಕಾದ ಸತ್ಯ. ಆದರೂ ವಿದ್ಯುನ್ಮಾನ ಹಣದ ವ್ಯವಹಾರಗಳಿಗೆ, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಹಲವಾರು ಐರೋಪ್ಯ ರಾಷ್ಟ್ರಗಳೂ ಮಾನ್ಯತೆ ನೀಡಿವೆ. ಇತ್ತೀಚಿಗೆ ನಮ್ಮ ದೇಶ ಭಾರತದಲ್ಲೂ ವಿದ್ಯುನ್ಮಾನ ಹಣದ ವ್ಯವಹಾರ ಭಾರಿ ಪ್ರಮಾಣದಲ್ಲೇ ನಡೆಯುತ್ತಿದ್ದು, ಅದು ನಮ್ಮ ಸರಕಾರಕ್ಕೂ ತಿಳಿದಿದೆ. 

ಮುಂದೇನು?
ತಂತ್ರಜ್ಞಾನ(technology)ವೆಂಬುದು ದಿಢೀರನೆ ಭಾರಿ ಬದಲಾವಣೆ(disruption)ಗಳನ್ನುತಂದೊಡ್ಡಬಲ್ಲದು. ಒಂದೂ ಟ್ಯಾಕ್ಸಿಯನ್ನು ಹೊಂದಿರದ ಉಬರ್(uber)ನಂತಹ ಸಂಸ್ಥೆಗಳು, ಇಂದು  ಕೋಟ್ಯಂತರ ಟ್ಯಾಕ್ಸಿಗಳನ್ನು ನಿಯಂತ್ರಿಸುತ್ತಿವೆ. 'ಇ-ಮೇಲ್ ತಂತ್ರಜ್ಞಾನವು ಪೋಸ್ಟ್ ಆಫೀಸಗಳನ್ನು ಅನಗತ್ಯಗೊಳಿಸಿದಂತೆ,  ವಿದ್ಯುನ್ಮಾನ ಹಣವೆಂಬುದು ಬ್ಯಾಂಕ್ಗಳನ್ನು ಮುಂದೆ ಅನಗತ್ಯಗೊಳಿಸಬಹುದು' ಎಂಬುದು ತಂತ್ರಜ್ಞರ ಭವಿಷ್ಯವಾಣಿಯಾಗಿದೆ. 

ಬದಲಾವಣೆಗಳಿಗೆ ಹೊಂದಿಕೊಂಡು ಮುನ್ನಡೆಯುವುದೇ ಜೀವನ. ವಿದ್ಯುನ್ಮಾನ ಹಣದ ಬಳಕೆ ನಿಯಂತ್ರಣದ ಹಾಗು ಕಾನೂನಿನ ಚೌಕಟ್ಟುಗಳಿಗೆ ಒಳಪಡಲಿ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನು ಶ್ರೀಸಾಮಾನ್ಯರು ಮುಂದಿಡುತ್ತಾ ಸಾಗಲಿ ಎಂದು ಆಶಿಸೋಣ.

Monday, November 8, 2021

*ಸಕ್ಕರೆ ಒಂದು ಪ್ರಕಾರದ ವಿಷ.* ಇದು ಅನೇಕ ಪ್ರಕಾರದ ರೋಗ, ರುಜಿನಗಳನ್ನು ನಿಮಾ೯ಣ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿರುತ್ತಾರೆ.

1. *ಸಕ್ಕರೆ ಒಂದು ಪ್ರಕಾರದ ವಿಷ.* ಇದು ಅನೇಕ ಪ್ರಕಾರದ ರೋಗ, ರುಜಿನಗಳನ್ನು ನಿಮಾ೯ಣ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿರುತ್ತಾರೆ. 
ಇದು ಹೇಗೆ, ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ. 
2. ಸಕ್ಕರೆ ತಯಾರಿಸುವ ಪ್ರಕ್ರಿಯೆ (process) ಯಲ್ಲಿ ಸವಾ೯ಧಿಕ ಪ್ಪಮಾಣದಲ್ಲಿ ಗಂಧಕ (sulphur) ಉಪಯೋಗಿಸುತ್ತಾರೆ. 
ಗಂಧಕ ಎಂದರೇನು? 
3. ಇದು ಬಾಂಬ್ ತಯಾರಿಸಲು ಅಥವಾ ಸಿಡಿಮದ್ದು, ಪಟಾಕಿ ತಯಾರಿಸಲು ಉಪಯೋಗಿಸುವ ರಾಸಾಯನಿಕ ಪದಾಥ೯ (chemical). ಈ ಗಂಧಕ ಅತ್ಯಂತ ಜಡ ಪದಾಥ೯. ಇದು ಒಮ್ಮೆ ಶರೀರದೊಳಗೆ ಹೋದರೆ, ಶರೀರದಿಂದ ಹೊರಬೀಳುವುದಿಲ್ಲ. 
4. ಸಕ್ಕರೆಯಿಂದಾಗಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಹೆಚ್ಚುವುದರಿಂದ ಹ್ರದಯಾಗಾತ (stroke) ಆಗುತ್ತದೆ. 
5. ದೇಹದಲ್ಲಿ ತೂಕ ಹೆಚ್ಚಲು ಕಾರಣಕೂಡ ಸಕ್ಕರೆ. 
6. ದೇಹದಲ್ಲಿ ರಕ್ತದೊತ್ತಡಕ್ಕೆ (B. P.) ಕಾರಣ ಸಕ್ಕರೆ. 
7. ಸಕ್ಕರೆಯಿಂದಾಗಿ ಮೆದುಳಿಗೆ ಸ್ಟ್ರೋಕ್ ಹೊಡೆಯುತ್ತದೆ. 
8. ಸಕ್ಕರಯಿಂದಾಗಿ ಪಚನ ಶಕ್ತಿ ಕುಂದುತ್ತದೆ. 
9. ಸಕ್ಕರೆ ತಯಾರಿಸುವಾಗ 23 ಹಾನಿಕಾರಕ ರಸಾಯನಗಳ ಉಪಯೋಗ ಆಗುತ್ತದೆ. 
10. ಸಕ್ಕರೆಯು cancer ಕಾರಕ. Cancerನ ಜೀವಾಣುಗಳು ಸಕ್ಕರೆ ಇಲ್ಲದೆ ಇರಲಾರವು ಎಂದು ಪ್ರಖ್ಯಾತ ತಜ್ಞರು ಕಂಡುಕೊಂಡಿದ್ದಾರೆ. 
11. ಮನುಶ್ಯನಿಗೆ ಡಯಾಬಿಟೀಸ್ ಕಾಯಿಲೆಗೆ ಕಾರಣವೇ ಸಕ್ಕರೆ. 
12. ಎಸಿಡಿಟಿ, ಹೈಪರ್ ಎಸಿಡಿಚಿ, ಹೊಟ್ಟೆಯಲ್ಲಿ ಉರಿ ಇತ್ಯಾದಿಗಳಿಗೆ ಒಂದು ಮುಖ್ಯ ಕಾರಣ ಸಕ್ಕರೆ. 
13. ರಕ್ತದಲ್ಲಿ ಟ್ರೈಗ್ಲಿಸರಿನ್ ಹೆಚ್ಚಲು ಕಾರಣ ಸಕ್ಕರೆ. 
14. ಸಕ್ಕರೆಯ ಕೆಟ್ಟ ಪರಿಣಾಮಗಳಿಂದಾಗಿ ಪಾಶ್ವ೯ವಾಯು, ಪೆರಲಿಸಿಸ್ ಆಗಲು ಒಂದು ಮುಖ್ಯ ಕಾರಣ. 
15. ಒಟ್ಟಾರೆ ಹೇಳುವುದಾದರೆ, ಸಕ್ಕರೆಯು ಕಾಯಿಲೆಗಳ ಉದ್ಭವ ಮತ್ತು ಉಲ್ಭಣಕ್ಕೆ ಮೂಲ. 
ಆತ್ಮೀಯರೇ, ನಿಮ್ಮಲ್ಲೊಂದು ಕಳಕಳಿಯ ವಿನಂತಿ. ಸಕ್ಕರೆ ಎಂಬ ನಿದಾನ ವಿಷ (slow poison) ನಿಂದ ದೂರವಿದ್ದು, ನಮ್ಮ ಪೂವ೯ಜರಂತೆ ಬೆಲ್ಲದ ಉಪಯೋಗಕ್ಕೆ ಪರಿವತಿ೯ಸಿರಿ. ರೋಗ ಮುಕ್ತ ಜೀವನ ನಮ್ಮ, ನಿಮ್ಮೆಲ್ಲರದ್ದಾಗುವುದು. 
ಈ ಮಾಹಿತಿಯನ್ನು ನಿಮ್ಮ ಬಂದುಗಳಿಗೆ, ಮಿತ್ರರಿಗೆ, ಪರಿಚಯಸ್ಥರಿಗೆ, ಬೇರೆ ಬೇರೆ ಗ್ರೂಪ್ಗಳಿಗೆ ಸಾದ್ಯವಾದಷ್ಟು ಕಳುಹಿಸಿರಿ. ಯಾರಿಗಾದರೂ ಸಹಾಯ ಆಗುವುದಕ್ಕೆ ಸಹಕಾರ ಮಾಡಿದಂತಾಗಲಿ.

Thursday, October 28, 2021

*ದಯಮಾಡಿ ಎಲ್ಲರೂ ಓದಲೇಬೇಕಾದ ವಿಷಯ*ನನ್ನ ಕಣ್ಣಲ್ಲಿ ನೀರು ಬಂರಿಸಿದ ಸಾಲುಗಳು

*ದಯಮಾಡಿ ಎಲ್ಲರೂ ಓದಲೇಬೇಕಾದ ವಿಷಯ*
ನನ್ನ ಕಣ್ಣಲ್ಲಿ ನೀರು ಬಂರಿಸಿದ ಸಾಲುಗಳು 

ತಿರುಪತಿ ತಿಮ್ಮಪ್ಪಗೆ ಉದ್ಯಮಿ ಹಾಗು ರಾಜಕಾರಣಿಯೊಬ್ಬರು 40 ಕೋಟಿ ರೂ. ಮೌಲ್ಯದ ವಜ್ರ ಖಚಿತ ಬಂಗಾರದ ಕಿರೀಟವನ್ನು ಅರ್ಪಿಸಿದ್ದರು. ಮತ್ತೋರ್ವ ಉದ್ಯಮಿ ಹಾಗು ರಾಜಕಾರಣಿಯೊಬ್ಬರು ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ 10 ಕೋಟಿ ಮೌಲ್ಯದ ಚಿನ್ನದ ಮೆಟ್ಟಿಲುಗಳನ್ನುಮಾಡಿಸಿಕೊಟ್ಟರು. ನಮ್ಮೂರ ಉದ್ಯಮಿ ಹಾಗು ಹಾಗು ರಾಜಕಾರಣಿಯೊಬ್ಬರು ಊರ ದೇವತೆಯ ದೇಗುಲದ ಬಾಗಿಲುಗಳಿಗೆ 50 ಲಕ್ಷ ರೂ. ಮೌಲ್ಯದ ಬೆಳ್ಳಿಯ ಹೊದಿಕೆ ಸಮರ್ಪಿಸಿದರು. 
     ಮೇಲಿನ ಮೂರೂ ಘಟನೆಗಳನ್ನು ನಾನು ವರದಿ ಮಾಡಿದ್ದೆ. ಹೀಗೆ ಈ ಸುದ್ದಿಗಳನ್ನು ಬರೆಯುವಾಗ ದೇಣಿಗೆ ನೀಡಿದವರ ಕುರಿತು “ಎಂಥ ದಾನಿಗಳಪ್ಪ” ಎಂಬ ಅಭಿಮಾನದ ಭಾವನೆ ಮೂಡಿತಾದರೂ ಮತ್ತೊಂದು ಕಡೆ ಮನಸ್ಸು ಹೇಳುತ್ತಿತ್ತು “ಇವರುಗಳಿಗೆ ಇದು ಯಾವ ಲೆಕ್ಕ” ಎಂದು. ಆದರೂ ಉಳ್ಳವರು ಎಲ್ಲರೂ ಇಷ್ಟೊಂದು ದೇಣಿಗೆ ನೀಡುವರೇ ಎಂಬ ಪ್ರಶ್ನೆ ಮೂಡಿ ಮೇಲಿನವರ ಬಗ್ಗೆ ಹೆಮ್ಮೆ ಎನ್ನಿಸುತ್ತಿತ್ತು. 
     ಇದೊಂದು ಘಟನೆ ನನಗೆ ಮೇಲಿನ ಮೂರೂ ಘಟನೆಗಳನ್ನು ಮರೆಯುವಂತೆ ಮಾಡಿತ್ತು. ಮೇಲ್ಕಾಣಿಸಿದ ದಾನಿಗಳಿಗಿಂತ ಈ 1 ಸಾವಿರ ರೂ. ಬಹುಮಾನ ನೀಡಿದ್ದ ಹೈಸ್ಕೂಲ್‍ನ ಮೇಡಂ ತುಂಬಾ ದೊಡ್ಡವರು ಎನ್ನಿಸಿದರು. ಅವರ ಸ್ವಾಭಿಮಾನ, ಮಾತಿಗೆ ತಪ್ಪದ ನಡತೆ ಹಾಗೂ ತಮ್ಮ ವಿದ್ಯಾರ್ಥಿಗಳ ಮೇಲೆ ಅವರು ಇಟ್ಟಿದ್ದ ನಂಬಿಕೆ, ಈ ಮೇಡಂ ಅವರ ವ್ಯಕ್ತಿತ್ವವನ್ನು ಮೇಲೆ ಕಾಣಿಸಿದ ಮಹನೀಯರುಗಿಂತಲೂ ಎತ್ತರಕ್ಕೆ ಒಯ್ದಿತ್ತು.
     ಅದು ದಾವಣಗೆರೆಯ ಸೇಂಟ್ ಜಾನ್ಸ್ ಹೈಸ್ಕೂಲ್. ಅಲ್ಲಿ ಗಣಿತ ವಿಷಯ ಭೋಧಿಸುತ್ತಿದ್ದ ಮೇಡಂ ಅವರು ಬಡ ಕುಟುಂಬಕ್ಕೆ ಸೇರಿದ ಪ್ರತಿಭಾನ್ವಿತ ಶಿಕ್ಷಕಿ. ಶಾಲೆಯ ವೇತನದಿಂದಲೇ ಜೀವನ ನಿರ್ವಹಿಸುವ ಸ್ಥಿತಿ ಅವರದ್ದು. ತಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ತಾನು ಹೇಗೆ ಗಣಿತವನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಿದ್ದೇನೆ ಎಂಬುದನ್ನು ಓರೆಗೆ ಹಚ್ಚುವ ಸಲುವಾಗಿ ಉತ್ಸಾಹದಿಂದ ತಮ್ಮ ವಿದ್ಯಾರ್ಥಿಗಳಿಗೆ ಒಂದು ವಾಗ್ದಾನ ಮಾಡಿದರು. “ಎಸ್ಸೆಸ್ಸೆಲ್ಸಿಯಲ್ಲಿ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದವರಿಗೆ 1 ಸಾವಿರ ರೂ. ಬಹುಮಾನ ನೀಡುತ್ತೇನೆ” ಎಂದು ಹೇಳಿದ್ದರು. 
     ಫಲಿತಾಂಶ ಪ್ರಕಟವಾಯಿತು. ನನ್ನ ಮಗನೂ ಸೇರಿದಂತೆ ನಾಲ್ಕು ಜನರು ಗಣಿತದಲ್ಲಿ 100 ಕ್ಕೆ 100 ಅಂಕ ಗಳಿಸಿದ್ದರು. ತನ್ನ ವಿದ್ಯಾರ್ಥಿಗಳ ಈ ಸಾಧನೆ ಕಂಡು ಮೇಡಂ ಅವರು ತಮ್ಮ ಸ್ವಂತ ಮಕ್ಕಳೇ ಈ ಸಾಧನೆ ಮಾಡಿದ್ದಾರೇನೊ ಎಂಬಂತೆ ಹಿಗ್ಗಿ ಹೋಗಿದ್ದರು. ಈ ಮಕ್ಕಳ ಸಾಧನೆಯನ್ನು ಸಹೋದ್ಯೋಗಿಗಳು ಹಾಗೂ ಬಂಧು-ಮಿತ್ರರಲ್ಲಿ ಹೇಳಿಕೊಂಡು ಹೆಮ್ಮೆಯಿಂದ ಬೀಗಿದ್ದರು. ಅಂದು ವಿದ್ಯಾರ್ಥಿಗಳು ಮಾಸ್ಕರ್ಡ್ ಪಡೆದುಕೊಳ್ಳಲು ಶಾಲೆಗೆ ಹೋದಾಗ ಅವರಿಗೆ ಸಿಹಿ ತಿನ್ನಿಸಿ 100 ಕ್ಕೆ 100 ಅಂಕ ಪಡೆದಿದ್ದ ನಾಲ್ವರಿಗೂ ತಲಾ 1000 ರೂ ಇದ್ದ ಕವರ್ ನೀಡಿ ವಿಶ್ ಮಾಡಿ ಕಳುಹಿಸಿದರು. 
     ಮನೆಗೆ ಬಂದು ತಮ್ಮ ಮೇಡಂ ನೀಡಿದ್ದ ಕವರನ್ನು ಹೆಮ್ಮೆಯಿಂದ ತೆರೆದು ಅದರಲ್ಲಿದ್ದ 1000 ರೂಗಳನ್ನು ನನಗೆ ಹಾಗೂ ಪತ್ನಿಗೆ ತೋರಿಸುತ್ತಾ ಈ ಸಾವಿರ ರೂ. ಸಂಪೂರ್ಣವಾಗಿ ತನಗೇ ಸೇರಿದ್ದೆಂದು, ತಮ್ಮ ಗಣಿತದ ಟೀಚರ್ ನೀಡಿರುವ ಬಹುಮಾನ ಇದು ಎಂದೂ ತಿಳಿಸಿದನು. 1000 ರೂ. ಹಣವನ್ನು ನಮ್ಮೆದುರೇ ಎಣಿಸಿದನು. ಅದರಲ್ಲಿ 100ರ 4 ನೋಟುಗಳು, 50ರ 4 ನೋಟುಗಳಿದ್ದವು. ಉಳಿದವು 20, 10 ಹಾಗು 5 ರೂ.ಗಳ ನೋಟುಗಳಾಗಿದ್ದವು. 
     ನನ್ನ ಮಗ ಹೆಮ್ಮೆಯಿಂದ ಹಣ ಎಣಿಸುತ್ತಿದ್ದರೆ ನನ್ನಲ್ಲಿ ಮಾತ್ರ ಆತಂಕ ಮನೆ ಮಾಡಿತ್ತು. ಅರಿವಿಲ್ಲದಂತೆಯೇ ಕಣ್ಣಾಳೆಗಳು ಒದ್ದೆಯಾದವು. ಮಗನಿಂದ ಹಾಗೆ ಆ ಹಣವನ್ನು ಪಡೆದುಕೊಂಡೆ. ಆ ನೋಟುಗಳಿಂದ ಜೀರಿಗೆಯ ವಾಸನೆ ಬರುತ್ತಿತ್ತು. ಆಗಂತೂ ನನಗೆ ದುಃಖ ತಡೆಯಲಾಗಲಿಲ್ಲ. ಖಂಡಿತವಾಗಿಯೂ ಈ ಹಣವನ್ನು ಮೇಡಂ ಅವರು ಕಷ್ಟಪಟ್ಟು ಸಂಗ್ರಹಿಸಿಟ್ಟಿದ್ದರು ಎಂಬುದು ನಿಶ್ಚಿತವಾಗಿತ್ತು. 
    ಶಾಲಾ ಆಡಳಿತ ಮಂಡಳಿ ಆರ್ಥಿಕ ಮುಗ್ಗಟ್ಟಿನಿಂದ ನಾಲ್ಕೈದು ತಿಂಗಳಿನಿಂದ ಸಿಬ್ಬಂದಿಗೆ ವೇತನವನ್ನೇ ನೀಡಿರಲಿಲ್ಲ. ಆಡಳಿತಮಂಡಳಿಯ ಅನೇಕರು ನನಗೆ ಆತ್ಮೀಯರು ಆಗಿದ್ದರಿಂದ ಅಲ್ಲಿನ ಆಗುಹೋಗುಗಳ ಬಗ್ಗೆ ನನಗೆ ತಿಳಿದಿತ್ತು. 
     ಮಗನಿಂದ ಆ 1000 ರೂ.ಗಳನ್ನು ಪಡೆದು ನನ್ನ ಬಳಿಯಿದ್ದ 500ರ ಎರಡು ನೋಟುಗಳನ್ನು ಅವನಿಗೆ ಕೊಟ್ಟೆ. ಅವನಿಗೆ ಏನೂ ತಿಳಿಸದೆ ನೇರವಾಗಿ ಹಣ್ಣಿನ ಅಂಗಡಿಗೆ ಹೋಗಿ ಒಂದಷ್ಟು ಹಣ್ಣು ಖರೀದಿಸಿ ಆ ಮೇಡಂ ಅವರ ಮನೆಗೆ ಬಂದೆ. ಮೊದಲಿಗೆ ಹಣ್ಣುಗಳನ್ನು ನೀಡಿ ನನ್ನ ಮಗ ಸೇರಿದಂತೆ ನಾಲ್ವರು 100 ಕ್ಕೆ 100 ಅಂಕ ಗಳಿಸಲು ಕಾರಣರಾಗಿದ್ದಕ್ಕೆ ಅಭಿನಂದಿಸಿದೆ. ಅವರ ಕಣ್ಣುಗಳು ಮಿಂಚಿದವು. “ಸರ್, ಇನ್ನೂ ಮೂವರು ವಿದ್ಯಾರ್ಥಿಗಳು ತಲಾ 99 ಹಾಗು ಐವರು ವಿದ್ಯಾರ್ಥಿಗಳು ತಲಾ 98 ಅಂಕಗಳಿಸಿದ್ದಾರೆ, ಛೇ… ಇನ್ನು ಒಂದೆರಡು ಅಂಕ ಗಳಿಸಿದ್ದರೆ” ಎಂದರು. ಅವರ ಧ್ವನಿಯಲ್ಲಿ ಆ ವಿದ್ಯಾರ್ಥಿಗಳ ಬಗ್ಗೆಯೂ ಹೆಮ್ಮೆ ಇದ್ದುದು ತಿಳಿಯುತ್ತಿತ್ತು. ನಾನು ಅವರನ್ನು ಮತ್ತೆ ಅಭಿನಂದಿಸುತ್ತಾ ಅವರು ನೀಡಿದ್ದ 1000 ರೂಗಳ ಜೊತೆಗೆ ನನ್ನದೂ 1000 ರೂ. ಸೇರಿಸಿ 2000 ರೂಗಳಿದ್ದ ಕವರನ್ನು ಅವರಿಗೆ ನೀಡಲು ಮುಂದಾದೆ. ನೀವು ಉತ್ತಮವಾಗಿ ಪಾಠ ಮಾಡಿದ್ದಕ್ಕೆ ನನ್ನ ಮಗ 100 ಕ್ಕೆ 100 ಅಂಕ ಗಳಿಸಿದ್ದಾನೆ. ಇದು ನಿಮ್ಮ ಶಿಷ್ಯ ನಿಮಗೆ ನೀಡುತ್ತಿರುವ ಚಿಕ್ಕ ಗುರು ಕಾಣಿಕೆ ಎಂದು ಸ್ವೀಕರಿಸಿ ಎಂಬುದಾಗಿ ಪರಿಪರಿಯಾಗಿ ಬೇಡಿದರೂ ಅವರು ಒಪ್ಪಲಿಲ್ಲ. ನೀವು ತಂದಿರುವ ಹಣ್ಣುಗಳನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ನನ್ನ ಆತ್ಮ ತೃಪ್ತಿಗೆ ನನ್ನ ವಿದ್ಯಾರ್ಥಿಗಳಿಗೆ ನಾನು ಬಹುಮಾನವಾಗಿ ನೀಡಿರುವ ಹಣವನ್ನು ನೀವು ಹಿಂದಿರುಗಿಸುವ ಪ್ರಯತ್ನ ಮಾಡಬೇಡಿ ಎನ್ನುತ್ತಲೇ ಆತ್ಮೀಯವಾಗಿ ಬೀಳ್ಕೊಟ್ಟರು. ಹೀಗೆ ಹೇಳುವಾಗ “ಆಡಳಿತ ಮಂಡಳಿ ನಮಗೆ ವೇತನ ನೀಡಿಲ್ಲ ಎಂಬ ಆತಂಕ ನಿಮಗಿರುವುದು ನನಗೆ ಗೊತ್ತು. ಸರ್ ನಮಗೆ ಅತ್ಯಂತ ಸರಳವಾದ ಜೀವನದ ಅನುಭವ ಇದೆ. ಕಷ್ಟಪಟ್ಟು, ಇಷ್ಟಪಟ್ಟು ವಿದ್ಯಾರ್ಥಿಗಳಿಗಾಗಿ, ಶಾಲೆಗಾಗಿ ದುಡಿಯುತ್ತಿದ್ದೇವೆ. ಭಗವಂತ ನಮ್ಮ ಕೈ ಬಿಡುವುದಿಲ್ಲ” ಎಂದರು. 
    ಇಂದೂ ಆ 1000 ರೂ. ಹಣ ನಮ್ಮ ಬಳಿ ಇದೆ. ಅದನ್ನು ನೋಡಿದಾಗೊಮ್ಮೆ ನನಗನ್ನಿಸುತ್ತದೆ, ಚಿನ್ನದ ಕಿರೀಟ, ಬಂಗಾರದ ಮೆಟ್ಟಿಲು ಹಾಗೂ ಬೆಳ್ಳಿಯ ಬಾಗಿಲುಗಳನ್ನು ದೇಣಿಗೆ ನೀಡಿದ ಆ ಮಹನೀಯರುಗಳಿಗಿಂತ ನಮ್ಮ ಮೇಡಂ ಒಂದು ತೂಕ ಹೆಚ್ಚು ಎಂದು, ನೀವೇನಂತೀರಾ? 
     40 ಕೋಟಿಯ ಚಿನ್ನದ ಕಿರೀಟ ನೀಡಿದ ಜನಾರ್ಧನರೆಡ್ಡಿ ಜೈಲಿಗೆ ಹೋಗಿ ಬಂದರು. 10 ಕೋಟಿಯ ಬಂಗಾರದ ಮೆಟ್ಟಿಲು ಮಾಡಿಸಿಕೊಟ್ಟಿದ್ದ ವಿಜಯ್ ಮಲ್ಯ ದೇಶವನ್ನೇ ಬಿಟ್ಟು ಓಡಿ ಹೋದರು. ಆದರೆ ನಮ್ಮ ಶಿಕ್ಷಕಿ ನಿರ್ಮಲಾ ಮೇಡಂ ಇನ್ನೂ ಅದೇ ಶಾಲೆಯಲ್ಲೇ ನೂರಾರು, ಸಾವಿರಾರು ವಿದ್ಯಾರ್ಥಿಗಳ ಹೆಮ್ಮೆಯ ಶಿಕ್ಷಕಿಯಾಗಿ ಗೌರವಿಸಲ್ಪಡುತ್ತಿದ್ದಾರೆ, ಪೂಜಿಸಲ್ಪಡುತ್ತಿದ್ದಾರೆ. 
ಸಂಗ್ರಹ; *✒॥ವಿಶ್ವಕರ್ಮೆರ್ @ಗಿರೀಶ್ ॥💝*

Sunday, October 10, 2021

A healthy heart means a healthy lifestyle.

A healthy heart means a healthy lifestyle. It is necessary to understand the importance of cardiovascular function as this is where we usually go wrong. This is because a minor clog can lead to major health repercussions even at a very young age.

Stroke, high blood pressure, diabetes are some of the end results of this. Therefore, two things need to taken care of and should be kept in check at all times: cholesterol and blood pressure. If the arteries get clogged, it can lead to a permanent health issue. Following are the foods which can help cleanse your arteries:
1. Turmeric: Turmeric contains curcumin. It is because of this property that turmeric reduces inflammation which causes hardening of the arteries. This condition is called atherosclerosis and is very dangerous. Therefore, turmeric works in the favour of lowering inflammation in the arteries. This inflammation can be due to many factors like unhealthy food habits.

2. Orange: A study published by the American Journal of Clinical Nutrition found that consuming oranges helps lowering the resting blood pressure. This is because oranges contain antioxidants which help improve the blood vessel function. Oranges also contain fiber pectin which lowers cholesterol. The vitamin C present in oranges help strengthen the arteries and does not lead to blockages.
3. Pomegranate: Another popular food for cleansing our arteries, pomegranate is extremely useful for preventing blockages in the arteries. This is because pomegranate contains phytochemicals. The antioxidants present in pomegranate stimulates the production of nitric oxide which consequently helps in blood flow and helps keep the arteries open.

4. Broccoli: Foods rich in fiber are known to lower blood pressure and keep cholesterol problems at bay. Broccoli is loaded with vitamin K, which helps in preventing hardening of the arteries. Broccoli also lubricates the arterial walls. It is also beneficial for bone formation.

5. Coffee: Coffee contains caffeine, which can help improve your heart health. However, it is better to stick to coffee in moderation only. Drinking four cups of coffee every day is ideally advised.

6. Whole grain: Whole grains like bajra, jowar, bajra, and ruttu are some of the whole grains available in India. Whole grains contain soluble fiber which helps in lowering cholesterol and blood pressure levels.

7. Fatty fish: Fatty fish includes fish like Salmon which are high in omega-3. To cut bad fat in the body, we need good fat. In order to stimulate this process so that our arteries do not get blocked due to unhealthy food items, consumption of good fats like omega-3 is necessary.

8. Green tea: Foods and liquids rich in antioxidants are extremely useful if you wish to take care of your heart. Antioxidants help fight radicals. Green tea is helpful in decreasing cholesterol in your body and get it to a healthier level. Sipping two cups everyday will be beneficial.

9. Watermelon: Watermelons contain essential amino acids which help lower blood pressure levels in the body. Sometimes, due to bad inner health, the blood vessels tend to narrow down. This can be due to an unhealthy lifestyle. Watermelon help produce nitric oxide which leads to widening these blood vessels.

10. Olive oil: As mentioned before, good fats are needed to cut bad fats. Olive oil contains monounsaturated and polyunsaturated fats, both of which are great for lowering cholesterol and blood pressure levels.

11. Cinnamon: Another powerful antioxidant, cinnamon along with water or tea everyday can help you keep heart diseases at bay. This is because cinnamon eradicates the issue of blockages in the arteries.

12. Tomatoes: Tomatoes contain lycopene which help decrease the LDL cholesterol and triglycerides from our bloodstream. Since they are also rich in fiber, they help clear blockages from our arteries.

13. Beans: Other than being rich in fiber, beans are also high in folic acid. Folic acid does not let the arteries get blocked. Beans help reduce the risk of cholesterol deposits which consequently leads to clogging the arteries.

14. Apples: A study by Ohio State University suggests that an apple a day can help reduce the hardening of arteries by 40%. This is because apples contain fiber which helps slow down the clogging of arteries.

15. Chia seeds: Chia seeds are a super food which are packed with fiber and alpha-linolenic acids. This helps in reducing bad cholesterol (LDL) and increasing good cholesterol (HDL) along with lowering triglycerides. These are essential if you wish to have healthy arteries.

16. Almonds: Almonds are loaded with vitamin E and fiber both of which help in healthy cardio activity. This also helps in reducing blood pressure.

17. Asparagus: Known as the best food for arteries, asparagus helps in decreasing inflammation as well as in getting rid of clots which are already present in the arteries. This is because asparagus is full of fiber and minerals and can even prevent cardiovascular illness.

18. Coconut oil: Another example of good fats, coconut oil is great for the arteries. However, consumption of any kind of oil should be done in moderation. Coconut oil contains high concentration of MGT (medium-chain triglycerides) which can reduce the clogging in your arteries.

Sunday, October 3, 2021

ಹೀಗೆ ಬದುಕಿದ್ದರು ನಮ್ಮ ಶಾಸ್ತ್ರೀಜಿ.

ಹೀಗೆ ಬದುಕಿದ್ದರು ನಮ್ಮ ಶಾಸ್ತ್ರೀಜಿ.

ಎರಡು ಘಂಟೆ ಯುದ್ಧ ಮುಂದುವರಿದಿದ್ದರೆ,ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ತನಕ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿತ್ತು.

ಎಚ್ಚೆತ್ತ ಪಾಕಿಸ್ತಾನ ಅಮೇರಿಕದ ಮುಂದೆ ಮಂಡಿಯೂರಿ ಕೂತಿತು.ಯುದ್ಧವನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೇ ಗೋಗರೆಯಿತು.

ಆಗ ಅಮೇರಿಕದ ಗೋಧಿ ಭಾರತಕ್ಕೆ ಆಮದಾಗುತ್ತಿತ್ತು.ಆ ಗೋಧಿಯ ಗುಣಮಟ್ಟ ಹೇಗಿತ್ತೆಂದರೆ,ಪ್ರಾಣಿಗಳು ತಿನ್ನಲೂ ಅಸಾಧ್ಯವಾದದ್ದು.ಈ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು ಜವಾಹರಲಾಲ್ ನೆಹರೂ.ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ,ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು.ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ”

 “ಹೊಟ್ಟೆಗೆ ಆಹಾರವಿಲ್ಲದಿದ್ದರೆ ಭಾರತೀಯರು ಸಾಯುತ್ತಾರೆ”ಅಮೇರಿಕದ ಕುಚೋದ್ಯ ಪ್ರತಿಕ್ರಿಯೆ..!!

“ದೊಡ್ಡು ಕೊಟ್ಟು ನಿಮ್ಮ ಕಳಪೆಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ,ಹಸಿವಿನಿಂದ ಸಾಯುವುದೇ ವಾಸಿ.ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ” ಶಾಸ್ತ್ರೀಜಿಯವರ ತೀಕ್ಷ್ಣ ಪ್ರತಿಕ್ರಿಯೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಶಾಸ್ತ್ರೀಜಿ ಮಾತನಾಡುತ್ತಾರೆ..

“ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ.ಅಮೇರಿಕದಿಂದ ಗೋಧಿ ಆಮದಾಗುವುದು ನಿಂತಿದೆ.ದೇಶದ ಜನ ಸಹಕರಿಸಬೇಕಿದೆ.ಒಂದು..ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡಬಹುದು.ಎರಡು..ಪ್ರತಿ ಸೋಮವಾರ ನೀವು ಉಪವಾಸವೃತವನ್ನು ಆಚರಿಸಬಹುದು.ಇದರಿಂದ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಬಹುದು.ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು”

ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶ ಓಗೊಟ್ಟಿತು.ಹಲವರು ಸೇನೆಗೆ ಸಹಾಯ ಮಾಡಿದರು.ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು.ಸ್ವತಃ ಶಾಸ್ತ್ರೀಜಿಯವರೂ ಸೋಮವಾರದಂದು ಉಪವಾಸವೃತವನ್ನು ಕೈಗೊಂಡರು.

ಶಾಸ್ತ್ರೀಜಿಯವರ ಪತ್ನಿ,ಲಲಿತಾದೇವಿಯವರು ಅನಾರೋಗ್ಯಪೀಡಿತರಾಗಿದ್ದರು.ಮನೆಗೆಲಸಕ್ಕೆಂದು ಕೆಲಸದವಳೊಬ್ಬಳು ಬರುತ್ತಿದ್ದಳು.ಶಾಸ್ತ್ರೀಜಿಯವರು ಮಹಿಳೆಗೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದರು.ಆಕೆ”ಅಲ್ಲ,ನಿಮ್ಮ ಬಟ್ಟೆಯನ್ನು ತೊಳೆಯುವುದು,ಮನೆಯನ್ನು ಸ್ವಚ್ಛಗೊಳಿಸುವುದು,ನಿಮ್ಮ ಪತ್ನಿಯ ಆರೈಕೆಯನ್ನು ಯಾರು ಮಾಡಿಕೊಡುತ್ತಾರೆ ಸ್ವಾಮೀ”ಎಂದು ಕೇಳಿದಳು.

“ದೇಶಕ್ಕಾಗಿ ಇದು ಅನಿವಾರ್ಯವಮ್ಮಾ.ನಿನಗೆ ಕೊಡುವ ಸಂಬಳದ ಹಣವಾದರೂ ಉಳಿದೀತು.ದೇಶದ ಒಳಿತಿಗಾದೀತು” ಎಂದು ಹೇಳಿದರು.ನಂತರ ಮನೆಯ ಪ್ರತಿಯೊಂದು ಕೆಲಸವನ್ನೂ ಶಾಸ್ತ್ರೀಜಿಯವರೇ ನಿಭಾಯಿಸುತ್ತಿದ್ದರು.

ಶಾಸ್ತ್ರೀಜಿಯವರ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡಲೆಂದು ಟ್ಯೂಟರ್ ಬರುತ್ತಿದ್ದರು.ಅವರನ್ನೂ ಕೆಲಸದಿಂದ ವಿಮುಕ್ತಗೊಳಿಸಿದರು.”ಮಕ್ಕಳು ಇಂಗ್ಲೀಷಿನಲ್ಲಿ ಫೇಲಾಗುತ್ತಾರೆ”ಟ್ಯೂಟರ್ ಹೇಳಿದ್ದಕ್ಕೆ ಶಾಸ್ತ್ರೀಜಿ,”ಆಗಲಿ ಬಿಡಿ ಇಂಗ್ಲೀಷ್ ನಮ್ಮ ಭಾಷೆಯಲ್ಲ.ಇಂಗ್ಲಿಷರು ಹಿಂದಿಯನ್ನು ಬರೆದರೆ ಅವರೂ ಫೇಲಾಗುತ್ತಾರೆ”ಎಂದರು.

ಒಂದು ದಿನ ಶಾಸ್ತ್ರೀಜಿಯವರ ಪತ್ನಿ,ಹರಿದುಹೋಗಿರುವ ಅವರ ಧೋತಿಯನ್ನು ನೋಡಿ “ಒಂದು ಹೊಸ ಧೋತಿಯನ್ನಾದರೂ ತೆಗೆದುಕೊಳ್ಳಬಾರದೇ?”ಎಂದು ಕೇಳುತ್ತಾರೆ.”ಅದನ್ನು ಕೊಳ್ಳಲು ಹಣವೆಲ್ಲಿದೆ..?ಬರುವ ಸಂಬಳವನ್ನೂ ಬಿಟ್ಟಾಗಿದೆ.ಮನೆಯ ಖರ್ಚುಗಳನ್ನು ಕಡಿಮೆ ಮಾಡು” ಎಂದಿದ್ದರು.

ಅಕ್ಟೋಬರ್ 2 .ಶಾಸ್ತ್ರೀಜಿಯವರ ಜನ್ಮದಿನ.ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ,ಸಜ್ಜನ ಮಹಾಪುರುಷನನ್ನು ನಾವಂದು ಸ್ಮರಿಸಬೇಕಿದೆ..

ಯಶಸ್ವಿ ಜೀವನಕ್ಕಿಂತ ಸ೦ತೃಪ್ತ ಜೀವನವೇ ಮಿಗಿಲು.ಯಾಕೆಂದರೇ .......

ಯಶಸ್ವಿ ಜೀವನಕ್ಕಿಂತ 
ಸ೦ತೃಪ್ತ ಜೀವನವೇ ಮಿಗಿಲು.
ಯಾಕೆಂದರೇ .......
ಜೀವನದ ಯಶಸ್ಸು ಇತರರ ದೃಷ್ಠಿಯಲ್ಲಿರುತ್ತದೆ.
ಜೀವನದ ಸುಖ ನಮ್ಮ ಆತ್ಮತೃಪ್ತಿಯಲ್ಲಿರುತ್ತದೆ.
                                                              ವಂದನೆಗಳೊಂದಿಗೆ

ಹನುಮಂತ 'ಭಜರಂಗಬಲಿ" ಆಗಿದ್ದು ಹೇಗೆ?

 'ಭಜರಂಗಬಲಿ" ಆಗಿದ್ದು  ಹೇಗೆ? 

ತಾಯಿ ಕೈಕೆಯ  ಆದೇಶದಂತೆ, ರಾಮ, ಸೀತೆ, ಲಕ್ಷ್ಮಣ, ಹದಿನಾಲ್ಕು ವರ್ಷಗಳ ವನವಾಸಕ್ಕೆ ಹೊಗುತ್ತಾರೆ. ಹೀಗೆ ಹೋದಾಗ ರಾಮನಿಗೆ, ಹನುಮಂತ ಸಿಗುತ್ತಾನೆ. ಮುಂದೆ ಹನುಮಂತ,  ರಾಮನ ಪರಮಭಕ್ತನಾಗುತ್ತಾನೆ.
ಸೀತಾಮಾತೆ  ನಿತ್ಯವೂ ಹಣೆಗೆ  ಸಿಂಧೂರ ಇಡುವುದನ್ನು ಆಂಜನೇಯ ನೋಡುತ್ತಿರುತ್ತಾನೆ. ಅವನಿಗೆ  ಇದನ್ನು ನೋಡಿದಾಗಲೆಲ್ಲ, ಯಾಕೆ ಪ್ರತಿನಿತ್ಯ ಸೀತಾಮಾತೆ  ಈ ಬಣ್ಣವನ್ನು ಹಣೆಗೆ ಹಚ್ಚಿಕೊಳ್ಳುತ್ತಾಳೆ ಎಂದು ಆಶ್ಚರ್ಯವಾಗುತ್ತದೆ. ಹಾಗೆ ಅವನಿಗೆ ಅದೊಂದು  ದೊಡ್ಡ ಪ್ರಶ್ನೆಯಾಗಿ  ಉಳಿಯುತ್ತದೆ. ಅದನ್ನು ಕೇಳಬೇಕೆಂದರೊ, ಅವನಿಗೆ ಸೀತಾಮಾತೆಯ ಕುರಿತಾಗಿ ಇರುವ  ಭಕ್ತಿಯ ಕಾರಣ ಈ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ.  ಅಲ್ಲದೆ ಅವನಿಗೆ  ಒಂಥರಾ  ಸಂಕೋಚ. ಹೀಗೆ ಒಂದು ದಿನ ಅರಣ್ಯದಲ್ಲಿ ಎಲ್ಲರೂ ಕುಳಿತು ಮಾತಾಡ್ತಾ ಇರ್ತಾರೆ.   ಹನುಮಂತನನ್ನೇ  ಗಮನಿಸುತ್ತಿದ್ದ ಸೀತೆ , ನೇರವಾಗಿ ಕೇಳಿದಳು.  ನಿನ್ನ ಮನಸ್ಸಿನಲ್ಲಿ ಏನೋ ಒಂದು ಕುತೂಹಲ ಇದೆ. ಅದನ್ನು ಕೇಳಲು ನೀನು ಬಹಳ ಹಿಂದೇಟು ಹಾಕುತ್ತಾ ಇದ್ದೀಯಾ ಪರವಾಗಿಲ್ಲ  ಕೇಳು ಎಂದಳು. ಆದರೂ ಅವನಿಗೆ ಹೆದರಿಕೆ. ಇದನ್ನು  ಅರಿತ  ಸೀತೆ , ಪರವಾಗಿಲ್ಲ  ನೀನು ಎಂಥದೇ ದಡ್ಡ ಪ್ರಶ್ನೆ ಕೇಳಿದರು ನಾನು ಏನು ತಿಳಿದುಕೊಳ್ಳುವುದಿಲ್ಲ ಕೇಳು ಹೇಳುತ್ತೇನೆ  ಎಂದಳು. 

ಈಗ  ಹನುಮಂತನು ಧೈರ್ಯದಿಂದ , " ಮಾತೇ ನೀನು ಪ್ರತಿದಿವಸ ಹಣೆಗೆ ಸಿಂಧೂರವನ್ನು  ಹಚ್ಚಿಕೊಳ್ಳುವೆ  ಏಕೆ? ಎಂದನು. ಅವನು ಹೇಳಿದ್ದನ್ನು  ಕೇಳಿ ನಕ್ಕ ಸೀತೆ,  ಇದನ್ನು ಕೇಳುವುದಕ್ಕೆ ಇಷ್ಟು ಯೋಚನೆ ಮಾಡಿದೀಯಾ?  ಮದುವೆಯಾದ ಮೇಲೆ ಹೆಣ್ಣುಮಕ್ಕಳು ತಮ್ಮ  ಪತಿಯ ಆಯುರಾರೋಗ್ಯಕ್ಕಾಗಿ ದೇವಿಯನ್ನು ಬೇಡಿಕೊಂಡು   ಹಣೆಗೆ ಸಿಂಧೂರ ಇಟ್ಟುಕೊಳ್ಳುವುದು ಹಿಂದೂ ಧರ್ಮದ ಸಂಪ್ರದಾಯವಾಗಿದೆ. ಹೀಗಾಗಿ ಮದುವೆಯಾದ ಎಲ್ಲಾ ಹೆಣ್ಣುಮಕ್ಕಳು ಹಣೆಗೆ ಸಿಂಧೂರವನ್ನು ಇಟ್ಟುಕೊಳ್ಳುತ್ತಾರೆ, ನಾನು ನನ್ನ  ಪತಿ ಶ್ರೀರಾಮನನ್ನು ವರಿಸಿದ್ದೇನೆ. ಶ್ರೀರಾಮನ ಆಯಸ್ಸು ವೃದ್ಧಿಸಲಿ, ನಾನು  ದೀರ್ಘಸುಮಂಗಲಿಯಾಗಿ, ಸುಖ ಸಮೃದ್ಧಿಯಿಂದ  ಬಾಳುವಂತೆ ಅನುಗ್ರಹಿಸು  ತಾಯಿ ಎಂದು ಪಾರ್ವತಿ ದೇವಿಯನ್ನು ಬೇಡಿಕೊಂಡು ಕುಂಕುಮವನ್ನು ಇಟ್ಟುಕೊಳ್ಳುತ್ತೇನೆ " ಎಂದಳು.
ಹನುಮಂತ ಈ ಮಾತನ್ನು ಕೇಳ್ತಾ ಇದ್ದ ಹಾಗೆ ತಕ್ಷಣ ಎದ್ದು, ಅಲ್ಲಿದ್ದ ಕುಂಕುಮದ ಡಬ್ಬಿಯನ್ನೇ ತೆಗೆದುಕೊಂಡು, ಡಬ್ಬಿಯಲ್ಲಿದ್ದ ಅಷ್ಟೂ ಸಿಂಧೂರವನ್ನು  ತನ್ನ ಮೈತುಂಬಾ ಬಳಿದುಕೊಳ್ಳುತ್ತಾನೆ. ಇದನ್ನು ನೋಡಿ ಸೀತೆ ಜೋರಾಗಿ ನಕ್ಕು, ಅಲ್ವೋ ಹನುಮಂತ ನೀನ್ಯಾಕೆ ಕುಂಕುಮವನ್ನು ಮೈತುಂಬ ಹೆಚ್ಚಿಕೊಂಡಿದ್ದೀಯಾ?  ಎಂದು ಕೇಳಿದಾಗ, ಅವನು ಹೇಳುತ್ತಾನೆ, "ನೀನು ಇಷ್ಟು ಸ್ವಲ್ಪ ಕುಂಕುಮವನ್ನು ಹಣೆಗೆ ಹಚ್ಚಿಕೊಂಡರೆ  ರಾಮನ ಆಯಸ್ಸು ಸ್ವಲ್ಪ ಮಾತ್ರ ಹೆಚ್ಚಾಗುತ್ತದೆ. ಆದರೆ ನಾನು ನನ್ನ ಈ ದೊಡ್ಡ ಶರೀರದ  ತುಂಬಾ ಬಳಿದುಕೊಂಡರೆ, ರಾಮನ ಆಯಸ್ಸು  ಜಾಸ್ತಿಯಾಗುತ್ತದೆ" ಎಂದನು. ಇದರಿಂದ ಹನುಮಂತನು ಎಷ್ಟೊಂದು ಮುಗ್ಧ ಸ್ವಭಾವದವನು, ಮತ್ತು ಶ್ರೀರಾಮನನ್ನು ಅದೆಷ್ಟು ಪ್ರೀತಿಸುತ್ತಾನೆ ಎಂಬುದು ಸೀತೆಗೆ ತಿಳಿಯುತ್ತದೆ. ರಾಮನು ತನ್ನ ಪರಮಭಕ್ತನಾದ ಹನುಮಂತನ  ಇಂಥ  ಮುಗ್ಧತೆ, ಅವನು ತೋರಿಸುವ ಪ್ರೀತಿ, ಇವುಗಳನ್ನೆಲ್ಲ ನೋಡಿ ಹನುಮಂತನನ್ನು 'ಭಜರಂಗಬಲಿ' ಎಂದು ಕರೆದನು. 

'ಭಜರಂಗಬಲಿ' ಇದರ ಅರ್ಥ:- 'ಭಜರಂಗ' ಅಂದರೆ ಕೇಸರಿ ಅಥವಾ ಕುಂಕುಮ, ಹನುಮಂತನು  ಅಷ್ಟೂ  ಕೇಸರಿಯನ್ನು ತನ್ನ ಮೈತುಂಬ ಹಚ್ಚಿಕೊಂಡ ಕಾರಣ 'ಭಜರಂಗಬಲಿ' ಎಂಬ ಹೆಸರು ಬಂದಿತು.
'ಜೈ ಭಜರಂಗಬಲಿ'  ಇದು ಮಕ್ಕಳಿಗೆ, ಯುವ ಜನತೆಗೆ  ಪ್ರೇರಕ ಶಕ್ತಿಯಾಗಿ,  ಪ್ರೀತಿ,ಉತ್ಸಾಹ, ಸಾಹಸ, ಒಗ್ಗಟ್ಟು, ಇವುಗಳನ್ನೆಲ್ಲ ಒಗ್ಗೂಡಿಸಿ ಕೊಂಡಿರುವ  ಈ ಹೆಸರು ಎಲ್ಲರನ್ನೂ  ಮಂತ್ರ ಮುಕ್ತರನ್ನಾಗಿಸಿ ಜಡತ್ವ ತುಂಬಿರುವ  ಮನಗಳನ್ನು ಬಡಿದೆಬ್ಬಿಸಿ 'ಸ್ಪೂರ್ತಿ'ಯನ್ನು ಉಕ್ಕಿಸುವ  ಘೋಷಣೆಯ ವಾಕ್ಯವಾಗಿದೆ.

" ಮನೋಜವಂ ಮಾರುತ ತುಲ್ಯ ವೇಗಂ, 
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್,
ವಾತಾತ್ಮಜಂ ವಾನರಯೂಥ ಮುಖ್ಯಂ,
ಶ್ರೀ ರಾಮದೂತಂ ಶಿರಸಾ ನಮಾಮಿ." 

ವಾಯುವಿಗೆ ಸಮಾನ ವೇಗವುಳ್ಳ, ಜಿತೇಂದ್ರಿಯನಾದ, ಬುದ್ಧಿವಂತರಲ್ಲಿ ಶ್ರೇಷ್ಠನಾದ ,ವಾಯುಪುತ್ರನಾದ ,ವಾನರ ಸಮೂಹಕ್ಕೆ ಮುಖ್ಯನಾದ ಶ್ರೀರಾಮದೂತನಾದ ಹನುಮಂತನಿಗೆ  ನಮಸ್ಕರಿಸುತ್ತೇನೆ. 

ವಂದನೆಗಳೊಂದಿಗೆ,

Friday, October 1, 2021

'ವಿಸ್ಕಿ 'ಗೂ ಎರಡಕ್ಷರ'ಬ್ರಾಂಡಿ ' ಗೂ ಎರಡಕ್ಷರ'ರಮ್ ' ಗೂ ಎರಡಕ್ಷರ'ಜಿನ್ ' ಗೂ ಎರಡಕ್ಷರ'ವೋಡ್ಕಾ ' ಗೂ ಎರಡಕ್ಷರ'ವೈನ್ ' ಗೂ ಎರಡಕ್ಷರ'ಬೀರ್ ' ಗೂ ಎರಡಕ್ಷರ ,,,,,

'ವಿಸ್ಕಿ 'ಗೂ  ಎರಡಕ್ಷರ
'ಬ್ರಾಂಡಿ ' ಗೂ  ಎರಡಕ್ಷರ
'ರಮ್ ' ಗೂ ಎರಡಕ್ಷರ
'ಜಿನ್ ' ಗೂ ಎರಡಕ್ಷರ
'ವೋಡ್ಕಾ ' ಗೂ ಎರಡಕ್ಷರ
'ವೈನ್ ' ಗೂ ಎರಡಕ್ಷರ
'ಬೀರ್ ' ಗೂ ಎರಡಕ್ಷರ
'ಸ್ಕಾಚ್ ' ಗೂ ಎರಡಕ್ಷರ

ಸುರಿಯುವ 'ಗ್ಲಾಸ್ ' ಗೂ ಎರಡಕ್ಷರ
ಬೆರೆಸುವ 'ನೀರು ' ಗೂ ಎರಡಕ್ಷರ
ಬೆರೆಸುವ 'ಸೋಡಾ 'ಗೂ ಎರಡಕ್ಷರ
ಮಾರಾಟ ಮಾಡುವ 'ಬಾರ್ ' ಗೂ ಎರಡಕ್ಷರ.
ಅಳತೆ ಮಾಡುವ 'ಪೆಗ್ 'ಗೂ ಎರಡಕ್ಷರ.
ಕುಡಿದ ಮೇಲೆ ಬರುವ 'ಮತ್ ' ಗೂ ಎರಡಕ್ಷರ.
ಕುಡಿದು ಮಾಡುವ 'ವಾಂತಿ 'ಗೂ ಎರಡಕ್ಷರ.
ಮತ್ತೇರಿ ಬೀಳುವ 'ಗುಂಡಿ 'ಗೂ ಎರಡಕ್ಷರ.
ಹೊತ್ತೋಯುವ 'ಜನ 'ರಿಗೂ ಎರಡಕ್ಷರ.

ಹೋಗುವ 'ಮಾನ 'ಕ್ಕೂ ಎರಡಕ್ಷರ.
ಕಣ್ಣೀರು ಹಾಕುವ 'ಪತ್ನಿ 'ಗೂ ಎರಡಕ್ಷರ.
ಬರುವ 'ರೋಗ ' ವೂ ಎರಡಕ್ಷರ.
ಇದಕೆಲ್ಲ ಮಾಡಲು 'ಖರ್ಚು ' ಎರಡಕ್ಷರ.
ಇದಕ್ಕೆಲ್ಲ ಮಾಡಿದ' ಸಾಲ ' ವೂ ಎರಡಕ್ಷರ.
ಸಾಲ ತೀರಿಸಲು ಮಾರುವದು' ಆಸ್ತಿ
ಗೂ ಎರಡಕ್ಷರ.

ಕೊನೆಗೆ ಬರುವದೇ 'ಸಾವು ' ಎರಡಕ್ಷರ.
ಹೊತ್ತೋಯ್ಯಲು 'ಚಟ್ಟ ' ಎರಡಕ್ಷರ.
ದೇಹ ದಫನ್ ಮಾಡಲು' ಮಣ್ಣು '
or 'ಅಗ್ನಿ ' ಎರಡಕ್ಷರ.

ನದಿಗೆ ಬಿಡುವ 'ಅಸ್ಥಿ ' ಎರಡಕ್ಷರ.
ಕೊನೆಗೆ ಮಾಡುವರು 'ತಿಥಿ ' ಎರಡಕ್ಷರ.
ಗೋಡೆಗೆ ಹಾಕುವರು 'ಫೋಟೋ 'ಎರಡಕ್ಷರ.
ಕೊನೆಗೆ ಹಿಂದೆ ಬರವದು 'ಪಾಪ, ಎರಡಕ್ಷರ.

Saturday, August 7, 2021

ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಸಂಪುಟ

1. ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
2. ಆರ್.ಅಶೋಕ್ – ಕಂದಾಯ
3. ಬಿ.ಶ್ರೀರಾಮುಲು – ಸಾರಿಗೆ, ಪರಿಶಿಷ್ಠ ಪಂಗಡ ಅಭಿವೃದ್ದಿ
4. ವಿ.ಸೋಮಣ್ಣ – ವಸತಿ & ಮೂಲಭೂತ ಸೌಕರ್ಯ ಅಭಿವೃದ್ದಿ
5. ಬಿ.ಸಿ.ಪಾಟೀಲ್ – ಕೃಷಿ
6. ಎಸ್.ಟಿ.ಸೋಮಶೇಖರ್ – ಸಹಕಾರ
7. ಡಾ.ಕೆ.ಸುಧಾಕರ್ – ಆರೋಗ್ಯ,ವೈದ್ಯಕೀಯ ಶಿಕ್ಷಣ
8. ಕೆ.ಗೋಪಾಲಯ್ಯ – ಅಬಕಾರಿ
9. ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್
10. ಎಂಟಿಬಿ ನಾಗರಾಜ್ – ಪೌರಾಡಳಿತ, ಸಣ್ಣ ಕೈಗಾರಿಕೆ
11. ಬಿ.ಸಿ.ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
12. ವಿ.ಸುನಿಲ್​ಕುಮಾರ್ – ಇಂಧನ
13. ಉಮೇಶ್ ಕತ್ತಿ – ಅರಣ್ಯ, ಆಹಾರ & ನಾಗರೀಕ ಸರಬರಾಜು
14. ಜೆ.ಸಿ.ಮಾಧುಸ್ವಾಮಿ – ಸಣ್ಣ ನೀರಾವರಿ
15. ಆರಗ ಜ್ಞಾನೇಂದ್ರ – ಗೃಹಖಾತೆ
16. ಡಾ.ಸಿ.ಎನ್.ಅಶ್ವತ್ಥ್ ನಾರಾಯಣ – ಉನ್ನತ ಶಿಕ್ಷಣ, ಐಟಿ-ಬಿಟಿ
17. ಆನಂದ್ ಸಿಂಗ್ – ಪರಿಸರ, ಪ್ರವಾಸೋದ್ಯಮ
18. ಪ್ರಭು ಚೌಹಾಣ್ – ಪಶುಸಂಗೋಪಣೆ
19. ಮುರುಗೇಶ್ ನಿರಾಣಿ – ಬೃಹತ್, ಮಧ್ಯಮ ಕೈಗಾರಿಕೆ
20. ಶಿವರಾಮ್ ಹೆಬ್ಬಾರ್ – ಕಾರ್ಮಿಕ
21. ಎಸ್.ಅಂಗಾರ – ಮೀನುಗಾರಿಕೆ, ಬಂದರು
22. ಗೋವಿಂದ ಕಾರಜೋಳ – ಜಲಸಂಪನ್ಮೂಲ, ಭಾರೀ ಮತ್ತು ಮಧ್ಯಮ ನೀರಾವರಿ
23. ಕೋಟಾ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ & ಹಿಂದುಳಿದ ವರ್ಗಗಳ ಕಲ್ಯಾಣ
24. ಕೆ.ಸಿ.ನಾರಾಯಣಗೌಡ – ಕ್ರೀಡೆ
25. ಮುನಿರತ್ನ – ತೋಟಗಾರಿಕೆ
26. ಭೈರತಿ ಬಸವರಾಜ್ – ನಗರಾಭಿವೃದ್ಧಿ
27. ಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನ
28. ಸಿ.ಸಿ.ಪಾಟೀಲ್ – ಲೋಕೋಪಯೋಗಿ
29. ಶಂಕರ ಪಾಟೀಲ್ ಮುನೇನಕೊಪ್ಪ – ಜವಳಿ

Friday, July 9, 2021

" ಒಂದು ಗಿಡದಲ್ಲಿ ಅರಳಿದ ಹೂವುಗಳಲ್ಲಿ ಕೆಲವು ಹೂವುಗಳು ಮಾತ್ರ ದೇವರ ಮುಡಿಗೇರಲು ಸಾಧ್ಯ.

" ಒಂದು ಗಿಡದಲ್ಲಿ ಅರಳಿದ ಹೂವುಗಳಲ್ಲಿ ಕೆಲವು ಹೂವುಗಳು ಮಾತ್ರ ದೇವರ ಮುಡಿಗೇರಲು ಸಾಧ್ಯ. ಇನ್ನು ಕೆಲವು ಗಿಡದಲ್ಲೆ ಬಾಡಿ,ಒಣಗಿ ನೆಲಕ್ಕೆ ಬಿದ್ದು ಅದೇ ಗಿಡಕ್ಕೆ ಗೊಬ್ಬರವಾಗುತ್ತವೆ. ಅದರಿಂದ ಸುಂದರವಾದ ಹೂವುಗಳು ಮತ್ತೆ ಅರಳುತ್ತವೆ. ಆ ರೀತಿ ಅರಳಲು ನೆಲಕ್ಕೆ ಬಿದ್ದು ಗೊಬ್ಬರವಾದ ಹೂಗಳೇ ಕಾರಣ. ಹಾಗೆಯೇ ಉನ್ನತ ವ್ಯಕ್ತಿಗಳ ಸಾಧನೆಯ ಹಿಂದೆ ಸಣ್ಣ ಪುಟ್ಟ ವ್ಯಕ್ತಿಗಳ ಪಾತ್ರ ಅಮೋಘವಾಗಿರುತ್ತದೆ. ಸಾಧನೆ ಮಾಡಿದ ವ್ಯಕ್ತಿಯನ್ನು ಗುರುತಿಸುತ್ತೇವೆಯೇ ಹೊರತು, ಆ ಸಾಧನೆಯ ಹಿಂದಿರುವವನು ಗೌಣವಾಗಿಯೇ ಉಳಿಯುತ್ತಾನೆ" --
ವಂದನೆಗಳೊಂದಿಗೆ

*ದಯವಿಟ್ಟು ತಪ್ಪದೇ ಓದಿ*ಸರ್ವೋಚ್ಚ ತ್ಯಾಗ..........

*ದಯವಿಟ್ಟು ತಪ್ಪದೇ ಓದಿ*

ಸರ್ವೋಚ್ಚ ತ್ಯಾಗ..........

ಇಪ್ಪತ್ತು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಳ್ಳಿಯಿಂದ ದೇಶದ ರಕ್ಷಣಾ ಸಚಿವಾಲಯಕ್ಕೆ ಒಂದು ಪತ್ರ ಬಂದಿತ್ತು. ಪತ್ರ ಬರೆದವರು ಒಬ್ಬ ಸಾಮಾನ್ಯ ಶಾಲಾ ಶಿಕ್ಷಕರಾಗಿದ್ದರು. 
ಅವರ ಕೋರಿಕೆ ಹೀಗಿತ್ತು.
 "ಸಾಧ್ಯವಾದರೆ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಏಕೈಕ ಪುತ್ರ ವೀರ ಮರಣ ಹೊಂದಿದ ಸ್ಥಳವನ್ನು ನೋಡಲು ನನ್ನ ಹೆಂಡತಿ ಮತ್ತು ನನಗೆ ಅನುಮತಿ ನೀಡಬಹುದೇ? , ಅವನ ಸಾವಿನ ಮೊದಲ ವಾರ್ಷಿಕ ದಿನ 07/7/2000 ದಂದು
ನನ್ನ ಕೋರಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ಹಾಗು ಇದು ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿದ್ದರೆ ನಾನು ನನ್ನ ಅರ್ಜಿಯನ್ನು ಹಿಂಪಡೆಯುತ್ತೇನೆ ಎಂದಿತ್ತು......
ಪತ್ರವನ್ನು ಓದಿದ ಇಲಾಖೆ ಅಧಿಕಾರಿ, "ಅವರ ಭೇಟಿಯ ವೆಚ್ಚ ಏನೇ ಇರಲಿ, ನನ್ನ ಸಂಬಳದಿಂದ ಅದನ್ನು ಪಾವತಿಸುತ್ತೇನೆ, ಇಲಾಖೆಗೆ ಇಷ್ಟವಿಲ್ಲದಿದ್ದರೆ ಮತ್ತು ನಾನು ಶಿಕ್ಷಕ ಮತ್ತು ಅವರ ಹೆಂಡತಿಯನ್ನು ಅವರ ಏಕೈಕ ಮಗ ವೀರಮರಣ ಹೊಂದಿದ ಸ್ಥಳಕ್ಕೆ ಕರೆತರುತ್ತೇನೆ ಎಂದುಕೊಂಡು ಅವರನ್ನು ಅಲ್ಲಿಯ ಭೇಟಿಗೆ ಎಲ್ಲಾ ವ್ಯವಸ್ಥೆ ಮಾಡುವಂತೆ ಆದೇಶ ಹೊರಡಿಸುತ್ತಾರೆ.
ಮೃತ ವೀರನ ನೆನಪಿನ ದಿನದಂದು ವೃದ್ಧ ದಂಪತಿಗಳನ್ನು ಸರಿಯಾದ ಗೌರವದಿಂದ ಪರ್ವತ ಶ್ರೇಣಿಗೆ ಕರೆತರಲಾಯಿತು.  ಅವರ ಮಗ ವೀರಸ್ವರ್ಗ ಪಡೆದ ಸ್ಥಳಕ್ಕೆ ಕರೆದೊಯ್ದಾಗ ಕರ್ತವ್ಯದಲ್ಲಿದ್ದ ಎಲ್ಲಾ ಸೈನಿಕರೂ ಅವರಿಗೆ ಗೌರವಪೂರ್ವಕವಾಗಿ ನಿಂತು ನಮಸ್ಕರಿಸಿದರು.  ಆದರೆ ಒಬ್ಬ ಅಧಿಕಾರಿ ಮಾತ್ರ ಅವರಿಗೆ ಒಂದು ಹೂವನ್ನು ನೀಡಿ, ಅವರ ಪಾದಗಳನ್ನು  ಮುಟ್ಟಿ ನಮಸ್ಕರಿಸಿದನು...

“ನೀವು ಅಧಿಕಾರಿ, ನಮ್ಮ ಪಾದಗಳನ್ನು ಏಕೆ ಮುಟ್ಟುತ್ತೀರಿ?" ಎಂದು ವೃದ್ಧ ದಂಪತಿಗಳು ಕೇಳಿದಾಗ
ನಾನು ನಿಮ್ಮ ಮಗನೊಂದಿಗೆ ಇಲ್ಲಿದ್ದೆ ಮತ್ತು ರಣಾಂಗಣದಲ್ಲಿ ನಿಮ್ಮ ಮಗನ ಶೌರ್ಯವನ್ನು ನೋಡಿದ ಏಕೈಕ ವ್ಯಕ್ತಿ ನಾನು.  ಪಾಕಿಸ್ತಾನಿಗಳು ತಮ್ಮ ಎಚ್.ಎಂ.ಜಿ ಗನ್ನುಗಳಿಂದ ನಿಮಿಷಕ್ಕೆ ನೂರಾರು ಗುಂಡುಗಳನ್ನು ಹಾರಿಸುತ್ತಿದ್ದರು.  ನಮ್ಮಲ್ಲಿ ಐದು ಜನರು ಮೂವತ್ತು ಅಡಿಗಳಷ್ಟು ದೂರಕ್ಕೆ ಮುನ್ನಡೆದು ಒಂದು ಬಂಡೆಯ ಹಿಂದೆ  ನಿಂತು 'ಸರ್, ನಾನು ‘ಡೆತ್ ಚಾರ್ಜ್’ ಗೆ ಹೋಗುತ್ತಿದ್ದೇನೆ.  ನಾನು ಅವರ ಬುಲೆಟ್‌ಗಳನ್ನು ತೆಗೆದುಕೊಂಡು ಅವರ ಬಂಕರ್‌ಗೆ ಓಡಿ ಗ್ರೆನೇಡ್ ಎಸೆದು ಅವರ ಬಂಕರ್ ನಾಶ ಮಾಡುತ್ತೇನೆ.  ನಂತರ ನೀವೆಲ್ಲರೂ ಅವರ ಬಂಕರನ್ನು ವಶಪಡಿಸಿಕೊಳ್ಳಿ ಎಂದು ಹೊರಡಲು ಸಿದ್ಧವಾದಾಗ  ನಿಮ್ಮ ಮಗ "ನೀನೇನು ಹುಚ್ಚ ನಾಗಿದ್ದೀಯಾ? ನಿನಗೆ ಹೆಂಡತಿ ಮತ್ತು ಮಕ್ಕಳಿದ್ದಾರೆ. ನಾನು ಇನ್ನೂ ಅವಿವಾಹಿತ, ನಾನು ಹೋಗುತ್ತೇನೆ" ಎಂದು ಹೇಳಿ, ನೀವು ಕವರಿಂಗ್ ಮಾಡಿ ’ಎನ್ನುತ್ತಾ ಬಲವಂತವಾಗಿ ನನ್ನಿಂದ ಗ್ರೆನೇಡ್ ಕಿತ್ತುಕೊಂಡು ಹೊರಟೇ ಬಿಟ್ಟ.
ಪಾಕಿಸ್ತಾನದ ಸಿಪಾಯಿಗಳ ಗುಂಡುಗಳಿಗೆ ತನ್ನ ಎದೆಯೊಡ್ಡುತ್ತಾ ಪಾಕಿಸ್ತಾನದ ಬಂಕರ್ ತಲುಪಿ, ಗ್ರೆನೇಡ್‌ನಿಂದ ಪಿನ್ ತೆಗೆದು ಅದನ್ನು ಬಂಕರ್‌ಗೆ ಎಸೆದು, ಹದಿಮೂರು ಪಾಕಿಸ್ತಾನಿಗಳನ್ನು ಸಾವಿನ ಮನೆಗೆ ಕಳುಹಿಸಿದರು. ಆ ಪ್ರದೇಶವು ನಮ್ಮ ನಿಯಂತ್ರಣಕ್ಕೆ ಬಂದಿತು. ನಾನು ನಿಮ್ಮ ಮಗನ ದೇಹವನ್ನು ಎತ್ತಿದೆ ಸರ್. ಅವನಲ್ಲಿ ನಲವತ್ತೆರಡು ಗುಂಡುಗಳು ಇದ್ದವು. ನಾನು ಅವನ ತಲೆಯನ್ನು ನನ್ನ ಕೈಯಲ್ಲಿ ಎತ್ತಿದಾಗ ಕೊನೆಯದಾಗಿ "ಜೈ ಹಿಂದ್!" ಎಂದು ಪ್ರಾಣತ್ಯಾಗ ಮಾಡಿದ ಸರ್. 
ನಿಮ್ಮ ಮಗನ ಶವಪೆಟ್ಟಿಗೆಯನ್ನು ನಿಮ್ಮ ಹಳ್ಳಿಗೆ ತಲುಪಿಸಲು ಅನುಮತಿ ನೀಡುವಂತೆ ನಾನು ಉನ್ನತ ಅಧಿಕಾರಿಗಳನ್ನು ಕೇಳಿದೆ ಆದರೆ ಅವರು ನಿರಾಕರಿಸಿದರು.
ಈ ಹೂವುಗಳನ್ನು ಅವನ ಪಾದಕ್ಕೆ ಹಾಕುವ ಭಾಗ್ಯ ನನಗೆ ಎಂದಿಗೂ ಇರಲಿಲ್ಲವಾದರೂ, ಅವುಗಳನ್ನು ನಿಮ್ಮ ಬಳಿ ಇಡುವ ಭಾಗ್ಯ ನನಗೆ ಈಗ ಸಿಕ್ಕಿದೆ‌ ಎಂದು ಕಣ್ತುಂಬಿ ಹೇಳಿದರು.
ಶಿಕ್ಷಕನ ಹೆಂಡತಿ ತನ್ನ ಸೆರಗಿನ ಅಂಚಿನಲ್ಲಿ ಕಣ್ಣೀರು ಒರೆಸಿಕೊಂಡರು. ಆದರೆ ಶಿಕ್ಷಕ ಅಳಲಿಲ್ಲ.
 ಅವರು “ನನ್ನ ಮಗ ರಜೆಯ ಮೇಲೆ ಬಂದಾಗ ಧರಿಸಲೆಂದು ನಾನು ಅಂಗಿಯೊಂದನ್ನು ಖರೀದಿಸಿದ್ದೆ. ಆದರೆ ಅವನು ಮನೆಗೆ ಬಂದಿಲ್ಲ ಮತ್ತು ಎಂದಿಗೂ ಬರುವುದೂ ಇಲ್ಲ.  ಹಾಗಾಗಿ ಅವನು ಸತ್ತ ಸ್ಥಳದಲ್ಲಿ ಅದನ್ನು ಇಡಲು ನಾನು ತಂದಿದ್ದೇನೆ.  ಬೇಟಾ, ಅದನ್ನು ಅವನಿಗಾಗಿ ನೀವು ಧರಿಸಬೇಕು? " ಎಂದರು.....
 ಆ ಭಾರತ ಮಾತೆಯ ವೀರ ಪುತ್ರ ಕಾರ್ಗಿಲ್ ಹೀರೋನ  ಹೆಸರು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಮತ್ತು
ಅವರ ತಂದೆಯ ಹೆಸರು ಗಿರಿಧಾರಿ ಲಾಲ್ ಬಾತ್ರಾ.
ಅವರ ತಾಯಿಯ ಹೆಸರು ಕಮಲ್ ಕಾಂತ.

ಸ್ನೇಹಿತರೇ.....
ಇಂತಹ ವೀರರೇ ನಮ್ಮ ನಿಜವಾದ  ಹೀರೋಗಳೇ ಹೊರತು ಮೇಕಪ್ ಧರಿಸಿ ಮರಗಳ ಸುತ್ತುವ ನಕಲಿ ಬಾಲಿವುಡ್ ಹೀರೋಗಳಲ್ಲ...
ಇಂತಹ ದೇಶದ ಅಮೂಲ್ಯ ವೀರ ಸುಪುತ್ರರ ಸರ್ವೋಚ್ಚ ತ್ಯಾಗದ ಬಗ್ಗೆ ಅರಿವು ಮೂಡಿಸಲು ದಯವಿಟ್ಟು ಇದನ್ನು ನಿಮ್ಮ ಎಲ್ಲಾ ಸ್ನೇಹಿತ ಮತ್ತು ಬಂಧುಗಳು ವಲಯದಲ್ಲಿ ಹಂಚಿಕೊಳ್ಳಿ.....
ವಂದನೆಗಳೊಂದಿಗೆ 

Sunday, June 20, 2021

ಪೆಟ್ರೋಲ್ ನೂರಾದದ್ದು ಕಂಡ ನನಗೆ ಸ್ವಾತಂತ್ರ್ಯ ಬಂದ 𝟕𝟎 ವರ್ಷಗಳ ನಂತರವೂ ಕತ್ತಲಲ್ಲಿದ್ದ 𝟏𝟖𝟎𝟎𝟎 ಹಳ್ಳಿಗಳಿಗೆ ವಿದ್ಯುತ್ ತಲುಪಿದ್ದು ಕಾಣಲೇ ಇಲ್ಲ.

👇 *"ಪೆ_ಟ್ರೋಲಾಯಣ"*👇

 *👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಸ್ವಾತಂತ್ರ್ಯ ಬಂದ 𝟕𝟎 ವರ್ಷಗಳ ನಂತರವೂ ಕತ್ತಲಲ್ಲಿದ್ದ 𝟏𝟖𝟎𝟎𝟎 ಹಳ್ಳಿಗಳಿಗೆ ವಿದ್ಯುತ್ ತಲುಪಿದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ ಸಿಗುವಂತಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಗಂಗಾ ನದಿ ಶುಚಿಯಾಗಿ ಸಂಭ್ರಮಿಸಿದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಬ್ಯಾಂಕ್ ಮುಖವನ್ನೇ ನೋಡಿಲ್ಲದ ಕೋಟಿ-ಕೋಟಿ ಜನರ ಖಾತೆ ತೆರೆಯುವಂತಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಬಯಲುಶೌಚ ಮುಕ್ತವಾದ ನನ್ನ ದೇಶ ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹ‌ವಾಯಿ ಚಪ್ಪಲಿ ಹಾಕುವವ ಹವಾಯಿ ಜಹಾಜ್ ನಲ್ಲಿ ಸಂಚರಿಸುವಂತಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಸಾಲುಮರದ ತಿಮ್ಮಕ್ಕರಂತಹರನ್ನು ಪದ್ಮ ಪ್ರಶಸ್ತಿಗಳು ಹುಡುಕಿಕೊಂಡು ಬಂದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ವಿಶೇಷ ವ್ಯಕ್ತಿಗಳ ವಾಹನಗಳಿಂದ ಕೆಂಪು ದೀಪ ಮಾಯವಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹಂಚಿಹೋಗಿದ್ದ ನನ್ನ ದೇಶವನ್ನು ಒಗ್ಗೂಡಿಸಿದವನ ವಿಶ್ವದ ಅತಿ ಎತ್ತರದ ಪ್ರತಿಮೆ ಸ್ಟ್ಯಾಚು ಆಫ್ ಯೂನಿಟಿ ತಲೆ ಎತ್ತಿ ನಿಂತದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಸಿಗುವಂತಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ರಕ್ಷಣಾ ವ್ಯವಸ್ಥೆಗೆ ಆತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇರ್ಪಡೆಗೊಂಡಿದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ದಶಕಗಳ ಕನಸಾದ ರಫೇಲ್ ಬಂದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಟ್ರಿಪಲ್ ತಲಾಕ್ ತರಹದ ಒಂದು ಅನಿಷ್ಟ ಪದ್ಧತಿ ರದ್ದಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ದೇಶದ ಭದ್ರತೆಗೆ ಮಾರಕವಾಗಿರುವ ಅಕ್ರಮ ನುಸುಳುಕೋರರನ್ನು ಒದ್ದು ಓಡಿಸಲು ಬಂದಿರುವ ಸಿಎಎ ಕಾನೂನು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಶತಮಾನಗಳಿಂದ ಕಗ್ಗಂಟಾಗಿದ್ದ ರಾಮ ಮಂದಿರ ವಿವಾದ ಯಾವುದೇ ತಂಟೆ-ತಕರಾರಿಲ್ಲದೆ ಇತ್ಯರ್ಥವಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಭವ್ಯ ರಾಮಮಂದಿರ ನಿರ್ಮಾಣ ಆರಂಭವಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಆರ್ಟಿಕಲ್ 𝟑𝟕𝟎 ರದ್ದಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ದೇಶದ ನಂಬರ್ 1 ವೈರಿ ಚೀನಾವನ್ನು ಹಿಮ್ಮೆಟ್ಟಿಸಿದ್ದು ಕಾಣಲೇ ಇಲ್ಲ.*

*ಪೆಟ್ರೋಲ್ ನೂರಾದದ್ದು ಕಂಡ ನನಗೆ ಪಾಕಿಸ್ತಾನಕ್ಕೆ ಅವರದೇ ನೆಲದಲ್ಲಿ ನುಗ್ಗಿ ಹೊಡೆದು ಬುದ್ಧಿ ಕಲಿಸಿದ್ದು ಕಾಣಲೇ ಇಲ್ಲ.*

*ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ವಿಜ್ಞಾನಿಗಳ ಪರಿಶ್ರಮದಿಂದ ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಯಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಇಡೀ ವಿಶ್ವವೇ ಯೋಗದೆಡೆಗೆ ಹೊರಳುವಂತೆ ಮಾಡಿದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ರೈತರ ಖಾತೆಗೆ ವಾರ್ಷಿಕ 𝟔𝟎𝟎𝟎 ಎಲ್ಲಿಗೂ ಅಲೆಯದೆ ಸೀದಾ ಖಾತೆಗೆ ಜಮೆಯಾಗುವಂತೆ ಆದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹೊಸ ಶೈಕ್ಷಣಿಕ ನೀತಿ ಜಾರಿಯಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹೊಸ ಕೃಷಿ ಕಾನೂನು ಜಾರಿಯಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ವೈದ್ಯಕೀಯ ಕ್ಷೇತ್ರ ಕರೋನಾದಂತಹ ಮಹಾಮಾರಿಗೆ ಲಸಿಕೆ ಕಂಡುಹಿಡಿದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಯಾವುದೇ ರಾಷ್ಟ್ರ ತೊಂದರೆಯಲ್ಲಿದ್ದರೆ ಮೊದಲು ಸಹಾಯಹಸ್ತ ಚಾಚುವ ನನ್ನ ದೇಶ ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹಾವಾಡಿಗರ ದೇಶ ಎಂದು ಬಿಂಬಿತವಾಗಿದ್ದ ನನ್ನ ದೇಶದ ಇಮೇಜು ಬದಲಾದದ್ದು ಕಾಣಲೇ ಇಲ್ಲ.*

*👉ಪೆಟ್ರೋಲ್ ನೂರಾದದ್ದು ಕಂಡ ನನಗೆ ಹಂತ ಹಂತವಾಗಿ ಆತ್ಮ ನಿರ್ಭರವಾಗುತ್ತಿರುವ ನನ್ನ ದೇಶ ಕಾಣಲೇ ಇಲ್ಲ.*

*👉ಮೋದಿ ಫೋಬಿಯಾ ಇರುವ ನನಗೆ ಕಂಡಿದ್ದು ಪೆಟ್ರೋಲ್ ನೂರಾದದ್ದು ಮಾತ್ರ...*

*🙏🤝ದೇಶವನ್ನು ಕಾಪಾಡುತ್ತಿರುವ ಒಬ್ಬ ನಿಜವಾದ ರಾಜಕೀಯ ನೇತಾರನನ್ನು ನಾವ್ಯಾರು ಕ್ಷುಲ್ಲಕ ಕಾರಣಕ್ಕೆ ಕಳೆದುಕೊಳ್ಳಬಾರದು. ನೆನಪಿರಲಿ ಬಂಧುಗಳೆ ರಾಜಋಷಿ ಮೋದಿ ನಿಜವಾದ ಭಾರತ ರಕ್ಷಕ🙏*
ಜೈ ಮೋದಿಜಿ 🙏🕉️🇮🇳💖

Friday, June 11, 2021

ಮೊದಲು ಭಾರತೀಯರು ಮಾನಸಿಕವಾಗಿ ಸ್ವತಂತ್ರ ರಾಗಬೇಕಾಗಿದೆ.

ಮೊದಲು ಭಾರತೀಯರು ಮಾನಸಿಕವಾಗಿ ಸ್ವತಂತ್ರ ರಾಗಬೇಕಾಗಿದೆ.ಇಂದು ಬಹುತೇಕ ಭಾರತೀಯರ ಮನಸ್ಥಿತಿ ಹೇಗಿದೆ ಎಂದರೆ ಯಾವುದೋ ವಿಜ್ಞಾನಿಗಳು ಅಥವಾ ಕಾರ್ಪೊರೇಟ್ ಕಂಪೆನಿಗಳು ಸಿಪಾರಸ್ಸು ಮಾಡಿದರೆ ಕೊಳಚೆಯನ್ನಾದರೂ ತಿನ್ನುವ ಮಾನಸಿಕ ಪರಿಸ್ಥಿತಿ ನಮ್ಮದಾಗಿದೆ ಮೊದಲು ನಾವು ಅದರಿಂದ ಹೊರಬರಬೇಕಿದೆ
ಪ್ರಸ್ತುತ ಇರುವ ಸಾಂಕ್ರಾಮಿಕ ರೋಗಗಳಿಗೆ ನಮ್ಮ ಆಹಾರ ಪದ್ದತಿ ಯಲ್ಲೇ ಔಷಧಿಗಳಿವೆ ಆದರೆ ಅದರ ಬಗ್ಗೆ ನಮಗೆ ಮಾಹಿತಿ ಇಲ್ಲ ಮಾಹಿತಿ ಇದ್ದರೂ ನಂಬಿಕೆ ಇಲ್ಲ ಯಾಕಂದ್ರೆ ನಾವು ಯಾರು ಮತ್ತು ನಾವು ಏನು ಎಂಬುದನ್ನೇ ಮರೆತು ಬದುಕುವ ಸಮಾಜ ನಮ್ಮದಾಗಿದೆ......
ಇದು ಎಲ್ಲಿಯವರೆಗೆ ಅಂದರೆ WHO IMA ನಂತಹ ಅಲೋಪತಿ ದಳ್ಳಾಳಿಗಳು ಹೇಳಿದರೆ ಮಾತ್ರ ನಾವು ನಂಬಬಲ್ಲೆವು ನಮ್ಮ ಹಿರಿಯರ  ಔಷದೀಯ ಪದ್ದತಿ ಅಥವಾ ನಮ್ಮ ವೇದ ಪುರಾಣಗಳಲ್ಲಿ ಸೂಚಿಸಲ್ಪಟ್ಟ ಮನೆ ಮದ್ದುಗಳ ಮೇಲೆ ನಮಗೇ ನಂಬಿಕೆ ಇಲ್ಲದಾಗಿದೆ ಅಷ್ಟರಮಟ್ಟಿಗೆ ನಮ್ಮ ತನವನ್ನು ಕಳಕೊಂಡಿದ್ದೇವೆ.
ಆಯುರ್ವೇದ ಅಂದ್ರೆ ಬರೀ ಮೆಡಿಕಲ್ ನಲ್ಲಿ ಸಿಗುವ ಔಷದ ಮಾತ್ರ ಅಲ್ಲ ಹಿಂದೆ ನಾವು ನಮ್ಮ ಮನೆಗಳಲ್ಲೇ ಹಬ್ಬಹರಿದಿನಗಳ ನೆಪದಲ್ಲಿ,ಹಾಗೂ ನಿತ್ಯ ಸೇವಿಸುವ ವಿವಿಧ ರೀತಿಯ ಸೊಪ್ಪು ತರಕಾರಿ ಮತ್ತು ಮಸಾಲೆಗಳಲ್ಲೇ ಅಡಗಿದೆ ಈ ಆಯುರ್ವೇದ ಔಷಧ. ಅದರ ಬಗ್ಗೆ ನಮಗೆಷ್ಟು ಜನರಿಗೆ ಮಾಹಿತಿ ಇದೆ ?.....
ಇಲ್ಲ ಇಂದಿನ ನಮ್ಮ ಆಹಾರ ಪದ್ದತಿ ? ನಮಗೆಲ್ಲಾ ಇವತ್ತು ಎಲ್ಲಾ ರಾಸಾಯನಿಕ ಯುಕ್ತ ರೆಡಿಮೇಡ್ ಆಹಾರ ಗಳೇ ಬೇಕು .ಯಾಕಂದ್ರೆ ಅದನ್ನು ದೊಡ್ಡ ಕಂಪೆನಿಗಳು ಹೆಸರಾಂತ  ಬ್ರಾಂಡ್ ಗಳಲ್ಲಿ ಮಾರುತ್ತಾರೆ...ಎಂತಹ ವಿಪರ್ಯಾಸ?
ನಮ್ಮಲ್ಲಿ ಎಷ್ಟು ಜನರಿಗೆ ಪಂಚಗವ್ಯ ದ ಮಹತ್ವ ಗೊತ್ತು ? ಕಾಳುಮೆಣಸಿನ ಔಷಧೀಯ ಗುಣ ಗೊತ್ತು? ಜೀರಿಗೆ ಧನಿಯಾ ಕಾಳಿನ ಮಹತ್ವ ನಮಗೇನು ತಿಳಿದಿದೆ ?
ಅರಶಿಣ ಶುಂಠಿ ಮಹತ್ವ ಬರೀ ಮಸಾಲೆಗೆ ಸೀಮಿತವಾಗಿದೆ
ತುಳಸಿ ಯ ಮಹತ್ವ ಪೂಜೆಗಷ್ಟೇ ಸೀಮಿತ ಮನೆಯಂಗಳದ ಹೂದೋಟ ದಲ್ಲಿರುವ ದಾಸವಾಳ ನಿತ್ಯಪುಷ್ಪ ಬರೀ ಅಲಂಕಾರಕ್ಕಷ್ಟೇ ಸೀಮಿತ ಗರಿಕೆ ಯ ಔಷದೀಯ ಉಪಯೋಗದ ಮಾಹಿತಿ ಎಲ್ಲೂ ಇಲ್ಲ  ಅಜ್ಜಿ ಕಾಡಿನಿಂದ ಅದಾವುದೋ ಗಿಡಗಳ ಚಿಗುರು ಆರಿಸಿಕೊಂಡು ಬಂದು  ಮಾಡಿಕೊಡುತಿದ್ದ ರೈತದ ಬಗ್ಗೆ ನೆನಪೇ ಇಲ್ಲ .
ಎಷ್ಟು ಜನರಿಗೆ ತಿಳಿದಿದೆ ಗೊನೆ ಬಿಟ್ಟ ಬಾಳೆಗಿಡದ ಒಳಗಿನ ಕಾಂಡ ಕಿಡ್ನಿಯಲ್ಲಿನ ರೋಗಕ್ಕೆ ಉಪಯೋಗ ಎಂದು ಮನೆಯ ಕೈತೊಟದಲ್ಲಿರುವ ಡೊಡ್ಡಪತ್ರೆ ಒಂದೆಲಗ ನೆಲನೆಲ್ಲಿ ಎಷ್ಟು ಜನರಿಗೆ ಪರಿಚಯ ಇದೆ? ಬಜೆ ಹಿಪ್ಪಲಿ ಯ ಹೆಸರುಗಳು ಎಷ್ಟು ಜನರಿಗೆ ಗೊತ್ತು ನೆಲ್ಲಿಯಲ್ಲಿರುವ  ಔಷಧೀಯ ಗುಣ ಯಾರಿಗೆ ಗೊತ್ತು ಪಾರಜಾತ ಪುಷ್ಪ ಮತ್ತು ಅದರ ಗಿಡದ ಭಾಗಗಳಲ್ಲಿರುವ ಮದ್ದಿನ ಗುಣ ನಮಗೇನು ತಿಳಿದಿದೆ 
 ಹೇಳಲಿಕ್ಕೆ ಹೋದರೆ ಇನ್ನೂ ಮತ್ತಷ್ಟೋ ಅನೇಕ ....
ಸೌಂದರ್ಯ ವರ್ಧಕ ವಾಗಿ ರಾಸಾಯನಿಕ  ಕ್ರೀಂ ಬಳಸುವ ನಾವು ಮನೆಯಲ್ಲೇ ಇರುವ ಲೋಳೆಸರ ( ಅಲೋವೆರ) ಮತ್ತು ಹಸಿ ಅರಿಷಿಣ ತೇದು ಹಚ್ಚಿದರೆ ಮುಖದ ಸೌಂದರ್ಯ ಇನ್ನೂ ಹೆಚ್ಚಾಗುತ್ತದೆ ಎಂದು ಮರೆತೇ ಬಿಟಿಟಲ್ವಾ....ಮಾಮೂಲಿ ಕೆಮ್ಮಿಗೂ ಅಲೋಪತಿ ಮಾತ್ರೆ ತೆಗೆದು ಕೊಳ್ಳುವ ನಾವು ಅದನ್ನು ಕಾಳು ಮೆಣಸು(ಪೆಪ್ಪರ್) ಮತ್ತು ಜೇನಿನಲ್ಲೇ ಕಡಿಮೆ ಆಗುತ್ತೆ ಅನ್ನೋದನ್ನೇ ಮರೆತಿಲ್ಲವೇ?.
ಇಷ್ಟು ಔಷಧೀಯ ಗುಣಗಳಿರುವ ಮನೆ ಮದ್ದುಗಳಿರುವ ನಮ್ಮ ದೇಶದಲ್ಲಿ ಹೀಗೇಕೆ ? ನಿಜ ನಾವು ನಮ್ಮ ತನ ಮೆರೆತಿದ್ದೇವೆ ? ನಾವು ಯಾರು ಮತ್ತು ನಾವು ಏನು ಎಂಬುದನ್ನೇ ಮರೆತು ನಮ್ಮ ಸಂಸ್ಕೃತಿ ಬಿಟ್ಟು ಬದುಕುತಿದ್ದೇವೆ ಇದು ಬದಲಾಗಬೇಕು ಮತ್ತೆ ನಾವ್ಯಾರು ಎಂಬುದನ್ನು ಅರಿತು ಬದುಕಿ ಈ ಮೆಡಿಕಲ್ ಮಾಫಿಯಾ ವನ್ನು ಎದುರಿಸಿ ದೇಶವನ್ನು ರಕ್ಷಿಸಬೇಕಾಗಿದೆ.
ಇನ್ನು ಮನೆ ಮದ್ದಾಗಲೀ ಆಯುರ್ವೇದ ವಾಗಲೀ ಅಲೋಪತಿಯಂತೆ ನಮ್ಮ ದೇಹಕ್ಕೆ ಯಾವುದೇ ಹಾನಿಮಾಡದೆ ರೋಗಬನ್ನು ಬುಡದಿಂದ ಕಿತ್ತು ಬಿಸಾಕಿ ಮತ್ತೆಂದೂ ಬಾರದಿರುವಂತೆ ನಮ್ಮ ದೆಃವನ್ನು ಕಾಪಾಡುತ್ತದೆ.
ಇಂದು ನಮ್ಮ ಆಯುರ್ವೇದ ಇಷ್ಟು ಕಠಿಣ ಸವಾಲುಗಳನ್ನು ಎದುರಿಸಲು ಕಾರಣವೂ ಇದೇ ಭಾರತೀಯರು ಮತ್ತೆ ತಮ್ಮ ಮೂಲವಾದ ಆಯುರ್ವೇದ ದ ಕಡೆಗೆ ವಾಲಿದರೆ ಮತ್ತೆ ಅಲೋಪತಿಯ ಮಾರುಕಟ್ಟೆ ಕುಸಿತಗೊಂಡು ತಮ್ಮ ಬಂಡವಾಳಕ್ಕೆ ಕುತ್ತು ಬರುವುದು ಖಚಿತ ಅನ್ನೋದು ಫಾರ್ಮಾ ಲಾಬಿಗಳ ಭಯ ಮಾತ್ರ ಅಲ್ಲ ಇದರ ಹಿಂದೆ ಇರೋ ಕ್ರಿಶ್ಚಿಯನ್ ಮಿಷಙರಿಗಳಿಗೂ ಇದು ಅಪತ್ಯ ಯಾವಾಗ ಭಾರತೀಯ ಮತ್ತೆ ಆಯುರ್ವೇದ ದ ಕಡೆಗೆ ವಾಲಿದರೆ ಭಾರತೀಯ ಮೂಲಕ್ಕೆ ಹಿಂತಿರುಗಿದರೆ ಮತಾಂತರದ ಕೆಲಸವೂ ಅಸಾಧ್ಯ ಅನೋದಕ್ಕಾಗೇ ಅವರು ಆಯುರ್ವೇದ ದ ಬಗ್ಗೆ ಅಪಪ್ರಚಾರ ಸುಳ್ಳು ಮಾಹಿತಿ ಹರಡಿ ಜನರಲ್ಲಿ ಗೊಂದಲ ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಲು ತಿದ್ದಾರೆ....
ಇದಕ್ಕೆಲ್ಲ ಪರಿಹಾರ ಭಾರತೀಯರು ಮಾನಸಿಕ ಗುಲಾಮಿತನದಿಂದ ಹೊರಬಂದು ಮತ್ತೆ ಭಾರತೀಯ ಚಿಂತನೆಯ ಭಾರತೀಯ ರಾಗೋದು ಒಂದೇ ಪರಿಹಾರ.....
ಸರ್ವೇ ಭವಂತು ಸುಖಿನಃ

ವಂದೇ ಮಾತರಂ
ಮತ್ತೆ ನಾವು ನಾವಾಗೋಣ. ಫಾರ್ವರ್ಡ್ ಮೆಸೇಜ್ ತುಂಬಾ ಉಪಯುಕ್ತ ಅನಿಸಿ ಗುಂಪಿನಲ್ಲಿ ಹಾಕಿದ್ದೆನೆ.🙏

Friday, June 4, 2021

ಋಣಾತ್ಮಕ ಚಿಂತನೆ ದೇಹಕ್ಕೂ ಹಾಗೂ ಮನಸಿಗೂ ಎರಡಕ್ಕೂ ಕೆಟ್ಟದ್ದೇ...

ಋಣಾತ್ಮಕ ಚಿಂತನೆ ದೇಹಕ್ಕೂ ಹಾಗೂ ಮನಸಿಗೂ ಎರಡಕ್ಕೂ ಕೆಟ್ಟದ್ದೇ...

    ಋಣಾತ್ಮಕ ಚಿಂತನೆ ಎಂಬುದು ಮನಸ್ಸಿಗೆ ಅಂಟಿದ ಕ್ಯಾನ್ಸರ್ ನಂತೆ. ನಮ್ಮನ್ನು ತಿಂದು ತಿಂದು ಕೊಲ್ಲುತ್ತದೆ.

    ಎಲ್ಲದರಲ್ಲೂ ತಪ್ಪು ಹುಡುಕಿಕೊಂಡು ಹೋದರೆ ನಮಗೆ ಪರಿಪೂರ್ಣವಾದ ವಸ್ತು ಹಾಗೂ ವ್ಯಕ್ತಿ ಎಲ್ಲೂ ಸಿಗುವುದೇ ಇಲ್ಲ. ದೇವರೂ ಸಹ ತಪ್ಪು ಮಾಡುತ್ತಾನೆ ,ಅಂದಮೇಲೆ ನಾವೇನು ಮಹಾ ! ಅಲ್ಲವೇ....

    ಎಲ್ಲರಿಗೂ ಲೋಟದಲ್ಲಿ ನೀರು ತುಂಬಿರುವ ಬಗೆಗಿನ ಆಲೋಚನೆ ಕುರಿತು ಇರುವ ಕಥೆಯ ಬಗ್ಗೆ ತಿಳಿದೇ ಇದೆ.
ಒಬ್ಬರು ಅರ್ಧ ಖಾಲಿ ಇದೆ ಅಂದ್ರೆ ಇನ್ನೊಬ್ಬರು ಅರ್ಧ ತುಂಬಿದೆ ಎನ್ನುತ್ತಾರೆ, ಇಬ್ಬರ ಉತ್ತರವೂ ಸರಿ ಆದರೆ ಅರ್ಧ ತುಂಬಿದೆ ಅನ್ನುವ ಧನಾತ್ಮಕ ಚಿಂತನೆ ನಮ್ಮ ಬದುಕಿನ ಪಥವನ್ನೆ ಬದಲಿಸುತ್ತದೆ. ಕೊಂಕು ಹೇಳುವ, ಎಲ್ಲದರಲ್ಲೂ ನ್ಯೂನತೆ ಹುಡುಕುವುದು ಸುಲಭ ಆದರೆ ಅದು ಜೀವನಕ್ಕೆ ಮಾರಕ.

    ಒಂದು ಕಥೆ ಹೇಳುವೆ ಕೇಳಿ, ಒಮ್ಮೆ ಬಾಟ ಕಂಪೆನಿ ಯವರು ಆಫ್ರಿಕಾದ ಒಂದು ಪ್ರದೇಶದಲ್ಲಿ ತಮ್ಮ ಶಾಖೆಯನ್ನು ಸ್ಥಾಪನೆ ಮಾಡಲು ನಿರ್ಧರಿಸಿದರು. ಅದಕ್ಕಾಗಿ ಒಂದು ಸಣ್ಣ ಸರ್ವೇ ಮಾಡಬೇಕೆಂದು ಇಬ್ಬರು ಮಾರ್ಕೆಟಿಂಗ್ ಆಫೀಸರ್ ಗಳನ್ನು ಅಲ್ಲಿಗೆ ಕಳುಹಿಸಿದರು. ಒಂದು ವಾರದ ಸರ್ವೇ ನಂತರ ಬಂದ ಆ ಇಬ್ಬರು ತಮ್ಮ ಸಲಹೆಗಳನ್ನು ಸಲ್ಲಿಸಿದರು. 

    ಮೊದಲನೇ ಅಧಿಕಾರಿ ಹೇಳಿದಂತೆ " ಅಲ್ಲಿ ಯಾರೂ ಸಹ ಚಪ್ಪಲಿಯನ್ನು ಧರಿಸುತ್ತಿರಲ್ಲಿಲ್ಲ ,ಆದ್ದರಿಂದ ಅಲ್ಲಿ ಚಪ್ಪಲಿ ಅಂಗಡಿ ತೆರೆದರೆ ಯಾವುದೇ ವ್ಯಾಪಾರ ಆಗುವುದಿಲ್ಲ, ಆದ್ದರಿಂದ ಅಂಗಡಿ ತೆರೆಯುವ ಪ್ಲಾನ್ ಅನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಶಿಫಾರಸು ಮಾಡಿದರು.

    ಇನ್ನು, ಮತ್ತೊಬ್ಬ  ಅಧಿಕಾರಿಯು ಬೇರೆಯೇ ರೀತಿಯ ಸಲಹೆಗಳನ್ನು ಸಲ್ಲಿಸಿದನು. ಇದನ್ನು ನೋಡಿದ ಕಂಪನಿಯವರಿಗೆ ಆಶ್ಚರ್ಯ ಆಗಿತ್ತು. ಅವರು ಹೇಳಿದ್ದ ಪ್ರಕಾರ ಅಲ್ಲಿ ಯಾರೂ ಸಹ ಚಪ್ಪಲಿಗಳನ್ನು ಬಳಸುತ್ತಿರಲಿಲ್ಲ , ಅದುವೇ ನಮಗೆ ಟ್ರಂಪ್ ಕಾರ್ಡ್, ನಾವು ಇಲ್ಲಿ ಚಪ್ಪಲಿಯನ್ನು ಪರಿಚಯಿಸಿದರೆ ನಮಗೆ ಉತ್ತಮ ವ್ಯಾಪಾರ ಆಗುತ್ತದೆ ಎಂದು ಆತ್ಮವಿಶ್ವಾಸದಿಂದ ವರದಿ ನೀಡಿದ್ದನು. ಇದೇ ತಿಳಿಸುವುದು, ಧನಾತ್ಮಕವಾಗಿ ಹಾಗೂ ಋಣಾತ್ಮವಾಗಿ ಚಿಂತಿಸುವರಿಗೆ ಇರುವ ವ್ಯತ್ಯಾಸ..ಎಲ್ಲಾ ವಿಷಯಗಳಲ್ಲೂ ಸಹ ಋಣಾತ್ಮಕ ಹಾಗೂ ಧನಾತ್ಮಕ ವಿಷಯ ಇರುತ್ತದೆ ಅದರಲ್ಲಿ ನಾವು ಯಾವುದನ್ನು ಸ್ವೀಕರಿಸುತ್ತೇವೆ ಅನ್ನುವುದು ಬಹಳ ಪ್ರಮುಖ ಆಗಿರುತ್ತದೆ.

    ನಾವು ಮಾತನಾಡುವ ಪದಗಳಿಗಿಂತ ಅದನ್ನು ಹೇಗೆ ಸ್ವೀಕರಿಸುತ್ತೇವೆ ಅನ್ನುವ ಮನೋಭಾವ ಮುಖ್ಯ ಆಗಿರುತ್ತದೆ. ನಮಗೆ ತುಂಬಾ ಪ್ರೀತಿಸುವ ವ್ಯಕ್ತಿಗಳು ಏನಾದ್ರೂ ತಪ್ಪು ಮಾಡಿದರೂ ಹಾಗೂ ತಪ್ಪು ಮಾತನಾಡಿದರು ಸಹ ನಮಗೆ ಅವರು ಇಷ್ಟ ಇದ್ದರೆ ಅದನ್ನು ನಾವು ಧನಾತ್ಮಕವಾಗಿ ತೆಗೆದುಕೊಳ್ಳುತ್ತೇವೆ, ಕೋಪಗೊಳ್ಳುವುದಿಲ್ಲ. ಅದೇ ವ್ಯಕ್ತಿಗಳನ್ನು ನಾವು ದ್ವೇಷಿಸುತ್ತಿದ್ದರೆ ಅದೇ ಮಾತುಗಳಿಗೆ ನಾವು ಕೋಪ ಗೊಳ್ಳುತ್ತೇವೆ. ಮಾತುಗಳು ಅದೇ ಆಗಿರುತ್ತದೆ ಆದರೆ ಅದನ್ನು ಸ್ವೀಕರಿಸುವ ಮನೋಭಾವ ಬೇರೆಯದೇ ಆಗಿರುತ್ತದೆ. ಆದ್ದರಿಂದ ನಮ್ಮ ಮನಸ್ಸು ಧನಾತ್ಮಕವಾಗಿ ಚಿಂತಿಸಬೇಕು ಹಾಗೂ ಧನಾತ್ಮಕವಾಗಿ ಸ್ವೀಕರಿಸಬೇಕು. ತಪ್ಪು ಮಾಡಿದ್ದೀಯ ಎಂದು ಯಾರಾದರೂ ಹೇಳಿದರೆ ಅದನ್ನು ನಮ್ರತೆಯಿಂದ ಸ್ವೀಕರಿಸಬೇಕು. ಅದು ನಮ್ಮನ್ನು ಜೀವನದ ಹಾಗೂ ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ.

    ಕೇವಲ ಧನಾತ್ಮಕವಾಗಿ ಮಾತ್ರ ಇರಬೇಕು ಎಂದು ನಾನು ಹೇಳುವುದಿಲ್ಲ. ಬದಲಾಗಿ ಒಮ್ಮೊಮ್ಮೆ ಋಣಾತ್ಮಕ ಚಿಂತನೆಗಳು ಕೂಡ ಅವಶ್ಯಕ. ವಿಮಾನ ಕಂಡುಹಿಡಿದ ನಂತರ ಬಂದ ಒಂದು ಋಣಾತ್ಮಕ ಚಿಂತನೆ ( ಅಪಘಾತ ಆದರೆ) ಅಂದು ಪ್ಯಾರಾಚೂಟ್ ಕಂಡುಹಿಡಿಯಲು ಸಹಾಯ ಆಯಿತು. ಹಾಗೆಯೇ ಒಮ್ಮೊಮ್ಮೆ ಒಂದೊಂದು ವಿಷಯಗಳನ್ನು ಅರಿಯಲು ಋಣಾತ್ಮಕ ಆಲೋಚನೆ ಬೇಕಾಗುತ್ತದೆ. ಆದರೆ ಅದೇ ಆಲೋಚನೆಗಳು ನಮ್ಮ ಜೀವನವನ್ನು ನಡೆಸಬಾರದು ಅಷ್ಟೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುತ್ತಾರಲ್ಲ ಹಾಗೆ.

    ಋಣಾತ್ಮಕ ಚಿಂತನೆಗಳು ಹೆಚ್ಚಿದಂತೆ ಮನಸ್ಸಿನಲ್ಲಿ ಒತ್ತಡ ಹೆಚ್ಚುತ್ತದೆ. ಒತ್ತಡ ಹೆಚ್ಚಿದಂತೆ ಮನಸ್ಸು–ದೇಹ  ದಣಿಯುತ್ತದೆ.ದಣಿವಿನಿಂದ ಅಲಸ್ಯವೂ ಎದುರಾಗುತದೆ. ಋಣಾತ್ಮಕ ಚಿಂತನೆ  ನಮ್ಮನ್ನು ನಿಧಾನವಾಗಿ ಚಿಂತೆಗೆ ನೂಕುತ್ತದೆ. ಚಿಂತೆಯು ಕೊನೆಗೆ ಚಿತೆಯ ಮೇಲೇರುವಂತೆ ಮಾಡಿಬಿಡುತ್ತದೆ. ಎಷ್ಟು ಪ್ರಭಾವ ಇದೆ ಅಲ್ಲವೇ ಒಂದು ಸಣ್ಣ ಋಣಾತ್ಮಕ ಚಿಂತನೆಗೆ. 

    ಮದುವೆ ಮನೆಗೆ ಹೋಗಿ ಕೇವಲ ಊಟ ಮಾಡಿ , ನನಗೆ ಐಸ್ ಕ್ರೀಂ ಸಿಗಲಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೇ ಮುರಿದ ಮಹಾಪುರುಷರು ಇದ್ದಾರೆ, ಮನೆಯಲ್ಲಿ ಮಾಡಿದ ಸಾಂಬರಲ್ಲಿ ಉಪ್ಪು ಕಡಿಮೆ ಇದೆ ಎಂದು ಹೆಂಡತಿಗೆ ವಿಚ್ಛೇದನ ನೀಡಲು ಹೊರಟ ವೀರರಿದ್ದಾರೆ. ಅರಳಿಕಟ್ಟೆಯಲ್ಲಿ ಕುಳಿತು ,ಪಾರ್ಲಿಮೆಂಟ್ ಮಾದರಿಯ ಚರ್ಚೆ ಮಾಡಿ ಕೇವಲ ತಪ್ಪು ಹುಡುಕುವ ಗಾವ ಸಚಿವರು ಇದ್ದಾರೆ. ಎಲ್ಲದರಲ್ಲೂ ಋಣಾತ್ಮಕ ಚಿಂತನೆ ಮಾಡುವ ಹಲವರು ನಮ್ಮ ಮದ್ಯೆಯೆ ಇದ್ದಾರೆ. ಇದರಿಂದ ನಮಗೆ ಪ್ರಯೋಜನ ಕಡಿಮೆ. ಎಲ್ಲವನ್ನೂ ಮಾಡುವ ಮೊದಲೇ ಫಲಿತಾಂಶದ ಬಗ್ಗೆ ನಕಾರಾತ್ಮಕ ಯೋಚನೆ ಸಲ್ಲ.

    ಪರೀಕ್ಷೆ ಬರೆಯುವ ಮುಂಚೆಯೇ ನಾನು ನಪಾಸಾದರೆ ? ಪ್ರಯತ್ನ ಮಾಡುವ ಮುಂಚೆಯೇ ಸೋತರೆ ಎಂದು ಆಲೋಚನೆ ಮಾಡಿದರೆ ಏನು ಸಿಗುತ್ತದೆ ಹೇಳಿ,,, ಪರೀಕ್ಷೆ ಹಾಗೂ ಪ್ರಯತ್ನ ಮಾಡಿದ ನಂತರ ತಾನೇ ಗೊತ್ತಾಗುವುದು ಫಲ ಏನು ಬರುವುದು ಎಂದು.. ಏನೂ ಮಾಡದೇ ಇದ್ದರೆ ನಮಗಿರುವುದು ಒಂದೇ ಫಲ ಅದು ನಪಾಸು ,ಆದರೆ ಪ್ರಯತ್ನ ಮಾಡಿದರೆ ನಪಾಸಿನ ಜೊತೆ ಪಾಸು ಸಹ ಆಗಬಹುದು ಅಲ್ಲವೇ.ಪ್ರಯತ್ನ ಮಾಡೋಣ, ಫಲಾಫಲ ದೇವರಿಗೆ ಬಿಡೋಣ. ಅದನ್ನೇ ಹೇಳಿದ್ದಲ್ಲವೆ ಶ್ರೀಕೃಷ್ಣ....

ಇನ್ನು ಅಂತಹ ವ್ಯಕ್ತಿಯ ಜೊತೆ ವ್ಯವಹರಿಸಲು ಪುಟ್ಟ  ಸಲಹೆ ಏನೆಂದರೆ...

   ಮೊದಲು ಆ ವ್ಯಕ್ತಿ ನಮಗೆ ತುಂಬಾ ಆತ್ಮೀಯರಾದರೆ ಅವರನ್ನು ಬದಲಿಸಲು ಪ್ರಯತ್ನ ಮಾಡಬೇಕು. ಇಲ್ಲವಾದರೆ ಅವರು ಹೇಳುವ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು. ಅದನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟುಬಿಡಬೇಕು.

    ಆದಷ್ಟು ಅಂತಹ ವ್ಯಕ್ತಿಗಳ ಸಹವಾಸವನ್ನು ಮಾಡಲೇ ಬಾರದು.ಮಾಡಿದ್ದೆ ಆದರೆ ಅವರನ್ನು ಜಾಸ್ತಿ ನಮ್ಮ ಜೊತೆ ಬೆರೆಯಲು ಬಿಡಬಾರದು. ಬಿಟ್ಟರು ಸಹ ಅವರ ಮಾತುಗಳಿಗೆ ತುಪ್ಪ ಹಚ್ಚಬಾರದು, ಕಿಚ್ಚು ಹತ್ತಿಸಿಕೊಳ್ಳಬಾರದು. 

    ಯಾರಾದರೂ ಹೀಗೆ ಋಣಾತ್ಮಕವಾಗಿ ಹೇಳುತ್ತಿದ್ದಾರೆ ಎಂದರೆ ಅವರಿಗೆ ಒಮ್ಮೆ ಅದು ತಪ್ಪು ಅಂದು ಮನವರಿಕೆ ಮಾಡಲು ಪ್ರಯತ್ನಿಸಬೇಕು. ಅವರು ಕೇಳದೆ ಇದ್ದಾಗ ಅವರ ಜೊತೆ ವಾದ ಬೇಡ. ಹಂದಿಯ ಜೊತೆ ಗುದ್ದಾಡಿದರೆ ಯಾರಿಗೆ ಕೊಳೆಯಾಗುವುದು ಒಮ್ಮೆ ಯೋಚಿಸಿ.

    ಯಾರಾದರೂ ಕೊಂಕು ಮಾತನಾಡುತ್ತಿದ್ದರೆ ,ಒಂದು ಸಣ್ಣ ಮುಗುಳ್ನಗೆ ನೀಡಿ , thank u ಅಂದುಬಿಡಿ, ಬದಲಾಗಿ ಅವರ ಜೊತೆ ವಾದ ವಿವಾದ ಬೇಡ. ನಮ್ಮ ಸಣ್ಣ ನಗು ಅವರ ನಕಾರಾತ್ಮಕ ಚಿಂತನೆಗಳಿಗೆ  ಆಯುರ್ವೇದದಲ್ಲಿ ಕಷಾಯ ಕೊಟ್ಟಂತೆ  ಇರುತ್ತದೆ. ಒಮ್ಮೆ ಪ್ರಯತ್ನಿಸಿ.

  
    ನಾವು ಮಾಡುವ ಹಲವು ಕೆಲಸಗಳನ್ನು ಟೀಕಿಸುವ ಹಲವು ಮಂದಿ ಇರುತ್ತಾರೆ. ನಾವು ನಡೆದು ಹೋಗುವಾಗ ನಮ್ಮ ಮೇಲೆ ಯಾರಾದರೂ ಕಲ್ಲು ಎಸೆದರೆ ಅದನ್ನು ಟೀಕೆ ಮಾತ್ರ ಎಂದು ಪರಿಗಣಿಸಿದೆ ಆ ಕಲ್ಲುಗಳನ್ನು ಬಳಸಿ ಮನೆ ನಿರ್ಮಾಣ ಮಾಡುವಾತ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ. 

    ಟೀಕೆಗಳು ನಮ್ಮ ಯಶಸ್ಸಿನ ಪಯಣಕ್ಕೆ ಉಚಿತ ಟಿಕೆಟ್ ಇದ್ದಂತೆ. ಅದನ್ನು ಬಳಸಿ ನಾವು ನಮ್ಮ ಪಯಣವನ್ನು ಮುಂದುವರೆಸಬೇಕು. ಆದರೆ ಅದನ್ನು ಋಣಾತ್ಮಕವಾಗಿ ಸ್ವೀಕರಿಸಿ ದುಃಖಿಸಿ ಚಿಂತೆ ಮಾಡುವ ಕೆಲಸ ಬೇಡ.

    ಯಾವಾಗಲೂ ನನ್ನ ಆಲೋಚನೆ ಒಂದೇ, ಋಣಾತ್ಮಕ ಎಂದರೆ ಒಂದು (-) ಇದ್ದ ಹಾಗೆ, ಆದ್ರೆ ಎರಡು( -) ಸೇರಿಸಿ ನಾವು ( +) ಮಾಡಿಕೊಂಡು ಜೀವನ ಸಾಗಿಸಬೇಕು, ಯಶಸ್ಸು ಕಾಣಬೇಕು, ಅಲ್ಲವೇ?

     ಜೀವನದಲ್ಲಿ ಎಲ್ಲದರಲ್ಲೂ ತಪ್ಪು ಹುಡುಕಿ ನಮ್ಮನ್ನು ನಾವೇ ಹಾಳು ಮಾಡಿಕೊಳ್ಳುವ ಬದಲಾಗಿ ಧನಾತ್ಮಕವಾಗಿ ಚಿಂತಿಸೋಣ, ಉತ್ತಮ ಜೀವನ ನಿರ್ಮಾಣ ನಮ್ಮ ಕೈಯಲ್ಲೇ ಇದೆ. ಏನಂತೀರಾ ???
ವಂದನೆಗಳೊಂದಿಗೆ 
,ಇಂತಿ ತಮ್ಮ ನಂಜುಂಡಸ್ವಾಮಿ,,

Sunday, May 30, 2021

ಜಪಾನೀಯರ ಅಚ್ಚರಿಯ ಶೋಧ...

ಜಪಾನೀಯರ ಅಚ್ಚರಿಯ ಶೋಧ... 

1. ಡಯೆಟ್‌ನಲ್ಲಿ ಏರುಪೇರಾಗೋದು ಅಸಿಡಿಟಿಗೆ ಕಾರಣ ಅಲ್ಲ. ಒತ್ತಡವೇ ಅಸಿಡಿಟಿಗೆ ಮುಖ್ಯ ಕಾರಣ. 

2. ರಕ್ತದೊತ್ತಡ ಉಪ್ಪು ಹೆಚ್ಚುಳ್ಳ ತಿನಿಸುಗಳಿಂದ ಮಾತ್ರವಲ್ಲ, ನಮ್ಮ ಭಾವನೆಗಳನ್ನು ನಿಭಾಯಿಸುವಾಗ ಮಾಡುವ ತಪ್ಪುಗಳಿಂದಲೂ ಉಂಟಾಗುತ್ತದೆ. 

3. ಕೊಲೆಸ್ಟ್ರಾಲ್ ಕೊಬ್ಬುಳ್ಳ ಊಟಗಳಿಂದ ಮಾತ್ರವಲ್ಲ... ಇದಕ್ಕೆ ಹೆಚ್ಚಿನ ಸೋಮಾರಿತನ ಅಥವಾ ಹೆಚ್ಚು ಓಡಾಟವಿಲ್ಲದ ಜೀವನಶೈಲಿ ಕೂಡ  ಹೊಣೆ. 

4. ಆಸ್ತಮಾ ಶ್ವಾಸಕೋಶಕ್ಕೆ ಸರಬರಾಜಾಗುವ ಆಮ್ಲಜನಕದ ಅಡೆತಡೆಯಿಂದ ಮಾತ್ರ ಅಲ್ಲ... ನಮ್ಮ ದುಃಖಭರಿತ ಭಾವನೆಗಳು ಕೂಡ ಶ್ವಾಸಕೋಶವನ್ನು ಅಸ್ಥಿರಗೊಳಿಸುತ್ತವೆ. 

5. ಡಯಾಬಿಟೀಸ್ ಹೆಚ್ಚಿನ ಗ್ಲೂಕೋಸ್ ಸೇವಿಸುವುದರಿಂದ ಮಾತ್ರವಲ್ಲ, ಸ್ವಾರ್ಥ ಮತ್ತು ಹಟಮಾರಿ ಮನೋಭಾವಗಳು ಮೇಧೋಜೀರಕ ಗ್ರಂಥದ ಕ್ರಿಯೆಯನ್ನು ಹೆಚ್ಚು ಕಡಿಮೆ ಮಾಡುತ್ತವೆ.
 
6. ಕಿಡ್ನಿ ಸ್ಟೋನ್ಸ್ ಕ್ಯಾಲ್ಶಿಯಮ್ ಆಕ್ಸಲೇಟ್ ಹೆಚ್ಚಾಗಿ ಮಾತ್ರ ಅಲ್ಲ... ನಮ್ಮೊಳಗೆ ಅದುಮಿ ಕುಳಿತ ಭಾವತೀವ್ರತೆಗಳಿಂದ, ದ್ವೇಷದಿಂದ ಉಂಟಾಗುತ್ತವೆ. 

7. ಸ್ಪಾಂಡಿಲೈಟಿಸ್ ಕುತ್ತಿಗೆಯ ಸಮಸ್ಯೆಯಿಂದ ಮಾತ್ರ ಅಲ್ಲ... ಭವಿಷ್ಯದ ಬಗ್ಗೆಗಿನ ವಿಪರೀತ ಚಿಂತೆಗಳ ಅತಿಭಾರದಿಂದ ಕೂಡ ಬರುತ್ತದೆ. 

ಆರೋಗ್ಯಕರವಾದ ಬದುಕಿಗೆ 

1. ಮನಸ್ಸು ಸ್ಥಿರವಾಗಿರಲಿ
2. ದೈನಂದಿನ ಎಕ್ಸರ್‌ಸೈಜ್ ಮುಖ್ಯ 
3. ಧ್ಯಾನ ಮುಖ್ಯ 
4. ಚಲನೆ ಇರಲಿ
5. ನಗಬೇಕು ಮತ್ತು ಇತರರನ್ನು ನಗಿಸಬೇಕು
6. ಗೆಳೆತನ ಮಾಡೋಣ. 
 
ಈ ಕ್ರಿಯೆಗಳು ನಮ್ಮ ಮನ, ಬುದ್ಧಿ ಮತ್ತು ದೇಹಗಳನ್ನು ಗಟ್ಟಿ ಮಾಡುತ್ತವೆ. 

ಆರೋಗ್ಯದಿಂದ ಇದ್ದು ಜೀವನವನ್ನು ಆನಂದಿಸೋಣ. 

ಇರುವುದೊಂದು ಜೀವನ... ಅದನ್ನು ಪೂರ್ಣವಾಗಿ ಜೀವಿಸೋಣ. 

(ವಾಟ್ಸ್ಯಾಪ್ ಆಂಗ್ಲ ಸಂದೇಶವೊಂದರ ಅನುವಾದ)

Friday, May 14, 2021

ಭಕ್ತಿ ಶುಭಾಶಯ ನುಡಿಯ ನುಡಿವೆನು,ಜಗದೋದ್ಧಾರಕ ಬಸವೇಶ ನಿಮ್ಮ ಪಾದಗಳಿಗೆ ಶರಣೆನುವೆನು"

"ಭಕ್ತಿ ಶುಭಾಶಯ ನುಡಿಯ ನುಡಿವೆನು,ಜಗದೋದ್ಧಾರಕ ಬಸವೇಶ ನಿಮ್ಮ ಪಾದಗಳಿಗೆ ಶರಣೆನುವೆನು"

ಅರಿಯದ ಹುಲುಮಾನವರಿಗೆ ಅರಿವು ನೀಡಲು ಬಂದೆ,
ಕಷ್ಟದಲ್ಲಿ ನೊಂದವರಿಗೆ ಭರವಸೆಯ ಬೆಳಕಾದೆ,
ಬೈದವರೆಲ್ಲರನೂ ಬಂಧುಗಳೆಂದು ಕರೆದೆ,
ಎಲ್ಲರೂ ನಮ್ಮವರೆಂಬ ಭಾವವ ನೀಡಿದೆ.

ಸಮಾಜದಲಿ ಸಕಲರು ಸರಿಸಮಾನರೆಂಬುದಾ ತೋರಿದೆ,
ಕಾಯಕವ ನಂಬಿ ಕೆಟ್ಟವರಿಲ್ಲ ಕಾಯಕವೇ ಕೈಲಾಸ ಎಂಬುದಾ ಸಾರಿದೆ,
ಸ್ತ್ರೀಕುಲಕೆ ಸಮತೆಯ ದಾರಿದೀಪ ನೀನಾದೆ.

ಅನುಭವ ಮಂಟಪದ ಹರಿಕಾರನಾದೆ,
ಜಗದೆಲ್ಲಾ ಶರಣರಿಗೆ ಗೌರವದ ಗುರುವಾದೆ,
ಅರಿವೇ ಗುರುವೆಂಬ ಮಂತ್ರವ ತೋರಿಸಿದೆ,
ಜಗಕೆ ಸುಜ್ಞಾನದ ಬೆಳಕಾಗಿ ಜಗಜ್ಯೋತಿಯಾದೆ.

ಬಾಹ್ಯಗುಡಿಯ ಆಸೆಯಾರಿಗೂ ಬೇಡವೆಂದೆ,
ನಿಮ್ಮ ದೇಹವೇ ದೇವಾಲಯವೆಂಬ ಪರಿಯ ನೀಡಿದೆ,
ನಡೆನುಡಿ,ಅರಿವು ಆಚಾರಗಳೇನೆಂದು ಜಗಕೆ ನೀಡಿದೆ.

* ನಿಜದೇವನು ನೀನೆಂದು ಜಗವೇ ಪೂಜಿಸುತಿದೆ ಇಂದು,
ಮಹಾಮಹಿಮ ಗುರುವೇ ನಿಮಗೆ ಶರಣು ಶರಣೆಂಬೆ*

ಎಲ್ಲರಿಗೂ ಬಸವಜಯಂತಿಯ ಭಕ್ತಿ ಶುಭಾಶಯಗಳು🙏🏼🙏🏼🌺🌺🙏🏼🙏🏼

Friday, May 7, 2021

ಓ ಆರಕ್ಷಕ...ಜನಸಮುದಾಯದ ರಕ್ಷಕ..

ಓ ಆರಕ್ಷಕ...
ಜನಸಮುದಾಯದ ರಕ್ಷಕ..

'ಕಾನೂನು ಗೌರವಿಸುವವರನ್ನು
ನಾನು ಗೌರವಿಸುತ್ತೇನೆ'
ಎನ್ನುವ ಓ ಆರಕ್ಷಕ
ನಿನ್ನ ಬದುಕೇ ಒಂದು ರೋಚಕ !!

ನಮ್ಮೊಡನೆಯೇ ಜನಿಸಿ,
ಶಿಕ್ಷಣ ಪಡೆದು,ಕೆಲಸ ಗಳಿಸಿ,
ಕಾನೂನು ತರಬೇತಿ ಪಡೆದು,
ಕಾನೂನು ಜಾರಿಗೊಳಿಸುವಾಗ,
ನಿನಗೆಷ್ಟುಅಡ್ಡಿ,ಆತಂಕ,ಒತ್ತಡಗಳ ಸುಳಿ....

ನಾವೆಲ್ಲ ಮನೆಯಲಿ
ನೆಮ್ಮದಿಯಲಿ ನಿದ್ರಿಸಿರುವಾಗ,
ಕಳ್ಳರು,ವಂಚಕರಿಂದ
ಸಮಾಜವನು ರಕ್ಷಿಸುವ
ಮಹೋನ್ನತ ಜವಾಬ್ದಾರಿ ನಿನ್ನದು...

ಮುಷ್ಕರ,ಬಂದ್,ಕೋಮುಗಲಭೆ,ಸಾಂಕ್ರಾಮಿಕ ಕಾಯಿಲೆ
ಯಾವುದೇನೇ ಇರಲಿ,
ಬೆಚ್ಚದೆ,ಬೆದರದೆ,ಮುನ್ನುಗ್ಗಿ,
ಅಶಕ್ತರ ರಕ್ಷಿಸಿ,ಕಾನೂನು ಉಲ್ಲಂಘಿಸಿದವರ 
ಬಂಧಿಸುವ ಜವಾಬ್ದಾರಿ ಶ್ಲಾಘನೀಯ.....

ಕಾನೂನು ವಿರೋಧಿಗಳ ಸಂಘರ್ಷದಲಿ
ಹಲವೊಮ್ಮೆ ಪ್ರಾಣತ್ಯಾಗ ಮಾಡುವ ಪುಣ್ಯಾತ್ಮನು ನೀನು,
ತಂದೆ-ತಾಯಿ,ಹೆಂಡತಿ-ಮಕ್ಕಳ ಬಂಧ ಮರೆತು,
ಕಾನೂನೆಂಬ ಹೆದ್ದಾರಿಯಲಿ ಜೀವನವಿಡೀ
ಕಳೆಯುವ ಓ ಆರಕ್ಷಕ ನಿನಗಿದೋ ನಮ್ಮ ಸಲಾಂ...

ನೀನು ಧರಿಸಿರುವ ಖಾಕಿ ಸಮವಸ್ತ್ರದೊಳೊಂದು
ಮಾತೃಹೃದಯವಿದೆ,ಮಾನವೀಯ ಚಿಂತನೆಯಿದೆ,
ಬಡವರ ಕಷ್ಟಗಳಿಗೆ ಮರುಗುವ ಆತ್ಮೀಯತೆಯಿದೆ,
ಅಪರಾಧಿಗಳ ,ವಂಚಕರ ವಿರುದ್ದ ಸಿಡಿದೇಳುವ ಛಾತಿಯಿದೆ...

ಕಾನೂನು ನಿರ್ವಹಣೆಯಲಿ ಜೀವನ ಸವೆಸುವ,
ಸುಖಾಸುಮ್ಮನೆ ರಾಜಕಾರಣಿಗಳ,ಅಧಿಕಾರಸ್ಥರ
ಮಿಥ್ಯಾರೋಪಕ್ಕೆ ಗುರಿಯಾಗುವ ಓ ಆರಕ್ಷಕ,
ನಿನಗೆ ಜನಸಮುದಾಯದ ಶುಭಾಶೀರ್ವಾದವಿದೆ..

ಓ ಆರಕ್ಷಕ,ನೀನೊಬ್ಬ ಕಾನೂನು ಪಂಡಿತ,
ಠಾಣೆಗೆ ಬರುವ ಎಲ್ಲಾ ವಿವಾದಗಳ‌ಪರಿಹರಿಸುವ
ಮನಶಾಸ್ತ್ರಜ್ಞ ,ಸಮಾಜಸೇವಕ,ಜನಪರ ಚಿಂತಕ,
ಇಡೀ ಸಮಾಜದ ಒಳಿತಿಗೆ ಶ್ರಮಿಸುವ‌ ಆರಕ್ಷಕ,
ನಿನಗೆ ,ನಿನ್ನ ಕುಟುಂಬಕ್ಕೆ     ಇಡೀ ಮಾನವ ಸಮುದಾಯದ ಆಶೀರ್ವಾದವಿದೆ..

ವಂದನೆಗಳೊಂದಿಗೆ

Wednesday, April 14, 2021

ಅನ್ನಪೂರ್ಣ ದೇವಿಗೆ ವಂದಿಸಿ...... ಅಡುಗೆಮನೆ ಕೆಲ್ಸ ಅಂದ್ರೆ ಬೇಯ್ಸೋದಷ್ಟೇ ಅಲ್ಲ..

ಅನ್ನಪೂರ್ಣ ದೇವಿಗೆ ವಂದಿಸಿ...... 
ಅಡುಗೆಮನೆ ಕೆಲ್ಸ ಅಂದ್ರೆ 
ಬೇಯ್ಸೋದಷ್ಟೇ ಅಲ್ಲ..

ಮೊದ್ಲು ಪಾತ್ರೆ ಸಾವರಿಸ್ಕೊಬೇಕು..

ಆಮೇಲೆ ಅಳತೆ  ಅಂದಾಜು ಮಾಡ್ಕೋಬೇಕು.. 

ದಿನಸಿ ಲೆಕ್ಕಾಚಾರ ಇಡಬೇಕು..

ತೋಳೀಬೇಕು.. 
ಬಳೀಬೇಕು..

ಕೊತ್ತಂಬರಿ ಕರಿಬೇವು ಮೆಣಸಿನಕಾಯಿ ಕೆಡದೇ ಇರೋ ಹಾಗ್ ಮ್ಯಾನೇಜ್ ಮಾಡೋ ಕಲೆ ಇರಬೇಕು..

ಹಳೆ ಹಾಲು 
ಹೊಸ ಹಾಲು 
ಹಳೆ ಡಿಕಾಕ್ಷನ್ನು 
ಹೊಸಾ ಡಿಕಾಕ್ಷನ್ನು 
ವ್ಯತ್ಯಾಸ ಗೊತ್ತಿರಬೇಕು..

ಕಾಫಿ ಪುಡಿ 
ಟೀ ಪುಡಿ ವ್ಯತ್ಯಾಸ 
ಗೊತ್ತಿರಬೇಕು.. 

ಬಡಿಸೋಕ್ಕೆ ಗೊತ್ತಿರಬೇಕು.. 
ಮಿಕ್ಕಿದ್ದನ್ನ ಖಾಲಿ ಮಾಡಿ ಬೇರೆದಕ್ಕೆ ಹಾಕಿಡೋ ಸ್ಪೇಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು.. 

ಎರಡೆರಡು ಬರ್ನರುಗಳಲ್ಲಿ 
ಬೇರೆ ಬೇರೆ ವೆರೈಟಿ ಮಾಡೋ 
ಟೈಮ್ ಮ್ಯಾನೇಜ್ಮೆಂಟ್ 
ಗೊತ್ತಿರಬೇಕು..

ಒಂದು ದೋಸೆ ತಟ್ಟೆಲಿದ್ರೆ 
ಇನ್ನೊಂದನ್ನ ಕಾವಲಿಯಲ್ಲಿ 
ಮತ್ತೊಂದನ್ನ ಹಾಟ್ಬಾಕ್ಸಲ್ಲಿ ಕೂರಿಸೋ ಚಾಕಚಕ್ಯತೆ ಇರಬೇಕು.. 

ಸುಮ್ನೆ ಒಂದ್ ರಾಶಿ ಪಾತ್ರೆ 
ಗುಡ್ಡೆ ಹಾಕದೇ  ಕನಿಷ್ಠ ಪಾತ್ರೆಗಳಲ್ಲೇ  
ಗರಿಷ್ಠ ಅಡುಗೆ ಮಾಡಿ ಬಡಿಸೋ ರಿಸೋರ್ಸ್ ಮ್ಯಾನೇಜ್ಮೆಂಟ್ ಗೊತ್ತಿರಬೇಕು..

ಅಮ್ಮಾ.. ಅನ್ನೋ 

ವಿಧವಿಧವಾದ ಕರೆಗಳಿಗೆ ಸ್ಪಂದಿಸುತ್ತಲೇ ಅಂದುಕೊಂಡ ಸಮಯಕ್ಕೆ ಅಚ್ಚುಕಟ್ಟಾಗಿ ಎಲ್ಲಾ ಮಾಡಿಡೋ ಮಲ್ಟಿ ಟಾಸ್ಕಿಂಗ್ ಎಬಿಲಿಟಿ ಇರಬೇಕು..

ಸಣ್ಣ ಪುಟ್ಟ ಅವಘಡಗಳಾದಾಗ 
ಧೃತಿಗೆಡದೆ 
ಗಾಬರಿಯಾಗದೆ 
ನಿಭಾಯಿಸೋ ಅಷ್ಟು 
ಸೈನ್ಸು,
ಸಮಯಪ್ರಜ್ಞೆ, 
ಸಾಮಾನ್ಯಜ್ಞಾನ ಇರಬೇಕು..

ಇಷ್ಟನ್ನೂ ಯಾವುದೇ 
ಕೋರ್ಸಿಗೆ ಹೋಗದೇ ತಲೆತಲೆಮಾರುಗಳಿಂದ ಕಲಿತು 
ಮಾಡ್ತಾ ಬಂದಿರೋ ಎಲ್ಲ ಶ್ರಮಜೀವಿಗಳಿಗೂ  
ಗೌರವ ಕೊಡೋ ದೊಡ್ಡಮನಸ್ಸಿರಬೇಕು..

ಅಡುಗೆಮನೆ ಕೆಲ್ಸಾನಾ... 
ಅದೇನ್ ಮಹಾ ಅಂತ ಒಮ್ಮೆ ತಾತ್ಸಾರ ಮಾಡಿ ಹೀಗಳೆಯೋ ಮುನ್ನ ಇಷ್ಟೆಲ್ಲ ಕ್ವಾಲಿಟಿ, ಕ್ಯಾಪಾಸಿಟಿ ನಿಮಗಿದ್ಯಾ ಅಂತ ಯೋಚಿಸಿ..

ಅಡುಗೆ ಮನೆ ಎಲ್ಲರ ಅವಶ್ಯಕತೆ..

ಅದೊಂದು ಧ್ಯಾನ..
ಅದೊಂದು ದಿನಚರಿ..
ಅದೊಂದು ಕಲೆ..
ಅದೊಂದು ವಿಜ್ಞಾನ..
ಅದೊಂದು ಅನುಭೂತಿ..
ಅದೊಂದು ಸೇವೆ.. 
ಅದೊಂದು ಪ್ರೀತಿ..
ಅದೊಂದು ಗೌರವ..
ಅದೊಂದು ಮೌಲ್ಯ..

ತಾತ್ಸಾರ ಬೇಡ... 
ಎಲ್ಲಾ ಅಡುಗೆ ಮನೆ 
ಕಲಾವಿದರಿಗೂ ಒಂದು ಸಲಾಂ 🙏

Monday, April 12, 2021

ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ !

ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ !
ನಮ್ಮ ಹಿರಿಯರನ್ನು ಗೌರವಿಸಲು ಕನಿಷ್ಟ ಈ ಕೆಳಗಿನ ೩೫ ನಿಯಮ ಪಾಲಿಸಬೇಕು:-
1. ಅವರ ಮುಂದೆ ಕುಳಿತಾಗ ಫೋನ್ ಗಳನ್ನು ದೂರವಿಡಿ.
2. ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ ಮಧ್ಯದಲ್ಲೇ ನಿಲ್ಲಿಸಬೇಡಿ.
3. ಅವರ ಅಭಿಪ್ರಾಯ ಒಪ್ಪಿಕೊಳ್ಳಿ
4. ಅವರ ಜೊತೆ ಮಾತಾಡುವಾಗ ಚಿತ್ತವಿಡಿ
5. ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ
6. ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ
7. ದುಖ:ದ ವಿಷಯ ಆದಷ್ಟು ಅವೈಡ್ ಮಾಡಿ
8. ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಮಾತ್ರ ಮಾತಾಡಿ
9. ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ
10. ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ
11. ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಮರೆಯುವಂತೆ ಮಾಡಿ
12. ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ
13. ಅವರ ಮುಂದೆ ಗೌರವವಾಗಿ ಕುಳಿತುಕೊಳ್ಳಿ
14. ಅವರ ಮಾತನ್ನು ತೆಗಳಬೇಡಿ.
15. ಅವರು ಮಾತನಾಡುವಾಗ ಅರ್ಧಕ್ಕೆ ನಿಲ್ಲಿಸಬೇಡಿ.
16. ಅವರ ವಯಸ್ಸಿಗೆ ಬೆಲೆಕೊಡಿ.
17. ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ
18. ಅವರ ಮುಂದೆ ಮೊಮ್ಮಕ್ಕಳನ್ನು ಹೊಡೆಯಬೇಡಿ
19. ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ.
20. ಅವರ ಮುಂದೆ ಜೋರಾಗಿ ಮಾತನಾಡಬೇಡಿ
21. ಅವರ ಮುಂದೆ ಕಾಲು ತೋರಿಸುವ ಹಾಗೆ ಕುಳಿತುಕೊಳ್ಳಬೇಡಿ
22. ಅವರಕಡೆ ಬೆನ್ನುಮಾಡಿ ಕುಳಿತುಕೊಳ್ಳಬೇಡಿ
23. ಅವರ ನ್ಯೂನ್ಯತೆಯನ್ನು ಪದೇ ಪದೇ ಎತ್ತಿ ತೋರಿಸಬೇಡಿ.
24. ಸಣ್ಣ ಸಣ್ಣ ಬಳಲಿಕೆಯನ್ನು ಅವರ ಮುಂದೆ ಹೇಳಬೇಡಿ.
25. ಅವರು ಮಾಡಿದ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ
26. ನಿಮ್ಮ ಕಷ್ಟಗಳನ್ನು ಆದಷ್ಟು ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ.
27. ಅವರ ವಯಸ್ಸಿನ ಬಗ್ಗೆ ಹೀಯಾಳಿಸಬೇಡಿ
28. ಅವರು ಮಾಡಿದ ತಪ್ಪಿಗೆ ನಗಬೇಡಿ, ನೋಡಿಯೂ ನೋಡದಹಾಗೆ ಇರಿ.
29. ಹೋಗುವಾಗ ಬರುವಾಗ ಭೆಟ್ಟಿಯಾಗಿ ಆಶೀರ್ವಾದ ಪಡೆಯಿರಿ
30. ಅವರಿಗೆ ಇಷ್ಟವಾದ ಹೆಸರಿನಿಂದಲೇ ಕರೆಯಿರಿ
31. ಅವರ ಅನುಭವವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ
32. ದಿನಕ್ಕೆ ಕನಿಷ್ಟ 1ಗಂಟೆಯಾದರೂ ಮಕ್ಕಳನ್ನು ಅವರ ಹತ್ತಿರ ಬಿಡಿ
33. ಅವರನ್ನು ಒಂಟಿಯಾಗಿ ಬಿಡಬೇಡಿ, ನಿಮ್ಮ ಜೊತೆ ಇರಿಸಿಕೊಳ್ಳಿ
34. ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ, ಪ್ರಶ್ನೆಗೆ ಮರುಪ್ರಶ್ನೆ ಮಾಡಬೇಡಿ
35. ನಿಮ್ಮ ಕರ್ತವ್ಯ ಮರೆಯಬೇಡಿ, ಬೇರೆಯವರ ಕರ್ತವ್ಯಲೋಪದ ಬಗ್ಗೆ ಯೋಚಿಸಬೇಡಿ.
ಹಿರಿಯರು ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ, ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ,
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

Sunday, April 11, 2021

ಪೆರಿಂಗೊತ್ತುಕರ ದೇವಸ್ತಾನಂ ಕೇರಳದ ವಿಶಿಷ್ಟವಾದ ಶ್ರೀ ವಿಷ್ಣುಮಯ ಕುಟ್ಟಿಚಾಥನ್ ಭುವನೇಶ್ವರಿ ದೇವಾಲಯವಾಗಿದೆ

ಪೆರಿಂಗೊತ್ತುಕರ ದೇವಸ್ತಾನಂ ಕೇರಳದ ವಿಶಿಷ್ಟವಾದ ಶ್ರೀ ವಿಷ್ಣುಮಯ ಕುಟ್ಟಿಚಾಥನ್ ಭುವನೇಶ್ವರಿ ದೇವಾಲಯವಾಗಿದೆ. ಇದು ಕೇರಳದ ತ್ರಿಚೂರ್ ಜಿಲ್ಲೆಯ ಪೆರಿಂಗೊಟುಕಾರದಲ್ಲಿ ನೆಲೆಗೊಂಡಿರುವ ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ಶ್ರೀ ವಿಷ್ಣುಮಯ ಕುಟ್ಟಿಚಥನ್ ಸ್ವಾಮಿ ದೇವಾಲಯವಾಗಿದೆ. ಪೆರಿಂಗೊತ್ತುಕರ ದೇವಸ್ತಾನಂ ತನ್ನ ಶ್ರೀಕೋವಿಲ್ ಅಥವಾ ಬಲಿಪೀಠದ ಕಡೆಗೆ ನಿರಂತರವಾಗಿ ಬೆಳೆಯುತ್ತಿರುವ ಭಕ್ತರನ್ನು ಆಕರ್ಷಿಸುತ್ತದೆ, ಬೇಷರತ್ತಾದ ಪರಿಹಾರ, ಪರಿಹಾರಗಳು ಮತ್ತು ಶಾಂತಿಯನ್ನು ಅವರ ಆಳವಾದ ದುಃಖಗಳು, ಶಾಪಗಳು ಮತ್ತು ಮಾನಸಿಕ ಸಂಕಟಗಳಿಂದ ಪರಿಹರಿಸುತ್ತದೆ. ಈ ದೇವಾಲಯವು ಭಾರತದ ಎಲ್ಲಾ ಭಾಗಗಳಿಂದ ಮತ್ತು ವಿದೇಶಗಳಿಂದ ಭಕ್ತರನ್ನು ಆಕರ್ಷಿಸುತ್ತಿದೆ. ಆಳವಾದ ದುಃಖಗಳು ಮತ್ತು ಕಾಯಿಲೆಗಳಿಂದ ತಮ್ಮನ್ನು ಉದ್ಧಾರ ಮಾಡಿಕೊಳ್ಳಲು ಸಾವಿರಾರು ಭಕ್ತರು ಈ ಜನಪ್ರಿಯ 'ಕಲಿಯುಗವರ್ಧ ದೇವಸ್ಥಾನ'ವನ್ನು ಭೇಟಿ ಮಾಡುತ್ತಾರೆ.

Saturday, April 3, 2021

ಸಾಧ್ಯವಾದರೆ ಓಡುಆಗಲಿಲ್ಲವಾದರೆ ನಡೆಅದೂ ಸಾಧ್ಯವಾಗದಿರೆಉರುಳಿ ಕೊಂಡು ಹೋಗು ಅಷ್ಟೇ!

ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!

ಆದರೆ ಕದಲದೇ 
ಬಿದ್ದಿರಬೇಡ ಒಂದೇ ಕಡೆ

ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!

ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!

ಮನಸು ಮಾಡಿದರೇ...
ನಿನ್ನ ಹಣೆಬರಹ ಇಷ್ಟೇ 
ಅಂದವರೂ ಸಹ...
ನಿನ್ನ ಮುಂದೆ ತಲೆ ತಗ್ಗಿಸುವ 
ತಾಕತ್ತು ನಿನ್ನಲ್ಲಿದೆ

ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?

ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು

ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು 
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ

ಯಾವುದೂ  ನಿಲ್ಲಬಾರದು.
ಏಳು... ಎದ್ದೇಳು
ಹೊರಡು...
ನಿನ್ನನ್ನು ಅಲಗಾಡದಂತೆ 
ಮಾಡಿದ ಆ ಮಾನಸಿಕ ‌ಸಂಕೋಲೆಗಳನ್ನು ಬೇಧಿಸು, 
ಬಿದ್ದ ಜಾಗದಿಂದಲೇ
ಓಟ ಶುರು ಮಾಡು

ನೀನು ಮಲಗಿದ ಹಾಸಿಗೆ 
ನಿನ್ನನ್ನು ಅಹಸ್ಯಪಡುವ ಮುನ್ನ 
ಅಲಸ್ಯವನ್ನು ಬಿಡು

ಕನ್ನಡಿ ನಿನ್ನನ್ನು ಪ್ರಶ್ನಿಸುವ 
ಮುನ್ನ ಉತ್ತರ ಹುಡುಕು

ನೆರಳು ನಿನ್ನನ್ನು ಬಿಡುವ 
ಮುನ್ನ ಬೆಳಕಿಗೆ ಬಾ

ಮತ್ತೆ ಹೇಳುತ್ತಿದ್ದೇನೆ...
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ! 
ಬೆವರು ಸುರಿಸುವುದರಿಂದ 
ಮಾತ್ರ ಚರಿತ್ರೆ 
ಸೃಷ್ಟಿಸಬಹುದೆಂದು 
ತಿಳಿದುಕೋ...

ಓದಿದರೆ ಇವು ಪದಗಳಷ್ಟೇ...
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!

*ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ..*
*ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ...*
*ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ...*
                  *ಆದರೆ*
*"ಎಲ್ಲರೂ ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ
                *ಎಚ್ಚರ*

ಓದಿ ಇಷ್ಟವಾಗಬಹುದು..A beautiful story...*ಸಣ್ಣಕತೆ*

ಓದಿ ಇಷ್ಟವಾಗಬಹುದು..
A beautiful story...
*ಸಣ್ಣಕತೆ*

ರಾತ್ರಿ ಸಮಯ ಅಂಗಡಿಯ
ಮಾಲೀಕ ಅಂಗಡಿಯನ್ನು , ಮುಚ್ಚುವ ತವಕದಲ್ಲಿ ಇದ್ದನು..
ಅಷ್ಟರಲ್ಲಿ ಒಂದು ನಾಯಿ ಅಲ್ಲಿಗೆ ಬಂದಿತು.

ಅದರ ಬಾಯಿಯಲ್ಲಿ ಒಂದು
ಪ್ಲಾಸ್ಟಿಕ್ ಚೀಲ ಇತ್ತು .. ಆ ಚೀಲದಲ್ಲಿ ಸಾಮಾನುಗಳ ಚಿಟಿ ಮತ್ತು ಹಣ ಇತ್ತು..

ಅಂಗಡಿಯವನು ಹಣವನ್ನು ತೆಗದುಕೊಂಡು ಸಾಮಾನುಗಳನ್ನು ಆ ಚೀಲದಲ್ಲಿ ತುಂಬಿದನು ನಾಯಿಯ ಬಾಯಿಯಿಂದ ಆ ಚೀಲವನ್ನು ತೆಗದುಕೊಂಡು ಹೊರಟಿತು.. 

ಅಂಗಡಿಯವ ಅಶ್ಚರ್ಯಚಕಿತನಾಗಿ ನಾಯಿ ಹಿಂದೆ ಹಿಂದೆ ತೆರಳಿದನು ... ಯಾಕೆಂದರೆ ನಾಯಿಗೆ ಎಷ್ಟು ತಿಳುವಳಿಕೆ ಇದೆ ಮತ್ತು ಇದರ ಮಾಲೀಕರು ಯಾರು ಎಂದು ಪರಿಶೀಲನೆ ಮಾಡಲು.!

ನಾಯಿ ಬಸ್ ಸ್ಟಾಪ್ ನಲ್ಲಿ ನಿಂತಿತ್ತು.. ಸ್ವಲ್ಪ ಸಮಯದ ನಂತರ ಬಸ್ ಬಂದಿತು.. ನಾಯಿ ಬಸ್ ಅನ್ನು ಹತ್ತಿತು.

ಕಂಡಕ್ಟರ್ ಬಂದಾಗ ತಲೆ ಮುಂದೆ ಚಾಚಿತು.ಕಂಡಕ್ಟರ್ ನಾಯಿಯ ಕೊರಳುನಲ್ಲಿ ಇರುವ ಪಟ್ಟಿಯಲ್ಲಿ ಇರುವ ವಿಳಾಸವನ್ನು ನೋಡಿ ಹಣ ತೆಗದುಕೊಂಡು ನಾಯಿಯ ಕೊರಳಲ್ಲಿ ಟಿಕೆಟ್ ಇಟ್ಟನು.

ನಾಯಿ ಇಳಿಯುವ ಜಾಗ ಬಂದಾಗ ಮುಂದಿನ ಬಾಗಿಲಿನಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಬಸ್ ನಿಲ್ಲಿಸುವಂತೆ ಸನ್ನೆ ಮಾಡಿತು‌.

ಬಸ್ ನಿಂತ ಮೇಲೆ ಬಾಲ ಅಲ್ಲಾಡಿಸುತ್ತ  ಇಳಿದು ಹೋಗುತ್ತಿತ್ತು.

ಅಂಗಡಿಯವನಿಗೆ ಇನ್ನು ಉತ್ಸಾಹ ಹೆಚ್ಚಾಗಿತ್ತು.. ನಾಯಿ ಹಿಂದೆ , ಹಿಂದೆ ಬರುತ್ತಿದ್ದನು.‌

ನಾಯಿ ಒಂದು ಮನೆಯ ಹತ್ತಿರ
ಬಂದು ನಿಂತು ಚೀಲವನ್ನು ಕೆಳಗೆ ಇಟ್ಟು ಕಾಲಿನಿಂದ ಮೂರು ಸಲ ಬಾಗಿಲು ಬಡಿಯಿತು.

ಒಳಗಡೆಯಿಂದ ನಾಯಿಯ ಮಾಲಿಕ ಬಂದು ಕಟ್ಟಿಗೆಯಿಂದ ನಾಯಿಯನ್ನು ಹೊಡೆದನು.

ಅಂಗಡಿಯವವನು ನಾಯಿಯ ಮಾಲಿಕನಗೆ ಕೇಳಿದನು.
ನಾಯಿಯನ್ನು ಯಾಕೇ ಹೊಡೆದೆ ಎಂದು.?

ನಾಯಿಯ ಮಾಲಿಕ ಹೇಳಿದನು..

ಇದು ನನ್ನ ನಿದ್ರೆಯನ್ನು ಹಾಳು ಮಾಡಿತು..

ಹಣ , ಚೀಟಿ ಮತ್ತು ಚೀಲ ತೆಗದುಕೊಂಡ ಹೋದ ಇದು
ಕೀಲಿಯನ್ನು ಯಾಕೇ ಮರೆತು ಹೋಗಬೇಕಾಗಿತ್ತು  ಎಂದು ಬೈದನು.

*ಜೀವನದ ಸತ್ಯವು ಇಷ್ಟೇ*

ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ ಮಾಡುವ ದಿನಗಳಷ್ಟು ಮಾತ್ರ
ಒಳ್ಳೆಯವರಾಗಿ ಕಾಣುತ್ತೇವೆ.

ನಮ್ಮಿಂದ ಒಂದು ಚಿಕ್ಕ ತಪ್ಪಾದರೂ ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ.

ಅದ್ದರಿಂದ ನಾವು ಮಾಡುವ ಕೆಲಸ ಒಳ್ಳೆಯದಾಗಿದ್ದರೆ
ಅದೇ ದಾರಿಯಲ್ಲಿ ಮುಂದುವರಿಯುವುದು ಉತ್ತಮ. 

ಯಾಕೆಂದರೆ ನಾವು ಮಾಡುವ ಕೆಲಸಗಳು
ಜನರನ್ನು ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲ್ಲ.

✍ಸಂಗ್ರಹ

Tuesday, March 16, 2021

ಕನ್ನಡ ಪುಸ್ತಕಗಳನ್ನು ಓದಿರಿ... ಓದಿಸಿ....ಪರಿಶುದ್ಧ ಕನ್ನಡ ಭಾಷೆಯ ಸವಿಯನ್ನು ಆಸ್ವಾದಿಸಿ.

_*ಕನ್ನಡಿಗರಿಗೊಂದು ಕಿವಿಮಾತು*_

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ  ಅಃ ಈಗೇ ಆ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತ ವ್ಯಾಯಮವಾಗುತ್ತದೆ.
ಶುದ್ಧ ಪರಿಶುದ್ಧ ಜೇನಿನ ಹಾಗೆ.... ನಮ್ಮ ಕನ್ನಡ ಭಾಷೆ ಇದೆ.
ಪೂರ್ವದಲ್ಲಿ ಗುರುಗಳು ಮಕ್ಕಳ ಹತ್ತಿರ ವರ್ಣಮಾಲೆಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ಈಗೇ ಕಂಠಪಾಠ ಮಾಡುವುದರಿಂದ ಕಂಠದಿಂದ ಮುಖದವರೆಗೆ ನಮಗೆ ತಿಳಿಯದೆನೆ ವ್ಯಾಯಾಮವಾಗುತ್ತಿತ್ತು.
ಹೇಗೆಂದರೆ 👇🏻
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಈಗೇ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತಾ ವ್ಯಾಯಾಮವಾಗುತ್ತದೆ.
ಕ ಖ ಗ ಘ ಙ 👉🏻ಕಂಠ ಭಾಗ 
ಚ ಛ ಜ ಝ ಞ 👉🏻 ಕಂಠದ ಮೇಲಿನ ನಾಲಿಗೆಯ ಮೊದಲ ಭಾಗ
ಟ ಠ ಡ ಢ ಣ 👉🏻 ನಾಲಿಗೆಯ ಮಧ್ಯಭಾಗ 
ತ ಥ ದ ಧ ನ 👉🏻 ನಾಲಿಗೆಯ ಕೊನೆಯ ಭಾಗ 
ಪ ಫ ಬ ಭ ಮ 👉🏻 ತುಟಿಗಳು 
ಯ ರ ಲ ವ ಶ ಷ ಸ ಹ ಳ ಕ್ಷ ಜ್ಞ 👉🏻ಬಾಯೆಲ್ಲ ಈಗೇ ಮುಖವೆಲ್ಲಾ ಹಲ್ಲುಗಳ ಸಮೇತ ವ್ಯಾಯಾಮವಾಗುತ್ತದೆ. 

ಸುಂದರ ಸುಮಧುರ ಸೌಮ್ಯವಾದ ಮೃದುತ್ವದಿಂದ ಕೂಡಿದ ಪರಿಶುದ್ಧ ಜೇನು ನಮ್ಮ ಕನ್ನಡ ಭಾಷೆ.ಆನಂದವಾಗಿ ಮನಸ್ಸಿಗೆ ಹಾಯ್ ಆಗಿ ಕೇಳಿಸುವ ಮಾತುಗಳು ನಮ್ಮೆಲ್ಲರ ಬಾಯಿಂದ ಉಚ್ಚರಿಸಿದರೆ ಎಷ್ಟು ಚೆನ್ನಾಗಿರುತ್ತದೆ. ಕನ್ನಡ ಭಾಷೆಯನ್ನು ಅಂದವಾಗಿ ಬರೆಯುವವರಿಗೆ ಚಿತ್ರಕಲೆ ಸ್ವಂತವಾಗುವುದಂತೆ ಏಕೆಂದರೆ ನಮ್ಮ ವರ್ಣಮಾಲೆಗೆ ಅಷ್ಟು ಮೆಲುಕು ಇದೆಯಂತೆ.
ನಮ್ಮೊಳಗಿನ ಭಾವವನ್ನು ವಿವರವಾಗಿ ಮಾತೃಭಾಷೆಯಲ್ಲಿ ವರ್ಣಿಸುವಷ್ಟು ಮತ್ತೆ  ಬೇರೆ ಯಾವ ಭಾಷೆಯಲ್ಲೂ ವರ್ಣಿಸಲು ಸಾಧ್ಯವಿಲ್ಲ. ಕನ್ನಡಿಗರೆಂದರೆ ಮುಂಜಾವ ಅರಳಿದ ಪುಷ್ಪದಂತೆ  ಅವನ್ನೋಡಿದರೆ ಎಷ್ಟು ಆಹ್ಲಾದಬರಿತವಾಗುವುದೋ.... ಹಾಗೆ ಕನ್ನಡಿಗರ ಮನಸ್ಸು. 
ಕನ್ನಡದಲ್ಲಿ ಮಾತಾಡಿ...
ಕನ್ನಡದಲ್ಲಿ ಬರೆಯಿರಿ....
ಕನ್ನಡ ಪುಸ್ತಕಗಳನ್ನು ಓದಿರಿ... ಓದಿಸಿ....
ಪರಿಶುದ್ಧ ಕನ್ನಡ ಭಾಷೆಯ ಸವಿಯನ್ನು ಆಸ್ವಾದಿಸಿ. 

🙏🏼🙏🏼🙏
            ನಂಜುಂಡಸ್ವಾಮಿ 

ನಮಗೆ ಏನಾದರೂ ಕೆಟ್ಟದ್ದು ಆದರೆ ಅದನ್ನು ಕೂಡಲೇ ಮರೆಯಬೇಕು, ಒಳ್ಳೆಯದು ಆದರೆ ಯಾವಾಗಲೂ ನೆನಪಿನಲ್ಲಿಡಬೇಕು.

ಒಂದು ಸಲ ಅಣ್ಣ - ತಮ್ಮಂದಿರಿಬ್ಬರು ಸಮುದ್ರ ತೀರದಲ್ಲಿ ಯಾವುದೋ ವಿಷಯಕ್ಕಾಗಿ ಜಗಳ ಆಡುತ್ತಿರುತ್ತಾರೆ. ಆಗ ಅಣ್ಣನು ತಮ್ಮನ ಕೆನ್ನೆಗೆ ಹೊಡೆದಾಗ ತಮ್ಮನು ಏನು ಹೇಳುವುದಿಲ್ಲ. 

#ಬದಲಾಗಿ ಮರಳಿನ ಮೇಲೆ ಈ ರೀತಿಯಾಗಿ ಬರೆಯುತ್ತಾನೆ... " ಇವತ್ತು ನನ್ನ ಅಣ್ಣ ನನ್ನ ಕೆನ್ನೆಗೆ ಹೊಡೆದ." 

ಮತ್ತೇ ಮಾರನೆಯ ದಿನ ಸ್ನಾನ ಮಾಡಲು ಸಮುದ್ರಕ್ಕೆ ಹೋದಾಗ ತಮ್ಮ ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಹೋಗುತ್ತಿರುತ್ತಾನೆ. 

ಆಗ ಅಣ್ಣನು ತಮ್ಮನ ಪ್ರಾಣವನ್ನು ರಕ್ಷಿಸುತ್ತಾನೆ. ಆಮೇಲೆ ತಮ್ಮನು ಕಲ್ಲಿನ ಮೇಲೆ ಈ ರೀತಿಯಾಗಿ ಬರೆಯುತ್ತಾನೆ... " #ಇವತ್ತು_ನನ್ನ ಅಣ್ಣ ನನ್ನ ಪ್ರಾಣವನ್ನು ರಕ್ಷಿಸಿದ."

ಅಣ್ಣ: ನಿನ್ನೆ ಹೊಡೆದಾಗ ಮರಳಿನ ಮೇಲೆ ಬರೆದೆ ಹಾಗೂ ಇವತ್ತು ಪ್ರಾಣ ಉಳಿಸಿದಾಗ ಕಲ್ಲಿನ ಮೇಲೆ ಬರೆದೆ ಈ ರೀತಿ ಯಾಕೆ?

ತಮ್ಮ:  ನಮಗೆ ಯಾರಾದರೂ ದುಃಖವನ್ನು ಕೊಟ್ಟರೆ ಅದನ್ನು ಮರಳಿನ ಮೇಲೆ ಬರೆದಿಡಬೇಕು. ಏಕೆಂದರೆ ಅದು ಬಹು ಬೇಗನೆ ಅಳಿಸಿ ಹೋಗುತ್ತದೆ. ಆದರೆ ನಮಗೆ ಯಾರಾದರೂ ಒಳ್ಳೆಯದು ಮಾಡಿದರೆ ಅದನ್ನು ಕಲ್ಲಿನ ಮೇಲೆ ಬರೆದಿಡಬೇಕು. ಏಕೆಂದರೆ ಅದು ಯಾವತ್ತು ಅಳಿಸಿ ಹೋಗುವುದಿಲ್ಲ. 

ಒಳಾರ್ಥ: ನಮಗೆ ಏನಾದರೂ ಕೆಟ್ಟದ್ದು ಆದರೆ ಅದನ್ನು ಕೂಡಲೇ ಮರೆಯಬೇಕು, ಒಳ್ಳೆಯದು ಆದರೆ ಯಾವಾಗಲೂ ನೆನಪಿನಲ್ಲಿಡಬೇಕು.
ಶುಭ ದಿನ...
🌹🙏
dgnsgreenworld

Sunday, March 14, 2021

ಸಂಪೂರ್ಣ ಭಾರತದಲ್ಲಿ ನಗದು ರಹಿತ ವ್ಯವಹಾರಗಳಾದರೆ ಏನಾಗಬಹುದೆಂದು ಒಮ್ಮೆ ಓದಿ ಬಿಡಿ

ಸಂಪೂರ್ಣ ಭಾರತದಲ್ಲಿ ನಗದು ರಹಿತ ವ್ಯವಹಾರಗಳಾದರೆ ಏನಾಗಬಹುದೆಂದು ಒಮ್ಮೆ ಓದಿ ಬಿಡಿ

👉 ಕಪ್ಪು ಹಣ  0%
👉 ಹಣವನ್ನು ಮುಚ್ಚಿಡುವುದು ಬಂದ್ 0%
👉 ಕಾಗದ ಹಾಳಾಗಿ ಹೋಗುವುದು  0%
👉 ನಕಲಿ ನೋಟು  0℅
👉 ಕಳ್ಳ ಸುಳ್ಳರು  0%
👉 ಭ್ರಷ್ಟಾಚಾರ  0%
👉 ಟ್ಯಾಕ್ಸ್ ಕಳ್ಳತನ 0%
👉 ಸಮಯದ ಕೊರತೆ  0℅
👉 ಹಣವನ್ನು ಎಣಿಸುವ ಗಡಿಬಿಡಿ 0%
👉 ಅಪಹರಣ ಕಿಡ್ನಾಪ್ 0%
👉 ಹಗರಣಗಳು  0%
👉  ಬ್ಯಾಂಕ್ ಮುಂದೆ ಕ್ಯೂ 0%
👉 ದೇಶದ ಪ್ರಗತಿ 100%
👉 ಪ್ರಾಮಾಣಿಕತೆ 100%
👉 ಪಾರದರ್ಶಿಕತೆ 100%
👉 ಅರ್ಥ ವ್ಯವಸ್ಥೆ ಬಲಯುತ ಆಗುವುದು 
👉 ಭಯೋತ್ಪಾದಕರು ದೇಶದಲ್ಲಿ ಹೆಜ್ಜೆ ಇಡುವುದಿಲ್ಲ
👉 ನಕ್ಸಲವಾದ ಕಡಿಮೆ ಆಗುವುದು 
👉 ಕಾಗದ ಉಳಿಯುತ್ತದೆ ವಾತಾವರಣ ಚೆನ್ನಾಗಿರುತ್ತದೆ 
👉 ಬ್ಯಾಲೆನ್ಸ್ ಶೀಟ್ ತಮ್ಮ  ಪಾಸ್ ಬುಕ್ ಆಗಿರುತ್ತದೆ 
👉ಅಕೌಂಟ್ ನ ಪ್ರಿಪ್ರೇಷನ್ ಚಾರ್ಜ್ ಕಡಿಮೆಯಾಗುತ್ತದೆ 
👉 ನಮ್ಮ ಖರ್ಚಿನ ಲೆಕ್ಕಾಚಾರ ಸರಿಯಾಗಿ ಸಿಗುವುದು 
👉 ಭಾರತ ಬೇಗನೆ ಮುಂದುವರೆದ ದೇಶವಾಗುವುದು 

* ಪ್ರಪಂಚದಲ್ಲಿ ಸ್ವಲ್ಪ ಇಂತಹ ದೇಶಗಳಿವೆ ಅವು ನಗದು ರಹಿತ ವ್ಯವಹಾರ ಮಾಡುತ್ತಿವೆ  ಮತ್ತು ಅದರ ಪ್ರಯೋಜನ ಪಡೆಯುತ್ತಿವೆ ಅವ್ಯಾವುವೆಂದು ಮತ್ತು ಎಷ್ಟು ಪ್ರಮಾಣದಲ್ಲಿ ನಗದು ರಹಿತವಾಗಿವೆಯೆಂದು ಒಮ್ಮೆ ನೋಡಿ ಬಿಡಿ

 💸ಬೆಲ್ಜಿಯಂ  93% ಕ್ಯಾಶ್ ಲೇಸ್ 

 💸 ಫ್ರಾನ್ಸ್ 92% ಕ್ಯಾಶ್ ಲೇಸ್ 

 💸ಕೆನಾಡ 90% ಕ್ಯಾಶ್ ಲೇಸ್ 

 💸ಯುಕೆ  89% ಕ್ಯಾಶ್ ಲೇಸ್ 

  ಆಸ್ರ್ಟೇಲಿಯಾ  86% ಕ್ಯಾಶ್ ಲೇಸ್ 

ಬನ್ನಿ ನನ್ನ ಪ್ರೀತಿಯ ಭಾರತೀಯರೆ ನಾವೆಲ್ಲರೂ ಸೇರಿ ನಗದು  ರಹಿತ ವ್ಯವಹಾರ ಮಾಡುವುದಕ್ಕೆ ಸಹಯೋಗ ಕೊಡೋಣ ಭಾರತದ ಕಟ್ಟಕಡೆಯ ಪ್ರಜೆಯಗೂ ಅವನ ಅವಶ್ಯಕತೆಗಳನ್ನು ಪೋರೈಸಿಕೊಳ್ಳುವಂತೆ ನೋಡಿಕೊಳ್ಳೋಣ ಹಾಗೂ ಭಯೋತ್ಪಾದನೆ ಭ್ರಷ್ಟಾಚಾರ ಹಗರಣ ಮುಕ್ತ ಮಾಡೋಣ 

ಮತ್ತು ನಮಗಿಂತ ಎಷ್ಟೋ ಸಣ್ಣಪುಟ್ಟ ದೇಶದ ಜನತೆ  ಇಂದು  ನಗದು ರಹಿತ ವ್ಯವಹಾರ ಮಾಡುತ್ತಾರೆ ಅಂದಮೇಲೆ ನಾವೆಲ್ಲರೂ ಏಕೆ ಮಾಡಲು ಸಾಧ್ಯವಿಲ್ಲ  ಇದನ್ನು ಎಷ್ಟು ಶೇರ್ ಮಾಡಿ ಎಂದರೆ ಈ ಧ್ವನಿ ಸಂಪೂರ್ಣ ಭಾರತದಲ್ಲಿ ಪ್ರತಿಧ್ವನಿಸಲಿ ಹಾಗೂ ನಾವು ಇದನ್ನು ಗರ್ವದಿಂದ ಹೇಳಿಕೊಳ್ಳಬಹುದು 
#ನಗದು_ರಹಿತ_ಭಾರತ 
#ಭ್ರಷ್ಟಾಚಾರ_ಮುಕ್ತ_ಭಾರತ  

ವಂದನೆಗಳೊಂದಿಗೆ
 ನಂಜುಂಡಸ್ವಾಮಿ dgnsgreenworld@gmail.com

Thursday, February 18, 2021

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

೧. ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.

೨. ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.

೩. ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಅರಿಕೆ ಮಾಡಿಕೊಂಡ.

ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!

೧.ಇಡೀ ದೇಶಗಳಲ್ಲಿರು ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.

೨. ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ಎಸಯಲಿಕ್ಕೆ ಹೇಳಿದೆ.

೩. ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶ!

ಪ್ರಪಂಚವನ್ನು ಗೆದ್ದ ಅಲೆಕ್ಸಾಂಡರ್ ಸತ್ತಾಗ ಅವನ ಕೈಯಲ್ಲಿ ಏನೂ ಇರಲಿಲ್ಲ ಎಂಬುದು ಪ್ರಜೆಗಳಿಗೆ ತಿಳಿಯಲಿ ಎಂದು ಹೇಳಿದ.

ನೀತಿ:
ಕಾಲವೆಂಬುದು ಎಲ್ಲಕ್ಕೂ ಮೀರಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿರುವಷ್ಟು ದಿನ, ಸಮಯ ಉತ್ತಮ ಕೆಲಸವನ್ನು ಮಾಡಬೇಕು. ಅವುಗಳು ಮಾತ್ರವೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಳಿಸಿದ ವಸ್ತುಗಳಾವುವು ನಮ್ಮೊಡನೆ ಬರಲಾರವು.

ಹುಟ್ಟಿದಾಗ ನೀ ಅಳುತ್ತಿದ್ದೆ,
   ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
         ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

           ಹುಟ್ಟಿದಾಗ  ಹುಡುಕುವರು ನಿನಗೆ
                             ನೂರೆಂಟು ನಾಮ,
                    ಮಡಿದಮೇಲೆ ಶವ ಎಂದೇ
                                    ನಿನ್ನ ನಾಮ.

   ನೀನೇನನ್ನೂ ಗಳಿಸದೇ ಬಂದೆ, 
                           ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.
 
ಓ ಮಾನವಾ..
              ಮಡಿದಾಗ ಮಣ್ಣಲ್ಲಿ ಮರಳಾಗಿ
                              ಹೊಗುವ ನೀನು
               ನಿನ್ನದು ಎನ್ನಲು ನಿನಗೇನಿದೆ,

     ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

     ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

 ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
       ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
                     ನಾನು ಯಾರು ?
ವಂದನೆಗಳೊಂದಿಗೆ.
ಇಂತಿ 
ನಿಮ್ಮ ನಂಜುಂಡಸ್ವಾಮಿ.

Monday, January 4, 2021

ಮಹಮದ್ ಬಿನ್ ತುಘಲಕ್ ಮಹಾನ್? ಸಾಧನೆ

ಮಹಮದ್ ಬಿನ್ ತುಘಲಕ್ ಮಹಾನ್? ಸಾಧನೆ

ಸುಲ್ತಾನನು ರಾಜಧಾನಿಯನ್ನು ದೆಹಲಿಯಿಂದ ಮಹಾರಾಷ್ಟ್ರದ ದೇವಗಿರಿ (ದೌಲತಾಬಾದ್)ಗೆ ಬದಲಾಯಿಸಿದನು. ಇದಕ್ಕೆ ಅವನು ಕೊಟ್ಟ ಕಾರಣಗಳೆಂದರೆ, ೧. ರಾಜಧಾನಿ ಸಾಮ್ರಾಜ್ಯದ ಮಧ್ಯದಲ್ಲಿರಬೇಕೆಂದು. ೨ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವು ಹೆಚ್ಚು ಸಮ್ಋದ್ಧವಾಗಿದೆ ಎಂದು. ೩. ದೆಕ್ಷಿಣ ಭಾರತದಲ್ಲಿ ಇಸ್ಲಾಂ ಪ್ರಚಾರ ಮಾಡುವುದು. ೪. ಉತ್ತರಕ್ಕೆ ಸೀಮಿತವಾಗಿದ್ದ ಇಸ್ಲಾಂ ಪ್ರಭುತ್ವವನ್ನು ದಕ್ಷಿಣಕ್ಕೆ ವಿಸ್ತರಿಸುವುದು. ೫. ಮುಂಗೋಲರ ದಾಳಿಗಳಿಂದ ರಾಜಧಾನಿಯನ್ನು ರಕ್ಷಿಸುವುದು. ೬. ಅವಾಚ್ಯ ಶಬ್ಧಗಳಿಂದ ಬೈಯ್ದು ದೆಹಲಿಯ ನಾಗರೀಕರು ಸುಲ್ತಾನನಿಗೆ ಪತ್ರ ಬರೆಯುತ್ತಿದ್ದರು. ಅವುಗಳಿಂದ ಮುಕ್ತನಾಗಲು . ಇತ್ಯಾದಿ. ಹೊಸ ರಾಜಧಾನಿಯಲ್ಲಿ ಕಟ್ಟಡಗಳು ನಿರ್ಮಿಸಲು ಹಣವನ್ನು ನೀರಿನಂತೆ ಚೆಲ್ಲಿದನು. ಅನಂತರ ಸುಲ್ತಾನ ಆಜ್ಞೆ ಕೋಟ್ಟು ದೆಹಲಿಯ ಎಲ್ಲಾ ನಾಗರೀಕರು ತಮ್ಮ ಗಂಟು ಮೂಟೆ ಕಟ್ಟಿಕೋಂಡು ದೇವಗಿರಿಗೆ ಹೋಗಬೇಕೆಂದು ತಿಳಿಸಿದನು. ದೆಹಲಿಯಲ್ಲಿ ಈಗ ನೋಡಲು ಒಂದು ನರಪಿಳ್ಳೆಯಾಗಲಿ, ಬೆಕ್ಕಿನ ಮರಿಯಾಗಲಿ ಇರಲಿಲ್ಲ. ಅದು ನೋಡಲು ಸ್ಮಶಾನದಂತಿತ್ತು. ಹೀಗಾಗಿ ಮಂಗೋಲರು ದೆಹಲಿಯನ್ನು ಮುತ್ತಿ ಲೂಟಿ ಮಾಡಿದರು. ದೆಹಲಿ ತನ್ನ ಶತಮಾನಗಳ ವೈಭವವನ್ನು ಕಳೆದುಕೊಂಡಿತು. ಕೊನೆಗೆ ತನ್ನ ತಪ್ಪು ಅರಿತ ಸುಲ್ತಾನ ಪುನಃ ಜನರಿಗೆ ದೇವಗಿರಿಯಿಂದ ದೆಹಲಿಗೆ ಹಿಂತಿರುಗಬೇಕೆಂದು ಆಜ್ಙಾಪಿಸಿದನು. ಅದನ್ನು ಕೇಳಿದ ಅವರಿಗೆ ಪ್ರಾಣವೇ ಹೋದಂತಾಗಿತು. ಆದರೂ ಸುಲ್ತಾನನ ಆಜ್ಙೆಯನ್ನು ಪಾಲಿಸಲೇಬೇಕಿತ್ತು. ದೆಹಲಿ ಮತ್ತು ದೇವಗಿರಿಗಳ ನಡುವೆ ೭೦೦ ಮೈಲಿ ಉದ್ದದ ರಸ್ತೆ ಕಲ್ಲುಮುಳ್ಳುಗಳಿಂದ ತುಂಬಿದ್ದು, ಆಹಾರವಿಲ್ಲದೆ ಹಿಂತಿರುಗುವಾಗ ಮುಕ್ಕಾಲು ಭಾಗ ಜನ ಸತ್ತರು. ದೆಹಲಿ ಪುನಃ ತನ್ನ ವೈಭವವನ್ನು ಪಡೆಯಲು ಹಲವು ವರ್ಷಗಳೇ ಬೇಕಾದವು. ಲೇನ್ ಪೋಲರು ರಾಜಧಾನಿ ಬದಲಾವಣೆಯನ್ನು 'ಶಕ್ತಿಯ ಆಪ ನಿದೇ‍ಶಿತ ಸ್ಮಾರಕ" ವಾಗಿತ್ತೆಂದು ಟೀಕಿಸಿದ್ದಾರೆ.

ಪರೀಕ್ಷೆ ಹತ್ತಿರ ಇರೋದ್ರಿಂದ ಬೇಕಾದವರಿಗೆ ಸಹಾಯವಾದೀತು.

ಮನಸೇ ಎಲ್ಲವೂ.

The mind is everything. What you think you become. ಮನಸ್ಸೇ ಎಲ್ಲವೂ. ನೀವು ಏನಾಗುತ್ತೀರಿ ಎಂದು ಯೋಚಿಸುತ್ತೀರೋ ಅದುವೇ ಆಗುತ್ತೀರಿ. ವಂದನೆಗಳೊಂದಿಗೆ.  Very g...

Green World