.
www.dgnsgreenworld.blogspot.com
Sunday, May 25, 2025
Friday, May 16, 2025
🚩🙏*****ಎಲ್ಲರೂ ತಿಳಿಯಬೇಕಾದ ಆದ್ಯಾತ್ಮ ವಿಷಯ***** ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ
🚩🙏*****ಎಲ್ಲರೂ ತಿಳಿಯಬೇಕಾದ ಆದ್ಯಾತ್ಮ ವಿಷಯ***** ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ.
ದಿಕ್ಕುಗಳು:
1. ಪೂರ್ವ /ಮೂಡಣ
2. ದಕ್ಷಿಣ. /ತೆಂಕಣ
3. ಪಶ್ಚಿಮ /ಪಡುವಣ
4. ಉತ್ತರ /ಬಡಗಣ
ಮೂಲೆಗಳು:
1. ಆಗ್ನೇಯ
2. ನೈರುತ್ಯ
3. ವಾಯುವ್ಯ
4. ಈಶಾನ್ಯ
ವೇದಗಳು:
1. ಋಗ್ವೇದ
2. ಯಜುರ್ವೇದ
3. ಸಾಮವೇದ
4. ಅಥರ್ವಣ ವೇದ
ಪುರುಷಾರ್ಥಗಳು:
1. ಧರ್ಮ
2. ಅರ್ಥ
3. ಕಾಮ
4. ಮೋಕ್ಷ
ಪಂಚಭೂತಗಳು:
1. ಗಾಳಿ
2. ನೀರು
3. ಭೂಮಿ
4. ಆಕಾಶ
5. ಅಗ್ನಿ
ಪಂಚೇಂದ್ರಿಯಗಳು:
1. ಕಣ್ಣು
2. ಮೂಗು
3. ಕಿವಿ
4. ನಾಲಿಗೆ
5. ಚರ್ಮ
ಲಲಿತ ಕಲೆಗಳು:
1. ಕವಿತ್ವ
2. ಚಿತ್ರಲೇಖನ
3. ನಾಟ್ಯ
4. ಸಂಗೀತ
5. ಶಿಲ್ಪ ಕಲೆ
ಪಂಚಗಂಗೆಯರು:
1. ಗಂಗಾ
2. ಕೃಷ್ನಾ
3. ಗೋದಾವರಿ
4. ಕಾವೇರಿ
5. ತುಂಗಭದ್ರಾ
ದೇವತಾ ವೃಕ್ಷಗಳು:
1. ಮಂದಾರ
2. ಪಾರಿಜಾತ
3. ಕಲ್ಪವೃಕ್ಷ
4. ಸಂತಾನ
5. ಹರಿ ಚಂದನ
ಪಂಚೋಪಚಾರಗಳು:
1. ಸ್ನಾನ
2. ಪೂಜೆ
3. ನೈವೇದ್ಯ
4. ಪ್ರದಕ್ಷಿಣೆ
5. ನಮಸ್ಕಾರ
ಪಂಚಾಮೃತಗಳು:
1. ಹಸುವಿನ ಹಾಲು
2. ಮೊಸರು
3. ತುಪ್ಪ
4. ಸಕ್ಕರೆ
5. ಜೇನುತುಪ್ಪ
ಪಂಚಲೋಹಗಳು:
1. ಚಿನ್ನ
2. ಬೆಳ್ಳಿ
3. ತಾಮ್ರ
4. ಸೀಸ
5. ತವರ
ಪಂಚರಾಮರು:
1. ಅಮರಾವತಿ
2. ಭೀಮವರಂ
3. ಪಾಲಕೊಲ್ಲು
4. ಸಾಮರ್ಲಕೋಟ
5. ದ್ರಾಕ್ಷಾರಾಮಂ
ಷಡ್ರುಚಿಗಳು:
1. ಸಿಹಿ
2. ಹುಳಿ
3. ಕಹಿ
4. ಒಗರು
5. ಕಾರ
6. ಉಪ್ಪು
ಅರಿಷಡ್ವರ್ಗಗಳು:
1. ಕಾಮ
2. ಕ್ರೋಧ
3. ಲೋಭ
4. ಮೋಹ
5. ಮದ
6. ಮತ್ಸರ
ಋತುಗಳು:
1. ವಸಂತ
2. ಗ್ರೀಷ್ಮ
3. ವರ್ಷ
4. ಶರತ್
5. ಹೇಮಂತ
6. ಶಿಶಿರ
ಸಪ್ತ ಋಷಿಗಳು:
1. ಕಾಶ್ಯಪ
2. ಗೌತಮ
3. ಅತ್ರಿ
4. ವಿಶ್ವಾಮಿತ್ರ
5. ಭಾರದ್ವಾಜ
6. ವಸಿಷ್ಠ
ತಿರುಪತಿಯಲ್ಲಿನ ಸಪ್ತಗಿರಿಗಳು:
1. ಶೇಷಾದ್ರಿ
2. ನೀಲಾದ್ರಿ
3. ಗರುಡಾದ್ರಿ
4. ಅಂಜನಾದ್ರಿ
5. ವೃಷಭಾದ್ರಿ
6. ನಾರಾಯಣದ್ರಿ
7. ವೇಂಕಟಾದ್ರಿ
ಸಪ್ತ ವ್ಯಸನಗಳು:
1. ಜೂಜು
2. ಮದ್ಯಪಾನ
3. ಕಳ್ಳತನ
4. ಬೇಟೆ
5. ವ್ಯಭಿಚಾರ
6. ದುಂದು ಖರ್ಚು
7. ಕಠಿಣ ಮಾತು
ಸಪ್ತ ನದಿಗಳು:
1. ಗಂಗಾ
2. ಯಮುನಾ
3. ಸರಸ್ವತಿ
4. ಗೋದಾವರಿ
5. ಸಿಂಧು
6. ನರ್ಮದಾ
7. ಕಾವೇರಿ
ನವಧಾನ್ಯಗಳು:
1. ಗೋಧಿ
2. ಭತ್ತ/ನೆಲ್ಲು
3. ಹೆಸರು
4. ಕಡಲೆ
5. ತೊಗರಿ
6. ನವಣೆ
7. ಉದ್ದು
8. ಹುರಳಿ
9. ಅಲಸಂದೆ
ನವರತ್ನಗಳು:
1. ಮುತ್ತು
2. ಹವಳ
3. ಗೋಮೇಧಿಕ
4. ವಜ್ರ
5. ಕೆಂಪು
6. ನೀಲಿ
7. ಕನಕ ಪುಷ್ಯ ರಾಗ
8. ಪಚ್ಚೆ/ಮರಕತ
9. ವೈಡೂರ್ಯ
ನವ ಧಾತುಗಳು:
1. ಚಿನ್ನ
2. ಬೆಳ್ಳಿ
3. ಹಿತ್ತಾಳೆ
4. ತಾಮ್ರ
5. ಕಬ್ಬಿಣ
6. ಕಂಚು
7. ಸೀಸ
8. ತವರ
9. ಕಾಂತ ಲೋಹ
ನವರಸಗಳು:
1. ಹಾಸ್ಯ
2. ಶೃಂಗಾರ
3. ಕರುಣ
4. ಶಾಂತ
5. ರೌದ್ರ
6. ಭಯಾನಕ
7. ಬೀಭತ್ಸ
8. ಅದ್ಭುತ
9. ವೀರ
ನವದುರ್ಗೆಯರು:
1. ಶೈಲ ಪುತ್ರಿ
2. ಬ್ರಹ್ಮಚಾರಿಣಿ
3. ಚಂದ್ರ ಘಂಟ
4. ಕೂಷ್ಮಾಂಡ
5. ಸ್ಕಂದ ಮಾತೆ
6. ಕಾತ್ಯಾಯನಿ
7. ಕಾಳರಾತ್ರಿ
8. ಮಹಾಗೌರಿ
9. ಸಿದ್ಧಿದಾತ್ರಿ
ದಶ ಸಂಸ್ಕಾರಗಳು:
1. ವಿವಾಹ
2. ಗರ್ಭದಾನ
3. ಪುಂಸವನ
4. ಸೀಮಂತ
5. ಜಾತಕ ಕರ್ಮ
6. ನಾಮಕರಣ
7. ಅನ್ನಪ್ರಾಶನ
8. ಚೂಡಕರ್ಮ
9. ಉಪನಯನ
10. ಸಮವರ್ತನ
ದಶಾವತಾರಗಳು - ಕ್ಷೇತ್ರಗಳು
1. ಶ್ರೀಮತ್ಸ್ಯಾವತಾರ ಕ್ಷೇತ್ರ - ನಾಗಲಾಪುರಂ ತಿರುಪತಿ ಜಿಲ್ಲೆ, ಆಂಧ್ರ ಪ್ರದೇಶ.
2. ಶ್ರೀ ಕೂರ್ಮ ಕ್ಷೇತ್ರ - ಶ್ರೀ ಕೂರ್ಮಮ್, ಶ್ರೀಕಾಕುಳಂ ಜಿಲ್ಲೆ, ಆಂಧ್ರ ಪ್ರದೇಶ.
3. ಶ್ರೀ ಆದಿ ವರಾಹ ಕ್ಷೇತ್ರ - ತಿರುಮಲ, ತಿರುಪತಿ ಜಿಲ್ಲೆ, ಆಂಧ್ರಪ್ರದೇಶ.
4. ಶ್ರೀ ನರಸಿಂಹ ಕ್ಷೇತ್ರ - ಅಹೋಬಿಲಂ, ನಂದ್ಯಾಲ ಜಿಲ್ಲೆ, ಆಂಧ್ರಪ್ರದೇಶ.
5. ಶ್ರೀ ವಾಮನ ಕ್ಷೇತ್ರ - ತಿರುಕ್ಕೋಯಿಲೂರು ಕಳ್ಳಕುರಿಚಿ ಜಿಲ್ಲೆ ತಮಿಳುನಾಡು.
6. ಶ್ರೀ ಪರಶುರಾಮ ಕ್ಷೇತ್ರ - ಜನಪಾವ ಪರ್ವತ, ಇಂದೋರ್ ಜಿಲ್ಲೆ, ಮಧ್ಯ ಪ್ರದೇಶ.
7. ಶ್ರೀರಾಮ ಕ್ಷೇತ್ರ - ಅಯೋಧ್ಯ, ಉತ್ತರ ಪ್ರದೇಶ.
8. ಶ್ರೀ ಬಲರಾಮ ಕ್ಷೇತ್ರ - ಗೋಕುಲಂ, ಮಥುರಾ ಜಿಲ್ಲೆ, ಉತ್ತರಪ್ರದೇಶ.
9. ಶ್ರೀ ಕೃಷ್ಣ ಕ್ಷೇತ್ರ - ಮಥುರಾ ಉತ್ತರಪ್ರದೇಶ.
10. ಶ್ರೀ ಕಲ್ಕಿ ಕ್ಷೇತ್ರ - ಶಂಭಲ (ಅವತಾರವೆತ್ತುವ ಕ್ಷೇತ್ರ).
ಶ್ರೀ ವೆಂಕಟೇಶ್ವರ ಸ್ವಾಮಿ ಕಲಿಯುಗದೈವ - ತಿರುಮಲ ಕಲಿಯುಗ ಕ್ಷೇತ್ರ.
*ಸೃಷ್ಟಿಯಲ್ಲಿ ಏಕೈಕ ಮತ್ತ್ಯಾವತಾರ ಕ್ಷೇತ್ರ ನಾಗಲಾಪುರ ಕ್ಷೇತ್ರವನ್ನು ದರ್ಶಿಸಿ, ಸೇವಿಸಿ*
ಜ್ಯೋತಿರ್ಲಿಂಗಗಳು:
1. ಹಿಮಾಲಯ ಪರ್ವತ - ಕೇದಾರೇಶ್ವರ ಲಿಂಗ
2. ಕಾಶಿ - ಕಾಶಿ ವಿಶ್ವೇಶ್ವರ
3. ಮಧ್ಯಪ್ರದೇಶ - ಮಹಾಕಾಳೇಶ್ವರ ಲಿಂಗ, ಓಂಕಾರೇಶ್ವರ ಲಿಂಗ
4. ಗುಜರಾತ್ - ಸೋಮನಾಥಲಿಂಗ, ನಾಗೇಶ್ವರ ಲಿಂಗ.
5. ಮಹಾರಾಷ್ಟ್ರ - ಭೀಮಶಂಕರ, ತ್ರಯಂಬಕೇಶ್ವರ, ಘೃಷ್ಣೆಶ್ವರ, ವೈದ್ಯನಾಥೇಶ್ವರ.
6. ಆಂಧ್ರ ಪ್ರದೇಶ - ಮಲ್ಲಿಕಾರ್ಜುನ ಲಿಂಗ (ಶ್ರೀಶೈಲಂ )
7. ತಮಿಳುನಾಡು - ರಾಮಲಿಂಗೇಶ್ವರ
ವಾರಗಳು:
1. ಭಾನು
2. ಸೋಮ
3. ಮಂಗಳ
4. ಬುಧ
5. ಗುರು
6. ಶುಕ್ರ
7. ಶನಿ
ಚಂದ್ರಮಾನ ತಿಂಗಳುಗಳು:
1. ಚೈತ್ರ
2. ವೈಶಾಖ
3. ಜೇಷ್ಠ
4. ಆಷಾಢ
5. ಶ್ರಾವಣ
6. ಭಾದ್ರಪದ
7. ಆಶ್ವಯುಜ
8. ಕಾರ್ತೀಕ
9. ಮಾರ್ಗಶಿರ
10. ಪುಷ್ಯ
11. ಮಾಘ
12. ಫಾಲ್ಗುಣ
ರಾಶಿಗಳು:
1. ಮೇಷ
2. ವೃಷಭ
3. ಮಿಥುನ
4. ಕರ್ಕಾಟಕ
5. ಸಿಂಹ
6. ಕನ್ಯಾ
7. ತುಲಾ
8. ವೃಶ್ಚಿಕ
9. ಧನಸ್ಸು
10. ಮಕರ
11. ಕುಂಭ
12. ಮೀನ
ತಿಥಿಗಳು:
1. ಪಾಡ್ಯ
2. ಬಿದಿಗೆ
3. ತದಿಗೆ
4. ಚೌತಿ
5. ಪಂಚಮಿ
6. ಷಷ್ಠಿ
7. ಸಪ್ತಮಿ
8. ಅಷ್ಟಮಿ
9. ನವಮಿ
10. ದಶಮಿ
11. ಏಕಾದಶಿ
12. ದ್ವಾದಶಿ
13. ತ್ರಯೋದಶಿ
14. ಚತುರ್ದಶಿ
15. ಅಮಾವಾಸ್ಯೆ/ಹುಣ್ಣಿಮೆ
ನಕ್ಷತ್ರಗಳು:
1. ಅಶ್ವಿನಿ
2. ಭರಣಿ
3. ಕೃತಿಕಾ
4. ರೋಹಿಣಿ
5. ಮೃಗಶಿರ
6. ಆರುದ್ರ
7. ಪುನರ್ವಸು
8. ಪುಷ್ಯ
9. ಆಶ್ಲೇಷ
10. ಮಖ
11. ಪುಬ್ಬಾ
12. ಉತ್ತರ
13. ಹಸ್ತ
14. ಚಿತ್ತಾ
15. ಸ್ವಾತಿ
16. ವಿಶಾಖ
17. ಅನುರಾಧ
18. ಜೇಷ್ಠ
19. ಮೂಲ
20. ಪೂರ್ವಾಷಾಢ
21. ಉತ್ತರಾಷಾಢ
22. ಶ್ರವಣ
23. ಧನಿಷ್ಠ
24. ಶತಭಿಷಾ
25. ಪೂರ್ವಾಭಾದ್ರ
26. ಉತ್ತರಾಭಾದ್ರ
27. ರೇವತಿ
ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ.
(ಸಂಗ್ರಹ)
Wednesday, May 14, 2025
ರವಿ ಕುಮಾರ್ ಹರವೇ
"ಸಾವಿರ ಮೈಲಿಗಳ ಪ್ರಯಾಣ ಕೂಡ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ". ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಸಾಧಿಸುವ ಛಲವಿರಬೇಕು ಅಷ್ಟೇ, ಸಾಧನೆ ಹಾದಿಯಲ್ಲಿ ನೋವು ನಲಿವು, ಕಷ್ಟ ಸುಖ, ಸುಖ-ದುಃಖ, ಸೋಲು ಗೆಲುವು, ಕಹಿ ಸಿಹಿ, ಎಲ್ಲವೂ ಸರ್ವಸಾಮಾನ್ಯವಾಗಿ ಸಾಧನೆಯು ಉದ್ದಕ್ಕೂ ಉದ್ಭವಿಸುತ್ತವೆ, ಪ್ರತಿಯೊಬ್ಬ ಸರ್ವ ಶ್ರೇಷ್ಠ ಸಾಧಕರೂ ಈ ಎಲ್ಲಾ ಮೆಟ್ಟಿಲುಗಳನ್ನು ಮೆಟ್ಟಿ ಸಾಧನೆಗೈದಿರುತ್ತಾರೆ, ಅದಕ್ಕೆ ಸನ್ಮಾನ್ಯ, ಡಿ, ವಿ, ಗುಂಡಪ್ಪನವರು ಹೇಳುತ್ತಾರೆ,
"ಯಶಸ್ಸು ಎಂಬುದು ಕಂಡ ಕಂಡಲ್ಲಿ ಬೆಳೆಯುವ ಕಾಡು ಕುಸುಮವಲ್ಲ ಎಡಬಿಡದ ಕಾಯಕದಿಂದ ಒಡಮೂಡಿ ಬರುವ ಮಂದಾರ ಪುಷ್ಪ"ಎಂದು.
ಸಾಧನೆ ಹಾದಿಯಲ್ಲಿ ಬರುವ ಪ್ರತಿ ಸಂದರ್ಭಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ, ನಾವು ಮಾಡುವ ಪ್ರತಿ ಕೆಲಸದಲ್ಲೂ ಭಗವಂತನ ಅನುಗ್ರಹ ಇರುತ್ತದೆ, ನಾವು ಏನನ್ನು ಬಯಸುತ್ತೇವೆಯೋ ಅದನ್ನು ನಮಗೆ ಈ ನಿಸರ್ಗ ಕೊಡುತ್ತದೆ, ನೇರ ಮಾರುಕಟ್ಟೆಯಲ್ಲಿ ನಿಮ್ಮ ಸುದೀರ್ಘ ಅನುಭವ ಯಶಸ್ಸಿಗೆ ಮೆಟ್ಟಲಾಗಿ ನಿಲ್ಲುತ್ತದೆ, ನಿಮ್ಮ ಅನುಭವ ನಮ್ಮಂತ ಎಷ್ಟೋ ಜನರ ಜ್ಞಾನಾರ್ಜನೆಗೆ ಸಹಕಾರವಾಗಲಿ, ಭಗವಂತ ಆ ಅದ್ಭುತ ಶಕ್ತಿಯನ್ನು ತಮಗೆ ಅನುಗ್ರಹಿಸಲಿ ಎಂದು ಬೇಡಿಕೊಳ್ಳುತ್ತೇವೆ.ನಿಮ್ಮ ಆಶಾಭಾವನೆಯ ಸಂದೇಶವನ್ನು ಓದಿ ಬಹಳ ಸಂತೋಷವಾಯಿತು.
ದೇವರು ತಮಗೆ ಆಯಸ್ಸು, ಆರೋಗ್ಯ, ಐಶ್ವರ್ಯ ಸಕಲವನ್ನು ಅನುಗ್ರಹಿಸಲಿ ನಿಮ್ಮಿಂದ ಸರ್ವರಿಗೂ ಒಳಿತಾಗಲೆಂದು ಬಯಸುತ್ತೇವೆ. ವಂದನೆಗಳೊಂದಿಗೆ 🙏💐
Subscribe to:
Posts (Atom)
ಶಂಖಪುಷ್ಪ ಹೂವಿನ ಪ್ರಮುಖ ಔಷಧೀಯ ಗುಣಗಳು ಮತ್ತು ಉಪಯೋಗಗಳು:
🌸🌿ಆಯುರ್ವೇದದಲ್ಲಿ ಶಂಖಪುಷ್ಪ (Butterfly Pea) ಹೂವು ಅತ್ಯಂತ ಶಕ್ತಿಶಾಲಿ ಔಷಧೀಯ ಮೂಲಿಕೆಯಾಗಿದೆ。 ಇದು ಮೆದುಳಿನ ಶಕ್ತಿ ಹೆಚ್ಚಿಸಲು, ಒತ್ತಡ ಕಡಿಮೆ ಮಾಡಲು, ಜೀರ್ಣಕ್...
Green World
-
ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ? ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿಯನ್ನು ಸಂಪೂರ್ಣವಾಗಿ ...
-
"Start each day with a grateful heart and a positive mind". "ಪ್ರತಿ ದಿನವನ್ನು ಕೃತಜ್ಞತಾಪೂರ್ವಕ ಹೃದಯ ಮತ್ತು ಸಕಾರಾತ್ಮಕ ಮನಸ್ಸಿನಿಂದ ಪ...