www.dgnsgreenworld.blogspot.com

Wednesday, August 28, 2019

ದೇವರಿಗೂ ಆಸ್ಪತ್ರೆಗೂ ಇರುವ ವ್ಯತ್ಯಾಸ?

SAVE NATURE, HEALTHY, WEALTHY & WISE. dgnsgreenworld Family



                ಒಬ್ಬ 80 ವರ್ಷದ ಮುದುಕನಿಗೆ ಹೃದಯ ಶಸ್ತ್ರಚಿಕಿತ್ಸೆಯಾಯಿತು. ಆಸ್ಪತ್ರೆ ಬಿಲ್ 8 ಲಕ್ಷ ಬಿಲ್ ನೋಡಿ ಮುದುಕ ಕಣ್ಣೀರು ಹಾಕಿದ ಅದನ್ನು ಕಂಡ  ವೈದ್ಯರು ಅಳಬೇಡಿ ನಿಮ್ಮ ಬಿಲ್ ಸ್ವಲ್ಪ ಕಡಿಮೆ ಮಾಡುತ್ತೇವೆ.
                 ಮುದುಕ.... ಸರ್ ಬಿಲ್ ತುಂಬಾ ಕಡಿಮೆ 10 ಲಕ್ಷ ತುಂಬಲು ನಾನು ಯೋಗ್ಯನಾಗಿರುವೆ, ನಾನು ಅತ್ತಿದ್ದು ಅದಕ್ಕಲ್ಲ ಯಾಕೆಂದರೆ ಆ ಪರಮಾತ್ಮ 80 ವರ್ಷ ನನ್ನ ಹೃದಯವನ್ನು ಜೋಪಾನವಾಗಿ ಕಾಪಾಡಿದ್ದಕ್ಕೆ ಯಾವುದೇ ಬಿಲ್ ನನಗೆ ಕಳಿಸಲಿಲ್ಲ, ನೀವೂ ಕೇವಲ ಮೂರು ಗಂಟೆ ನನ್ನ ಹೃದಯ ಬಡಿತ ಕೆಲಸ ಕಾರ್ಯನಿರ್ವಹಿಸಲು  ಎಂಟು ಲಕ್ಷ ರೂಪಾಯಿಯೇ... ??

                ಓ ಪರಮಾತ್ಮ ನೀನೇ ನಮ್ಮ ಮೇಲೆ ಎಷ್ಟು ಕಾಳಜಿ ವಹಿಸುತ್ತೀಯಾ, ನೀನು ನಮ್ಮ ಒಂದೊಂದು ಅಂಗಾಂಗದ ಮೇಲು ಬೆಲೆ ಕಟ್ಟಲಾಗದ ಹೂಡಿಕೆ ಮಾಡಿದ್ದಿಯ, ನಮ್ಮ ದೇಹದ ಯಾವುದೊ ಒಂದು ಅಂಗ ಕೆಲಸ ಮಾಡಲಿಲ್ಲ ಅಂತ ಡಾಕ್ಟರ್ ಬಳಿ ಹೋದಾಗಲೇ ನಿನ್ನ ಬೆಲೆ ನಮಗೆ ಅರ್ಥವಾಗುವುದು. ನೀನು ಯಾವುದೇ ಪ್ರತಿಫಲ ಬಯಸದ ಉತ್ಪಾದಕ ನೀನು ಉತ್ಪಾದಿಸಿದ ಅಂಗವನ್ನು ಊನ ಮಾಡಿ ರಿಪೇರಿ ಮಾಡಿಸಲು ಲಕ್ಷಾಂತರ ಹಣ ಕೊಟ್ಟು,ಭ ಭಕ್ತಿಯಿಂದ ನಿಮಗಿಂತಲೂ ಒಂದು ಮಾರು ಮೇಲೆ ಎಂಬಂತೆ ವೈದ್ಯರಿಗೆ ನಮಸ್ಕಾರ ಹೇಳಿ ಬರುತ್ತೇವೆ.
           ಆದರೂ
ನೀನು ಕೋಪಗೊಳ್ಳುವುದಿಲ್ಲ ನಮ್ಮ ಯೋಗಕ್ಷೇಮದ ಹೊಣೆ ಹೊತ್ತಿದ್ದೀಯ ಎಂಥಹ ಕರುಣಾಳು ನೀನು
ನಿನಗೆ ಕೊಡಲು ನನ್ನ ಬಳಿ ಏನಿದೆ
...... ರಾತ್ರಿ ಕರೆಂಟು ಬಳಿಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಬಿಸಾಡುತ್ತಾರೆ
ಸೂರ್ಯನ ಬೆಳುಕು ಬಿಸಿಲಿಗೆ ಯಾವುದೇ ಬಿಲ್ಲಿಲ್ಲ.
..... ನೀರು ಬಲಿಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಬಿಸಾಡುತ್ತಾರೆ
ಕಾಲುವೆ ಬಾವಿ ಏರಿ ಕೆರೆ ಸಮುದ್ರಗಳು ಕೊಟ್ಟ ನಿನಗೆ ಯಾವುದೇ ಬಿಲ್ ಕಟ್ಟುವುದಿಲ್ಲ.
..... a  c ಗಾಳಿಗಾಗಿ ಲಕ್ಷಾಂತರ ವ್ಯಯಸುತ್ತೇವೆ
ನೀನು ಕೊಟ್ಟ ಪರಿಶುದ್ಧ ಗಾಳಿಗೆ ಯಾವುದೇ ಬಿಲ್ಲಿಲ್ಲ.
ಯಾವ ಪಾವತಿಯನ್ನು ಅಪೇಕ್ಷಿಸದೆ ಸಕಲ ಜೀವರಾಶಿಯನ್ನು ಕಾಪಾಡುತ್ತಿರುವ ದೇವರೇ ನಿಮಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು.

ವಂದನೆಗಳೊಂದಿಗೆ

          ಸರ್ವೇಜನಾ ಸುಖಿನೋಭವಂತೋ

Monday, August 26, 2019

ರತನ್ ಟಾಟಾ ಹೇಳಿದ ಊಟದ ಸ್ಟೋರಿ.

SAVE NATURE, HEALTHY, WEALTHY & WISE. dgnsgreenworld Family
*ರತನ್ ಟಾಟಾ* ಹೇಳಿದ
“ *ಊಟದ ಸ್ಟೋರಿ*”:

ವಿಶ್ವದ ಶ್ರೀಮಂತ ಉಧ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ ರತನ್ ಟಾಟಾ ಜರ್ಮನಿಯಲ್ಲಿ  ತಮಗೆ ಎದುರಾದ ಒಂದು ಸನ್ನಿವೇಶವನ್ನ ಹಂಚಿಕೊಂಡಿದ್ದಾರೆ.

ಒಂದು ಸಾರಿ ನಾವು ಜರ್ಮನಿಗೆ ಹೊಗಿದ್ದೆವು.
ಅದು ಪ್ರಪಂಚದ ಅಭಿವೃದ್ಧಿ ದೇಶಗಳಲ್ಲಿ ಒಂದು.

ಹಂಬರ್ಗ್ ನಲ್ಲಿ  ಊಟ ಮಾಡಲು ಅಲ್ಲಿನ ಹೋಟೆಲ್’ಗೆ ಹೋದೆವು.
ಬಹಳ ಟೇಬಲ್ ಖಾಲಿ ಇವೆ.

ನಮಗೆ ಆಶ್ಚರ್ಯವಾಯಿತು.

ಅಲ್ಲಿ ಎಲ್ಲರೂ ಒಂದು-ಎರಡು ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದಾರೆ.

ಒಂದು ಮೂಲೆಯ ಟೇಬಲ್ ನಲ್ಲಿ ವೃದ್ಧರು ಒಂದೇ ಊಟ ತರಿಸಿಕೊಂಡು ಅದನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು.

ನಮಗೆ ಶ್ರೀಮಂತ ದೇಶದಲ್ಲಿ ಹೀಗೆ ತಿನ್ನುತ್ತಿದ್ದರಲ್ಲ ಎನ್ನಿಸಿತು.

ನಾವು ನಮ್ಮ ಸ್ಟೇಟಸ್ ಗೆ ತಕ್ಕಂತೆ ತರತರದ ತಿನಿಸುಗಳನ್ನು ತರಿಸಿಕೊಂಡು ತಿಂದೆವು.
ನಮ್ಮವರು ಕೆಲವು ತಿನಿಸುಗಳು ಇಷ್ಟವಾಲಿಲ್ಲವೆಂದು,
ಜಾಸ್ತಿ ಆಯಿತೆಂದು ಆಹಾರವನ್ನು ಪ್ಲೇಟ್ ನಲ್ಲಿಯೇ ಬಿಟ್ಟರು.!!

ನಾವು ಅಲ್ಲಿಂದ ಹೊರಡುವ ಸಮಯದಲ್ಲಿ ವೃದ್ಧ ಮಹಿಳೆಯೊಬ್ಬರು ನಮ್ಮ ಬಳಿ ಬಂದು ಹಾಗೆ ವೆಸ್ಟ್ ಮಾಡಬಾರದು ಅದು ನಮ್ಮ ಆಹಾರ ಎಂದಳು.!!

ನಮ್ಮವರು ಅದು ನಮ್ಮಿಷ್ಟ ಎಂದರು. ತಕ್ಷಣ ಪೋನ್ ತೆಗೆದು ಆಕೆ ಯಾರಿಗೋ ಪೋನ್ ಮಾಡಿದಳು.!!

ಪೊಲೀಸರು ಬಂದರು.!!!!

ನಡೆದಿದ್ದನ್ನು ಕೇಳಿದರು.
ನಮಗೆ 50 ಯೂರೋ ದಂಡ ಹಾಕಿದರು. ಮರುಮಾತನಾಡದೇ ಕಟ್ಟಿ ಬಂದೆವು.

ಅವರು ಹೇಳಿದರು
"ಹಣ ನಿಮ್ಮದು ಅಷ್ಟೇ,
ಇಲ್ಲಿಯ ಸಂಪನ್ಮೂಲಗಳಲ್ಲ.!!

ಇನ್ನೊಬ್ಬರು ತಿನ್ನುವುದನ್ನು ನೀವು ಹಾಳು ಮಾಡಿದ್ದೀರಿ.!!

ಆಮೂಲಕ ನೀವು ನಮ್ಮ ದೇಶದ ಸಂಪತ್ತನ್ನು ನಷ್ಟ ಮಾಡಿದ್ದೀರಿ.!!!

ದೇಶದ ಸಂಪತ್ತನ್ನು ನಷ್ಟ ಮಾಡುವ ಹಕ್ಕು ನಿಮಗಿಲ್ಲ.!!!"

ಇದು ನಮಗೆ ಒಂದು ಗುಣಪಾಠವಲ್ಲವೇ…?

“ *MONEY* *IS* *YOURS*
*BUT RESOURCES BELONGS TO THE SOCIETY*”

ವಂದನೆಗಳೊಂದಿಗೆ

Tuesday, August 13, 2019

Watch how Vijayapur-Solapur bridge is being collapsed!



SAVE NATURE, HEALTHY, WEALTHY & WISE. dgnsgreenworld Family

ಕೃಷ್ಣರಾಜಸಾಗರ ತುಂಬಿ ಅಣೆಕಟ್ಟೆಯಿಂದ ನೀರು ಹೊರಹೋಗುತ್ತಿರುವ ಮನಮೋಹಕ ದೃಶ್ಯವನ್ನು ನೋ...



SAVE NATURE, HEALTHY, WEALTHY & WISE. dgnsgreenworld Family

Fantastic martial arts skills with teamwork



SAVE NATURE, HEALTHY, WEALTHY & WISE. dgnsgreenworld Family

ವೈಜ್ಞಾನಿಕವಾಗಿ, ತಾಂತ್ರಿಕವಾಗಿ, ಮನುಷ್ಯ ಸಾಧನೆ ಗೈದರು ಪ್ರಕೃತಿಯ ಮುಂದೆ ಶೂನ್ಯ.



SAVE NATURE, HEALTHY, WEALTHY & WISE. dgnsgreenworld Family

ಜಲಾವೃತಗೊಂಡಿರುವ ಸುತ್ತೂರಿನ ಶ್ರೀ ಶಿವರಾತ್ರೇಶ್ವರ ಮಠದ ವಿಹಂಗಮ ನೋಟ.



SAVE NATURE, HEALTHY, WEALTHY & WISE. dgnsgreenworld Family

ಜಲಾವೃತಗೊಂಡಿರುವ ಸುತ್ತೂರಿನ ಶ್ರೀ ಶಿವರಾತ್ರೇಶ್ವರ ಮಠದ ವಿಹಂಗಮ ನೋಟ.



SAVE NATURE, HEALTHY, WEALTHY & WISE. dgnsgreenworld Family

Saturday, August 10, 2019

ಹೆಣ್ಣಿನ ಸೃಷ್ಟಿ

SAVE NATURE, HEALTHY, WEALTHY & WISE. dgnsgreenworld Family

ಹೆಣ್ಣಿನ ಸೃಷ್ಟಿ...
                                                                        ದೇವದೇವನು ಹೆಣ್ಣನ್ನು ಸೃಷ್ಟಿ ಮಾಡಿದಾಗ ಆರನೆಯ ದಿನ ಸರಿ ರಾತ್ರಿಯ ವರೆಗೂ ಕೆಲಸ ಮಾಡುತ್ತಿದ್ದ...
ಒಬ್ಬ ದೇವತೆ ಬಂದು ಕೇಳಿದಳು. 'ಏಕೆ ಅವಳಿಗಾಗಿ ಅಷ್ಟೊಂದು ಸಮಯ ಖರ್ಚು ಮಾಡುತ್ತಿರುವೆ?' 
ದೇವದೇವ ಉತ್ತರಿಸಿದ.  'ಇವಳನ್ನು ಸೃಷ್ಟಿಸಲು ನಾನು ಏನೇನು ಅಂಶಗಳನ್ನು ಪೂರ್ಣಗೊಳಿಸಬೇಕು ಎಂದು ನೋಡಿದೆಯಾ? '
'ಎಲ್ಲ ತರಹದ ತಿನಿಸುಗಳನ್ನು ಮಾಡಬೇಕು. ಅನೇಕ ಮಕ್ಕಳನ್ನು ಒಂದೇ ಸಮಯದಲ್ಲಿ ಅಪ್ಪಿಕೊಳ್ಳಲು ಸಮರ್ಥಳಾಗಿರಬೇಕು. ಗಾಯಗೊಂಡ ಮೊಣಕಾಲಿನ ಗಾಯದಿಂದ ಹಿಡಿದು ಘಾಸಿಗೊಂಡ ಹೃದಯದವರನ್ನು ಕೂಡ ಒಮ್ಮೆ ಆಲಿಂಗಿಸಿಕೊಂಡು ಅವರಿಗೆ ಸಾಂತ್ವನ ನೀಡಬೇಕು. ಇವೆಲ್ಲವನ್ನೂ ಅವಳು ಕೇವಲ ಎರಡು ಕೈಗಳಿಂದ ಮಾಡಬೇಕು. ಅಷ್ಟೇ ಅಲ್ಲ.
ಅವಳಿಗೆ ಅನಾರೋಗ್ಯ ಉಂಟಾದರೂ ತಾನೇ ಔಷಧಿ ಮಾಡಿಕೊಂಡು 18 ಗಂಟೆಗಳ ಕಾಲ ಕೆಲಸ ಮಾಡಬಲ್ಲಳು'.
ದೇವತೆಗೆ ಅಚ್ಚರಿಯ ಸಂತಸ.  'ಕೇವಲ ಎರಡೇ ಕೈಗಳಾ? ಅಸಾಧ್ಯ! 'ಎಂದಳು. 'ಇದೇನಾ ಸ್ಟ್ಯಾಂಡರ್ಡ್ ಮಾದರಿ? ' ಎಂದು ಹತ್ತಿರ ಬಂದು ಆ ಹೆಣ್ಣನ್ನು ಮುಟ್ಟಿದಳು.  'ಓ ದೇವದೇವಾ...  ಇವಳನ್ನು ಬಹಳ ಮೃದುವಾಗಿ ಮಾಡಿದ್ದೀ' ಎಂದಳು.
'ಹೌದು. ಇವಳು ಮೃದು. ಆದರೆ ಬಹಳ ಶಕ್ತಿವಂತಳಾಗಿ ಮಾಡಿದ್ದೇನೆ. ಅವಳು ಏನೇನು ತಡೆದುಕೊಳ್ಳಬಲ್ಲಳು... ಏನೇನು ಕ್ರಮಿಸಬಲ್ಲಳು ಎಂದು ನೀನು ಊಹಿಸಲಾರೆ.'
'ಇವಳು ಆಲೋಚನೆ ಮಾಡಬಲ್ಲಳಾ? '
'ಆಲೋಚನೆ ಮಾಡುವುದಷ್ಟೇ ಅಲ್ಲ... ತರ್ಕಬದ್ಧವಾಗಿ, ಸಕಾರಣವಾಗಿ ಮಾತಾಡಬಲ್ಲಳು ಮತ್ತು ವಿಚಾರಿಸಬಲ್ಲಳು'
ದೇವತೆ ಅವಳ ಕೆನ್ನೆಗಳನ್ನು ಮುಟ್ಟಿ 'ದೇವದೇವಾ, ಈ ಸೃಷ್ಟಿ ಸೋರುತ್ತಿದೆ. ಇವಳ ಮೇಲೆ ತುಂಬಾ ಹೊರೆ ಹೊರೆಸಿರುವೆ ನೀನು' ಎಂದಳು.
' ಅದು ಸೋರುವಿಕೆ ಅಲ್ಲ. ಕಣ್ಣೀರು' ಅವಳ ಮಾತನ್ನು ತಿದ್ದಿದ ದೇವದೇವ.
' ಈ ಕಣ್ಣೀರು ಯಾಕೆ? '
' ಕಣ್ಣೀರು ಅವಳ ಅಭಿವ್ಯಕ್ತಿ. ದುಃಖ, ಅನುಮಾನ, ಪ್ರೇಮ, ಒಂಟಿತನ, ನೋವು, ಕಷ್ಟಗಳು,ಹೆಮ್ಮೆ ಎಲ್ಲದಕ್ಕೂ'
ದೇವತೆ ಬಹಳ ಆನಂದದಿಂದ ,  'ದೇವದೇವಾ... ನೀನು ಎಲ್ಲವನ್ನೂ ಆಲೋಚಿಸಿರುವೆ. ಹೆಣ್ಣು ಒಂದು ಅದ್ಭುತ  ಸೃಷ್ಟಿ' ಎಂದಳು.
ದೇವದೇವ ನಗುತ್ತಾ' ಹೌದು. ಅವಳ ಶಕ್ತಿಗೆ ಗಂಡು ಅಚ್ಚರಿಗೊಳ್ಳುತ್ತಾನೆ. ತೊಂದರೆ, ಹೊರೆಗಳನ್ನು ಅವಳು ತಡೆದುಕೊಳ್ಳಬಲ್ಲಳು. ಅವಳದೇ ಆದ ಅಭಿಪ್ರಾಯ ಹೊಂದಿರಬಲ್ಲಳು. ಸಂತಸದ ಮತ್ತು ಪ್ರೀತಿಯ ಚಿಲುಮೆ ಅವಳು. ಚೀರಬೇಕು ಎನ್ನಿಸಿದಾಗಲೂ ಮುಗುಳ್ನಗಬಲ್ಲಳು. ಅಳಬೇಕೆನ್ನಿಸಿದಾಗ ಹಾಡಬಲ್ಲಳು. ಸಂತಸವಾದಾಗ ಅಳಬಲ್ಲಳು. ಹೆದರಿಕೆ ಆದಾಗ ನಗಬಲ್ಲಳು. ತಾನು ನಂಬಿದ್ದರ ಪರವಾಗಿ ಹೋರಾಡಬಲ್ಲಳು. ಬೇಷರತ್ತಿನ ಪ್ರೀತಿ ಅವಳದು. ಸನಿಹದವರು ಸತ್ತರೆ ಅವಳ ಮನ ಒಡೆಯುತ್ತದೆ. ಆದರೆ ಜೀವನದಲ್ಲಿಯೇ ಮತ್ತೆ ಶಕ್ತಿಯನ್ನು ಕಂಡುಕೊಳ್ಳುತ್ತಾಳೆ.'
ದೇವತೆ ಎಂದಳು. 'ಇವಳು ಪರಿಪೂರ್ಣಳಾ?'
'ಇಲ್ಲ. ಇವಳಲ್ಲಿ ಒಂದು ಲೋಪ ಇದೆ. ಅವಳ ಮೌಲ್ಯ ಎಷ್ಟು ಎಂಬುದನ್ನು ಬಹಳ ಸಲ ಮರೆಯುತ್ತಾಳೆ' ಎಂದ ದೇವದೇವ.
ಓ ಹೆಣ್ಣೇ ನೀನೊಂದು ನಿರಂತರ ಅದ್ಬುತ....
ಆಂಗ್ಲ ಲೇಖನದ ಭಾವಾನುವಾದ
ವಂದನೆಗಳೊಂದಿಗೆ
dgnsgreenworld

ಸಮುದ್ರವನ್ನು ಸೇರಲು, ಪ್ರವಾಹದಲ್ಲಿ ತೇಲಿ ಬಂದ ಬೋರ್ಡ್ ಗಳು.

SAVE NATURE, HEALTHY, WEALTHY & WISE. dgnsgreenworld Family

*ಸಮುದ್ರವನ್ನು ಸೇರಲು,  ಪ್ರವಾಹದಲ್ಲಿ  ತೇಲಿ ಬಂದ ಬೋರ್ಡ್ ಗಳು.*👇🏻

*ನಾಯಿ ಇದೆ ಎಚ್ಚರಿಕೆ...*

*ಅನುಮತಿ ವಿನಃ ಪ್ರವೇಶವಿಲ್ಲ...*

*ನೋಟೀಸ್ ಹಚ್ಚಬಾರದು*


*ಅನ್ಯ ಧರ್ಮೀಯರಿಗೆ ಅನುಮತಿ ನಿಷೇಧ*

*ಕೀಳು ಜಾತಿಯವರಿಗೆ ಪ್ರವೇಶವಿಲ್ಲ*

*ಭಂಟರ ಭವನ, ಕ್ರೈಸ್ತರ ಭವನ, ಮುಸ್ಲಿಂ ಜಮಾಹ, ಲಿಂಗಾಯತರ ಖಾನಾವಳಿ, ವೀರಶೈವ ಸಂಘ,*
*ಹಿಂದೂ ಸೇನೆ,ಶ್ರೀರಾಮ ಸೇನೆ. ಕ್ರಿಶ್ಚಿಯನ್ ಸಂಘಟನೆ,  ಮುಸ್ಲಿಂ ಸಂಘಟನೆ*

*ಬ್ರಾಹ್ಮಣರಿಗೆ ಮಾತ್ರ ಪ್ರವೇಶ*


*ಏಸುವಿನ ಮಕ್ಕಳು ಅಲ್ಲಾಹನ ಪ್ರಜೆಗಳು,*


*ಖಾಸಗಿ ಜಮೀನು, ಕಾಲು ದಾರಿಗೆ ಅವಕಾಶವಿಲ್ಲ*

*ಮನೆಯ ಮುಂದೆ ವಾಹನ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ*


*ಮನುಷ್ಯನ  ಅಹಂದತೆಗೆ ಸಮುದ್ರ ಈಗಲೂ ನಗುತ್ತಲೇ ಇದೆ...!*


*ಇನ್ನಾದರೂ ಬದಲಾಗು ಮಾನವ.! ಪ್ರೀತಿಯ ಸಂಕೇತದ‌ ಪ್ರತಿಫಲವಾಗಿ ಭೂಮಿಗೆ ಬಂದ್ದಿದಿಯಾ. ಬದುಕಿದಷ್ಟು‌ ದಿನ ಪ್ರೀತಿಯ ಹಂಚಿ ಹೋಗು.*🙏🏻
ವಂದನೆಗಳೊಂದಿಗೆ
dgnsgreenworld

Thursday, August 8, 2019

ಆತ್ಮಜ್ಞಾನದಿಂದ ಅಮೃತತ್ವ

SAVE NATURE, HEALTHY, WEALTHY & WISE. dgnsgreenworld Family

ಆತ್ಮಜ್ಞಾನದಿಂದ ಅಮೃತತ್ವ

 ಶ್ರೀವಾಣಿ

ಆತ್ಮಜ್ಞಾನದಿಂದ ಅಮೃತತ್ವ


ಶ್ರೀ ಸಿದ್ಧೇಶ್ವರ ಸ್ವಾಮೀಜಿ

ನಾವು ತೊಡುವ ಬಟ್ಟೆ ಸ್ವಚ್ಛವಾಗಿದ್ದರೆ, ಸುಂದರವಾಗಿದ್ದರೆ ನಮ್ಮ ಜೀವನವೂ ಅಷ್ಟೇ ಸುಂದರವಾಗಿರುತ್ತದೆ, ಸ್ವಚ್ಛವಾಗಿರುತ್ತದೆ. ಬಟ್ಟೆ ಎಂದಮೇಲೆ ಹಾಸು-ಹೊಕ್ಕು ಎರಡೂ ಇರಲೇಬೇಕು. ವಿದ್ಯೆ, ಅವಿದ್ಯೆ ಅಥವಾ ಜ್ಞಾನ ಮತ್ತು ಕರ್ಮ ಇವೆರಡೂ ನಮ್ಮ ಬಾಳ-ಬಟ್ಟೆಯ ಹಾಸು-ಹೊಕ್ಕು. ಅವೆರಡರಲ್ಲಿ ಒಂದಿಲ್ಲದಿದ್ದರೂ ನಮ್ಮ ಬಾಳಬಟ್ಟೆಯು ಸಿದ್ಧವಾಗಲಾರದು. ವಿದ್ಯೆ ಎಂದರೆ ಜ್ಞಾನ ಮಾಡಿಕೊಳ್ಳುವುದು, ಅವಿದ್ಯೆ ಎಂದರೆ ಕರ್ಮ ಅಥವಾ ದುಡಿಯುವುದು ಎಂದರ್ಥ. ಲಕ್ಷಾಂತರ ವರುಷದ ಜೀವವಿಕಾಸದ ಕಥೆಯನ್ನು ನೋಡಿದರೂ ಜ್ಞಾನ ಮತ್ತು ಕರ್ಮ ಇವೆರಡೇ ಮಾನವನ ಎಲ್ಲ ಪ್ರಗತಿಗೆ ಕಾರಣವಾಗಿವೆ.

ವಿದ್ಯಾಂಚಾವಿದ್ಯಾಂಚ ಯಸ್ತದ್ವೇದೋಭಯಂ ಸಹ |

ಅವಿದ್ಯಯಾ ಮೃತ್ಯುಂ ತೀತ್ರ್ವಾ ವಿದ್ಯಯಾಮೃತತ್ವಮಶ್ನುತೇ ||

(ಈ.ಉ.11)

ಆತ್ಮವಿದ್ಯೆ ಹಾಗೂ ನಿಷ್ಕಾಮಕರ್ಮಗಳೆರಡೂ ಭಿನ್ನವಲ್ಲ. ಅವೆರಡನ್ನು ಕೂಡಿಯೇ ಅರಿಯಬೇಕು; ಅಳವಡಿಸಿಕೊಳ್ಳಬೇಕು. ಸಾಧಕನು ನಿಷ್ಕಾಮ ಕರ್ಮದಿಂದ ಮೃತ್ಯುವನ್ನು ದಾಟುತ್ತಾನೆ. ಆತ್ಮಜ್ಞಾನದಿಂದ ಅಮೃತತ್ವವನ್ನು ಹೊಂದುತ್ತಾನೆ.

ನಾವು ಮಾಡುವ ಕರ್ಮಗಳ ಉದ್ದೇಶ ಸರಿಯಾಗಿಲ್ಲದಿದ್ದರೆ ಆತ್ಮಜ್ಞಾನ ಅಥವಾ ಅತ್ಮಾನಂದವು ದೊರೆಯಲಾರದು. ಪರಮಸತ್ಯ ಪರಮಾತ್ಮನ ಅರಿವಿಲ್ಲದೆ ಮಾಡಿದ ಕರ್ಮವು ಬಂಧನಕ್ಕೆ ಕಾರಣವಾಗುತ್ತದೆ. ಬರೀ ಪ್ರಾಪಂಚಿಕ ಆಶೆ-ಆಕಾಂಕ್ಷೆಗಳ ಪೂರೈಸುವುದೇ ಕರ್ಮಗಳ ಉದ್ದೇಶವಲ್ಲ. ಅದಕ್ಕಿಂತಲೂ ಶ್ರೇಷ್ಠವಾದ ಉದ್ದೇಶವು ನಾವು ಮಾಡುವ ಕರ್ಮಕ್ಕೆ ಇದೆ. ಜೀವನದಲ್ಲಿ ಪರಮಶಾಂತಿ, ಪರಮಾನಂದವನ್ನು ಪಡೆಯುವುದೇ ನಾವು ಮಾಡುವ ಎಲ್ಲ ಕರ್ಮಗಳ ಪರಮೋದ್ದೇಶವಾಗಿದೆ.

ಓರ್ವ ಕಲಾವಿದನ ಕೈಯಲ್ಲಿ ಒಂದು ಕುಂಚ ಸಿಕ್ಕರೆ ಸಾಕು ಒಂದು ಸುಂದರವಾದ ಕಲಾಕುಸುಮವು ಅರಳಿಬಿಡುತ್ತದೆ. ಬೇರೆಯವರ ಕೈಯಲ್ಲಿ ಸಿಕ್ಕರೆ ಸುಂದರವಾದ ಕಲೆಯೂ ಕೆಟ್ಟು ಹೋಗುತ್ತದೆ. ನೂರು ವಸಂತಗಳ ನಮ್ಮ ಆಯುಷ್ಯವೇ ಚಿತ್ರ ಬರೆಯುವ ಪರದೆ. ಸುಂದರವಾದ ಕರ್ಮಗಳೆಂಬ ಕುಂಚನ್ನು ಹಿಡಿದು, ಭಾವದ ಬಣ್ಣನ್ನು ಬಳಸಿ, ಜ್ಞಾನದ ಬೆಳಕಿನಲ್ಲಿ ನಾವು ನಮ್ಮ ಜೀವನದ ಅಪ್ರತಿಮವಾದ ಚಿತ್ರವನ್ನು ಬರೆಯಬಹುದಾಗಿದೆ. ಹೀಗೆ ಸುಜ್ಞಾನ, ಸತ್ಕರ್ಮಗಳಿಂದ ನಾವು ಈ ಜಗತ್ತಿನಲ್ಲಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು. ಪರಮಶಾಂತಿ, ಪರಮಾನಂದವನ್ನು ಅನುಭವಿಸಬೇಕು, ಇಲ್ಲದಿದ್ದರೆ ನಮ್ಮ ಜೀವನವು

ನಿರರ್ಥಕವಾದಂತೆಯೇ!

ಪ್ರಜಾಪ್ರೇಮಿಯಾದ ಮಹಾರಾಜ. ಅಂದು ಅವನ ಹುಟ್ಟುಹಬ್ಬ. ತನ್ನಿಮಿತ್ಯ ರಾಜನು ತನ್ನ ಪ್ರಜೆಗಳಿಗೆಲ್ಲ ಸಂತೋಷಕೂಟವನ್ನು ಏರ್ಪಡಿಸಿದ್ದ. ಇಷ್ಟೇ ಅಲ್ಲ ತನ್ನ ಹುಟ್ಟುಹಬ್ಬದ ದಿವಸ ಯಾರಾದರೂ ಅರಮನೆಗೆ ಬಂದು ತನ್ನನ್ನು ಭೇಟಿಯಾಗಬಹುದು ಎಂದು ಡಂಗುರ ಸಾರಿಸಿದ. ರಾಜನ ದರ್ಶನ ಹಾಗೂ ಸಂತೋಷಕೂಟ ಎರಡೂ ದೊರೆಯುತ್ತವೆ ಎಂದಮೇಲೆ ಕೇಳುವುದೇನಿದೆ? ಊರಿಗೆ ಊರೇ ಅರಮನೆಯತ್ತ ಮುಖ ಮಾಡಿತು. ರಾಜನ ದರ್ಶನಕ್ಕಾಗಿ ಅರಮನೆಗೆ ಬರುವವರಿಗೆಲ್ಲ ದಾರಿಯುದ್ದಕ್ಕೂ ಬಗೆ ಬಗೆಯಾದ ತಿಂಡಿ-ತಿನುಸುಗಳು, ಬಟ್ಟೆ-ಬರೆ, ಉಡಿಗೆ-ತೊಡಿಗೆಗಳನ್ನು, ಸಂಗೀತ-ನೃತ್ಯವನ್ನೂ ಉಚಿತವಾಗಿ ಕೊಡುವ ಏರ್ಪಾಡು ಮಾಡಿದ್ದರು. ಬಂದವರೆಲ್ಲರೂ ಉಚಿತವಾಗಿದ್ದ ತಿಂಡಿ-ತಿನುಸು, ಉಡಿಗೆ-ತೊಡಿಗೆ, ಸಂಗೀತ-ನೃತ್ಯಗಳಲ್ಲಿಯೇ ಮಗ್ನರಾಗಿ ಬಿಟ್ಟರು. ಅರಮನೆಯ ಹೂದೋಟದಲ್ಲಿದ್ದ ರಾಜನತ್ತ ಯಾರೊಬ್ಬರೂ ಹೋಗಲಿಲ್ಲ. ಸಂಜೆಯ ಸಮಯಕ್ಕೆ ಒಬ್ಬ ಹಿರಿಯ ಅನುಭವಿಕ ರೈತನು ಅರಮನೆಗೆ ಬಂದ. ತಕ್ಷ ಣ ರಸ್ತೆಯ ಬದಿಯಲ್ಲಿದ್ದ ಅಂಗಡಿಯವರು ಬನ್ನಿ ಬನ್ನಿ ಎಂದು ಕರೆದು 'ಇದರಲ್ಲಿ ನಿಮಗೇನು ಬೇಕು ತೆಗೆದುಕೊಳ್ಳಿ, ಎಲ್ಲವೂ ಉಚಿತ' ಎಂದು ಹೇಳಿದರು. ರೈತ ಹೇಳಿದ 'ನನಗೇನೂ ಬೇಡ, ಮಹಾರಾಜನಿಗೆ ಭೆಟ್ಟಿಯಾಗಬೇಕು ಅಷ್ಟೇ!' ಇಷ್ಟು ಹೇಳಿ ರೈತನು ನೇರವಾಗಿ ಹೂದೋಟದಲ್ಲಿದ್ದ ರಾಜನಿಗೆ ಭೇಟಿಯಾದ. 'ಬೆಳಗಿನಿಂದ ಸಂಜೆಯವರೆಗೆ ದಾರಿ ಕಾಯ್ದರೂ ಯಾರೂ ಬಂದಿರಲಿಲ್ಲ, ಈಗ ನೀನೊಬ್ಬನಾದರೂ ಬಂದೆಯಲ್ಲಾ' ಎಂದು ರಾಜನು ವಾತ್ಸಲ್ಯದಿಂದ ರೈತನನ್ನು ಆಲಂಗಿಸಿದಾಗ ಈರ್ವರ ಕಣ್ಣುಗಳಲ್ಲಿ ಆನಂದ ಭಾಷ್ಪ ಧಾರೆಯಿಟ್ಟಿತ್ತು!!

ನಾವಿರುವ ಈ ಪ್ರಪಂಚವೇ ಪರಮಾತ್ಮನ ಹೂದೋಟ. ನಾವೆಲ್ಲರೂ ಪ್ರಜೆಗಳು. ಭಕ್ತ ವತ್ಸಲನಾದ ಪರಮಾತ್ಮನು ನಮಗೆ ದರ್ಶನವನ್ನಿತ್ತು ನಮ್ಮನ್ನು ಉದ್ಧರಿಸಬೇಕೆಂದು ನಮಗಾಗಿ ನಿತ್ಯ ದಾರಿ ಕಾಯುತ್ತಾನೆ. ಪ್ರಪಂಚದ ವಿಷಯ ವ್ಯಾಮೋಹಗಳಲ್ಲಿ ಆಕಂಠಪೂರ್ತಿ ಮುಳುಗಿದ ನಮಗೆ ಆ ಮಹಾದೇವನತ್ತ ಹೋಗಲು ಸಮಯವೆಲ್ಲಿದೆ? ಬುದ್ಧ, ಬಸವ, ಮಹಾವೀರ, ಜ್ಞಾನೇಶ್ವರ ಮೊದಲಾದ ಬೆರಳಣಿಕೆಯ ಮಹಾತ್ಮರು ಮಾತ್ರ ಪ್ರಪಂಚದ ಎಲ್ಲ ಬಂಧನಗಳನ್ನು ಹರಿದೊಗೆದು ಆ ಪರಮಾತ್ಮನ ದಿವ್ಯ ದರ್ಶನ ಪಡೆದು ಧನ್ಯರಾದರು.

ಆಧಾರ : ಈಶ ಪ್ರಸಾದ

ವಂದನೆಗಳೊಂದಿಗೆ dgnsgreenworld

ಮಾನವೀಯತೆ ಎಂಬುದು ಆಸ್ತಿ ಅಂತಸ್ತಿನಲ್ಲಿಲ್ಲ. ಮನಸ್ಸಿನಲ್ಲಿದೆ.

SAVE NATURE, HEALTHY, WEALTHY & WISE. dgnsgreenworld Family

ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ.  ಮನಸ್ಸಿನಲ್ಲಿದೆ

ಒಂದು ಕುಟುಂಬವಿತ್ತು. ಅದರಲ್ಲಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಇದ್ದರು. ಊರಿನಿಂದ ಹೊರ ಬಂದ ಅವರು ರಸ್ತೆ ಬದಿಯಲ್ಲೇ ಇರುತ್ತಿದ್ದರು. ಅಲ್ಲೇ ಇದ್ದ ಪುಟ್ಟ ಟೆಂಟ್‌ಗಳಲ್ಲಿ ವಾಸವಿದ್ದರು. ದಿನ ಬರುತ್ತಿದ್ದಂತೆ ಒಂದು ಕುಟುಂಬ ಇದ್ದದ್ದು ಮೂರು ನಾಲ್ಕು ಕುಟುಂಬ ಆಗಿತ್ತು. ಅವರ ಮನೆ ಶ್ರೀಮಂತರೊಬ್ಬರು ಅವರ ಜೀವನ ಶೈಲಿ ದಿನವೂ ನೋಡುತ್ತಿದ್ದರು. ಆ ದಿನ ದುಡಿದರೆ, ಆ ದಿನ ತಿನ್ನಲು ಅನ್ನ ಸಿಗುತ್ತಿತ್ತು. ಒಂದು ದಿನ ಅವರಿಗೆ ಯಾವ ಕೆಲಸವೂ ಸಿಗದೆ ಖಾಲಿ ಕೈಲಿ ವಾಪಾಸಾದರು. ಮನೆ ಹೊರಗೆ ದಿನವೂ ಅಡುಗೆ ಮಾಡುತ್ತಿದ್ದವರು ಒಂದು ದಿನ ಸುಮ್ಮನಿದ್ದರೆ ಕಂಡೇ ಕಾಣುತ್ತದೆ.

ಅವರ ಸ್ಥಿತಿ ನೋಡಲಾರದೆ, ಇವರೇ ಅಡುಗೆ ಮಾಡಿಕೊಂಡು ಹೋಗಿ ಕೊಟ್ಟು ಬರಲು ನಿರ್ಧರಿಸಿದರು. ಅಂತೆಯೇ ಅಡುಗೆ ಮಾಡಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಮನೆಗೆ ನೀಡಿದರು. ಹತ್ತಿರದಿಂದ ಅವರನ್ನು ನೋಡಿದಾಗ ಅವರ ಕಣ್ಣಲ್ಲಿದ್ದ ಹೊಳಪು ಕಂಡಿತು. ಹಸಿವಿನಿಂದ ಅವರ ಮುಖ ಸುಸ್ತಾದಂತೆ ಕಾಣುತ್ತಿತ್ತೇ ಹೊರತು ಬೇರಾವುದಕ್ಕೂ ಕೊರತೆ ಇದ್ದಂತೆ ಕಾಣುತ್ತಿರಲಿಲ್ಲ. ಮನೆಯ ಹೆಣ್ಣು ಮಗಳೊಬ್ಬಳು ಎಲ್ಲರಿಗೂ ಊಟ ಬಡಿಸಿ, ಅರ್ಧ ಆಹಾರ ಮಿಕ್ಕಿಸಿ ಅದನ್ನು ಹೊರಗೆ ತೆಗೆದುಕೊಂಡು ಹೋದಳು. ಇದನ್ನು ಗಮನಿಸಿದ ಶ್ರೀಮಂತರು. ಇವರು ವಿಧಿ ವಿಧಾನಗಳನ್ನು ಮಾಡುತ್ತಾರೆ ಎನಿಸುತ್ತದೆ.

ಎಡೆಯ ಹೆಸರಿನಲ್ಲೋ, ಬೇರೆ ಯಾವುದೋ ರೀತಿ ನೀತಿ ಹೆಸರಿನಲ್ಲಿ ಊಟ ಚೆಲ್ಲಬಹುದು ಇವರ ಆಲೋಚನೆ. ಅಂತೆಯೇ ಆಕೆ ಬರುವಾಗ ಪಾತ್ರೆ ಖಾಲಿಯಾಗಿತ್ತು. ಶ್ರೀಮಂತರಿಗೆ ಕೋಪ ಬಂತು. ‘ ಕೊಟ್ಟದ್ದನ್ನು ಹೀಗೆ ವೇಸ್‌ಟ್ ಮಾಡುತ್ತೀರಲ್ಲಾ, ಅದೇ ಇದ್ದಿದ್ದರೆ ನಾಳೆಗೆ ಬರುತ್ತಿರಲಿಲ್ಲವಾ? ಅಥವಾ ಹೊಟ್ಟೆ ತುಂಬ ಎಲ್ಲರೂ ತಿನ್ನುತ್ತಿರಲಿಲ್ಲವಾ? ಎಂದರು. ಅದಕ್ಕೆ ಆಕೆ‘ ನಾನು ಆಹಾರ ಚೆಲ್ಲಲಿಲ್ಲ. ಅದರ ಬಗ್ಗೆ ಆಲೋಚಿಸುವುದು ಮಹಾಪಾಪ. ಅರ್ಧ ಆಹಾರವನ್ನು ಪಕ್ಕದ ಮನೆಯವರಿಗೆ ನೀಡಿ ಬಂದೆ. ಅವರೂ ನಮ್ಮಂತೆ ಏನೂ ತಿಂದಿರಲಿಲ್ಲ’ ಎಂದರು. ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ. ಮನಸ್ಸಿನಲ್ಲಿದೆ. ಆಹಾರದ ಬೆಲೆ ಹೆಚ್ಚಾಗಿ ಕಾಣುತ್ತದೆ ಅಲ್ಲವೆ?

ವಂದನೆಗಳೊಂದಿಗೆ. dgnsgreenworld

Friday, August 2, 2019

ಹೇಗಿರಬೇಕು ಮನೆಯ ವಾಸ್ತು?

SAVE NATURE, HEALTHY, WEALTHY & WISE. dgnsgreenworld FAMILY.

*ಹೇಗಿರಬೇಕು ಮನೆಯ ವಾಸ್ತು?*
           

ಮನೆ ಬೇಕಾದರೆ ಹೇಗಾದರೂ ಇರಲಿ
ಆದರೆ ಅದರ ಒಂದು ಮೂಲೆಯಲ್ಲಿ
ಮನಬಿಚ್ಚಿ ನಗಲು ಒಂದಷ್ಟು ಜಾಗವಿರಲಿ..

ಸೂರ್ಯನು ಎಷ್ಟಾದರೂ ದೂರವಿರಲಿ
ಅವನಿಗೆ ಮನೆಗೆ ಬರಲು ದಾರಿಯಿರಲಿ..

ಒಮ್ಮೊಮ್ಮೆ ಮಾಳಿಗೆಯ ಹತ್ತಿ
ತಾರೆಗಳನ್ನು ಅವಶ್ಯವಾಗಿ ಎಣಿಸಿ..
ಸಾಧ್ಯವಾದರೆ ಕೈಚಾಚಿ
ಚಂದಿರನನ್ನು ಮುಟ್ಟಲು ಪ್ರಯತ್ನಿಸಿ..

ಮಂದಿ ಬಳಗವನ್ನು ಆಗಾಗ ಭೇಟಿಯಾಗುವಿರಾದರೆ
ಮನೆಯ ಅಕ್ಕಪಕ್ಕ ನೆರೆಹೊರೆ ಖಂಡಿತ ಇರಲಿ..

ಮಳೆಯಲ್ಲಿ ನೆನೆಯಲು ಬಿಡಿ,
ಜಿಗಿದು ಕುಣಿದಾಡಲು ಬಿಡಿ..
ಸಾಧ್ಯವಾದರೆ ಮಕ್ಕಳಿಗೆ ಒಂದು
ಕಾಗದದ ದೋಣಿ ತೇಲಿಬಿಡಿಲು ಬಿಡಿ..

ಎಂದಾದರೊಮ್ಮೆ ಬಿಡುವಿದ್ದಾಗ, ಆಕಾಶವು ಶುಭ್ರ ವಿರುವಾಗ
ಒಂದು ಗಾಳಿಪಟವನ್ನು ಆಕಾಶದಲ್ಲಿ ಹಾರಿಬಿಡಿ..
ಸಾಧ್ಯವಾದರೆ ಒಂದು ಪಂದ್ಯವೂ ಆಡಿ ಬಿಡಿ..

ಮನೆಯ ಮುಂದೆ ಒಂದು ಮರವಿರಲಿ
ಅದರ ಮೇಲೆ ಕುಳಿತ ಪಕ್ಷಿಗಳ
ಮಾತುಕತೆ ಅವಶ್ಯವಾಗಿ ಕೇಳಿರಿ..



ಎಲ್ಲಿ ಬೇಕಾದರಲ್ಲಿ ಸುಳಿದಾಡಿ
ಹಾಗೆಯೇ ಅಲ್ಲೊಂದು ಸಿಹಿಯಾದ ಕೋಲಾ‌ಹಲವನ್ನು ಹರಡಿ..

ವಯಸ್ಸಿನ ಪ್ರತಿ ಘಟ್ಟವೂ ಆನಂದದಾಯಕ
ನಿಮ್ಮ ವಯಸ್ಸಿನ ಸಂಭ್ರಮವನ್ನು ಅನುಭವಿಸಿ..

ಜೀವಂತ ಹೃದಯವಿರಲಿ ಸ್ವಾಮಿ
ಆ ಮೊಗದಲ್ಲಿ ಉದಾಸೀನತೆ ಏಕೆ?
ಸಮಯ ಹೇಗೂ ಕಳೆದು ಹೋಗುತ್ತಿದೆ
ವಯಸ್ಸಿನ ಲೆಕ್ಕವದು ಹಾಳಾಗಿಹೋಗಲಿ..

ವಂದನೆಗಳೊಂದಿಗೆ
ಡಿಜಿನ್

Wednesday, July 31, 2019

dgnsgreenworld

Add me as a friend on YouTube! https://youtu.be/addme/KIcmdgVPQl_5JaxtS7Gu-2Bx9QApng

ಆರೋಗ್ಯವೇ ಭಾಗ್ಯ, ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ

SAVE NATURE, HEALTHY, WEALTHY & WISE. dgnsgreenworld FAMILY.

ಹೃದಯಘಾತ ದಿಡೀರ್ ಎಂದು ಬರುವುದಿಲ್ಲ, ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು.  ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣ,  ಮುನ್ಸೂಚನೆ ಎಂದು ಅರಿವಾಗುವುದಿಲ್ಲ.  ಬೇರೆಯವರಿಗೂ ಮನೆಯವರಿಗೂ  ಹೇಳುವುದಿಲ್ಲ.

*ಇಪರೀತ ಬೆವರುವುದು,*
*ಸುಸ್ತಾಗುವುದು,*
*ಯಾವುದಾದರು ರಟ್ಟೆ ವಿಪರೀತ ನೋಯುವುದು,*
*ಎದೆ ಕಿವುಚಿದಂತೆ ಆಗುವುದು*
ನಿರ್ಲಕ್ಷಿಸಬಾರದು

ಇಂಥ ಲಕ್ಷಣಗಳು ಹೆಚ್ಚಾಗಿ ನಡಿಗೆ ಮಾಡುವಾಗಲೂ, ಮೆಟ್ಟಿಲು ಹತ್ತುವಾಗಲೂ  ಕಾಣಿಸುತ್ತವೆ, ತಕ್ಷಣ ಆಸ್ಪತ್ರೆಯನ್ನು  ಸೇರಬೇಕು.

*ಗೊಲ್ಡನ್ ಅವರ್* - ಹೃದಯಾಘಾತವಾದ  ಮೊದಲ ಅರ್ಧ ಗಂಟೆಯ ಸಮಯ ವ್ಯರ್ಥ ಮಾಡಬಾರದು.

40 ವರ್ಷದ ನಂತರ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

*ವಯಸ್ಸಾದವರು, ಈಗಾಗಲೇ ನಿತ್ಯ ಚಿಕಿತ್ಸೆಯಲ್ಲಿ  ಇರುವವರು ಹೊರಗೆ ಹೋಗುವಾಗ ಯಾವಾಗಲು ಸಾಕಷ್ಟು ಹಣ, ಜಾರ್ಜ್ ಮಾಡಿದ ಮೊಬೈಲ್* (ಯಾವುದಾದರು), *ಎಟಿಎಂ ಕಾರ್ಡ್, ಐಡಿ ಕಾರ್ಡ್  ಮತ್ತು ನೀರಿನ ಬಾಟಲಿ* (200 ಎಂ.ಎಲ್. ಆದರೂ ಪರವಾಗಿಲ್ಲ) *ಜೊತೆಯಲ್ಲಿ  ತೆಗೆದುಕೊಂಡು ಹೋಗವುದು ಶ್ರೇಯಕರ*

ಸಾವಿಗೆ ಹೆದರಬಾರದು, ಸಾವು ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು.

ಯೋಗ ಮಾಡುವುದರಿಂದ, ನಿತ್ಯ ನಡಿಗೆ ಮಾಡುವುದರಿಂದ, ಮಾಂಸಾಹಾರ, ಮೊಟ್ಟೆ ತಿನ್ನದೆ ಶುದ್ಧ ಶಾಕಹಾರಿ ಯಾಗಿರುವುದರಿಂದ, ಬೊಜ್ಜು ದಪ್ಪ ಇಲ್ಲದೆ ಇರುವುದರಿಂದ, ತೆಳ್ಳಗೆ ಇರುವುದರಿಂದ, ಚಿಕ್ಕ ವಯಸ್ಸು ಇರುವುದರಿಂದ  ಹೃದಯಾಘಾತ ಆಗುವುದಿಲ್ಲ ಎಂಬುದು ತಪ್ಪು ತಿಳುವಳಿಕೆ. ಅನುವಂಶಿಕ ಕಾರಣಗಳು ಜೊತೆಗೆ ಇತರೆ ಕಾರಣಗಳು ಇರುತ್ತವೆ.

ಪ್ರತಿಯೊಬ್ಬರಿಗೂ ಹೃದಯದಲ್ಲಿ ರಕ್ತದ ಹೆಪ್ಪು (ಕ್ಲಾಟ್ )  ಸ್ವಲ್ಲವಾದರೂ ಇದ್ದೇ ಇರುತ್ತದೆ, ನಿಧಾನವಾಗಿ ಹೆಚ್ಚಾಗುತ್ತಿರುತ್ತದೆ. ನಡಿಗೆ, ವ್ಯಾಯಾಮ, ಸದಾ  ಚಟುವಟಿಕೆ, ಸರಿಯಾದ ಆಹಾರ ಕ್ರಮ, ಸರಳ ಜೀವನ ಇಲ್ಲವಾದಲ್ಲಿ ಬೇಗ ಹೆಪ್ಪುಗಟ್ಟುವುದು (ಕ್ಲಾಕ್) ಹೆಚ್ಚಾಗುತ್ತಿರುತ್ತದೆ, ಆದರೆ  ಮೇಲಿನ ಕಾರ್ಯ ಚಟುವಟಿಕೆಗಳನ್ನು ಪಾಲಿಸಿದರೆ  ನಿಯಂತ್ರಣದಲ್ಲಿರುತ್ತದೆ.

ಈ ಹೃದಯದ ಖಾಯಿಲೆ ಇ.ಸಿ.ಜಿ ಮಾಡಿದಾಗ ಗೊತ್ತಾಗುತ್ತದೆ. ಆಶ್ಚರ್ಯವೆಂದರೆ ಎಷ್ಟೋ ಜನಕ್ಕೆ ಇ.ಸಿ.ಜಿ ಮತ್ತು ಎಕೋಗ್ರಾಮ್ ಮಾಡಿದಾಗ ಹೃದಯದ ಖಾಯಿಲೆ ತಿಳಿಯುವುದಿಲ್ಲ. ಆದರೆ ಟಿ.ಎಂ.ಟಿ ಪರೀಕ್ಷೆ ಮಾಡಿದಾಗ ಖಂಡಿತ ಸ್ವಲ್ಲ ಪ್ರಮಾಣವಾದರು ಪತ್ತೆ ಹಚ್ಚುತ್ತಾರೆ, ಆಗ ಅಂಜಿಯೋಗ್ರಾಮ್ ಮಾಡಿಸಬೇಕಾಗುತ್ತದೆ. ಅಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಅತ್ಯಂತ ನಿಖರವಾಗಿ ಸ್ಪಷ್ಟವಾಗಿ ಕ್ಲಾಟ್ ಪ್ರಮಾಣ ಗೊತ್ತಾಗುತ್ತದೆ. ಕ್ಲಾಟ್‌ಗಳು ಒಂದಕ್ಕಿಂತ ಹೆಚ್ಚು ಕೂಡ  ಮೇಲ್ಪಟ್ಟು ಕೂಡ ಪತ್ತೆಯಾಗಿರುವುದು.  ನಂತರ ಸೂಕ್ತ ಚಿಕೆತ್ಸೆ ಪಡೆದುಕೊಂಡು  ಆರಾಮವಾಗಿ ಆರೋಗ್ಯವಾಗಿರಬಹುದು. ಏನು ಹೆದರುವ ಅವಶ್ಯಕತೆ ಇಲ್ಲ. ಸದಾ ಚಟುವಟಿಕೆಯಿಂದ ಇದ್ದರೆ ತಾನು ಹೃದ್ರೋಗಿ ಎಂದು ಅನಿಸುವುದೇ ಇಲ್ಲ, ಎಲ್ಲರಂತೆ ಸುಖ ಜೀವನ ನಡೆಸಬಹುದು.

ಬೇರೆ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ಹೊಂದಲು ಸಮಯವಿರುತ್ತದೆ.
ಆದರೆ..
*ಹೃದಯ  ಖಾಯಿಲೆ ಹಾಗಲ್ಲ, ಕೆಲವೊಮ್ಮೆ ಒಂದು ನಿಮಿಷ ಕೂಡ  ಸಮಯವನ್ನೇ ನೀಡುವುದಿಲ್ಲ, ತಕ್ಷಣ  ಸಾವಿಗೆ  ನೂಕಿ ಬಿಡುತ್ತದೆ. ಬದುಕಲು  ಅದೃಷ್ಟ ಬೇಕು*

ವೈದ್ಯರು ಹೇಳುವುದು ಒಂದೇ...

*ಉತ್ತಮ ಆಹಾರ ಕ್ರಮ ಅನುಕರಿಸುವುದು ಸೂಕ್ತ.
*ಸದಾ ಚಟುವಟಿಕೆಯಿಂದ ಇರುವುದು ಸೂಕ್ತ.
*ಸರಳ ಜೀವನ ನಡೆಸುವುದು ಸೂಕ್ತ.   ಸ್ನೇಹಿತರೆ ಆರೋಗ್ಯವೇ ಭಾಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.                ವಂದನೆಗಳೊಂದಿಗೆ.    💐🙏           dgnsgreenworld

ಹಾವು ಕಂಡಾಗ ಹುಲಿಗೂ ಒಂದು ಕ್ಷಣ ಭಯವಾಗುತ್ತೆ ನೋಡಿ



SAVE NATURE, HEALTHY, WEALTHY & WISE. dgnsgreenworld FAMILY.

ಬೆಲೆ ಕಟ್ಟಲಾಗದ ನೃತ್ಯಕಲೆ ಅಭಿನಯವನ್ನು ನೋಡಿ



SAVE NATURE, HEALTHY, WEALTHY & WISE. dgnsgreenworld FAMILY.

Friday, July 26, 2019

ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯ ಇತಿಹಾಸ



SAVE NATURE, HEALTHY, WEALTHY & WISE. dgnsgreenworld FAMILY.

ಶ್ರೀ ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, 'ದೇವಿ ಮಹಾತ್ಮೆ' ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ 'ದೇವಿ ಮಹಾತ್ಮೆ' ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟ ವೆಂಬ ಹೆಸರು ಬಂದಿದೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಅದರ ಪಶ್ಚಿಮ ಭಾಗದಲ್ಲಿರುವ ಚಾಮುಂಡಿಬೆಟ್ಟವು ಎಂಟು ಬೆಟ್ಟಗಳ ಪೈಕಿ ಒಂದಾಗಿದೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಹಿಂದೆ ಬೆಟ್ಟವನ್ನು ಮಹಾಬಲಾದ್ರಿ ಎಂದೂ ಸಹ ಕರೆಯಲಾಗುತ್ತಿತ್ತು.
ಹಿಂದೆ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನವೆಂಬ ದೊಡ್ಡ ದೇವಸ್ಥಾನವಾಗಿ ಅಭಿವೃದ್ಧಿಯಾಗಿದೆ ಎಂದು ತಿಳಿದುಬರುತ್ತದೆ. 1799 ರಲ್ಲಿ ಅಧಿಕಾರಕ್ಕೆ ಬಂದ ಮೈಸೂರು ಅರಸರು ಈ ದೇವಿ ಆರಾಧಕರಾಗಿದ್ದು, ಶ್ರಧ್ದಾ ಭಕ್ತಿಯಿಂದ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವನ್ನಾಗಿಸಿದ್ದಾರೆ. ಹಾಗೂ ಹೆಚ್ಚಿನ ಮಹತ್ವ ತಂದಿದ್ದಾರೆ.
ಚಾಮುಂಡಿಬೆಟ್ಟ ಚಾರಿತ್ರಿಕ ಹಿನ್ನಲೆಯಲ್ಲಿ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕೊಡುಗೆಯಿದೆ. 12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರದ ಅರಸರ ಹಿನ್ನಲೆಯನ್ನು ಗುರುತಿಸಲಾಗಿದೆ. ಕ್ರಿ.ಶ. 1573 ರಲ್ಲಿ ಚಾಮರಾಜ ಒಡೆಯರು ದೇವಿಯನ್ನು ಪೂಜಿಸಲು ಹೋಗುತ್ತಿದ್ದಾಗ ಅವರಿಗೆ ಸಿಡಿಲು ಬಡಿದು ಅವರ ತಲೆಯ ಕೂದಲೆಲ್ಲಾ ಉದುರಿ ಹೋದವೆಂದು ಇತಿಹಾಸ ಹೇಳುತ್ತದೆ.
ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯಲ್ಲಿ ನಿರ್ಮಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ದೇವಸ್ಥಾನ, ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ `ಗೋಪುರ` ಮತ್ತು ಗರ್ಭಗುಡಿಯ ಮೇಲೆ 'ವಿಮಾನ' ಶಿಖರಗಳಿವೆ. ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ. ಶಿಖರದ ಮೇಲೆ ಏಳು ಚಿನ್ನದ ಲೇಪಿತ ಕಲಶಗಳಿವೆ.
ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದದ್ದು. ಈ ಶಿಲಾಮೂರ್ತಿಯನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ. 1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ಸಾವಿರ ವರ್ಷಕ್ಕೂ ಹಿಂದಿನ ಹಿನ್ನಲೆಯಿರುವ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದರು. 'ಸಿಂಹವಾಹನ' ಒಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದರು. 'ಸಿಂಹ ವಾಹನ' ವನ್ನು ರಥೋತ್ಸವ ಸಂಧರ್ಭದಲ್ಲಿ ಬಳಸಲಾಗುತ್ತಿದ್ದು ಅದರಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥವನ್ನು ಎಳೆಯಲಾಗುತ್ತದೆ. ದ್ವಾರದ ಮೇಲ್ಭಾಗದಲ್ಲಿ ಸಣ್ಣದೊಂದು ಗಣಪತಿಯ ವಿಗ್ರಹವನ್ನು ನೋಡಬಹುದು. ದ್ವಾರದ ಬೃಹತ್ ಮರದ ಬಾಗಿಲನ್ನು ಬೆಳ್ಳಿಯ ತಗಡಿನಿಂದ ಹೊದಿಸಲಾಗಿದ್ದು, ಬೆಳ್ಳಿಯ ಬಾಗಿಲಿನ ಮೇಲೆ ದೇವಿಯ ಹಲವು ಸ್ವರೂಪಗಳನ್ನು ತೋರಲಾಗಿದೆ. ಮಹಾದ್ವಾರದ ಕೆಳ ಪಾರ್ಶ್ವದಲ್ಲಿ ಇಂದ್ರಾದಿ ಅಷ್ಠದಿಕ್ಪಾಲಕರ ವಿಗ್ರಹಗಳಿವೆ.
ಮಹಾದ್ವಾರದಿಂದ ಒಳಗೆ ಹೋದರೆ ಬಲಭಾಗದಲ್ಲಿ ದಕ್ಷಿಣಾಭಿಮುಖವಾಗಿ ಗಣಪತಿಯ ಸಣ್ಣ ವಿಗ್ರಹವು ಸ್ಥಾಪಿಸಲ್ಪಟ್ಟಿದೆ. ವಿಘ್ನರಾಜನಿಗೆ ನಮಿಸಿ ಕೆಲವು ಕಲ್ಲಿನ ಮೆಟ್ಟಿಲುಗಳನ್ನು ಹತ್ತಿಹೋದರೆ ದೇವಸ್ಥಾನದ ಬಲಿಪೀಠ ಮತ್ತು ಧ್ವಜ ಸ್ಥಂಭ ಕಂಡುಬರುತ್ತದೆ. ಬಲಿಪೀಠದ ಮೇಲೆ ದೇವಿಯ ಪಾದಗಳನ್ನು ರೂಪಿಸಲಾಗಿದೆ. ಇವೆರಡರ ಮುಂಭಾಗದಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ಸಣ್ಣದೊಂದು ನಂದಿ ವಿಗ್ರಹವಿದೆ. ಮಾತೆ ಚಾಮುಂಡಿಯನ್ನು ಅದು ವೀಕ್ಷಿಸುತ್ತಾ ಕುಳಿತಿದೆ. ಧ್ವಜ ಸ್ಥಂಭಕ್ಕೆ ಈಶಾನ್ಯದಲ್ಲಿ ಗೋಡೆಯ ಮೇಲೆ ಆಂಜನೇಯನ ವಿಗ್ರಹವಿದ್ದು ಅದಕ್ಕೂ ನಿತ್ಯ ಪೂಜೆ ಜರುಗುತ್ತದೆ. ಇಲ್ಲಿನ ಪ್ರವೇಶ ದ್ವಾರದಲ್ಲಿ ನಂದಿನಿ ಮತ್ತು ಕಮಲಿನಿ ಎಂಬ ದ್ವಾರಪಾಲಿಕೆಯರ ವಿಗ್ರಹಗಳು ದ್ವಾರದ ಎಡ ಮತ್ತು ಬಲ ಭಾಗದಲ್ಲಿವೆ.
ಗರ್ಭಗುಡಿಗೆ ಮುಂಚೆ ಇರುವ ಅ0ತರಾಳದ ಎಡಭಾಗದಲ್ಲಿ ಮುದ್ದಾದ ಗಣಪತಿ ವಿಗ್ರಹ ಮತ್ತು ಬಲಭಾಗದಲ್ಲಿ ಭೈರವ ದೇವರ ವಿಗ್ರಹಗಳಿವೆ. ಭೈರವ ದೇವರ ಎಡಭಾಗದಲ್ಲಿ ಚಾಮುಂಡಿಯ ಪಂಚಲೋಹದ ಸುಂದರ ಉತ್ಸವ ಮೂರ್ತಿಯಿದೆ. ಗಣಪತಿಯ ಬಲಭಾಗದಲ್ಲಿ ಭಕ್ತನ ದಿರಿಸು ತೊಟ್ಟಿರುವ ಮುಮ್ಮಡಿ ಕೃಷ್ಣರಾಜ ಒಡೆಯರ ಆರು ಅಡಿ ಎತ್ತರದ ಸುಂದರ ಭಕ್ತ ವಿಗ್ರಹ ಕಾಣಬರುತ್ತದೆ. ಮಹಾರಾಜರು ತಮ್ಮ ಮೂವರು ಪತ್ನಿಯರೊಂದಿಗೆ ದೇವಿಗೆ ಕೈಮುಗಿದು ನಿಂತಿದ್ದಾರೆ. ಮಹಾರಾಜರ ಎಡಭಾಗಗಳಲ್ಲಿ ನಿಂತಿರುವವರೆಂದರೆ ರಮಾವಿಲಾಸ, ಲಕ್ಷ್ಮಿವಿಲಾಸ ಮತ್ತು ಕೃಷ್ಣವಿಲಾಸ ಮಹಾರಾಣಿಯರು. ಇವರುಗಳ ಶಿಲಾ ವಿಗ್ರಹಗಳ ಪಾದದ ಬಳಿಯ ಪೀಠದ ಮೇಲೆ ಇವರುಗಳ ಹೆಸರುಗಳನ್ನು ಕೆತ್ತಲಾಗಿದೆ.
ದೇವಾಲಯದ ಅರ್ಚಕರು ತಾಯಿ ಸ್ವರೂಪದ ಶಿಲಾ ಪ್ರತಿಮೆಯನ್ನು ಪ್ರತಿ ದಿನ ಅಲಂಕರಿಸಿ ಪೂಜೆ ಮಾಡುತ್ತಾರೆ. ಯದುಕುಲದ ದೇವತೆಯಾಗಿ ಬೆಳೆದು ಬಂದಿರುವ ಶ್ರೀ ಚಾಮುಂಡೇಶ್ವರಿಗೆ ಮೈಸೂರಿನ ಮಹಾರಾಜರುಗಳು ಹಲವಾರು ಬೆಲೆಬಾಳುವ ಹಾಗೂ ಅಪರೂಪವಾದ ಕಾಣಿಕೆಗಳನ್ನು ಶ್ರಧ್ಧಾಭಕ್ತಿಯಿಂದ ಒಪ್ಪಿಸಿದ್ದಾರೆ. ಈ ಶಕ್ತಿ ದೇವತೆಗೆ ಮಾನವ ಮತ್ತು ಪ್ರಾಣಿ ಬಲಿಯನ್ನು ಹಿಂದೆ ಕೊಡಲಾಗುತ್ತಿತ್ತು. ಆದರೆ 18ನೇ ಶತಮಾನದಲ್ಲಿ ಅದಕ್ಕೆ ಕಡಿವಾಣ ಬಿತ್ತು. ಈಗೇನಿದ್ದರೂ ಫಲಪುಷ್ಪಗಳ ಅರ್ಚನೆ, ಹಣ್ಣು ಹೂವು ಸಮರ್ಪಣೆ ಮಾತ್ರ ಮಾಡಲಾಗುತ್ತದೆ.
ಗರ್ಭಗುಡಿಯ ಮೇಲ್ಭಾಗದಲ್ಲಿ ಇನ್ನೊಂದು ಸಣ್ಣ ಗೋಪುರ ಕಂಡು ಬರುತ್ತದೆ. ದೇವಾಲಯದ ಹೊರಗಿನಿಂದ 'ವಿಮಾನವನ್ನು' ಕಾಣಬಹುದು. ಒಳ ಪಾರ್ಶ್ವದಲ್ಲಿರುವ ಪ್ರಾಕಾರದಲ್ಲಿ ಹಲವು ಸಣ್ಣ ಮೂರ್ತಿಗಳಿದ್ದು ಅಲ್ಲಿಯೂ ಪೂಜೆ ಪುನಸ್ಕಾರಗಳು ಜರುಗುತ್ತವೆ. ಪ್ರಾಕಾರದಲ್ಲಿ ಪ್ರದಕ್ಷಿಣೆ ಮುಗಿಸಿ ದೇವಸ್ಥಾನದಿಂದ ಹೊರಹೋಗುವಾಗ ಶ್ರೀ ಆಂಜನೇಯಸ್ವಾಮಿ ದೇವರ ದರ್ಶನವನ್ನು ಮಾಡಬಹುದಾಗಿದೆ.

REDUCE PLASTICS AND SAVE NATURE

https://youtu.be/dJu9vh73YD4

Monday, July 22, 2019

SAVE NATURE, HEALTHY, WEALTHY & WISE. dgnsgreenworld FAMILY.

ಸದಾಪುಷ್ಪದ ಔಷಧೀಯ ಉಪಯೋಗಗಳು

SAVE NATURE, HEALTHY, WEALTHY & WISE. dgnsgreenworld FAMILY.

ಔಷಧೀಯ ಉಪಯೋಗಗಳು

ಸದಾಪುಷ್ಪವು ೬೬ ಬಗೆಯ ಕ್ಷಾರಪದಾರ್ಥಗಳನ್ನು ಹೊಂದಿದೆ. ಸದಾಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಎಲೆಗಳಲ್ಲಿ ದೊರಕುವ ವಿನ್‍ಕ್ರಿಸ್ಟಿನ್ ಮತ್ತು ವಿನ್‍ಬ್ಲಾಸ್ಟಿನ್‍‍ನನ್ನು ರಕ್ತದ ಕ್ಯಾನ್ಸರ್ನ ನಿವಾರಣೆಯಲ್ಲಿ ಬಳಸುತ್ತಾರೆ. ಮಧುಮೇಹ ರೋಗದ ನಿಯಂತ್ರಕವಾಗಿ ಬಳಸುತ್ತಾರೆ. ಎಳೆ ಮಗುವಿನ ಹೊಟ್ಟೆನೋವು ನಿವಾರಣೆಗೆ ಎಲೆಗಳ ರಸವನ್ನು ಉಪಯೋಗಿಸುತ್ತಾರೆ. ರಕ್ತದ ಒತ್ತಡದ ಸಮಸ್ಯೆಯಲ್ಲೂ ಸದಪುಷ್ಪದ ಕ್ಷಾರವನ್ನು ಬಳಸುತ್ತಾರೆ.


ರಕ್ತದ ಕ್ಯಾನ್ಸರ್ ವ್ಯಾಧಿಯಲ್ಲಿ

ಒಂದು ಹಿಡಿ ಎಲೆಗಳನ್ನು ತಂದು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಚೂರ್ಣ ಅಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಒಂದು ಚೆಂಬು ನೀರಿಗೆ ಹಾಕಿ ಕಾಯಿಸಿ ಆರಿಸಿ ಕುಡಿಯುವುದು. 3ಟೀ ಚಮಚ ದಿವಸಕ್ಕೆ 2ವೇಳೆ ಬೆಳಿಗ್ಗೆ ಮತ್ತು ಸಾಯಂಕಾಲ.     ಇಡೀ ಮಾನವಕೋಟಿಯನ್ನು ರಕ್ತದ ಕ್ಯಾನ್ಸರ್‍ನಿಂದ ಉಳಿಸುವ ಸಾಮಾಥ್ಯ ಈ ಗಿಡ ಕ್ಕಿದೆ ಅಂದರೆ ಅತಿಶಯೋಕ್ತಿಯಾಗಲಾರದು.

ಸಕ್ಕರೆ ಕಾಯಿಲೆಯಲ್ಲಿ

ಈ ಗಿಡದ ನಾಲ್ಕೈದು ಹಸಿರೆಲೆಗಳನ್ನು ತಂದು ಚೆನ್ನಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ತಿನ್ನುವುದು. ಅಥವಾ ಬರಿಹೊಟ್ಟೆಯಲ್ಲಿ ನಿತ್ಯ ಪುಷ್ಟಿ ಹೂಗಳನ್ನು ಅಗಿದು ತಿನ್ನುವುದು. ನಾಲ್ಕು ಬಿಳೀ ಪುಷ್ಪವನ್ನು ಅರ್ಧ ಬಟ್ಟಲು ನೀರಿಗೆ ಹಾಕಿ ಕಾಯಿಸಿ ಕಾಲು ಬಟ್ಟಲು ಕಷಾಯವನ್ನು ತಣ್ಣಗೆ ಮಾಡಿ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸುವುದು.

ಅಧಿಕ ರಕ್ತ ಒತ್ತಡದಲ್ಲಿ

ನಿತ್ಯಪುಷ್ಟಿ ಎಲೆಗಳನು ತಂದು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಳ್ಳುವುದು. ಒಂದು ಟೀ ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು. ತಣ್ಣಗಾದ ಮೇಲೆ 1/8 ಬಟ್ಟಲು ಕಷಾಯವನ್ನು ಸೇವಿಸುವುದು.

ಸುಟ್ಟ ಗಾಯ ಮತ್ತು ಬೊಬ್ಬಗಳಿಗೆ

ನಿತ್ಯಪುಷ್ಟಿಯ ಒಂದು ಹಿಡಿ ಹಸಿ ಎಲೆಗಳನ್ನು ತಂದು ಚೆನ್ನಗಿ ರಸ ತೆಗೆಯುವುದು ಈ ರಸದಲ್ಲಿ ಸ್ವಲ್ಪ ಹಸಿ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಮಡಿ ಗಾಯದ ಮೇಲೆ ಮಂದವಾಗಿ ಲೇಪಿಸುವುದು.

ಬೇಧಿ ಮತ್ತು ರಕ್ತ ಭೇಧಿಯಲ್ಲಿ

10ಗ್ರಾಂ ನಿತ್ಯಪುಷ್ಟೀಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು .ತಣ್ಣಗಾದ ಮೇಲೆ ಈ ಕಷಾಯವನ್ನು ಎರಡು ಭಾಗ ಮಾಡಿ ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಹೀಗೆ 5 ರಿಂದ 7 ದಿವಸ ಉಪಚಾರವನ್ನು ಮುಂದುವರೆಸುವುದು. ಮಲಬದ್ದತೆಯನ್ನು ಸಹ ನಿವಾರಿಸಬಲ್ಲ ಗುಣ ಈ ಮೂಲಿಕೆಗೆ ಇದೆ ಎಂದುತಿಳಿದು ಬಂದಿದೆ.

ಗಾಯಳುಗಳಿಂದ ರಕ್ತಸ್ರಾವ

ಗಾಯ ವಾಸಿಯಾಗಲು ಒಣಗಿದ ನಿತ್ಯಪುಷ್ಟಿ ಎಲೆಯನ್ನು ಗಾಯಗಳ ಮೇಲೆ ಹಾಕುವುದು.ಗಾಯಗಳು ವಾಸಿಯಾಗುವವು

ವಂದನೆಗಳೊಂದಿಗೆ
Dgnsgreenworld

Saturday, July 20, 2019

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ವಿಗ್ರಹದ ಇತಿಹಾಸದ ಬಗ್ಗೆ ವಿವರ ನೋಡಿ

SAVE NATURE, HEALTHY, WEALTHY & WISE. dgnsgreenworld FAMILY.
ಮೈಸೂರು ನಗರದಿಂದ ಸುಮಾರು 8- 10 ಕಿ.ಮೀ. ಸುತ್ತಳತೆಯ ಅಂತರದಲ್ಲಿರುವವರು ಚಾಮುಂಡಿ ಬೆಟ್ಟವನ್ನು ಸುಲಭವಾಗಿ ವೀಕ್ಷಿಸಬಹುದು ಹಾಗೂ ಚಾಮುಂಡಾಂಬೆ ದೇವಿಯು ಈ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ ಸುಮಾರು 3,489 ಅಡಿಗಳ ಎತ್ತರದಲ್ಲಿದ್ದು ಮತ್ತು ಮೈಸೂರುವಿನಿಂದ 13 ಕಿ.ಮೀ ಗಳ ಅಂತರದಲ್ಲಿರುತ್ತದೆ. ಈ ದೇವಿ ದೇವಸ್ಥಾನವನ್ನು ಮಹಾರಾಜರ ಕುಟುಂಬದವರಿಗೆ ಮನೆ ದೇವರಾಗಿತ್ತು ಮತ್ತು ಮಹಿಷಾಸುರನನ್ನು ಸಂಹರಿಸಿದ ಕಾರಣದಿಂದ "ಮಹಿಷಾಸುರಮರ್ದಿನಿ" ಎಂಬ ನಾಮಾಂಕಿತದಲ್ಲಿ ಮನೆ ದೇವಿಯಂತೆ ನಿರ್ಮಿಸಲಾಗಿತ್ತು. ಚಾಮುಂಡೇಶ್ವರಿ ದೇವಿಯನ್ನು ದುರ್ಗಾ ದೇವಿ ಅವರಾವತಾರವೆಂದು, ಕಾಳೀದೇವಿ ಮತ್ತು ಚಾಮುಂಡಾಂಬೆ ಎಂಬ ಹೆಸರುಗಳಿಂದ ವರ್ಣಿಸಲಾಗುತ್ತಿದೆ. ಚಾಮುಂಡೇಶ್ವರಿ ದೇವಸ್ಥಾನವನ್ನು ಬಹುಪಾಲು ಮಹಾರಾಜರ ಮನೆದೇವಿಯಂತೆ ನಿರ್ವಹಣೆ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿರುತ್ತದೆ. 1659 ರಲ್ಲಿ ದೊಡ್ಡ ದೇವರಾಜ ಒಡೆಯರ್ ಇವರ ಅವಧಿಯಲ್ಲಿ 1000 ಮೆಟ್ಟಿಲುಗಳನ್ನು ಮತ್ತು ಈಶ್ವರನಿಗೆ ಬಹುಪ್ರಿಯವಾದ ನಂದಿಯ ಬಹುದೊಡ್ಡ ನಂದಿ ವಿಗ್ರಹವನ್ನು ನಿರ್ಮಿಸಲಾಯಿತು. ಈ ವಿಗ್ರಹವು 16 ಅಡಿ (4.8 ಮೀಟರ್) ಮುಂಭಾಗ ಮತ್ತು 25 ಅಡಿ (7.5 ಮೀ) ಉದ್ದವಿರುತ್ತದೆ. ಈ ನಂದಿ ವಿಗ್ರಹಕ್ಕೆ ಬಹು ದೊಡ್ಡ ಮತ್ತು ಆಕರ್ಷಣೆಯಿಂದ ಕೂಡಿದ ಘಂಟೆಗಳನ್ನು ಇದರ ಕುತ್ತಿಗೆ ಭಾಗದಲ್ಲಿ ನಿರ್ಮಿಸಲಗಿದೆ. ನಂದಿ ಮತ್ತು ದೇವಸ್ಥಾನವು ಪಕ್ಕದಲ್ಲಿಯೇ ಇದ್ದು ಚಾಮುಂಡಿ ಬೆಟ್ಟಕ್ಕೆ ಹತ್ತುವ 700 ನೇ ಮೆಟ್ಟಿಲಿನ ಬಳಿಯೇ ನಿರ್ಮಿಸಲಾಗಿದೆ. ಕೃಷ್ಣದೇವರಾಜ ಒಡೆಯರ್ - III ಈ ದೇವಸ್ಥಾನದ 3 ಮಹಡಿಯ ಗೋಪುರವನ್ನು ಪ್ರವೇಶದ್ವಾರದಲ್ಲಿ ಚಿನ್ನದ ಲೇಪನಗಳಿಂದ ಇವರ ಮೂವರು ರಾಣಿಯರ ವಿಗ್ರಹಗಳೊಂದಿಗೆ 1827 ರಲ್ಲಿ ನಿರ್ಮಿಸಿರುತ್ತಾರೆ. ಇವರ ಅವಧಿಯಲ್ಲಿಯೇ ಉತ್ಸವಗಳನ್ನು ಮತ್ತು ಸಿಂಹವಾಹನ ಗಳನ್ನು 1843 ರಂದಲೂ ನಡೆಸುತ್ತಾ ಬಂದಿರುತ್ತದೆ. ಇಲ್ಲಿ ಲಕ್ಷ್ಮಿ ನಾರಾಯಣ ಸ್ವಾಮಿ ಮತ್ತು ಮಹಾಬಲೇಶ್ವರ ಸ್ವಾಮಿ ಎಂಬ ಎರಡು ದೇವಸ್ಥಾನಗಳನ್ನೂ ಸಹ ಶಿವನ ಲಿಂಗಾಕಾರವಾಗಿ ನಿರ್ಮಿಸಲಾಗಿದೆ. ಇದನ್ನು 1128 ಕಿ.ಶ.ದಿಂದಲೂ ಹೊಯ್ಸಳ ಆಳ್ವಿಕೆಯಲ್ಲಿ ಚತುರೋಕ್ತಿಯಲ್ಲಿ ಈ ಆವರಣವನ್ನು ಮಭಲಾ ಅಥವಾ ಮಬ್ಬಲಾ ತೀರ್ಥ ಮತ್ತು ಹೊಯ್ಸಳ ರಾಜನಾದ ವಿಷ್ಣುವರ್ದನ ರ ಸೇವಾರ್ಥವಾಗಿ ನಿರ್ಮಿತವಾಗಿರುವುದು ಕಂಡು ಬರುತ್ತದೆ.
ವಂದನೆಗಳೊಂದಿಗೆ
dgnsgreenworld

ನೊಣ ಕುಳಿತ ಆಹಾರ ತಿನ್ನಬಾರದೆಂದು ಯಾಕೆ ಹೇಳುತ್ತಾರೆ ಗೊತ್ತಾ? ಈ ಕೆಳಗಿನ ವಿಡಿಯೋ ನೋಡಿ

SAVE NATURE, HEALTHY, WEALTHY & WISE. dgnsgreenworld FAMILY.
ನೊಣ ಕುಳಿತ ಆಹಾರ ತಿನ್ನಬಾರದೆಂದು ಯಾಕೆ ಹೇಳುತ್ತಾರೆ ಗೊತ್ತಾ? ಈ  ವಿಡಿಯೋ  ನೋಡಿ
ಒಂದು ನೊಣ  ನಾವು  ತಿನ್ನುವ  ಆಹಾರದ  ಮೇಲೆ ಕುಳಿತಾಗ  ಆಗುವ  ಸನ್ನಿವೇಶ  ಇಲೆಕ್ಟ್ರಾನಿಕ್  ಮೈಕ್ರೋಸ್ಕೋಪ್ ಕ್ಯಾಮೆರಾ ಮುಖಾಂತರ  ಸೆರೆಹಿಡಿದದ್ದು  .
 ವಂದನೆಗಳೊಂದಿಗೆ
dgnsgreenworld

Thursday, July 18, 2019

Bramhi ( Bacopa Monnieri ) Health Benefits

SAVE NATURE, HEALTHY, WEALTHY & WISE. dgnsgreenworld FAMILY.


Brahmi is the small creeping herb with the numerous branchesLeaves are formed in pairs along the stems. Small- tubular, five petaled flowers are white- purple in colour. Its stem is soft, succulent, and hairy with the glands. Its ability to grow in water makes it a popular aquarium plant. It can even grow in slightly brackish conditions.

Medicinal uses :

It is used for curing problems on study, poor memory and concentration, work-related mental fatigue.
For the treatment of bronchitis, chronic cough, asthma, hoarseness, arthritis, rheumatism, backache, fluid retention, blood cleanser, chronic skin conditions, constipation, hair loss, fevers, digestive problems, depression, mental and physical fatigue and many more.
It is used to treat all sorts of skin problems like eczema, psoriasis, abscess and ulceration.
It stimulates the growth of skin, hair and nails. Brahmi posses anticancer activity.
It is taken to get relief from stress and anxiety.
According to the Ayurveda Brahmi has antioxidant properties. It has been reported to reduce oxidation of fats in the blood stream, which is the risk factor for cardiovascular diseases. Brahmi is considered as the main rejuvenating herb for the nerve and brain cells.

Wednesday, July 17, 2019

ಅತ್ಯುತ್ತಮ ಆರೋಗ್ಯಕ್ಕಾಗಿ ಬಿಲ್ವಪತ್ರೆ ಮರ

SAVE NATURE, HEALTHY, WEALTHY & WISE. dgnsgreenworld FAMILY.


ಬಿಲ್ವಪತ್ರೆಯು ಶಿವನಿಗೆ ಪ್ರಿಯವಾದುದು ಮತ್ತು ಶಿವಪೂಜೆಗೆ ಅತ್ಯಗತ್ಯವಾದದ್ದು. ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಬಿಲ್ವ ಎಂಬ ಪದಕ್ಕೆ ಎಲ್ಲ ನೋವನ್ನು ನಿವಾರಿಸುವ ಎಂಬವೂ ಅರ್ಥವಿದೆ. ಅದರಂತೆಯೇ ಈ ಬಿಲ್ವಪತ್ರೆಯಿಂದ ಆಗುವ ಉಪಯೋಗಗಳು ಅನೇಕ. ಬಿಲ್ವವೃಕ್ಷದ ವಿವಿಧ ಭಾಗಗಳು ವಿವಿಧ ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲಿ ನಾವು ಬಿಲ್ವಪತ್ರೆಯ ಗುಣಗಳನ್ನು ತಿಳಿಯೋಣ.
ಬಿಲ್ವದ ಎಲೆಯಲ್ಲಿನ ಲಾಕ್ಸೇಟಿವ್ ಅಂಶವು ಮಧುಮೇಹ ನಿಯಂತ್ರಣಕ್ಕೆ ಬಹು ಉಪಕಾರಿಯಾಗಿದೆ. ಬಿಲ್ವಪತ್ರೆಯು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸುವುದರಿಂದ ಮಧುಮೇಹಿಗಳು ದಿನಕ್ಕೊಂದು ಎಲೆಯನ್ನು ಸೇವಿಸಬಹುದು. ಬಿಲ್ವಪತ್ರೆಯಲ್ಲಿನ ಒಳ್ಳೆಯ ಅಂಶವು ಕಾಲರಾ ಹಾಗೂ ಭೇದಿಯನ್ನು ಗುಣಪಡಿಸುವುದರಲ್ಲಿ ಸಹಾಯಕಾರಿ. ಅತಿಸಾರ, ಜ್ವರ, ಮೂತ್ರಸಂಬಂಧಿತ ರೋಗಗಳಿಗೆ ಬಿಲ್ವಪತ್ರೆ ಸಿದ್ಧೌಷಧ. ಈ ಸಮಸ್ಯೆಗಳಿಂದ ಬಳಲುತ್ತಿರುವವರು ನಿಯತವಾಗಿ ಬಿಲ್ವದ ಎಲೆಯ ಕಷಾಯಸೇವನೆ ಮಾಡಬೇಕು. ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಬಿಲ್ವಪತ್ರೆ ಉತ್ತಮ ಔಷಧ.ಬಿಲ್ವಪತ್ರೆಯು ಕೂದಲಿನ ಆರೋಗ್ಯಕ್ಕೂ ಸಹಾಯಕಾರಿ. ತಲೆಸ್ನಾನವನ್ನು ಮಾಡುವ ಅರ್ಧಗಂಟೆಯ ಮೊದಲು ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಬೇಕು. ಇದರಿಂದ ತಲೆಹೊಟ್ಟು ಮತ್ತು ಅಕಾಲ ನರೆಕೂದಲು ನಿವಾರಣೆಯಾಗುತ್ತದೆ. ದಿನಕ್ಕೆ ಎರಡರಿಂದ ಮೂರು ಚಮಚ ಬಿಲ್ವಪತ್ರೆಯ ರಸ ಸೇವಿಸುವುದರಿಂದ ನಿಶ್ಶಕ್ತಿ ದೂರವಾಗುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಬಿಲ್ವಪತ್ರೆಯ ಜೊತೆ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಮಲಬದ್ಧತೆಯು ನಿವಾರಣೆಯಾಗುತ್ತದೆ. ಬಿಲ್ವಪತ್ರೆಯಲ್ಲಿನ ಆಂಟಿ ಫಂಗಲ್ ಮತ್ತು ಆಂಟಿ ವೈರಲ್ ಗುಣಗಳು ದೇಹದಲ್ಲಾಗುವ ಅನೇಕ ಇನ್​ಫೆಕ್ಷನ್​ಗಳನ್ನು ಗುಣಪಡಿಸುವುದರಲ್ಲಿ ಸಹಕಾರಿಯಾಗಿದೆ.
ವಂದನೆಗಳೊಂದಿಗೆ dgnsgreenworld

Saturday, July 13, 2019

ದೇಹದ ತೂಕ ಹೆಚ್ಚಳಕ್ಕೆ ಹಾಗೂ ಕಣ್ಣಿನ ಆರೋಗ್ಯಕ್ಕೆ ಸಿಹಿಗುಂಬಳ ಅತ್ಯುತ್ತಮ

SAVE NATURE, HEALTHY, WEALTHY & WISE. dgnsgreenworld FAMILY.
ದೇಹ ತೂಕ ಹೆಚ್ಚಳಕ್ಕೆ, ಕಣ್ಣಿನ ಆರೋಗ್ಯಕ್ಕೆ ಸಿಹಿಗುಂಬಳ ಅತ್ಯುತ್ತಮ.

pumpkin
1. ಈ ತರಕಾರಿಯಲ್ಲಿ ಎ ಜೀವಸತ್ವ ಹೇರಳವಾಗಿರುವುದರಿಂದ ಕಣ್ಣುಗಳ ದೃಷ್ಟಿ ತೀಕ್ಷ್ಣ ಗೊಳಿಸುತ್ತದೆ


2. ಮೂಲವ್ಯಾಧಿ ಪೀಡಿತರಿಗೂ ಈ ತರಕಾರಿಯ ಸೇವನೆ ತುಂಬಾ ಒಳ್ಳೆಯದು.

3. ಇದರ ಬೀಜವನ್ನು ನುಣ್ಣಗೆ ಅರೆದು ಹಸುವಿನ ಹಾಲು ಮತ್ತು ಜೇನುತುಪ್ಪಗಳೊಂದಿಗೆ ಬೆರೆಸಿ ಸೇವಿಸುತ್ತಿದ್ದರೆ ಶರೀರದ ತೂಕ ಹೆಚ್ಚುತ್ತದೆ.
4. ಸಿಹಿಗುಂಬಳದಿಂದ ಮಾಡಿದ ಆಹಾರಗಳ ಸೇವನೆಯಿಂದ ಜ್ಞಾಪಕಶಕ್ತಿಯೂ ಉತ್ತಮಗೊಳ್ಳುತ್ತದೆ.

5. ಇದರ ಬೀಜಗಳಲ್ಲಿ ಜಂತುನಾಶಕ ಗುಣಗಳಿವೆ. ಸುಟ್ಟ ಗಾಯ, ಊತ ಮುಂತಾದ ಸಮಸ್ಯೆಗಳಿಗೆ ಇದರ ಎಲೆಗಳನ್ನು ಬಿಸಿ ಮಾಡಿ ಹೊದಿಸಿ ಕಟ್ಟಿದರೆ ಗಾಯ ಉಪಶಮನವಾಗುತ್ತದೆ.

6. ಸಿಹಿಗುಂಬಳ ಪೌಷ್ಟಿಕ ತರಕಾರಿ. ಅದರಲ್ಲಿ ಅಧಿಕ ಪ್ರಮಾಣದ ಶರ್ಕರ ಪಿಷ್ಟ, ಪ್ರೋಟೀನ್‌, ಖನಿಜಾಂಶ ಹಾಗೂ ವಿವಿಧ ಜೀವಸತ್ವಗಳು ಇರುತ್ತವೆ. ಇದರ ಎಲೆ ಮತ್ತು ಹೂಗಳೂ ಪೌಷ್ಟಿಕವಾಗಿರುತ್ತವೆ.

7. 100 ಗ್ರಾಂ ಸಿಹಿಗುಂಬಳದಲ್ಲಿ ತೇವಾಂಶ 92.8 ಗ್ರಾಂ, ಶರ್ಕರ ಪಿಷ್ಟ-4.6 ಗ್ರಾಂ, ಪ್ರೋಟೀನ್‌-1.4 ಗ್ರಾಂ, ಜಿಡ್ಡು-0.1 ಗ್ರಾಂ, ಖನಿಜಾಂಶ 0.6 ಗ್ರಾಂ ಇವೆ.

8. ಇದೇ ರೀತಿ ರಂಜಕ 30 ಮಿ.ಗ್ರಾಂ, ಕ್ಯಾಲ್ಷಿಯಂ 10 ಮಿ.ಗ್ರಾಂ, ಕಬ್ಬಿಣ-2.7 ಮಿ.ಗ್ರಾಂ ಇವೆ. 
ವಂದನೆಗಳೊಂದಿಗೆ
dgnsgreenworld

Friday, July 12, 2019

ಬಹುಪಯೋಗಿ ಬೇವಿನಸೊಪ್ಪು

SAVE NATURE, HEALTHY, WEALTHY & WISE. dgnsgreenworld FAMILY.
ಬಹುಪಯೋಗಿ ಬೇವಿನ ಸೊಪ್ಪು

ಒಂದು ಹಿಡಿ ಬೇವಿನ ಸೊಪ್ಪನ್ನು ಅರ್ಧ ಲೀಟರ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಆರಿದ ಮೇಲೆ ಸೋಸಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಹತ್ತಿಯಿಂದ ಈ ರಸವನ್ನು ಅದ್ದಿ ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕರಿ ಮಚ್ಚೆ ಮಾಯಾವಾಗುತ್ತದೆ.

1. ಬೇವಿನ ಮರ ಮನೆಯ ಬಳಿ ಇದ್ದರೆ ಬೇರೆ ಸೌಂದರ್ಯ ಸಾಧನೆಗಳಿಗೆ ಕೆಲಸ ಇರದು.

2. ಇದರ ಎಣ್ಣೆ ಔಷಧಿಯ ರೂಪದಲ್ಲಿ ಮತ್ತು ಸೌಂದರ್ಯ ವರ್ಧನೆ ವಸ್ತುವಾಗಿ ಹೆಚ್ಚು ಪ್ರಯೋಜನಕಾರಿ.
3. ಇದರಿಂದ ಚರ್ಮದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

4. ಮುಖದ ಮೇಲಿನ ಕಪ್ಪು ಕಲೆ, ಮೊಡವೆಗಳಿಗೆ ಬೇವಿನ ಸೊಪ್ಪಿನಿಂದ ಪರಿಹಾರ ಸಿಗುತ್ತದೆ.

5. ಒಂದು ಹಿಡಿ ಬೇವಿನ ಸೊಪ್ಪನ್ನು ಅರ್ಧ ಲೀಟರ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಆರಿದ ಮೇಲೆ ಸೋಸಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಹತ್ತಿಯಿಂದ ಈ ರಸವನ್ನು ಅದ್ದಿ ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕರಿ ಮಚ್ಚೆ ಮಾಯಾವಾಗುತ್ತದೆ.

6. ಚರ್ಮ ಶುಷ್ಕಗೊಂಡು ನವೆಯಾದರೆ ಬೇವಿನ ಕಷಾಯವನ್ನು ಸ್ನಾನದ ನೀರಿನಲ್ಲಿ ಸೇರಿಸಿ ಸ್ನಾನ ಮಾಡಿದರೆ ಒಳ್ಳೆಯದು.

7. ಬಿಸಿಲಿಗೆ ಮುಖ ಕಳೆಗುಂದಿದರೆ ಬೇವಿನ ಎಲೆ ಮತ್ತು ಗುಲಾಬಿ ದಳಗಳನ್ನು ಒಣಗಿಸಿ ಪುಡಿ ಮಾಡಿ. ಈ ಎರಡು ಚಮಚ ಪುಡಿಗೆ ಒಂದು ಚಮಚ ಮೊಸರು ಬೆರೆಸಿ ಮಿಕ್ಸ್‌ ಮಾಡಿ ಜೊತೆಗೆ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ಮುಖವನ್ನು ತಣ್ಣೀರಿನಲ್ಲಿ ತೊಳೆಯಿರಿ.

8. ಮುಖದಲ್ಲಿ ಜಿಡ್ಡಿದ್ದರೆ ಬೇವಿನ ಎಲೆಗಳ ಪುಡಿ, ಗಂಧದ ಪುಡಿ ಮತ್ತು ಗುಲಾಬಿ ದಳದ ಪುಡಿಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್‌ ಮಾಡಿ. ಒಂದು ಚಮಚ ಪುಡಿಗೆ ನಾಲ್ಕು ಹನಿ ಬೇವಿನ ಎಣ್ಣೆ, ಸ್ವಲ್ಪ ಜೇನು, ನಿಂಬೆ ರಸ ಹಾಕಿ ಕಲಸಿ ಮುಖಕ್ಕೆ ಹಚ್ಚಿ. ಇದು ಒಣಗಿದ ಮೇಲೆ ಬೆಚ್ಚನೆಯ ನೀರಿನಿಂದ ಮುಖ ತೊಳೆಯಿರಿ.  
 ವಂದನೆಗಳೊಂದಿಗೆ, dgnsgreenworld

KANER (YellowOleander) health benefits

SAVE NATURE, HEALTHY, WEALTHY & WISE. dgnsgreenworld FAMILY.   

Picture of Kaner (Yellow Oleander):
This is an large ornamental flowering shrub with beautiful sweet-smelling yellow flowers and glossy deep green leaves which have a waxy coating that reduces water loss. It is found in different variety like pink variety (Nerium oleander) and the related Yellow Oleander (sweet-smelling yellow, peach and white flowers and bright green clusters of thin long leaves) .Oleander is an easy growing plant in most conditions, especially in dry warm climates.It is very popular in India.

Medicinal uses :

Oleander has been used in the treatment of cardiac illness, asthma, diabetes, corns, scabies, cancer, and epilepsy.

Caution : All parts of the plant are toxic if eaten, particularly the fruit and seeds. In fact, oleander is reportedly a favorite suicide agent in Sri Lanka, where oleander poisonings exceed 150 per 100,000 each year.

There is no clinical evidence to support specific doses of oleander. Extreme caution should be used because of its acute cardiotoxicity.

NO MATTER WHAT YOU LOOK LIKE

SAVE NATURE, HEALTHY, WEALTHY & WISE. dgnsgreenworld FAMILY.

WE MUST SAVE TREES AND FORESTS

SAVE NATURE, HEALTHY, WEALTHY & WISE. dgnsgreenworld FAMILY.

*​🍎 ಮಳೆಗಾಲದಲ್ಲಿ ಸೇಬು ತಿನ್ನುವುದರಿಂದಾಗುವ ವಿಶೇಷ ಪ್ರಯೋಜನಗಳು:*

*_ಮಳೆಗಾಲದಲ್ಲಿ ಸೇಬು (Apple) ತಿನ್ನುವುದು ಅತ್ಯಂತ ಸುರಕ್ಷಿತ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ._* ​ಮಳೆಗಾಲದಲ್ಲಿ ಗಾಳಿಯಲ್ಲಿನ ತೇವಾಂ...

Green World