www.dgnsgreenworld.blogspot.com

Friday, December 27, 2019

ಬಿಟ್ಟು ಬಿಡಿ ಅವಳನ್ನು ಅವಳದೇ ಸಮಯ ಅನುಭವಿಸಲು.

SAVE NATURE, HEALTHY, WEALTHY & WISE. dgnsgreenworld Family

ಬಿಟ್ಟು ಬಿಡಿ ಅವಳನ್ನು
ಅವಳದೇ ಸಮಯ ಅನುಭವಿಸಲು.

ಮುಂಜಾನೆಯೇ ಎದ್ದು ಕಸಗೂಡಿಸಿ
ಒದ್ದೆಯಾದ ನೆಲದಲ್ಲಿ ರಂಗೋಲಿಯ ಬಿಡಿಸಿ

ಮಗಳ ಜಡೆಯ ಹೆಣೆದು‌‌ ಮಗನ ಕ್ರಾಪು ತೆಗೆದು
ಕೂಗುವ ಗಂಡನ ನಿಭಾಯಿಸಿ

ಉಸ್ಸೆಂದು ತುಸು ಬೆಚ್ಚಗಿನ ಚಹಾ ಕುಡಿಯಲು ಕುಳಿತಾಗ
ಬಿಟ್ಟು ಬಿಡಿ ಅವಳನು
ಅವಳದೇ ಸಮಯ ಅನುಭವಿಸಲು.

ಅಪರೂಪಕ್ಕೆ ಮನೆಮಂದಿಯೆಲ್ಲಾ
ಹೊರಗೆ ಊಟಕ್ಕೆ ಹೋದಾಗ
ತನ್ನ ಆಸೆಯ ಅದುಮಿಟ್ಟು
ನಿಮ್ಮ ಅಭಿರುಚಿಯ ತಿನಿಸುಗಳನ್ನು ತಯಾರಿಸಿ
ತನ್ನ ಇಷ್ಟದ ತಿಂಡಿಯನ್ನೇ ಮರೆತ
ಅವಳನ್ನು ಬಿಟ್ಟು ಬಿಡಿ ಅವಳದೇ ನೆಚ್ಚಿನ ಖಾದ್ಯ ಆರಿಸಲು.

ಸಂಬಂಧಿಕರ ಮದುವೆ ಮುಂಜಿಗಳಿಗೆ
ಸೀರೆಗೊಪ್ಪುವ ರವಿಕೆ ತೊಟ್ಟು ಸಿದ್ಧವಾಗುತ್ತಿರುವಾಗ
ನಿಮಗೆ ಒಪ್ಪುವ ದಿರಿಸು
ಮಕ್ಕಳು ಇಷ್ಟಪಡುವ ಉಡುಪು
ಅನುದಿನವು ಒಗೆದು ಇಸ್ತ್ರಿ ಮಾಡಿ
ನಿಮ್ಮನ್ನು ಮಕ್ಕಳನ್ನು ಕಳೆಗಟ್ಟುವಂತೆ ಮಾಡಿದ
ಬಿಟ್ಟುಬಿಡಿ ಅವಳನ್ನು ಅವಳ
ಇಷ್ಟದ ಬಟ್ಟೆಗಳ ಧರಿಸಲು

ಬೆಳೆಗ್ಗೆಯಿಂದ ಬಿಡುವಿಲ್ಲದ ಕೆಲಸದಲಿ
ಮೈಮನಗಳೆಲ್ಲಾ ಆಯಾಸದಿಂದ ಬಳಲಿರಲು
ಸಿಕ್ಕ ಅಲ್ಪ ಸಮಯದಲ್ಲೇ ತನ್ನ ನೆಚ್ಚಿನ ಧಾರವಾಹಿ ನೋಡಲೆಂದು ಅವಳು ಕುಳಿತಾಗ

ನಿಮ್ಮ ಮನರಂಜನೆಯ ಕಾರ್ಯಕ್ರಮಗಳಲಿ
ನೀವು ಮೈಮರೆತು ಕುಳಿತಿರಲು
ಸದ್ದಿಲ್ಲದೆ ರಾತ್ರಿ ಊಟ ತಯಾರಿಸಲು
ಕಣ್ಮರೆಯಾಗುವ ಅವಳನು
ಬಿಟ್ಟುಬಿಡಿ ಅವಳದೇ ಪ್ರಪಂಚದಲಿ ವಿಹರಿಸಲು

ಯಾವುದೋ ಒಂದು ದಿನ ಏಳುವುದು ತಡವಾಗಿ
ನಿಮಗೆ ತಿಂಡಿಯ ಕೊಡುವುದು ವಿಳಂಬವಾದರೆ
ತರೇವಾರಿ ಭಕ್ಷಗಳ ತಯಾರಿಸಿ
ಬಗೆಬಗೆಯ ಜನರ ಸಮ್ಮಾಳಿಸಿ
ಹಸಿದ ಹೊಟ್ಟೆಯ ತುಂಬಿಸಿದ ಆ ಮಾತೆಯನು
ಬಿಟ್ಟುಬಿಡಿ ಒಂದು ದಿನವಾದರೂ ಅವಳ ಸಮಯಕ್ಕೆ ಏಳಲು.

ಬಿಟ್ಟು ಬಿಡಿ ಅವಳನು ಜೀವಿಸಲು
ಕಳೆಯಲಿ ಸಮಯವ
ದಿಟ್ಟಿಸುತ ಕಿಟಕಿಯಲಿ
ನಡುವೆ ಗುಟುಕರಿಸುತ ಬಿಸಿ ಕಾಫಿಯ

ಜೀವನವಿಡೀ ತನ್ನ ಬಹುಪಾಲು ಸಮಯವ
ಕುಟುಂಬಕ್ಕೆ ಧಾರೆಯೆರೆದು
ಪೊರೆದ ಆ ಮಹಾತ್ಯಾಗಿಗೆ
ತನ್ನದೇ ಕೆಲವು ಕ್ಷಣಗಳನು
ತನಗಾಗಿ ಅನುಭವಿಸಲು
ಬಿಟ್ಟು ಬಿಡಿ.....‌. ಬಿಟ್ಟು ಬಿಡಿ.....‌‌..

ವಂದೆಗಳೊಂದಿಗೆ.
            

Thursday, December 26, 2019

ಅಸಂಬದ್ಧತೆಗಿಂತ ನಮ್ಮ ಜೀವನದಲ್ಲಿ ಶಾಂತಿಯೇ ದೊಡ್ಡದು

SAVE NATURE, HEALTHY, WEALTHY & WISE. dgnsgreenworld Family

ಜೀವನದಲ್ಲಿ ತುಂಬಾ ನೋವು, ಬೇಸರವಾದಾಗ ಬುದ್ಧನ ಈ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು!!
ಮನುಷ್ಯನು ತನ್ನ ಜೀವನದಲ್ಲಿ ಎಷ್ಟು ಒಳ್ಳೆಯವರಾಗಿದ್ದರೂ ಕೂಡ ಅವನಿಗೆ ಜನರು ಈ ಸಮಾಜದಲ್ಲಿ ಯಾವುದಾದರೂ ಒಂದು ವಿಷಯವನ್ನು ಇಟ್ಟುಕೊಂಡು ಅವನನ್ನು ಅಲ್ಲಗೆಳೆಯುತ್ತಾರೆ. ಆಗ ಅವನಿಗೆ ಅನಿಸುತ್ತದೆ ನಾನು ಜೀವನದಲ್ಲಿ ಇಷ್ಟು ಒಳ್ಳೆಯವನಾಗಿ ಯಾಕೆ ಇರಬೇಕು ಅಂತ. ಕೆಲವೊಮ್ಮೆ ಅವನಲ್ಲಿರುವ ಹುಮ್ಮಸ್ಸು ಕಡಿಮೆಯಾಗಿಬಿಡುತ್ತದೆ ಇಂಥ ಜನರ ನಡುವೆ ಹೇಗೆ ಇರೋದು ಅಂತ. ಆದರೆ ಸ್ನೇಹಿತರೇ ಜನರ ವರ್ತನೆಯಿಂದ ನೀವು ಎಂದಿಗೂ ಕೂಡ ಮನಸ್ಸನ್ನು ಬದಲಾಯಿಸಕೊಳ್ಬೇಡಿ. ನೀವು ಒಳ್ಳೆಯವರು ಅಥವಾ ನೀವು ಏನು ಅಂತ ನಿಮಗೆ ತಿಳಿದಿದ್ದರೆ ಸಾಕು.

ಹಾಗಾದರೆ ಮನುಷ್ಯನಿಗೆ ಬೇಸರವಾದಾಗ ಅಥವಾ ಅವನಲ್ಲಿರುವ ತಹ ಉತ್ಸಾಹ ಹುಮ್ಮಸ್ಸು ಕಡಿಮೆಯಾದಾಗ ಏನು ಮಾಡಬೇಕು ಅಂತ ಅನಿಸುತ್ತಾ ಇದ್ದರೆ ಬುದ್ಧನ ಈ ಮಾತುಗಳನ್ನು ನೆನಪಿಸಿಕೊಳ್ಳಿ. ಆಗ ನಿಮ್ಮಲ್ಲಿರುವ ಚೈತನ್ಯ ಹುಮ್ಮಸ್ಸು ಇನ್ನೂ ಹೆಚ್ಚುತ್ತದೆ. ಹಾಗಾದರೆ ಬುದ್ಧ ಹೇಳಿರುವಂತಹ ಆ ಮಾತುಗಳನ್ನು ತಿಳಿದುಕೊಳ್ಳೋಣ. ಸ್ನೇಹಿತರೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಇಷ್ಟವಾಗಿ ಇದ್ದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ.

* ಬುದ್ಧ ಹೇಳಿರುವುದು ಏನೆಂದರೆ ಮನುಷ್ಯರು ಒಳ್ಳೆಯವರಾಗಿ ಇರಬೇಕು. ಆದರೆ ಅದನ್ನು ಯಾವತ್ತಿಗೂ ಸಾಬೀತು ಮಾಡಿ ತೋರಿಸಲು ಹೋಗಬಾರದು.

*ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅವನೇ ಅವನ ಬಾಳಿನ ಚಾಲಕ ನಾಗಿರಬೇಕು. ಆ ಒಂದು ಅಧಿಕಾರವನ್ನು ಬೇರೆಯವರ ಕೈಗೆ ಕೊಡಬಾರದು. ಹಾಗೆ ಮಾಡಿದಲ್ಲಿ ನಿಮ್ಮ ಜೀವನದ ದಾರಿಯೂ ಕೂಡಾ ತಪ್ಪಿ ಬಿಡುತ್ತದೆ. ಆಗ ಅದು ಸೂತ್ರವಿಲ್ಲದ ಗಾಳಿ ಪಟದ ಹಾಗೆ ಆಗಿ ಬಿಡುತ್ತದೆ ಆ ವ್ಯಕ್ತಿಯ ಜೀವನ.

* ನಮ್ಮ ಜೀವನದಲ್ಲಿ ನಾವು ಯಾರಿಗೂ ಕೂಡಾ ಕ್ಷಮೆ ಕೇಳಲು ಹೋಗಬಾರದು. ಯಾಕೆ ಅಂದರೆ ಅವರುಗಳೇ ನಮ್ಮ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಮೇಲೆ ನಾವೇಕೆ ಕ್ಷಮೆ ಕೇಳಬೇಕು. ಒಂದು ವೇಳೆ ತಪ್ಪು ನಮ್ಮದಿದ್ದರೆ ಮಾತ್ರ ಕ್ಷಮೆ ಕೇಳುವುದು ಉತ್ತಮ. ಅದಲ್ಲದೆ ಯಾವತ್ತಿಗೂ ಕೂಡ ನಮ್ಮ ತಪ್ಪಿಲ್ಲದಿದ್ದರೆ ಯಾರಿಗೂ ಕ್ಷಮೆ ಕೇಳಬಾರದು.

* ವ್ಯಕ್ತಿಯೊಬ್ಬ ಒಂಟಿಯಾಗಿ ಇದ್ದರೆ ಅವನ ಹಾಗೆ ಯಾರೂ ಇಲ್ಲ ಎಂದು ಅದರ ಅರ್ಥ ಅಲ್ಲ. ಅವನುಗೆ ಎಷ್ಟೇ ಕಷ್ಟ ಬಂದರೂ ಕೂಡ ಒಬ್ಬನೇ ನಿಭಾಯಿಸುವ ಶಕ್ತಿ ಅವನಿಗಿದೆ ಎಂದು ಅರ್ಥ.

* ಮನುಷ್ಯನು ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಇಟ್ಟುಕೊಂಡಿರಬೇಕು. ಅದು ನಮ್ಮ ಖಾಸಗಿ ಜೀವನದ ವಿಷಯವೇ ಇರಲಿ ಅಥವಾ ಮತ್ತೊಬ್ಬರ ಜೀವನದ ವಿಷಯವೇ ಆಗಲಿ ಎಲ್ಲಾ ಸಂದರ್ಭದಲ್ಲಿ ಕೂಡ ಒಂದೇ ತರಹದ ವ್ಯಕ್ತಿತ್ವವನ್ನು ಇಟ್ಟುಕೊಳ್ಳಬೇಕು.

* ಮನುಷ್ಯ ಜೀವನದಲ್ಲಿ ಹಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾನೆ. ಆದರೆ ಅದೇ ಹಣ ಮನುಷ್ಯನು ನಂಬಿಕೆಗೆ ಅರ್ಹವೋ ಅಲ್ಲವೋ ಎಂಬುದನ್ನು ಪರೀಕ್ಷಿಸುತ್ತದೆ ಮತ್ತು ಮನುಷ್ಯನ ಸ್ವಭಾವವನ್ನು ಕೂಡ ಈ ಒಂದು ಹಣ ಪರಿಕ್ಷಿಸಬಲ್ಲದು.

* ಈ ಜಗತ್ತಿನಲ್ಲಿ ಎಲ್ಲರೂ ಕೂಡ ಒಂದಲ್ಲಾ ಒಂದು ತರಹದ ಮುಖವಾಡವನ್ನು ಹಾಕಿಕೊಂಡಿರುವವರು. ಆದ್ದರಿಂದ ಮನುಷ್ಯನು ತನ್ನ ಹುಷಾರಿನಲ್ಲಿ ಅವನು ಇದ್ದರೆ ಒಳ್ಳೆಯದು. ಎಲ್ಲರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಆಪ್ತರು ಎಂದು ನಂಬಿ ಮೋಸ ಹೋಗುವುದು ಹೆಚ್ಚಾಗಿದೆ. ಆದ್ದರಿಂದ ಮುಖವಾಡವನ್ನು ಹಾಕಿಕೊಂಡು ನಡೆಸುತ್ತಿರುವ ಈ ಬದುಕನ್ನು ಎಂದಿಗೂ ಕೂಡ ನಂಬಲು ಹೋಗಬಾರದು.

* ಮಕ್ಕಳಿಗೆ ಶಿಕ್ಷಣವನ್ನು ಎಂದಿಗೂ ಕೂಡ ಅವರು ಶ್ರೀಮಂತರಾಗಬೇಕು ಎಂದು ಕೊಡಿಸಬೇಡಿ. ಅವರಿಗೆ ಖುಷಿಯಾಗಿರುವುದು ಹೇಗೆ ಎಂಬುದನ್ನು ತಿಳಿಸಿಕೊಡಿ. ಆಗ ಅವರು ದೊಡ್ಡವರಾದಾಗ ವಸ್ತುವಿನ ಬೆಲೆ ತಿಳಿಯುವುದರ ಬದಲು ಆ ವಸ್ತುವಿನ ಮಹತ್ವವನ್ನು ತಿಳಿದುಕೊಳ್ಳುತ್ತಾರೆ.

* ಮನುಷ್ಯನ ಜೀವನದಲ್ಲಿ ಅವನು ಎಷ್ಟು ಕೆಟ್ಟ ಜನರ ಸಹವಾಸವನ್ನು ಮಾಡುವುದಿಲ್ಲವೋ ಅವನಿಗೆ ಅಷ್ಟು ಒಳ್ಳೆಯದಾಗುತ್ತದೆ.

* ಈ ಸಮಾಜದಲ್ಲಿ ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೀರಿಸಿಕೊಳ್ಳಲು ಯೋಚಿಸುತ್ತಾರೆ. ಆದರೆ ಬಲಶಾಲಿ ವ್ಯಕ್ತಿಗಳು ಅದನ್ನು ಕ್ಷಮಿಸಿ ಬಿಡುತ್ತಾರೆ ಮತ್ತು ಬುದ್ಧಿವಂತ ವ್ಯಕ್ತಿಗಳು ಅದನ್ನು ನಿರ್ಲಕ್ಷಿಸುತ್ತಾರೆ.

* ಮನುಷ್ಯ ತನ್ನ ಜೀವನದಲ್ಲಿ ಸಂತೋಷದಿಂದ ಇರಬೇಕೆಂದರೆ ತನ್ನ ಹಿಂದಿನ ದಿನಗಳನ್ನು ನೆನೆದು ದುಃಖಿಸದೇ ಮತ್ತು ಮುಂದಿನ ದಿನಗಳ ಬಗ್ಗೆ ಯೋಚಿಸಬಾರದು. ಇಂದಿನ ದಿನವನ್ನು ಖುಷಿಯಿಂದ ಕಳೆಯುವುದನ್ನು ಕಲಿತುಕೊಳ್ಳಬೇಕು.

* ಮನುಷ್ಯನ ಜೀವನದಲ್ಲಿ ಅವನ ಖುಷಿಗೆ ಅವನೇ ಕಾರಣೀಕರ್ತರಾಗಬೇಕು. ಆ ಖುಷಿಗೆ ಬೇರೆಯವರು ಕಾರಣೀಕರ್ತರಾಗಬಾರದು. ಅಂದರೆ ಅರ್ಥ ತಾನು ಖುಷಿಯಾಗಿರಬೇಕು. ಅಂದರೆ ಅದಕ್ಕೆ ಕಾರಣ ನಾವೇ ಆಗಿರಬೇಕು ನಮಗೆ ಬೇರೆಯವರು ಬಂದು ಖುಷಿ ಪಡಿಸಬೇಕು ಅಂತ ಕುಳಿತುಕೊಂಡರೆ ಅದು ತಪ್ಪಾಗುತ್ತದೆ.

* ಮನುಷ್ಯನು ತನ್ನ ಜೀವನದಲ್ಲಿ ಸತ್ಯ ಹೇಳುವವರನ್ನು ನಂಬಬೇಕು. ಆ ಸತ್ಯ ಎಷ್ಟೇ ಕಹಿಯಾಗಿದ್ದರೂ ಪರವಾಗಿಲ್ಲ ಅದನ್ನು ನಾವು ಸ್ವೀಕರಿಸುವಂತೆ ಇರಬೇಕು.

* ಮನುಷ್ಯನು ಜೀವನದಲ್ಲಿ ಎಂದಿಗೂ ಕೂಡ ಗಿಳಿಯಂತೆ ಇರಬಾರದು. ಯಾವಾಗಲೂ ಹದ್ದಿನಂತೆ ಇರಬೇಕು. ಯಾಕೆ ಅಂದರೆ ಗಿಳಿಯೂ ತುಂಬಾನೇ ಮಾತನಾಡುತ್ತದೆ. ಯಾವುದೇ ರೀತಿಯ ಕೆಲಸ ಮಾಡಿ ತೋರಿಸುವುದಿಲ್ಲ. ಆದರೆ ಹದ್ದು ಮಾತನ್ನು ಕಡಿಮೆ ಮಾಡಿ, ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತದೆ ಅದಕ್ಕೆ ಅದು ಬಾನೆತ್ತರಕ್ಕೆ ಹಾರುವ ಶಕ್ತಿ ಹದ್ದಿಗೆ ಇದೆ.

* ಜೀವನದಲ್ಲಿ ಬದಲಾವಣೆ ಎಂಬುದು ಅನಿವಾರ್ಯ ಅಂದಾಗ ಒಳ್ಳೆಯ ರೀತಿಯಲ್ಲಿ ಬದಲಾವಣೆ ಆಗಬೇಕು. ನೀವು ಏನನ್ನಾದರೂ ಒಂದು ಒಳ್ಳೆಯದನ್ನು ತ್ಯಾಗ ಮಾಡುತ್ತಿದ್ದೀರಾ ಅಂದರೆ ನಿಮಗೆ ಅಲ್ಲೊಂದು ಉತ್ತಮವಾದದ್ದು ಸಿಕ್ಕೇ ಸಿಗುತ್ತದೆ.

* ಈ ಭೂಮಿ ಮೇಲೆ ಯಾರೊಂದಿಗೂ ಕೂಡ ಅತಿಯಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಹೋಗಬಾರದು. ಯಾಕೆ ಅಂದರೆ ಬಾಂಧವ್ಯವೂ ಹೆಚ್ಚಾದಾಗ ನಿರೀಕ್ಷೆಗಳು ಹೆಚ್ಚಾಗುತ್ತದೆ. ನಿರೀಕ್ಷೆಗಳು ಹೆಚ್ಚಾದಾಗ ನೋವು ಆಗುವುದು ಕೂಡ ಹೆಚ್ಚಾಗುತ್ತದೆ.

* ಅತಿಯಾದ ಯೋಚನೆ ಮಾಡುವುದೇ ನಮ್ಮ ಜೀವನದಲ್ಲಿ ಹೆಚ್ಚು ದುಃಖವನ್ನು ತಂದೊಡ್ಡುವುದು. ಆದ್ದರಿಂದ ಅತಿಯಾದ ಯೋಚನೆ ಮಾಡುವುದು ಬಿಟ್ಟು ಬಿಡಬೇಕು.

* ಅಸಂಬದ್ಧತೆಗಿಂತ ನಮ್ಮ ಜೀವನದಲ್ಲಿ ಶಾಂತಿಯೇ ದೊಡ್ಡದು.

ಇದು ಬುದ್ಧ ನಮಗೆಲ್ಲ ಹೇಳಿರುವಂತಹ ಕೆಲವೊಂದು ಮಾತುಗಳು. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಜಕ್ಕೂ ನೆಮ್ಮದಿಯ ಜೀವನ ಸಾಗಿಸಬಹುದು.

Wednesday, December 25, 2019

ಅಂದಿನ ಮನೆಗಳು ಇಂದಿನಂತಿರಲಿಲ್ಲ ,,,,,

SAVE NATURE, HEALTHY, WEALTHY & WISE. dgnsgreenworld Family

ಅಂದಿನ ಮನೆಗಳು ಇಂದಿನಂತಿರಲಿಲ್ಲ
ಈಗಿನ ಮನೆಗಳೇಕೋ ಮೊದಲಿದ್ದಂತಿಲ್ಲ
ಮನೆಸುತ್ತ ಕಾಂಪೌಂಡು ಗೇಟು ಭದ್ರ
ಒಳಗಿರುವ ಮನಸುಗಳೇ ಏಕೋ ಛಿದ್ರ
ಬಂಧುಗಳೇ ಬಾರದ ಸ್ನೇಹಿತರೂ ಸೇರದ
ಮನೆಗಳ ಮುಂದೆ ಸದಾ ಕಾವಲುಗಾರ!

ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ
ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ!
ಅಡುಗೆ ಮನೆ ಸದಾ ಖಾಲಿ ಖಾಲಿ ಇರುತ್ತೆ
ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ
ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ
ಯಾಕೋ ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ
ಸಂತೋಷವೇನೆಂಬುದಕ್ಕೆ ಸಿಗುತ್ತಿಲ್ಲ ಉತ್ತರ

ಅಂದು...ಬಿಸಿಲು ಚಳಿ ಮಳೆಗೆ ಮೈ ಒಗ್ಗಿತ್ತು
ಮನೆ ತಣ್ಣಗಿತ್ತು ಒಲೆ ಹೊಗೆಯಾಡುತ್ತಿತ್ತು
ಬಿಸಿನೀರ ಹಂಡೆ ಹಬೆಯಾಡುತ್ತಿತ್ತು.
ಕಣಜದ ತುಂಬಾ ದವಸ ಧಾನ್ಯವಿತ್ತು
ಬಂಧುಬಳಗದ ನಡುವೆ ಅನುಬಂಧವಿತ್ತು
ಎಲ್ಲರೊಟ್ಟಿಗೆ ಮನೆಯೂ ನಗೆಯಾಡುತಿತ್ತು
ಮನೆ ಚಿಕ್ಕದಾದ್ರೂ ಮನಸು ಚೊಕ್ಕವಾಗಿತ್ತು

ಅಂದು ನನ್ನಜ್ಜ ಕಟ್ಟಿದ ಮನೆಯಲ್ಲಿ...
ನಲಿವಿತ್ತು ಒಲವಿತ್ತು ಸಂತಸದ ಸೆಲೆಯಿತ್ತು
ತಾಯಿಬಾಗಿಲು ಚಿಕ್ಕದಿತ್ತು ತಲೆಬಾಗಬೇಕಿತ್ತು
ಮಣ್ಣಿನ ಗೋಡೆ, ಸಾರಿಸಿದ ನೆಲವಿತ್ತು
ಮಾಡು ಚಿಕ್ಕದಿತ್ತು ಬದುಕು ದೊಡ್ಡದಿತ್ತು
ನೋವುಗಳಿದ್ದರೂ ಬದುಕಿಗೆ ಬೆಲೆಯಿತ್ತು
ಚಾಪೆಯಲಿ ಕಣ್ಣಿಗೆ ಚೆಂದದ ನಿದ್ರೆಯಿತ್ತು

ಅಂದು ಆಸ್ಪತ್ರೆಯ ಹಂಗೇ ಇರಲಿಲ್ಲ
ಎಲ್ಲ ಸಮಸ್ಯೆಗಳಿಗೂ ಮನೆಯಲ್ಲೇ ಮದ್ದಿತ್ತು
ಮಗುವೂ ಕೂಡ ಮನೆಯಲ್ಲೇ ಹುಟ್ಟುತ್ತಿತ್ತು
ಮದುವೆ ಕೂಡ ಮನೆಯಲ್ಲೇ ನೆಡೆಯುತ್ತಿತ್ತು
ಚಿತ್ರ ವಿಚಿತ್ರದ ಛತ್ರವೇ ಬೇಕಿರಲಿಲ್ಲ
ಕೆಲಸಕ್ಕೆ ಶ್ರದ್ಧೆ ದೇವರ ಮೇಲೆ ನಂಬಿಕೆಯಿತ್ತು
ಸಾವಿಗೂ ಸಹ ಮನೆಯೇ ಸಾಕ್ಷಿಯಾಗುತ್ತಿತ್ತು

ಹಲವು ಮಕ್ಕಳು ಹುಟ್ಟಿದ ಸಂತಸವಿತ್ತು
ಅವರ ಬಾಲ್ಯದ, ಬದುಕಿನ ಸಂಭ್ರಮವಿತ್ತು
ನೆಂಟರು ಬಂದರೆ ಹಬ್ಬದ ಸಡಗರವಿತ್ತು
ಕೆಲವು ಸಾವುಗಳ ಸೂತಕವೂ ಇತ್ತು
ಸತ್ತ ಹಿರಿಯರ ನೆನಪು ಅಚ್ಚಳಿಯದುಳಿದಿತ್ತು
ಕಷ್ಟಗಳ ಗೆದ್ದ ಗೆಲುವಿನ ಧ್ಯೋತಕವೂ ಇತ್ತು
ಬದುಕಿನ ಸಾಧಕ ಭಾದಕಗಳೆಲ್ಲವೂ ಇತ್ತು

ಇಂದು ಮನೆ ರಾಜನಿಲ್ಲದ ಅರಮನೆಯಂತೆ
ಸಕಲ ಸವಲತ್ತುಗಳಿರುವ ದರ್ಬಾರಿನಂತೆ
ನೆರೆಮನೆಯ ಹಂಗಿಲ್ಲದ ಸೆರೆಮನೆಯಂತೆ
ಆದ್ರೂ ಮನೆಮಂದಿಗೆ ದುಡ್ಡಿನದೇ ಚಿಂತೆ!
ಬೇಕಾಗಿದ್ದದ್ದಕ್ಕಿಂತ ಬೇಕೆನಿಸಿದ್ದೇ ತುಂಬಿದೆ
ದೊಡ್ಡದಿದೆ ಶ್ರೀಮಂತವಾಗಿದೆ ಸಜ್ಜಾಗಿದೆ
ಮನಸುಗಳು ಮಾತ್ರ ನಜ್ಜು ಗುಜ್ಜಾಗಿವೆ

ಶುಭಕಾರ್ಯಗಳು ಸಂತೋಷಕೂಟಗಳು
ಮನೆಬಿಟ್ಟು ಹೋಟೆಲ್ಲು ಸೇರಿಕೊಂಡಿವೆ
ಬಂಧುತ್ವ ಮಿತೃತ್ವಗಳು ಬಂಧನದಲ್ಲಿವೆ
ನೆಂಟರಿಷ್ಟರು ಮನೆಗೆ ಬಂದರೆ ಬರೀ ನಕ್ಕು
ಕೋಣೆ ಸೇರಿಕೊಳ್ಳುತ್ತಿದ್ದಾರೆ ಮನೆಮಕ್ಕಳು
ಸ್ನೇಹಸಂಬಂಧಗಳಲ್ಲೂ ತೋರಿಕೆ ತಾತ್ಸಾರ
ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ

ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ
ಆಗಲಿ ಮನೆ ಮನೆಗಳೂ ನಂದಗೋಕುಲ
ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ
ಕಲಿಯಲೆಲ್ಲ ಸಂತಸದಿ ಒಟ್ಟಾಗಿ ನಗುವ ಕಲೆ
ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು
ಶ್ರೀಮಂತಿಕೆಗಿಂತ ಹೃದಯವಂತಿಕೆ ಮೇಲು

ವಂದನೆಗಳೊಂದಿಗೆ

Friday, December 13, 2019

*ಸ್ನೇಹಿತರೇ, ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ,*

SAVE NATURE, HEALTHY, WEALTHY & WISE. dgnsgreenworld Family

*ಕೃಷ್ಣ ಮತ್ತು ಸುದಾಮ ಒಂದು ದಿನ ವನ ಸಂಚಾರಕ್ಕೆ ಹೋಗಿ ದಾರಿ ತಪ್ಪಿಸಿಕೊಂಡರು. ಹಸಿವು-ಬಾಯಾರಿಕೆಯಿಂದ ಒಂದು  ಮರದ ಕೆಳಗೆ ಬಂದು ನಿಂತರು. ಆ ಹಣ್ಣಿನ ಮರದಲ್ಲಿ ಒಂದು ಹಣ್ಣು ನೇತಾಡುತ್ತಿತ್ತು. ಕೃಷ್ಣ ಗಿಡ ಹತ್ತಿ ಕೈಯಿಂದ ಹಣ್ಣುನ್ನು ಹರಿದನು. ಕೃಷ್ಣನು ಆ ಹಣ್ಣನ್ನು ಆರು ತುಂಡುಗಳನ್ನು ಮಾಡಿದನು ಮತ್ತು ಅವನ ಅಭ್ಯಾಸದ ಪ್ರಕಾರ ಮೊದಲ ತುಂಡನ್ನು ಸುದಾಮನಿಗೆ ಕೊಟ್ಟನು. ಸುದಾಮ ಹಣ್ಣು ತಿಂದು, ತುಂಬಾ ಸ್ವಾದಿಷ್ಟಕರ! ಇಂತಹ ಹಣ್ಣನ್ನು ಎಂದಿಗೂ ಸೇವಿಸಿಲ್ಲ. ದಯವಿಟ್ಟು ಇನ್ನೂ ಒಂದು ತುಣುಕು ನೀಡು ಎಂದನು. ಎರಡನೇ ತುಣುಕು ಕೂಡ ಸುದಾಮನಿಗೆ ಸಿಕ್ಕಿತು. ಹೀಗೆ ಸುದಾಮ ಕೃಷ್ಣನನ್ನು ಕೇಳುತ್ತ ಹೋದ, ಕೃಷ್ಣ ಕೊಡುತ್ತ ಹೋದ. ಅದೇ ರೀತಿ, ಸುದಾಮ ಐದು ತುಣುಕುಗಳನ್ನು ಕೇಳುವ ಮೂಲಕ ತಿಂದನು. ಸುದಾಮ ಕೊನೆಯ ತುಣುಕು ಕೇಳಿದಾಗ, ಕೃಷ್ಣ ಇದು ಮಿತಿ ಮೀರಿದೆ,*
*ನಿನ್ನ ಹಾಗೆ ನಾನು ಕೂಡ ಹಸಿದಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ*
*ಎಂದು ಕೋಪದಿಂದ  ಕೃಷ್ಣನು ಹಣ್ಣಿನ ತುಂಡನ್ನು ಬಾಯಿಗೆ ಹಾಕಿದನು.*

*ಹಣ್ಣು ಅತೀ ಕಹಿಯಾದ ಕಾರಣ ಕೃಷ್ಣನು ಬಾಯಿಯಲ್ಲಿದ್ದ ಹಣ್ಣನ್ನು ತಕ್ಷಣ ಉಗುಳಿದನು ಕೃಷ್ಣ,*

*ನಿನಗೆ ಹುಚ್ಚು ಇಲ್ಲ, ಇಂತಹ ಕಹಿ ಹಣ್ಣುಗಳನ್ನು ನೀನು ಹೇಗೆ ತಿಂದೀ?*

*ಅದಕ್ಕೆ ಸುದಾಮನ  ಉತ್ತರ:-*

*ಕೃಷ್ಣಾ, ನಿನ್ನ ಅಮೃತ ಹಸ್ತದಿಂದ ಸಾವಿರ ಸಲ ತುಂಬಾ ಸಿಹಿ ಹಣ್ಣುಗಳನ್ನು ನಾನು ತಿಂದಿದ್ದೇನೆ. ಈಗ ಒಂದು ಸಲ  ಕಹಿ ಹಣ್ಣನ್ನು ನೀಡಿದಾಕ್ಷಣ ನಾನು ನಿನ್ನನ್ನು ದೂರುವುದು ನ್ಯಾಯವಾ? ಅದಕ್ಕೆ ನಿನಗೆ ಕಹಿ ಅನುಭವ ಆಗಬಾರದೆಂದು ಎಲ್ಲಾ ತುಣುಕುಗಳನ್ನು ನಾನೇ ತಿನ್ನಲು ಬಯಸಿದೆ.*

*ಸ್ನೇಹಿತರೇ, ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ,*
*ಒಂದು ಅಂತಹ ಸಂಬಂಧವನ್ನು ಗಟ್ಟಿಗೊಳಿಸಿ.*

*ಜೀವನದ ಯಾವುದೇ ಹಂತದಲ್ಲಿ ಮಿತ್ರನಿಂದ ಕಹಿ ಅನುಭವ ಆದರೆ ಆ ಕ್ಷಣವನ್ನು ಮರೆತು ಮುಂದೆ ಸಾಗಿ.*

 *ಒಳ್ಳೆಯ ದಿನಗಳಲ್ಲಿ ದುರಹಂಕಾರಕ್ಕಿಂತ ವಿನಯವನ್ನು ರೂಡಿಸಿಕೊಳ್ಳೋಣ ಮತ್ತು ಕೆಟ್ಟ ಸಮಯಗಳಲ್ಲಿ ತಾಳ್ಮೆಯಿಂದ ಬದುಕುವುದು ಸೂಕ್ತ
ವಂದನೆಗಳೊಂದಿಗೆ


Thursday, December 12, 2019

*ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವರ ಕೊಂಕು ಮಾತಿಗೆ ಕೊರಗುವುದೇಕೆ,?

SAVE NATURE, HEALTHY, WEALTHY & WISE. dgnsgreenworld Family
*ನಮಸ್ತೆ*

*ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವರ ಕೊಂಕು ಮಾತಿಗೆ ಕೊರಗುವುದೇಕೆ,ಯಾರನ್ನು ನಂಬಿ ಬಂದಿಲ್ಲಾ ಎನ್ನವುದೇ ಸತ್ಯವಾದರೆ ಯಾರಾದರೂ ನಮ್ಮೊಂದಿಗೆ ಇರುತ್ತಾರೆನ್ನುವ  ನಿರೀಕ್ಷೆಯೇ ಸುಳ್ಳು.ಯಾರಾದರೂ ಇರುತ್ತಾರೆಂದರೆ ಅದು ನಾವು ಮತ್ತು ನಮ್ಮ ಆತ್ಮ ವಿಶ್ವಾಸ ಮಾತ್ರ.

ವಂದನೆಗಳೊಂದಿಗೆ

ಐಸ್‌ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ಕರಗುತ್ತದೆ !* ಬದುಕು?

SAVE NATURE, HEALTHY, WEALTHY & WISE. dgnsgreenworld Family

.             😊😊😊😊😊

*ಐಸ್‌ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ಕರಗುತ್ತದೆ !*

*"ನಮ್ಮ ಜೀವನ ಸಹ ಹಾಗೇ" ಎಂಜಾಯ್ ಮಾಡಿದರು ಕರಗುತ್ತದೆ, ಮಾಡದಿದ್ದರೂ ಕರಗುತ್ತದೆ.*

*ಸ್ವರ್ಗ, ನರಕ ....ಅವು ಇದ್ದಾವೋ ಇಲ್ಲವೊ ಗೊತ್ತಿಲ್ಲ. ನಾವು ಮತ್ತೆ ಹುಟ್ಟುತ್ತೀವೋ ಇಲ್ಲವೋ ಅದೂ ಗೊತ್ತಿಲ್ಲ .....!!*

*ಕುಡಿಯೋನು "ಮೂರ್ಖನಲ್ಲ, ಕುಡಿಯದವನು ಪವಿತ್ರನಲ್ಲ.*

*ಇಲ್ಲ್ಯಾರು ನೂರುವರ್ಷ ಬದುಕುವ ಭರವಸೆಯೇನು ಇಲ್ಲ.... ಅವರವರ ಲೆಕ್ಕಾಚಾರ ಅವರದು.*

 *"FINAL JUDGMENT IS"* 👇🏻

*ಹೊತ್ತೊತ್ತಿಗೆ ಊಟಮಾಡಿ‌, ಹೊತ್ತಿಗೆ ಸರಿಯಾಗಿ ನಿದ್ದೆಮಾಡಿ, ಸರಿಯಾದ ಕೆಲಸ ಮಾಡಿ, ಯಾವುದಕ್ಕೂ ತಲೆಕೆಡಿಸ್ಕೊಬೇಡಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರಲಿ,*

        😊 *ಖುಷಿಯಾಗಿರಿ😊*
😊 *ಬೇರೆಯವರಿಗೂ ಖುಷಿಕೊಡಿ*😊
*ಜೀವನ ಆನಂದಮಯವಾಗಿರಲಿ 🌹😊
ವಂದನೆಗಳೊಂದಿಗೆ.

Tuesday, December 3, 2019

ಶ್ರೀಕೃಷ್ಣ ಪರಮಾತ್ಮನು ಕರ್ಣನಿಗೆ ಹೇಳಿದ ಮೈ ಜುಮ್ಮೆನ್ನುವ ಇದೊಂದು ಮಾತನ್ನು ಕೇಳಿ,,,?

SAVE NATURE, HEALTHY, WEALTHY & WISE. dgnsgreenworld Family
*ಶ್ರೀಕೃಷ್ಣ* *ಪರಮಾತ್ಮನು* *ಕರ್ಣನಿಗೆ* *ಹೇಳಿದ* *ಮೈ* *ಜುಮ್ಮೆನ್ನುವ* *ಇದೊಂದು* *ಮಾತು* *ಕೇಳಿ* *ಸಾಕು* *!*
ಕಷ್ಟ ಯಾರ ಜೀವನದಲ್ಲಿ‌ ಇಲ್ಲ ಹೇಳಿ... ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು. ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ,  ಕೃಷ್ಣ ಕರ್ಣನಿಗೆ ಹೇಳಿದ ಈ ಅದ್ಭುತ ಮಾತುಗಳನ್ನು ಕೇಳಿ.

ಅಂದು ಕರ್ಣ ಕೃಷ್ಣನಿಗೆ ಹೇಳಿದ.  “ನನ್ನ ಬದುಕೇ ಒಂದು ಅಗ್ನಿಕುಂಡ. ಮುಳ್ಳಿನ ಬೇಲಿ. ನಾನು ಹುಟ್ಟಿದೆನೇನೋ ಸರಿ, ಆದರೆ ಎಂಥ ಹುಟ್ಟು! ಹುಟ್ಟಿಸಿದ ಕುಂತಿ ನವಜಾತ ಶಿಶುವಾಗಿದ್ದ ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು. ಹುಟ್ಟಿ ಕಣ್ಣು ಬಿಡುವುದಕ್ಕೂ ಮುನ್ನ ನಾನು ವಿಶಾಲ ನೀರಿನ ನಡು ಭಾಗದಲ್ಲಿ ತೇಲುತ್ತಿದ್ದೆ! ಹೇಳು, ಅಕ್ರಮ ಸಂತಾನವಾಗಿ, ತಾಯಿಯ ಕುತೂಹಲದ ಪರೀಕ್ಷೆಗಾಗಿ ಹುಟ್ಟಿದ್ದು ನನ್ನ ತಪ್ಪೇ?

“ಹುಟ್ಟಿ ಬಡಬಗ್ಗರ ಹಟ್ಟಿಯಲ್ಲಿ ಬೆಳೆದೆ. ಬಿಲ್ವಿದ್ಯೆ ಕಲಿಯಬೇಕೆಂದು ದ್ರೋಣಾಚಾರ್ಯರ ಬಳಿ ಬಂದಾಗ ನನ್ನನ್ನು ಇದಿರುಗೊಂಡಿದ್ದೇನು? ನಿರಾಸೆ! ನೀನು ಕ್ಷತ್ರಿಯನಲ್ಲ ! ಕೀಳುಜಾತಿಯಲ್ಲಿ ಹುಟ್ಟಿದ ಸೂತಪುತ್ರ! ದೂರವಿರು! ಎಂಬ ಮನ ನೋಯಿಸುವ ಮಾತುಗಳು! ಸರಿ, ಪರಶುರಾಮರು ಅಸ್ತ್ರಶಸ್ತ್ರಗಳ ವಿದ್ಯೆಯನ್ನೇನೋ ಕಲಿಸಿದರು. ಆದರೆ ನಾನು ಕ್ಷತ್ರಿಯ ಎಂಬುದು ಗೊತ್ತಾಗುತ್ತಲೇ.... ಶಾಪ ಕೊಟ್ಟೇ ಬಿಟ್ಟರು.

ಅಗತ್ಯ ಬಿದ್ದಾಗ ನಿನಗೆ ಅಸ್ತ್ರಗಳು ಕೈ ಕೊಡಲಿ! ಅಬ್ಬಾ... ಅದೆಂಥ ಉಗ್ರ ಶಾಪ! ಅಗತ್ಯ ಸಂದರ್ಭದಲ್ಲಿ ಮಾತ್ರ ವಿದ್ಯೆ ಕೈ ಕೊಡುವುದಾದರೆ, ಅಂಥ ವಿದ್ಯೆಯನ್ನಾದರೂ ನಾನು ಯಾಕೆ ಸಂಪಾದಿಸಬೇಕಿತ್ತು? ಹಣದ ಅವಶ್ಯಕತೆ ಬಿದ್ದಾಗ ಒಂದೇ ಒಂದು ದಮ್ಮಡಿಯೂ ಉಳಿಯದಂತೆ, ಆಗಿ ಹೋಗಲಿ ಎಂಬಂಥ ಶಾಪವಲ್ಲವೇ  ಅದು?

ನನ್ನ ಬದುಕಿನ ದುರಂತಗಳ ಸರಮಾಲೆ ಇನ್ನೂ  ಮುಗಿಯಲಿಲ್ಲ ಕೃಷ್ಣ. ದ್ರೌಪದಿಯ ಸ್ವಯಂವರದಲ್ಲಿ, ಅದೆಂಥ ಕಡು ಅವಮಾನವನ್ನು ನಾನಂದು ನುಂಗಬೇಕಾಗಿ ಬಂತೆಂಬುದು ಎಲ್ಲರಿಗೆ ಗೊತ್ತಿದೆ. ಕೌರವ -  ಪಾಂಡವರ ನಡುವೆ ಯುದ್ಧವೇರ್ಪಟ್ಟಾಗ ಕುಂತಿ, ನನ್ನ ತಾಯಿ ಬಂದಳು. ತೊಟ್ಟ ಅಸ್ತ್ರವನ್ನು ಮತ್ತೆ ತೊಡೆನೆಂಬ ಮಾತು ಪಡೆದು ಹೋದಳು. ಮಾತಿನುದ್ದಕ್ಕೂ ಪಾಂಡವರನ್ನು ರಕ್ಷಿಸುವ ಹೊಣೆಯನ್ನು ನನ್ನ ಮೇಲೆ ಹೊರಿಸಿದಳೇ ಹೊರತು ಒಮ್ಮೆಯಾದರೂ, ಬಾಯಿಯ ಮಾತಿಗಾದರೂ ಯುದ್ಧದಲ್ಲಿ ಗೆದ್ದು ಬಾ ಎಂದು ಸ್ವಂತ ತಾಯಿ ಹರಸಲಿಲ್ಲ.

ಇನ್ನೊಬ್ಬ.... ಇಂದ್ರ! ನನ್ನ ಕರ್ಣ ಕವಚ ಕುಂಡಲಗಳನ್ನು ಕದಿಯುವುದಕ್ಕೆಂದೇ ಬಂದ. ಇಷ್ಟೆಲ್ಲ ದೌರ್ಭಾಗ್ಯಗಳ ಮಧ್ಯೆ, ನನ್ನನ್ನು ಕೊನೆಯವರೆಗೆ, ಕೈಹಿಡಿದದ್ದು ದುರ್ಯೋಧನ ಮಾತ್ರ. ಹಾಗಿರುವಾಗ ಆತನನ್ನು ನಾನು ಹೇಗೆ ಮುರಿಯಲಿ ಕೃಷ್ಣ? ಅವನ ಪರವಾಗಿ ನಿಲ್ಲುವುದು ಅಧರ್ಮ ಹೇಗಾದೀತು.... ನೀನೇ  ಹೇಳು".

ಆಗ ಕರ್ಣನಿಗೆ ಕೃಷ್ಣ ನಗುತ್ತಾ ಹೇಳಿದ.

"ನೀನು ನದಿ ತೀರದಲ್ಲಿ ಹುಟ್ಟಿದೆ, ನದಿಯ ಪಾಲಾದೆ.... ಅಲ್ಲವೇ? ನಾನು ಹುಟ್ಟಿದ್ದು ಎಲ್ಲಿ ಎಂದು ಕೇಳು! ಸೆರೆಮನೆಯಲ್ಲಿ! ಇಂಥ ಜನ್ಮವನ್ನು ಯಾರಾದರೂ ಬಯಸಲು ಸಾಧ್ಯವೇ?
ಹುಟ್ಟಿದ ಮರುಕ್ಷಣವೇ ನಾನು ನನ್ನ ತಾಯಿಯಿಂದ ಬೇರೆಯಾದೆ. ನನ್ನ ತಂದೆ ನನ್ನನ್ನು ದೂರದೊಂದು ಹಳ್ಳಿಗೆ, ಬಿಟ್ಟು ಬಂದರು. ಹೋಗುವ ದಾರಿಯುದ್ದಕ್ಕೂ ಮಳೆ -  ಗಾಳಿ ಹಾಗೂ ಸಿಡಿಲು. ಅಂದು ಸಾವು ನನ್ನ ಕಣ್ಮುಂದೆ ಇತ್ತು.

ನೀನಾದರೋ ಚಿಕ್ಕವನಿದ್ದಾಗಿನಿಂದ ಕತ್ತಿ, ರಥ, ಕುದುರೆ, ಬಿಲ್ಲುಬಾಣಗಳಿತ್ಯಾದಿಯನ್ನು ನೋಡಿಕೊಂಡು ಬಂದವನು ಕರ್ಣ. ಆದರೆ, ನನ್ನ ಬಾಲ್ಯದಲ್ಲಿ ಏನಿತ್ತು? ಹಸು, ಕೊಟ್ಟಿಗೆ, ಸೆಗಣಿ, ಗಂಜಲ! ಹಸು ಮೇಯಿಸುತ್ತ, ಸೆಗಣಿ ಬಾಚುತ್ತ, ಇದೇ ಜೀವನವೆಂದು ಬಗೆದ ಜನರೊಂದಿಗೆ ಬಾಳುತ್ತಿದ್ದವನು ನಾನು. ಅಷ್ಟರ ಮೇಲೂ, ಅನಿಷ್ಟಕ್ಕೆಲ್ಲ ನಾನೇ ಕಾರಣ ಎಂದು ಜನ ನನ್ನನ್ನು ಬೆಟ್ಟು ಮಾಡುತ್ತಿದ್ದರು. ನನ್ನನ್ನು ಕೊಲ್ಲಲು ಅದೆಷ್ಟು ಪ್ರಯತ್ನಗಳಾದವು ಹೇಳು, ರಾಕ್ಷಸರು ಅದೆಷ್ಟೆಲ್ಲ ಬಗೆಯಲ್ಲಿ ನನ್ನ ಮೇಲೆ ಆಕ್ರಮಣ ಮಾಡಿದರು.

ನಾನೂ ಓದಬೇಕು, ವಿದ್ಯೆ ಸಂಪಾದಿಸಬೇಕು ಎಂದು ನಿರ್ಧರಿಸಿ ಗುರುಕುಲ ಸೇರುವ ಹೊತ್ತಿಗೆ, ನನಗೆ ಹದಿನಾರು ವರ್ಷಗಳಾಗಿ ಬಿಟ್ಟಿದ್ದವು. ಬಾಕಿ ಹುಡುಗರು ಅದಾಗಲೇ ತಮ್ಮ ಜ್ಞಾನಾರ್ಜನೆಯನ್ನು  ಮುಗಿಸಿ, ಆಶ್ರಮದಿಂದ ಹೊರಬರುವ ಹೊತ್ತಿನಲ್ಲಿ, ನಾನು ವಿದ್ಯಾರ್ಥಿಯಾಗಿ ಸೇರಿದ್ದೆ. ಇನ್ನು ಗೃಹಸ್ಥ ಜೀವನ ಹೇಗಿತ್ತೆಂದು ಕೇಳುತ್ತೀಯಾ? ಅದಿನ್ನೊಂದು ಕಥೆ....

ಮದುವೆಯಾದವರನ್ನು ನಾನು ಮನಃಪೂರ್ವಕ ಪ್ರೀತಿಸಿರಲಿಲ್ಲ. ಯಾರನ್ನು ನಿಜವಾಗಿ ಪ್ರೀತಿಸಿದ್ದೆನೋ.....ಅವರನ್ನೂ  ಮದುವೆಯಾಗಲಿಲ್ಲ. ದೈತ್ಯನೊಬ್ಬ ಕೂಡಿ ಹಾಕಿದ್ದ ಹೆಂಗಸರನ್ನು ಬಿಡಿಸಿದ್ದರಿಂದ ಅವರೆಲ್ಲರಿಗೂ ನಾನು ಪತಿಯಾದೆ. ಬಯಸದೇ ಬಂದ ಜವಾಬ್ದಾರಿಯದು. ಜರಾಸಂಧನಿಂದ ಜೀವ ಉಳಿಸಲಿಕ್ಕಾಗಿ, ನಾನು ಊರಿನೆಲ್ಲರನ್ನೂ ಹೊರಡಿಸಿಕೊಂಡು ಮಥುರೆಯಿಂದ ದ್ವಾರಕೆಗೆ ಹೋಗಬೇಕಾಯಿತು. ಹೊಸ ಪರಿಸರ, ಹೊಸ ಜನ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬಹುದಿತ್ತು ಎಂದರೆ ನಾವು ಅಲ್ಲಿಯೇ ಇರಬೇಕಾಗಿ ಬಂತು.

ಅಲ್ಲಿ ನಾವು ಬಿಡಾರ ಹೂಡಿ, ಹೊಸ ನಗರವನ್ನು ಕಟ್ಟಿಕೊಳ್ಳಬೇಕಾಗಿತ್ತು. ಮಥುರೆಯಿಂದ ಹೊರಟಾಗ ನಾನು ಕೇಳಿದ ಮಾತುಗಳಾದರೂ ಎಂಥಾದ್ದು! ಹೇಡಿ ಎಂದರು. ರಟ್ಟೆಯಲ್ಲಿ ಬಲವಿಲ್ಲದೆ ಓಡಿ ಹೋಗುತ್ತಿದ್ದಾನೆ ಎಂದರು. ಎಲ್ಲ ಗೇಲಿ - ಅಪಮಾನಗಳನ್ನೂ ಸ್ಥಿತಪ್ರಜ್ಞನಾಗಿ ನಾನು ಸಹಿಸಿಕೊಳ್ಳಬೇಕಾಯಿತು.

ಕರ್ಣ! ಕುರುಕ್ಷೇತ್ರದಲ್ಲಿ, ನೀನು ಗೆದ್ದದ್ದೇ ಆದರೆ ದುರ್ಯೋಧನನ ಪ್ರೀತಿಗೆ ನೀನು ಸಂಪೂರ್ಣವಾಗಿ, ಪಾತ್ರನಾಗುತ್ತಿದ್ದೆ.  ಪ್ರೀತಿಯಿಂದ ಅರ್ಧ ರಾಜ್ಯವನ್ನು ನಿನಗೆ ಬಿಟ್ಟು ಕೊಟ್ಟಾನೇನೋ ಅಥವಾ ಸಿಂಹಾಸನದ ಪಕ್ಕದಲ್ಲೇ ಮತ್ತೂಂದನ್ನಿಟ್ಟು ನಿನ್ನನ್ನು ಕುಳ್ಳಿರಿಸಿಯಾನೋ ಏನೋ.... ಜಯದಿಂದ ಲಭಿಸುವ ಎಲ್ಲ ಭೋಗ ಭಾಗ್ಯಗಳಿಗೂ ನೀನು ವಾರಸುದಾರನಾಗಿರುತ್ತಿದ್ದೆ.

ಆದರೆ ನನಗೆ? ಈ ಯುದ್ಧ ಗೆಲ್ಲಿಸಿಕೊಟ್ಟರೆ.... ನನಗೇನು ಸಿಗುತ್ತದೆ ಎಂದು ಭಾವಿಸಿದ್ದಿ? ಅಣ್ಣತಮ್ಮಂದಿರು ಹೇಳುತ್ತಾರೆ – ನಮಗೆ ಬೇಡ ಇತ್ತು. ಆದರೂ ಆ ಕುಟಿಲ ಈ ಯುದ್ಧ ಮಾಡಿಸಿದ! ಲಕ್ಷಾಂತರ ಜನರ ಸಾವಿಗೆ ಕಾರಣನಾದ. ದಾಯಾದಿಗಳೇ ಪರಸ್ಪರ ಕೊಂದುಕೊಳ್ಳುವ ಹಾಗೆ ಮಾಡಿದ. ಅಣ್ಣತಮ್ಮಂದಿರು ಎದುರೆದುರು ನಿಂತು ಸೆಣಸುವಂತೆ ಮಾಡಿದ.

ಗಾಂಧಾರಿಯ ಶಾಪವನ್ನು ನಾನು ಗಾಳಿಗೆ ತೂರಿ ಬಿಡಲಾಗಲಿಲ್ಲ.
ಸಹನೆಯಿಂದ ಅನುಭವಿಸಬೇಕಾಯಿತು.
ಕರ್ಣ!

ಪ್ರತಿಯೊಬ್ಬನಿಗೂ ಜೀವನದಲ್ಲಿ ಒಂದಿಲ್ಲೊಂದು ಸವಾಲು ಇದ್ದೇ  ಇರುತ್ತದೆ. ನಿನಗೆ ನಿನ್ನ ಜೀವನ ಅಗ್ನಿಕುಂಡ ಅನ್ನಿಸಿದರೆ ನನ್ನದನ್ನು ನೋಡು. ಜೀವನ ಯಾರಿಗೂ ಹೂವಿನ ಹಾಸಿಗೆಯಲ್ಲ. ಯಾರಿಗೂ ಸುಲಭ ಗ್ರಾಹ್ಯವೂ ಅಲ್ಲ. ಜೀವನದಲ್ಲಿ ಏನೇ ಏರುಪೇರುಗಳು ಬಂದರೂ, ಆ ಎಲ್ಲ ಸಂದರ್ಭಗಳಲ್ಲಿ ನೀನು ಏನನ್ನೇ ಮಾಡಿದರೂ ಯಾವುದು ಸರಿ ಎಂಬುದು ನಿನ್ನ ಒಳ ಮನಸ್ಸಿಗೆ ಗೊತ್ತಿರುತ್ತದೆ. ಅದನ್ನೇ ಧರ್ಮ ಎನ್ನುವುದು. ಆತ್ಮಸಾಕ್ಷಿ ಯಾವುದನ್ನು ನುಡಿಯುತ್ತದೋ, ಅದೇ ಧರ್ಮ. ಆತ್ಮಸಾಕ್ಷಿ ಸತ್ತ ದಿನ ನಾವು ಧರ್ಮದಿಂದ ವಿಮುಖರಾದೆವು, ಅಧರ್ಮಿಗಳಾದೆವು ಎಂದೇ ಅರ್ಥ.

ನಾವು ಎಷ್ಟು ಅನ್ಯಾಯಕ್ಕೊಳಗಾದರೂ ಎಷ್ಟೊಂದು ಅಪಮಾನವನ್ನು ನುಂಗಬೇಕಾಗಿ ಬಂದರೂ.... ಎಷ್ಟೊಂದು ಸಲ ಕೆಳಗೆ ಬಿದ್ದರೂ.... ಮೀಸೆ ಮಣ್ಣಾದರೂ.... ಮುಖ್ಯವಾಗುವುದು ಯಾವುದು ಗೊತ್ತಾ? ನಾವು ಆ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸಿದೆವು ಎನ್ನುವುದು.

ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು, ದುಃಖಗಳು, ಅವಮಾನಗಳು ಬಂದವೆನ್ನುವುದು ನಾವು ತಪ್ಪು ಮಾಡಲು ನಮಗೆ ಸಿಗುವ ಪರವಾನಗಿಯಲ್ಲ. ಜೀವನದಲ್ಲಿ, ನಮ್ಮ ಬದುಕು ನಿರ್ಧಾರವಾಗುವುದು ನಾವು ಯಾವ ಚಪ್ಪಲಿಯನ್ನು ತೊಡುತ್ತೇವೆ ಎಂಬುದರಿಂದ ಅಲ್ಲ... ಯಾವ ದಾರಿಯಲ್ಲಿ ನಮ್ಮ ಹೆಜ್ಜೆಗಳನ್ನು ಇಡುತ್ತೇವೆ ಎಂಬುವುದರಿಂದ. ಅದನ್ನು
ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು".
ವಂದನೆಗಳೊಂದಿಗೆ.

Wednesday, November 13, 2019

"ಸಾಧನೆಯ ಹಾದಿಗೆ ಆತ್ಮವಿಶ್ವಾಸವೇ ಮೆಟ್ಟಿಲು"

SAVE NATURE, HEALTHY, WEALTHY & WISE. dgnsgreenworld Family

"ಸಾಧನೆಯ ಹಾದಿಗೆ ಆತ್ಮವಿಶ್ವಾಸವೇ ಮೆಟ್ಟಿಲು"


ಸೋಲನ್ನೇ ಅರಿಯದ ಸ್ಕಾಟ್ ಲ್ಯಾಂಡಿನ ದೊರೆ ರಾಬರ್ಟ ಬ್ರೂಸ್ ತನ್ನ ಸರಣಿ ಸೋಲುಗಳಿಂದ ಹಣ್ಣಾಗಿ ಒಮ್ಮೆ ಯುದ್ಧಭೂಮಿಯಿಂದ ಓಡಿಹೋಗಿ ಗುಹೆಯೊಂದರಲ್ಲಿ ಅವಿತಿದ್ದ.

ಅಲ್ಲಿದ್ದ ಜೇಡರ ಹುಳವೊಂದು ಗುಹೆಯ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಮುಟ್ಟುವ ಯತ್ನದಲ್ಲಿ ಕೆಳಗೆ ಬಿದ್ದರೂ ತನ್ನ ಪುಟ್ಟ ಬಲೆಗಳನ್ನು ನೇಯುತ್ತಾ ಏಳನೇ ಭಾರಿ ಯಶಸ್ವಿಯಾದದ್ದನ್ನು ಕಂಡು ತಾನೂ ಅಂತೆಯೇ ಆಗಬೇಕೆಂದು ನಿರ್ಧರಿಸಿ ಮತ್ತೆ ಯುದ್ಧದಲ್ಲಿ ಜಯಗಳಿಸಿದನು.

ಸೋಲಿನ ಮೆಟ್ಟಿಲುಗಳನ್ನು ಗೆಲುವಿನ ಸೋಪಾನವಾಗಿ ಪರಿಗಣಿಸಬೇಕು. ನಮ್ಮ ಪ್ರಯತ್ನ ಬಿಡಬಾರದು. ಇರುವೆಗಳು ತಮಗಿಂತಲೂ ಭಾರವಾದ ವಸ್ತುಗಳನ್ನು ಎಡಬಿಡದೆ ಹೊತ್ತೊಯ್ಯುವುದು ಸಫಲ ಪ್ರಯತ್ನವೇ ಅಲ್ಲವೇ....

ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಸಮುದ್ರ ಮಧ್ಯೆ ಇರುವ ಬಂಡೆಗೆ ಈಜಿಕೊಂಡು ಹೋಗಲು ಸಾಧ್ಯವಾದುದು ಈಜು ಬಲ್ಲೆ ಎಂಬ ಅವರ ಆತ್ಮವಿಶ್ವಾಸದಿಂದಲೇ. ಆತ್ಮವಿಶ್ವಾಸದ ಇನ್ನೊಂದು ಮುಖ ಧೈರ್ಯ...

ನಿಮ್ಮೊಳಗಿನ ಕಿಚ್ಚು ಹೊರಗಡೆ ಇರುವ ಬೆಂಕಿಗಿಂತ ಪ್ರಕಾಶಮಾನವಾಗಿದ್ದರೆ ಮಾತ್ರ ನೀವು ಯಶಸ್ಸನ್ನು ಪಡೆಯಬಲ್ಲಿರಿ. ಆತ್ಮವಿಶ್ವಾಸ, ಛಲ ಇದ್ದರೆ ಸೋಲು ಕೂಡ ಗೆಲುವಿಗೆ ಸ್ಪೂರ್ತಿಯಾಗುತ್ತದೆ.

ಹೌದು ನಮ್ಮ ‌ಜೀವನದಲ್ಲೂ ಆತ್ಮವಿಶ್ವಾಸವಿರಬೇಕು ಇಲ್ಲವಾದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಗುರಿ ತಲುಪುವ ದಾರಿಯಲ್ಲಿ ಏನೇ ಬರಲಿ ನಾನು ಎದುರಿಸುತ್ತೇನೆ, ನನ್ನ ಸಾಧನೆಗೆ ಅಡ್ಡಿಯಾದುದ್ದನ್ನು ಮೆಟ್ಟಿ ನಿಲ್ಲುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಇದ್ದರೆ ಒಂದಲ್ಲ ಒಂದು ದಿನ ಯಶಸ್ಸಿನೆಡೆಗೆ ಸಾಗುತ್ತೇವೆ..

Tuesday, October 29, 2019

ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು

SAVE NATURE, HEALTHY, WEALTHY & WISE. dgnsgreenworld Family
ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು..

1998 ರಲ್ಲಿ, ಕೊಡಾಕ್‌ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು.ಕೊಡಾಕ್ ದಿವಾಳಿಯಾಯಿತು ಮತ್ತು ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು.

 HMT (ವಾಚ್)
 ಬಜಾಜ್ (ಸ್ಕೂಟರ್)
 ಡೈನೋರಾ (ಟಿವಿ)
 ಮರ್ಫಿ (ರೇಡಿಯೋ)
 ನೋಕಿಯಾ (ಮೊಬೈಲ್)
 ರಾಜ್‌ದೂತ್ (ಬೈಕ್)
 ಅಂಬಾಸಿಡರ್ (ಕಾರು)
 ದಿನೇಶ್ (ಬಟ್ಟೆ)

 ಸ್ನೇಹಿತರೇ,
 ಈ ಎಲ್ಲದರ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಬಿದ್ದವು !!
 ಕಾರಣ ???
 ಕಾಲಕ್ಕೆ ತಕ್ಕಂತೆ ಅವು ಬದಲಾಗಲಿಲ್ಲ.!!

 ಮುಂಬರುವ 10 ವರ್ಷಗಳಲ್ಲಿ ಪ್ರಪಂಚವು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಇಂದು ನಡೆಯುತ್ತಿರುವ 70% ರಿಂದ 90% ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ.

 ಉಬರ್ ಕೇವಲ ಸಾಫ್ಟ್‌ವೇರ್ ಆಗಿದೆ. ತನ್ನದೇ ಆದ ಒಂದು ಕಾರು ಹೊಂದಿಲ್ಲದಿದ್ದರೂ, ಅವರು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿ.

 ಏರ್ಬನ್ಬಿ ತಮ್ಮದೇ ಆದ ಹೋಟೆಲ್ ಹೊಂದಿಲ್ಲದಿದ್ದರೂ ವಿಶ್ವದ ಅತಿದೊಡ್ಡ ಹೋಟೆಲ್ ಕಂಪನಿಯಾಗಿದೆ.

 Paytm, ola cabs, oyo ಕೊಠಡಿಗಳಂತಹ ಅನೇಕ ಉದಾಹರಣೆಗಳಿವೆ.

 ಯುಎಸ್ ನಲ್ಲಿ ವಕೀಲರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ, ಏಕೆಂದರೆ ಐಬಿಎಂ ವ್ಯಾಟ್ಸನ್ ಸಾಫ್ಟ್‌ವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆಯನ್ನು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ, 90% ಯುಎಸ್ ವಕೀಲರು ನಿರುದ್ಯೋಗಿಗಳಾಗುತ್ತಾರೆ ..10% ಉಳಿದಿರುವವರು ... ಸೂಪರ್ ಸ್ಪೆಷಲಿಸ್ಟ್ ಆಗುತ್ತಾರೆ.

 ವ್ಯಾಟ್ಸನ್ ಹೆಸರಿನ ಸಾಫ್ಟ್‌ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡುತ್ತದೆ. 2030 ರ ವೇಳೆಗೆ ಕಂಪ್ಯೂಟರ್‌ಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತವಾಗಿರುತ್ತವೆ.

 ಮುಂದಿನ 10 ವರ್ಷಗಳಲ್ಲಿ, 90% ಕಾರುಗಳು ಪ್ರಪಂಚದಾದ್ಯಂತದ ರಸ್ತೆಗಳಿಂದ ಕಣ್ಮರೆಯಾಗುತ್ತವೆ… ಉಳಿದಿರುವುವು ಎಲೆಕ್ಟ್ರಿಕ್ ಕಾರುಗಳು ಅಥವಾ ಹೈಬ್ರಿಡ್ ಆಗಿರುತ್ತವೆ… ರಸ್ತೆಗಳು ಖಾಲಿಯಾಗುತ್ತವೆ, ಪೆಟ್ರೋಲ್ ಬಳಕೆ 90% ರಷ್ಟು ಕಡಿಮೆಯಾಗುತ್ತದೆ, ಎಲ್ಲಾ ಅರಬ್ ರಾಷ್ಟ್ರಗಳು  ದಿವಾಳಿಯಾಗುತ್ತವೆ.

 ನೀವು ಉಬರ್‌ನಂತಹ ಸಾಫ್ಟ್‌ವೇರ್‌ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ ... ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಸವಾರಿ ನಿಮ್ಮ ಬೈಕ್‌ಗಿಂತ ಅಗ್ಗವಾಗಿರುತ್ತದೆ.

 ಕಾರುಗಳು ಚಾಲಕರಹಿತವಾಗಿರುವುದರಿಂದ 99% ಅಪಘಾತಗಳು ನಿಂತುಹೋಗುತ್ತವೆ.. ಇದು ಕಾರ್ ವಿಮೆ ಎಂಬ ವ್ಯವಹಾರವನ್ನು ನಿಲ್ಲಿಸುತ್ತದೆ.

 ಚಾಲಕನಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ 90% ಕಾರುಗಳು ಕಣ್ಮರೆಯಾದಾಗ, ಟ್ರಾಫಿಕ್ ಮತ್ತು ಪಾರ್ಕಿಂಗ್‌ನಂತಹ ಸಮಸ್ಯೆಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ ... ಏಕೆಂದರೆ ಒಂದು ಕಾರು ಇಂದು 20 ಕಾರುಗಳಿಗೆ ಸಮಾನವಾಗಿರುತ್ತದೆ.

 5 ಅಥವಾ 10 ವರ್ಷಗಳ ಹಿಂದೆ, ಪಿಸಿಒ ಇಲ್ಲದಂತಹ ಸ್ಥಳ ಇರಲಿಲ್ಲ. ನಂತರ ಎಲ್ಲರ ಜೇಬಿನಲ್ಲಿ ಮೊಬೈಲ್ ಫೋನ್ ಬಂದಾಗ, ನಂತರ ಪಿಸಿಒ ಸ್ಥಗಿತಗೊಳ್ಳಲು ಪ್ರಾರಂಭಿಸಿತು .. ನಂತರ ಆ ಎಲ್ಲಾ ಪಿಸಿಒ ಜನರು ಫೋನ್ ರೀಚಾರ್ಜ್ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಆನ್‌ಲೈನ್‌ನಲ್ಲಿ ರೀಚಾರ್ಜ್ ಕೂಡ ಪ್ರಾರಂಭಿಸಲಾಗಿದೆ.

 ನೀವು ಎಂದಾದರೂ ಗಮನಿಸಿದ್ದೀರಾ ..?

 ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿನ ಪ್ರತಿ ಮೂರು ಅಂಗಡಿಗಳಲ್ಲಿ ಒಂದು ಅಂಗಡಿಯಲ್ಲಿ ಮೊಬೈಲ್ ಫೋನ್‌
 ಮಾರಾಟ, ಸೇವೆ, ರೀಚಾರ್ಜ್, ಪರಿಕರಗಳು, ದುರಸ್ತಿ, ನಿರ್ವಹಣೆ ಮಾಡಲಾಗುತ್ತಿದೆ.

 ಈಗ ಎಲ್ಲವನ್ನೂ ಪೇಟಿಎಂ ಮೂಲಕ ಮಾಡಲಾಗುತ್ತದೆ .. ಈಗ ಜನರು ತಮ್ಮ ಫೋನ್‌ಗಳಿಂದಲೂ ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ .. ಈಗ ಹಣದ ವಹಿವಾಟುಗಳು ಸಹ ಬದಲಾಗುತ್ತಿವೆ .. ಕರೆನ್ಸಿ ನೋಟ್ ಅನ್ನು ಮೊದಲು ಪ್ಲಾಸ್ಟಿಕ್ ಮನಿ ಮೂಲಕ ಬದಲಾಯಿಸಲಾಗಿತ್ತು.ಈಗ ಅದು ಡಿಜಿಟಲ್ ಆಗಿ ಮಾರ್ಪಟ್ಟಿದೆ.

 ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ .. ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ, ಇಲ್ಲದಿದ್ದರೆ ನೀವು ಹಿಂದೆ ಉಳಿಯುತ್ತೀರಿ….

 ಆದ್ದರಿಂದ ...
 ಒಬ್ಬ ವ್ಯಕ್ತಿಯು ಸಮಯಕ್ಕೆ ತಕ್ಕಂತೆ ತನ್ನ ವ್ಯವಹಾರ ಮತ್ತು ಸ್ವಭಾವವನ್ನು ಬದಲಾಯಿಸುತ್ತಲೇ ಇರಬೇಕು.

ಮುಂದಿನ ದಿನಗಳಲ್ಲಿ ಕೇವಲ ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಇಡೀ ಜಗತ್ತನ್ನು ಆವರಿಸುವುದರಲ್ಲಿ ಸಂಶಯವಿಲ್ಲ.

 ಸಮಯದೊಂದಿಗೆ ಸಾಗಿ ಮತ್ತು ಯಶಸ್ಸನ್ನು ಸಾಧಿಸಿ.

Saturday, October 26, 2019

ಪತ್ನಿಯ ತಪಸ್ಸಿಗೆ ಮೆಚ್ಚಿ ದೇವರು ಅನುಗ್ರಹಿಸಿದ ವರ ?

SAVE NATURE, HEALTHY, WEALTHY & WISE. dgnsgreenworld Family
*ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳುತ್ತಿದ್ದರು. ಕೆಲವು ವರ್ಷಗಳ ನಂತರ ಹೆಂಡತಿಗೆ ಗಂಡನ ಪ್ರೀತಿಯ ಬಗ್ಗೆ ಅನುಮಾನ ಶುರುವಾಯಿತು. ಸದಾಕಾಲ ಗಂಡನ ಪ್ರೀತಿ ನನ್ನ ಮೇಲೆ ಇರಬೇಕು ಎಂಬ ಆಸೆಯಿಂದ ಭಗವಂತನಲ್ಲಿ ವರನನ್ನು ಬೇಡಲು ತಪಸ್ಸಿಗೆ ಕುಳಿತಳು.*

*ಹೆಂಡತಿಯ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದನು. ಅವಳು ದೇವರಲ್ಲಿ 5 ವರಗಳನ್ನು ಕೇಳಿದಳು.*

        *1) ನನ್ನ ಗಂಡ ನನ್ನ ಬಿಟ್ಟು ಎಲ್ಲಿಗೂ ಹೋಗಬಾರದು.*
         *2) ನನ್ನ ಗಂಡನ  ಜೀವನದಲ್ಲಿ ನಾನೆ ಮಹತ್ವಪೂರ್ಣ ಆಗಿರಬೇಕು.*
        *3) ಅವನಿಗೆ ನಿದ್ದೆ ಬಂದಾಗ ನಾನು ಪಕ್ಕದಲ್ಲೇ ಇರಬೇಕು.*
        *4) ಬೆಳಿಗ್ಗೆ ಅವನು ಕಣ್ಣು ಬಿಟ್ಟಾಗ ಮೊದಲು ನನ್ನನ್ನೆ ನೋಡಬೇಕು.*
        *5) ನನಗೆ ಏನಾದ್ರೂ ತೊಂದರೆ ಆದರೆ ಅವನ ಜೀವ ಹೋದಂಗೆ ಆಗಬೇಕು.*

*ದೇವರು:- ನೋಡಮ್ಮ, ಈ ಕಲಿಗಾಲದಲ್ಲಿ ಗಂಡನನ್ನು ಶ್ರೀರಾಮನಾಗಿ ಮತ್ತು ಹೆಂಡತಿಯನ್ನು ಸೀತೆಯಾಗಿ ಊಹಿಸಿಕೊಳ್ಳುವುದು ಕಷ್ಟ. ಮತ್ತೊಮ್ಮೆ ಯೋಚಿಸಿ ವರ ಕೇಳು.*
        *ಹೆಂಡತಿ: ಇಲ್ಲ, ನನಗೆ ಆ 5 ವರಗಳೇ ಬೇಕು.*
         *ದೇವರು: ತಥಾಸ್ತು.*
*ಹೆಂಡತಿಯು " ಒಂದು ಮೊಬೈಲ್ ಫೋನ್ " ಆಗಿ ಬದಲಾದಳು.
ವಂದನೆಗಳೊಂದಿಗೆ

Monday, October 21, 2019

JOHARA Complete care toothpaste, health benefits

https://youtu.be/GkV5emBjsxU

*ನಾಳೆಗೆ ಬೇಕೆಂಬ ದುರಾಶೆಗೆ ಬಲಿಯಾಗಿ ಇಂದಿನ ಸುಖ ಕಳೆದುಕೊಳ್ಳುತ್ತೇವೆ.*

SAVE NATURE, HEALTHY, WEALTHY & WISE. dgnsgreenworld Family

_*ಇದನ್ನು ತಪ್ಪದೇ ಓದಿ*_

*ಸ್ವಾರಸ್ಯವಾದ ಕಥೆ*                             



*ತೋಟದ ದಂಡೆಗುಂಟ ಹಚ್ಚಿದ ಮಾವಿನ ಮರಗಳಲ್ಲಿ ಆ ವರ್ಷ ಸಾಕಷ್ಟು ಕಾಯಿಗಳಾಗಿದ್ದವು. ಮಾಲಿಕನು ಅವುಗಳನ್ನೆಲ್ಲ ಕೋಣೆಯ ಒಣಹುಲ್ಲು ಹಾಸಿನ ಮೇಲೆ ಹರವಿ ಮೇಲೆ ಒಂದಿಷ್ಟು ಹುಲ್ಲು ಹಾಕಿ ಕಂಬಳಿ, ಗೋಣಿಚೀಲ ಹೊದಿಸಿ ಹಣ್ಣು ಮಾಡಲೆಂದು ಇಟ್ಟನು. ವಾರದ ನಂತರ ಕೋಣೆಯೊಳಗಿಂದ ಮಾವಿನ ಹಣ್ಣಿನ ಪರಿಮಳ ಬರಲಾರಂಭಿಸಿತು. ಅವುಗಳಲ್ಲಿ ಎಂಟ್ಹತ್ತು ಕಾಯಿಗಳು ಒಳ್ಳೆ ಹಣ್ಣುಗಳಾಗಿ ತಿನ್ನಲಿಕ್ಕೆ ತಯಾರಾಗಿದ್ದವು. ಉಳಿದವು ಸ್ವಲ್ಪ ಸ್ವಲ್ಪ ಹಣ್ಣುಗಳಾಗಿ ಕೆಲ ದಿನಗಳಲ್ಲಿ ಮಾಗಲಿದ್ದವು. ಅಷ್ಟರಲ್ಲಿ ಮಾಲಿಕನ ದೃಷ್ಟಿ ಒಂದು ಮೂಲೆಯ ಕಡೆಗೆ ಹೊರಳಿತು. ಅಲ್ಲಿ ನಾಲ್ಕೈದು ಕಾಯಿಗಳು ಸಂಪೂರ್ಣ ಹಣ್ಣುಗಳಾಗಿ ಮೇಲ್ಭಾಗದಲ್ಲಿ ಕೊಳೆಯಲಾರಂಭಿಸಿದ್ದವು.* ಅವನು ಆ ಹಣ್ಣುಗಳನ್ನು ಮಾತ್ರ ಅಲ್ಲಿಂದ ಹೊರತೆಗೆದು-
*‘ಇವಷ್ಟನ್ನು ಇಂದು ತಿಂದರಾಯಿತು. ಹೇಗೂ ನಾಳೆಯಿಂದ ಒಳ್ಳೆಯ ಹಣ್ಣುಗಳು ಸಿಗುತ್ತವೆ’ ಎಂದೆಣಿಸಿ ಮೇಲಿನ ಕೊಳೆತ ಭಾಗವನ್ನು ಚಾಕುವಿನಿಂದ ತೆಗೆದು ಅರ್ಧರ್ಧ ಭಾಗವನ್ನು ತಿಂದನು*.
ಮರುದಿನ ಮತ್ತೆ ಐದಾರು ಹಣ್ಣುಗಳು ತಯಾರಾಗಿದ್ದವು. *ಆದರೆ ನಿನ್ನೆ ತಿನ್ನಲು ತಯಾರಾಗಿದ್ದ ಆ ಎಂಟ್ಹತ್ತು ಹಣ್ಣುಗಳು ಇಂದು ಅರ್ಧ ಕೊಳೆತಿದ್ದವು. ಆಗ ಅವುಗಳನ್ನು ಬಿಸಾಡಲು ಮನಸ್ಸಾಗದೆ ಮತ್ತೆ ಅವುಗಳನ್ನಷ್ಟೇ ಹೊರಗೆ ತೆಗೆದು ಅರ್ಧಭಾಗವನ್ನು ತಿಂದ.*
*ಮೂರನೇ ದಿನವೂ ಇದೇ ಪರಿಯಾಯಿತು. ಅಂತೂ ಅವನು ಆ ಎಲ್ಲ ಹಣ್ಣುಗಳನ್ನು ಅರ್ಧಕೊಳೆತ ಸ್ಥಿತಿಯಲ್ಲೇ ತಿಂದ*.
*ನಿಜ ಹೇಳಬೇಕೆಂದರೆ ಅವುಗಳನ್ನು ಕೊಳೆಯಿಸಿಯೇ ತಿಂದ*. ಒಂದು ವೇಳೆ ಮೊದಲನೇ ದಿನವೇ ಧೈರ್ಯಮಾಡಿ, ಯೋಚಿಸಿ ಕೊಳೆತ ಹಣ್ಣುಗಳನ್ನು ಬಿಸಾಡಿ ಒಳ್ಳೆಯ ಹಣ್ಣುಗಳನ್ನು ತಿನ್ನಲಾರಂಭಿಸಿದ್ದರೆ *ಪ್ರತಿದಿನವೂ ಒಳ್ಳೆಯ ಹಣ್ಣುಗಳನ್ನೇ ಅವನು ತಿನ್ನಬಹುದಾಗಿತ್ತಲ್ಲವೇ?*

ನಮ್ಮಲ್ಲಿಯೂ ಬಹುತೇಕರು ಇದೇ ರೀತಿ ಜೀವನ ವ್ಯಯಿಸುತ್ತೇವೆ.
*ನಾಳೆಗೆ ಬೇಕೆಂಬ ದುರಾಶೆಗೆ ಬಲಿಯಾಗಿ ಇಂದಿನ ಸುಖ ಕಳೆದುಕೊಳ್ಳುತ್ತೇವೆ.* ಸುಖವೆನ್ನುವುದು ಬರೀ ಮರೀಚಿಕೆಯಾಗುತ್ತದೆ.
*ಊಟ ಆರಂಭಿಸಿದ ತಕ್ಷಣ ತಂಗುಳ ಏನಾದರೂ ಉಳಿದಿದ್ದರೆ ತೀರಿಸಿ ಆ ಮೇಲೆ ಹಸಿವೆಯುಳಿದಿದ್ದರೆ ಬಿಸಿ ಅನ್ನ ಉಣ್ಣುತ್ತೇವೆ*.
 *ಆ ಉಳಿದ ಬಿಸಿ ಅನ್ನವನ್ನು ಮತ್ತೆ ಮರುದಿನ ತಿನ್ನುತ್ತೇವೆ* ಯಾರಾದರೂ ಉಡುಗೊರೆಯಾಗಿ ಕೊಟ್ಟ *ಒಳ್ಳೆಯ ಪೆನ್ನುಗಳನ್ನು ಬೀರುವಿನಲ್ಲಿಟ್ಟು ಪ್ಲಾಸ್ಟಿಕ್ ಪೆನ್ನಲ್ಲಿ ಬರೆಯುತ್ತೇವೆ*. ಸ್ವಲ್ಪದಿನಗಳ ಬಳಿಕ ನೋಡಿದಾಗ
*ಆ ಒಳ್ಳೆಯ ಪೆನ್ನುಗಳೂ ಬರೆಯಲಾರದ ಸ್ಥಿತಿಗೆ ಬಂದಿರುತ್ತವೆ.*
*ಹೊಸ ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟು ಹಳೆಯ ಚಿಕ್ಕದಾದ ಮನೆಯಲ್ಲಿ ಇರುತ್ತೇವೆ.*
*ಸಮಯವನ್ನೂ ಹೀಗೆ ಕಳೆದು ಸೃಜನಾತ್ಮಕ, ಸಮಾಜಮುಖಿ ಅಥವಾ ಆಧ್ಯಾತ್ಮಿಕ ಕಾರ್ಯದ ಅವಕಾಶ ಬಂದಾಗ ಈಗ ಸಮಯವಿಲ್ಲವೆಂದು ಬಿಡುತ್ತೇವೆ. ಹಾಗಾದರೆ ಜೀವನವನ್ನು ಆನಂದಿಸುವುದು ಯಾವಾಗ?*

ಭಗವದ್ಗೀತೆಯ ಕರ್ಮಯೋಗವು ಜೀವನವನ್ನು ಹೇಗೆ ಜೀವಿಸಬೇಕೆಂದು ಸುಂದರವಾಗಿ ಹೇಳಿದೆ. *ನಾವೆಲ್ಲರೂ ಕರ್ಮ ಮಾಡುತ್ತೇವೆ ಆದರೆ ಅದು ಲೋಭಮಯವಾಗಿರುವ ತಪ್ಪು ನಿರ್ಧಾರಗಳಿಂದಾಗಿ ‘ದೈವ ಕೊಟ್ಟರೂ ದರಿದ್ರತನ ತಪ್ಪಲಿಲ್ಲ’ ಎಂಬಂತೆ ಆಗಿ ಬಿಡುತ್ತದೆ*.
*ಹಾಗಾಗದಂತೆ ಪ್ರಸನ್ನತೆಯಿಂದ ಜೀವಿಸೋಣ*
ವಂದನೆಗಳೊಂದಿಗೆ

ಇದುವೇ ನಮ್ಮ ಭವ್ಯ ಮೈಸೂರು

https://youtu.be/Z5PmaX6vAAA

ನಮ್ಮ ದೈನಂದಿನ ಆಹಾರ ಕ್ರಮವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.

SAVE NATURE, HEALTHY, WEALTHY & WISE. dgnsgreenworld Family

1) ನೀವು ಬೆಳಿಗ್ಗೆ ಉಪಾಹಾರ ಮಾಡದಿದ್ದಾಗ ಹೊಟ್ಟೆ ಹೆದರುತ್ತದೆ.

(2) ನೀವು 24 ಗಂಟೆಗಳಲ್ಲಿ 10 ಲೋಟ ನೀರು ಕುಡಿಯದಿದ್ದಾಗ ಮೂತ್ರಪಿಂಡಗಳು ಭಯಪಡುತ್ತವೆ.

(3) ನೀವು 11 ಗಂಟೆಯವರೆಗೆ ನಿದ್ರೆ ಮಾಡದಿದ್ದಾಗ ಮತ್ತು ಸೂರ್ಯೋದಯದಲ್ಲಿ ಎಚ್ಚರಗೊಳ್ಳದಿದ್ದಾಗ ಪಿತ್ತಕೋಶವು ಹೆದರುತ್ತದೆ.

(4) ನೀವು ಶೀತ ಮತ್ತು ಹಳೆಯ ಆಹಾರವನ್ನು ಸೇವಿಸಿದಾಗ ಸಣ್ಣ ಕರುಳು ಹೆದರುತ್ತದೆ.

(5) ನೀವು ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ ದೊಡ್ಡ ಕರುಳುಗಳು ಹೆದರುತ್ತವೆ.

(6) ಸಿಗರೇಟ್ ಮತ್ತು ಬೀಡಿಗಳ ಹೊಗೆ, ಕೊಳಕು ಮತ್ತು ಕಲುಷಿತ ವಾತಾವರಣದಲ್ಲಿ ನೀವು ಉಸಿರಾಡುವಾಗ ಶ್ವಾಸಕೋಶವು ಹೆದರುತ್ತದೆ.

(7) ನೀವು ಭಾರವಾದ ಕರಿದ ಆಹಾರ, ಜಂಕ್ ಮತ್ತು ತ್ವರಿತ ಆಹಾರವನ್ನು ಸೇವಿಸಿದಾಗ ಯಕೃತ್ತು ಭಯವಾಗುತ್ತದೆ.

(8) ನಿಮ್ಮ als ಟವನ್ನು ಹೆಚ್ಚು ಉಪ್ಪು ಮತ್ತು ಕೊಲೆಸ್ಟ್ರಾಲ್ ನೊಂದಿಗೆ ಸೇವಿಸಿದಾಗ ಹೃದಯ ಭಯವಾಗುತ್ತದೆ.

(9) ರುಚಿ ಮತ್ತು ಮುಕ್ತವಾಗಿ ಲಭ್ಯವಿರುವುದರಿಂದ ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದಾಗ ಮೇದೋಜ್ಜೀರಕ ಗ್ರಂಥಿಯು ಹೆದರುತ್ತದೆ.

(10) ನೀವು ಮೊಬೈಲ್ ಮತ್ತು ಕಂಪ್ಯೂಟರ್ ಪರದೆಯ ಬೆಳಕಿನಲ್ಲಿ ಕತ್ತಲೆಯಲ್ಲಿ ಕೆಲಸ ಮಾಡುವಾಗ ಕಣ್ಣುಗಳು ಭಯಭೀತರಾಗುತ್ತವೆ.

ಮತ್ತು

(11) ನೀವು ನಕಾರಾತ್ಮಕ ವಿಷಯಗಳನ್ನು ಯೋಚಿಸಲು ಪ್ರಾರಂಭಿಸಿದಾಗ ಮೆದುಳು ಹೆದರುತ್ತದೆ.

ನಿಮ್ಮ ದೇಹದ ಭಾಗಗಳನ್ನು ನೋಡಿಕೊಳ್ಳಿ ಮತ್ತು ಅವರನ್ನು ಹೆದರಿಸಬೇಡಿ.

ಈ ಭಾಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಲಭ್ಯವಿರುವವುಗಳು ತುಂಬಾ ದುಬಾರಿಯಾಗಿದೆ ಮತ್ತು ಬಹುಶಃ ನಿಮ್ಮ ದೇಹದಲ್ಲಿ ಹೊಂದಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ದೇಹದ ಭಾಗಗಳನ್ನು ಆರೋಗ್ಯವಾಗಿಡಿ.
ವಂದನೆಗಳೊಂದಿಗೆ

Saturday, October 12, 2019

ಮನಸ್ಸಿದ್ದರೆ ಮಾರ್ಗ, ಮನಸ್ಸಿದ್ದೆಡೇ ಜೇವನ.

SAVE NATURE, HEALTHY, WEALTHY & WISE. dgnsgreenworld Family

*Namaste*  🔯🔯🔯☸☸

*ನುಂಗುವ ಮನಸಿದ್ದರೆ*
       ಕೋಪವನ್ನು ನುಂಗು
*ಮಾಡುವ ಮನಸಿದ್ದರೆ*
       ಸತ್ಕಾರ್ಯವನ್ನು ಮಾಡು
*ತ್ಯಜಿಸುವ ಮನಸಿದ್ದರೆ*
         ಆಹಂಕಾರ ತ್ಯಜಿಸು
*ಹೇಳುವ ಮನಸಿದ್ದರೆ*
        ಸತ್ಯವನ್ನು ಹೇಳು
*ಕೊಡುವ ಮನಸಿದ್ದರೆ*
       ವಿದ್ಯೆ,ಅನ್ನವನ್ನು ಕೋಡು
*ನೆನಯುವ ಮನಸಿದ್ದರೆ*
   ಸಹಾಯ ಮಾಡಿದವರನ್ನು ನೆನೆ
*ಬಾಳುವ ಮನಸಿದ್ದರೆ*
       ಹಕ್ಕಿಯಂತೆ ಬಾಳು
*ನಡೆಯುವ ಮನಸಿದ್ದರೆ*
      ಧರ್ಮದಂತೆ ನಡೆ
*ಪೂಜಿಸುವ ಮನಸಿದ್ದರೆ*
    ತಂದೆ ತಾಯಿಯನ್ನು ಪೂಜಿಸು
*ಉತ್ತಮ ಆರೋಗ್ಯಕ್ಕೆ ಮನಸಿದ್ದರೆ*
ಪ್ರತಿ ದಿನ ಬೆಳಿಗ್ಗೆ ಯೋಗ ಮಾಡು
*ಚಂಚಲ ಮನಸ್ಸಿದ್ದರೆ*
ಪ್ರತಿ ನಿತ್ಯ ಧ್ಯಾನ ಮಾಡು
     *🙏ಶುಭೋದಯ*🙏

Wednesday, October 9, 2019

ಹಚ್ಚಿದರೆ ಶ್ರೀಗಂಧವನ್ನು ಹಚ್ಚೋಣ ನಮ್ಮ ಕೈ ಗಂಧ ವಾಗುತ್ತದೆ.

SAVE NATURE, HEALTHY, WEALTHY & WISE. dgnsgreenworld Family
💐ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ,
ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ,
ಯಾವುದನ್ನು ಹಚ್ಚಬೇಕೆಂದು ನಾವೇ ನಿರ್ಧರಿಸಬೇಕು💐

    💐ಶುಭೋಧಯ💐

ಜೀವನವನ್ನು ಹಗುರವಾಗಿ ತೆಗೆದುಕೊಳ್ಳಿ,. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ, ಆರೋಗ್ಯವಂತ ಜೀವನ ಮುಖ್ಯ.

SAVE NATURE, HEALTHY, WEALTHY & WISE. dgnsgreenworld Family
ವಯಸ್ಸು 20 ಇರುವಾಗ *"ಸ್ವದೇಶ" ಮತ್ತು "ವಿದೇಶ" ಎರಡೂ ಒಂದೇ.* (ನೀವು ಎಲ್ಲಿದ್ದರೂ ಪರವಾಗಿಲ್ಲ. ಅಲ್ಲಿಗೆ ಹೊಂದಿಕೊಳ್ಳುವಿರಿ)

ವಯಸ್ಸು 30 ಆದಾಗ *"ರಾತ್ರಿ" ಮತ್ತು "ಹಗಲು " ಎರಡೂ ಒಂದೇ.* ( ಕೆಲವು ದಿನ ನಿದ್ದೆ ಇಲ್ಲ ದಿದ್ದರೂ ಏನೂ ತೊಂದರೆ ಆಗಲ್ಲ)

ವಯಸ್ಸು 40 ಆದಾಗ *"ಅತಿ ಹೆಚ್ಚು ಓದಿದವರು" ಮತ್ತು "ಕಡಿಮೆ ಓದಿದವರು" ಒಂದೇ.* ( ಕಡಿಮೆ ಓದಿದವರೂ ಕೆಲವೊಮ್ಮೆ ಹೆಚ್ಚು ಸಂಪಾದಿಸುತ್ತಾರೆ)

ವಯಸ್ಸು 50 ಆದಾಗ
*"ಸೌಂದರ್ಯ" ಮತ್ತು "ಕುರೂಪ" ಒಂದೇ.* (ನೀವು ಎಷ್ಟೇ ಸುಂದರವಾಗಿದ್ದರೂ, ಚರ್ಮ ನೆರಿಗೆ ಬೀಳುವುದು, ಅಲ್ಲಲ್ಲಿ ಕಪ್ಪಾಗುವುದು, ಮುಚ್ಚಿಡಲು ಸಾಧ್ಯವಿಲ್ಲ)

ವಯಸ್ಸು 60 ಆದಾಗ *"ಎತ್ತರದ ಸ್ಥಾನ", "ಕೆಳಗಿನ ಸ್ಥಾನ" ಒಂದೇ.* (ಅಧಿಕಾರಿಯು ನಿವೃತ್ತಿಗೊಂಡ ಮೇಲೆ ಗೌರವ ಕೊಡಲಾರ)

ವಯಸ್ಸು 70 ಆದಾಗ *"ದೊಡ್ಡ ಮನೆ" ಮತ್ತು "ಸಣ್ಣ ಮನೆ" ಒಂದೇ.* (ಸಂದು ನೋವು, ಚಲಿಸಲು ಕಷ್ಟ, ಇದ್ದವರಿಗೆ ಸ್ವಲ್ಪ ಜಾಗ ಕೂರಲು ಸಿಕ್ಕರೆ ಸಾಕು)

ವಯಸ್ಸು 80 ಆದಾಗ *"ಹಣ ಇರುವುದು" ಮತ್ತು "ಹಣ ಇಲ್ಲದಿರುವುದು" ಒಂದೇ.* (ನಿಮಗೆ ಹಣ ಖರ್ಚು  ಮಾಡಬೇಕೆನ್ನಿಸಿದರೂ ಎಲ್ಲಿ ಖರ್ಚು ಮಾಡಬೇಕೆಂದು ತಿಳಿಯುವುದಿಲ್ಲ)

ವಯಸ್ಸು 90 ಆದಾಗ *"ನಿದ್ದೆ ಮಾಡೋದು" ಹಾಗೂ "ಎಚ್ಚರದಿಂದಿರುವುದು" ಎರಡೂ ಒಂದೇ.* (ಎದ್ದ ಮೇಲೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ)

ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.

*ದೀರ್ಘಾವಧಿಯ ಜೀವನ ನೋಡಿದರೆ ನಾವೆಲ್ಲಾ ಒಂದೇ. ಆದ್ದರಿಂದ ಎಲ್ಲಾ ಒತ್ತಡ / ಆತಂಕ ಗಳನ್ನು ಮರೆತು ಜೀವನವನ್ನು ಆನಂದಿಸೋಣ🙏

Tuesday, October 8, 2019

ಜೀವನದಲ್ಲಿ ಶ್ವಾಸ ಮತ್ತು ವಿಶ್ವಾಸದ ಪ್ರಾಮುಖ್ಯತೆ ಎಷ್ಟು?

SAVE NATURE, HEALTHY, WEALTHY & WISE. dgnsgreenworld Family

💐ಜೀವನದಲ್ಲಿ ಶ್ವಾಸ ಮತ್ತು ವಿಶ್ವಾಸ ಒಂದೇ ರೀತಿಯ ಪ್ರಾಮುಖ್ಯತೆಯನ್ನು ಪಡೆದಿವೆ
ಶ್ವಾಸ ನಿಂತರೆ
ಜೀವನ ಕೊನೆಯಾಗುತ್ತದೆ
ವಿಶ್ವಾಸ ನಿಂತರೆ
ಸಂಬಂಧ ಕೊನೆಯಾಗುತ್ತದೆ💐

     💐ಶುಭೋಧಯ💐

Sunday, October 6, 2019

ಚಿನ್ನದ ಅಂಬಾರಿ ಮೈಸೂರಿನ ಅರಮನೆಗೆ ಬಂದಿದ್ದು ಹೇಗೆ ?

SAVE NATURE, HEALTHY, WEALTHY & WISE. dgnsgreenworld Family

ಚಿನ್ನದ ಅಂಬಾರಿ ಮೈಸೂರಿನ ಅರಮನೆಗೆ ಬಂದಿದ್ದು ಹೇಗೆ ? ಅಂಬಾರಿ ಅರಮನೆಗೆ ಬಂದ ರೋಚಕ ಕಥೆ ನೋಡಿ…      ಮೈಸೂರು ದಸರ ಎಂದರೆ ಅದು ಕನ್ನಡ ನಾಡಿಗೆ ನಾಡಹಬ್ಬವಾದರೆ, ಈ ಸಾಂಸ್ಕೃತಿಕ ಹಬ್ಬದ ಕೀರ್ತಿ ಮಾತ್ರ ವಿಶ್ವಪ್ರಸಿದ್ಧ, ಶತಮಾನಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಈ ಆಚರಣೆಯಲ್ಲಿ ಬಹು ಮುಖ್ಯವಾದ ಆಕರ್ಷಣೆ ಎಂದರೆ ಅದು ಚಿನ್ನದ ಅಂಬಾರಿ‌. ಜಂಬೂ ಸವಾರಿಯಲ್ಲಿ ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತರುವ, ಈ ಅಂಬಾರಿಯಲ್ಲಿ ವಿರಾಜಮಾನಳಾಗಿ ಬರುವ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲು ಜನರು ದೇಶ ವಿದೇಶಗಳಿಂದ ಬರುತ್ತಾರೆ. ಇಂತಹ ಅಂಬಾರಿಯ ಬಗ್ಗೆ ನಾವು ತಿಳಿಯಲೇಬೇಕಾದ ಇತಿಹಾಸವಿದೆ. ಅತ್ತ ಒಂದು ದೃಷ್ಟಿ ಹರಿಸೋಣ ಬನ್ನಿ.      ಅಂಬಾರಿಯ ಇತಿಹಾಸ ಬಹಳ ರೋಚಕವಾಗಿದೆ. ಮೂಲತಃ ಈ ರತ್ನ ಖಚಿತ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಲ್ಲಿ ಇತ್ತು. ಕಾಲಾಂತರದಲ್ಲಿ ದೇವಗಿರಿ ಅವನತಿ ಹೊಂದಿದಾಗ, ಅಂಬಾರಿಯನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕನಿಗೆ ಹಸ್ತಾಂತರಿಸಿ, ಆತನಿಗೆ ಅದನ್ನು ಸುರಕ್ಷಿತವಾಗಿಡುವಂತೆ ಮನವಿ ಮಾಡಿಕೊಂಡರು. ಆಗ ಮುಮ್ಮಡಿ ಸಿಂಗ ನಾಯಕನು ಇದನ್ನು ಬಳ್ಳಾರಿ ಹತ್ತಿರವಿದ್ದ ರಾಮದುರ್ಗ ಕೋಟೆಯಲ್ಲಿ ಅಡಗಿಸಿ ಇಟ್ಟನು. ನಂತರ ಈತನ ಮಗ ಕಂಪಿಲರಾಯ ತನ್ನ ರಾಜ್ಯ ವಿಸ್ತರಣೆ ಮಾಡಿ, ಕಮ್ಮಟದುರ್ಗವನ್ನು ತನ್ನ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಆಗ ಅಲ್ಲಿ ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಆರಾಧನೆ ಮಾಡುತ್ತಾನೆ. ಆದರೆ ಮುಂದೆ ದೆಹಲಿ ಸುಲ್ತಾನರು ಕಂಪಿಲ ರಾಜ್ಯದ ಮೇಲೆ ಧಾಳಿ ಮಾಡಿದಾಗ, ಅಲ್ಲಿ ಭಂಡಾರ ಸಂರಕ್ಷಕರಾದ ಹಕ್ಕ-ಬುಕ್ಕರೆಂಬ ಸಹೋದರರು ಈ ಅಂಬಾರಿಯನ್ನು ಬಚ್ಚಿಡುತ್ತಾರೆ. ಮುಂದೆ ದೆಹಲಿ ಸುಲ್ತಾನದ ಅವನತಿಯ ನಂತರ ಈ ಸಹೋದರರು ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಅನಂತರ ಹಂಪೆ ಅವರ ಸಾಮ್ರಾಜ್ಯದ ಎರಡನೇ ರಾಜಧಾನಿಯಾದಾಗ ಅಂಬಾರಿ ಹಂಪಿಗೆ ಬಂದು ಸೇರುತ್ತದೆ. ವಿಜಯನಗರ ಸಾಮ್ರಾಜ್ಯ ಅವನತಿಯ ಕಾಲದಲ್ಲಿ ಅಂಬಾರಿಯನ್ನು ರಕ್ಷಿಸಲು ಅದನ್ನು ಪೆನುಗೊಂಡಕ್ಕೆ ಸ್ಥಳಾಂತರ ಮಾಡುತ್ತಾರೆ. ಮುಂದೆ ಅದು ಅಲ್ಲಿಂದ ಶ್ರೀ ರಂಗಪಟ್ಟಣ್ಣ ವನ್ನು ಸೇರಿ ಕಡೆಗೆ ಒಡೆಯರ ಅಧೀನದಲ್ಲಿ ಮೈಸೂರನ್ನು ಸೇರುತ್ತದೆ.ಹೀಗೆ ಅಂಬಾರಿ ವಿವಿಧ ಅರಸರ ಕಾಲದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಕಡೆಗೆ ಮೈಸೂರಲ್ಲಿ ನೆಲೆಗೊಂಡಿದೆ. ಇಂದಿಗೂ ಮೈಸೂರು ದಸರ ಸಂದರ್ಭದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಚಿನ್ನದ ಅಂಬಾರಿ ತನ್ನೊಡನೆ ಇತಿಹಾಸವನ್ನೇ ಹೊತ್ತು ತಿರುಗುತ್ತಿದೆ ಎಂದರೂ ತಪ್ಪಾಗಲಾರದು.
ವಂದನೆಗಳೊಂದಿಗೆ.

Friday, October 4, 2019

ಮಾರಕ ಕಾಯಿಲೆ ಏಡ್ಸ್ ಮತ್ತು ಕ್ಯಾನ್ಸರ್‌ಗೆ ಔಷಧಿ ಕಂಡುಹಿಡಿದಿರುವ ರೈತ…!

SAVE NATURE, HEALTHY, WEALTHY & WISE. dgnsgreenworld Family

ಮಾರಕ ಕಾಯಿಲೆ ಏಡ್ಸ್ ಮತ್ತು ಕ್ಯಾನ್ಸರ್‌ಗೆ ಔಷಧಿ ಕಂಡುಹಿಡಿದಿರುವ ರೈತ…!   ಕ್ಯಾನ್ಸರ್ ಕಾಯಿಲೆ ಜೊತೆಗೆ ಮಾರಕ ಕಾಯಿಲೆಯಾದ ಎಚ್ಐವಿ ಏಡ್ಸ್‌ಗೂ ಕೂಡ ರಾಮಬಾಣವೊಂದನ್ನು ಗಡಿಜಿಲ್ಲೆಯ ರೈತನೊಬ್ಬ ಕಂಡುಹಿಡಿದಿದ್ದು ಸಾವಿನ ಅಂತಿಮ ಕ್ಷಣಗಳ ಎಣಿಸುವ ಎಚ್ಐವಿ ಸೋಂಕಿತರಿಗೆ ಆಶಾಕಿರಣವಾಗಿದ್ದಾರೆ. 
   ಮಹೇಶ್ ಕುಮಾರ್ ಎಂಬ ರೈತ ಹಲವಾರು ವರ್ಷಗಳಿಂದ ತಮ್ಮ ಮನೆಯ ಮುಂದೆ ಬೆಳೆದ ಒಂದು ಮರದ ಎಲೆಗಳಿಂದ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ಕೊಡುತ್ತಾ ಬಂದಿದ್ದಾರೆ. ಸದ್ಯ ಈಗ ಅದೇ ಎಲೆಯಗಳಲ್ಲೇ ಎಚ್.ಐ.ವಿ ಏಡ್ಸ್ ಸೋಂಕಿತರಿಗೂ ಕೂಡ ಚಿಕಿತ್ಸೆ ನೀಡುತ್ತಿದ್ದು, ಸೋಂಕಿತರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗತೊಡಗಿದೆ.   
   ಎಷ್ಟೋ ಮಂದಿ ಮಾರಣಾಂತಿಕ ಕಾಯಿಲೆಗೆ ಬಲಿಯಾಗುವ ಬದಲು ಕಾಯಿಲೆ ಬಂದಿದೆ ಎಂದು ತಿಳಿದಾಗಲೇ ಕೊರಗಿ ಮೃತಪಡುವಂತಹ ಕಾಯಿಲೆಗಳಲ್ಲಿ ಒಂದು ಎಚ್ಐವಿ ಏಡ್ಸ್. ವಿಜ್ಞಾನಿಗಳೂ ಕೂಡ ಏಡ್ಸ್ನನ್ನು ಸಂಪೂರ್ಣವಾಗಿ ಗುಣಪಡಿಸುವಲ್ಲಿ ಇನ್ನೂ ಸಫಲವಾಗದಿರುವುದು ಕಣ್ಮುಂದೆಯೇ ಇರುವಾಗಲೇ ನಮ್ಮ ರೈತ ಮುಖಂಡ ಮಹೇಶ್ ಕುಮಾರ್ ಅದಕ್ಕೊಂದು ರಾಮಬಾಣವನ್ನು ಕಂಡುಹಿಡಿದಿದ್ದಾರೆ.     ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರದ ಸಾವಯವ ರೈತ ಮತ್ತು ಚಳವಳಿಗಾರ ಹನುಮಫಲದ ಮೂಲಕ ಎಚ್ಐವಿ ಸೋಂಕಿಗೆ ರಾಮಬಾಣ ಆವಿಷ್ಕರಿಸಿದ್ದಾರೆ.   
  ಈಗಾಗಲೇ ಕ್ಯಾನ್ಸರ್ ರೋಗಕ್ಕೆ ಹನುಮಫಲದ ಮೂಲಕ ಹಲವರನ್ನು ಗುಣಪಡಿಸಿರುವ ಮಹೇಶ್ ಕುಮಾರ್ ಎಚ್ಐವಿ ಸೋಂಕಿಗೂ ಕೂಡ ಹನುಮಫಲದ ಮೂಲಕವೇ ಮದ್ದು ಕಂಡುಹಿಡಿದಿದ್ದು ಈಗಾಗಲೇ ಗೌಪ್ಯವಾಗಿ ನೂರಾರು ಮಂದಿ ಇದರ ಲಾಭ ಪಡೆದಿದ್ದಾರೆ. ಬಿಳಿರಕ್ತ ಕಣಗಳ ಸಂಖ್ಯೆ ಹೆಚ್ಚಿಸಿಕೊಂಡು ಸೋಂಕಿನ ಬಾಧೆಯಿಂದ ಬಿಡುಗಡೆಯಾಗುತ್ತಿದ್ದಾರೆ.   16 ಹನುಮಫಲದ ಎಲೆ ಮತ್ತು ಕೆಲವು ಬೇರುಗಳನ್ನು 4 ಲೀಟರ್ ನೀರಿನಲ್ಲಿ ಕುದಿಸುತ್ತಾ 1 ಲೀಟರ್ ಮಾಡಿಕೊಳ್ಳಬೇಕು ಅದನ್ನು ಬೆಳಗ್ಗೆ ಸಂಜೆ ನಿಯಮಿತವಾಗಿ 50 ml. ಯಂತೆ 80 ದಿನ ಸೇವಿಸುತ್ತಾ ಬಂದರೇ ಕ್ಯಾನ್ಸರ್ ಕೋಶಗಳೇ ಇಲ್ಲದಂತಾಗುತ್ತದೆ‌. ಶೇ.99 ಮಂದಿಗೆ ಗುಣಮುಖವಾಗಿದೆ, ಯಾವುದೇ ಹಣದಾಸೆಯಿಲ್ಲದೇ ಹಿಮಾಲಯದ ಗುರುಗಳ ಮಾತಿನಂತೆ ಈ ಸೇವೆ ಮಾಡುತ್ತಿದ್ದು ಕೊನೇ ಹಂತದ ಕ್ಯಾನ್ಸರ್ ರೋಗಿಗಳೂ ಚೇತರಿಕೆ ಕಂಡಿದ್ದಾರೆ ಎಂಬುದು ರೈತ ಮಹೇಶ್ ಕುಮಾರ್ ಮಾತು.     
   35 ಸಾವಿರ ಮಂದಿಗೆ ಔಷಧಿ ವಿತರಣೆ!
ಕಳೆದ 8 ವರ್ಷಗಳಿಂದ ಕ್ಯಾನ್ಸರ್ ರೋಗಿಗಳಿಗೆ ದೇಶದ ನಾನಾ ಭಾಗಗಳಲ್ಲಿನ 35 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಹನುಮಫಲದ ಔಷದಿ ನೀಡಿದ್ದು ಕೆಲವು ದಿನಗಳಿಂದೀಚೆಗೆ ನೂರಾರು ಎಚ್ಐವಿ ಪೀಡಿತರಿಗೂ ಕೂಡ ಔಷದಿ ನೀಡುತ್ತಾ ಬಂದಿದ್ದಾರೆ. ಇವರ ಸೇವೆಯು ಸಂಪೂರ್ಣ ಉಚಿತವಾಗಿದ್ದು ಆತ್ಮತೃಪ್ತಿ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಇವರ ಕನಸಾಗಿದೆ. 
   ದೂರದ ಬಾಂಬೆ, ದೆಹಲಿಯಿಂದಲೂ ಪ್ರತಿನಿತ್ಯ ಒಂದಿಲ್ಲೊಬ್ಬರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಜೊತೆಗೆ ಇಲ್ಲಿಂದ ಹೋದ ನಂತರ ಮತ್ತೆ ಅವರ ಆರೋಗ್ಯದಲ್ಲಿ ಚೇತರಿಕೆಯೂ ಕೂಡ ಆಗಿರುವ ರಿಪೋರ್ಟ್ ಕಾರ್ಡ್ ಕಳಿಸಿಕೊಟ್ಟು,ಕೆಲವರು ತಮ್ಮ ಆರೋಗ್ಯದಲ್ಲಾದ ಬದಲಾವಣೆಯನ್ನು ಕಂಡುಕೊಂಡಿದ್ದಾರೆ. 
  ಒಟ್ನಲ್ಲಿ ಡಾಕ್ಟರ್ ಅಂತ ಹೇಳಿಕೊಂಡು ಅದೆಷ್ಟೋ ಮಂದಿ ಜನರ ಬಳಿ ಹಣ ಲಪಟಾಯಿಸುವ ಈ ಕಾಲದಲ್ಲಿ ಯಾವ ಫಲಾಪೇಕ್ಷೇ ಇಲ್ಲದೆ ಕಷ್ಟ ಹೇಳಿಕೊಂಡು ಬರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡುವ ಈ ಅನ್ನದಾತನಿಗೆ ಒಂದು ಸಲಾಂ ಹೇಳಲೇಬೇಕು.   ಹೆಚ್ಚಿನ ಮಾಹಿತಿಗಾಗಿ ಮಹೇಶಕುಮಾರ್ ಅವರ ಮಗ ಓಂಕಾರ್ ಅವರನ್ನು ಮೊ.ಸಂ.
81508 15194 ಮೂಲಕ ಸಂಪರ್ಕಿಸಬಹುದಾಗಿದೆ.
ವಂದೆಗಳೊಂದಿಗೆ

Friday, September 27, 2019

ಬದುಕು ಎಂದರೇನು?

SAVE NATURE, HEALTHY, WEALTHY & WISE. dgnsgreenworld Family

*ಬದುಕು*                   
ಬದುಕು ಎಂದರೇನು? 
ಈ ಜಗತ್ತಿನ ಗಣ್ಯರ ಅಭಿಪ್ರಾಯದಂತೆ ಒಬ್ಬೊಬ್ಬರದು ಒಂದೊಂದು ರೀತಿ: 

ಬುದ್ಧ ಹೇಳುತ್ತಾನೆ, *"ಪ್ರೀತಿ ಮತ್ತು ಶಾಂತಿ".*   
ದುರ್ಯೋಧನ ಹೇಳುತ್ತಾನೆ, *"ಹಠ ಮತ್ತು ಛಲ".*   
ಏಕಲವ್ಯ ಹೇಳುತ್ತಾನೆ, *"ಗುರಿ".* 
ಯುಧಿಷ್ಠಿರ ಹೇಳುತ್ತಾನೆ, *"ಧರ್ಮ"*. 
ಶ್ರೀ ಕೃಷ್ಣ ಹೇಳುತ್ತಾನೆ, *"ಸಮದರ್ಶಿತ್ವ".*
ಭೀಷ್ಮ ಹೇಳುತ್ತಾನೆ, *"ಪ್ರತಿಜ್ಞೆ".*
ಒಬ್ಬ ಸಂತ ಹೇಳುತ್ತಾನೆ, *"ಭಕ್ತಿ".* 
ಒಬ್ಬ ಸನ್ಯಾಸಿ ಹೇಳುತ್ತಾನೆ, *"ವೈರಾಗ್ಯ".*                   
ಅಲೆಕ್ಸಾಂಡರ್ ಹೇಳುತ್ತಾನೆ, *"ಯುದ್ಧ".* 
ಶ್ರೀಮಂತ ಹೇಳುತ್ತಾನೆ, *"ಮೋಜು ಮತ್ತು ಮಸ್ತಿ".* 
ಮಧ್ಯಮ ವರ್ಗದವನು ಹೇಳುತ್ತಾನೆ, *"ಉದ್ಯೋಗ".*
 ಹಸಿದವನು ಹೇಳುತ್ತಾನೆ, *"ತನ್ನ ಪಾಲಿನ ಅರ್ಧ ರೊಟ್ಟಿ".* 

ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ. ಅವರವರ ಆಲೋಚನೆಯಂತೆ ಅವರವರು  ಬದುಕನ್ನು ಸಮರ್ಥಿಸುತ್ತಾರೆ.

ಬದುಕೆನ್ನುವುದು  ಸುಂದರವಾದ ಅನುಭವ.  ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ  ಎಲ್ಲವೂ ಅಮೂಲ್ಯ.  ಈ ಯಾವುದೂ ಹಿಂತಿರುಗಿ ಬರುವುದಿಲ್ಲ.  ಒಮ್ಮೆ ಕಳೆದರೆ ಮುಗಿಯಿತು .  ಆದ್ದರಿಂದಲೇ ಪ್ರತಿ ಕ್ಷಣದ ಬದುಕು ನವ ನವೀನ.  ಹೀಗೆಯೇ  ನಮ್ಮ ಬದುಕು  ಅನಿಶ್ಚಿತ ಕೂಡಾ.  ಮುಂದಿನ ಕ್ಷಣ ಏನೆಂದು ಯಾರಿಗೂ  ತಿಳಿಯದು.  ಈ ಕ್ಷಣವೇ ಪರಮ ಪವಿತ್ರ.  ಈ ಕ್ಷಣವನ್ನು ಸಂಪೂರ್ಣ  ಅನುಭವಿಸುವುದೇ  ಬದುಕು.     ಸಂಘರ್ಷ, ಮನಸ್ತಾಪ, ಕೋಪ, ದ್ವೇಷ  ಇವುಗಳನ್ನು ಕಡಿಮೆ ಮಾಡುತ್ತಾ  ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ, ಮತ್ತು ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ.    ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ.                                 

ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ  ಮಧ್ಯೆ ಸಂತೋಷದಿಂದ , ತೃಪ್ತಿಯಿಂದ  ಬದುಕುವುದೇ  ಜೀವನ...
dgnsgreenworld@gmail.com
ಧನ್ಯವಾದಗಳು .☘☘☘
🍁🍁🍁🍁🍁🍁🍁

Sunday, September 22, 2019

ಹಿರಿಯರು ಹೇಳಿಕೊಟ್ಟ ಊಟದ ಕಲೆ

SAVE NATURE, HEALTHY, WEALTHY & WISE. dgnsgreenworld Family

*ಹಿರಿಯರು ಹೇಳಿಕೊಟ್ಟ ಊಟದ ಕಲೆ* ಯ ನಿಯಮಗಳು :*

1)  ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು. ....
2)  ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು…..
 3)  ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು....
4)  ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು.....
5)  ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ - ಪಟಗಾ ಸುತ್ತಿರುವುದಾಗಲೀ…. ಟೋಪಿಯಾಗಲೀ  ಇರಬಾರದು….
6) ಕರವಸ್ತ್ರವಾಗಲೀ ಒಲ್ಲಿ ಟವಲ್ ಆಗಲೀ ನಿಮ್ಮ ಜೊತೆಗಿರಬೇಕು……
6)  ಊಟದೆಲೆ ಅಥವಾ ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಕೊಂಚ ನೀರಿನಲ್ಲಿ ತೊಳೆಯಬೇಕು. …
7) ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು…..
8) ಊಟ ಮಾಡುವ ವೇಳೆಯಲ್ಲಿ ಕಸ ಗುಡಿಸಬಾರದು…… ಒಂದೇ ಸಮನೆ ದಿಟ್ಟಿಸಬಾರದು….
9) ಯಾರೊಬ್ಬರೂ ಅತ್ತಿಂದಿತ್ತ ಅಡ್ಡಕಸುಬಿ ಓಡಾಡಬಾರದು…..
10) ಕುಡಿಯುವ ನೀರು ತುಂಬಿದ ಚೆಂಬು -ಲೋಟ ಪಕ್ಕದಲ್ಲಿರಬೇಕು,….
11) ಗಂಟಲು ಮೇಲೆತ್ತಿ ಲೋಟದಲ್ಲಿಯೇ ನೀರು ಕುಡಿಯಬೇಕು,…. ಕಚ್ಚಿ ಕುಡಿಯಬಾರದು……
12) ನಾಯಿಮರಿ ಅಥವಾ ನಮ್ಮ ಜೀವಿಗಳಿಗಾಗಿ ಮೊದಲು ಒಂದು ತುತ್ತು ತೆಗೆದಿರಿಸಬೇಕು.....
13)  ಊಟದ ವೇಳೆಗೆ ಯಾರಾದರೂ ಬಳಿಗೆ ಬಂದರೆ ಮೊದಲು ಅವರಿಗೆ ಊಟ ನೀಡಲು ಆದ್ಯತೆ ಕೊಡಬೇಕು...
14)  ನೀರು ಅಥವಾ ಸಾರಿನಲ್ಲಿ ಒಮ್ಮೆ ಅಂಗೈ ತೇವ ಮಾಡಿಕೊಳ್ಳಬೇಕು…..
15)  ಅಂಗೈ ಮುಂಗೈ ಮೂತಿಗಳಿಗೆ ಅನ್ನ - ಮುದ್ದೆ ಅಥವಾ ತಿನ್ನುವ ಯಾವುದೂ ಮೆತ್ತಿಕೊಳ್ಳದಂತೆ ನಾಜೂಕಾಗಿರಬೇಕು…...
16)  ತೊಡೆಯ ಮೇಲಾಗಲೀ ನೆಲದ ಮೇಲಾಗಲೀ ದರ್ಬಾರಿನಂತೆ ಎಡಗೈ ಹೂರಿಕೊಂಡಿರಬಾರದು....
17)  ತಲೆ ಮೈಕೈ ಕೆರೆದುಕೊಳ್ಳಬಾರದು…. ಕಣ್ಣು ಉಜ್ಜಬಾರದು…. ಅತ್ತಲಿತ್ತ ಪದೇ ಪದೇ ತಲೆ ಎತ್ತಿ ನೋಡಬಾರದು
18)  ನಾವು ತಿನ್ನುವ ಶಬ್ಧ ಪಕ್ಕದಲ್ಲಿ ಕುಳಿತವರಿಗೆ ಕೇಳಿಸಬಾರದು.... ಲೊಸ ಲೊಸ ಲೊಸಗುಟ್ಟುತ್ತಾ ಅಥವಾ ಗಬಗಬ ಬುಕ್ಕಬಾರದು...
19)  ಉಣ್ಣುವ ತುತ್ತು ಎಣಿಸಬಾರದು.....ಮುದ್ದೆ - ರೊಟ್ಟಿ ಎಣಿಸಬಾರದು.... ಊಟಕ್ಕೆ ನೀಡುವಾಗಲೇ ಆಳು ನೋಡಿ ಅನ್ನ ಬಡಿಸಬೇಕು
20) ಇಷ್ಟು ತಿಂದ - ಅಷ್ಟು ತಿಂದ ಎಂದು ಮಾತನಾಡಬಾರದು....
21) ಗಂಭೀರವಾದ ಯಾವ ಸಂಗತಿಗಳನ್ನೂ ಪ್ರಸ್ತಾಪಿಸಬಾರದು.... (ಈಗಿನ ಸೇರ್ಪಡೆ: ಟೀವಿ ಮೊಬೈಲ್ ಇತ್ಯಾದಿ ನೋಡಬಾರದು)
22)  ನೆತ್ತಿಗೇರಿಸಿಕೊಳ್ಳುವಂತೆ ನಗುವುದಾಗಲೀ ಮಾತಾಡುವುದಾಗಲೀ ಮಾಡಬಾರದು…..
23) ಊಟಕ್ಕೆ ನೀಡುವ ವ್ಯಕ್ತಿಯನ್ನು ಹೊರತುಪಡಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳಬೇಕು….
24) ಕುಳಿತು ಸಾವಧಾನವಾಗಿ ತಿನ್ನಬೇಕೇ ಹೊರತು ನಿಂತುಕೊಂಡು, ಓಡಾಡುತ್ತಾ ಅಥವಾ ಪ್ರಯಾಣಿಸುತ್ತಾ ತಿನ್ನಬಾರದು….
25)  ಮಧ್ಯದಲ್ಲಿ ಅವಶ್ಯಕವಿದ್ದರೆ ಅರ್ಥಮಾಡಿಕೊಂಡು ಊಟಕ್ಕೆ ಬಡಿಸುವವರು ನೀಡಬೇಕೇ ಹೊರತು ಇಷ್ಟು ಸಾಕ - ಅಷ್ಟು ಸಾಕ ಎಂದು ಅಳತೆ ಪ್ರಮಾಣಗಳಲ್ಲಿ ತೋರಿಸಿ ಕೇಳಬಾರದು.
26)  ತಂಗಳಾದರೂ ಸರಿಯೇ ಬಿಸಿಯೆಂದು ಭಾವಿಸಿ ಕಣ್ಣಿಗೊತ್ತಿಕೊಂಡು ಆರೋಗಿಸಬೇಕು...... ಒಂದು ಅಗುಳನ್ನೂ ವ್ಯರ್ಥ ಮಾಡಬಾರದು
27)  ತಿನ್ನುವ ಪದಾರ್ಥವನ್ನು ಇಲಿ ಗೆಬರಾಡಿದಂತೆ ತರಿದು ತಿನ್ನಬಾರದು….. ಅಥವಾ ಕೈನಲ್ಲಿ ತೂಗಿಸಿಕೊಂಡು ತಿನ್ನಬಾರದು…..
28) ಊಟದೆಲೆ ತಟ್ಟೆಯ ಪಕ್ಕದಲ್ಲಿ ಪದಾರ್ಥ ಚೆಲ್ಲಾಡಬಾರದು…..
29) ಬಿಸಿ ಆರಿಸಿಕೊಂಡು ತಿನ್ನಬೇಕು….. ತುಟಿಗಳನ್ನು ಮುಚ್ಚಿಡಿದು ಬಾಯೊಳಗೇ ನಮುಲಿ ನುಂಗಬೇಕು….
30) ಒಮ್ಮೆ ಬಾಯಿಗಿರಿಸಿಕೊಳ್ಳಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬೆರಳುಗಳಿಂದ ತೆಗೆದುಕೊಳ್ಳಬೇಕೇ ಹೊರತು ಅಂಗೈ ಬಳಸಬಾರದು….
31) ಊಟ ಮುಗಿದ ಬಳಿಕ ಅಗತ್ಯವಿರುವಷ್ಟು ನೀರು ಕುಡಿಯಬೇಕು…..
32) ಊಟದ ಬಳಿಕ ಅಭ್ಯಾಸವಿದ್ದಲ್ಲಿ ತಾಂಬೂಲ ಸವಿಯಬೇಕು….  ಕಳ್ಳೇಬೀಜ, ಚಿನಕ್ಹುರುಳಿ, ಹಣ್ಣು ಮುಂತಾದವು ಸೇವಿಸಬಹುದು…..
33)  ಊಟ ಕೊಟ್ಟವರ ಬಳಿ ಕೃತಜ್ಞತೆಯ ನಾಲ್ಕು ಮಾತಾಡಬೇಕು...
34) ಊಟ ಮುಗಿದ ಕೂಡಲೇ.. ಊಟಕ್ಕೆ ಕುಳಿತ ಜಾಗದಲ್ಲಿ ಅರೆಗಳಿಗೆಯೂ ಕೂರಬಾರದು...
 35) ಕೈತೊಳೆದುಕೊಂಡು ಊಟ ಮಾಡಿದವರೇ ಊಟದ ತಟ್ಟೆಯನ್ನು ತೊಳೆದಿಡಬೇಕು....
36) ಹೊತ್ತು ಮೀರಿಯಾಗಲೀ ಹೊತ್ತಿಗೆ ಮುಂಚಿತವಾಗಲೀ ಊಟ ಮಾಡಬಾರದು...
37) ಉಪ್ಪು ಹುಳಿ ಖಾರ ಯಾವುದೇ ವ್ಯತ್ಯಾಸಗಳಿದ್ದರೂ ಅಸಮಾಧಾನ ವ್ಯಕ್ತಪಡಿಸುವುದಾಗಲೀ ಸಿಟ್ಟಿಗೇಳುವುದಾಗಲೀ ಮಾಡಬಾರದು....
38) ಊಟ ಮಾಡುವಾಗ ಊಟವನ್ನಷ್ಟೇ ಮಾಡಬೇಕು ಹೊರತು ಇನ್ನೊಂದು ಮತ್ತೊಂದು ಕೆಲಸ ಮಾಡಬಾರದು....
39) ಇನ್ನೊಂದು ಮಾಡಿಕೊಂಡೇ ಊಟ ಮಾಡಬಾರದು.... ಅಥವಾ ಊಟ ಮಾಡಿಕೊಂಡೇ ಇನ್ನೊಂದು ಮಾಡಬಾರದು.
40) ಊಟ ಮಾಡಿ ಮೈ ಮುರಿಯಬಾರದು
41) ಊಟದ ಬಳಿಕ ಗಾಳಿಗೆ ಮೈಯೊಡ್ಡಿ ನಾಲ್ಕೆಜ್ಜೆ ನಡೆದರೆ ಚೆಂದ
42) ಎದೆ ಬಗ್ಗಿಸಿ ಊಟ ಮಾಡಬೇಕೇ ಹೊರತು ಎದೆ ಸೆಟೆದು (ಸೇದಿಕೊಂಡು) ಊಟ ಮಾಡಬಾರದು
43) ಎಂಜಲ ಕೈನಲ್ಲಿ ತಟ್ಟೆ ಲೋಟ ಇತರೆ ಯಾವುದೇ ಪಾತ್ರೆ ಪಗಡಿ ಮುಟ್ಟಬಾರದು
44) ಸಾರಿನ ಚೌಟು ಅನ್ನಕ್ಕೂ ಅನ್ನದ ಚಮಚವನ್ನು ಪಾಯಸಕ್ಕೂ ಮುಟ್ಟಿಸದೆ ಹೀಗೆ ಎಲ್ಲವೂ ಪ್ರತ್ಯೇಕವಾಗಿ ಇರಿಸಬೇಕು
45) ಎಂಜಲು ಮಾಡಿದ ಪದಾರ್ಥಗಳನ್ನು ಇತರರಿಗೆ ನೀಡಬಾರದು
46) ಊಟದ ಬಳಿಕವೂ ಬಾಯಿ ಮುಕ್ಕಳಿಸುವುದನ್ನು ಮರೆಯಬಾರದು
47) ಊಟ ಮಾಡಿದ ತಕ್ಷಣವೇ ಮಲಗಬಾರದು ಅಥವಾ ಮಲಗಿಕೊಂಡು ಏನನ್ನೂ ತಿನ್ನಬಾರದು
48) ಊಟದ ನಡುವೆ ಇನ್ನೂ ಹೆಚ್ಚಿನ ಅಗತ್ಯ ಅಹಾರ ಬೇಗ ಬರಲಿಲ್ಲವೆಂದು ಕೂಗುವುದಾಗಲೀ ಪಾತ್ರೆ ಶಬ್ದ ಮಾಡುವುದಾಗಲೀ ಮುಂತಾದ ಅಸಮಾಧಾನ ತೋರಬಾರದು.
49) ನಿದ್ರೆಗಣ್ಣಿನಲ್ಲಿ ತೂಕಡಿಸುತ್ತಾ ಊಟ ಮಾಡಬಾರದು.
50) ಮೊದಲು ತಟ್ಟೆಯಲ್ಲಿ ಬಡಿಸಿದ ಆಹಾರವನ್ನು ನೋಡಿಕೊಂಡು, ಇನ್ನೂ ಬೇಕೆನಿಸಿದರೆ ಮಾತ್ರ ಹಾಕಿಸಿಕೊಳ್ಳಬೇಕು. ತಟ್ಟೆಯಲ್ಲಿ ಸ್ವಲ್ಪವೂ ಉಳಿಯದಂತೆ ಊಟ ಮಾಡಬೇಕು.
ಊಟದ ಕಲೆ ಅಂದರೆ 'ಊಟ ಮಾಡುವುದೂ ಒಂದು ಕಲೆ' .
ಯಾರಾದರೂ ಈ ಕಲೆಗಳನ್ನು ರೂಢಿಸಿಕೊಂಡರೆ ಉಂಡ ಅನ್ನಹಾರ ಚೆನ್ನಾಗಿ ಪಚನವಾಗಿ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.
ಈ ರೀತಿ ಊಟ ಮಾಡುವವರನ್ನು ನೋಡಿ, ನಾವೂ ಹೀಗೆಯೇ ಊಟ ಮಾಡಬೇಕು ಅಂತ  ಬೇರೆಯವರು ಭಾವಿಸುವಂತೆ ಊಟ ಮಾಡಬೇಕು.
ವಂದನೆಗಳೊಂದಿಗೆ

Monday, September 9, 2019

ಸಂತೋಷ ಎಲ್ಲಿದೆ, ಅಮೃತ ಕ್ಷಣ ಯಾವುದು?

SAVE NATURE, HEALTHY, WEALTHY & WISE. dgnsgreenworld Family

ನಾವೆಲ್ಲರೂ  ನಮ್ಮ ಜೀವನದಲ್ಲಿ , ಅಮೂಲ್ಯವಾದ ಪ್ರತಿಕ್ಷಣವನ್ನು , ಸಂಭ್ರಮಿಸುವುದನ್ನೇ  ಮರೆತಿರುತ್ತೇವೆ. ಯೌವನ, ವಯಸ್ಕ , ಈ ಹಂತಗಳನ್ನು ಆನಂದಿಸದೆ, ದಾಟುತ್ತೇವೆ. ಆಮೇಲೆ ಹಳಹಳಿಸುತ್ತೇವೆ.
ಬಾಲ್ಯದಲ್ಲಿ ಸಣ್ಣಪುಟ್ಟ ವಿಷಯಕ್ಕೂ, ಸಂಭ್ರಮಿಸುತ್ತಿದ್ದವರು, ಬೆಳೆಯುತ್ತಾ ಹೋದಂತೆ, ಆ ಖುಷಿಯನ್ನು ಮೂಲೆಗೆ ತಳ್ಳಿ, ಕೈಕಾಲು ಕಟ್ಟಿ ಕೂರಿಸಿ ಬಿಡುತ್ತೇವೆ.

ಆಗ , ಒಂದು ರೂಪಾಯಿಯ ಮಿಠಾಯಿ / ಪೆಪ್ಪರಮಿಂಟಿಗೂ ಸಂಭ್ರಮಿಸುತ್ತಿದ್ದವರು, ಸಾವಿರಾರು ರೂಪಾಯಿ ಖರ್ಚು ಮಾಡಿ, ಸ್ಟಾರ್ ಹೋಟೆಲಿನಲ್ಲಿ  ಉಂಡರೂ , ಈಗ ಖುಷಿ ಪಡುವುದಿಲ್ಲ.
ಮೊದಲ ಬಾರಿ  ಸೈಕಲನ್ನು ಬಿದ್ದು  ಎದ್ದು ಓಡಿಸಿದ ಖುಷಿ , ಇಂದು ಲಕ್ಷಗಟ್ಟಲೇ ಸುರಿದು ಕೊಂಡ ಕಾರಿನಲ್ಲಿ ಕಾಣುವುದಿಲ್ಲ. ಆಕಾಶದಲ್ಲಿ ಹಾರಾಡುವ ವಿಮಾನ ನೋಡಿ, ಕೈಬೀಸಿ ಟಾಟಾ ಮಾಡುತ್ತಿದ್ದ ಖುಷಿ, ಇಂದು ವಿಮಾನ ದಲ್ಲಿಯೇ ಪ್ರಯಾಣಿಸಿದರೂ ತೃಪ್ತಿ ಇಲ್ಲ.

ಬಾಲ್ಯದ ಮರಕೋತಿ ,ಕುಂಟೆಬಿಲ್ಲೆ , ಕಣ್ಣಾಮುಚ್ಚಾಲೆ, ಲಗೋರಿ ಆಟಗಳು, ಸೈಕಲ್ ತುಳಿಯುವುದನ್ನು  ಎದ್ದು , ಬಿದ್ದು , ಕಲಿತದ್ದು , ಪರೀಕ್ಷೆಯಲ್ಲಿ ಒಂದು ಮಾರ್ಕ್ಸ್ ಜಾಸ್ತಿ ತೆಗೆದುಕೊಂಡದ್ದು , ಅದಕ್ಕಾಗಿ ಸಂಭ್ರಮಿಸಿದ್ದು , ಗದ್ದೆ ತೋಟಗಳಲ್ಲಿ ಸುತ್ತಾಡಿದ್ದು , ಹಣ್ಣು ಕದ್ದು ತಿಂದಿದ್ದು , ಶಾಲಾ  ಕಾಲೇಜು ಸ್ಪರ್ಧೆಗಳಲ್ಲಿ, ಬಹುಮಾನ, ಪ್ರಶಸ್ತಿ ಗಳಿಸಿದ್ದು , ಜೀವನದ ಸಂಗಾತಿಯೇ ಗೆಳೆಯನಾಗಿದ್ದು ,  ತೊಟ್ಟಿಲು ಕಟ್ಟಿದ್ದು , ಮಗುವಿನ ನಗುವಿನಲ್ಲಿ  ಲೋಕವನ್ನೇ ಮರೆತಿದ್ದು , ಗುರು ಹಿರಿಯರ ಆಶೀರ್ವಾದ ಪಡೆದಿದ್ದು , ಪ್ರೀತಿ ಪಾತ್ರರ ಮೆಚ್ಚುಗೆಯ ಮಾತುಗಳಿಂದ , ಅವರ ಅಪ್ಪುಗೆಯಿಂದ ಅರಳಿದ್ದು , ಎಲ್ಲವೂ ಸಂಭ್ರಮಗಳೇ..ಕೆಲವು ಸಣ್ಣ ಸಂಭ್ರಮಗಳಾದರೆ , ಮತ್ತೊಂದಿಷ್ಟು ದೊಡ್ಡ ಪ್ರಮಾಣದ ಸಂಭ್ರಮಗಳು.

ಸೈಟು ಖರೀದಿಸಿದ್ದು , ಮನೆ ಕಟ್ಟಿಸಿದ್ದು , ಹೊಸ ಗಾಡಿ ಕೊಂಡದ್ದು , ಬರಹಗಳನ್ನು ಬರೆದದ್ದು , ಕಥಾಗುಚ್ಛದಲ್ಲಿ ಹಾಕಿದ್ದು , ಪತ್ರಿಕೆಗಳಿಗೆ ಕಳಿಸಿದ್ದು , ಅವು ಮೆಚ್ಚುಗೆ ಗಳಿಸಿದ್ದು , ಎಲ್ಲವೂ ದೊಡ್ಡ ಸಂಭ್ರಮಗಳೇ. ಆ ಕ್ಷಣವನ್ನು ಆನಂದಿಸಲೇ ಬೇಕಾದ್ದು. ಆದರೆ, ನಾವು ಆಗಲೂ, ಅಯ್ಯೋ ಬಿಡಿ, ಇದೇನು ದೊಡ್ಡ ವಿಷಯ ? ನನ್ನ ಆಸೆ ಬೇರೇನೇ ಇತ್ತು , ಎಂದು ನಮ್ಮ ಮೂಗನ್ನು ನಾವೇ ಮುರಿಯುತ್ತೇವೆ.

ಇದಕ್ಕೆಲ್ಲ ಕಾರಣ ಏನು ? ಅತಿಯಾದ ಆಸೆಯೇ, ಅಸೂಯೆಯೇ, ಅತೃಪ್ತಿಯೇ, ಆಮಿಷವೇ , ಬೇಕು ಬೇಕೆಂಬ ಹಾಹಾಕಾರವೇ ? ಅಥವಾ ಇವೆಲ್ಲದರ ಚರ್ವಿತಚರ್ವಣ ಭಾವವೇ ???

ಒಟ್ಟಿನಲ್ಲಿ ,  ನಮ್ಮೊಳಗಿರುವ ತೃಪ್ತಿಯ ಸೆಲೆಯನ್ನು , ನಾವೇ ಬತ್ತಿಸಿಕೊಂಡು , ಮತ್ತೆಲ್ಲೋ ಅದರ ಹುಡುಕಾಟದಲ್ಲಿ ನಿರತರಾಗಿರುತ್ತೇವೆ. ಅತೃಪ್ತ ಮನಸ್ಸಿಗರಾಗಿ ತೊಳಲಾಡುತ್ತಿರುತ್ತೇವೆ. ತೃಪ್ತಿ , ಎಲ್ಲಿಯಾದರೂ ಮಾರಾಟಕ್ಕಿದೆಯೇ ? ಎಂದು ಅರಸುತ್ತಿರುತ್ತೇವೆ.

ಅದನ್ನೇ ಡಿ ವಿ ಜಿಯವರು ಹೇಳಿದ್ದು ,

ಅವರೆಷ್ಟು ಧನವಂತರ್ , ಇವರೆಷ್ಟು ಬಲವಂತರ್ |
ಅವರೆಷ್ಟು ಯಶವಂತರ್ ಎನುವ ಕರುಬಿನಲಿ ||
ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು |ಶ
ವಂದನೆಗಳೊಂದಿಗೆ, 

Wednesday, August 28, 2019

ದೇವರಿಗೂ ಆಸ್ಪತ್ರೆಗೂ ಇರುವ ವ್ಯತ್ಯಾಸ?

SAVE NATURE, HEALTHY, WEALTHY & WISE. dgnsgreenworld Family



                ಒಬ್ಬ 80 ವರ್ಷದ ಮುದುಕನಿಗೆ ಹೃದಯ ಶಸ್ತ್ರಚಿಕಿತ್ಸೆಯಾಯಿತು. ಆಸ್ಪತ್ರೆ ಬಿಲ್ 8 ಲಕ್ಷ ಬಿಲ್ ನೋಡಿ ಮುದುಕ ಕಣ್ಣೀರು ಹಾಕಿದ ಅದನ್ನು ಕಂಡ  ವೈದ್ಯರು ಅಳಬೇಡಿ ನಿಮ್ಮ ಬಿಲ್ ಸ್ವಲ್ಪ ಕಡಿಮೆ ಮಾಡುತ್ತೇವೆ.
                 ಮುದುಕ.... ಸರ್ ಬಿಲ್ ತುಂಬಾ ಕಡಿಮೆ 10 ಲಕ್ಷ ತುಂಬಲು ನಾನು ಯೋಗ್ಯನಾಗಿರುವೆ, ನಾನು ಅತ್ತಿದ್ದು ಅದಕ್ಕಲ್ಲ ಯಾಕೆಂದರೆ ಆ ಪರಮಾತ್ಮ 80 ವರ್ಷ ನನ್ನ ಹೃದಯವನ್ನು ಜೋಪಾನವಾಗಿ ಕಾಪಾಡಿದ್ದಕ್ಕೆ ಯಾವುದೇ ಬಿಲ್ ನನಗೆ ಕಳಿಸಲಿಲ್ಲ, ನೀವೂ ಕೇವಲ ಮೂರು ಗಂಟೆ ನನ್ನ ಹೃದಯ ಬಡಿತ ಕೆಲಸ ಕಾರ್ಯನಿರ್ವಹಿಸಲು  ಎಂಟು ಲಕ್ಷ ರೂಪಾಯಿಯೇ... ??

                ಓ ಪರಮಾತ್ಮ ನೀನೇ ನಮ್ಮ ಮೇಲೆ ಎಷ್ಟು ಕಾಳಜಿ ವಹಿಸುತ್ತೀಯಾ, ನೀನು ನಮ್ಮ ಒಂದೊಂದು ಅಂಗಾಂಗದ ಮೇಲು ಬೆಲೆ ಕಟ್ಟಲಾಗದ ಹೂಡಿಕೆ ಮಾಡಿದ್ದಿಯ, ನಮ್ಮ ದೇಹದ ಯಾವುದೊ ಒಂದು ಅಂಗ ಕೆಲಸ ಮಾಡಲಿಲ್ಲ ಅಂತ ಡಾಕ್ಟರ್ ಬಳಿ ಹೋದಾಗಲೇ ನಿನ್ನ ಬೆಲೆ ನಮಗೆ ಅರ್ಥವಾಗುವುದು. ನೀನು ಯಾವುದೇ ಪ್ರತಿಫಲ ಬಯಸದ ಉತ್ಪಾದಕ ನೀನು ಉತ್ಪಾದಿಸಿದ ಅಂಗವನ್ನು ಊನ ಮಾಡಿ ರಿಪೇರಿ ಮಾಡಿಸಲು ಲಕ್ಷಾಂತರ ಹಣ ಕೊಟ್ಟು,ಭ ಭಕ್ತಿಯಿಂದ ನಿಮಗಿಂತಲೂ ಒಂದು ಮಾರು ಮೇಲೆ ಎಂಬಂತೆ ವೈದ್ಯರಿಗೆ ನಮಸ್ಕಾರ ಹೇಳಿ ಬರುತ್ತೇವೆ.
           ಆದರೂ
ನೀನು ಕೋಪಗೊಳ್ಳುವುದಿಲ್ಲ ನಮ್ಮ ಯೋಗಕ್ಷೇಮದ ಹೊಣೆ ಹೊತ್ತಿದ್ದೀಯ ಎಂಥಹ ಕರುಣಾಳು ನೀನು
ನಿನಗೆ ಕೊಡಲು ನನ್ನ ಬಳಿ ಏನಿದೆ
...... ರಾತ್ರಿ ಕರೆಂಟು ಬಳಿಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಬಿಸಾಡುತ್ತಾರೆ
ಸೂರ್ಯನ ಬೆಳುಕು ಬಿಸಿಲಿಗೆ ಯಾವುದೇ ಬಿಲ್ಲಿಲ್ಲ.
..... ನೀರು ಬಲಿಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಬಿಸಾಡುತ್ತಾರೆ
ಕಾಲುವೆ ಬಾವಿ ಏರಿ ಕೆರೆ ಸಮುದ್ರಗಳು ಕೊಟ್ಟ ನಿನಗೆ ಯಾವುದೇ ಬಿಲ್ ಕಟ್ಟುವುದಿಲ್ಲ.
..... a  c ಗಾಳಿಗಾಗಿ ಲಕ್ಷಾಂತರ ವ್ಯಯಸುತ್ತೇವೆ
ನೀನು ಕೊಟ್ಟ ಪರಿಶುದ್ಧ ಗಾಳಿಗೆ ಯಾವುದೇ ಬಿಲ್ಲಿಲ್ಲ.
ಯಾವ ಪಾವತಿಯನ್ನು ಅಪೇಕ್ಷಿಸದೆ ಸಕಲ ಜೀವರಾಶಿಯನ್ನು ಕಾಪಾಡುತ್ತಿರುವ ದೇವರೇ ನಿಮಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು.

ವಂದನೆಗಳೊಂದಿಗೆ

          ಸರ್ವೇಜನಾ ಸುಖಿನೋಭವಂತೋ

Monday, August 26, 2019

ರತನ್ ಟಾಟಾ ಹೇಳಿದ ಊಟದ ಸ್ಟೋರಿ.

SAVE NATURE, HEALTHY, WEALTHY & WISE. dgnsgreenworld Family
*ರತನ್ ಟಾಟಾ* ಹೇಳಿದ
“ *ಊಟದ ಸ್ಟೋರಿ*”:

ವಿಶ್ವದ ಶ್ರೀಮಂತ ಉಧ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ ರತನ್ ಟಾಟಾ ಜರ್ಮನಿಯಲ್ಲಿ  ತಮಗೆ ಎದುರಾದ ಒಂದು ಸನ್ನಿವೇಶವನ್ನ ಹಂಚಿಕೊಂಡಿದ್ದಾರೆ.

ಒಂದು ಸಾರಿ ನಾವು ಜರ್ಮನಿಗೆ ಹೊಗಿದ್ದೆವು.
ಅದು ಪ್ರಪಂಚದ ಅಭಿವೃದ್ಧಿ ದೇಶಗಳಲ್ಲಿ ಒಂದು.

ಹಂಬರ್ಗ್ ನಲ್ಲಿ  ಊಟ ಮಾಡಲು ಅಲ್ಲಿನ ಹೋಟೆಲ್’ಗೆ ಹೋದೆವು.
ಬಹಳ ಟೇಬಲ್ ಖಾಲಿ ಇವೆ.

ನಮಗೆ ಆಶ್ಚರ್ಯವಾಯಿತು.

ಅಲ್ಲಿ ಎಲ್ಲರೂ ಒಂದು-ಎರಡು ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದಾರೆ.

ಒಂದು ಮೂಲೆಯ ಟೇಬಲ್ ನಲ್ಲಿ ವೃದ್ಧರು ಒಂದೇ ಊಟ ತರಿಸಿಕೊಂಡು ಅದನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು.

ನಮಗೆ ಶ್ರೀಮಂತ ದೇಶದಲ್ಲಿ ಹೀಗೆ ತಿನ್ನುತ್ತಿದ್ದರಲ್ಲ ಎನ್ನಿಸಿತು.

ನಾವು ನಮ್ಮ ಸ್ಟೇಟಸ್ ಗೆ ತಕ್ಕಂತೆ ತರತರದ ತಿನಿಸುಗಳನ್ನು ತರಿಸಿಕೊಂಡು ತಿಂದೆವು.
ನಮ್ಮವರು ಕೆಲವು ತಿನಿಸುಗಳು ಇಷ್ಟವಾಲಿಲ್ಲವೆಂದು,
ಜಾಸ್ತಿ ಆಯಿತೆಂದು ಆಹಾರವನ್ನು ಪ್ಲೇಟ್ ನಲ್ಲಿಯೇ ಬಿಟ್ಟರು.!!

ನಾವು ಅಲ್ಲಿಂದ ಹೊರಡುವ ಸಮಯದಲ್ಲಿ ವೃದ್ಧ ಮಹಿಳೆಯೊಬ್ಬರು ನಮ್ಮ ಬಳಿ ಬಂದು ಹಾಗೆ ವೆಸ್ಟ್ ಮಾಡಬಾರದು ಅದು ನಮ್ಮ ಆಹಾರ ಎಂದಳು.!!

ನಮ್ಮವರು ಅದು ನಮ್ಮಿಷ್ಟ ಎಂದರು. ತಕ್ಷಣ ಪೋನ್ ತೆಗೆದು ಆಕೆ ಯಾರಿಗೋ ಪೋನ್ ಮಾಡಿದಳು.!!

ಪೊಲೀಸರು ಬಂದರು.!!!!

ನಡೆದಿದ್ದನ್ನು ಕೇಳಿದರು.
ನಮಗೆ 50 ಯೂರೋ ದಂಡ ಹಾಕಿದರು. ಮರುಮಾತನಾಡದೇ ಕಟ್ಟಿ ಬಂದೆವು.

ಅವರು ಹೇಳಿದರು
"ಹಣ ನಿಮ್ಮದು ಅಷ್ಟೇ,
ಇಲ್ಲಿಯ ಸಂಪನ್ಮೂಲಗಳಲ್ಲ.!!

ಇನ್ನೊಬ್ಬರು ತಿನ್ನುವುದನ್ನು ನೀವು ಹಾಳು ಮಾಡಿದ್ದೀರಿ.!!

ಆಮೂಲಕ ನೀವು ನಮ್ಮ ದೇಶದ ಸಂಪತ್ತನ್ನು ನಷ್ಟ ಮಾಡಿದ್ದೀರಿ.!!!

ದೇಶದ ಸಂಪತ್ತನ್ನು ನಷ್ಟ ಮಾಡುವ ಹಕ್ಕು ನಿಮಗಿಲ್ಲ.!!!"

ಇದು ನಮಗೆ ಒಂದು ಗುಣಪಾಠವಲ್ಲವೇ…?

“ *MONEY* *IS* *YOURS*
*BUT RESOURCES BELONGS TO THE SOCIETY*”

ವಂದನೆಗಳೊಂದಿಗೆ

Tuesday, August 13, 2019

Watch how Vijayapur-Solapur bridge is being collapsed!



SAVE NATURE, HEALTHY, WEALTHY & WISE. dgnsgreenworld Family

ಕೃಷ್ಣರಾಜಸಾಗರ ತುಂಬಿ ಅಣೆಕಟ್ಟೆಯಿಂದ ನೀರು ಹೊರಹೋಗುತ್ತಿರುವ ಮನಮೋಹಕ ದೃಶ್ಯವನ್ನು ನೋ...



SAVE NATURE, HEALTHY, WEALTHY & WISE. dgnsgreenworld Family

Fantastic martial arts skills with teamwork



SAVE NATURE, HEALTHY, WEALTHY & WISE. dgnsgreenworld Family

ವೈಜ್ಞಾನಿಕವಾಗಿ, ತಾಂತ್ರಿಕವಾಗಿ, ಮನುಷ್ಯ ಸಾಧನೆ ಗೈದರು ಪ್ರಕೃತಿಯ ಮುಂದೆ ಶೂನ್ಯ.



SAVE NATURE, HEALTHY, WEALTHY & WISE. dgnsgreenworld Family

ಜಲಾವೃತಗೊಂಡಿರುವ ಸುತ್ತೂರಿನ ಶ್ರೀ ಶಿವರಾತ್ರೇಶ್ವರ ಮಠದ ವಿಹಂಗಮ ನೋಟ.



SAVE NATURE, HEALTHY, WEALTHY & WISE. dgnsgreenworld Family

ಜಲಾವೃತಗೊಂಡಿರುವ ಸುತ್ತೂರಿನ ಶ್ರೀ ಶಿವರಾತ್ರೇಶ್ವರ ಮಠದ ವಿಹಂಗಮ ನೋಟ.



SAVE NATURE, HEALTHY, WEALTHY & WISE. dgnsgreenworld Family

Saturday, August 10, 2019

ಹೆಣ್ಣಿನ ಸೃಷ್ಟಿ

SAVE NATURE, HEALTHY, WEALTHY & WISE. dgnsgreenworld Family

ಹೆಣ್ಣಿನ ಸೃಷ್ಟಿ...
                                                                        ದೇವದೇವನು ಹೆಣ್ಣನ್ನು ಸೃಷ್ಟಿ ಮಾಡಿದಾಗ ಆರನೆಯ ದಿನ ಸರಿ ರಾತ್ರಿಯ ವರೆಗೂ ಕೆಲಸ ಮಾಡುತ್ತಿದ್ದ...
ಒಬ್ಬ ದೇವತೆ ಬಂದು ಕೇಳಿದಳು. 'ಏಕೆ ಅವಳಿಗಾಗಿ ಅಷ್ಟೊಂದು ಸಮಯ ಖರ್ಚು ಮಾಡುತ್ತಿರುವೆ?' 
ದೇವದೇವ ಉತ್ತರಿಸಿದ.  'ಇವಳನ್ನು ಸೃಷ್ಟಿಸಲು ನಾನು ಏನೇನು ಅಂಶಗಳನ್ನು ಪೂರ್ಣಗೊಳಿಸಬೇಕು ಎಂದು ನೋಡಿದೆಯಾ? '
'ಎಲ್ಲ ತರಹದ ತಿನಿಸುಗಳನ್ನು ಮಾಡಬೇಕು. ಅನೇಕ ಮಕ್ಕಳನ್ನು ಒಂದೇ ಸಮಯದಲ್ಲಿ ಅಪ್ಪಿಕೊಳ್ಳಲು ಸಮರ್ಥಳಾಗಿರಬೇಕು. ಗಾಯಗೊಂಡ ಮೊಣಕಾಲಿನ ಗಾಯದಿಂದ ಹಿಡಿದು ಘಾಸಿಗೊಂಡ ಹೃದಯದವರನ್ನು ಕೂಡ ಒಮ್ಮೆ ಆಲಿಂಗಿಸಿಕೊಂಡು ಅವರಿಗೆ ಸಾಂತ್ವನ ನೀಡಬೇಕು. ಇವೆಲ್ಲವನ್ನೂ ಅವಳು ಕೇವಲ ಎರಡು ಕೈಗಳಿಂದ ಮಾಡಬೇಕು. ಅಷ್ಟೇ ಅಲ್ಲ.
ಅವಳಿಗೆ ಅನಾರೋಗ್ಯ ಉಂಟಾದರೂ ತಾನೇ ಔಷಧಿ ಮಾಡಿಕೊಂಡು 18 ಗಂಟೆಗಳ ಕಾಲ ಕೆಲಸ ಮಾಡಬಲ್ಲಳು'.
ದೇವತೆಗೆ ಅಚ್ಚರಿಯ ಸಂತಸ.  'ಕೇವಲ ಎರಡೇ ಕೈಗಳಾ? ಅಸಾಧ್ಯ! 'ಎಂದಳು. 'ಇದೇನಾ ಸ್ಟ್ಯಾಂಡರ್ಡ್ ಮಾದರಿ? ' ಎಂದು ಹತ್ತಿರ ಬಂದು ಆ ಹೆಣ್ಣನ್ನು ಮುಟ್ಟಿದಳು.  'ಓ ದೇವದೇವಾ...  ಇವಳನ್ನು ಬಹಳ ಮೃದುವಾಗಿ ಮಾಡಿದ್ದೀ' ಎಂದಳು.
'ಹೌದು. ಇವಳು ಮೃದು. ಆದರೆ ಬಹಳ ಶಕ್ತಿವಂತಳಾಗಿ ಮಾಡಿದ್ದೇನೆ. ಅವಳು ಏನೇನು ತಡೆದುಕೊಳ್ಳಬಲ್ಲಳು... ಏನೇನು ಕ್ರಮಿಸಬಲ್ಲಳು ಎಂದು ನೀನು ಊಹಿಸಲಾರೆ.'
'ಇವಳು ಆಲೋಚನೆ ಮಾಡಬಲ್ಲಳಾ? '
'ಆಲೋಚನೆ ಮಾಡುವುದಷ್ಟೇ ಅಲ್ಲ... ತರ್ಕಬದ್ಧವಾಗಿ, ಸಕಾರಣವಾಗಿ ಮಾತಾಡಬಲ್ಲಳು ಮತ್ತು ವಿಚಾರಿಸಬಲ್ಲಳು'
ದೇವತೆ ಅವಳ ಕೆನ್ನೆಗಳನ್ನು ಮುಟ್ಟಿ 'ದೇವದೇವಾ, ಈ ಸೃಷ್ಟಿ ಸೋರುತ್ತಿದೆ. ಇವಳ ಮೇಲೆ ತುಂಬಾ ಹೊರೆ ಹೊರೆಸಿರುವೆ ನೀನು' ಎಂದಳು.
' ಅದು ಸೋರುವಿಕೆ ಅಲ್ಲ. ಕಣ್ಣೀರು' ಅವಳ ಮಾತನ್ನು ತಿದ್ದಿದ ದೇವದೇವ.
' ಈ ಕಣ್ಣೀರು ಯಾಕೆ? '
' ಕಣ್ಣೀರು ಅವಳ ಅಭಿವ್ಯಕ್ತಿ. ದುಃಖ, ಅನುಮಾನ, ಪ್ರೇಮ, ಒಂಟಿತನ, ನೋವು, ಕಷ್ಟಗಳು,ಹೆಮ್ಮೆ ಎಲ್ಲದಕ್ಕೂ'
ದೇವತೆ ಬಹಳ ಆನಂದದಿಂದ ,  'ದೇವದೇವಾ... ನೀನು ಎಲ್ಲವನ್ನೂ ಆಲೋಚಿಸಿರುವೆ. ಹೆಣ್ಣು ಒಂದು ಅದ್ಭುತ  ಸೃಷ್ಟಿ' ಎಂದಳು.
ದೇವದೇವ ನಗುತ್ತಾ' ಹೌದು. ಅವಳ ಶಕ್ತಿಗೆ ಗಂಡು ಅಚ್ಚರಿಗೊಳ್ಳುತ್ತಾನೆ. ತೊಂದರೆ, ಹೊರೆಗಳನ್ನು ಅವಳು ತಡೆದುಕೊಳ್ಳಬಲ್ಲಳು. ಅವಳದೇ ಆದ ಅಭಿಪ್ರಾಯ ಹೊಂದಿರಬಲ್ಲಳು. ಸಂತಸದ ಮತ್ತು ಪ್ರೀತಿಯ ಚಿಲುಮೆ ಅವಳು. ಚೀರಬೇಕು ಎನ್ನಿಸಿದಾಗಲೂ ಮುಗುಳ್ನಗಬಲ್ಲಳು. ಅಳಬೇಕೆನ್ನಿಸಿದಾಗ ಹಾಡಬಲ್ಲಳು. ಸಂತಸವಾದಾಗ ಅಳಬಲ್ಲಳು. ಹೆದರಿಕೆ ಆದಾಗ ನಗಬಲ್ಲಳು. ತಾನು ನಂಬಿದ್ದರ ಪರವಾಗಿ ಹೋರಾಡಬಲ್ಲಳು. ಬೇಷರತ್ತಿನ ಪ್ರೀತಿ ಅವಳದು. ಸನಿಹದವರು ಸತ್ತರೆ ಅವಳ ಮನ ಒಡೆಯುತ್ತದೆ. ಆದರೆ ಜೀವನದಲ್ಲಿಯೇ ಮತ್ತೆ ಶಕ್ತಿಯನ್ನು ಕಂಡುಕೊಳ್ಳುತ್ತಾಳೆ.'
ದೇವತೆ ಎಂದಳು. 'ಇವಳು ಪರಿಪೂರ್ಣಳಾ?'
'ಇಲ್ಲ. ಇವಳಲ್ಲಿ ಒಂದು ಲೋಪ ಇದೆ. ಅವಳ ಮೌಲ್ಯ ಎಷ್ಟು ಎಂಬುದನ್ನು ಬಹಳ ಸಲ ಮರೆಯುತ್ತಾಳೆ' ಎಂದ ದೇವದೇವ.
ಓ ಹೆಣ್ಣೇ ನೀನೊಂದು ನಿರಂತರ ಅದ್ಬುತ....
ಆಂಗ್ಲ ಲೇಖನದ ಭಾವಾನುವಾದ
ವಂದನೆಗಳೊಂದಿಗೆ
dgnsgreenworld

ಸಮುದ್ರವನ್ನು ಸೇರಲು, ಪ್ರವಾಹದಲ್ಲಿ ತೇಲಿ ಬಂದ ಬೋರ್ಡ್ ಗಳು.

SAVE NATURE, HEALTHY, WEALTHY & WISE. dgnsgreenworld Family

*ಸಮುದ್ರವನ್ನು ಸೇರಲು,  ಪ್ರವಾಹದಲ್ಲಿ  ತೇಲಿ ಬಂದ ಬೋರ್ಡ್ ಗಳು.*👇🏻

*ನಾಯಿ ಇದೆ ಎಚ್ಚರಿಕೆ...*

*ಅನುಮತಿ ವಿನಃ ಪ್ರವೇಶವಿಲ್ಲ...*

*ನೋಟೀಸ್ ಹಚ್ಚಬಾರದು*


*ಅನ್ಯ ಧರ್ಮೀಯರಿಗೆ ಅನುಮತಿ ನಿಷೇಧ*

*ಕೀಳು ಜಾತಿಯವರಿಗೆ ಪ್ರವೇಶವಿಲ್ಲ*

*ಭಂಟರ ಭವನ, ಕ್ರೈಸ್ತರ ಭವನ, ಮುಸ್ಲಿಂ ಜಮಾಹ, ಲಿಂಗಾಯತರ ಖಾನಾವಳಿ, ವೀರಶೈವ ಸಂಘ,*
*ಹಿಂದೂ ಸೇನೆ,ಶ್ರೀರಾಮ ಸೇನೆ. ಕ್ರಿಶ್ಚಿಯನ್ ಸಂಘಟನೆ,  ಮುಸ್ಲಿಂ ಸಂಘಟನೆ*

*ಬ್ರಾಹ್ಮಣರಿಗೆ ಮಾತ್ರ ಪ್ರವೇಶ*


*ಏಸುವಿನ ಮಕ್ಕಳು ಅಲ್ಲಾಹನ ಪ್ರಜೆಗಳು,*


*ಖಾಸಗಿ ಜಮೀನು, ಕಾಲು ದಾರಿಗೆ ಅವಕಾಶವಿಲ್ಲ*

*ಮನೆಯ ಮುಂದೆ ವಾಹನ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ*


*ಮನುಷ್ಯನ  ಅಹಂದತೆಗೆ ಸಮುದ್ರ ಈಗಲೂ ನಗುತ್ತಲೇ ಇದೆ...!*


*ಇನ್ನಾದರೂ ಬದಲಾಗು ಮಾನವ.! ಪ್ರೀತಿಯ ಸಂಕೇತದ‌ ಪ್ರತಿಫಲವಾಗಿ ಭೂಮಿಗೆ ಬಂದ್ದಿದಿಯಾ. ಬದುಕಿದಷ್ಟು‌ ದಿನ ಪ್ರೀತಿಯ ಹಂಚಿ ಹೋಗು.*🙏🏻
ವಂದನೆಗಳೊಂದಿಗೆ
dgnsgreenworld

Thursday, August 8, 2019

ಆತ್ಮಜ್ಞಾನದಿಂದ ಅಮೃತತ್ವ

SAVE NATURE, HEALTHY, WEALTHY & WISE. dgnsgreenworld Family

ಆತ್ಮಜ್ಞಾನದಿಂದ ಅಮೃತತ್ವ

 ಶ್ರೀವಾಣಿ

ಆತ್ಮಜ್ಞಾನದಿಂದ ಅಮೃತತ್ವ


ಶ್ರೀ ಸಿದ್ಧೇಶ್ವರ ಸ್ವಾಮೀಜಿ

ನಾವು ತೊಡುವ ಬಟ್ಟೆ ಸ್ವಚ್ಛವಾಗಿದ್ದರೆ, ಸುಂದರವಾಗಿದ್ದರೆ ನಮ್ಮ ಜೀವನವೂ ಅಷ್ಟೇ ಸುಂದರವಾಗಿರುತ್ತದೆ, ಸ್ವಚ್ಛವಾಗಿರುತ್ತದೆ. ಬಟ್ಟೆ ಎಂದಮೇಲೆ ಹಾಸು-ಹೊಕ್ಕು ಎರಡೂ ಇರಲೇಬೇಕು. ವಿದ್ಯೆ, ಅವಿದ್ಯೆ ಅಥವಾ ಜ್ಞಾನ ಮತ್ತು ಕರ್ಮ ಇವೆರಡೂ ನಮ್ಮ ಬಾಳ-ಬಟ್ಟೆಯ ಹಾಸು-ಹೊಕ್ಕು. ಅವೆರಡರಲ್ಲಿ ಒಂದಿಲ್ಲದಿದ್ದರೂ ನಮ್ಮ ಬಾಳಬಟ್ಟೆಯು ಸಿದ್ಧವಾಗಲಾರದು. ವಿದ್ಯೆ ಎಂದರೆ ಜ್ಞಾನ ಮಾಡಿಕೊಳ್ಳುವುದು, ಅವಿದ್ಯೆ ಎಂದರೆ ಕರ್ಮ ಅಥವಾ ದುಡಿಯುವುದು ಎಂದರ್ಥ. ಲಕ್ಷಾಂತರ ವರುಷದ ಜೀವವಿಕಾಸದ ಕಥೆಯನ್ನು ನೋಡಿದರೂ ಜ್ಞಾನ ಮತ್ತು ಕರ್ಮ ಇವೆರಡೇ ಮಾನವನ ಎಲ್ಲ ಪ್ರಗತಿಗೆ ಕಾರಣವಾಗಿವೆ.

ವಿದ್ಯಾಂಚಾವಿದ್ಯಾಂಚ ಯಸ್ತದ್ವೇದೋಭಯಂ ಸಹ |

ಅವಿದ್ಯಯಾ ಮೃತ್ಯುಂ ತೀತ್ರ್ವಾ ವಿದ್ಯಯಾಮೃತತ್ವಮಶ್ನುತೇ ||

(ಈ.ಉ.11)

ಆತ್ಮವಿದ್ಯೆ ಹಾಗೂ ನಿಷ್ಕಾಮಕರ್ಮಗಳೆರಡೂ ಭಿನ್ನವಲ್ಲ. ಅವೆರಡನ್ನು ಕೂಡಿಯೇ ಅರಿಯಬೇಕು; ಅಳವಡಿಸಿಕೊಳ್ಳಬೇಕು. ಸಾಧಕನು ನಿಷ್ಕಾಮ ಕರ್ಮದಿಂದ ಮೃತ್ಯುವನ್ನು ದಾಟುತ್ತಾನೆ. ಆತ್ಮಜ್ಞಾನದಿಂದ ಅಮೃತತ್ವವನ್ನು ಹೊಂದುತ್ತಾನೆ.

ನಾವು ಮಾಡುವ ಕರ್ಮಗಳ ಉದ್ದೇಶ ಸರಿಯಾಗಿಲ್ಲದಿದ್ದರೆ ಆತ್ಮಜ್ಞಾನ ಅಥವಾ ಅತ್ಮಾನಂದವು ದೊರೆಯಲಾರದು. ಪರಮಸತ್ಯ ಪರಮಾತ್ಮನ ಅರಿವಿಲ್ಲದೆ ಮಾಡಿದ ಕರ್ಮವು ಬಂಧನಕ್ಕೆ ಕಾರಣವಾಗುತ್ತದೆ. ಬರೀ ಪ್ರಾಪಂಚಿಕ ಆಶೆ-ಆಕಾಂಕ್ಷೆಗಳ ಪೂರೈಸುವುದೇ ಕರ್ಮಗಳ ಉದ್ದೇಶವಲ್ಲ. ಅದಕ್ಕಿಂತಲೂ ಶ್ರೇಷ್ಠವಾದ ಉದ್ದೇಶವು ನಾವು ಮಾಡುವ ಕರ್ಮಕ್ಕೆ ಇದೆ. ಜೀವನದಲ್ಲಿ ಪರಮಶಾಂತಿ, ಪರಮಾನಂದವನ್ನು ಪಡೆಯುವುದೇ ನಾವು ಮಾಡುವ ಎಲ್ಲ ಕರ್ಮಗಳ ಪರಮೋದ್ದೇಶವಾಗಿದೆ.

ಓರ್ವ ಕಲಾವಿದನ ಕೈಯಲ್ಲಿ ಒಂದು ಕುಂಚ ಸಿಕ್ಕರೆ ಸಾಕು ಒಂದು ಸುಂದರವಾದ ಕಲಾಕುಸುಮವು ಅರಳಿಬಿಡುತ್ತದೆ. ಬೇರೆಯವರ ಕೈಯಲ್ಲಿ ಸಿಕ್ಕರೆ ಸುಂದರವಾದ ಕಲೆಯೂ ಕೆಟ್ಟು ಹೋಗುತ್ತದೆ. ನೂರು ವಸಂತಗಳ ನಮ್ಮ ಆಯುಷ್ಯವೇ ಚಿತ್ರ ಬರೆಯುವ ಪರದೆ. ಸುಂದರವಾದ ಕರ್ಮಗಳೆಂಬ ಕುಂಚನ್ನು ಹಿಡಿದು, ಭಾವದ ಬಣ್ಣನ್ನು ಬಳಸಿ, ಜ್ಞಾನದ ಬೆಳಕಿನಲ್ಲಿ ನಾವು ನಮ್ಮ ಜೀವನದ ಅಪ್ರತಿಮವಾದ ಚಿತ್ರವನ್ನು ಬರೆಯಬಹುದಾಗಿದೆ. ಹೀಗೆ ಸುಜ್ಞಾನ, ಸತ್ಕರ್ಮಗಳಿಂದ ನಾವು ಈ ಜಗತ್ತಿನಲ್ಲಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು. ಪರಮಶಾಂತಿ, ಪರಮಾನಂದವನ್ನು ಅನುಭವಿಸಬೇಕು, ಇಲ್ಲದಿದ್ದರೆ ನಮ್ಮ ಜೀವನವು

ನಿರರ್ಥಕವಾದಂತೆಯೇ!

ಪ್ರಜಾಪ್ರೇಮಿಯಾದ ಮಹಾರಾಜ. ಅಂದು ಅವನ ಹುಟ್ಟುಹಬ್ಬ. ತನ್ನಿಮಿತ್ಯ ರಾಜನು ತನ್ನ ಪ್ರಜೆಗಳಿಗೆಲ್ಲ ಸಂತೋಷಕೂಟವನ್ನು ಏರ್ಪಡಿಸಿದ್ದ. ಇಷ್ಟೇ ಅಲ್ಲ ತನ್ನ ಹುಟ್ಟುಹಬ್ಬದ ದಿವಸ ಯಾರಾದರೂ ಅರಮನೆಗೆ ಬಂದು ತನ್ನನ್ನು ಭೇಟಿಯಾಗಬಹುದು ಎಂದು ಡಂಗುರ ಸಾರಿಸಿದ. ರಾಜನ ದರ್ಶನ ಹಾಗೂ ಸಂತೋಷಕೂಟ ಎರಡೂ ದೊರೆಯುತ್ತವೆ ಎಂದಮೇಲೆ ಕೇಳುವುದೇನಿದೆ? ಊರಿಗೆ ಊರೇ ಅರಮನೆಯತ್ತ ಮುಖ ಮಾಡಿತು. ರಾಜನ ದರ್ಶನಕ್ಕಾಗಿ ಅರಮನೆಗೆ ಬರುವವರಿಗೆಲ್ಲ ದಾರಿಯುದ್ದಕ್ಕೂ ಬಗೆ ಬಗೆಯಾದ ತಿಂಡಿ-ತಿನುಸುಗಳು, ಬಟ್ಟೆ-ಬರೆ, ಉಡಿಗೆ-ತೊಡಿಗೆಗಳನ್ನು, ಸಂಗೀತ-ನೃತ್ಯವನ್ನೂ ಉಚಿತವಾಗಿ ಕೊಡುವ ಏರ್ಪಾಡು ಮಾಡಿದ್ದರು. ಬಂದವರೆಲ್ಲರೂ ಉಚಿತವಾಗಿದ್ದ ತಿಂಡಿ-ತಿನುಸು, ಉಡಿಗೆ-ತೊಡಿಗೆ, ಸಂಗೀತ-ನೃತ್ಯಗಳಲ್ಲಿಯೇ ಮಗ್ನರಾಗಿ ಬಿಟ್ಟರು. ಅರಮನೆಯ ಹೂದೋಟದಲ್ಲಿದ್ದ ರಾಜನತ್ತ ಯಾರೊಬ್ಬರೂ ಹೋಗಲಿಲ್ಲ. ಸಂಜೆಯ ಸಮಯಕ್ಕೆ ಒಬ್ಬ ಹಿರಿಯ ಅನುಭವಿಕ ರೈತನು ಅರಮನೆಗೆ ಬಂದ. ತಕ್ಷ ಣ ರಸ್ತೆಯ ಬದಿಯಲ್ಲಿದ್ದ ಅಂಗಡಿಯವರು ಬನ್ನಿ ಬನ್ನಿ ಎಂದು ಕರೆದು 'ಇದರಲ್ಲಿ ನಿಮಗೇನು ಬೇಕು ತೆಗೆದುಕೊಳ್ಳಿ, ಎಲ್ಲವೂ ಉಚಿತ' ಎಂದು ಹೇಳಿದರು. ರೈತ ಹೇಳಿದ 'ನನಗೇನೂ ಬೇಡ, ಮಹಾರಾಜನಿಗೆ ಭೆಟ್ಟಿಯಾಗಬೇಕು ಅಷ್ಟೇ!' ಇಷ್ಟು ಹೇಳಿ ರೈತನು ನೇರವಾಗಿ ಹೂದೋಟದಲ್ಲಿದ್ದ ರಾಜನಿಗೆ ಭೇಟಿಯಾದ. 'ಬೆಳಗಿನಿಂದ ಸಂಜೆಯವರೆಗೆ ದಾರಿ ಕಾಯ್ದರೂ ಯಾರೂ ಬಂದಿರಲಿಲ್ಲ, ಈಗ ನೀನೊಬ್ಬನಾದರೂ ಬಂದೆಯಲ್ಲಾ' ಎಂದು ರಾಜನು ವಾತ್ಸಲ್ಯದಿಂದ ರೈತನನ್ನು ಆಲಂಗಿಸಿದಾಗ ಈರ್ವರ ಕಣ್ಣುಗಳಲ್ಲಿ ಆನಂದ ಭಾಷ್ಪ ಧಾರೆಯಿಟ್ಟಿತ್ತು!!

ನಾವಿರುವ ಈ ಪ್ರಪಂಚವೇ ಪರಮಾತ್ಮನ ಹೂದೋಟ. ನಾವೆಲ್ಲರೂ ಪ್ರಜೆಗಳು. ಭಕ್ತ ವತ್ಸಲನಾದ ಪರಮಾತ್ಮನು ನಮಗೆ ದರ್ಶನವನ್ನಿತ್ತು ನಮ್ಮನ್ನು ಉದ್ಧರಿಸಬೇಕೆಂದು ನಮಗಾಗಿ ನಿತ್ಯ ದಾರಿ ಕಾಯುತ್ತಾನೆ. ಪ್ರಪಂಚದ ವಿಷಯ ವ್ಯಾಮೋಹಗಳಲ್ಲಿ ಆಕಂಠಪೂರ್ತಿ ಮುಳುಗಿದ ನಮಗೆ ಆ ಮಹಾದೇವನತ್ತ ಹೋಗಲು ಸಮಯವೆಲ್ಲಿದೆ? ಬುದ್ಧ, ಬಸವ, ಮಹಾವೀರ, ಜ್ಞಾನೇಶ್ವರ ಮೊದಲಾದ ಬೆರಳಣಿಕೆಯ ಮಹಾತ್ಮರು ಮಾತ್ರ ಪ್ರಪಂಚದ ಎಲ್ಲ ಬಂಧನಗಳನ್ನು ಹರಿದೊಗೆದು ಆ ಪರಮಾತ್ಮನ ದಿವ್ಯ ದರ್ಶನ ಪಡೆದು ಧನ್ಯರಾದರು.

ಆಧಾರ : ಈಶ ಪ್ರಸಾದ

ವಂದನೆಗಳೊಂದಿಗೆ dgnsgreenworld

ಮಾನವೀಯತೆ ಎಂಬುದು ಆಸ್ತಿ ಅಂತಸ್ತಿನಲ್ಲಿಲ್ಲ. ಮನಸ್ಸಿನಲ್ಲಿದೆ.

SAVE NATURE, HEALTHY, WEALTHY & WISE. dgnsgreenworld Family

ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ.  ಮನಸ್ಸಿನಲ್ಲಿದೆ

ಒಂದು ಕುಟುಂಬವಿತ್ತು. ಅದರಲ್ಲಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಇದ್ದರು. ಊರಿನಿಂದ ಹೊರ ಬಂದ ಅವರು ರಸ್ತೆ ಬದಿಯಲ್ಲೇ ಇರುತ್ತಿದ್ದರು. ಅಲ್ಲೇ ಇದ್ದ ಪುಟ್ಟ ಟೆಂಟ್‌ಗಳಲ್ಲಿ ವಾಸವಿದ್ದರು. ದಿನ ಬರುತ್ತಿದ್ದಂತೆ ಒಂದು ಕುಟುಂಬ ಇದ್ದದ್ದು ಮೂರು ನಾಲ್ಕು ಕುಟುಂಬ ಆಗಿತ್ತು. ಅವರ ಮನೆ ಶ್ರೀಮಂತರೊಬ್ಬರು ಅವರ ಜೀವನ ಶೈಲಿ ದಿನವೂ ನೋಡುತ್ತಿದ್ದರು. ಆ ದಿನ ದುಡಿದರೆ, ಆ ದಿನ ತಿನ್ನಲು ಅನ್ನ ಸಿಗುತ್ತಿತ್ತು. ಒಂದು ದಿನ ಅವರಿಗೆ ಯಾವ ಕೆಲಸವೂ ಸಿಗದೆ ಖಾಲಿ ಕೈಲಿ ವಾಪಾಸಾದರು. ಮನೆ ಹೊರಗೆ ದಿನವೂ ಅಡುಗೆ ಮಾಡುತ್ತಿದ್ದವರು ಒಂದು ದಿನ ಸುಮ್ಮನಿದ್ದರೆ ಕಂಡೇ ಕಾಣುತ್ತದೆ.

ಅವರ ಸ್ಥಿತಿ ನೋಡಲಾರದೆ, ಇವರೇ ಅಡುಗೆ ಮಾಡಿಕೊಂಡು ಹೋಗಿ ಕೊಟ್ಟು ಬರಲು ನಿರ್ಧರಿಸಿದರು. ಅಂತೆಯೇ ಅಡುಗೆ ಮಾಡಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಮನೆಗೆ ನೀಡಿದರು. ಹತ್ತಿರದಿಂದ ಅವರನ್ನು ನೋಡಿದಾಗ ಅವರ ಕಣ್ಣಲ್ಲಿದ್ದ ಹೊಳಪು ಕಂಡಿತು. ಹಸಿವಿನಿಂದ ಅವರ ಮುಖ ಸುಸ್ತಾದಂತೆ ಕಾಣುತ್ತಿತ್ತೇ ಹೊರತು ಬೇರಾವುದಕ್ಕೂ ಕೊರತೆ ಇದ್ದಂತೆ ಕಾಣುತ್ತಿರಲಿಲ್ಲ. ಮನೆಯ ಹೆಣ್ಣು ಮಗಳೊಬ್ಬಳು ಎಲ್ಲರಿಗೂ ಊಟ ಬಡಿಸಿ, ಅರ್ಧ ಆಹಾರ ಮಿಕ್ಕಿಸಿ ಅದನ್ನು ಹೊರಗೆ ತೆಗೆದುಕೊಂಡು ಹೋದಳು. ಇದನ್ನು ಗಮನಿಸಿದ ಶ್ರೀಮಂತರು. ಇವರು ವಿಧಿ ವಿಧಾನಗಳನ್ನು ಮಾಡುತ್ತಾರೆ ಎನಿಸುತ್ತದೆ.

ಎಡೆಯ ಹೆಸರಿನಲ್ಲೋ, ಬೇರೆ ಯಾವುದೋ ರೀತಿ ನೀತಿ ಹೆಸರಿನಲ್ಲಿ ಊಟ ಚೆಲ್ಲಬಹುದು ಇವರ ಆಲೋಚನೆ. ಅಂತೆಯೇ ಆಕೆ ಬರುವಾಗ ಪಾತ್ರೆ ಖಾಲಿಯಾಗಿತ್ತು. ಶ್ರೀಮಂತರಿಗೆ ಕೋಪ ಬಂತು. ‘ ಕೊಟ್ಟದ್ದನ್ನು ಹೀಗೆ ವೇಸ್‌ಟ್ ಮಾಡುತ್ತೀರಲ್ಲಾ, ಅದೇ ಇದ್ದಿದ್ದರೆ ನಾಳೆಗೆ ಬರುತ್ತಿರಲಿಲ್ಲವಾ? ಅಥವಾ ಹೊಟ್ಟೆ ತುಂಬ ಎಲ್ಲರೂ ತಿನ್ನುತ್ತಿರಲಿಲ್ಲವಾ? ಎಂದರು. ಅದಕ್ಕೆ ಆಕೆ‘ ನಾನು ಆಹಾರ ಚೆಲ್ಲಲಿಲ್ಲ. ಅದರ ಬಗ್ಗೆ ಆಲೋಚಿಸುವುದು ಮಹಾಪಾಪ. ಅರ್ಧ ಆಹಾರವನ್ನು ಪಕ್ಕದ ಮನೆಯವರಿಗೆ ನೀಡಿ ಬಂದೆ. ಅವರೂ ನಮ್ಮಂತೆ ಏನೂ ತಿಂದಿರಲಿಲ್ಲ’ ಎಂದರು. ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ. ಮನಸ್ಸಿನಲ್ಲಿದೆ. ಆಹಾರದ ಬೆಲೆ ಹೆಚ್ಚಾಗಿ ಕಾಣುತ್ತದೆ ಅಲ್ಲವೆ?

ವಂದನೆಗಳೊಂದಿಗೆ. dgnsgreenworld

Friday, August 2, 2019

ಹೇಗಿರಬೇಕು ಮನೆಯ ವಾಸ್ತು?

SAVE NATURE, HEALTHY, WEALTHY & WISE. dgnsgreenworld FAMILY.

*ಹೇಗಿರಬೇಕು ಮನೆಯ ವಾಸ್ತು?*
           

ಮನೆ ಬೇಕಾದರೆ ಹೇಗಾದರೂ ಇರಲಿ
ಆದರೆ ಅದರ ಒಂದು ಮೂಲೆಯಲ್ಲಿ
ಮನಬಿಚ್ಚಿ ನಗಲು ಒಂದಷ್ಟು ಜಾಗವಿರಲಿ..

ಸೂರ್ಯನು ಎಷ್ಟಾದರೂ ದೂರವಿರಲಿ
ಅವನಿಗೆ ಮನೆಗೆ ಬರಲು ದಾರಿಯಿರಲಿ..

ಒಮ್ಮೊಮ್ಮೆ ಮಾಳಿಗೆಯ ಹತ್ತಿ
ತಾರೆಗಳನ್ನು ಅವಶ್ಯವಾಗಿ ಎಣಿಸಿ..
ಸಾಧ್ಯವಾದರೆ ಕೈಚಾಚಿ
ಚಂದಿರನನ್ನು ಮುಟ್ಟಲು ಪ್ರಯತ್ನಿಸಿ..

ಮಂದಿ ಬಳಗವನ್ನು ಆಗಾಗ ಭೇಟಿಯಾಗುವಿರಾದರೆ
ಮನೆಯ ಅಕ್ಕಪಕ್ಕ ನೆರೆಹೊರೆ ಖಂಡಿತ ಇರಲಿ..

ಮಳೆಯಲ್ಲಿ ನೆನೆಯಲು ಬಿಡಿ,
ಜಿಗಿದು ಕುಣಿದಾಡಲು ಬಿಡಿ..
ಸಾಧ್ಯವಾದರೆ ಮಕ್ಕಳಿಗೆ ಒಂದು
ಕಾಗದದ ದೋಣಿ ತೇಲಿಬಿಡಿಲು ಬಿಡಿ..

ಎಂದಾದರೊಮ್ಮೆ ಬಿಡುವಿದ್ದಾಗ, ಆಕಾಶವು ಶುಭ್ರ ವಿರುವಾಗ
ಒಂದು ಗಾಳಿಪಟವನ್ನು ಆಕಾಶದಲ್ಲಿ ಹಾರಿಬಿಡಿ..
ಸಾಧ್ಯವಾದರೆ ಒಂದು ಪಂದ್ಯವೂ ಆಡಿ ಬಿಡಿ..

ಮನೆಯ ಮುಂದೆ ಒಂದು ಮರವಿರಲಿ
ಅದರ ಮೇಲೆ ಕುಳಿತ ಪಕ್ಷಿಗಳ
ಮಾತುಕತೆ ಅವಶ್ಯವಾಗಿ ಕೇಳಿರಿ..



ಎಲ್ಲಿ ಬೇಕಾದರಲ್ಲಿ ಸುಳಿದಾಡಿ
ಹಾಗೆಯೇ ಅಲ್ಲೊಂದು ಸಿಹಿಯಾದ ಕೋಲಾ‌ಹಲವನ್ನು ಹರಡಿ..

ವಯಸ್ಸಿನ ಪ್ರತಿ ಘಟ್ಟವೂ ಆನಂದದಾಯಕ
ನಿಮ್ಮ ವಯಸ್ಸಿನ ಸಂಭ್ರಮವನ್ನು ಅನುಭವಿಸಿ..

ಜೀವಂತ ಹೃದಯವಿರಲಿ ಸ್ವಾಮಿ
ಆ ಮೊಗದಲ್ಲಿ ಉದಾಸೀನತೆ ಏಕೆ?
ಸಮಯ ಹೇಗೂ ಕಳೆದು ಹೋಗುತ್ತಿದೆ
ವಯಸ್ಸಿನ ಲೆಕ್ಕವದು ಹಾಳಾಗಿಹೋಗಲಿ..

ವಂದನೆಗಳೊಂದಿಗೆ
ಡಿಜಿನ್

Wednesday, July 31, 2019

dgnsgreenworld

Add me as a friend on YouTube! https://youtu.be/addme/KIcmdgVPQl_5JaxtS7Gu-2Bx9QApng

ಆರೋಗ್ಯವೇ ಭಾಗ್ಯ, ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ

SAVE NATURE, HEALTHY, WEALTHY & WISE. dgnsgreenworld FAMILY.

ಹೃದಯಘಾತ ದಿಡೀರ್ ಎಂದು ಬರುವುದಿಲ್ಲ, ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು.  ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣ,  ಮುನ್ಸೂಚನೆ ಎಂದು ಅರಿವಾಗುವುದಿಲ್ಲ.  ಬೇರೆಯವರಿಗೂ ಮನೆಯವರಿಗೂ  ಹೇಳುವುದಿಲ್ಲ.

*ಇಪರೀತ ಬೆವರುವುದು,*
*ಸುಸ್ತಾಗುವುದು,*
*ಯಾವುದಾದರು ರಟ್ಟೆ ವಿಪರೀತ ನೋಯುವುದು,*
*ಎದೆ ಕಿವುಚಿದಂತೆ ಆಗುವುದು*
ನಿರ್ಲಕ್ಷಿಸಬಾರದು

ಇಂಥ ಲಕ್ಷಣಗಳು ಹೆಚ್ಚಾಗಿ ನಡಿಗೆ ಮಾಡುವಾಗಲೂ, ಮೆಟ್ಟಿಲು ಹತ್ತುವಾಗಲೂ  ಕಾಣಿಸುತ್ತವೆ, ತಕ್ಷಣ ಆಸ್ಪತ್ರೆಯನ್ನು  ಸೇರಬೇಕು.

*ಗೊಲ್ಡನ್ ಅವರ್* - ಹೃದಯಾಘಾತವಾದ  ಮೊದಲ ಅರ್ಧ ಗಂಟೆಯ ಸಮಯ ವ್ಯರ್ಥ ಮಾಡಬಾರದು.

40 ವರ್ಷದ ನಂತರ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

*ವಯಸ್ಸಾದವರು, ಈಗಾಗಲೇ ನಿತ್ಯ ಚಿಕಿತ್ಸೆಯಲ್ಲಿ  ಇರುವವರು ಹೊರಗೆ ಹೋಗುವಾಗ ಯಾವಾಗಲು ಸಾಕಷ್ಟು ಹಣ, ಜಾರ್ಜ್ ಮಾಡಿದ ಮೊಬೈಲ್* (ಯಾವುದಾದರು), *ಎಟಿಎಂ ಕಾರ್ಡ್, ಐಡಿ ಕಾರ್ಡ್  ಮತ್ತು ನೀರಿನ ಬಾಟಲಿ* (200 ಎಂ.ಎಲ್. ಆದರೂ ಪರವಾಗಿಲ್ಲ) *ಜೊತೆಯಲ್ಲಿ  ತೆಗೆದುಕೊಂಡು ಹೋಗವುದು ಶ್ರೇಯಕರ*

ಸಾವಿಗೆ ಹೆದರಬಾರದು, ಸಾವು ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು.

ಯೋಗ ಮಾಡುವುದರಿಂದ, ನಿತ್ಯ ನಡಿಗೆ ಮಾಡುವುದರಿಂದ, ಮಾಂಸಾಹಾರ, ಮೊಟ್ಟೆ ತಿನ್ನದೆ ಶುದ್ಧ ಶಾಕಹಾರಿ ಯಾಗಿರುವುದರಿಂದ, ಬೊಜ್ಜು ದಪ್ಪ ಇಲ್ಲದೆ ಇರುವುದರಿಂದ, ತೆಳ್ಳಗೆ ಇರುವುದರಿಂದ, ಚಿಕ್ಕ ವಯಸ್ಸು ಇರುವುದರಿಂದ  ಹೃದಯಾಘಾತ ಆಗುವುದಿಲ್ಲ ಎಂಬುದು ತಪ್ಪು ತಿಳುವಳಿಕೆ. ಅನುವಂಶಿಕ ಕಾರಣಗಳು ಜೊತೆಗೆ ಇತರೆ ಕಾರಣಗಳು ಇರುತ್ತವೆ.

ಪ್ರತಿಯೊಬ್ಬರಿಗೂ ಹೃದಯದಲ್ಲಿ ರಕ್ತದ ಹೆಪ್ಪು (ಕ್ಲಾಟ್ )  ಸ್ವಲ್ಲವಾದರೂ ಇದ್ದೇ ಇರುತ್ತದೆ, ನಿಧಾನವಾಗಿ ಹೆಚ್ಚಾಗುತ್ತಿರುತ್ತದೆ. ನಡಿಗೆ, ವ್ಯಾಯಾಮ, ಸದಾ  ಚಟುವಟಿಕೆ, ಸರಿಯಾದ ಆಹಾರ ಕ್ರಮ, ಸರಳ ಜೀವನ ಇಲ್ಲವಾದಲ್ಲಿ ಬೇಗ ಹೆಪ್ಪುಗಟ್ಟುವುದು (ಕ್ಲಾಕ್) ಹೆಚ್ಚಾಗುತ್ತಿರುತ್ತದೆ, ಆದರೆ  ಮೇಲಿನ ಕಾರ್ಯ ಚಟುವಟಿಕೆಗಳನ್ನು ಪಾಲಿಸಿದರೆ  ನಿಯಂತ್ರಣದಲ್ಲಿರುತ್ತದೆ.

ಈ ಹೃದಯದ ಖಾಯಿಲೆ ಇ.ಸಿ.ಜಿ ಮಾಡಿದಾಗ ಗೊತ್ತಾಗುತ್ತದೆ. ಆಶ್ಚರ್ಯವೆಂದರೆ ಎಷ್ಟೋ ಜನಕ್ಕೆ ಇ.ಸಿ.ಜಿ ಮತ್ತು ಎಕೋಗ್ರಾಮ್ ಮಾಡಿದಾಗ ಹೃದಯದ ಖಾಯಿಲೆ ತಿಳಿಯುವುದಿಲ್ಲ. ಆದರೆ ಟಿ.ಎಂ.ಟಿ ಪರೀಕ್ಷೆ ಮಾಡಿದಾಗ ಖಂಡಿತ ಸ್ವಲ್ಲ ಪ್ರಮಾಣವಾದರು ಪತ್ತೆ ಹಚ್ಚುತ್ತಾರೆ, ಆಗ ಅಂಜಿಯೋಗ್ರಾಮ್ ಮಾಡಿಸಬೇಕಾಗುತ್ತದೆ. ಅಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಅತ್ಯಂತ ನಿಖರವಾಗಿ ಸ್ಪಷ್ಟವಾಗಿ ಕ್ಲಾಟ್ ಪ್ರಮಾಣ ಗೊತ್ತಾಗುತ್ತದೆ. ಕ್ಲಾಟ್‌ಗಳು ಒಂದಕ್ಕಿಂತ ಹೆಚ್ಚು ಕೂಡ  ಮೇಲ್ಪಟ್ಟು ಕೂಡ ಪತ್ತೆಯಾಗಿರುವುದು.  ನಂತರ ಸೂಕ್ತ ಚಿಕೆತ್ಸೆ ಪಡೆದುಕೊಂಡು  ಆರಾಮವಾಗಿ ಆರೋಗ್ಯವಾಗಿರಬಹುದು. ಏನು ಹೆದರುವ ಅವಶ್ಯಕತೆ ಇಲ್ಲ. ಸದಾ ಚಟುವಟಿಕೆಯಿಂದ ಇದ್ದರೆ ತಾನು ಹೃದ್ರೋಗಿ ಎಂದು ಅನಿಸುವುದೇ ಇಲ್ಲ, ಎಲ್ಲರಂತೆ ಸುಖ ಜೀವನ ನಡೆಸಬಹುದು.

ಬೇರೆ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ಹೊಂದಲು ಸಮಯವಿರುತ್ತದೆ.
ಆದರೆ..
*ಹೃದಯ  ಖಾಯಿಲೆ ಹಾಗಲ್ಲ, ಕೆಲವೊಮ್ಮೆ ಒಂದು ನಿಮಿಷ ಕೂಡ  ಸಮಯವನ್ನೇ ನೀಡುವುದಿಲ್ಲ, ತಕ್ಷಣ  ಸಾವಿಗೆ  ನೂಕಿ ಬಿಡುತ್ತದೆ. ಬದುಕಲು  ಅದೃಷ್ಟ ಬೇಕು*

ವೈದ್ಯರು ಹೇಳುವುದು ಒಂದೇ...

*ಉತ್ತಮ ಆಹಾರ ಕ್ರಮ ಅನುಕರಿಸುವುದು ಸೂಕ್ತ.
*ಸದಾ ಚಟುವಟಿಕೆಯಿಂದ ಇರುವುದು ಸೂಕ್ತ.
*ಸರಳ ಜೀವನ ನಡೆಸುವುದು ಸೂಕ್ತ.   ಸ್ನೇಹಿತರೆ ಆರೋಗ್ಯವೇ ಭಾಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.                ವಂದನೆಗಳೊಂದಿಗೆ.    💐🙏           dgnsgreenworld

ಹಾವು ಕಂಡಾಗ ಹುಲಿಗೂ ಒಂದು ಕ್ಷಣ ಭಯವಾಗುತ್ತೆ ನೋಡಿ



SAVE NATURE, HEALTHY, WEALTHY & WISE. dgnsgreenworld FAMILY.

ಬೆಲೆ ಕಟ್ಟಲಾಗದ ನೃತ್ಯಕಲೆ ಅಭಿನಯವನ್ನು ನೋಡಿ



SAVE NATURE, HEALTHY, WEALTHY & WISE. dgnsgreenworld FAMILY.

Friday, July 26, 2019

ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯ ಇತಿಹಾಸ



SAVE NATURE, HEALTHY, WEALTHY & WISE. dgnsgreenworld FAMILY.

ಶ್ರೀ ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, 'ದೇವಿ ಮಹಾತ್ಮೆ' ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ 'ದೇವಿ ಮಹಾತ್ಮೆ' ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟ ವೆಂಬ ಹೆಸರು ಬಂದಿದೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಅದರ ಪಶ್ಚಿಮ ಭಾಗದಲ್ಲಿರುವ ಚಾಮುಂಡಿಬೆಟ್ಟವು ಎಂಟು ಬೆಟ್ಟಗಳ ಪೈಕಿ ಒಂದಾಗಿದೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಹಿಂದೆ ಬೆಟ್ಟವನ್ನು ಮಹಾಬಲಾದ್ರಿ ಎಂದೂ ಸಹ ಕರೆಯಲಾಗುತ್ತಿತ್ತು.
ಹಿಂದೆ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನವೆಂಬ ದೊಡ್ಡ ದೇವಸ್ಥಾನವಾಗಿ ಅಭಿವೃದ್ಧಿಯಾಗಿದೆ ಎಂದು ತಿಳಿದುಬರುತ್ತದೆ. 1799 ರಲ್ಲಿ ಅಧಿಕಾರಕ್ಕೆ ಬಂದ ಮೈಸೂರು ಅರಸರು ಈ ದೇವಿ ಆರಾಧಕರಾಗಿದ್ದು, ಶ್ರಧ್ದಾ ಭಕ್ತಿಯಿಂದ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವನ್ನಾಗಿಸಿದ್ದಾರೆ. ಹಾಗೂ ಹೆಚ್ಚಿನ ಮಹತ್ವ ತಂದಿದ್ದಾರೆ.
ಚಾಮುಂಡಿಬೆಟ್ಟ ಚಾರಿತ್ರಿಕ ಹಿನ್ನಲೆಯಲ್ಲಿ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕೊಡುಗೆಯಿದೆ. 12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರದ ಅರಸರ ಹಿನ್ನಲೆಯನ್ನು ಗುರುತಿಸಲಾಗಿದೆ. ಕ್ರಿ.ಶ. 1573 ರಲ್ಲಿ ಚಾಮರಾಜ ಒಡೆಯರು ದೇವಿಯನ್ನು ಪೂಜಿಸಲು ಹೋಗುತ್ತಿದ್ದಾಗ ಅವರಿಗೆ ಸಿಡಿಲು ಬಡಿದು ಅವರ ತಲೆಯ ಕೂದಲೆಲ್ಲಾ ಉದುರಿ ಹೋದವೆಂದು ಇತಿಹಾಸ ಹೇಳುತ್ತದೆ.
ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯಲ್ಲಿ ನಿರ್ಮಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ದೇವಸ್ಥಾನ, ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ `ಗೋಪುರ` ಮತ್ತು ಗರ್ಭಗುಡಿಯ ಮೇಲೆ 'ವಿಮಾನ' ಶಿಖರಗಳಿವೆ. ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ. ಶಿಖರದ ಮೇಲೆ ಏಳು ಚಿನ್ನದ ಲೇಪಿತ ಕಲಶಗಳಿವೆ.
ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದದ್ದು. ಈ ಶಿಲಾಮೂರ್ತಿಯನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ. 1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ಸಾವಿರ ವರ್ಷಕ್ಕೂ ಹಿಂದಿನ ಹಿನ್ನಲೆಯಿರುವ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದರು. 'ಸಿಂಹವಾಹನ' ಒಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದರು. 'ಸಿಂಹ ವಾಹನ' ವನ್ನು ರಥೋತ್ಸವ ಸಂಧರ್ಭದಲ್ಲಿ ಬಳಸಲಾಗುತ್ತಿದ್ದು ಅದರಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥವನ್ನು ಎಳೆಯಲಾಗುತ್ತದೆ. ದ್ವಾರದ ಮೇಲ್ಭಾಗದಲ್ಲಿ ಸಣ್ಣದೊಂದು ಗಣಪತಿಯ ವಿಗ್ರಹವನ್ನು ನೋಡಬಹುದು. ದ್ವಾರದ ಬೃಹತ್ ಮರದ ಬಾಗಿಲನ್ನು ಬೆಳ್ಳಿಯ ತಗಡಿನಿಂದ ಹೊದಿಸಲಾಗಿದ್ದು, ಬೆಳ್ಳಿಯ ಬಾಗಿಲಿನ ಮೇಲೆ ದೇವಿಯ ಹಲವು ಸ್ವರೂಪಗಳನ್ನು ತೋರಲಾಗಿದೆ. ಮಹಾದ್ವಾರದ ಕೆಳ ಪಾರ್ಶ್ವದಲ್ಲಿ ಇಂದ್ರಾದಿ ಅಷ್ಠದಿಕ್ಪಾಲಕರ ವಿಗ್ರಹಗಳಿವೆ.
ಮಹಾದ್ವಾರದಿಂದ ಒಳಗೆ ಹೋದರೆ ಬಲಭಾಗದಲ್ಲಿ ದಕ್ಷಿಣಾಭಿಮುಖವಾಗಿ ಗಣಪತಿಯ ಸಣ್ಣ ವಿಗ್ರಹವು ಸ್ಥಾಪಿಸಲ್ಪಟ್ಟಿದೆ. ವಿಘ್ನರಾಜನಿಗೆ ನಮಿಸಿ ಕೆಲವು ಕಲ್ಲಿನ ಮೆಟ್ಟಿಲುಗಳನ್ನು ಹತ್ತಿಹೋದರೆ ದೇವಸ್ಥಾನದ ಬಲಿಪೀಠ ಮತ್ತು ಧ್ವಜ ಸ್ಥಂಭ ಕಂಡುಬರುತ್ತದೆ. ಬಲಿಪೀಠದ ಮೇಲೆ ದೇವಿಯ ಪಾದಗಳನ್ನು ರೂಪಿಸಲಾಗಿದೆ. ಇವೆರಡರ ಮುಂಭಾಗದಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ಸಣ್ಣದೊಂದು ನಂದಿ ವಿಗ್ರಹವಿದೆ. ಮಾತೆ ಚಾಮುಂಡಿಯನ್ನು ಅದು ವೀಕ್ಷಿಸುತ್ತಾ ಕುಳಿತಿದೆ. ಧ್ವಜ ಸ್ಥಂಭಕ್ಕೆ ಈಶಾನ್ಯದಲ್ಲಿ ಗೋಡೆಯ ಮೇಲೆ ಆಂಜನೇಯನ ವಿಗ್ರಹವಿದ್ದು ಅದಕ್ಕೂ ನಿತ್ಯ ಪೂಜೆ ಜರುಗುತ್ತದೆ. ಇಲ್ಲಿನ ಪ್ರವೇಶ ದ್ವಾರದಲ್ಲಿ ನಂದಿನಿ ಮತ್ತು ಕಮಲಿನಿ ಎಂಬ ದ್ವಾರಪಾಲಿಕೆಯರ ವಿಗ್ರಹಗಳು ದ್ವಾರದ ಎಡ ಮತ್ತು ಬಲ ಭಾಗದಲ್ಲಿವೆ.
ಗರ್ಭಗುಡಿಗೆ ಮುಂಚೆ ಇರುವ ಅ0ತರಾಳದ ಎಡಭಾಗದಲ್ಲಿ ಮುದ್ದಾದ ಗಣಪತಿ ವಿಗ್ರಹ ಮತ್ತು ಬಲಭಾಗದಲ್ಲಿ ಭೈರವ ದೇವರ ವಿಗ್ರಹಗಳಿವೆ. ಭೈರವ ದೇವರ ಎಡಭಾಗದಲ್ಲಿ ಚಾಮುಂಡಿಯ ಪಂಚಲೋಹದ ಸುಂದರ ಉತ್ಸವ ಮೂರ್ತಿಯಿದೆ. ಗಣಪತಿಯ ಬಲಭಾಗದಲ್ಲಿ ಭಕ್ತನ ದಿರಿಸು ತೊಟ್ಟಿರುವ ಮುಮ್ಮಡಿ ಕೃಷ್ಣರಾಜ ಒಡೆಯರ ಆರು ಅಡಿ ಎತ್ತರದ ಸುಂದರ ಭಕ್ತ ವಿಗ್ರಹ ಕಾಣಬರುತ್ತದೆ. ಮಹಾರಾಜರು ತಮ್ಮ ಮೂವರು ಪತ್ನಿಯರೊಂದಿಗೆ ದೇವಿಗೆ ಕೈಮುಗಿದು ನಿಂತಿದ್ದಾರೆ. ಮಹಾರಾಜರ ಎಡಭಾಗಗಳಲ್ಲಿ ನಿಂತಿರುವವರೆಂದರೆ ರಮಾವಿಲಾಸ, ಲಕ್ಷ್ಮಿವಿಲಾಸ ಮತ್ತು ಕೃಷ್ಣವಿಲಾಸ ಮಹಾರಾಣಿಯರು. ಇವರುಗಳ ಶಿಲಾ ವಿಗ್ರಹಗಳ ಪಾದದ ಬಳಿಯ ಪೀಠದ ಮೇಲೆ ಇವರುಗಳ ಹೆಸರುಗಳನ್ನು ಕೆತ್ತಲಾಗಿದೆ.
ದೇವಾಲಯದ ಅರ್ಚಕರು ತಾಯಿ ಸ್ವರೂಪದ ಶಿಲಾ ಪ್ರತಿಮೆಯನ್ನು ಪ್ರತಿ ದಿನ ಅಲಂಕರಿಸಿ ಪೂಜೆ ಮಾಡುತ್ತಾರೆ. ಯದುಕುಲದ ದೇವತೆಯಾಗಿ ಬೆಳೆದು ಬಂದಿರುವ ಶ್ರೀ ಚಾಮುಂಡೇಶ್ವರಿಗೆ ಮೈಸೂರಿನ ಮಹಾರಾಜರುಗಳು ಹಲವಾರು ಬೆಲೆಬಾಳುವ ಹಾಗೂ ಅಪರೂಪವಾದ ಕಾಣಿಕೆಗಳನ್ನು ಶ್ರಧ್ಧಾಭಕ್ತಿಯಿಂದ ಒಪ್ಪಿಸಿದ್ದಾರೆ. ಈ ಶಕ್ತಿ ದೇವತೆಗೆ ಮಾನವ ಮತ್ತು ಪ್ರಾಣಿ ಬಲಿಯನ್ನು ಹಿಂದೆ ಕೊಡಲಾಗುತ್ತಿತ್ತು. ಆದರೆ 18ನೇ ಶತಮಾನದಲ್ಲಿ ಅದಕ್ಕೆ ಕಡಿವಾಣ ಬಿತ್ತು. ಈಗೇನಿದ್ದರೂ ಫಲಪುಷ್ಪಗಳ ಅರ್ಚನೆ, ಹಣ್ಣು ಹೂವು ಸಮರ್ಪಣೆ ಮಾತ್ರ ಮಾಡಲಾಗುತ್ತದೆ.
ಗರ್ಭಗುಡಿಯ ಮೇಲ್ಭಾಗದಲ್ಲಿ ಇನ್ನೊಂದು ಸಣ್ಣ ಗೋಪುರ ಕಂಡು ಬರುತ್ತದೆ. ದೇವಾಲಯದ ಹೊರಗಿನಿಂದ 'ವಿಮಾನವನ್ನು' ಕಾಣಬಹುದು. ಒಳ ಪಾರ್ಶ್ವದಲ್ಲಿರುವ ಪ್ರಾಕಾರದಲ್ಲಿ ಹಲವು ಸಣ್ಣ ಮೂರ್ತಿಗಳಿದ್ದು ಅಲ್ಲಿಯೂ ಪೂಜೆ ಪುನಸ್ಕಾರಗಳು ಜರುಗುತ್ತವೆ. ಪ್ರಾಕಾರದಲ್ಲಿ ಪ್ರದಕ್ಷಿಣೆ ಮುಗಿಸಿ ದೇವಸ್ಥಾನದಿಂದ ಹೊರಹೋಗುವಾಗ ಶ್ರೀ ಆಂಜನೇಯಸ್ವಾಮಿ ದೇವರ ದರ್ಶನವನ್ನು ಮಾಡಬಹುದಾಗಿದೆ.

REDUCE PLASTICS AND SAVE NATURE

https://youtu.be/dJu9vh73YD4

Monday, July 22, 2019

SAVE NATURE, HEALTHY, WEALTHY & WISE. dgnsgreenworld FAMILY.

ಸದಾಪುಷ್ಪದ ಔಷಧೀಯ ಉಪಯೋಗಗಳು

SAVE NATURE, HEALTHY, WEALTHY & WISE. dgnsgreenworld FAMILY.

ಔಷಧೀಯ ಉಪಯೋಗಗಳು

ಸದಾಪುಷ್ಪವು ೬೬ ಬಗೆಯ ಕ್ಷಾರಪದಾರ್ಥಗಳನ್ನು ಹೊಂದಿದೆ. ಸದಾಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಎಲೆಗಳಲ್ಲಿ ದೊರಕುವ ವಿನ್‍ಕ್ರಿಸ್ಟಿನ್ ಮತ್ತು ವಿನ್‍ಬ್ಲಾಸ್ಟಿನ್‍‍ನನ್ನು ರಕ್ತದ ಕ್ಯಾನ್ಸರ್ನ ನಿವಾರಣೆಯಲ್ಲಿ ಬಳಸುತ್ತಾರೆ. ಮಧುಮೇಹ ರೋಗದ ನಿಯಂತ್ರಕವಾಗಿ ಬಳಸುತ್ತಾರೆ. ಎಳೆ ಮಗುವಿನ ಹೊಟ್ಟೆನೋವು ನಿವಾರಣೆಗೆ ಎಲೆಗಳ ರಸವನ್ನು ಉಪಯೋಗಿಸುತ್ತಾರೆ. ರಕ್ತದ ಒತ್ತಡದ ಸಮಸ್ಯೆಯಲ್ಲೂ ಸದಪುಷ್ಪದ ಕ್ಷಾರವನ್ನು ಬಳಸುತ್ತಾರೆ.


ರಕ್ತದ ಕ್ಯಾನ್ಸರ್ ವ್ಯಾಧಿಯಲ್ಲಿ

ಒಂದು ಹಿಡಿ ಎಲೆಗಳನ್ನು ತಂದು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಚೂರ್ಣ ಅಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಒಂದು ಚೆಂಬು ನೀರಿಗೆ ಹಾಕಿ ಕಾಯಿಸಿ ಆರಿಸಿ ಕುಡಿಯುವುದು. 3ಟೀ ಚಮಚ ದಿವಸಕ್ಕೆ 2ವೇಳೆ ಬೆಳಿಗ್ಗೆ ಮತ್ತು ಸಾಯಂಕಾಲ.     ಇಡೀ ಮಾನವಕೋಟಿಯನ್ನು ರಕ್ತದ ಕ್ಯಾನ್ಸರ್‍ನಿಂದ ಉಳಿಸುವ ಸಾಮಾಥ್ಯ ಈ ಗಿಡ ಕ್ಕಿದೆ ಅಂದರೆ ಅತಿಶಯೋಕ್ತಿಯಾಗಲಾರದು.

ಸಕ್ಕರೆ ಕಾಯಿಲೆಯಲ್ಲಿ

ಈ ಗಿಡದ ನಾಲ್ಕೈದು ಹಸಿರೆಲೆಗಳನ್ನು ತಂದು ಚೆನ್ನಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ತಿನ್ನುವುದು. ಅಥವಾ ಬರಿಹೊಟ್ಟೆಯಲ್ಲಿ ನಿತ್ಯ ಪುಷ್ಟಿ ಹೂಗಳನ್ನು ಅಗಿದು ತಿನ್ನುವುದು. ನಾಲ್ಕು ಬಿಳೀ ಪುಷ್ಪವನ್ನು ಅರ್ಧ ಬಟ್ಟಲು ನೀರಿಗೆ ಹಾಕಿ ಕಾಯಿಸಿ ಕಾಲು ಬಟ್ಟಲು ಕಷಾಯವನ್ನು ತಣ್ಣಗೆ ಮಾಡಿ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸುವುದು.

ಅಧಿಕ ರಕ್ತ ಒತ್ತಡದಲ್ಲಿ

ನಿತ್ಯಪುಷ್ಟಿ ಎಲೆಗಳನು ತಂದು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಳ್ಳುವುದು. ಒಂದು ಟೀ ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು. ತಣ್ಣಗಾದ ಮೇಲೆ 1/8 ಬಟ್ಟಲು ಕಷಾಯವನ್ನು ಸೇವಿಸುವುದು.

ಸುಟ್ಟ ಗಾಯ ಮತ್ತು ಬೊಬ್ಬಗಳಿಗೆ

ನಿತ್ಯಪುಷ್ಟಿಯ ಒಂದು ಹಿಡಿ ಹಸಿ ಎಲೆಗಳನ್ನು ತಂದು ಚೆನ್ನಗಿ ರಸ ತೆಗೆಯುವುದು ಈ ರಸದಲ್ಲಿ ಸ್ವಲ್ಪ ಹಸಿ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಮಡಿ ಗಾಯದ ಮೇಲೆ ಮಂದವಾಗಿ ಲೇಪಿಸುವುದು.

ಬೇಧಿ ಮತ್ತು ರಕ್ತ ಭೇಧಿಯಲ್ಲಿ

10ಗ್ರಾಂ ನಿತ್ಯಪುಷ್ಟೀಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು .ತಣ್ಣಗಾದ ಮೇಲೆ ಈ ಕಷಾಯವನ್ನು ಎರಡು ಭಾಗ ಮಾಡಿ ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಹೀಗೆ 5 ರಿಂದ 7 ದಿವಸ ಉಪಚಾರವನ್ನು ಮುಂದುವರೆಸುವುದು. ಮಲಬದ್ದತೆಯನ್ನು ಸಹ ನಿವಾರಿಸಬಲ್ಲ ಗುಣ ಈ ಮೂಲಿಕೆಗೆ ಇದೆ ಎಂದುತಿಳಿದು ಬಂದಿದೆ.

ಗಾಯಳುಗಳಿಂದ ರಕ್ತಸ್ರಾವ

ಗಾಯ ವಾಸಿಯಾಗಲು ಒಣಗಿದ ನಿತ್ಯಪುಷ್ಟಿ ಎಲೆಯನ್ನು ಗಾಯಗಳ ಮೇಲೆ ಹಾಕುವುದು.ಗಾಯಗಳು ವಾಸಿಯಾಗುವವು

ವಂದನೆಗಳೊಂದಿಗೆ
Dgnsgreenworld

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World