www.dgnsgreenworld.blogspot.com
Sunday, May 25, 2025
Friday, May 16, 2025
🚩🙏*****ಎಲ್ಲರೂ ತಿಳಿಯಬೇಕಾದ ಆದ್ಯಾತ್ಮ ವಿಷಯ***** ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ
🚩🙏*****ಎಲ್ಲರೂ ತಿಳಿಯಬೇಕಾದ ಆದ್ಯಾತ್ಮ ವಿಷಯ***** ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ.
ದಿಕ್ಕುಗಳು:
1. ಪೂರ್ವ /ಮೂಡಣ
2. ದಕ್ಷಿಣ. /ತೆಂಕಣ
3. ಪಶ್ಚಿಮ /ಪಡುವಣ
4. ಉತ್ತರ /ಬಡಗಣ
ಮೂಲೆಗಳು:
1. ಆಗ್ನೇಯ
2. ನೈರುತ್ಯ
3. ವಾಯುವ್ಯ
4. ಈಶಾನ್ಯ
ವೇದಗಳು:
1. ಋಗ್ವೇದ
2. ಯಜುರ್ವೇದ
3. ಸಾಮವೇದ
4. ಅಥರ್ವಣ ವೇದ
ಪುರುಷಾರ್ಥಗಳು:
1. ಧರ್ಮ
2. ಅರ್ಥ
3. ಕಾಮ
4. ಮೋಕ್ಷ
ಪಂಚಭೂತಗಳು:
1. ಗಾಳಿ
2. ನೀರು
3. ಭೂಮಿ
4. ಆಕಾಶ
5. ಅಗ್ನಿ
ಪಂಚೇಂದ್ರಿಯಗಳು:
1. ಕಣ್ಣು
2. ಮೂಗು
3. ಕಿವಿ
4. ನಾಲಿಗೆ
5. ಚರ್ಮ
ಲಲಿತ ಕಲೆಗಳು:
1. ಕವಿತ್ವ
2. ಚಿತ್ರಲೇಖನ
3. ನಾಟ್ಯ
4. ಸಂಗೀತ
5. ಶಿಲ್ಪ ಕಲೆ
ಪಂಚಗಂಗೆಯರು:
1. ಗಂಗಾ
2. ಕೃಷ್ನಾ
3. ಗೋದಾವರಿ
4. ಕಾವೇರಿ
5. ತುಂಗಭದ್ರಾ
ದೇವತಾ ವೃಕ್ಷಗಳು:
1. ಮಂದಾರ
2. ಪಾರಿಜಾತ
3. ಕಲ್ಪವೃಕ್ಷ
4. ಸಂತಾನ
5. ಹರಿ ಚಂದನ
ಪಂಚೋಪಚಾರಗಳು:
1. ಸ್ನಾನ
2. ಪೂಜೆ
3. ನೈವೇದ್ಯ
4. ಪ್ರದಕ್ಷಿಣೆ
5. ನಮಸ್ಕಾರ
ಪಂಚಾಮೃತಗಳು:
1. ಹಸುವಿನ ಹಾಲು
2. ಮೊಸರು
3. ತುಪ್ಪ
4. ಸಕ್ಕರೆ
5. ಜೇನುತುಪ್ಪ
ಪಂಚಲೋಹಗಳು:
1. ಚಿನ್ನ
2. ಬೆಳ್ಳಿ
3. ತಾಮ್ರ
4. ಸೀಸ
5. ತವರ
ಪಂಚರಾಮರು:
1. ಅಮರಾವತಿ
2. ಭೀಮವರಂ
3. ಪಾಲಕೊಲ್ಲು
4. ಸಾಮರ್ಲಕೋಟ
5. ದ್ರಾಕ್ಷಾರಾಮಂ
ಷಡ್ರುಚಿಗಳು:
1. ಸಿಹಿ
2. ಹುಳಿ
3. ಕಹಿ
4. ಒಗರು
5. ಕಾರ
6. ಉಪ್ಪು
ಅರಿಷಡ್ವರ್ಗಗಳು:
1. ಕಾಮ
2. ಕ್ರೋಧ
3. ಲೋಭ
4. ಮೋಹ
5. ಮದ
6. ಮತ್ಸರ
ಋತುಗಳು:
1. ವಸಂತ
2. ಗ್ರೀಷ್ಮ
3. ವರ್ಷ
4. ಶರತ್
5. ಹೇಮಂತ
6. ಶಿಶಿರ
ಸಪ್ತ ಋಷಿಗಳು:
1. ಕಾಶ್ಯಪ
2. ಗೌತಮ
3. ಅತ್ರಿ
4. ವಿಶ್ವಾಮಿತ್ರ
5. ಭಾರದ್ವಾಜ
6. ವಸಿಷ್ಠ
ತಿರುಪತಿಯಲ್ಲಿನ ಸಪ್ತಗಿರಿಗಳು:
1. ಶೇಷಾದ್ರಿ
2. ನೀಲಾದ್ರಿ
3. ಗರುಡಾದ್ರಿ
4. ಅಂಜನಾದ್ರಿ
5. ವೃಷಭಾದ್ರಿ
6. ನಾರಾಯಣದ್ರಿ
7. ವೇಂಕಟಾದ್ರಿ
ಸಪ್ತ ವ್ಯಸನಗಳು:
1. ಜೂಜು
2. ಮದ್ಯಪಾನ
3. ಕಳ್ಳತನ
4. ಬೇಟೆ
5. ವ್ಯಭಿಚಾರ
6. ದುಂದು ಖರ್ಚು
7. ಕಠಿಣ ಮಾತು
ಸಪ್ತ ನದಿಗಳು:
1. ಗಂಗಾ
2. ಯಮುನಾ
3. ಸರಸ್ವತಿ
4. ಗೋದಾವರಿ
5. ಸಿಂಧು
6. ನರ್ಮದಾ
7. ಕಾವೇರಿ
ನವಧಾನ್ಯಗಳು:
1. ಗೋಧಿ
2. ಭತ್ತ/ನೆಲ್ಲು
3. ಹೆಸರು
4. ಕಡಲೆ
5. ತೊಗರಿ
6. ನವಣೆ
7. ಉದ್ದು
8. ಹುರಳಿ
9. ಅಲಸಂದೆ
ನವರತ್ನಗಳು:
1. ಮುತ್ತು
2. ಹವಳ
3. ಗೋಮೇಧಿಕ
4. ವಜ್ರ
5. ಕೆಂಪು
6. ನೀಲಿ
7. ಕನಕ ಪುಷ್ಯ ರಾಗ
8. ಪಚ್ಚೆ/ಮರಕತ
9. ವೈಡೂರ್ಯ
ನವ ಧಾತುಗಳು:
1. ಚಿನ್ನ
2. ಬೆಳ್ಳಿ
3. ಹಿತ್ತಾಳೆ
4. ತಾಮ್ರ
5. ಕಬ್ಬಿಣ
6. ಕಂಚು
7. ಸೀಸ
8. ತವರ
9. ಕಾಂತ ಲೋಹ
ನವರಸಗಳು:
1. ಹಾಸ್ಯ
2. ಶೃಂಗಾರ
3. ಕರುಣ
4. ಶಾಂತ
5. ರೌದ್ರ
6. ಭಯಾನಕ
7. ಬೀಭತ್ಸ
8. ಅದ್ಭುತ
9. ವೀರ
ನವದುರ್ಗೆಯರು:
1. ಶೈಲ ಪುತ್ರಿ
2. ಬ್ರಹ್ಮಚಾರಿಣಿ
3. ಚಂದ್ರ ಘಂಟ
4. ಕೂಷ್ಮಾಂಡ
5. ಸ್ಕಂದ ಮಾತೆ
6. ಕಾತ್ಯಾಯನಿ
7. ಕಾಳರಾತ್ರಿ
8. ಮಹಾಗೌರಿ
9. ಸಿದ್ಧಿದಾತ್ರಿ
ದಶ ಸಂಸ್ಕಾರಗಳು:
1. ವಿವಾಹ
2. ಗರ್ಭದಾನ
3. ಪುಂಸವನ
4. ಸೀಮಂತ
5. ಜಾತಕ ಕರ್ಮ
6. ನಾಮಕರಣ
7. ಅನ್ನಪ್ರಾಶನ
8. ಚೂಡಕರ್ಮ
9. ಉಪನಯನ
10. ಸಮವರ್ತನ
ದಶಾವತಾರಗಳು - ಕ್ಷೇತ್ರಗಳು
1. ಶ್ರೀಮತ್ಸ್ಯಾವತಾರ ಕ್ಷೇತ್ರ - ನಾಗಲಾಪುರಂ ತಿರುಪತಿ ಜಿಲ್ಲೆ, ಆಂಧ್ರ ಪ್ರದೇಶ.
2. ಶ್ರೀ ಕೂರ್ಮ ಕ್ಷೇತ್ರ - ಶ್ರೀ ಕೂರ್ಮಮ್, ಶ್ರೀಕಾಕುಳಂ ಜಿಲ್ಲೆ, ಆಂಧ್ರ ಪ್ರದೇಶ.
3. ಶ್ರೀ ಆದಿ ವರಾಹ ಕ್ಷೇತ್ರ - ತಿರುಮಲ, ತಿರುಪತಿ ಜಿಲ್ಲೆ, ಆಂಧ್ರಪ್ರದೇಶ.
4. ಶ್ರೀ ನರಸಿಂಹ ಕ್ಷೇತ್ರ - ಅಹೋಬಿಲಂ, ನಂದ್ಯಾಲ ಜಿಲ್ಲೆ, ಆಂಧ್ರಪ್ರದೇಶ.
5. ಶ್ರೀ ವಾಮನ ಕ್ಷೇತ್ರ - ತಿರುಕ್ಕೋಯಿಲೂರು ಕಳ್ಳಕುರಿಚಿ ಜಿಲ್ಲೆ ತಮಿಳುನಾಡು.
6. ಶ್ರೀ ಪರಶುರಾಮ ಕ್ಷೇತ್ರ - ಜನಪಾವ ಪರ್ವತ, ಇಂದೋರ್ ಜಿಲ್ಲೆ, ಮಧ್ಯ ಪ್ರದೇಶ.
7. ಶ್ರೀರಾಮ ಕ್ಷೇತ್ರ - ಅಯೋಧ್ಯ, ಉತ್ತರ ಪ್ರದೇಶ.
8. ಶ್ರೀ ಬಲರಾಮ ಕ್ಷೇತ್ರ - ಗೋಕುಲಂ, ಮಥುರಾ ಜಿಲ್ಲೆ, ಉತ್ತರಪ್ರದೇಶ.
9. ಶ್ರೀ ಕೃಷ್ಣ ಕ್ಷೇತ್ರ - ಮಥುರಾ ಉತ್ತರಪ್ರದೇಶ.
10. ಶ್ರೀ ಕಲ್ಕಿ ಕ್ಷೇತ್ರ - ಶಂಭಲ (ಅವತಾರವೆತ್ತುವ ಕ್ಷೇತ್ರ).
ಶ್ರೀ ವೆಂಕಟೇಶ್ವರ ಸ್ವಾಮಿ ಕಲಿಯುಗದೈವ - ತಿರುಮಲ ಕಲಿಯುಗ ಕ್ಷೇತ್ರ.
*ಸೃಷ್ಟಿಯಲ್ಲಿ ಏಕೈಕ ಮತ್ತ್ಯಾವತಾರ ಕ್ಷೇತ್ರ ನಾಗಲಾಪುರ ಕ್ಷೇತ್ರವನ್ನು ದರ್ಶಿಸಿ, ಸೇವಿಸಿ*
ಜ್ಯೋತಿರ್ಲಿಂಗಗಳು:
1. ಹಿಮಾಲಯ ಪರ್ವತ - ಕೇದಾರೇಶ್ವರ ಲಿಂಗ
2. ಕಾಶಿ - ಕಾಶಿ ವಿಶ್ವೇಶ್ವರ
3. ಮಧ್ಯಪ್ರದೇಶ - ಮಹಾಕಾಳೇಶ್ವರ ಲಿಂಗ, ಓಂಕಾರೇಶ್ವರ ಲಿಂಗ
4. ಗುಜರಾತ್ - ಸೋಮನಾಥಲಿಂಗ, ನಾಗೇಶ್ವರ ಲಿಂಗ.
5. ಮಹಾರಾಷ್ಟ್ರ - ಭೀಮಶಂಕರ, ತ್ರಯಂಬಕೇಶ್ವರ, ಘೃಷ್ಣೆಶ್ವರ, ವೈದ್ಯನಾಥೇಶ್ವರ.
6. ಆಂಧ್ರ ಪ್ರದೇಶ - ಮಲ್ಲಿಕಾರ್ಜುನ ಲಿಂಗ (ಶ್ರೀಶೈಲಂ )
7. ತಮಿಳುನಾಡು - ರಾಮಲಿಂಗೇಶ್ವರ
ವಾರಗಳು:
1. ಭಾನು
2. ಸೋಮ
3. ಮಂಗಳ
4. ಬುಧ
5. ಗುರು
6. ಶುಕ್ರ
7. ಶನಿ
ಚಂದ್ರಮಾನ ತಿಂಗಳುಗಳು:
1. ಚೈತ್ರ
2. ವೈಶಾಖ
3. ಜೇಷ್ಠ
4. ಆಷಾಢ
5. ಶ್ರಾವಣ
6. ಭಾದ್ರಪದ
7. ಆಶ್ವಯುಜ
8. ಕಾರ್ತೀಕ
9. ಮಾರ್ಗಶಿರ
10. ಪುಷ್ಯ
11. ಮಾಘ
12. ಫಾಲ್ಗುಣ
ರಾಶಿಗಳು:
1. ಮೇಷ
2. ವೃಷಭ
3. ಮಿಥುನ
4. ಕರ್ಕಾಟಕ
5. ಸಿಂಹ
6. ಕನ್ಯಾ
7. ತುಲಾ
8. ವೃಶ್ಚಿಕ
9. ಧನಸ್ಸು
10. ಮಕರ
11. ಕುಂಭ
12. ಮೀನ
ತಿಥಿಗಳು:
1. ಪಾಡ್ಯ
2. ಬಿದಿಗೆ
3. ತದಿಗೆ
4. ಚೌತಿ
5. ಪಂಚಮಿ
6. ಷಷ್ಠಿ
7. ಸಪ್ತಮಿ
8. ಅಷ್ಟಮಿ
9. ನವಮಿ
10. ದಶಮಿ
11. ಏಕಾದಶಿ
12. ದ್ವಾದಶಿ
13. ತ್ರಯೋದಶಿ
14. ಚತುರ್ದಶಿ
15. ಅಮಾವಾಸ್ಯೆ/ಹುಣ್ಣಿಮೆ
ನಕ್ಷತ್ರಗಳು:
1. ಅಶ್ವಿನಿ
2. ಭರಣಿ
3. ಕೃತಿಕಾ
4. ರೋಹಿಣಿ
5. ಮೃಗಶಿರ
6. ಆರುದ್ರ
7. ಪುನರ್ವಸು
8. ಪುಷ್ಯ
9. ಆಶ್ಲೇಷ
10. ಮಖ
11. ಪುಬ್ಬಾ
12. ಉತ್ತರ
13. ಹಸ್ತ
14. ಚಿತ್ತಾ
15. ಸ್ವಾತಿ
16. ವಿಶಾಖ
17. ಅನುರಾಧ
18. ಜೇಷ್ಠ
19. ಮೂಲ
20. ಪೂರ್ವಾಷಾಢ
21. ಉತ್ತರಾಷಾಢ
22. ಶ್ರವಣ
23. ಧನಿಷ್ಠ
24. ಶತಭಿಷಾ
25. ಪೂರ್ವಾಭಾದ್ರ
26. ಉತ್ತರಾಭಾದ್ರ
27. ರೇವತಿ
ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ.
(ಸಂಗ್ರಹ)
Wednesday, May 14, 2025
ರವಿ ಕುಮಾರ್ ಹರವೇ
"ಸಾವಿರ ಮೈಲಿಗಳ ಪ್ರಯಾಣ ಕೂಡ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ". ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಸಾಧಿಸುವ ಛಲವಿರಬೇಕು ಅಷ್ಟೇ, ಸಾಧನೆ ಹಾದಿಯಲ್ಲಿ ನೋವು ನಲಿವು, ಕಷ್ಟ ಸುಖ, ಸುಖ-ದುಃಖ, ಸೋಲು ಗೆಲುವು, ಕಹಿ ಸಿಹಿ, ಎಲ್ಲವೂ ಸರ್ವಸಾಮಾನ್ಯವಾಗಿ ಸಾಧನೆಯು ಉದ್ದಕ್ಕೂ ಉದ್ಭವಿಸುತ್ತವೆ, ಪ್ರತಿಯೊಬ್ಬ ಸರ್ವ ಶ್ರೇಷ್ಠ ಸಾಧಕರೂ ಈ ಎಲ್ಲಾ ಮೆಟ್ಟಿಲುಗಳನ್ನು ಮೆಟ್ಟಿ ಸಾಧನೆಗೈದಿರುತ್ತಾರೆ, ಅದಕ್ಕೆ ಸನ್ಮಾನ್ಯ, ಡಿ, ವಿ, ಗುಂಡಪ್ಪನವರು ಹೇಳುತ್ತಾರೆ,
"ಯಶಸ್ಸು ಎಂಬುದು ಕಂಡ ಕಂಡಲ್ಲಿ ಬೆಳೆಯುವ ಕಾಡು ಕುಸುಮವಲ್ಲ ಎಡಬಿಡದ ಕಾಯಕದಿಂದ ಒಡಮೂಡಿ ಬರುವ ಮಂದಾರ ಪುಷ್ಪ"ಎಂದು.
ಸಾಧನೆ ಹಾದಿಯಲ್ಲಿ ಬರುವ ಪ್ರತಿ ಸಂದರ್ಭಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ, ನಾವು ಮಾಡುವ ಪ್ರತಿ ಕೆಲಸದಲ್ಲೂ ಭಗವಂತನ ಅನುಗ್ರಹ ಇರುತ್ತದೆ, ನಾವು ಏನನ್ನು ಬಯಸುತ್ತೇವೆಯೋ ಅದನ್ನು ನಮಗೆ ಈ ನಿಸರ್ಗ ಕೊಡುತ್ತದೆ, ನೇರ ಮಾರುಕಟ್ಟೆಯಲ್ಲಿ ನಿಮ್ಮ ಸುದೀರ್ಘ ಅನುಭವ ಯಶಸ್ಸಿಗೆ ಮೆಟ್ಟಲಾಗಿ ನಿಲ್ಲುತ್ತದೆ, ನಿಮ್ಮ ಅನುಭವ ನಮ್ಮಂತ ಎಷ್ಟೋ ಜನರ ಜ್ಞಾನಾರ್ಜನೆಗೆ ಸಹಕಾರವಾಗಲಿ, ಭಗವಂತ ಆ ಅದ್ಭುತ ಶಕ್ತಿಯನ್ನು ತಮಗೆ ಅನುಗ್ರಹಿಸಲಿ ಎಂದು ಬೇಡಿಕೊಳ್ಳುತ್ತೇವೆ.ನಿಮ್ಮ ಆಶಾಭಾವನೆಯ ಸಂದೇಶವನ್ನು ಓದಿ ಬಹಳ ಸಂತೋಷವಾಯಿತು.
ದೇವರು ತಮಗೆ ಆಯಸ್ಸು, ಆರೋಗ್ಯ, ಐಶ್ವರ್ಯ ಸಕಲವನ್ನು ಅನುಗ್ರಹಿಸಲಿ ನಿಮ್ಮಿಂದ ಸರ್ವರಿಗೂ ಒಳಿತಾಗಲೆಂದು ಬಯಸುತ್ತೇವೆ. ವಂದನೆಗಳೊಂದಿಗೆ 🙏💐
Wednesday, April 16, 2025
ಗೋಮಾತೇ :
Brutality of cow killing !!!
ಗೋಮಾತೇ :
ಕಸಾಯಿಖಾನೆಗೆ ನನ್ನನ್ನು ಹಾಕಲಾಗುತ್ತದೆ ಮತ್ತು 4 ದಿನಗಳ ವರೆಗೂ ನನ್ನ ಹೊಟ್ಟೆಗೆ ಏನೂ ಕೊಡುವುದಿಲ್ಲ!
ಯಾಕೆಂದರೆ....ನನ್ನ ರಕ್ತ ದಲ್ಲಿನ ಹಿಮೋಗ್ಲೋಬಿನ್ ಕರಗಿ ಮಾಂಸ ದಲ್ಲಿ ಆಂಟಿ ಕೊಳ್ಳಲಿ ಎಂದು!
ನಂತರ ನನ್ನನ್ನು ಎಳೆದು ಕೊಂಡು ತರಲಾಗುತ್ತದೆ ಎಕೆಂದರೆ....ನಾ ಮೂರ್ಚೆ ಹೋಗಿರುತ್ತೇನೇ.
ನನ್ನ ಮೇಲೆ 200 digree Celsius ನ ಕುದಿಯುವ ನೀರುನ್ನು ಸುರಿಯಲಾಗುತ್ತದೆ ......ನನ್ನಲ್ಲಿ ಹಾಹಾಕಾರ ಉಂಟಾಗುತ್ತದೆ .
ಆಗ ನನ್ನ ಹಾಲು ಕುಡಿಯುವ ನಿಮ್ಮನ್ನು (ಮನುಷ್ಯ)ನೆನೆಯುತ್ತೇನೆ !
ನಂತರ ನನ್ನನ್ನು ಕಠೋರವಾಗಿ ದೊಣ್ಣೆ ಯಿಂದ ಹೊಡೆಯ ಲಾಗುವುದು ....ಯಾಕೆಂದರೆ ನನ್ನ ಚರ್ಮ ಸುಲಭವಾಗಿ ಬಿಡಿಸಿ ಕೊಳ್ಳಲಿ ಎಂದು!
ನನ್ನ ಎರಡು ಕಾಲುಗಳನ್ನು ಕಟ್ಟಿ ಉಲ್ಟಾ ನೇತು ಹಾಕುತ್ತಾರೆ ನಂತರ ನನ್ನ ಶರೀರದಿಂದ ಚರ್ಮವನ್ನು ತೆಗೆದು ಹಾಕುತ್ತಾರೆ .
ಕೇಳಿ ಭೂಮಿ ಮೇಲಿನ ಜೀವಿಗಳೇ.......
ಈಗಲೂ ನನ್ನ ಪ್ರಾಣ ಹೋಗಿರುವುದಿಲ್ಲ!!
ನಾನು ಕಾತರದ ಕಣ್ಣುಗಳಿಂದ ನೋಡುವೆ ಈ ಕಸಾಯಿಖಾನೆಯವರಲ್ಲಿ ಮನುಷ್ಯತ್ವ ಜನ್ಮತಳೆಯುತ್ತದೆನೋ ಎಂದು! ಇಂತಹ ಸಮಯದಲ್ಲೂ ನನ್ನಿಂದ ಪೋಷಣೆ ಗೊ0ಡ ಯಾರಾದರೂ ಮನುಷ್ಯ ನನ್ನನ್ನು ಕಾಪಾಡುವುದಿಲ್ಲ...
ನನ್ನ ಚರ್ಮದ ಮೇಲೆ ಆಸೆ ಇಟ್ಟುಕೊಂಡ ವರೆ....ದುಷ್ಟ ಕಸಾಯಿಖಾನೆಯವ ನನ್ನ ಜೀವವಿರು ವಾಗಲೇ ನನ್ನ ಚರ್ಮ ತೆಗೆದು ಬಿಡುತ್ತಾರೆ.....ನಾನು ನರಳಿ ನರಳಿ ಹಂಬಲಿಸಿ ಪ್ರಾಣ ಬಿಡುತ್ತೇನೆ.
ಇಂತಹ ಪಾವನ ಪವಿತ್ರ ಭಾರತ ಭೂಮಿಯ ಮೇಲೆ ನನ್ನನ್ನು ಕಾಪಾಡಲು ಪಾಲನೆ ಮಾಡಲು ಯಾವುದೇ ಧರ್ಮ ಕಾನೂನು ಇಲ್ಲವೇ......
ನಿಮ್ಮಿಂದಾದ ಕ್ರೂರವಾದ ಅತ್ಯಾಚಾರವನ್ನು ಸಹಿಸಿಯು ಕೂಡ ನಾನು ನಿಮಗೆ 'ಶಾಪ ' ವನ್ನು ಕೊಡಲಾಗದು ..................
ಎಕೆಂದರೆ........ನಾನು ನಿನ್ನ ತಾಯಿಯಲ್ಲ ವೇ....
ನೀವು ಗೋಮಾತೇಯನ್ನು ಪ್ರೀತಿಸುವವರಾದರೇ ...
ಮತ್ತು ಗೋಮಾತೆಯ ಹಾಲನ್ನು ಕೂಡಿದವರೇ ಆಗಿದ್ದರೆ......ಈ message ನ್ನು share ಮಾಡಿ ಸ್ವಲ್ಪ ವಾದರೂ ಹಾಲಿನ ಋಣವನ್ನಾದರೂ ಕಮ್ಮಿ ಮಾಡಿ ಕೊಳ್ಳಿ.
ಹಿಂದೂಗಳೆಲ್ಲರ ಒಂದೇ ಕೂಗು....
ಇನ್ನು ಗೋಹತ್ಯೆ ಯನ್ನು ಸಹಿಸಲಾಗದು..!
ಗೋಮಾತೆಯ ಈ ಪೀಡನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು 2 ನಿಮಿಷ ಸಮಯ ಕೊಟ್ಟು ಸ್ನೇಹಿತ ಬಂಧು ಗಳಿಗೆಲ್ಲ share ಮಾಡಿ.
ಗೋಮಾತೆಗೆ ಜಯವಾಗಲಿ !......
ಜೈ ಶ್ರೀ ಕೃಷ್ಣ!.....
ಜೈ ಶ್ರೀರಾಮ್!....
please save cows
and value your humanity .
*ದೇವರು ನಮಗೆ ಏನು ಕೊಟ್ಟಿದ್ದಾರೆ.
*ದೇವರು ನಮಗೆ ಏನು ಕೊಟ್ಟಿದ್ದಾನೆ ಎನ್ನುವುದು ಮುಖ್ಯವಲ್ಲ. ಕೊಟ್ಟಿರುವುದನ್ನು ನಾವು ಹೇಗೆ ಬಳಸಿಕೊಂಡಿದ್ದೇವೆ ಎನ್ನುವುದೇ ಮುಖ್ಯ*
*ಶುಭೋದಯ*
ವಂದನೆಗಳೊಂದಿಗೆ
ನಂಜುಂಡಸ್ವಾಮಿ
Wednesday, March 12, 2025
*ಬೇಸಿಗೆಯಲ್ಲಿ ಮೋಸಂಬಿ ರಸ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ, ಪ್ರಯೋಜನಗಳನ್ನು ತಿಳಿದು ನೀವು ವಿಸ್ಮಿತರಾಗುತ್ತೀರಿ.
*Health is wealth and Most Important Information*
*ಬೇಸಿಗೆಯಲ್ಲಿ ಮೋಸಂಬಿ ರಸ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ, ಪ್ರಯೋಜನಗಳನ್ನು ತಿಳಿದು ನೀವು ವಿಸ್ಮಿತರಾಗುತ್ತೀರಿ.
HEALTH is Wealth
ಈಗ ಬೇಸಿಗೆ ಶುರುವಾಗಿದೆ. ಹೀಗಾಗಿ ಜನರಿಗೆ ಬಿಸಿಲಿನ ಸಮಸ್ಯೆ ಕಾಡಲಿದೆ. ಹವಾಮಾನ ಬದಲಾವಣೆಯು ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸಹ ಉಂಟುಮಾಡುತ್ತದೆ. ಆದ್ದರಿಂದ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇವುಗಳ ಪೈಕಿ ಒಂದು ಉತ್ತಮ ಪರಿಹಾರವೆಂದರೆ ಮೋಸಂಬಿ ರಸ.
*ಈ ದಿನಗಳಲ್ಲಿ ನಿಯಮಿತವಾಗಿ ಮೋಸಂಬಿ ರಸವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ...*
1) ಮೋಸಂಬಿ ರಸ ದೇಹವನ್ನು ತಂಪಾಗಿಸುತ್ತದೆ. ಮೊಸಂಬಿಯಲ್ಲಿ ವಿಟಮಿನ್ ಎ, ಬಿ, ಸಿ ಕಂಡುಬರುತ್ತದೆ. ಮೋಸಂಬಿ ಮಕ್ಕಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
2) ಮೋಸಂಬಿ ಸೌಂದರ್ಯ ವರ್ಧಕವಾಗಿದೆ. ಮೋಸಂಬಿ ಪೌಷ್ಟಿಕ, ಸಿಹಿ, ರುಚಿಕರ, ರುಚಿಕರ, ಜೀರ್ಣಕಾರಿ, ದೀಪಕ, ಹೃದಯ ಉತ್ತೇಜಕ, ವೀರ್ಯವರ್ಧಕ ಮತ್ತು ರಕ್ತ ಸುಧಾರಕ ಗುಣಗಳನ್ನು ಹೊಂದಿದೆ.
3) ಮೋಸಂಬಿ ರಸವನ್ನು ವಿವಿಧ ತಂಪು ಪಾನೀಯಗಳನ್ನು ತಯಾರಿಸಲು, ಆಹಾರಕ್ಕೆ ಪರಿಮಳ ಮತ್ತು ಸುವಾಸನೆಯನ್ನು ಸೇರಿಸಲು ಬಳಸಲಾಗುತ್ತದೆ.
4) ಮೋಸಂಬಿ ರಸವು ವಿಶೇಷವಾಗಿ ದುರ್ಬಲ, ರೋಗಿಗಳು, ವೃದ್ಧರು ಮತ್ತು ಮಕ್ಕಳಿಗೆ ಉತ್ತೇಜನಕಾರಿಯಾಗಿದೆ.
5) ತಾಜಾ ಮೋಸಂಬಿಯ ಸಿಪ್ಪೆ ಮುಖದ ಮೇಲಿನ ಮೊಡವೆ ಮತ್ತು ಮೊಡವೆಗಳನ್ನು ಹೋಗಲಾಡಿಸಲು ಇದು ಉಪಯುಕ್ತವಾಗಿದೆ. ಮೋಸಂಬಿ ಸಿಪ್ಪೆ ವಾತಹಾರಕವಾಗಿದೆ.
6) ಮೋಸಂಬಿ ರಸವು ಉತ್ತಮ ಜೀರ್ಣಕ್ರಿಯೆಗೆ ಸಹ ಪ್ರಯೋಜನಕಾರಿಯಾಗಿದೆ. ಮೋಸಂಬಿ ರಸವು ಅದರ ಪರಿಮಳ ಮತ್ತು ಆಮ್ಲದ ಕಾರಣದಿಂದಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
7) ಮೋಸಂಬಿ ರಸವನ್ನು ಪ್ರತಿದಿನ ಸೇವಿಸುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಮೋಸಂಬಿ ರಸವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಅನೇಕ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
8) ಮೋಸಂಬಿಯಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಹಾಗಾಗಿ ಇದು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಜೇನುತುಪ್ಪದೊಂದಿಗೆ ಮೋಸಂಬಿ ರಸಪಾನವು ತೂಕ ನಷ್ಟಕ್ಕೆ ಸಹಾಯಕವಾಗಿದೆ.
9) ಮೋಸಂಬಿ ರಸವು ಕಣ್ಣುಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕೆಲವು ಹನಿ ಮೋಸಂಬಿ ರಸವನ್ನು ನೀರಿನಲ್ಲಿ ಹಾಕಿ ನಿಮ್ಮ ಕಣ್ಣುಗಳನ್ನು ತೊಳೆದರೆ ಯಾವುದೇ ಸೋಂಕಿನಿಂದ ನಿಮಗೆ ಪರಿಹಾರ ಸಿಗುತ್ತದೆ.
10) ಮೋಸಂಬಿ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ ಮತ್ತು ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಮೋಸಂಬಿ ಜ್ಯೂಸ್ ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆ. ಇದರಿಂದ ಚರ್ಮದ ಕಾಂತಿ ಕೂಡ ಹೊಳೆಯುತ್ತದೆ.
11) ಮೋಸಂಬಿ ರಸವನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಬೆವರಿನ ದುರ್ವಾಸನೆಯ ಸಮಸ್ಯೆ ದೂರವಾಗುತ್ತದೆ
*ನೆನಪಿಡಿ:*
ಮೋಸಂಬಿರಸ ಕುಡಿಯುವುದಕ್ಕಿಂತ ಇಡಿ ಮೋಸಂಬಿಯ ತಿರುಳನ್ನು ತಿನ್ನುವುದು ಇನ್ನೂ ಹೆಚ್ಚಿನ ಲಾಭಗಳನ್ನು ನೀಡುತ್ತದೆ. ಆದ್ದರಿಂದ, ಮೋಸಂಬಿ ಅಥವಾ ಇತರ ಹಣ್ಣುಗಳ ರಸವನ್ನು ಮಾತ್ರ ಕುಡಿಯುವ ಬದಲು ಹಣ್ಣುಗಳನ್ನು ತಿನ್ನಿ. ಹಣ್ಣು ಹಾಗು ತರಕಾರಿಗಳನ್ನು ಕುಡಿಯುವುದಕ್ಕಿಂತ ತಿನ್ನುವುದೇ ಲೇಸು.
Tuesday, March 4, 2025
*ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಅನುಗ್ರಹ ಪ್ರಾಪ್ತಿ ?*
*ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಅನುಗ್ರಹ ಪ್ರಾಪ್ತಿ ?*
ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗಿಯೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ.
*ರವಿಯ ಅನುಗ್ರಹ* : ಬೆಳಗಿನ ಜಾವ ಬೇಗನೆ ಎದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಸೂರ್ಯನ ಕಿರಣದಲ್ಲಿರುವ 'ಡಿ' ಮತ್ತು 'ಇ' ಪ್ರೊಟೀನ್ ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ.
*ಚಂದ್ರನ ಅನುಗ್ರಹ* : ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ.
*ಕುಜನ ಅನುಗ್ರಹ* : ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ 'ಅನ್ನಂ ಬ್ರಹ್ಮ' ಎಂಬ ವೇದವಾಕ್ಯವನ್ನು ಗೌರವಿಸಬೇಕು. ಆಹಾರ ಪದಾರ್ಥವನ್ನು ವೇಸ್ಟ್ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು.
*ಬುಧನ ಅನುಗ್ರಹ* : ಬುಧ ಬುದ್ದಿಕಾರಕ. ಬುದ್ಧಿ ಹೀನನಾದರೆ ಮಾಡುವ ಕೆಲಸದಲ್ಲೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ವಿವೇಕವಿರಬೇಕು.
*ಗುರುವಿನ ಅನುಗ್ರಹ* : ಗುರು ಸಕಲ ದೋಷ ನಿವಾರಕ. ಮಾರ್ಗಸೂಚಕ. ನಮ್ಮಲ್ಲೊಂದು ಲೋಕೋಕ್ತಿಯಿದೆ. 'ಕೋಶ ಓದಬೇಕು ಲೋಕ ಸುತ್ತಬೇಕು' ಅಂತ. ಅರಿವೇ ಗುರು ಎನ್ನುವಂತೆ ಸುತ್ತಣ ಪರಿಸರವನ್ನು ನೋಡಿ ಕಲಿಯಬೇಕು. ಗಿಡ, ಮರಗಳಿಗೆ ನೀರೆಯುವ ಮೂಲಕ ಅವುಗಳನ್ನು ಪೋಷಿಸಬೇಕು. ಗುರು ಹಿರಿಯರಿಗೆ ಗೌರವ ಕೊಡುವುದು ಅತ್ಯಂತ ಮುಖ್ಯ.
*ಶುಕ್ರನ ಅನುಗ್ರಹ* : ಶುಕ್ರನೆಂದರೆ ವೀರ್ಯ. ಪೌಷ್ಟಿಕದಾಯಕ ಆಹಾರ ಸೇವನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಮನೆಗೆ ತರಬೇಕು. ಕುಟುಂಬ ಸೌಖ್ಯಕ್ಕೆ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು.
*ಶನಿಯ ಅನುಗ್ರಹ* : ಶನಿ ಕರ್ಮಾಧಿಪತಿ. ಕರ್ಮಸೂಚಕವಾದ ಪಾದರಕ್ಷೆಗಳನ್ನು ಮನೆಯಾಚೆಯೇ ಬಿಡಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು.
*ರಾಹುವಿನ ಅನುಗ್ರಹ* : ಹೊರಗಿನ ಪಾಪ ಮನೆಯೊಳಗೆ ಎನ್ನುವ ಮಾತಿನಂತೆ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಕೈಕಾಲುಗಳನ್ನು ತೊಳೆದುಕೊಳ್ಳಿ. ಮೂತ್ರ ಅಥವಾ ಮಲ ವಿಸರ್ಜನೆಯ ನಂತರ ಶುದ್ಧಾಚಮನ ಮಾಡಿ. ಕೈಕಾಲುಗಳನ್ನು ತೊಳೆಯಿರಿ.
*ಕೇತುವಿನ ಅನುಗ್ರಹ* : ಅತಿಥಿ ದೇವೋ ಭವ ಎನ್ನುವುದು ಶಾಸ್ತ್ರೋಕ್ತಿ. ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದರಿಂದ ಉತ್ತಮ ಫಲಗಳನ್ನು ಕಾಣಬಹುದು.
Wednesday, December 18, 2024
ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..
ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹಳೆಯ ಲೇಖನ ಆದರೂ ಕೂಡ ..
#ಕಡಲೆಕಾಯಿ ಬೀಜ...( ಶೇಂಗಾ )ಇಷ್ಟಪಡದವರುಂಟೇ....???
ಇದು ಬಾದಾಮಿ ,ಪಿಸ್ತಾ ,ಗೋಡಂಬಿ ಗಿಂತ ಹೆಚ್ಚಿನ ಸತ್ವ ತುಂಬಿದ ಇದು ##ಬಡವರ ಬಾದಾಮಿ ###ಎಂದೇ ಕರೆಯಲಾಗುವ ಕಡಲೆಕಾಯಿ ಬೀಜದ ಬಗ್ಗೆ ಮಾಹಿತಿ ನೀಡುವ ಲೇಖನ .
ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..
ಕಡಲೆ ಕಾಯಿಬೀಜವನ್ನು ಹೆಚ್ಚಾಗಿ ಸೇವಿಸುತ್ತಾ ಬಂದಲ್ಲಿ ಹೃದಯ ಸಂಬಂದಿ ಕಾಯಿಲೆಗಳು ಬರದಂತೆ ತಡೆಯುತ್ತದೆ ಎಂದು ಅಧ್ಯಯನ ಗಳು ತಿಳಿಸಿವೆ .
ಕಡಲೆ ಕಾಯಿಯಲ್ಲಿ ಇರುವ ಒಳ್ಳೆಯ ಕೊಬ್ಬಿನಂಶ
Monounsaturated fats ,ಮತ್ತು oleic acid ಮುಂತಾದ ಆಂಟಿ accident ಗಳು ಹೃದಯವನ್ನು ಬಲವಾಗಿಸಲು ಅನುಕೂಲಮಾಡಿಕೊಡುತ್ತದೆ.
ಕೊನೆಪಕ್ಷ ವಾರಕ್ಕೆ 4ದಿನ ವಾದರೂ ಈ ಕಡಲೆ ಕಾಯಿ ಬೀಜವನ್ನು ನಿಮ್ಮ ಆಹಾರದಲ್ಲಿ ಸೇವಿಸಿದರೆ ಹೃದಯಸಂಬಂದಿ ಸಮಸ್ಯೆಗಳಿಂದ ದೂರವಿರಬಹುದು .
ನೆಲಕಡಲೆ ಯಲ್ಲಿ ಮ್ಯಾಂಗನೀಸ್ ಸತ್ವ ತುಂಬಿರು ತ್ತದೆ .ಮ್ಯಾಂಗ್ ನಿಸ್ ಲಕ್ಟೊಸ್ ಮತ್ತು ಕೊಬ್ಬುಗಳ ಬದಲಾವಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ .
ಆದ್ದರಿಂದ ನಾವು ಸೇವಿಸುವ ಆಹಾರದಿಂದ ದೇಹಕ್ಕೆ ಕ್ಯಾಲ್ಸಿಯಂ ಸೇರುತ್ತದೆ .
ಅದರಲ್ಲೂಮಹಿಳೆಯರು ಹೆಚ್ಚು ಕಡಲೆ ಕಾಯಿ ಬೀಜವನ್ನು ಅಗಾಗ ಆಹಾರದಲ್ಲಿ ಸೇರಿಸಿ ಕೊಂಡರೆ ,ಅವರಿಗೆ ಮೂಳೆ ಸಂಬಂದಿ ಸಮಸ್ಯೆಗಳು ಬರುವ ಸಾಧ್ಯತೇ ಕಡಿಮೆಆಗುತ್ತದೆ .
***ಜ್ಞಾಪಕ ಶಕ್ತಿ ಹೆಚ್ಚುವುದು .***
ಇದರಲ್ಲಿರುವ ವೈಟಮಿನ್ B3 ಮಿದುಳಿನ ಚಟುವಟಿಕೆಯನ್ನು ಹೆಚ್ಚಿಸುವುದರೊಂದಿಗೆ ,ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ .
ಪ್ರೊಟೀನ್ ಆಗರವಾಗಿರುವ ಕಡಲೆ ಯಲ್ಲಿ ,ಐರನ್ಕಂಟೆಂಟ್ ,ಝಿನ್ಕ್ ,ಮೆಗ್ನಿಶಿಯಂ ,ಮತ್ತು ವೈಟಮಿನ್ ದ ಹೆಚ್ಚಿನ ಪ್ರಮಾಣದಲ್ಲಿದೆ .
ಅಂದರೆ ಮಾಂಸಾಹಾರ ದಲ್ಲಿರುವ ಅಷ್ಟು ಸತ್ವಗಳು ಇದರಲ್ಲಿ ಅಧಿಕ ವಾಗಿರುವುದರಿಂದ ,ಶಾಖಾಹಾರಿಗಳು ಇದನ್ನು ಹೆಚ್ಚು ಸೇವಿಸುವುದು ಒಳಿತು .
ಯೌವನವನ್ನು ಅಂದರೆ ವಯೋಸಹಜ ಮುಪ್ಪಿಗಿಂತ ಮುಂಚೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ .
ಕಡಲೆಯಲ್ಲಿ palipinals ಎಂಬ ಆಂಟಿಆಕ್ಸಿಡೆಂಟ್ ರೋಗ ನಿರೋಧಕ ಶಕ್ತಿಯನ್ನು ನೀಡಿ ಮುದಿತನವನ್ನು ಹೋಗಲಾಡಿಸಲು ಅನುಕೂವಾಗಿದೆ .
**ಮೂತ್ರನಾಳಗಳಲ್ಲಿ ಕಲ್ಲು **
ಕಡಲೆ ಕಾಯಿ ಬೀಜವನ್ನು ದಿನವೂ 30ಒನ್ಸ್ (30gram)ಅಳತೆಗೆ ಸೇವಿಸುತ್ತಾ ಬಂದರೆ ಪಿತ್ತ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ .20ವರ್ಶಗಳ ಸತತ ಸಂಶೋಧನೆಯಿಂದ 25%ಪಿತ್ತ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ ಎಂದು ತಿಳಿದು ಬಂದಿದೆ .
**ಮಾಂಸಗಳ ಬಲ ವರ್ಧನೆ ***
ಕಡಲೆಯಲ್ಲಿ ಉಳ್ಳ ವಿಟಮಿನ್ ಬಿ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ .ಮಾಂಸಖಂಡಗಳು ಬಲಗೊಳ್ಳುವಲ್ಲೂ ಇದು ಒಂದು .
ದೇಹದಲ್ಲಿ metabaolisam ಬದಲಾವಣೆಯನ್ನು ಹೆಚ್ಚಿಸುತ್ತದೆ .ಅದರಲ್ಲೂ ಜಿಮ್ ಗೆ ಹೋಗಿ ದೇಹವನ್ನು ಫಿಟ್ನೆಸ್ ನಲ್ಲಿಡುವವರಿಗೆ ಅತ್ಯುತ್ತಮ ಶಕ್ರಿಯನ್ನು ನೀಡುವ ಆಗರ ಕಡಲೆ ಯಲ್ಲಿದೆ .
**ಕೊಬ್ಬನ್ನು ಕರಗಿಸುತ್ತದೆ **
ಕಡಲೆ ತಿಂದರೆ ಕೊಬ್ಬು ಜಾಸ್ತಿಯಾಗುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ಕೆಲವರು ಇದನ್ನು ತಿನ್ನುವುದಿಲ್ಲ .
ಅದರಲ್ಲೂ ಮನುಷ್ಯನಿಗೆ ಒಳ್ಳೆಯದು ಮಾಡುವ ಒಳ್ಳೆಯ ಕೊಬ್ಬು ಗಳು ಈ ಕಡಲೆಯಲ್ಲಿದೆ .
ಇದರಲ್ಲಿರುವ ತಾಮ್ರಸತ್ತು ದೇಹದಲ್ಲಿ LDL ಎಂಬ ಕೆಟ್ಟ ಕೊಬ್ಬನ್ನು ಕಮ್ಮಿ ಮಾಡಿ ,ಒಳ್ಳೆಯ ಕೊಬ್ಬಾದHDL ಕೊಬ್ಬನ್ನು ಹೆಚ್ಚಿಸುತ್ತದೆ .
***ನ್ಯೂಟ್ರಿಯೆಂಟ್ಸ್ಗಗಳು ***
ಕಡಲೆಯಲ್ಲಿ ಕಾರ್ಬೋಹೈಡ್ರೇಡ್ಟ್ಸ್ ,ಫೈಬರ್ ,ಕರಗುವ ಕೊಬ್ಬು (HDL)ಪ್ರೊಟೀನ್ ,ವಿಟಮಿನ್ ,ಕಬ್ಬಿಣ ಅಂಶ ,ಕ್ಯಾಲ್ಸಿಯಂ ,ಝಿನ್ಕ್ ,ಮ್ಯಾಂಗನೀಸ್ ,ಪಾಸ್ಪರಸ್ ,ಪೊಟ್ಟ್ಯಾಷಿಯಂ ,ಮತ್ತು ನಮ್ಮ ದೇಹಕ್ಕೆ ಬೇಕಾದ ಅತ್ಯವಶ್ಯಕ ನ್ಯೂಟ್ರಿಯೆಂಟ್ಸ್ಗಳು ಅಷ್ಟೂ ಇರುವ ಕಡಲೆ ಸೇವಿಸಿದರೆ ನಮಗೆ ಸಿಗುವ ಪೋಷಕಾಂಶಗಳು ಎಷ್ಟೊಂದು ಎಂದು ಇದರಿಂದ ತಿಳಿದು ಬರುತ್ತದೆ .
ಮತ್ತೆ ಕಡಲೆ ತಿನ್ನುವವರು ಧೀರ್ಘಾಯುಷ್ಯವಾಗಿ ಬಾಳಬಹುದು ಮತ್ತು ಹಾರ್ಟ್ ಅಟ್ಯಾಕ್ ಅಂತವುಗಳನ್ನು ತಡೆಯಬಹುದೆಂದು ಅಧ್ಯಯನಗಳು ತಿಳಿಸಿವೆ.
Friday, December 6, 2024
*ನಮ್ಮ ಆತ್ಮಸಾಕ್ಷಿ ಒಪ್ಪುವಂತೆ ನಾವು ಬದುಕಿದರೆ ಅದುವೇ ನಿಜವಾದ ಸಹಜ ಜೀವನ.
*'ಅಹಂ'* ತಿಳಿಸಿತು ಅಲ್ಪ ಮಾನವ ನೀನೆಂದು.
*'ಅವಕಾಶ'* ತಿಳಿಸಿತು ಇಂಥಹ ಸಂದರ್ಭ ಮರಳಿ ಬಾರದೆಂದು.
*'ಆರೋಗ್ಯ'* ತಿಳಿಸಿತು ಅಯೋಗ್ಯ ನನ್ನನ್ನು ಮರೆಯದಿರೆಂದು.
*'ಒಂಟಿತನ'* ತಿಳಿಸಿತು ಕುಟುಂಬದ ಮೌಲ್ಯವೇನೆಂದು.
*'ಕಷ್ಟ'* ತಿಳಿಸಿತು ನೈಜ ಬದುಕು ಯಾವುದೆಂದು.
*'ಗರ್ವ'* ತಿಳಿಸಿತು ಬದುಕಿನ ಮರ್ಮ ಅರಿಯೆಂದು.
*'ಬಾಂಧವ್ಯ'* ತಿಳಿಸಿತು ಭಾವನೆಗಳ ಬೆಲೆ ಏನೆಂದು.
*'ಪ್ರೀತಿ-ವಿಶ್ವಾಸ'* ತಿಳಿಸಿತು ಇದೇ ನಿಜವಾದ ಬದುಕೆಂದು.
*'ಮಾರ್ಗದರ್ಶನ'* ತಿಳಿಸಿತು ನಿಜವಾದ ಬದುಕಿನ ದಾರಿಯಾವುದೆಂದು.
*'ಸ್ನೇಹ'* ತಿಳಿಸಿತು ಭಯ ಪಡಬೇಡ ಎಲ್ಲದಕ್ಕೂ ನಾನಿದ್ದೇನೆಂದು.
*'ಸಮಯ'* ತಿಳಿಸಿತು ಮತ್ತೆ ನಾನು ಸಿಗುವುದಿಲ್ಲ ವೆಂದು.
*'ಸಹಪಾಠಿ'* ಗಳು ತಿಳಿಸಿದರು ನಮ್ಮ ನಿಜ ಸಾಮರ್ಥ್ಯ ವೇನೆಂದು.
*'ಸೊಕ್ಕು'* ತಿಳಿಸಿತು ಸುಟ್ಟು ಹೋಗ್ತಿಯಾ ಎಚ್ವರವೆಂದು.
*'ಹಣ'* ತಿಳಿಸಿತು ಉಳಿತಾಯದ ಮೌಲ್ಯವೇನೆಂದು.
*'ಹಸಿವು'* ತಿಳಿಸಿತು ತುತ್ತಿನ ಮೌಲ್ಯವೇನೆಂದು.
ನನ್ನ ಮನಸ್ಸು ಹೇಳಿತು ಯಾರು ನಿಷ್ಕಲ್ಮಶ ಪ್ರೀತಿ, ಪ್ರಾಮಾಣಿಕತೆ, ಮತ್ತು ಆತ್ಮಸಾಕ್ಷಿಯಾಗಿ ಜೀವನ ನಡೆಸುವರೋ ಅದುವೇ ನಿಜವಾದ ಬದುಕು ಇದನ್ನು ಬಿಟ್ಟು ಬೇರೇನೂ ಇಲ್ಲವೆಂದು.
*ನಮ್ಮ ಆತ್ಮಸಾಕ್ಷಿ ಒಪ್ಪುವಂತೆ ನಾವು ಬದುಕಿದರೆ ಅದುವೇ ನಿಜವಾದ ಸಹಜ ಜೀವನ.
Sunday, November 17, 2024
ಆರೋಗ್ಯವೇ ಶ್ರೇಷ್ಠ ಉಡುಗೊರೆ. ಸಂತೃಪ್ತಿಯೇ ಶ್ರೇಷ್ಠ ಸಂಪತ್ತು. ವಿಶ್ವಾಸದ ನಂಬಿಕೆಯೇ ಶ್ರೇಷ್ಠ ಸಂಬಂಧ.
ನಮ್ಮ ಕೋಪ ಎಷ್ಟು ದುಬಾರಿಯಾಗಿರಬೇಕೆಂದರೆ ಅದು ಯಾರಿಗೂ ಸಿಗದಂತೆ ಇರಬೇಕು.
ನಮ್ಮ ನಗು ಎಷ್ಟು ಅಗ್ಗವಾಗಿರಬೇಕೆಂದರೆ ಅದನ್ನು ಯಾರು ಬೇಕಾದರೂ ಕೊಂಡು ಕೊಳ್ಳುವಂತಿರಬೇಕು.
ಆರೋಗ್ಯವೇ ಶ್ರೇಷ್ಠ ಉಡುಗೊರೆ.
ಸಂತೃಪ್ತಿಯೇ ಶ್ರೇಷ್ಠ ಸಂಪತ್ತು.
ವಿಶ್ವಾಸದ ನಂಬಿಕೆಯೇ ಶ್ರೇಷ್ಠ ಸಂಬಂಧ.
Friday, November 15, 2024
ಇವುಗಳ ಪೈಕಿ ಯಾವುದಾದರೂ ಐದನ್ನು ಅಳಿಸು'
*ಮದುವೆಯಾಗಿದ್ದರೆ ಮರೆಯದೇ ಓದಿ.*
ಜೀವನವು ನಮಗಿರುವುದು ಒಂದು ಬಾರಿ ಮಾತ್ರ. ಬಂದು ಹೋಗುವ ಈ ಬದುಕಿನಲ್ಲಿ ಆರೂ ಸಂಗಡ ಬಾಹೋರಿಲ್ಲ. ಸತ್ಯವೇ. ಆದರೆ?!?. ಬನ್ನಿ ಮನವಿಟ್ಟು ಓದಿರಿ.
ಒಂದುದಿನ, ದೊಡ್ಡವರಿಗೆ ಏರ್ಪಡಿಸಿದ್ದ ಮನೋಶಾಸ್ತ್ರ ತರಗತಿಯಲ್ಲಿ ಮನಶಾಸ್ತ್ರ ಶಿಕ್ಷಕ 'ಇವತ್ತು ಒಂದು ಆಟ ಆಡೋಣ' ಎನ್ನುತ್ತಾನೆ.
'ಯಾವ ಆಟ?' ಎಂದು ಪ್ರಶ್ನಿಸಿದಾಗ, ವಿದ್ಯಾರ್ಥಿನಿಯೊಬ್ಬಳಿಗೆ ಬರಲು ಹೇಳುತ್ತಾನೆ.
ಹೇಮಾ ಎಂಬ ಹೆಣ್ಣುಮಗಳು ಎದ್ದು ಬರುತ್ತಾಳೆ.
ಹೇಮಾ ನೀನು
ನಿನ್ನ ಜೀವನದಲ್ಲಿ ತುಂಬಾ ಮುಖ್ಯ ಅನಿಸುವ 30 ಜನರ ಹೆಸರುಗಳನ್ನು ಬೋರ್ಡ್ ಮೇಲೆ ಬರೆಯಬೇಕು ಎಂದರು ಶಿಕ್ಷಕರು.
ಹೇಮಾ 30 ಹೆಸರು ಬರೆದಳು. ಅದರಲ್ಲಿ ಆಕೆಯ ಕುಟುಂಬದ ಸದಸ್ಯರು, ಸಂಬಂಧಿಕರು, ಗೆಳೆಯ-ಗೆಳತಿಯರು, ಸಹೋದ್ಯೋಗಿಗಳು ಹಾಗೂ ನೆರೆಹೊರೆಯವರ ಹೆಸರುಗಳಿದ್ದವು.
'ಇವುಗಳ ಪೈಕಿ ಯಾವುದಾದರೂ ಐದನ್ನು ಅಳಿಸು'
ಆಕೆ ತನ್ನ ಸಹೋದ್ಯೋಗಿಗಳ ಹೆಸರು ಅಳಿಸಿದಳು.
ಅತಿಮುಖ್ಯ ಅನಿಸದ ಇನೈದು ಹೆಸರುಗಳನ್ನು ಅಳಿಸು'.
ತನ್ನ ನೆರೆಹೊರೆಯವರ ಹೆಸರುಗಳನ್ನು ಅಳಿಸಿದಳು ಹೇಮಾ.
ಹೀಗೆ ಅಳಿಸುವ ಕೆಲಸ ಮುಂದುವರೆದು, ಕೊನೆಗೆ ಕೇವಲ ನಾಲ್ಕು ಹೆಸರುಗಳು ಮಾತ್ರ ಬೋರ್ಡ್ ಮೇಲೆ ಉಳಿದವು. ಅವು, ಹೇಮಾಳ ತಂದೆತಾಯಿ, ಗಂಡ ಮತ್ತು ಮಗನದಾಗಿತ್ತು.
ಇಷ್ಟೊತ್ತಿಗೆ ಇಡೀ ಕ್ಲಾಸು ಸ್ತಬ್ದವಾಗಿತ್ತು. ಏಕೆಂದರೆ, ಈ ಅಳಿಸುವ ಆಟ ಕೇವಲ ಹೇಮಾಳೊಬ್ಬಳಿಗೇ ಸಂಬಂಧಿಸಿದ್ದಲ್ಲ ಎಂಬುದು ಅಲ್ಲಿರುವ ಎಲ್ಲರಿಗೂ ಬಹುತೇಕ ಸ್ಪಷ್ಟವಾಗಿತ್ತು.
ಈಗ, ಶಿಕ್ಷಕ ಇವುಗಳೊಳಗೆ ಅತೀ ಪ್ರಮುಖವೆನಿಸದ ಇನ್ನೆರಡು ಹೆಸರು ಅಳಿಸಲು ಹೇಳಿದ.
ಇದು ನಿಜಕ್ಕೂ ಸವಾಲಿನದಾಗಿತ್ತು. ಅತ್ಯಂತ ಕಷ್ಟದಿಂದ ಹೇಮಾ ತನ್ನ ತಂದೆ ತಾಯಿಗಳ ಹೆಸರುಗಳನ್ನು ಅಳಿಸಿದಳು.
ಉಳಿದಿದ್ದು ಗಂಡ ಮತ್ತು ಮಗನ ಹೆಸರುಗಳು ಮಾತ್ರ.
'ದಯವಿಟ್ಟು ಹೇಮಾ, ಇನ್ನೊಂದು ಹೆಸರನ್ನು ಅಳಿಸು, ಇಲ್ಲಿಗೆ ಆಟವನ್ನು ಮುಗಿಸೋಣ ಎಂದರು.
ನಿಸ್ತೇಜಳಾದಳು ಹೇಮಾ. ಕೈಗಳು ನಡುಗಲಾರಂಭಿಸಿದವು. ಕಣ್ಣುಗಳು ತುಂಬಿ ಬಂದವು. ಅಳುತ್ತಲೇ ಆಕೆ ತನ್ನ ಮಗನ ಹೆಸರನ್ನು ಅಳಿಸಿದಳು. ನಂತರ ಜೋರಾಗಿ ಅತ್ತುಬಿಟ್ಟಳು.
ಹೇಮಾಳನ್ನು ಆಕೆಯ ಆಸನದಲ್ಲಿ ಕುಳಿತುಕೊಳ್ಳಲು ಹೇಳಿದ ಶಿಕ್ಷಕ ತರಗತಿಯನುದ್ದೇಶಿಸಿ ಕೇಳಿದ:
'ನಿನ್ನ ಗಂಡನ ಹೆಸರನ್ನಷ್ಟೇ ಏಕೆ ಉಳಿಸಿಕೊಂಡೆ?!.ತಂದೆ ತಾಯಿ ನಿನಗೆ ಜನ್ಮವಿತ್ತು, ಸಾಕಿ ಸಲಹಿದವರು. ಇನ್ನು ಒಬ್ಬ ಮಗನಿಗೆ ನೀನೇ ಜನ್ಮವಿತ್ತಿದ್ದೀ. ಅವರ್ಯಾರೂ ನಿನಗೆ ಮತ್ತೆ ಸಿಗುವವರಲ್ಲ. ಆದರೆ, ಬೇಕೆಂದರೆ ಬೇರೊಬ್ಬನನ್ನು ನೀನು ಗಂಡನನ್ನಾಗಿ ಮಾಡಿಕೊಳ್ಳುವ ಅವಕಾಶ ಇದ್ದೇ ಇದೆ'.
ಇಡೀ ತರಗತಿ ಉಸಿರು ಬಿಡದೇ ಹೇಮಾಳ ಉತ್ತರಕ್ಕಾಗಿ ಕಾಯುತ್ತಿತ್ತು.
ಹೇಮಾ ಶಾಂತಳಾಗಿ, ನಿಧಾನವಾಗಿ ಉತ್ತರಿಸಿದಳು:
ಒಂದಿಲ್ಲೊಂದು ದಿನ ತಂದೆತಾಯಿ ನನ್ನನ್ನು ಬಿಟ್ಟು ಹೋಗುವರು.ಹೋಗಬೇಕಾಗುವುದು.
ಮಗನು ಕೂಡಾ ದೊಡ್ಡವನಾದ ಮೇಲೆ ತನ್ನ ಓದು, ತನ್ನ ಕೆಲಸ, ತನ್ನ ಸಂಸಾರದ ಹೊಣೆಗಾರಿಕೆ, ಅಥವಾ ಇತರ ಕಾರಣಗಳಿಗಾಗಿ ನನ್ನನ್ನು ಬಿಟ್ಟು ಹೋಗಬಹುದು.
'ಆದರೆ, ಗಂಡ ಜೀವನದುದ್ದಕ್ಕೂ ನನ್ನ ಜೊತೆಗೇ ಇರುವವನು'.ಒಮ್ಮೆ ವಿವಾಹಿತಳಾದ ಹೆಣ್ಣು ಸರ್ವಸ್ವವನ್ನೂ ಅರ್ಪಿಸಿದ ಮೇಲೆ ಅನ್ಯ ವಿಷಯಗಳನ್ನು ಅಪೇಕ್ಷಿಸಳು.
ಇಡೀ ತರಗತಿ ಎದ್ದು ನಿಂತು ಚಪ್ಪಾಳೆ ತಟ್ಟಿತು.
ಇದೇ ಜೀವನದ ಸತ್ಯ. ಆದ್ದರಿಂದ, ನಿಮ್ಮ ಸಂಗಾತಿಯೇ ಮುಖ್ಯ. ಇದು ಹೆಂಡತಿಯರಿಗಷ್ಟೇ ಅಲ್ಲ, ಗಂಡಂದಿರಿಗೂ ಅನ್ವಯಿಸುತ್ತದೆ.
ವಂದನೆಗಳೊಂದಿಗೆ .
Tuesday, November 12, 2024
ನೀರಿನಿಂದ ದಡಕ್ಕೆ ಎಸೆದ ಮೀನಿನ ಪರಿಸ್ಥಿತಿ?
ನೀರಿನಲ್ಲಿರುವ ಮೀನನ್ನು ತೆಗೆದು ದಡಕ್ಕೆ ಎಸೆದು, ನನ್ನ ಬಗ್ಗೆ ಚಿಂತಿಸಬೇಡ ನೀನು ಚೆನ್ನಾಗಿರು ಎಂದು ಹೇಳಿದರೆ ಮೀನಿನ ಪರಿಸ್ಥಿತಿ ಹೇಗಾಗಿರಬಹುದು?
ನಮ್ರತೆಯು ಜನರನ್ನು ಪ್ರೀತಿಯಿಂದ ಹತ್ತಿರ ತರುತ್ತದೆ.
*ಎಲ್ಲರಿಗೂ ಆರೋಗ್ಯ ದಿನದ ಶುಭಾಶಯಗಳು*
🄷🄰🄿🄿🅈 🄸🄽🅃🄴🅁🄽🄰🅃🄸🄾🄽🄰🄻
🄷🄴🄰🄻🅃🄷
🄳🄰🅈
ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು:
1. ಬಿಪಿ: 120/80
2. ನಾಡಿ: 70 -100
3. ತಾಪಮಾನ: 36.8 - 37
4. ಉಸಿರಾಟ: 12-16
5. ಹಿಮೋಗ್ಲೋಬಿನ್: ಪುರುಷ 13.50 - 18
ಹೆಣ್ಣು 11.50 - 16
6. ಕೊಲೆಸ್ಟ್ರಾಲ್: 130 - 200
7. ಪೊಟ್ಯಾಸಿಯಮ್: 3.50 - 5
8. ಸೋಡಿಯಂ: 135 - 145
9. ಟ್ರೈಗ್ಲಿಸರೈಡ್ಗಳು : 220
10. ದೇಹದಲ್ಲಿ ರಕ್ತದ ಪ್ರಮಾಣ : PCV 30-40%
11. ಸಕ್ಕರೆ ಮಟ್ಟ:
70-130 ಮಕ್ಕಳಿಗೆ
ವಯಸ್ಕರಿಗೆ: 70 - 115
12. ಕಬ್ಬಿಣ : 8-15 ಮಿಗ್ರಾಂ
13. ಬಿಳಿ ರಕ್ತ ಕಣಗಳು WBC : 4000 - 11000
14. ಕಿರುಬಿಲ್ಲೆಗಳು : 1,50,000- 4,00,000
15. ಕೆಂಪು ರಕ್ತ ಕಣಗಳು RBC : 4.50 - 6 ಮಿಲಿಯನ್
16. ಕ್ಯಾಲ್ಸಿಯಂ : 8.6 -10.3 mg/dL
17. ವಿಟಮಿನ್ D3 : 20 - 50 ng/ml.
18. ವಿಟಮಿನ್ B12 : 200 - 900 pg/ml
*40/50/60 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ವಿಶೇಷ ಸಲಹೆಗಳು:*
*ಮೊದಲ ಸಲಹೆ:* ನಿಮಗೆ ಬಾಯಾರಿಕೆ ಇಲ್ಲದಿದ್ದರೂ ಅಥವಾ ಅವಶ್ಯಕತೆಯಿಲ್ಲದಿದ್ದರೂ ಯಾವಾಗಲೂ ನೀರನ್ನು ಕುಡಿಯಿರಿ, ಹೆಚ್ಚಿನ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನವು ದೇಹದಲ್ಲಿ ನೀರಿನ ಕೊರತೆಯಿಂದ ಉಂಟಾಗುತ್ತವೆ.
ದಿನಕ್ಕೆ ಕನಿಷ್ಠ 2 ಲೀಟರ್.
*ಎರಡನೇ ಸಲಹೆ:* ನಿಮ್ಮ ಕೈಲಾದಷ್ಟು ಕೆಲಸ ಮಾಡಿ, ದೇಹದ ಚಲನೆ ಇರಬೇಕು.. ವಾಕಿಂಗ್, ಈಜು, ಅಥವಾ ಯಾವುದೇ ರೀತಿಯ ಕ್ರೀಡೆ.
*ಮೂರನೇ ಸಲಹೆ:* ಕಡಿಮೆ ತಿನ್ನಿ.. ಹೆಚ್ಚು ಆಹಾರಕ್ಕಾಗಿ ಹಂಬಲಿಸುವುದನ್ನು ನಿಲ್ಲಿಸಿ... ಏಕೆಂದರೆ ಅದು ಎಂದಿಗೂ ಒಳ್ಳೆಯದಕ್ಕೆ ಕಾರಣವಾಗುವುದಿಲ್ಲ.
ನಿಮ್ಮನ್ನು ವಂಚಿತಗೊಳಿಸಬೇಡಿ, ಆದರೆ ಪ್ರಮಾಣವನ್ನು ಕಡಿಮೆ ಮಾಡಿ.
ಹೆಚ್ಚು ಪ್ರೋಟೀನ್, ಕಾರ್ಬೋಹೈಡ್ರೇಟ್ ಭರಿತ ಆಹಾರಗಳನ್ನು ಬಳಸಿ.
*ನಾಲ್ಕನೇ ಸಲಹೆ:* ತೀರಾ ಅಗತ್ಯವಿದ್ದಲ್ಲಿ ವಾಹನವನ್ನು ಬಳಸಬೇಡಿ.
ನೀವು ದಿನಸಿ ಪಡೆಯಲು, ಯಾರನ್ನಾದರೂ ಭೇಟಿ ಮಾಡಲು ಅಥವಾ ಯಾವುದೇ ಕೆಲಸವನ್ನು ಮಾಡಲು ಎಲ್ಲಿಯಾದರೂ ಹೋಗುತ್ತಿದ್ದರೆ, ನಿಮ್ಮ ಕಾಲುಗಳ ಮೇಲೆ ನಡೆಯಲು ಪ್ರಯತ್ನಿಸಿ.
ಲಿಫ್ಟ್, ಎಸ್ಕಲೇಟರ್ ಬಳಸುವ ಬದಲು ಮೆಟ್ಟಿಲುಗಳನ್ನು ಹತ್ತಬೇಕು.
*ಐದನೇ ಸಲಹೆ:* ಕೋಪವನ್ನು ಬಿಡಿ, ಚಿಂತಿಸುವುದನ್ನು ನಿಲ್ಲಿಸಿ, ವಿಷಯಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ.
ತೊಂದರೆದಾಯಕ ಸಂದರ್ಭಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ.
ಅವರೆಲ್ಲರೂ ಆರೋಗ್ಯವನ್ನು ಹಾಳುಮಾಡುತ್ತಾರೆ ಮತ್ತು ಆತ್ಮದ ವೈಭವವನ್ನು ಕಸಿದುಕೊಳ್ಳುತ್ತಾರೆ.
ಸಕಾರಾತ್ಮಕ ಜನರೊಂದಿಗೆ ಮಾತನಾಡಿ ಮತ್ತು ಅವರ ಮಾತುಗಳನ್ನು ಆಲಿಸಿ.
*ಆರನೇ ಸಲಹೆ:* ಮೊದಲನೆಯದಾಗಿ, ಹಣದ ಬಾಂಧವ್ಯವನ್ನು ಬಿಡಿ.
ನಿಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕ ಸಾಧಿಸಿ, ನಗು ಮತ್ತು ಮಾತನಾಡಿ!
ಹಣವನ್ನು ಬದುಕಲು ಮಾಡಲಾಗುತ್ತದೆ, ಜೀವನವು ಹಣಕ್ಕಾಗಿ ಮಾಡಲ್ಪಟ್ಟಿಲ್ಲ.
*ಏಳನೇ ಟಿಪ್ಪಣಿ:* ನಿಮ್ಮ ಬಗ್ಗೆ, ಅಥವಾ ನೀವು ಸಾಧಿಸಲು ಸಾಧ್ಯವಾಗದ ವಿಷಯದ ಬಗ್ಗೆ ಅಥವಾ ನೀವು ಬೆಂಬಲಿಸಲು ಸಾಧ್ಯವಾಗದ ವಿಷಯದ ಬಗ್ಗೆ ಪಶ್ಚಾತ್ತಾಪ ಪಡಬೇಡಿ.
ಅದನ್ನು ನಿರ್ಲಕ್ಷಿಸಿ ಮತ್ತು ಮರೆತುಬಿಡಿ.
*ಎಂಟನೇ ಸಲಹೆ:* ಸಂಪತ್ತು, ಸ್ಥಾನ, ಪ್ರತಿಷ್ಠೆ, ಅಧಿಕಾರ, ಸೌಂದರ್ಯ, ಜಾತಿ ಮತ್ತು ಪ್ರಭಾವ;
ಇವೆಲ್ಲವೂ ಅಹಂಕಾರವನ್ನು ಹೆಚ್ಚಿಸುತ್ತವೆ.
ನಮ್ರತೆಯು ಜನರನ್ನು ಪ್ರೀತಿಯಿಂದ ಹತ್ತಿರ ತರುತ್ತದೆ.
*ಒಂಬತ್ತನೇ ಸಲಹೆ:* ನೀವು ಬೂದು ಕೂದಲು ಹೊಂದಿದ್ದರೆ ಅದು ಜೀವನದ ಅಂತ್ಯ ಎಂದು ಅರ್ಥವಲ್ಲ.
ಇದು ಉತ್ತಮ ಜೀವನಕ್ಕೆ ನಾಂದಿ.
ಆಶಾವಾದಿಯಾಗಿರಿ, ನೆನಪಿನೊಂದಿಗೆ ಬದುಕಿ, ಪ್ರಯಾಣಿಸಿ ಮತ್ತು ಆನಂದಿಸಿ... ನೆನಪುಗಳನ್ನು ಮಾಡಿಕೊಳ್ಳಿ.
*ಹತ್ತನೇ ಸೂಚನೆ:* ನಿಮ್ಮ ಕಿರಿಯರನ್ನು ಪ್ರೀತಿ, ಸಹಾನುಭೂತಿ ಮತ್ತು ಪ್ರೀತಿಯಿಂದ ಭೇಟಿ ಮಾಡಿ!
ಯಾರೊಂದಿಗೂ ವ್ಯಂಗ್ಯವಾಗಿ ಏನನ್ನೂ ಹೇಳಬೇಡಿ.
ನಿಮ್ಮ ಮುಖದಲ್ಲಿ ನಗುವನ್ನು ಇಟ್ಟುಕೊಳ್ಳಿ.
ಹಿಂದೆ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವರ್ತಮಾನದಲ್ಲಿ ಅದನ್ನು ಮರೆತು ಎಲ್ಲರೊಂದಿಗೆ ಬೆರೆಯಿರಿ!
ತಪ್ಪನ್ನು ತಪ್ಪು ಎಂದು ಕರೆಯಿರಿ ಆದರೆ ಅದನ್ನು ಹೃದಯಕ್ಕೆ ತೆಗೆದುಕೊಳ್ಳಬೇಡಿ.
*🍁 ಆರೋಗ್ಯ ದಿನದ ಶುಭಾಶಯಗಳು 🍁*
*ಎಲ್ಲರಿಗೂ ಆರೋಗ್ಯಕರ ಜೀವನಕ್ಕಾಗಿ ಶುಭಾಶಯಗಳು*💐
ವಂದನೆಗಳೊಂದಿಗೆ
ನಂಜುಂಡಸ್ವಾಮಿ
Thursday, October 3, 2024
*ಜೀವನದಲ್ಲಿ ದುಃಖಕ್ಕೆ ಯಾರು ಕಾರಣ?*
*ಜೀವನದಲ್ಲಿ ದುಃಖಕ್ಕೆ ಯಾರು ಕಾರಣ?*
ದೇವರೇ? ಅಲ್ಲ
ಗ್ರಹ -ನಕ್ಷತ್ರಗಳೇ? ಅಲ್ಲ
ಭಾಗ್ಯವೇ? ಅಲ್ಲ
ಸಂಬಂಧಿಗಳೇ? ಅಲ್ಲ
ನೆರೆಹೊರೆಯವರೇ? ಅಲ್ಲ
ಸರಕಾರವೇ? ಅಲ್ಲ
ನಮ್ಮ ದುಃಖಗಳಿಗೆ ನಾವೇ
ಸ್ವಯಂ ಜವಾಬ್ದಾರರು
ತಲೆನೋವು, ಬಿ ಪಿ ಮುಂತಾದವುಗಳಿಗೆ
ಕಾರಣ -ಅನಗತ್ಯ ವಿಚಾರಗಳು
ಹೊಟ್ಟೆನೋವು, ಮತ್ತಿತರ ತೊಂದರೆಗಳಿಗೆ ಕಾರಣ -ತಿನ್ನಬಾರದ್ದನ್ನು ತಿನ್ನುವುದು
ಸಾಲ ಹೆಚ್ಚಲು ಕಾರಣ, -ಅವಶ್ಯಕತೆ ಮೀರಿ ಖರ್ಚು ಮಾಡುವುದು
ಕೋರ್ಟ್ ಸುತ್ತುವಿಕೆ ಕಾರಣ
-ಪ್ರತಿಷ್ಠೆ, ಅಹಂಕಾರಗಳು
ದುರ್ಬಲ /ದಪ್ಪ /ರೋಗಮಯ
ಶರೀರಕ್ಕೆ ಕಾರಣ -ತಪ್ಪು ಜೀವನ ಶೈಲಿ
ಅನಗತ್ಯ ವಿವಾದಗಳಿಗೆ ಕಾರಣ -ಹೆಚ್ಚು ಮತ್ತು ವ್ಯರ್ಥ ಮಾತನಾಡುವಿಕೆ
ಮೇಲಿನ ಕಾರಣಗಳಲ್ಲದೇ ಇನ್ನೂ ನೂರಾರು ಕಾರಣಗಳಿರಬಹುದು. ನಾವು ದೋಷವನ್ನು ಇನ್ನೊಬ್ಬರ ಮೇಲೆ ಹೊರಿಸುತ್ತೇವೆ. ಕಷ್ಟಗಳ ಕಾರಣವನ್ನು ಸೂಕ್ಷ್ಮ ವಾಗಿ ಪರಿಶೀಲಿಸಿದರೆ ಅವುಗಳ ಹಿಂದೆ ನಮ್ಮ ಮೂರ್ಖತೆಯೇ ಅಡಗಿರುತ್ತದೆ.
ದೂರು -ದುಮ್ಮಾನಗಳನ್ನು ಉಸಿರು ಇರುವ ತನಕ ಮಾಡಬಹುದಷ್ಟೆ
ಕೊನೆಯಲ್ಲಿ ಉಳಿಯುವುದು
ಪಶ್ಚಾತಾಪ ಮಾತ್ರ
ಧರ್ಮಮಯ ಬದುಕು
ಜೀವನಕೆ ಬೆಳಕು
ಪ್ರಾಮಾಣಿಕವಾಗಿರಿ
ಸಂತೋಷವಾಗಿರಿ
Monday, September 9, 2024
ಬುದ್ಧ 2600 ವರ್ಷಗಳ ಹಿಂದೆ ಹೇಳಿದ್ದು, "ಇತರರಿಗಾಗಿ ಬದುಕುವವರು ನಿಜವಾಗಿಯೂ ಬದುಕುತ್ತಾರೆ,"
ಇತರರಿಗಾಗಿ~
ಬದುಕಿರಿ~
ಅದೇ ನಿಜವಾದ *ಯಶಸ್ಸು*
ಪ್ರೊಫೆಸರ್ ಒಬ್ಬರು ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದವೊಂದರಲ್ಲಿ "ಯಶಸ್ಸು" ಎಂದರೇನು? ಎಂದು ಕೇಳಿದರು.ಆಗ ಯುವತಿಯೊಬ್ಬಳು, "ಯಶಸ್ಸು" ಎಂದರೆ ಹಣ ಮಾಡುವುದು! ಎಂದಳು.
ಆಗ ಪ್ರಾಧ್ಯಾಪಕರು "ಇಪ್ಪತ್ತು ವರ್ಷಗಳ ಹಿಂದೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?" ಎಂದು ಕೇಳಿದಾಗ ಯಾರೂ ಉತ್ತರಿಸಲಿಲ್ಲ.
(ಏಕೆಂದರೆ ಇದು ಪ್ರತಿ ವರ್ಷ ಬದಲಾಗುತ್ತದೆ)
ಬದುಕಲು ಹಣ ಬೇಕು, ಆದರೆ ಹಣವೇ ಬದುಕಲ್ಲವಲ್ಲ!
ಹಾಗಾದರೆ "ಯಶಸ್ಸು" ಎಂದರೆ ಹಣ ಗಳಿಸುವುದಲ್ಲ.
ಮತ್ತೊಬ್ಬ ಯುವಕ ಎದ್ದುನಿಂತು ಯಶಸ್ಸು ಎಂದರೆ ಶಕ್ತಿ/ಬಲ ಎಂದನು.
ಹಾಗಿದ್ದಲ್ಲಿ ಅಲೆಕ್ಸಾಂಡರ್, ನೆಪೋಲಿಯನ್, ಮುಸೊಲಿನಿ, ಹಿಟ್ಲರ್, ಸ್ಟಾಲಿನ್, ಬಿನ್ ಲಾಡೆನ್... ಇವರೆಲ್ಲ ಬಲಿಷ್ಠರಾಗಿದ್ದು, ಜಗತ್ತನ್ನೇ ಗೆಲ್ಲಬೇಕೆಂದುಕೊಂಡವರು, ಅವರುಗಳು ಜೀವನದಲ್ಲಿ ಸುಖವಾಗಿರಬಹುದಿತ್ತು ಅಲ್ಲವೇ? ಅವರ ಜೀವನವು ಹೇಗೆ ಸಾಗಿತು ಮತ್ತು ಕೊನೆಗೊಂಡಿತು ಎಂಬುದನ್ನು ಇತಿಹಾಸ ಹೇಳುತ್ತದೆ ಅಲ್ಲವೇ?
ತನ್ನ ಶಕ್ತಿ ಮತ್ತು ಪಂಚ್ಗಳಿಂದ ಪರಾಕ್ರಮಿಗಳನ್ನು ಸೋಲಿಸಿದ ವಿಶ್ವ ಚಾಂಪಿಯನ್ ಬಾಕ್ಸರ್ ಮುಹಮ್ಮದ್ ಅಲಿ, ಕೆಲವು ವರ್ಷಗಳ ನಂತರ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ,ಮತ್ತು ಒಂದು ಕಾಫಿಯ ಕಪ್ಪನ್ನು ಸಹ ಎತ್ತಿಕೊಳ್ಳಲು ಸಾಧ್ಯವಾಗಲಿಲ್ಲ.
ಆದ್ದರಿಂದ "ಯಶಸ್ಸು" ಎಂದರೆ ಶಕ್ತಿ/ಬಲ ಅಂತೂ ಅಲ್ಲ.
ಮತ್ತೋರ್ವ ಯುವತಿ, "ಯಶಸ್ಸು" ಎಂದರೆ ಕೀರ್ತಿ ಮತ್ತು ಸೌಂದರ್ಯ!ಎಂದಳು.
ಹಾಗಾದರೆ ಕೇಟ್ ,ಮಾಸ್, ಸೋಫಿಯಾ ಲಾರೆನ್, ಮರ್ಲಿನ್ ಮನ್ರೋ...ರಂತಹ ಲೌಕಿಕ ಸುಂದರಿಯರ ಬದುಕು ಎಷ್ಟು ನೋವಿನಿಂದ ಕೂಡಿತ್ತು ಎಂಬುದು ಹಲವರಿಗೆ ತಿಳಿದಿಲ್ಲ.!
ಭಾರತದ ಮಟ್ಟಿಗೆ ಹೇಳುವುದಾದರೆ ಪರ್ವೀನ್ ಬಾಬಿ ಎಂಬ ಹಿಂದಿ ನಾಯಕಿ ಇದ್ದಳು. ಅಮಿತಾಬ್ ಬಚ್ಚನ್ ಸೇರಿದಂತೆ ಹಿಂದಿ ಚಿತ್ರರಂಗದ ಪ್ರತಿಯೊಬ್ಬರೂ ಆಕೆಯನ್ನು ಮದುವೆಯಾಗಲು ಪರದಾಡುತ್ತಿದ್ದರು, ಅಷ್ಟು ಸುಂದರಿ. ಡ್ಯಾನಿ, ಕಬೀರ್ ಬೇಡಿ ಮತ್ತು ಮಹೇಶ್ ಭಟ್ ಅವರೊಂದಿಗಿನ ಅವಳ ಪ್ರಣಯ ಮತ್ತು ಮದುವೆಗಳು ವಿಫಲವಾದವು,ಮತ್ತು ನಂಬಿದವರೇ ಅವಳನ್ನು ಮೋಸಗೊಳಿಸಿದಾಗ ಕುಡಿತದ ಚಟಕ್ಕೆ ಬಿದ್ದು, ಒಂದು ಹಂತದಲ್ಲಿ ಅವಳ ಕಾಲಿಗೆ ಹುಣ್ಣಾದಾಗ, ಅದು ದೇಹಕ್ಕೆಲ್ಲ ವ್ಯಾಪಿಸಿತು. ಯಾವ ದೇಹಕ್ಕೆ ಅದೆಷ್ಟು ಗಂಡಸರು ಹುಚ್ಚೆದ್ದು ಕುಣಿಯುತ್ತಿದ್ದರೋ, ಅದೇ ದೇಹ ಅವಳಿಗೆ ವಿಚಿತ್ರ ಕಾಯಿಲೆಯೊಂದು ಬಂದು
ದುರ್ವಾಸನೆ ಬೀರುತ್ತಿತ್ತೆಂದು ಜನ ಆಕೆಯನ್ನು ಹಗ್ಗದಿಂದ ಕಟ್ಟಿ, ಮುಂಬೈನ ಬೀದಿಗಳಲ್ಲಿ ಎಳೆದೊಯ್ದು ಆಕೆಯ ಮನೆಗೆ ಕರೆದೊಯ್ದರು.ಕೊನೆಗೆ, ಆಕೆಯ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ದೂರು ನೀಡಿದಾಗ, ಕಾರ್ಪೊರೇಷನ್ನವರು ಬಂದು 3 ದಿನಗಳ ನಂತರ ಆಕೆಯನ್ನು ಶವವಾಗಿ ಕಂಡು ಹೂತುಹಾಕಿದರು.
ಹಾಗಾಗಿ ಸೌಂದರ್ಯ ಮತ್ತು ಖ್ಯಾತಿ/ಕೀರ್ತಿ *ಯಶಸ್ಸು* ಎನಿಸದು ಎಂದರು ಪ್ರೊಫೆಸರ್ .
ಆಗ ಇನ್ನೊಬ್ಬರು "ಅಧಿಕಾರ,ಪದವಿ" ಗಳೇ ಯಶಸ್ಸು ಎಂದರು.
ಹಾಗಾದರೆ ಈ ದೇಶವನ್ನು ಆಳಿದ ಎಲ್ಲಾ ಪ್ರಧಾನಿಗಳ ಹೆಸರನ್ನು ಕಾಗದದ ಮೇಲೆ ಬರೆಯಿರಿ!" ಎಂದರು ಪ್ರೊಫೆಸರ್ . ಆದರೆ 50ರಲ್ಲಿ 39 ಮಂದಿಗೆ ಎಲ್ಲ ಪ್ರದಾನಿಗಳ ಹೆಸರನ್ನು ಬರೆಯಲಾಗಲಿಲ್ಲ.
ಆದ್ದರಿಂದ ಅಧಿಕಾರ,ಪದವಿಗಳೂ "ಯಶಸ್ಸು" ಅಲ್ಲ ಎಂದಾಯಿತು.
ಕೆಲವು ಕ್ಷಣ ನೀರವ ಮೌನ ಆವರಿಸಿತು,,,,,,
ಎಲ್ಲರೂ ಉತ್ತರಿಸದೆ ಸುಮ್ಮನಿರುವಾಗ, ಪ್ರೊಫೆಸರ್
"ನಿಮಗೆ ನಿಮ್ಮ ಅಜ್ಜ,ಅಜ್ಜಿಯ ಹೆಸರುಗಳು ಗೊತ್ತಾ?" ಎಂದರು.
ಎಲ್ಲರೂ ‘ಗೊತ್ತು’ ಎಂದರು.
ಅವರ ತಾತ ಅಜ್ಜಿಯರ ಹೆಸರು ನಿಮಗೆ ತಿಳಿದಿದೆಯೇ?" ಎಂದು ಕೇಳಿದಾಗ ಐದು ಜನ ಮಾತ್ರ "ನನಗೆ ಗೊತ್ತು" ಎಂದರು.
ಆಗ ಪ್ರೊಫೆಸರ್ ಮುಂದುವರೆದು
ಅವರ ತಾತ ಅಜ್ಜಿಯರ ಹೆಸರು ನಿಮಗೆ ತಿಳಿದಿದೆಯೇ?" ಎಂದರು.
ಅವರು ‘ಗೊತ್ತಿಲ್ಲ’ ಎಂದರು.
ಆಗ ಪ್ರೊಫೆಸರ್ ಕೇಳಿದರು, "ಶ್ರೀರಾಮ, ಶ್ರೀಕೃಷ್ಣ, ಬುದ್ಧ, ಆದಿಶಂಕರ, ಎಲ್ಲರೂ...?"
"ಒಹ್ ನಮಗೆ ಗೊತ್ತು!" ಎಂದು ಎಲ್ಲರೂ ಒಕ್ಕೊರಲಿನಿಂದ ಉತ್ತರಿಸಿದರು.
ನಿಮ್ಮ ಸ್ವಂತ ತಾತ ಅಜ್ಜಿಯರು ನಿಮಗೆ ನೆನಪಿರುವುದಿಲ್ಲ, ಆದರೆ ನೀವು ಎಂದಿಗೂ ಭೇಟಿಯಾಗದ ಈ ಎಲ್ಲ ಜನರನ್ನು ಹೇಗೆ ನೆನಪಿಟ್ಟುಕೊಂಡಿರುವಿರಿ????"
ಪ್ರೊಫೆಸರ್ ನೀಡಿದ ಉಪನ್ಯಾಸದಿಂದ ತುಂಬಾ ಪ್ರಭಾವಿತರಾದ ಒಬ್ಬ ವಿದ್ಯಾರ್ಥಿ ಹೇಳಿದ ಉತ್ತರ: “ಸರ್, ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ_ ಇಂದಿಗೂ ರಾಮ, ಕೃಷ್ಣ, ಬುದ್ಧನ ಹೆಸರುಗಳು ನೆನಪಾಗುತ್ತವೆ... ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಮಾತ್ರ ಬದುಕುವವರನ್ನು ಜಗತ್ತು ಮರೆತುಬಿಡುತ್ತದೆ, ಆದರೆ ಇತರರಿಗಾಗಿ ಬದುಕುವವರನ್ನು ಜಗತ್ತು ಯಾವಾಗಲೂ ನೆನಪಿಸಿಕೊಳ್ಳುತ್ತದೆ.
ಇದೇ ನಿಜವಾದ ಯಶಸ್ಸು! ”
ವಂದನೆಗಳೊಂದಿಗೆ
ಇತಿ
ನಂಜುಂಡಸ್ವಾಮಿ
Saturday, August 31, 2024
*ಐದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವ ಮಹಾಭಾರತದ ಸಾರವನ್ನು ಕೇವಲ ಒಂಬತ್ತು ಸಾಲುಗಳಲ್ಲಿ ಅರ್ಥಮಾಡಿಕೊಳ್ಳಿ*
*ಐದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವ ಮಹಾಭಾರತದ ಸಾರವನ್ನು ಕೇವಲ ಒಂಬತ್ತು ಸಾಲುಗಳಲ್ಲಿ ಅರ್ಥಮಾಡಿಕೊಳ್ಳಿ*
ನೀವು ಹಿಂದೂ ಆಗಿರಲಿ ಅಥವಾ ಬೇರೆ ಯಾವುದೇ ಧರ್ಮದವರಾಗಿರಲಿ. ನೀವು ಮಹಿಳೆಯಾಗಿರಲಿ ಅಥವಾ ಪುರುಷರಾಗಿರಲಿ, ನೀವು ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ನೀವು ನಿಮ್ಮ ದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ಸಂಕ್ಷಿಪ್ತವಾಗಿ, ನೀವು ಮನುಷ್ಯರಾಗಿದ್ದರೆ, ಕೆಳಗಿನ ಮಹಾಭಾರತದಿಂದ ಅಮೂಲ್ಯವಾದ *"9 ಮುತ್ತುಗಳನ್ನು"* ಓದಿ ಮತ್ತು ಅರ್ಥಮಾಡಿಕೊಳ್ಳಿ:
1. ನಿಮ್ಮ ಮಕ್ಕಳ ವಿವೇಚನಾರಹಿತ ಬೇಡಿಕೆಗಳು ಮತ್ತು ಆಸೆಗಳನ್ನು ನೀವು ಸಮಯಕ್ಕೆ ನಿಯಂತ್ರಿಸದಿದ್ದರೆ, ನೀವು ಜೀವನದಲ್ಲಿ ಅಸಹಾಯಕರಾಗುತ್ತೀರಿ... **"*ಕೌರವರು"**
2. ನೀವು ಎಷ್ಟೇ ಬಲಶಾಲಿಯಾಗಿದ್ದರೂ, ನೀವು ಅಧರ್ಮವನ್ನು ಬೆಂಬಲಿಸಿದರೆ, ನಿಮ್ಮ ಶಕ್ತಿ, ಆಯುಧಗಳು, ಕೌಶಲ್ಯಗಳು ಮತ್ತು ಆಶೀರ್ವಾದಗಳು ಎಲ್ಲವೂ ನಿಷ್ಪ್ರಯೋಜಕವಾಗುತ್ತವೆ... **"*ಕರ್ಣ"**
3. ನಿಮ್ಮ ಮಕ್ಕಳು ಮಹತ್ವಾಕಾಂಕ್ಷೆಯಿಂದ ತಮ್ಮ ಜ್ಞಾನವನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಿ, ಇಲ್ಲವಾದರೆ ಸಂಪೂರ್ಣ ವಿನಾಶವುಂಟಾಗುತ್ತದೆ.. **" *ಅಶ್ವತ್ಥಾಮ"**
4. ಅಧರ್ಮಿಗಳಿಗೆ ಶರಣಾಗುವಂಥ ಭರವಸೆಗಳನ್ನು ಎಂದಿಗೂ ನೀಡಬೇಡಿ... **" *ಭೀಷ್ಮ ಪಿತಾಮಹ"***
5. ಸಂಪತ್ತು, ಅಧಿಕಾರ, ಆಡಳಿತ ಮತ್ತು ತಪ್ಪು ಮಾಡುವವರ ಬೆಂಬಲದ ದುರುಪಯೋಗವು ಅಂತಿಮವಾಗಿ ಸಂಪೂರ್ಣ ವಿನಾಶಕ್ಕೆ ಕಾರಣವಾಗುತ್ತದೆ... **" *ದುರ್ಯೋಧನ"***
6. ಕುರುಡನಿಗೆ ಅಧಿಕಾರವನ್ನು ಎಂದಿಗೂ ಹಸ್ತಾಂತರಿಸಬೇಡಿ, ಅಂದರೆ ಸ್ವಾರ್ಥ, ಸಂಪತ್ತು, ಹೆಮ್ಮೆ, ಜ್ಞಾನ, ಮೋಹ ಅಥವಾ ಕಾಮದಿಂದ ಕುರುಡನಾದವನು, ಅದು ವಿನಾಶಕ್ಕೆ ಕಾರಣವಾಗುತ್ತದೆ ... **"*ಧೃತರಾಷ್ಟ್ರ"***
7. ಜ್ಞಾನದ ಜೊತೆಯಲ್ಲಿ ಬುದ್ಧಿವಂತಿಕೆ ಇದ್ದರೆ, ನೀವು ಖಂಡಿತವಾಗಿಯೂ ವಿಜಯಶಾಲಿಯಾಗುತ್ತೀರಿ... **" *ಅರ್ಜುನ"***
8. ಮೋಸವು ನಿಮ್ಮನ್ನು ಎಲ್ಲಾ ಸಮಯದಲ್ಲೂ ಪ್ರತಿಯೊಂದು ವಿಷಯಗಳಲ್ಲಿ ಯಶಸ್ಸಿನತ್ತ ಕೊಂಡೊಯ್ಯುವುದಿಲ್ಲ... **" *ಶಕುನಿ"***
9. ನೀವು ನೈತಿಕತೆ, ಸದಾಚಾರ ಮತ್ತು ಕರ್ತವ್ಯವನ್ನು ಯಶಸ್ವಿಯಾಗಿ ಎತ್ತಿ ಹಿಡಿದರೆ, ಜಗತ್ತಿನ ಯಾವ ಶಕ್ತಿಯೂ ನಿಮಗೆ ಹಾನಿ ಮಾಡಲಾರದು...**" *ಯುಧಿಷ್ಠಿರ"***
*ಸರ್ವೇ ಜನಾ ಸುಖಿನೋ ಭವಂತು.*
🙏🚩
Thursday, August 29, 2024
ವಸ್ತ್ರಾಪಹರಣವಾಗುವ...ಸಂಧರ್ಭದಲ್ಲಿ**********ದ್ರೌಪದಿ ದುಃಖದ ಕಣ್ಣುಗಳಿಂದ..ಭೀಷ್ಮ ಪಿತಾಮಹರತ್ತ ನೋಡುತ್ತಾಳೆ.
********ವಸ್ತ್ರಾಪಹರಣವಾಗುವ...ಸಂಧರ್ಭದಲ್ಲಿ**********ದ್ರೌಪದಿ ದುಃಖದ ಕಣ್ಣುಗಳಿಂದ..ಭೀಷ್ಮ ಪಿತಾಮಹರತ್ತ ನೋಡುತ್ತಾಳೆ....ಅವ್ರು ಅಸಹಾಯಾಕರಾಗಿ... ತಲೆಯನ್ನ ತಗ್ಗಿಸುತ್ತಾರೆ... ದೃತರಾಷ್ಟ್ರ ಕಣ್ಣು ಕಾಣದವನು...ಇನ್ನೂ ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳು....ಆರ್ಥನಾದ ಕೇಳಿಸುತ್ತಿದ್ದರೂ.. ಏನೂ ಮಾಡದ ಸ್ಥಿತಿ...ಇನ್ನೂ ದ್ರೋಣಾಚಾರ್ಯ ಆಶ್ವತ್ತಾಮ..ವಿಧುರ.. ಕರ್ಣ...ದುರ್ಯೋಧನನ ಆಜ್ಞೆಗೆ ಕಟ್ಟು ಬಿದ್ದವರು....ಇನ್ನೂ ಪಾಂಡವರು...ಸ್ಥಿತಿ ಅಂತೂ ಅಯೋಮಯ... ಈ ಕಡೆ ಪಗಡೆ ಆಟದಲ್ಲಿ... ಸಕಲವನ್ನೂ ಕಳೆದುಕೊಂಡು..ಕೊನೆಯದಾಗಿ ತಮ್ಮ ಪತ್ನಿಯಾದ ಪಾಂಚಾಲಿಯನ್ನ ಪಣಕ್ಕಿಟ್ಟು.. ಅವಳನ್ನು ಸಹ ಕಳೆದುಕೊಂಡು...ತಲೆ ತಗ್ಗಿಸಿ ಕೂತವರು...ಈಗ ದ್ರೌಪದಿ ಕೌರವರ ಕೈ ಗೊಂಬೆ...ಆ ಕಡೆ ದುಷ್ಯಾಸನ ದ್ರೌಪದಿ ಕೂದಲನ್ನ... ಹಿಡಿಡೆಳೆದು...ಅವಳ ಸೆರಗಿಗೆ ಕೈ ಹಾಕಿ ಎಳೆಯುವಾಗ....ಕೌರವರು ಧೂರ್ಯೋಧನನ... ಅಟ್ಟಹಾಸದ ನಗು... ಮತ್ತು ಶಕುನಿಯ... ಕರ್ಕಶವಾದ.. ನಗು....ದ್ರೌಪದಿ.. ಮತ್ತೊಮ್ಮೆ... ಎಲ್ಲರ ಹೆಸರು ಕೂಗಿ ಕೂಗಿ... ಕಾಪಾಡುವಂತೆ ಅಂಗಲಾಚಿ ಬೇಡುತ್ತಾಳೆ..." ಓ ರಥರೇ. ಅತಿರಥರೇ..ಮಹಾ ರಥರೇ...ಕುರುಕುಲ ಸೊಸೆಗೆ ಇಷ್ಟು ಅನ್ಯಾಯವಾಗುತ್ತಿದ್ದರೂ ಒಬ್ಬರಾದರೂ... ತಡೆಯಬಲ್ಲಿರಾ..ಎಂದು..ರಾಗವಾಗಿ ಗೋಳಾಡುತ್ತ ಇರುವಾಗ... ಭೀಮನ ಕಣ್ಣು ಕೆಂಪಾಗಿರತ್ತೆ.... ಅರ್ಜುನನ ಆವೇಶ ಮಿತಿಮೀರತ್ತೆ...ಆದರೂ ಏನೂ ಮಾಡದ ಸ್ಥಿತಿ......ಕಟ್ಟ ಕಡೆಯದಾಗಿ... ದ್ರೌಪದಿಯ ಸ್ಮರಣೆಗೆ ಬಂದಿದ್ದು... ಭಗವಂತ... ಈ ಸಂಧರ್ಭದಲ್ಲಿ ನನ್ನನ್ನು ಕಾಪಾಡುವ ಏಕ ಮಾತ್ರ ಶಕ್ತಿ ಅದು ಭಗವಂತನೇ ಎಂದು ಅವಳಿಗೆ ಆಗ ಅರಿವಾಗಿತ್ತು.. ಜೋರಾಗಿ....ಗೂಪಾಲ... ಮಾಧವಾ.....ಪರ0ಧಾಮ.. ಅಣ್ಣಾ...ಕೃಷ್ಣಾ...ಎಂದು ಕೈ ಮೇಲೆತ್ತಿ ಮುಗಿದಾಗ..ಸರ್ವಲOಕೃತ ಭೂಷಿತನಾಗಿ....ತೂಗು ಮಂಚದ ಮೇಲೆ ಅಷ್ಟ ಪತ್ನಿಯರ ಮಧ್ಯ ಹಾಯಾಗಿ ಕೊಳಲು ಹಿಡಿದು ಅದೇ ತಾನೇ ಭೋಜನವಾಗಿ ತಾOಬೂಲ ಸವೇಯುತ್ತ ಪವಡಿಸಿದವನಿಗೆ...ಅವಳ ಆರ್ಥನಾದ ಕೇಳಿ... ರುಕ್ಮಿಣಿಯ ಮಡಿಲಲ್ಲಿ ತಲೆ ಇಟ್ಟು.. ಸತ್ಯಭಾಮೆಯ ತೊಡೆಯ ಮೇಲೆ ಕಾಲಿಟ್ಟು ಮಲಗಿದವನು ತಟ್ ಅಂತ ಮಾಯವಾಗಿಬಿಡುತ್ತಾನೆ...ಆ ಕಡೆ ಶ್ರೀಕೃಷ್ಣನ ಪತ್ನಿಯರಿಗೆ ಗೊಂದಲ.. ನನ್ನ ಗಂಡನಿಗೆ ಇಷ್ಟು ತುರ್ತಾದ ಕೆಲ್ಸವೆನಿರಬಹುದು ಅಂತ... ತಕ್ಷಣ ಈ ಕಡೆ ಬಂದವನೇ...ನಿರಂತರವಾಗಿ ಅವಳಿಗೆ ವಸ್ತ್ರ ಕೊಟ್ಟು ಅವಳ ಮಾನವನ್ನ ಉಳಿಸುತ್ತಾನೆ....ಕೊನೆಗೆ ದುಷ್ಯಾಸನ...ಸೀರೆ ಸೆಳೆದು ಸೆಳೆದು... ಸುಸ್ತಾಗಿ...ನೆಲಕಚ್ಚಿ ಬಿದ್ದಿರುತ್ತಾನೆ...ಕೋಪದಿಂದ ಧುರ್ಯೋಧನ... ಶಕುನಿ.. ಕೃಷ್ಣ ಲೀಲೆಯನ್ನ ನೋಡುತ್ತಾ...ಬುಸುಗುಟ್ಟುತ್ತಿರುತ್ತಾರೆ... ದೃತರಾಷ್ಟ್ರನಿಗೆ.. ಪಶ್ಚಾತಾಪದ ಅರಿವಾಗಿ... ತಪ್ಪಾಯಿತೆOದು... ದ್ರೌಪದಿಗೆ ಕ್ಷಮೆ ಕೋರಿ...3 4 ಇಚ್ಛೆಯ ವರವನ್ನ ಕೊಟ್ಟು... ಕಳುಹಿಸುತ್ತಾರೆ.... ಇತ್ತ ರೂಷಾವೇಶದಿಂದ...ಪಾಂಡವರು ಅರಮನೆಗೆ ಬಂದ ನಂತರ... ದ್ರೌಪದಿ.. ಸ್ವಲ್ಪ ಕೋಪದಿಂದ ಅಣ್ಣಾ... ನೀನೇಕೆ ಇಷ್ಟು ತಡವಾಗಿ ಬಂದೆ... ನೀನು ಮುಂಚೆಯೇ ಬಂದಿದ್ದರೆ ಇಷ್ಟೆಲ್ಲ ನಡೆಯುತ್ತಿರಲಿಲ್ಲವೆಂದು ಹೇಳಿದಾಗ... ಶ್ರೀಕೃಷ್ಣನ ಉತ್ತರ ತುಂಬಾ ಅದ್ಭುತವಾಗಿತ್ತು... " ದ್ರೌಪದಿ...ನನ್ನನ್ನು ಕೇಳಿ ನಿನ್ನ ಪತಿಯರು ಜೂಜಾಟಕ್ಕೆ ಇಳಿದಿದ್ದರಾ? ಜೂಜಾಡುವುದು.. ತಪ್ಪು ಎಂದು ಗೊತ್ತಿದ್ದರೂ ಅಂತಹದೊಂದು... ಆಟವಾಡಲು ತುದಿಗಾಲಲ್ಲಿ ತಿಂತಿದ್ದರು... ಅದು.. ಆ ಕುತಂತ್ರಿ ಶಕುನಿಯ ಜೊತೆ... ಆಗ ನೀನು ಕರೆದಿದ್ದರೆ... ಧರ್ಮರಾಯನ ಬದಲಿಗೆ ನಾನೇ ಆಟಕ್ಕೆ ಕೂತು... ಕೌರವರಿಗೆ ಶಕುನಿಗೆ ಮಣ್ಣು ಮುಕ್ಕಿಸುತ್ತಿದ್ದೆ....ಇನ್ನೂ ನೀನೂ...ಇಷ್ಟೆಲ್ಲ ನಡೆಯುತ್ತಿರುವಾಗ... ನೀನು... ಯಾರಾದರೂ ನನ್ನ ಸಹಾಯಕ್ಕೆ ಬರುವರಾ ಎಂದು ಅಂಗಲಾಚಿ ಬೇಡಿದೆ... ಅಲ್ಲಿ ಇದ್ದದ್ದು ಯಾರು ಸಾಮಾನ್ಯರಲ್ಲ ಅತಿರಥ ಮಹಾರಥರು... ಅವರ್ಯಾರು ಬರಲಿಲ್ಲ...ಕೊನೆಗೆ ನೀನು ಕರೆದಿದ್ದು ನನ್ನನ್ನ... ನೀನು ಅವರೆಲ್ಲರಿಗಿಂತ ಮುಂಚೆಯೇ ನನ್ನ ಕರೆದಿದ್ದರೆ... ನಾನು ಮುಂಚೆಯೇ ಬರುತ್ತಿದ್ದೆ... ಅದಿಷ್ಟು ಜನರಲ್ಲಿ ಒಬ್ಬರಾದರೂ ನಿನ್ನ ಸಹಾಯಕ್ಕೆ ಬಂದಿದ್ದರೆ... ನಿನಗೆ ನನ್ನ ಅವಶ್ಯಕತೆಯಾದರೂ ಎಲ್ಲಿ ಇರುತಿತ್ತು... ನೀನು ಯಾವುದೇ ದಾರಿ ಕಾಣದೆ ಇದ್ದಾಗ...ನನ್ನನ್ನು ಪ್ರಾರ್ಥಿಸಿದೆ ನಾನು ತಕ್ಷಣ ಬಂದೆ.... ದೋಷವೆಲ್ಲ ನಿಮ್ಮ ಬಳಿ ಇಟ್ಟುಕೊಂಡು ತಡವಾಗಿ ಬಂದೆ ಎಂದು ನನ್ನನ್ನೇ ದೂರುತ್ತೀಯಲ್ಲ ಇದ್ಯಾವ ನ್ಯಾಯ ಹೇಳಮ್ಮ ತಂಗಿ ಎಂದಾಗ " ಇದನ್ನು ಕೇಳಿ... ಅವಳೆಗೆ...ತಪ್ಪಿನ ಅರಿವಾಗಿ ಪಶ್ಚಾತಾಪದ ಕಣ್ಣೀರು ಹರಿಯದೊಡಗುತ್ತೆ..... "ಈ ಒಂದು ಸಂಧರ್ಭ ನಮ್ಮ ಜೀವನಕ್ಕೂ ಅನ್ವಯವಾಗತ್ತೆ...ಅವರು ನಮ್ಮವರು ಇವರು ನಮ್ಮವರು ಅನ್ನುವ ಭ್ರಮೆಯಲ್ಲಿ ಇರ್ತೀವಿ...ನಮಗೆ ಕಷ್ಟ ಬಂದಾಗ ನಾವು ಸಹ ಅವರಿವರಿಗೆ...ಸಹಾಯ ಕೋರಿ...ಕೊನೆಗೆ...ಯಾವುದೇ ದಾರಿ ಕಾಣದೆ ಇದ್ದಾಗ...ಹೋಗಿ ಭಗವಂತನ ಪಾದಕ್ಕೆ ಬೀಳುತ್ತೇವೆ....ನೀನೇ ಗತಿ ಭಗವಂತ ಅಂತ ಶರಣಾಗತಿ ಬೇಡುತ್ತೇವೆ...ಕೆಲವೊಮ್ಮೆ ಯಾರು ಅಂದ್ರೆ ಯಾರು ಸಹ ನಮ್ಮ ಸಹಾಯಕ್ಕೆ ಬಾರದೆ ಇರುವ ಸ್ಥಿತಿ...ಅವರಿವರಿಗೆ ಸಹಾಯ ಕೂರುವ ಮುನ್ನವೇ ಒಂದೇ ಒಂದು ಕ್ಷಣ ಭಗವಂತನ ಸ್ಮರಣೆ ಮಾಡಿದರೆ...ಅವನೇ ಯಾವುದೋ ಒಂದು ರೂಪದಲ್ಲಿ ದಾರಿಯನ್ನ ತೋರಿಸುತ್ತಾನೆ...ಎಂಬುವದಕ್ಕೆ ಈ ಸಂಧರ್ಭವೇ ಸಾಕ್ಷಿ...🙏🙏"ಕೃಷ್ಣO ಒಂದೇ ಜಗತ್ ಗುರುO" 🙏🙏
ವಂದನೆಗಳೊಂದಿಗೆ
ಇತಿ
Tuesday, August 27, 2024
“ನಾನು ಒಂಬತ್ತು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೂ, ಯಾರೂ ನನ್ನನ್ನು ಅಭಿನಂದಿಸಲಿಲ್ಲ ಆದರೆ ನಾನು ಒಂದು ಪ್ರಶ್ನೆಗೆ ತಪ್ಪು ಉತ್ತರ ಬರೆದಾಗ, ಎಲ್ಲರೂ ನಗಲು ಪ್ರಾರಂಭಿಸಿದಿರಿ. ಇದರರ್ಥ ಒಬ್ಬ ವ್ಯಕ್ತಿಯು ತುಂಬಾ ಯಶಸ್ವಿಯಾಗಿದ್ದರೂ, ಸಮಾಜವು ಅವನ ಸಣ್ಣ ತಪ್ಪನ್ನು ಗಮನಿಸುತ್ತದೆ
ಒಂದು ದಿನ ಅಲ್ಬರ್ಟ್ ಐನ್ಸ್ಟೈನ್ ಬೋರ್ಡ್ ಮೇಲೆ ಬರೆದರು:
9 x 1 = 09
9 x 2 = 18
9 x 3 = 27
9 x 4 = 36
9 x 5 = 45
9 x 6 = 54
9 x 7 = 63
9 x 8 = 72
9 x 9 = 81
9 x 10 = 91
ಅವರ ಸ್ಟೂಡೆಂಟ್ಸ್ ಗಳಲ್ಲಿ ಗೊಂದಲ ಉಂಟಾಯಿತು ಏಕೆಂದರೆ ಆಲ್ಬರ್ಟ್ ಐನ್ಸ್ಟೈನ್ ತಪ್ಪು ಮಾಡಿದ್ದರು!
9 x 10 ಗೆ ಸರಿಯಾದ ಉತ್ತರ 90
ಎಲ್ಲಾ ವಿದ್ಯಾರ್ಥಿಗಳು ಅವರನ್ನು ಗೇಲಿ ಮಾಡಿದರು.ಆದರೆ ಆಲ್ಬರ್ಟ್ ಐನ್ಸ್ಟೈನ್ ಎಲ್ಲರೂ ಮೌನವಾಗಿರಲು ಕಾಯ್ದು ಹೇಳಿದರು:
“ನಾನು ಒಂಬತ್ತು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೂ, ಯಾರೂ ನನ್ನನ್ನು ಅಭಿನಂದಿಸಲಿಲ್ಲ ಆದರೆ ನಾನು ಒಂದು ಪ್ರಶ್ನೆಗೆ ತಪ್ಪು ಉತ್ತರ ಬರೆದಾಗ, ಎಲ್ಲರೂ ನಗಲು ಪ್ರಾರಂಭಿಸಿದಿರಿ. ಇದರರ್ಥ ಒಬ್ಬ ವ್ಯಕ್ತಿಯು ತುಂಬಾ ಯಶಸ್ವಿಯಾಗಿದ್ದರೂ, ಸಮಾಜವು ಅವನ ಸಣ್ಣ ತಪ್ಪನ್ನು ಗಮನಿಸುತ್ತದೆ ಮತ್ತು ಅದನ್ನು ಆನಂದಿಸುತ್ತದೆ. ಆದ್ದರಿಂದ ಟೀಕೆಗಳು ನಿಮ್ಮ ಕನಸುಗಳನ್ನು ನಾಶಮಾಡಲು ಬಿಡಬೇಡಿ, ಎಂದಿಗೂ ತಪ್ಪು ಮಾಡದ ವ್ಯಕ್ತಿ ಏನನ್ನೂ ಮಾಡದವನು. ”
Friday, August 2, 2024
ಎಲ್ಲವೂ ಸ್ಮಾರ್ಟ್ ಫೋನ್ ಸಾಮ್ರಾಜ್ಯ...ಬೆರಳು ಜಗತ್ತನ್ನು ಮತ್ತು ಮನುಷ್ಯನ ಜೀವನವನ್ನು ಆಳುತ್ತಿದೆ.....
ನಿಜ ಅಲ್ಲವೇ...
√ಇದು ಗಡಿಯಾರವನ್ನು ತಿಂದಿತು,,
√ಇದು ಟಾರ್ಚನ್ನು ಮೂಲೆಗೆಸೆಯಿತು,,
√ಇದು ಪೋಸ್ಟ್ ಕಾರ್ಡ್ಗಳನ್ನು ಹರಿಯಿತು,,
√ಇದು ಪುಸ್ತಕಗಳನ್ನು ಮುಚ್ಚಿತು,,
√ಇದು ರೇಡಿಯೋವನ್ನು ನಿಲ್ಲಿಸಿತು,,
√ಟೇಪ್ ರೆಕಾರ್ಡರನ್ನು ಮೂಲೆಗುಂಪಾಗಿಸಿತು,, √ಕ್ಯಾಮರಾವನ್ನು ನಾಶಪಡಿಸಿತು,,
√ಕ್ಯಾಲ್ಕುಲೇಟರ್ ನ ಕೆಲಸ ನಿಲ್ಲಿಸಿತು,,
√ನಮ್ಮ ಜ್ಞಾಪಕಶಕ್ತಿಯನ್ನು ಕಬಳಿಸಿತು.
√ಥಿಯೇಟರ್ ಇಲ್ಲ, ನಾಟಕ ಇಲ್ಲ,
ಆಟವಿಲ್ಲ, ಹಾಡು ಇಲ್ಲ...
√ಇದೇ ಬ್ಯಾಂಕ್,
√ಇದೇ ಹೋಟೆಲ್,
√ಇದೇ ಕಿರಾಣಿ ಅಂಗಡಿ,
√ಇದು ಡಾಕ್ಟರ್,
√ಇದು ಜ್ಯೋತಿಷಿ...
ಎಲ್ಲವೂ ಸ್ಮಾರ್ಟ್ ಫೋನ್ ಸಾಮ್ರಾಜ್ಯ...
ಬೆರಳು ಜಗತ್ತನ್ನು ಮತ್ತು ಮನುಷ್ಯನ ಜೀವನವನ್ನು ಆಳುತ್ತಿದೆ.....
ಮನುಷ್ಯನಿಗೆ ಹುಚ್ಚು ಹಿಡಿಯುತ್ತಿದೆ,,,
ಆದರೆ ಫೋನ್ ಮಾತ್ರ ಮತ್ತೂ
ಮತ್ತೂ ಸ್ಮಾರ್ಟ್ ಆಗುತ್ತಲಿದೆ,,,
ಬಾಯಿ ಮ್ಯೂಟ್ ಆಗುತ್ತಲಿದೆ...
ಎಸ್, ನಿಜ...
ಕೇವಲ ಬೆರಳ ಸ್ಪರ್ಶದಿಂದ ಜೀವನ...
ಆದರೆ ಯಾರೂ ನಿಜವಾದ ಸಂಪರ್ಕದಲ್ಲಿಲ್ಲ...
ಕೆಲವು ವರ್ಷಗಳ ಹಿಂದೆ luxury ಆಗಿದ್ದ ಮೊಬೈಲು ಈಗ ಆಗಿದೆ necessary
_ಅಳುವ ಮಗುವ ಸಂತೈಸಲು ಬೇಕು ಮೊಬೈಲು,
_ಸಮಯ ಕಳೆಯಲು ಬೇಕೇ ಬೇಕು
ತಾತಂಗೂ ಮೊಬೈಲ್
ಭೂಮಿಗೆ ಬಂದ ಮೊದಲ ಕ್ಷಣದಿಂದ ಹಿಡಿದು ಭೂಮಿ ಸೇರುವ ಕೊನೆಯ ಕ್ಷಣದವರೆಗೂ
ಆ ಬಾಲ ವೃದ್ಧರಾಗಿ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುವ ಈ ಮಾಯಾಂಗನೆಯಿಂದ ಮುಕ್ತಿ ಇಲ್ಲವೇ!!??
ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.
ವಯಸ್ಸು 20 ಇರುವಾಗ *"ಸ್ವದೇಶ" ಮತ್ತು "ವಿದೇಶ" ಎರಡೂ ಒಂದೇ.* (ನೀವು ಎಲ್ಲಿದ್ದರೂ ಪರವಾಗಿಲ್ಲ. ಅಲ್ಲಿಗೆ ಹೊಂದಿಕೊಳ್ಳುವಿರಿ)
ವಯಸ್ಸು 30 ಆದಾಗ *"ರಾತ್ರಿ" ಮತ್ತು "ಹಗಲು " ಎರಡೂ ಒಂದೇ.* ( ಕೆಲವು ದಿನ ನಿದ್ದೆ ಇಲ್ಲ ದಿದ್ದರೂ ಏನೂ ತೊಂದರೆ ಆಗಲ್ಲ)
ವಯಸ್ಸು 40 ಆದಾಗ *"ಅತಿ ಹೆಚ್ಚು ಓದಿದವರು" ಮತ್ತು "ಕಡಿಮೆ ಓದಿದವರು" ಒಂದೇ.* ( ಕಡಿಮೆ ಓದಿದವರೂ ಕೆಲವೊಮ್ಮೆ ಹೆಚ್ಚು ಸಂಪಾದಿಸುತ್ತಾರೆ)
ವಯಸ್ಸು 50 ಆದಾಗ
*"ಸೌಂದರ್ಯ" ಮತ್ತು "ಕುರೂಪ" ಒಂದೇ.* (ನೀವು ಎಷ್ಟೇ ಸುಂದರವಾಗಿದ್ದರೂ, ಚರ್ಮ ನೆರಿಗೆ ಬೀಳುವುದು, ಅಲ್ಲಲ್ಲಿ ಕಪ್ಪಾಗುವುದು, ಮುಚ್ಚಿಡಲು ಸಾಧ್ಯವಿಲ್ಲ)
ವಯಸ್ಸು 60 ಆದಾಗ *"ಎತ್ತರದ ಸ್ಥಾನ", "ಕೆಳಗಿನ ಸ್ಥಾನ" ಒಂದೇ.* (ಅಧಿಕಾರಿಯು ನಿವೃತ್ತಿಗೊಂಡ ಮೇಲೆ ಪೇದೆ ಆಗಿದ್ದವನೂ ಗೌರವ ಕೊಡಲಾರ)
ವಯಸ್ಸು 70 ಆದಾಗ *"ದೊಡ್ಡ ಮನೆ" ಮತ್ತು "ಸಣ್ಣ ಮನೆ" ಒಂದೇ.* (ಸಂದು ನೋವು, ಚಲಿಸಲು ಕಷ್ಟ, ಇದ್ದವರಿಗೆ ಸ್ವಲ್ಪ ಜಾಗ ಕೂರಲು ಸಿಕ್ಕರೆ ಸಾಕು)
ವಯಸ್ಸು 80 ಆದಾಗ *"ಹಣ ಇರುವುದು" ಮತ್ತು "ಹಣ ಇಲ್ಲದಿರುವುದು" ಒಂದೇ.* (ನಿಮಗೆ ಹಣ ಖರ್ಚು ಮಾಡಬೇಕೆನ್ನಿಸಿದರೂ ಎಲ್ಲಿ ಖರ್ಚು ಮಾಡಬೇಕೆಂದು ತಿಳಿಯುವುದಿಲ್ಲ)
ವಯಸ್ಸು 90 ಆದಾಗ *"ನಿದ್ದೆ ಮಾಡೋದು" ಹಾಗೂ "ಎಚ್ಚರದಿಂದಿರುವುದು" ಎರಡೂ ಒಂದೇ.* (ಎದ್ದ ಮೇಲೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ)
ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.
*ದೀರ್ಘಾವಧಿಯ ಜೀವನ ನೋಡಿದರೆ ನಾವೆಲ್ಲಾ ಒಂದೇ. ಆದ್ದರಿಂದ ಎಲ್ಲಾ ಒತ್ತಡ / ಆತಂಕ ಗಳನ್ನು ಮರೆತು ಜೀವನವನ್ನು ಆನಂದಿಸಿರಿ.*
Thursday, April 25, 2024
ಹಲವು ಮುಂಚೂಣಿ ದೇಶಗಳಲ್ಲಿ ಹೆಮ್ಮೆಯಿಂದ ಯಶಸ್ಸನ್ನು ಸಾಧಿಸುತ್ತಲೆ ಬಂದಿರುವ *_ನೆಟ್ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ಅನ್ನು_* ಭಾರತದಲ್ಲಿ ಮಾತ್ರ ಕೀಳಾಗಿ ಕಾಣಲು ಕಾರಣವೇನು?
ಹಲವು ಮುಂಚೂಣಿ ದೇಶಗಳಲ್ಲಿ ಹೆಮ್ಮೆಯಿಂದ ಯಶಸ್ಸನ್ನು ಸಾಧಿಸುತ್ತಲೆ ಬಂದಿರುವ *_ನೆಟ್ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ಅನ್ನು_* ಭಾರತದಲ್ಲಿ ಮಾತ್ರ ಕೀಳಾಗಿ ಕಾಣಲು ಕಾರಣವೇನು?
ಇದಕ್ಕೆ ನಮ್ಮ ದೇಶದ *_ಕಲಿಕಾ ವ್ಯವಸ್ಥೆ_*(Education System) ಕಾರಣ. ಹಿರಿಯರಿಂದ ಇಡಿದು ಮನೆಯವರ ವರೆಗೂ, ಅಕ್ಕಪಕ್ಕದವರಿಂದ ಇಡಿದು ನಮ್ಮ ಶಾಲಾ ಕಾಲೇಜುಗಳ ಶಿಕ್ಷಕರ ವರೆಗೂ ನಮ್ಮೆಲ್ಲರ Mindset ಅನ್ನು ಯಾವ ರೀತಿ ರೂಪಿಸಿದ್ದಾರೆ ಅಂದರೆ ನಮಗೆ ಚಿಕ್ಕ ವಯಸ್ಸಿನಿಂದಲೂ ಹೇಳಿಕೊಟ್ಟ ಒಂದೇ ಒಂದು ವಿಷಯವೆಂದರೆ ಒಳ್ಳೇ ಮಾರ್ಕ್ ತಗೋ, ಒಳ್ಳೆ ಕಂಪನಿಯಲ್ಲಿ *_JOB_* ಮಾಡು..!!
Job ಎಂದರೆ *_(Just Obey the Boss/Join Others Business)_* ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದನ್ನ ಹೇಳಿಕೊಟ್ಟರೆ ಹೊರತು ಯಾರ ಮನೆಯಲ್ಲಿಯೂ ಯಾವ ಅಪ್ಪ ಅಮ್ಮಂದಿರೂ ತಮ್ಮ ಮಕ್ಕಳಿಗೆ #ನೆಟ್ವರ್ಕ್_ಮಾರ್ಕೆಟಿಂಗ್_ಬ್ಯುಸಿನೆಸ್ ಮಾಡುವುದನ್ನ ಹೇಳಿ ಕೊಡಲೆ ಇಲ್ಲ ಹಾಗಾಗಿ ಇವತ್ತು ನಮ್ಮ ದೇಶದಲ್ಲಿ ಅವಕಾಶ ಇದ್ದರೂ ಎಷ್ಟೋ ಯುವಕ ಯುವತಿಯರು ವಿಧ್ಯಾಭ್ಯಾಸ ಮುಗಿಸಿ ಕೆಲಸದ ಹುಡುಕಾಟದಲ್ಲಿ ಬ್ಯುಸಿ ಆಗಿಬಿಟ್ಟಿದ್ದಾರೆ. ಕೆಲವರಿಗೆ ಕೆಲಸ ಹುಡುಕುವುದೇ ಒಂದು ಕೆಲಸವಾಗಿ ಬಿಟ್ಟಿದೆ.
ಅಮೆರಿಕ, ಸಿಂಗಾಪುರ, ಮಲೇಶಿಯಾ ಮೊದಲಾದ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ನೆಟ್ವರ್ಕ್ ಮಾರ್ಕೆಟಿಂಗ್ ವಿಷಯವನ್ನು ಕಾಲೇಜುಗಳಲ್ಲಿ ಕಳೆದ 40-50 ವರ್ಷಗಳಿಂದ ಕಲಿಸುತ್ತಲೆ ಬಂದಿದ್ದಾರೆ. ಹಾಗಾಗಿ ಆ ದೇಶಗಳ 30-50 ಶೇಕಡಾ ಜನ ನೆಟ್ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ನಲ್ಲಿ ತೊಡಗಿಸಿ ಕೊಂಡಿದ್ದಾರೆ. ಅದೇ ನಮ್ಮ ದೇಶದಲ್ಲಿ 0.007 ಶೇಕಡಾ ಜನರು ಮಾತ್ರ ನೆಟ್ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ನಲ್ಲಿ ತೊಡಗಿಸಿ ಕೊಂಡಿದ್ದಾರೆ.ಹಾಗಾಗಿಯೇ ಭಾರತ ಇವತ್ತಿಗೂ ಮುಂದುವರಿಯುತ್ತಿರುವ ದೇಶವಾಗಿಯೆ ಉಳಿದಿದೆ.
*_ಇದೆಲ್ಲವನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಲೆ ಬಂದ ಭಾರತ ಸರಕಾರ ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಡೈರೆಕ್ಟ್ ಸಲ್ಲಿಂಗ್ ಅಥವಾ ಮೊಡೆರ್ನ್ ಮಾರ್ಕೆಟಿಂಗ್ ಎಂಬ ವಿಷಯವನ್ನು MBA, Bcomನಲ್ಲಿ ಇತ್ತೀಚೆಗಷ್ಟೇ ಕಲಿಸಲು ಆರಂಭಿಸಿದೆ._*
ನಮ್ಮ ದೇಶದ ಯುವಕ ಯುವತಿಯರಿಗೆ ಹೇಳುವ ಒಂದು ಕಿವಿಮಾತು ಏನೆಂದರೆ ಕೆಲಸ ಸಿಗಲಿಲ್ಲ ಅಂತ Tension ಮಾಡಿಕೊಳ್ಳುವ ಬದಲು ಒಂದು ಒಳ್ಳೆಯ ನೆಟ್ವರ್ಕ್ ಮಾರ್ಕೆಟಿಂಗ್ ಕಂಪೆನಿಯನ್ನು ಆಯ್ಕೆಮಾಡಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ..
ನೆಟ್ವರ್ಕ್ ಮಾರ್ಕೆಟಿಂಗ್ ನಲ್ಲಿ ನಾವು ಹಾಗೂ ನಮ್ಮೊಂದಿಗೆ ಕೈ ಜೋಡಿಸುವವರು ಆರ್ಥಿಕ ಸ್ವಾತಂತ್ರ್ಯ ಪಡೆಯಬಹುದು ಹಾಗೂ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸೇರಿಸಬಹುದು...
*_ಆಯ್ಕೆ ನಿಮ್ಮದು... ಸಹಕಾರ ನಮ್ಮದು...
ವಂದನೆಗಳೊಂದಿಗೆ
ನಂಜುಂಡಸ್ವಾಮಿ
9886801163
Friday, April 12, 2024
ಬದುಕಿನಲ್ಲಿ ಈ ಏಳು ಸಂಗತಿಗಳನ್ನು ಯಾವತ್ತೂ ಮರೆಯಬೇಡಿ
ಆಲೋಚಿಸಿ...
ಬದುಕಿನಲ್ಲಿ ಈ ಏಳು ಸಂಗತಿಗಳನ್ನು ಯಾವತ್ತೂ ಮರೆಯಬೇಡಿ.
1. ಇನ್ನೊಬ್ಬರೊಡನೆ ಸುಮ್ಮನೆ ವಾಗ್ವಾದಕ್ಕೆ ಇಳಿಯಬೇಡಿ ಯಾಕೆಂದರೆ ಅಲ್ಲೊಬ್ಬನಿಗೆ ಮಾತನಾಡಲೇ ಬರುವುದಿಲ್ಲ.
2. ಆಹಾರದ ರುಚಿಯ ಬಗ್ಗೆ ದೂರಬೇಡಿ ಕೆಲವರಿಗೆ ಒಂದು ಹೊತ್ತಿನ ಊಟವೂ ಸಿಗುವುದಿಲ್ಲ.
3. ನಿಮ್ಮ ಸಂಗಾತಿಯ ಬಗ್ಗೆ ಸಹನೆ ಕಳೆದುಕೊಳ್ಳದಿರಿ ನಿನ್ನೆಯಷ್ಟೇ ಒಬ್ಬ ತನ್ನ ಸಂಗಾತಿಯನ್ನು ಮಣ್ಣು ಮಾಡಿದ ದುಃಖದಲ್ಲಿದ್ದಾನೆ.
4. ನಿಮ್ಮ ಮನೆ ಸೋರುತ್ತಿದೆ ಎಂದು ಬೇಸರ ಪಡಬೇಡಿ ಅಲ್ಲೊಬ್ಬನ ತಲೆಯ ಮೇಲೆ ಸೂರೇ ಇಲ್ಲ.
5. ನಿಮ್ಮ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ ಅವೆಷ್ಟೋ ದಂಪತಿಗಳಿಗೆ ತಂದೆ ತಾಯಿಯಾಗುವ ಭಾಗ್ಯವೇ ಇರುವುದಿಲ್ಲ.
6. ನಿಮ್ಮ ಉದ್ಯೋಗದ ಬಗ್ಗೆ ಅಸಡ್ಡೆ ತೋರಬೇಡಿ ಅಲ್ಲೊಬ್ಬ ಯುವಕನಿಗೆ ಓದಿದ್ದರೂ ಕೆಲಸವೇ ಸಿಕ್ಕಿಲ್ಲ.
7. ನಿಮ್ಮ ಜೀವನವನ್ನು ಶಪಿಸುತ್ತಾ ಕುಳಿತುಕೊಳ್ಳಬೇಡಿ ಎಷ್ಟೋ ಮಂದಿ ಯೌವನದಲ್ಲೇ ಹಾಸಿಗೆ ಹಿಡಿದು ನರಳುತ್ತಿದ್ದಾರೆ.
*ಜೀವನವೆಂಬುದು ಸುಂದರವಾದ ಉಡುಗೊರೆ. ವ್ಯರ್ಥಾಲಾಪದಲ್ಲಿ ಅದನ್ನು ಹಾಳು ಮಾಡಿಕೊಳ್ಳಬೇಡಿ. ಬದುಕಿನಲ್ಲಿ ಏನೋ ಸರಿಯಿಲ್ಲ ಎನ್ನಿಸುತ್ತಿದ್ದರೆ ಒಮ್ಮೆ ಯೋಚಿಸಿ, ನೀವಿನ್ನೂ ಬದುಕಿದ್ದೀರಿ ನಿಮಗಿಷ್ಟವಾಗದ ಸಂಗತಿಯನ್ನು ಬದಲಾಯಿಸುವ ಅವಕಾಶ ನಿಮಗಿದೆ. ನಿಮಗೆ ಬೇಕಾದಂತೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ.* ಸಾಧ್ಯವಾದರೆ ಷೇರ್ ಮಾಡಿ, ನೊಂದ ಮನಗಳಿಗೆ ಟಾನಿಕ್ ಕೂಡಾ ಆಗಬಲ್ಲದು ಈ ಸಂದೇಶ.
ಇಂತಿ
ನಂಜುಂಡಸ್ವಾಮಿ
Wednesday, April 3, 2024
ಪ್ರಕೃತಿಯಲ್ಲಿ ಕೋಟ್ಯಾಂತರ ಜೀವರಾಶಿಗಳಲ್ಲಿ ನಾನು ಒಂದು ಜೀವಿ ಎಂದು ಎಲ್ಲರೊಳಗೊಂದಾಗಿ ಬದುಕೋಣ.
*ಸಿಟ್ಟಿನಿಂದ ಯಕೃತ್ತು (ಲಿವರ್) ಹಾಳಾದರೆ, ದುಃಖದಿಂದ ಶ್ವಾಸಕೋಶ ದುರ್ಬಲವಾಗುತ್ತದೆ. ಹೆದರಿಕೆಯಿಂದ ಕಿಡ್ನಿ ಹಾಳಾಗುತ್ತದೆ.*
*ಚಿಂತೆಗಳಿಂದ ಹೊಟ್ಟೆ ದುರ್ಬಲವಾದರೆ, ಒತ್ತಡಗಳಿಂದ ನಿಮ್ಮ ಹೃದಯ ಹಾಗೂ ಮೆದುಳು ದುರ್ಬಲವಾಗುತ್ತದೆ.*
ವಂದನೆಗಳೊಂದಿಗೆ
ಇಂತಿ
ನಂಜುಂಡಸ್ವಾಮಿ
8453503736
Sunday, March 24, 2024
ಜೀವನದ ಅರ್ಥಶಾಸ್ತ್ರ:-
ಜೀವನದ ಅರ್ಥಶಾಸ್ತ್ರ:-
ಉತ್ತಮ ನಡವಳಿಕೆಯು ಯಾವುದೇ ವಿತ್ತೀಯ ಮೌಲ್ಯವನ್ನು ಹೊಂದಿಲ್ಲ...
ಆದರೆ, ಇದು ಮಿಲಿಯನ್ ಹೃದಯಗಳನ್ನು ಖರೀದಿಸುವ ಶಕ್ತಿಯನ್ನು ಹೊಂದಿದೆ ...
ಶುಭೋದಯ.😊💐👍
ಇಂತಿ
ನಂಜುಂಡಸ್ವಾಮಿ
Friday, March 8, 2024
ಬದುಕಿನ ಕೊನೆಯ ತುಣುಕು
ಬದುಕಿನ ಕೊನೆಯ ತುಣುಕು
*************************
ಎಲ್ಲ ಮಿತ್ರರೂ ಮುಪ್ಪಾಗುತ್ತಿದ್ದಾರೆ
ನಿಧಾನಕ್ಕೆ ನಡೆಯುತ್ತಿದ್ದಾರೆ ನನ್ನ ಹಾಗೇ
ಹರೆಯದಲ್ಲಿ ಮಿಂಚುತ್ತಿದ್ದ ಪಟ್ಟುಗಳೆಲ್ಲ
ಈಗ ಮಾಯವಾಗಿವೆ
ಯಾರಿಗೋ ಬೊಜ್ಜು ಬಂದಿದೆ
ಇನ್ಯಾರಿಗೋ ಕೂದಲು ಹಣ್ಣಾಗುತ್ತಿವೆ
ಎಲ್ಲರ ತಲೆಯ ಮೇಲೆ ಜವಾಬ್ದಾರಿ
ಎಲ್ಲರಿಗೂ ಸಣ್ಣ ಪುಟ್ಟ ಅಜಾರಿ
ಯಾರಿಗೋ ದೇಹದ ನೋವು
ಯಾರಿಗೋ ಮನದ ಅಳಲು
ದಿನವಿಡೀ ಓಡುತ್ತಿದ್ದವರು
ಈಗ ನಡೆಯುವಾಗಲೂ ದಣಿವಾರಿಸಿಕೊಳ್ಳುತ್ತಿದ್ದಾರೆ.
ಯಾರಿಗೂ ಸಮಯವಿಲ್ಲ
ಎಲ್ಲರ ಕಣ್ಣಲ್ಲೂ ನೋವಿನ ಛಾಯೆ
ಎಲ್ಲರಿಗೂ (ನನ್ನ ಸೇರಿ)
ಅಪ್ಪನನ್ನು ಇನ್ನಷ್ಟು ಆರೈಕೆ ಮಾಡಬೇಕಿತ್ತು
ಕೊನೆಯ ದಿನಗಳಲ್ಲಿ ಅಮ್ಮನ ಸೇವೆ ಮಾಡಬೇಕಿತ್ತು
ಆ ಮಿತ್ರನೊಂದಿಗೆ ಪರಲು ಹರಿದುಕೊಳ್ಳಬಾರದಿತ್ತು
ಎಂಬ ಏನೇನೋ ಹಳವಂಡಗಳು
ಕಾಡುತ್ತವೆ.
ಅಂತೂ ಇಷ್ಟಾದರೂ ಸಾಧಿಸಿದೆನಲ್ಲ
ಎಂಬ ನೆಮ್ಮದಿಯೂ ಇದೆ
ಹಳೆಯ ಭಾವಚಿತ್ರಗಳ ನೋಡಿ
ಈಗಲೂ ಮನಸ್ಸು ತುಂಬಿ ಬರುತ್ತದೆ
ಈ ಸಮಯವೂ ಎಂಥ ವಿಚಿತ್ರ ನೋಡಿ!
ಹೇಗೆ ಸವೆದು ಹೋಗುತ್ತದೆ
ನಿನ್ನೆಯ ನವಯುವಕ ನನ್ನ ಮಿತ್ರ
ಇಂದು ವೃದ್ಧನಂತೆ ಕಾಣುತ್ತಾನೆ
ಒಂದೊಮ್ಮೆ ಕನಸು ಕಾಣುತ್ತಿದ್ದವರು
ಗತಿಸಿದ ದಿನಗಳಲ್ಲಿ ಕಳೆದು ಹೋಗಿದ್ದಾರೆ
ಆದರೆ ಇದು ಪರಮ ಸತ್ಯ!
ಎಲ್ಲಾ ಮಿತ್ರರೂ ಹಣ್ಣಾಗುತ್ತಿದ್ದಾರೆ.
ಮಿತ್ರರೇ ,
ಮುಂದೆ ಸಮಯದ ಲಯ
ಇನ್ನೂ ತೀವ್ರವಾಗಲಿದೆ.
ಈಗ ಉಳಿದ ಬದುಕೇ 'ಬಹುಮಾನ'
ಆದ್ದರಿಂದ,
ಮಾಡುವುದನ್ನು ಮಾಡಿ ಮುಗಿಸಿ
ಕೊಡುವುದನ್ನು ಕೊಟ್ಟು ಮುಗಿಸಿ
ನಿರಾಳ ಮನಸ್ಸಿನಿಂದ ಬದುಕಿ
ಪ್ರತಿಯೊಬ್ಬ ಹಳೆಯ ಮಿತ್ರ
'ಕೊಹಿನೂರ್ ವಜ್ರ'
ಹಳೆಯ ಮಿತ್ರರೊಂದಿಗೆ
ಬದುಕಿನ ಕೊನೆಯ ತುಣುಕು
ನಗುನಗುತ್ತ ಕಳೆಯಿರಿ.
ಎಲ್ಲಾ ಮಿತ್ರರಿಗೂ ಸಮರ್ಪಣೆ...... 🌹🙏.
Tuesday, February 13, 2024
ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು..
ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು..
1998 ರಲ್ಲಿ, ಕೊಡಾಕ್ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು.ಕೊಡಾಕ್ ದಿವಾಳಿಯಾಯಿತು ಮತ್ತು ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು.
HMT (ವಾಚ್)
ಬಜಾಜ್ (ಸ್ಕೂಟರ್)
ಡೈನೋರಾ (ಟಿವಿ)
ಮರ್ಫಿ (ರೇಡಿಯೋ)
ನೋಕಿಯಾ (ಮೊಬೈಲ್)
ರಾಜ್ದೂತ್ (ಬೈಕ್)
ಅಂಬಾಸಿಡರ್ (ಕಾರು)
ದಿನೇಶ್ (ಬಟ್ಟೆ)
ಸ್ನೇಹಿತರೇ,
ಈ ಎಲ್ಲದರ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಬಿದ್ದವು !!
ಕಾರಣ ???
ಕಾಲಕ್ಕೆ ತಕ್ಕಂತೆ ಅವು ಬದಲಾಗಲಿಲ್ಲ.!!
ಮುಂಬರುವ 10 ವರ್ಷಗಳಲ್ಲಿ ಪ್ರಪಂಚವು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಇಂದು ನಡೆಯುತ್ತಿರುವ 70% ರಿಂದ 90% ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ.
ಉಬರ್ ಕೇವಲ ಸಾಫ್ಟ್ವೇರ್ ಆಗಿದೆ. ತನ್ನದೇ ಆದ ಒಂದು ಕಾರು ಹೊಂದಿಲ್ಲದಿದ್ದರೂ, ಅವರು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿ.
ಏರ್ಬನ್ಬಿ ತಮ್ಮದೇ ಆದ ಹೋಟೆಲ್ ಹೊಂದಿಲ್ಲದಿದ್ದರೂ ವಿಶ್ವದ ಅತಿದೊಡ್ಡ ಹೋಟೆಲ್ ಕಂಪನಿಯಾಗಿದೆ.
Paytm, ola cabs, oyo ಕೊಠಡಿಗಳಂತಹ ಅನೇಕ ಉದಾಹರಣೆಗಳಿವೆ.
ಯುಎಸ್ ನಲ್ಲಿ ವಕೀಲರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ, ಏಕೆಂದರೆ ಐಬಿಎಂ ವ್ಯಾಟ್ಸನ್ ಸಾಫ್ಟ್ವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆಯನ್ನು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ, 90% ಯುಎಸ್ ವಕೀಲರು ನಿರುದ್ಯೋಗಿಗಳಾಗುತ್ತಾರೆ ..10% ಉಳಿದಿರುವವರು ... ಸೂಪರ್ ಸ್ಪೆಷಲಿಸ್ಟ್ ಆಗುತ್ತಾರೆ.
ವ್ಯಾಟ್ಸನ್ ಹೆಸರಿನ ಸಾಫ್ಟ್ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡುತ್ತದೆ. 2030 ರ ವೇಳೆಗೆ ಕಂಪ್ಯೂಟರ್ಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತವಾಗಿರುತ್ತವೆ.
ಮುಂದಿನ 10 ವರ್ಷಗಳಲ್ಲಿ, 90% ಕಾರುಗಳು ಪ್ರಪಂಚದಾದ್ಯಂತದ ರಸ್ತೆಗಳಿಂದ ಕಣ್ಮರೆಯಾಗುತ್ತವೆ… ಉಳಿದಿರುವುವು ಎಲೆಕ್ಟ್ರಿಕ್ ಕಾರುಗಳು ಅಥವಾ ಹೈಬ್ರಿಡ್ ಆಗಿರುತ್ತವೆ… ರಸ್ತೆಗಳು ಖಾಲಿಯಾಗುತ್ತವೆ, ಪೆಟ್ರೋಲ್ ಬಳಕೆ 90% ರಷ್ಟು ಕಡಿಮೆಯಾಗುತ್ತದೆ, ಎಲ್ಲಾ ಅರಬ್ ರಾಷ್ಟ್ರಗಳು ದಿವಾಳಿಯಾಗುತ್ತವೆ.
ನೀವು ಉಬರ್ನಂತಹ ಸಾಫ್ಟ್ವೇರ್ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ ... ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಸವಾರಿ ನಿಮ್ಮ ಬೈಕ್ಗಿಂತ ಅಗ್ಗವಾಗಿರುತ್ತದೆ.
ಕಾರುಗಳು ಚಾಲಕರಹಿತವಾಗಿರುವುದರಿಂದ 99% ಅಪಘಾತಗಳು ನಿಂತುಹೋಗುತ್ತವೆ.. ಇದು ಕಾರ್ ವಿಮೆ ಎಂಬ ವ್ಯವಹಾರವನ್ನು ನಿಲ್ಲಿಸುತ್ತದೆ.
ಚಾಲಕನಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ 90% ಕಾರುಗಳು ಕಣ್ಮರೆಯಾದಾಗ, ಟ್ರಾಫಿಕ್ ಮತ್ತು ಪಾರ್ಕಿಂಗ್ನಂತಹ ಸಮಸ್ಯೆಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ ... ಏಕೆಂದರೆ ಒಂದು ಕಾರು ಇಂದು 20 ಕಾರುಗಳಿಗೆ ಸಮಾನವಾಗಿರುತ್ತದೆ.
5 ಅಥವಾ 10 ವರ್ಷಗಳ ಹಿಂದೆ, ಪಿಸಿಒ ಇಲ್ಲದಂತಹ ಸ್ಥಳ ಇರಲಿಲ್ಲ. ನಂತರ ಎಲ್ಲರ ಜೇಬಿನಲ್ಲಿ ಮೊಬೈಲ್ ಫೋನ್ ಬಂದಾಗ, ನಂತರ ಪಿಸಿಒ ಸ್ಥಗಿತಗೊಳ್ಳಲು ಪ್ರಾರಂಭಿಸಿತು .. ನಂತರ ಆ ಎಲ್ಲಾ ಪಿಸಿಒ ಜನರು ಫೋನ್ ರೀಚಾರ್ಜ್ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಆನ್ಲೈನ್ನಲ್ಲಿ ರೀಚಾರ್ಜ್ ಕೂಡ ಪ್ರಾರಂಭಿಸಲಾಗಿದೆ.
ನೀವು ಎಂದಾದರೂ ಗಮನಿಸಿದ್ದೀರಾ ..?
ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿನ ಪ್ರತಿ ಮೂರು ಅಂಗಡಿಗಳಲ್ಲಿ ಒಂದು ಅಂಗಡಿಯಲ್ಲಿ ಮೊಬೈಲ್ ಫೋನ್
ಮಾರಾಟ, ಸೇವೆ, ರೀಚಾರ್ಜ್, ಪರಿಕರಗಳು, ದುರಸ್ತಿ, ನಿರ್ವಹಣೆ ಮಾಡಲಾಗುತ್ತಿದೆ.
ಈಗ ಎಲ್ಲವನ್ನೂ ಪೇಟಿಎಂ ಮೂಲಕ ಮಾಡಲಾಗುತ್ತದೆ .. ಈಗ ಜನರು ತಮ್ಮ ಫೋನ್ಗಳಿಂದಲೂ ರೈಲ್ವೆ ಟಿಕೆಟ್ಗಳನ್ನು ಕಾಯ್ದಿರಿಸುತ್ತಿದ್ದಾರೆ .. ಈಗ ಹಣದ ವಹಿವಾಟುಗಳು ಸಹ ಬದಲಾಗುತ್ತಿವೆ .. ಕರೆನ್ಸಿ ನೋಟ್ ಅನ್ನು ಮೊದಲು ಪ್ಲಾಸ್ಟಿಕ್ ಮನಿ ಮೂಲಕ ಬದಲಾಯಿಸಲಾಗಿತ್ತು.ಈಗ ಅದು ಡಿಜಿಟಲ್ ಆಗಿ ಮಾರ್ಪಟ್ಟಿದೆ.
ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ .. ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ, ಇಲ್ಲದಿದ್ದರೆ ನೀವು ಹಿಂದೆ ಉಳಿಯುತ್ತೀರಿ….
ಆದ್ದರಿಂದ ...
ಒಬ್ಬ ವ್ಯಕ್ತಿಯು ಸಮಯಕ್ಕೆ ತಕ್ಕಂತೆ ತನ್ನ ವ್ಯವಹಾರ ಮತ್ತು ಸ್ವಭಾವವನ್ನು ಬದಲಾಯಿಸುತ್ತಲೇ ಇರಬೇಕು.
ಮುಂದಿನ ದಿನಗಳಲ್ಲಿ ಕೇವಲ ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಇಡೀ ಜಗತ್ತನ್ನು ಆವರಿಸುವುದರಲ್ಲಿ ಸಂಶಯವಿಲ್ಲ.
ಸಮಯದೊಂದಿಗೆ ಸಾಗಿ ಮತ್ತು ಯಶಸ್ಸನ್ನು ಸಾಧಿಸಿ.
ವಂದನೆಗಳೊಂದಿಗೆ ನಂಜುಂಡಸ್ವಾಮಿ 🙏💐
Monday, February 5, 2024
'ಡಿಜಿಟಲ್ ಇಂಡಿಯಾ' ಅಂದರೆ ಏನು?
'ಡಿಜಿಟಲ್ ಇಂಡಿಯಾ' ಅಂದರೆ ಏನು?
ಇದು ಶ್ರೀ ಸಾಮಾನ್ಯನಿಗೆ ಅರ್ಥವಾಗೋದು ಕಷ್ಟ. ಅದಕ್ಕೇ ಉತ್ತರ ಇಲ್ಲಿದೆ.
ವರ್ಷ : ಕ್ರಿಸ್ತ ಶಕ 2030
ಗುಂಡ ಎಂಬಾತ ಮಸಾಲೆ ದೋಸೆ ಬೇಕಾಗಿ "ಅಡಿಗಾಸ್ ಹೋಟೆಲ್ ಗೆ ಕಾಲ್ ಮಾಡುತ್ತಾನೆ.
ಅಡಿಗಾಸ್: ಹಲೊ ಅಡಿಗಾಸ್, ಹೇಳಿ....
ಗುಂಡ: ನನ್ನ ಆರ್ಡರ್ ತಗೊಳ್ಳಿ.
ಅ: ಸರ್, ನಿಮ್ಮ ಆಧಾರ್ ನಂಬರ್ ಹೇಳಿ....
ಗುಂಡ: ಆಧಾರ್?..... k ತಗೊಳ್ಳಿ 6113-0676-4727.
ಅ: ನಿಮ್ಮ ಹೆಸರು Mr.ಗುಂಡ. ನಿಮ್ಮ. ಮನೆ ವಿಳಾಸ ನಂಬರ್ 115, 2nd cross, 5th main, Teacher colony, Bangalore.ನಿಮ್ಮ ಮನೆ ದೂರವಾಣಿ ಸಂಖ್ಯೆ 080-23545678. ನಿಮ್ಮ ಮೊಬೈಲ್ ಸಂಖ್ಯೆ 9900858333.
ಗುಂಡ: ನಿಮಗೆ ಇದೆಲ್ಲಾ ಹೇಗೆ ತಿಳಿತು?
ಅ: ನಿಮ್ಮ ಆಧಾರ ಸಂಖ್ಯೆ "ಡಿಜಿಟಲ್ ಇಂಡಿಯಾ " ಜೊತೆ ಕನೆಕ್ಟಿಂಗ್ ಮಾಡಿದ್ವಿ ಅದರಿಂದ ತಿಳಿತು.
ಗುಂಡ: ಸರಿ. ನನಗೆ ಮಸಾಲ ದೋಸೆ ಬೇಕಿತ್ತು.
ಅ: ಅದು ಬೇಡ ಸರ್
ಗುಂಡ: ಯಾಕೆ
ಅ: ನಿಮ್ಮ. ದೇಹದ ಅರೋಗ್ಯಕ್ಕೆ ಅನುಗುಣವಾಗಿ ನಿಮಗೆ ಬೊಜ್ಜು ಮತ್ತೆ ವಾಯು ಸಮಸ್ಯೆ ಇರುವುದರಿಂದ ಅದು ಬೇಡ.
ಗುಂಡ: ಹೌದಾ...ನನಗೆ ತಿನ್ನೋಕೆ ಏನಿದೆ?
ಅ: ನಿಮ್ಮ. ಇಷ್ಟದ ರವಾ ಇಡ್ಲಿ ಇದೆ.
ಗುಂಡ: ನನಗೆ ಇಷ್ಟ ಅಂತ ಹೇಗೆ ಗೊತ್ತಾಯ್ತು?
ಅ:ನೀವು ಹೋದವಾರ ಸದಾಶಿವನಗರ ಸ್ವಪ್ನಾ ಬುಕ್ ಹೌಸ್ ನಲ್ಲಿ "ರವಾ ಇಡ್ಲಿ ಮಾಡುವ ವಿಧಾನಗಳು" ಎಂಬ ಪುಸ್ತಕ ಖರೀದಿ ಮಾಡಿದಿರಲ್ಲವೆ?
ಗುಂಡ: ನಿಜ, ರವಾ ಇಡ್ಲಿ ಕಳಿಸಿ.
ಅ: ನಿಮ್ಮ ಮನೆಯಲ್ಲಿ 7 ಜನ ಇದ್ದಿರಿ. 14 ಇಡ್ಲಿ ಸಾಕು. 350 ರೂಪಾಯಿ ಆಗುತ್ತದೆ.
ಗುಂಡ: ಸರಿ ನಾ ಕ್ರೆಡಿಟ್ ಕಾರ್ಡ್ ಕೊಡ್ತೀನಿ.
ಅ: ಬೇಡ ಸಾರ್, ನಿಮ್ಮ ಸಂಬಳದಲ್ಲಿ ಎಲ್ಲಾ ಖರ್ಚು ಹೋಗಿ ನಿನ್ನೆ ನಿಮ್ಮ ಮನೆ ಲೋನ್ 12,357.50 ಕಟ್ ಆಗಿ ಈಗ ಬರಿ 180 ರೂಪಾಯಿ ಇದೆ.
ಗುಂಡ: ತೊಂದರೆ ಇಲ್ಲ. ನನ್ನ ಹತ್ತಿರ ATM ಕಾರ್ಡ ಇದೆ.
ಅ: ಸಾರಿ ಸರ್, ಅದರಲ್ಲಿ ಬರೀ 30 ರೂಪಾಯಿ ಇದೆ.
ಗುಂಡ: ಸರಿ ನಾ ಕ್ಯಾಶ್ ಕೊಡ್ತೇನೆ. ರವಾ ಇಡ್ಲಿ ಬರೋಕೆ ಎಷ್ಟು ಹೊತ್ತಾಗುತ್ತೆ?
ಅ: 45 ನಿಮಿಷ ಅಗುತ್ತೆ. ನೀವು ಸುಮ್ಮನೆ ಕಾಯಬೇಕು . ಅದರ ಬದಲು ನಿಮ್ಮ ಹೀರೋ ಹೊಂಡ KA 02 EA 3641 ಗಾಡಿ ಇದೆ ಅಲ್ವಾ. ಅದರಲ್ಲಿ ಬಂದು ತೆಗೆದು ಕೊಂಡು ಹೋಗಬಹುದಲ್ವಾ?
ಗುಂಡ: ಅದು ನಿಮಗೆ ಗೊತ್ತಾ? ಸರಿ 10 ರವಾ ಇಡ್ಲಿಗೆ ಅರ್ಧ ಲೀ ಪೆಪ್ಸಿ free ಅಂತ ಆಫರ್ ಇದೆ ಅಲ್ವಾ?
ಅ: ಹೌದು ಸರ್, ಆದರೆ ನಿಮಗೆ ಕೊಡೋಕೆ ಆಗೋಲ್ಲ. ಹೋದ ವಾರ ರಾಮಯ್ಯ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಗೆ ಅಂತಾ ಹೋದಾಗ ನಿಮ್ಮ. ಶುಗರ್ ಲೆವೆಲ್ ಜಾಸ್ತಿ ಆಗಿದೆ ಅಂತ ಡಾಕ್ಟರ ಸುರೇಶ್ ರಾವ್ ಹೇಳಿದ್ದಾರಲ್ವಾ?
ಗುಂಡ: ನಿಮ್ಮ. ಅಜ್ಜಿ ...
ಅ: ಸರ್ ಹಾಗೆಲ್ಲ ಕೆಟ್ಟದಾಗಿ ಮಾತಾಡಬೇಡಿ. 1999 ರಲ್ಲಿ ಇಂದಿರಾನಗರದಲ್ಲಿ ಗಲಾಟೆ ಆದಾಗ ನೀವು ಇದೇ ರೀತಿ ಕೆಟ್ಟದಾಗಿ ಮಾತಾಡಿದ್ದಕ್ಕೆ ಪೋಲಿಸನವರು 500 ರೂಪಾಯಿ ದಂಡ ಹಾಕಿದ್ದು ನೆನಪಿದೆಯಾ?
ಗುಂಡ ಸುಸ್ತೋ ಸುಸ್ತು.
ಇದೇ ಡಿಜಿಟಲ್ ಇಂಡಿಯಾ.
Sunday, February 4, 2024
🌹 ನಿತ್ಯಸತ್ಯ ಜ್ಞಾನದ ಭಂಡಾರ🌹
🌹 ನಿತ್ಯಸತ್ಯ ಜ್ಞಾನದ ಭಂಡಾರ🌹
ಇದನ್ನ ಯಾವ ಪುಣ್ಯಾತ್ಮ ಬರೆದಿದ್ದು ಅಂತ ಗೊತ್ತಿಲ್ಲ. ವಾಟ್ಸಪ್ ಲ್ಲಿ ಬಂತು. ಲೇಖಕರ ಹೆಸರಿರ್ಲಿಲ್ಲ. ಅರ್ಥ ಮಾಡ್ಕೊಂಡ್ರೆ ತುಂಬ ಚೆನಾಗಿದೆ.
ಮಗಳು:- ಅಮ್ಮ ಪ್ರಪಂಚದ 6 ಹೆಸರಾಂತ ವೈದ್ಯರುಗಳು ಯಾರಮ್ಮ?
ತಾಯಿ:- ಮಗಳೇ ಪ್ರಪಂಚದ 6 ಹೆಸರಾಂತ ವೈದ್ಯರುಗಳ ಬಗ್ಗೆ ಸರಿಯಾಗಿ ಗಮನವಿಟ್ಟು ಕೇಳು ಒಳ್ಳೆಯ ಪ್ರಶ್ನೆಯನ್ನೇ ಕೇಳಿದ್ದೀಯಾ
1 ಸೂರ್ಯನ :-ಬೆಳಕು ಅಥವಾ ಸೂರ್ಯನ ಕಿರಣಗಳು
ದಿನನಿತ್ಯ ಬೆಳಿಗ್ಗೆ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳಬೇಕು ಅಥವಾ ನಿಧಾನವಾಗಿ ನಡೆಯಬೇಕು ಸೂರ್ಯನ ಬೆಳಕು ಭಗವಂತನ ಶಕ್ತಿ ಆ ದಿವ್ಯಶಕ್ತಿ ನಮ್ಮ ದೇಹದಲ್ಲಿ ಡಿ ವಿಟಮಿನ್ ಆಗಿ ಪ್ರವೇಶಿಸಿ ದಿನನಿತ್ಯ ನವಚೈತನ್ಯವನ್ನು ಉಂಟುಮಾಡುತ್ತದೆ
2 .ವಿಶ್ರಾಂತಿ:- ನಾವು ದಿನನಿತ್ಯ ಅತಿಯಾದ ಕೆಲಸಗಳನ್ನು ಮಾಡುತ್ತಿರುವಾಗ ನಮ್ಮ ದೇಹದ ಶಕ್ತಿ ಕುಂದುತ್ತದೆ ಅದಕ್ಕಾಗಿ ಸಾಧ್ಯವಾದಷ್ಟು ಸಮಯ ಸಿಕ್ಕಾಗ ವಿಶ್ರಾಂತಿ ಪಡೆಯಬೇಕು ದೇಹದ ಅಂಗಾಂಗಗಳ ವಿಶ್ರಾಂತಿಯು ದೇಹವನ್ನು ಚೈತನ್ಯ ದಲ್ಲಿಡಿತ್ತದೆ
3. ವ್ಯಾಯಾಮ:- ಭಗವಂತ ನಮ್ಮ ದೇಹವನ್ನು ಅದ್ಭುತವಾಗಿ ಸೃಷ್ಟಿಸಿದ್ದಾನೆ 72000 ನಾಡಿಗಳಿ ವೆ ಇಡೀ ಪೃಥ್ವಿಯ ಎಲ್ಲಾ ಮಾಹಿತಿಗಳನ್ನು ನಮ್ಮ ಮೆದುಳಿನ ಚಿಪ್ಪಿನಲ್ಲಿ ಇಟ್ಟು ತುಂಬಿದರೆ ಅದು ಕೇವಲ ಶೇಕಡ ಒಂದರಷ್ಟು ಮಾತ್ರ ಎನ್ನುವುದು ಎಷ್ಟು ಅದ್ಭುತ ಭಗವಂತ ನಮ್ಮನ್ನು ದೇವರ ಸ್ವರೂಪ ದಂತೆ ಸರ್ವಶಕ್ತಿಯನ್ನು ಕೊಟ್ಟು ಸೃಷ್ಟಿಸಿದ್ದಾನೆ ಇಂತಹ ಅದ್ಭುತವಾದ ದೇಹವನ್ನು ದಿನನಿತ್ಯದ ಚಟುವಟಿಕೆಗಾಗಿ ವ್ಯಾಯಾಮ ತುಂಬಾ ಅವಶ್ಯಕತೆ
4. ಮಿತ :-ಆಹಾರ ದೇಹಕ್ಕೆ ಅವಶ್ಯಕತೆಯಾದಷ್ಟು ಮಾತ್ರ ಪ್ರೋಟಿನ್ ಯುಕ್ತ ಆಹಾರ ಸೇವಿಸಬೇಕು ಹಣ್ಣು ಸೊಪ್ಪು ತರಕಾರಿ ಹಾಗೂ ಒಣ ಹಣ್ಣುಗಳು ದೇಹಕ್ಕೆ ಅವಶ್ಯಕತೆ ಇವೆಲ್ಲವನ್ನು ಮಿತವಾಗಿ ಸೇವಿಸಬೇಕು ಈ ರೀತಿ ನಿತ್ಯ ಸೇವಿಸಿದಾಗ ದೇಹವು ಚೈತನ್ಯ ಪೂರಕವಾಗಿ ನಮ್ಮ ದೇಹದ ಎಲ್ಲ ಅಂಗಾಂಗಗಳು ಆರೋಗ್ಯಪೂರ್ಣವಾಗಿರಲು
ಸಾಧ್ಯವಾಗುತ್ತದೆ
5.ಆತ್ಮಸ್ಥೈರ್ಯ:- ನಾವು ಏನೇ ಕಳೆದುಕೊಂಡರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಆತ್ಮಸ್ಥೈರ್ಯ ನಮಗೆ ಸದಾ ಸಂಜೀವಿನಿ ಜೀವರಕ್ಷಕ ಆಪದ್ಬಾಂಧವ ನಾವು ಸದಾ ಚಟುವಟಿಕೆಯಿಂದ ಇರಲು ನೆರವಾಗುತ್ತದೆ ಭಯ ಭೀತಿ
ಸಂಕುಚಿತ ಮನೋಭಾವ
ಗಾಬರಿ ನಾಳೆ ಏನಾಗುತ್ತದೋ ಏನೋ ಎಂಬ ಅನುಮಾನ ಸದಾ ಕೆಟ್ಟದ್ದನ್ನೇ ಯೋಚಿಸುವುದು
ಪ್ರಸ್ತುತ ಮಹಾಮಾರಿಯ ಬಗ್ಗೆ ಚಿಂತಿಸುವುದು ಇವೆಲ್ಲವೂ ಋಣಾತ್ಮಕ ಚಿಂತನೆ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ
ಆತ್ಮಸ್ಥೈರ್ಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಆದ್ದರಿಂದ ಧನಾತ್ಮಕ ಚಿಂತನೆಗಳು ಆತ್ಮಸ್ಥೈರ್ಯದ ಜೀವನದ ಆಧಾರ ಸ್ತಂಭಗಳು
6. ಸ್ನೇಹಿತರು:- ಜೀವನದಲ್ಲಿ ಕನಿಷ್ಠ ಐದಾರು ಜನ ಉತ್ತಮ ಸ್ನೇಹಿತರನ್ನು ಪ್ರತಿಯೊಬ್ಬರು ಹೊಂದಬೇಕು ಅವರೊಡನೆ ಪ್ರತಿನಿತ್ಯ ಭೇಟಿಯಾಗಲಿ ಅಥವಾ ದೂರವಾಣಿಯಲ್ಲಾಗಲಿ ಮಾತನಾಡಬೇಕು ಸ್ನೇಹಿತರೊಡನೆ ಮುಕ್ತವಾಗಿ
ಮಾತನಾಡುವುದರಿಂದ ಮನಸ್ಸು ಹಗುರವಾಗುತ್ತದೆ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ದಿನನಿತ್ಯ ಸದಾ ನಾವು ಚಟುವಟಿಕೆಯಿಂದ ಇರಲು
ಸ್ನೇಹ ಸಂಜೀವಿನಿಯಂತೆ ಕೆಲಸ ಮಾಡುತ್ತದೆ
ತಾಯಿ :- ಮಗಳೇ. ಪ್ರಪಂಚದ ಅತ್ಯುತ್ತಮ ವೈದ್ಯರ ಬಗ್ಗೆ ಅರ್ಥವಾಯಿತೇ
Thursday, February 1, 2024
ಎಲ್ಲಿಯವರೆಗೆ ನೀವು ಪ್ರಾಮಾಣಿಕರಾಗಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ನಾವು ನಿಮ್ಮನ್ನು ನಂಬುವ ಮಾತೇ ಇಲ್ಲ."
ಹಾಂಕಾಂಗ್ನಲ್ಲಿರುವ ಸ್ನೇಹಿತನಿಂದ ತಿಳಿದುಬಂದ
*'ಬಹಳ ಆಘಾತಕಾರಿ ಸಂದೇಶ'*
ದಯವಿಟ್ಟು ಪೂರ್ಣ ಓದಿ 👇
*ಹಾಂಗ್ ಕಾಂಗ್ ನಲ್ಲಿ ಬಹಳಷ್ಟು ಜನರು ಅಲ್ಲಿರುವ ಭಾರತೀಯರೊಂದಿಗೆ ಹೆಚ್ಚು ಸ್ನೇಹ ಬೆಳೆಸುವುದಿಲ್ಲ ಮತ್ತು ಕೆಲವರು ಭಾರತೀಯರನ್ನು ದ್ವೇಷಿಸುತ್ತಾರೆ!*
ಆದರೆ *ಯಾಕೆ??*
ಅಲ್ಲಿ ವಾಸಿಸುವ ನನ್ನ ಸ್ನೇಹಿತರೊಬ್ಬರು ಹೀಗೆ ವಿವರಿಸಿದ್ದಾರೆ:
ಹಾಂಗ್ ಕಾಂಗ್ ನಲ್ಲಿ ಸುಮಾರು ಒಂದು ವರ್ಷ ಕಳೆದ ನಂತರ, ನಾನು ಅನೇಕ ಸ್ಥಳೀಯರೊಂದಿಗೆ ಸ್ನೇಹ ಬೆಳೆಸಿದ್ದೆ. ಆದರೆ ಇಲ್ಲಿನ ಜನರು ನನ್ನೊಂದಿಗೆ ಸಂಶಯಮುಕ್ತರಾಗಿರಲಿಲ್ಲ ಮತ್ತು ನನ್ನಿಂದ ಅಂತರವನ್ನು ಕಾಯ್ದುಕೊಂಡಿದ್ದರು!!
ಇಲ್ಲಿಯ ಯಾವುದೇ ಸ್ಥಳೀಯ ಸ್ನೇಹಿತ ನನ್ನನ್ನು ತನ್ನ ಮನೆಗೆ ಆಹ್ವಾನಿಸಲಿಲ್ಲ ಮತ್ತು ನಮ್ಮ ಸ್ನೇಹ ಕೇವಲ ಔಪಚಾರಿಕವಾಗಿರುತ್ತಿತ್ತು. ನನ್ನ ಮತ್ತು ಅವರ ನಡುವೆ ಹಾರ್ದಿಕ ಸ್ನೇಹ ಬೆಳೆಸುವ ದಿಶೆಯಲ್ಲಿ ನನ್ನ ಪ್ರಯತ್ನ ಪ್ರಾಮಾಣಿಕವಾಗಿದ್ದರೂ ಕೂಡ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿರಲಿಲ್ಲ.
ಆಗಾಗ್ಗೆ ಅದರ ಬಗ್ಗೆ ನನಗೆ ಆಶ್ಚರ್ಯವಾಗುತ್ತಿತ್ತು. ಒಂದು ದಿನ ನಾನು ಸಾಹಸ ಮಾಡಿ ನನ್ನ ಸಹೋದ್ಯೋಗಿ ಸ್ನೇಹಿತನನ್ನು ಇದರ ಬಗ್ಗೆ ಕೇಳಿಯೇಬಿಟ್ಟೆ.
ಮೊದಲು ಉತ್ತರಿಸಲು ಸ್ವಲ್ಪ ಹಿಂಜರಿಕೆ ಮಾಡಿದ ಆ ನನ್ನ ಹಾಂಗ್ ಕಾಂಗ್ ಸ್ನೇಹಿತ, ನಂತರ ನನ್ನ ಒತ್ತಾಯಕ್ಕೆ ಮಣಿದು ಆಡಿದ ಮಾತುಗಳು ಮತ್ತು ಆ ಗಂಭೀರ ವಿಷಯಗಳು ನನ್ನನ್ನು ಅಚ್ಚರಿಗೊಳಿಸಿತು, ಮಾತ್ರವಲ್ಲ ಅವನ ಅಭಿಪ್ರಾಯ ಕೇಳಿ ನನಗೆ ಬಹಳ ಬಹಳ ನಾಚಿಕೆಯಾಯಿತು.
ಹಾಂಗ್ ಕಾಂಗ್ ಸ್ನೇಹಿತ ಕೇಳಿದ್ದು *"200 ವರ್ಷಗಳ ಕಾಲ ಆಳ್ವಿಕೆ ನಡೆಸಲು ಭಾರತದಲ್ಲಿ ಎಷ್ಟು ಬ್ರಿಟಿಷರು ವಾಸಿಸುತ್ತಿದ್ದರು?"* ನಾನೆಂದೆ "ಸುಮಾರು 10,000 ಬ್ರಿಟಿಷರಿರಬಹುದು"
"ಹಾಗಾದರೆ 32 ಕೋಟಿ ಭಾರತದ ಜನರನ್ನು ಹಿಂಸಿಸಿದವರು, ಮತ್ತು ಇಷ್ಟು ವರ್ಷಗಳ ಕಾಲ ಆಳಿದವರು ಯಾರು? ಅವರು ನಿಮ್ಮ ಸ್ವಂತ ಜನರೇ ತಾನೇ??"
"ಜಲಿಯನ್ ವಾಲಭಾಗ್ ನಲ್ಲಿ ಜನರಲ್ ಡೈಯರ್ #ಫೈರ್ ಎಂದು ಹೇಳಿದಾಗ 1300 ನಿರಾಯುಧ ಜನರನ್ನು ಹೊಡೆದು ಕೊಂದವರು ಯಾರು?? ಅಲ್ಲಿ ಬ್ರಿಟಿಷ್ ಸೈನ್ಯವೇನೂ ಇರಲಿಲ್ಲವಲ್ಲ!
*ಒಬ್ಬನೇ ಒಬ್ಬ ಗನ್ಮ್ಯಾನ್ ಏಕೆ ಹಿಂದೆ ತಿರುಗಿ ಜನರಲ್ ಡೈಯರ್ನನ್ನು ಕೊಲ್ಲಲು ಸಾಧ್ಯವಾಗಲಿಲ್ಲ??"*
ಮುಂದುವರೆದು ಆತ ಕೇಳಿದ:
"ಟರ್ಕಿ ಅಥವಾ ಮಧ್ಯ ಏಷ್ಯಾದಿಂದ ಎಷ್ಟು ಮೊಘಲರು ಮತ್ತು ಇತರರು ಭಾರತಕ್ಕೆ ಬಂದರು? ಹೇಗೆ ಅವರು ಸುಮಾರು 800 ವರ್ಷಗಳ ಕಾಲ ಭಾರತವನ್ನು ಲೂಟಿ ಮಾಡಿದರು ಮತ್ತು ಭಾರತವನ್ನು ಆಳಿದರು ಮತ್ತು ಭಾರತೀಯರನ್ನು ಗುಲಾಮರನ್ನಾಗಿ ಇಟ್ಟುಕೊಂಡರು???"
"ಹೇಗೆ ನಿಮ್ಮ ಸ್ವಂತ ಜನರನ್ನು ತಮ್ಮ ಇಸ್ಲಾಮ್ ಮತಕ್ಕೆ ಮತಾಂತರಿಸಿದರು ಮತ್ತು ಅದೇ ಮತಾಂತರಿಗಳನ್ನು ನಿಮ್ಮ ವಿರುದ್ಧ ನಿಲ್ಲುವಂತೆ ಮಾಡಿದರು??"
ಅವನ ಈ ಎಲ್ಲ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವೇ ಇಲ್ಲವಾಗಿತ್ತು, ಏನು ಹೇಳಬೇಕೆಂದೇ ತೋಚಲಿಲ್ಲ..
ಅವನೇ ಹೇಳಿದ:
"ಉತ್ತರ ಇಷ್ಟೇ..
ಹಣ ಮತ್ತು ಅಧಿಕಾರದ ದುರಾಸೆಯಲ್ಲಿ ಆ ವಿದೇಶಿಗರ ಅಮಿಷಕ್ಕೊಳಗಾಗಿ ನಿಮ್ಮವರು ತಮ್ಮ ಸಹೋದರರನ್ನೇ ಹಿಂಸಿಸಲು ಮತ್ತು ಲೂಟಿ ಮಾಡಲು ಶತ್ರುಗಳೊಂದಿಗೇ ಸೇರಿಕೊಂಡರಲ್ಲವೇ??
ಈಗ ಅವರು ವಿದೇಶಿಯರು ಎಂದು ಹೇಳಬೇಡಿ!
*ನಿಮ್ಮ ಸ್ವಂತ ಜನರೇ, ಭಾರತೀಯರೇ ವಿದೇಶಿಯರ ದಾಸರಾಗಿ, ಕೂಲಿಗಳಾಗಿ, ಸೈನಿಕರಾಗಿ ಶತಮಾನಗಳಿಂದ ಹಣ, ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ತಮ್ಮ ಸ್ವಂತ ಸಹೋದರ ಸಹೋದರಿಯರನ್ನೇ ಕೊಂದು ಅತ್ಯಾಚಾರ ಮಾಡುತ್ತಿದ್ದಾರೆ, ನಿಜವಲ್ಲವೇ??"*
"ದೇಶದ್ರೋಹದಲ್ಲಿ ನಿಮ್ಮ ಜನರ ಪಾತ್ರದ ಬಗ್ಗೆ ನಮಗೆ ಬಲವಾದ ತಿರಸ್ಕಾರವಿದೆ. ನಮ್ಮಲ್ಲಿ ಅನೇಕರು ನಿಮ್ಮ *ಸ್ವಾರ್ಥ, ದುರಾಸೆ ಮತ್ತು ದ್ರೋಹದ ಕಾರಣಕ್ಕಾಗಿ* ನಿಮ್ಮನ್ನು ಬಲವಾಗಿ ದ್ವೇಷಿಸುತ್ತಾರೆ."
"ನಮ್ಮಲ್ಲಿ ಅಂತಹ ಜನರು ಇಲ್ಲವೇ ಇಲ್ಲ ಎಂದಲ್ಲ, ಆದರೆ *ನಾವು ನಮ್ಮ ಮೇಲೆ ದಬ್ಬಾಳಿಕೆ ನಡೆಸುವವರೊಂದಿಗೆ ಸಹಕರಿಸುವುದಿಲ್ಲ. ನಮ್ಮ ದೇಶ ಅಥವಾ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡುವ ಅಥವಾ ವರ್ತಿಸುವ ಜನರನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದು ನಾನು ನಿಮಗೆ ಪ್ರಮಾಣ ಮಾಡಿ ಹೇಳಬಲ್ಲೆ!*
ಕಮ್ಯುನಿಸ್ಟ್ ದೇಶವಾಗಿದ್ದರೂ ಚೀನಾದಲ್ಲಿ ಅಂತಹ ಜನರು ನಿಮಗೆ ಕಾಣುವುದಿಲ್ಲ!
*ನಾವು ಎಂದಿಗೂ ನಮ್ಮ ರಾಷ್ಟ್ರಕ್ಕೆ ದ್ರೋಹ ಮಾಡಲು ಸಾಧ್ಯವೇ ಇಲ್ಲ. ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ನಮಗೆ ಸದಾ ಹೆಮ್ಮೆ ಇದೆ.*
ನಾವು ಸಾಧ್ಯವಾದಷ್ಟು ಭಾರತೀಯರ ಬಗ್ಗೆ ಹೆದರುವುದಿಲ್ಲ ??
ಬ್ರಿಟಿಷರು ನಮ್ಮ ದೇಶ ಹಾಂಕಾಂಗ್ಗೆ ಬಂದಾಗ, ಒಬ್ಬ ವ್ಯಕ್ತಿಯೂ ಅವರ ಸೈನ್ಯಕ್ಕೆ ಸೇರಲಿಲ್ಲ ಏಕೆಂದರೆ ನಮ್ಮ ಪೂರ್ವಜರು ತಮ್ಮ ಜನರ ವಿರುದ್ಧ ಹೋರಾಡಲು ಸಿದ್ಧರಿರಲಿಲ್ಲ??
*ಸ್ವಲ್ಪವೂ ಯೋಚಿಸದೇ ಸಂಪೂರ್ಣವಾಗಿ ಮಾರಾಟವಾಗಲು ಸಿದ್ಧರಾಗಿರುವ ಭಾರತೀಯರ ದ್ವಿಪಾತ್ರ ಇದು. ಇಂದಿಗೂ ಭಾರತದಲ್ಲಿ ಅದೇ ನಡೆಯುತ್ತಿದೆ! ಸ್ವತಂತ್ರಗೊಂಡ ಮೇಲೂ ಭಾರತೀಯರ ಪರಿಸ್ಥಿತಿ ಮತ್ತು ಮನಸ್ಸು ಬದಲಾಗಲೇ ಇಲ್ಲ.*
ಪ್ರಾಕೃತಿಕ, ಆಕ್ರಾಮಕ ಅಥವಾ ಇನ್ನಾವುದೇ ಸಮಸ್ಯೆಗಳಿರಲಿ *ನೀವು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಎರಡನೇ ಸ್ಥಾನವನ್ನು ನೀಡುತ್ತೀರಿ ಮತ್ತು ನಿಮ್ಮ ಸ್ವಂತ ಲಾಭಕ್ಕಾಗಿ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಸೇರಲು ನಿಮಗೆ ಹಿಂಜರಿಕೆಯೇ ಇಲ್ಲ.*
ದೇಶದ ಸಂಕಷ್ಟದ ಸಮಯದಲ್ಲಿಯೂ ನಿಮ್ಮಲ್ಲಿ ಮೂಡುವ ಮೊದಲ ಭಾವನೆ *ದೇಶ ನಾಶವಾಗಿ ಹೋದರೂ 'ನಾನು ಮತ್ತು ನನ್ನ ಕುಟುಂಬ ಮೊದಲು ಉಳಿಯಬೇಕು!!'.* ಎನ್ನುವುದು.
ಎಲ್ಲಿಯವರೆಗೆ ನೀವು ಪ್ರಾಮಾಣಿಕರಾಗಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ನಾವು ನಿಮ್ಮನ್ನು ನಂಬುವ ಮಾತೇ ಇಲ್ಲ."
"ಹಾಂಗ್ ಕಾಂಗ್ ನ ಆ ಸ್ನೇಹಿತ ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ನನಗೆ ಅವರೇನೆಂದು ಮತ್ತು ನಾವೇನೆಂದು ಅರ್ಥವಾಗಿ ಹೋಗಿತ್ತು."
---
ಸ್ನೇಹಿತರೇ,
ಇದು ನಮಗೆಲ್ಲಾ ನಾಚಿಕೆಗೇಡಿನ ವಿಷಯವಲ್ಲವೇ?
ನಮಗೆ ಗಂಭೀರ ಆತ್ಮಾವಲೋಕನದ ಅಗತ್ಯವಿಲ್ಲವೇ.
ಈ ಬರಹ ನಿಮ್ಮ ಮನಸ್ಸನ್ನು ಮುಟ್ಟಿದ್ದಲ್ಲಿ ಆದಷ್ಟು ಜನರಿಗೆ ಮತ್ತು ಗುಂಪುಗಳಿಗೆ ಫಾರ್ವರ್ಡ್ ಮಾಡಿ ಭಾರತೀಯರನ್ನು ಎಚ್ಚರಿಸುವ ಕಾರ್ಯದಲ್ಲಿ ಕೈಜೋಡಿಸಿ.
Saturday, December 9, 2023
ತಂಧೆ ತಾಯಿಯ ಮೇಲೆ ಪ್ರೀತಿ ಇರುವವರು ಓದಿ ಶೇರ್ ಮಾಡುವ ಅಕ್ಷರಗಳು
ತಂಧೆ ತಾಯಿಯ ಮೇಲೆ ಪ್ರೀತಿ ಇರುವವರು ಓದಿ ಶೇರ್ ಮಾಡುವ ಅಕ್ಷರಗಳು
*ತಾಯಿ : ಕಾಮಧೇನು*
*ತಂದೆ : ಕಲ್ಪವೃಕ್ಷ*
*ತಾಯಿ : ಸೃಷ್ಠಿ*
*ತಂದೆ : ದೃಷ್ಟಿ*
*ತಾಯಿ : ಪ್ರಾಣ*
*ತಂದೆ : ತ್ರಾಣ*
*ತಾಯಿ : ವ್ಯಕ್ತಿತ್ವ*
*ತಂದೆ : ಅಸಿತ್ತ್ವ*
*ತಾಯಿ : ಸಂಸ್ಕಾರ*
*ತಂದೆ : ಸಂಪ್ರದಾಯ*
*ತಾಯಿ : ಆದರ್ಶ*
*ತಂದೆ : ಆಶ್ರಯ*
*ತಾಯಿ : ಚೄೆತನ್ಯ*
*ತಂದೆ : ಸಾಮರ್ಥ್ಯ*
*ತಾಯಿ : ಕನಿಕರ*
*ತಂದೆ : ಕಾಳಜಿ*
*ತಾಯಿ : ಒಲವು*
*ತಂದೆ : ಗೆಲುವು*
*ತಾಯಿ : ದಯೆ*
*ತಂದೆ : ಧೄೆರ್ಯ*
*ತಾಯಿ : ಮಮತೆ*
*ತಂದೆ : ಹಣತೆ*
*ತಾಯಿ : ಗುಡಿ*
*ತಂದೆ : ಗೋಪುರ*
*ತಾಯಿ : ನಂಬಿಕೆ*
*ತಂದೆ : ವಿಶ್ವಾಸ*
*ತಾಯಿ : ಹೂವು*
*ತಂದೆ : ಪರಿಮಳ*
*ತಾಯಿ : ಅಡಿಪಾಯ*
*ತಂದೆ : ಮೇಲ್ಚಾವಣಿ*
*ತಾಯಿ : ಸ್ಫೂರ್ತಿ*
*ತಂದೆ : ಭರವಸೆ*
*ತಾಯಿ : ಸಾಕ್ಷರತೆ*
*ತಂದೆ : ಸಾಧನೆ*
*ತಾಯಿ : ಜನ್ಮ*
*ತಂದೆ : ಜೀವನ*
*ತಾಯಿ : ದೀಪ*
*ತಂದೆ : ದ್ವೀಪ*
*ತಾಯಿ : ರಕ್ಷಕಿ*
*ತಂದೆ : ಶಿಕ್ಷಕ*
*ತಾಯಿ : ಆರೄೆಕೆ*
*ತಂದೆ : ಆತ್ಮೀಯ*
*ತಾಯಿ : ಕನಸು*
*ತಂದೆ : ನನಸು*
*"ನನ್ನ ತಾಯಿ ತಂದೆಗೆ ನನ್ನ ನಮನಗಳು"*
*🔘 ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡತನವಿರುತ್ತದೆಯೋ*
*ಆ ವ್ಯಕ್ತಿ*
*ತನಗರಿವಿಲ್ಲದಂತೆಯೇ ಬಹು ಎತ್ತರಕ್ಕೆ ಬೆಳೆಯುತ್ತಾನೆ.
Friday, November 24, 2023
*ಐಷಾರಾಮಿ*
*ಐಷಾರಾಮಿ*
👇 👇 👇 👇 👇
*60 ರ ದಶಕದಲ್ಲಿ ಕಾರು ಒಂದು ಐಷಾರಾಮಿಯಾಗಿತ್ತು ,
*70 ರ ದಶಕದಲ್ಲಿ ದೂರದರ್ಶನವು ಒಂದು ಐಷಾರಾಮಿಯಾಗಿತ್ತು,
*80 ರ ದಶಕದಲ್ಲಿ ಟೆಲಿಫೋನ್ ಒಂದು ಐಷಾರಾಮಿಯಾಗಿತ್ತು,
*90 ರ ದಶಕದಲ್ಲಿ ಕಂಪ್ಯೂಟರ್ ಒಂದು ಐಷಾರಾಮಿಯಾಗಿತ್ತು.
-
ಇನ್ನು ಮುಂದೆ ಐಷಾರಾಮಿಯೆಂದರೆ ವಿಹಾರಕ್ಕೆ ಹೋಗುವುದಲ್ಲ ಮತ್ತು
ಹೆಸರಾಂತ ಬಾಣಸಿಗರಿಂದ ತಯಾರಿಸಿದ ಆಹಾರವನ್ನು ಸೇವಿಸುವುದಲ್ಲ.
ನಮ್ಮ ಸ್ವಂತ ಹಿತ್ತಲಿನಲ್ಲಿ ಬೆಳೆದ ತಾಜಾ ಸಾವಯವ ಆಹಾರವನ್ನು ತಿನ್ನುವುದೇ ಐಷಾರಾಮಿ.
-
**ಐಷಾರಾಮಿಯೆಂದರೆ ನಮ್ಮ ಮನೆಯಲ್ಲಿ ಲಿಫ್ಟ್ ಇರುವುದಲ್ಲ ,
**ಐಷಾರಾಮಿಯೆಂದರೆ ಮನೆಯ 3-4 ಮಹಡಿಗಳ ಮೆಟ್ಟಿಲುಗಳನ್ನು ಕಷ್ಟವಿಲ್ಲದೆ ಹತ್ತಿ ಇಳಿಯುವ ಸಾಮರ್ಥ್ಯ,
**ಐಷಾರಾಮಿಯೆಂದರೆ ದೊಡ್ಡ ರೆಫ್ರಿಜರೇಟರನ್ನು ಖರೀದಿಸುವ ಸಾಮರ್ಥ್ಯವಲ್ಲ,
**ಐಷಾರಾಮಿಯೆಂದರೆ ಆಗಾಗ ಬೇಯಿಸಿದ ಆಹಾರವನ್ನು ದಿನಕ್ಕೆ 2-3 ಬಾರಿ ತಿನ್ನುವ ಸಾಮರ್ಥ್ಯ.
**ಐಷಾರಾಮಿಯೆಂದರೆ ಹೋಮ್ ಥಿಯೇಟರ್ ವ್ಯವಸ್ಥೆಯನ್ನು ಹೊಂದುವುದಲ್ಲ,
**ಹಿಮಾಲಯದ ಯಾತ್ರೆಯನ್ನು ವೀಕ್ಷಿಸುವುದಲ್ಲ,
**ಐಷಾರಾಮಿಯೆಂದರೆ ಹಿಮಾಲಯದ ಯಾತ್ರೆಯನ್ನು ಭೌತಿಕವಾಗಿ ಅನುಭವಿಸುವುದು,
**ಅಮೇರಿಕಾದ ಅತ್ಯಂತ ದುಬಾರಿ ಆಸ್ಪತ್ರೆಯಿಂದ ಐಷಾರಾಮಿ ಚಿಕಿತ್ಸೆ ಪಡೆಯುವುದಲ್ಲ.
-
ಹಾಗಾದರೆ ಈಗ ಐಷಾರಾಮಿ ಎಂದರೇನು ??
👉 ಆರೋಗ್ಯವಾಗಿರುವುದೇ ಐಷಾರಾಮಿ ,
👉 ಸಂತೋಷವಾಗಿರುವುದೇ ಐಷಾರಾಮಿ ,
👉 ದಾಂಪತ್ಯದಲ್ಲಿ ಆನಂದ ವಾಗಿರುವುದೇ ಐಷಾರಾಮಿ ,
👉 ಪ್ರೀತಿಯ ಕುಟುಂಬವನ್ನು ಹೊಂದುವುದೇ ಐಷಾರಾಮಿ ,
👉 ಪ್ರೀತಿಯ ಸ್ನೇಹಿತರೊಂದಿಗೆ ಇರುವುದೇ ಐಷಾರಾಮಿ ,
👉 ಮಾಲಿನ್ಯರಹಿತ ಸ್ಥಳದಲ್ಲಿ ವಾಸಿಸುವುದೇ ಐಷಾರಾಮಿ ,
ಈ ಎಲ್ಲಾ ಸಂಗತಿಗಳು ಅಪರೂಪವಾಗಿ ಮಾರ್ಪಟ್ಟಿವೆ ಮತ್ತು ಇವೇ *ನಿಜವಾದ* *"ಐಷಾರಾಮಿ*".
Saturday, November 18, 2023
ಯಾವುದನ್ನೂ ನಾಳೆಗೆ ಮುಂದೂಡಬೇಡಿ!ಈ ದಿನವನ್ನು ಅನುಭವಿಸಿ ಏಕೆಂದರೆ ನಾಳೆ ಎಂಬುದು ಎಂದಿಗೂ ಬರುವುದಿಲ್ಲ! ಪ್ರತಿ ದಿನ *ಇಂದು*(ಈದಿನ) ಆಗಿ ಬರುತ್ತದೆ
ಯಾವುದನ್ನೂ ನಾಳೆಗೆ ಮುಂದೂಡಬೇಡಿ!
ಈ ದಿನವನ್ನು ಅನುಭವಿಸಿ ಏಕೆಂದರೆ ನಾಳೆ ಎಂಬುದು ಎಂದಿಗೂ ಬರುವುದಿಲ್ಲ!
ಪ್ರತಿ ದಿನ *ಇಂದು*(ಈದಿನ) ಆಗಿ ಬರುತ್ತದೆ.
ಯಾರಬಗ್ಗೆಯೂ ಬೇಸರಿಸ ಬೇಡಿ, ಅವರನ್ನು ಬದಲಿಸಲೂ ಪ್ರಯತ್ನಿಸಬೇಡಿ.
ಬೇಸರಿಸುವುದರಿಂದ ನಿಮಗೇ ಹಾನಿ, ಪ್ರತಿಯೊಬ್ಬರೂ ಅವರದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ,
ಸಹನೆ ಶಾಂತಿಗೆ ದಾರಿ.*
*ಸರಳತೆ ಸುಖಜೀವನಕ್ಕೆ ದಾರಿ.*
ಈ ಜೀವನವೇ ಒಂದು ಕನಸು! ಇದನ್ನು ಸುಂದರ ಕನಸಾಗಿಸಿಕೊಳ್ಳುವ ಶಕ್ತಿ ನಿಮ್ಮಲ್ಲೇ ಇದೆ. ಪಟ್ಟು ಬಿಡದ ಪ್ರಯತ್ನಿಸಿ, ಆದರೆ ಜೀವನ ಕನಸು ಎಂಬುದ ಮರೆಯದಿರಿ. ಏಕೆಂದರೆ ಇಲ್ಲಿ ಯಾವುದೂ ಶಾಶ್ವತವಲ್ಲ. ಈ ಸತ್ಯವ ನೆನಪಿನಲ್ಲಿರಿಸಿಕೊಂಡರೆ ಚಿಂತಿಸುವ ಅಗತ್ಯವೂ ಇರುವುದಿಲ್ಲ.
Tuesday, October 17, 2023
ಫ್ರಿಜ್ ವಸ್ತುಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವೇನು? ಆದರೆ ಇದೆ..
*ಭಾರತೀಯ ಮಹಿಳೆಯರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಮಾಣ: ಫ್ರಿಡ್ಜ್ನಲ್ಲಿರುವ ವಸ್ತುಗಳನ್ನು ಶೀಘ್ರದಲ್ಲೇ ಬಳಸಿ._*
~~~~~~~~~~~~~~~~
◆ ಫ್ರಿಜ್ ವಸ್ತುಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವೇನು? ಆದರೆ ಇದೆ....
◆ ಹಾಲಿನಿಂದ ಮೊಸರು ಬೆಣ್ಣೆ ತನಕ
◆ ಸಾಗೋದಿಂದ ಸೋಯಾ ಸಾಸ್ಗೆ ಹಿಟ್ಟು,
◆ ಈಜು, ◆ ರವೆ, ◆ ಉಪ್ಪಿನಕಾಯಿ,
◆ ಹಪ್ಪಳ ◆ ಮಸಾಲೆಗಳು, ◆ ಒಣ ಹಣ್ಣುಗಳು,
◆ ತರಕಾರಿಗಳು ಅಥವಾ ಇನ್ನು ಏನೇ ಇರಲಿ ಅದನ್ನು ಫ್ರಿಜಲ್ಲಿ ತುರ್ಕೊದು!
ಮಹಿಳೆಯರ ಈ ವರ್ತನೆ. ಅಷ್ಟೇ ಅಲ್ಲ, ಅರ್ಧ ತಿಂದ ಹಣ್ಣು,
◆ ನಿನ್ನೆಯಿಂದ ಉಳಿದ ದಾಲ್, ■ ತರಕಾರಿಗಳು, ■ ಎರಡು ದಿನಗಳ ಹಿಂದಿನ ಚಪಾತಿ ■ ಮಸಾಲೆ, ■ ಎಲ್ಲಾ ರೀತಿಯ ಬೇಳೆಕಾಳುಗಳು, ■ ವಿವಿಧ ಮಸಾಲಾ ಪ್ಯಾಕೆಟ್ಗಳು ಸಹ ತೆರೆದಿರುತ್ತವೆ, ■ ಉಳಿದಿರುವ ತಂಪು ಪಾನೀಯಗಳು, ■ ಸಿಹಿತಿಂಡಿಗಳು, ಸಾಮಗ್ರಿಗಳ ಹೊರೆ! ಇವೆಲ್ಲವೂ ನಿಮ್ಮ ಫ್ರಿಡ್ಜ್ನಲ್ಲಿ ಸುಖವಾಗಿ ಬದುಕುತ್ತಿವೆ ಎಂಬ ತಪ್ಪು ಕಲ್ಪನೆ ನಿಮ್ಮಲ್ಲಿದೆ. ಆದರೆ ಇಲ್ಲಿ ಕ್ಯಾನ್ಸರ್ ವೈರಸ್ ಸೃಷ್ಟಿಯಾಗುತ್ತಿದೆ. ಇದುಕ್ಕೂ ಫ್ರಿಡ್ಜ್ ಗೂ ಯಾವುದೇ ಲಾಕ್ಷಣಿಕ ಸಂಬಂಧವಿಲ್ಲ ಎಂದು ಅನೇಕರಿಗೆ ತೋರುತ್ತದೆ. ಆದರೆ, ಈ ರೀತಿ ವರ್ತಿಸುವ 1000 ಜನರನ್ನು ಅಧ್ಯಯನ ಮಾಡಿದ ನಂತರ, ಅವರಲ್ಲಿ 538 ಮಂದಿ ಕ್ಯಾನ್ಸರ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಕಂಡುಬಂದಿದೆ, ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿದ್ದಾರೆ. ಆಶ್ಚರ್ಯವೆಂಬಂತೆ ಈ 538 ಸ್ಥಳಗಳಲ್ಲಿ ಮೇಲೆ ಹೇಳಿದಂತೆ ಫ್ರಿಜ್ ನಲ್ಲಿ ಸುಖದ ಲೋಕವೇ ನಡೆಯುತ್ತಿತ್ತು.
■ ಸಿಕ್ಕಾಪಟ್ಟೆ ಆಹಾರ ತಂದು ಫ್ರಿಜ್ ನಲ್ಲಿ ತುಂಬುವ ಬದಲು ನಿಮಗೆ ಬೇಕಾದುದನ್ನು ಮಾತ್ರ ತನ್ನಿ.
■ ಇಡ್ಲಿ, ದೋಸೆ, ■ ವಡಾ ಸಾಂಬಾರನ ತಾಜಾ ಹಿಟ್ಟು ತನ್ನಿ.. ಎಂಟು ದಿನದ್ದಲ್ಲ.
■ ಕಡಲೆ ಹಿಟ್ಟು,
■ ಜೋಳದ ಹಿಟ್ಟು,
■ ದ್ವಿದಳ ಧಾನ್ಯಗಳು
ಕೀಟಗಳಿಗೆ ಬಹಳ ಒಳಗಾಗುತ್ತವೆ. ಕಡಿಮೆ ತಂದು ಬಿಸಿಲಿನಲ್ಲಿ ಒಣಗಿಸಿ. ಎರಡು ದಿನಗಳಲ್ಲಿ ಸೇವಿಸುವಷ್ಟು ಹಣ್ಣು ಮತ್ತು ಎಲೆಗಳ ತರಕಾರಿಗಳನ್ನು ಮಾತ್ರ ತನ್ನಿ.
ಉಳಿದ ಹಾಲನ್ನು 48 ಗಂಟೆಗಳ ಒಳಗೆ ಬಳಸಿ ಉಳಿದದ್ದನ್ನು ಎಸೆಯಿರಿ! ಇಡಬೇಡಿ.
ಕೃಪೆ: ಡಾ. ಮಕರಂದ್ ಕರ್ಮಾಕರ್
*ಟಾಟಾ ಮೆಮೋರಿಯಲ್ ಆಸ್ಪತ್ರೆ, ಮುಂಬೈ*
ಈ ಸಂದೇಶವನ್ನು ಪ್ರತಿ ಮನೆಗೆ ಮತ್ತು ಮನೆಯಲ್ಲಿರುವ ಎಲ್ಲರಿಗೂ ತಲುಪಿಸಲು ವಿನಂತಿ. ಪ್ರೀತಿಪಾತ್ರರಿಗೆ ಕ್ಯಾನ್ಸರ್ ಬಂದು ಅಕಾಲದಲ್ಲಿ ಅಗಲಿದಾಗ ಆಗುವ ದುಃಖವನ್ನು ಅರ್ಥ ಮಾಡಿಕೊಳ್ಳಿ. 🙏*
*ವಾಸ್ತವವಾಗಿ ಫ್ರಿಡ್ಜ್ ಅನ್ನೇ ಬಿಸಾಡುವುದು ಉತ್ತಮ..*
Saturday, October 7, 2023
ಆರೋಗ್ಯವಾಗಿರಲು ಕೆಲವು ಸಲಹೆಗಳು. "ಸರ್ವಜನ ಸುಖೇನೋ ಭವಂತು"
*ಎಲ್ಲರಿಗೂ ಆರೋಗ್ಯ ದಿನದ ಶುಭಾಶಯಗಳು*
🄷🄰🄿🄿🅈 🄸🄽🅃🄴🅁🄽🄰🅃🄸🄾🄽🄰🄻
🄷🄴🄰🄻🅃🄷 🄳🄰🅈
ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು:
1. ಬಿಪಿ: 120/80
2. ನಾಡಿ: 70 - 100
3. ತಾಪಮಾನ: 36.8 - 37
4. ಉಸಿರು: 12-16
5. ಹಿಮೋಗ್ಲೋಬಿನ್: ಪುರುಷ -13.50-18
ಹೆಣ್ಣು - 11.50 - 16
6. ಕೊಲೆಸ್ಟ್ರಾಲ್: 130 - 200
7. ಪೊಟ್ಯಾಸಿಯಮ್: 3.50 - 5
8. ಸೋಡಿಯಂ: 135 - 145
9. ಟ್ರೈಗ್ಲಿಸರೈಡ್ಗಳು: 220
10. ದೇಹದಲ್ಲಿನ ರಕ್ತದ ಪ್ರಮಾಣ: PCV 30-40%
11. ಸಕ್ಕರೆ ಮಟ್ಟ: ಮಕ್ಕಳಿಗೆ (70-130) ವಯಸ್ಕರಿಗೆ: 70 - 115
12. ಕಬ್ಬಿಣ: 8-15 ಮಿಗ್ರಾಂ
13. ಬಿಳಿ ರಕ್ತ ಕಣಗಳು WBC: 4000 - 11000
14. ಕಿರುಬಿಲ್ಲೆಗಳು: 1,50,000 - 4,00,000
15. ಕೆಂಪು ರಕ್ತ ಕಣಗಳು ಆರ್ಬಿಸಿ: 4.50 - 6 ಮಿಲಿಯನ್.
16. ಕ್ಯಾಲ್ಸಿಯಂ: 8.6 -10.3 mg/dL
17. ವಿಟಮಿನ್ D3: 20 - 50 ng/ml.
18. ವಿಟಮಿನ್ B12: 200 - 900 pg/ml.
*40/50/60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು:*
*1- ಮೊದಲ ಸಲಹೆ:* ನಿಮಗೆ ಬಾಯಾರಿಕೆಯಿಲ್ಲದಿದ್ದರೂ ಅಥವಾ ಅವಶ್ಯಕತೆಯಿಲ್ಲದಿದ್ದರೂ ಸಹ ಯಾವಾಗಲೂ ನೀರನ್ನು ಕುಡಿಯಿರಿ, ದೊಡ್ಡ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನವು ದೇಹದಲ್ಲಿ ನೀರಿನ ಕೊರತೆಯಿಂದಾಗಿ. ದಿನಕ್ಕೆ ಕನಿಷ್ಠ 2 ಲೀಟರ್.
*2- ಎರಡನೇ ಸೂಚನೆ:* ದೇಹದಿಂದ ಸಾಧ್ಯವಾದಷ್ಟು ಕೆಲಸವನ್ನು ಮಾಡಿ, ನಡಿಗೆ, ಈಜು ಅಥವಾ ಯಾವುದೇ ರೀತಿಯ ಕ್ರೀಡೆಯಂತಹ ದೇಹದ ಚಲನೆ ಇರಬೇಕು.
*3-3 ನೇ ಸಲಹೆ:* ಕಡಿಮೆ ತಿನ್ನಿ... ಹೆಚ್ಚು ತಿನ್ನುವ ಹಂಬಲವನ್ನು ಬಿಡಿ... ಏಕೆಂದರೆ ಅದು ಎಂದಿಗೂ ಒಳ್ಳೆಯದನ್ನು ತರುವುದಿಲ್ಲ. ನಿಮ್ಮನ್ನು ವಂಚಿತಗೊಳಿಸಬೇಡಿ, ಆದರೆ ಪ್ರಮಾಣವನ್ನು ಕಡಿಮೆ ಮಾಡಿ. ಪ್ರೋಟೀನ್, ಕಾರ್ಬೋಹೈಡ್ರೇಟ್ ಭರಿತ ಆಹಾರಗಳನ್ನು ಹೆಚ್ಚು ಬಳಸಿ.
*4- ನಾಲ್ಕನೇ ಸೂಚನೆ:* ವಾಹನವು ಸಂಪೂರ್ಣವಾಗಿ ಅಗತ್ಯವಿಲ್ಲದಿದ್ದರೆ ಅದನ್ನು ಬಳಸಬೇಡಿ. ನೀವು ದಿನಸಿಗಳನ್ನು ತೆಗೆದುಕೊಳ್ಳಲು, ಯಾರನ್ನಾದರೂ ಭೇಟಿ ಮಾಡಲು ಅಥವಾ ಕೆಲಸ ಮಾಡಲು ಎಲ್ಲಿಯಾದರೂ ಹೋಗುತ್ತಿದ್ದರೆ, ನಿಮ್ಮ ಕಾಲುಗಳ ಮೇಲೆ ನಡೆಯಲು ಪ್ರಯತ್ನಿಸಿ. ಲಿಫ್ಟ್, ಎಸ್ಕಲೇಟರ್ ಬಳಸುವ ಬದಲು ಮೆಟ್ಟಿಲುಗಳನ್ನು ಹತ್ತಬೇಕು.
*5- 5ನೇ ಸೂಚನೆ* ಕೋಪವನ್ನು ಬಿಟ್ಟುಬಿಡಿ, ಚಿಂತಿಸುವುದನ್ನು ನಿಲ್ಲಿಸಿ, ವಿಷಯಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ. ತೊಂದರೆಯ ಸಂದರ್ಭಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ, ಅವರು ಎಲ್ಲಾ ಆರೋಗ್ಯವನ್ನು ಹಾಳುಮಾಡುತ್ತಾರೆ ಮತ್ತು ಆತ್ಮದ ವೈಭವವನ್ನು ಕಸಿದುಕೊಳ್ಳುತ್ತಾರೆ. ಸಕಾರಾತ್ಮಕ ಜನರೊಂದಿಗೆ ಮಾತನಾಡಿ ಮತ್ತು ಅವರ ಮಾತುಗಳನ್ನು ಆಲಿಸಿ.
*6- ಆರನೇ ಸೂಚನೆ* ಮೊದಲನೆಯದಾಗಿ, ಹಣದ ಮೇಲಿನ ಬಾಂಧವ್ಯವನ್ನು ಬಿಟ್ಟುಬಿಡಿ
ನಿಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕ ಸಾಧಿಸಿ, ನಗು ಮತ್ತು ಮಾತನಾಡಿ! ಹಣವು ಉಳಿವಿಗಾಗಿ ಮಾಡಲ್ಪಟ್ಟಿದೆ, ಹಣಕ್ಕಾಗಿ ಜೀವನವಲ್ಲ.
*7-7 ನೇ ಟಿಪ್ಪಣಿ* ನಿಮ್ಮ ಬಗ್ಗೆ ಅಥವಾ ನೀವು ಸಾಧಿಸಲು ಸಾಧ್ಯವಾಗದ ಯಾವುದನ್ನಾದರೂ ಅಥವಾ ನೀವು ಆಶ್ರಯಿಸಲು ಸಾಧ್ಯವಾಗದ ಯಾವುದನ್ನಾದರೂ ಕುರಿತು ವಿಷಾದಿಸಬೇಡಿ.
ಅದನ್ನು ನಿರ್ಲಕ್ಷಿಸಿ ಮತ್ತು ಮರೆತುಬಿಡಿ.
*8- ಎಂಟನೇ ಸೂಚನೆ* ಹಣ, ಸ್ಥಾನ, ಪ್ರತಿಷ್ಠೆ, ಅಧಿಕಾರ, ಸೌಂದರ್ಯ, ಜಾತಿ ಮತ್ತು ಪ್ರಭಾವ;
ಇವೆಲ್ಲವೂ ಅಹಂಕಾರವನ್ನು ಹೆಚ್ಚಿಸುತ್ತವೆ. ನಮ್ರತೆಯು ಜನರನ್ನು ಪ್ರೀತಿಯಿಂದ ಹತ್ತಿರ ತರುತ್ತದೆ.
*9- ಒಂಬತ್ತನೇ ಸಲಹೆ* ನಿಮ್ಮ ಕೂದಲು ಬಿಳಿಯಾಗಿದ್ದರೆ, ಅದು ಜೀವನದ ಅಂತ್ಯ ಎಂದು ಅರ್ಥವಲ್ಲ. ಇದು ಉತ್ತಮ ಜೀವನಕ್ಕೆ ನಾಂದಿ. ಆಶಾವಾದಿಯಾಗಿರಿ, ನೆನಪಿನೊಂದಿಗೆ ಬದುಕಿ, ಪ್ರಯಾಣಿಸಿ, ಆನಂದಿಸಿ. ನೆನಪುಗಳನ್ನು ರಚಿಸಿ!
*10- 10ನೇ ಸೂಚನೆಗಳು* ನಿಮ್ಮ ಪುಟ್ಟ ಮಕ್ಕಳನ್ನು ಪ್ರೀತಿ, ಸಹಾನುಭೂತಿ ಮತ್ತು ಪ್ರೀತಿಯಿಂದ ಭೇಟಿ ಮಾಡಿ! ವ್ಯಂಗ್ಯವಾಗಿ ಏನನ್ನೂ ಹೇಳಬೇಡಿ! ನಿಮ್ಮ ಮುಖದಲ್ಲಿ ನಗುವನ್ನು ಇರಿಸಿ!
ಹಿಂದೆ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವರ್ತಮಾನದಲ್ಲಿ ಅದನ್ನು ಮರೆತು ಎಲ್ಲರೊಂದಿಗೆ ಬೆರೆಯಿರಿ!
*ಆರೋಗ್ಯ ದಿನದ ಶುಭಾಶಯಗಳು*.
Tuesday, October 3, 2023
"ಲಂಚ" ಪ್ರಪಂಚದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಒಂದು ಮಂಚವನ್ನು ಬಾಡಿಗೆಗೆ ಪಡೆಯುವುದುಂಟೆ?
"ಲಂಚ" ಪ್ರಪಂಚದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಒಂದು ಮಂಚವನ್ನು ಬಾಡಿಗೆಗೆ ಪಡೆಯುವುದುಂಟೆ?
ದಿವಂಗತ ಮಧುಕರ್ ಶೆಟ್ಟಿ ಸಾಹೇಬರು ತಾವು ಚಾಮರಾಜನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ತಮ್ಮ ಸಂಬಂಧಿಕರು ಮನೆಗೆ ಬಂದಾಗ ಅತಿಥಿಗಳಿಗೆ ಮಲಗಲು ಒಂದು ಮಂಚವನ್ನು ಬಾಡಿಗೆಗೆ ಪಡೆದಿದ್ದರಂತೆ,ಸರ್ ಮಾತ್ರ ಸದಾ ನೆಲದ ಮೇಲೆ ಒಂದು ಚಾಪೆ ಹಾಸಿಕೊಂಡು ಮಲಗುವ ಅಭ್ಯಾಸವಿತ್ತು.
ಜೀವನವನ್ನು ಹೊರೆಮಾಡಿಕೊಳ್ಳದೆ ಕನಿಷ್ಠ ವಸ್ತುಗಳೊಂದಿಗೆ ತೀರಾ ಅಗತ್ಯ ಅವಶ್ಯ ಪದಾರ್ಥಗಳನ್ನು ಮಾತ್ರ ಖರೀದಿಸಿ ಸ್ವಂತ ಮಾಡಿಕೊಳ್ಳುತ್ತಿದ್ದರಂತೆ,ನಿತ್ಯದ ಖರ್ಚಿನ ಬಗೆ ಡೈರಿಯಲ್ಲಿ ಬರೆದಿಡುತ್ತಿದ್ದರಂತೆ ತಿಂಗಳ ಕೊನೆಯಲ್ಲಿ ಅಧೀನ ಸಿಬ್ಬಂದಿಗಳಿಂದಲೂ ಸಾಲ ಪಡೆಯುತ್ತಿದ್ದರಂತೆ,ಒಟ್ಟಾರೆ ಲೆಕ್ಕದಲ್ಲಿ ಪಕ್ಕ.
ಪ್ರತಿ ಬಾರಿ ವರ್ಗಾವಣೆಯಾದಗಲು,ನಾಲ್ಕು ಬ್ಯಾಗ್ ಗಳಿಗಿಂತ ಹೆಚ್ಚಿಗೆ ಲಗೇಜ್ ಇರುತ್ತಿರಲಿಲ್ಲ,ಹಾಗೆಯೇ ಅದನ್ನು ಸಾಗಿಸಲು ಎಂದಿಗೂ ಸರ್ಕಾರಿ ವಾಹನವನ್ನು ಬಳಸಿಲ್ಲ,
ಸಾಮಾನ್ಯವಾಗಿ ಕರ್ತವ್ಯ ಮಾಡಿದ ಕಡೆಯಲ್ಲಿ ಅಧಿಕಾರ ಉಪಯೋಗಿಸಿಕೊಂಡು ಕೆಲವೊಮ್ಮೆ ದುರುಪಯೋಗ ಪಡಿಸಿಕೊಂಡು ಒಂದೊಂದು ಆಸ್ತಿ ಕಟ್ಟಡ ಕಾಂಪ್ಲೆಕ್ಸ್ ಕಟ್ಟಿ ಬಾಡಿಗೆ ಬರುವ ರೀತಿ ಮಾಡಿಕೊಳ್ಳಬೇಕು ಎಂಬ ಧೋರಣೆ ಇರುವವರ ನಡುವೆ ಸಾಹೇಬರು ಮಾತ್ರ ಈ ಬಾಡಿಗೆ ಜಗತ್ತಿನಲ್ಲಿ ಒಬ್ಬ ಲೋಕ ಸಂಚಾರಿಯಂತೆ ಹೋದಲೆಲ್ಲಾ ಅಳಿಸಲಾಗದ ಆದರ್ಶ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.
ಅಜಾನುಬಾಹು ಸ್ಪುರದ್ರೂಪಿಯಾಗಿದ್ದ ಮಧುಕರ್ ಶೆಟ್ಟಿ ರವರು ವಿದ್ಯಾರ್ಥಿ ದೆಸೆಯಿಂದಲೂ ನಿತ್ಯ ಒಂದೆ ನಿಶ್ಚಿತ ಶಿಸ್ತಿನ ದಿನಚರಿ,ಮುಂಜಾನೆ ಏಳುವ ಅಭ್ಯಾಸ ತಮ್ಮ ದೇಹತೂಕ ಎಂದು ಕೂಡ ಹೆಚ್ಚಾಗದಂತೆ ಕಾಯ್ದುಕೊಳ್ಳಲು ತಪ್ಪದೆ ನಿತ್ಯ ಕಸರತ್ತು ಮಾಡುತಿದ್ದರಂತೆ,ಹಾಗೆಯೇ ಜೀವನಸಂತೆಯಲ್ಲಿ ಜೀವನ ಭಾರದ ಮೂಟೆಯೂ ಹೆಚ್ಚಾಗದಂತೆ ನೋಡಿಕೊಂಡಿದ್ದಾರೆ.
ದೇಹವನ್ನು ಹೇಗೋ ಸದೃಢ ಇಟ್ಟುಕೊಳ್ಳಬಹುದು ಆದರೆ ಆಕರ್ಷಣೆ ಲಾಭಿಯ ಜಗತ್ತಿನಲ್ಲಿ ಮಾನಸಿಕ ನಿಯಂತ್ರಣ ಬದ್ಧತೆ ದೃಢತೆ ಹೊಂದುವುದು ಒಂದು ಯಜ್ಞವೇ ಸರಿ!
ತನ್ನ ದೊಡ್ಡ ಹುದ್ದೆಯ ಜೊತೆಗೆ ತನ್ನ ಇತಿಮಿತಿ ಅರಿತುಕೊಂಡು ತಮ್ಮ ಸರಳ ಬದುಕಿನಲ್ಲಿ ಸಂತೃಪ್ತರಾಗಿದ್ದರು.
ಆಸೆ ಅಮೀಷ ಆಕರ್ಷಣೆ ಲಾಭಿಗೆ ಮಾರುಹೋಗಿ ಜೀವನವನ್ನು ಇಕ್ಕಟ್ಟು ಬಿಕ್ಕಟು ಕಗ್ಗಂಟು ಮಾಡಿಕೊಳ್ಳುತ್ತಿರುವ ಕಾಲಘಟ್ಟಕ್ಕೆ ಮಧುಕರ್ ಶೆಟ್ಟಿ ರವರ ತತ್ವ ಸಿದ್ಧಾಂತ ಆದರ್ಶ ಜೀವನ ಶೈಲಿ ಕ್ರಮ ವಿಚಾರಧಾರೆಯಲ್ಲಿ ಸಂತೃಪ್ತಿ ಕಂಡುಕೊಳ್ಳುವ ಅಧ್ಭುತ ಜೀವನ ಸಂದೇಶವಿದೆ,ಹಿಂಬಾಲಿಸಿ ಹೋದಂತೆ ದಾರ್ಶನಿಕತೆ ಕಾಣ ಸಿಗುತ್ತದೆ.
ಆದರ್ಶಗಳ ಜೀವನ ಸಪ್ಪೆ ರುಚಿಸದು ಆದರೆ ಮಾನಸಿಕ ಸಂತೃಪ್ತಿ ನೀಡುತ್ತೆ ಜೊತೆಗೆ ಸಮಾಜಕ್ಕೆ ಒಳ್ಳೆಯದು,ಹೇಗೆಂದರೆ ಉಪ್ಪು ಖಾರ ಹುಳಿ ಕಡಿಮೆ ಇರುವ ಆಹಾರವೂ ಕೂಡ ಸಪ್ಪೆ ಬಾಯಿಗೆ ರುಚಿಸದು ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲವೇ?
ಒಂದು ಮಾತು,ಮಧುಕರ್ ಶೆಟ್ಟಿ ಅವರು ಬರೇ ಉನ್ನತ ವ್ಯಕ್ತಿ ಅಧಿಕಾರಿಯಾಗಿದ್ದ ಮಾತ್ರಕ್ಕೆ ಇಷ್ಟೆಲ್ಲ ಬರಿಯಬೇಕೆಂದಿಲ್ಲ ಅದೊಂದು ಉನ್ನತ ವಿಚಾರಧಾರೆಯ ಅಸಾಮಾನ್ಯ ವ್ಯಕ್ತಿತ್ವ ಅದಕ್ಕಾಗಿ ಈ ಅಗೆದು ಬಗೆಯುವ ಕೃಷಿ ಕಾರ್ಯ!
#udupi #madhukarshetty #ips #KarnatakaPolice #karnataka #kundapura
*ಹನ್ನೆರಡು ನಿಯಮಗಳು*
*ಹನ್ನೆರಡು ನಿಯಮಗಳು*
1. *ಜಗದ ನಿಯಮ*
ನಾವು ಪ್ರಪಂಚಕ್ಕೆ ಏನನ್ನು ಕೊಡುತ್ತೇವೆಯೋ ಅದೇ ನಮಗೆ ಹಿಂತಿರುಗಿ ಬರುತ್ತದೆ. ನಾವು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದೇ ಆಗುತ್ತದೆ, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದೇ ಆಗುತ್ತದೆ.
2. *ಸೃಷ್ಟಿಯ ನಿಯಮ*
ಜಗತ್ತಿನಲ್ಲಿ ತಾನಾಗಿ ತಾನೇ ಯಶಸ್ಸು ಸಿಗುವುದಿಲ್ಲ ಅಥವಾ ಬರುವುದಿಲ್ಲ, ಪ್ರತಿಯೊಂದು ಯಶಸ್ಸು ನಮ್ಮ ಪರಿಶ್ರಮದಿಂದಲೇ ಸಿಗುವುದು.
3. *ನಮ್ರತೆಯ ನಿಯಮ*
ಮೊದಲು ನಾವು ನಮ್ಮ ತಪ್ಪನ್ನು ತಿದ್ದಿಕೊಂಡರೆ ಮಾತ್ರ ಪರಿವರ್ತನೆಯಾಗಲು ಸಾಧ್ಯ.
4. *ಅಭಿವೃದ್ಧಿಯ ನಿಯಮ*
ನಮ್ಮನ್ನು ನಾವು ಬದಲಾಯಿಸಿಕೊಂಡರೆ ಮಾತ್ರ ನಮ್ಮ ಜೀವನವು ಅಭಿವೃದ್ಧಿಯೆಡೆಗೆ ಸಾಗುತ್ತದೆ. ಶ್ರಮ ಪಟ್ಟು ಕೆಲಸ ಮಾಡಬೇಕು, ಸೋಮಾರಿಗಳಾಗಬಾರದು.
5. *ಜವಾಬ್ದಾರಿಯ ನಿಯಮ*
ನಮ್ಮ ಜೀವನಕ್ಕೆ ನಾವೇ ಹೊಣೆ, ಬೇರೆಯವರನ್ನು ದೂಷಿಸುವುದು ಸರಿಯಲ್ಲ.
6. *ಸಂಪರ್ಕ ನಿಯಮ*
ನಮ್ಮ ಜೀವನದ ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವೂ ಸದಾ ಸಂಪರ್ಕದಲ್ಲಿರುತ್ತದೆ. ನಮ್ಮ ನಿನ್ನೆಯ ಕರ್ಮಗಳು ಇಂದು, ಮತ್ತು ಇಂದಿನ ಕರ್ಮಗಳು ನಾಳೆ ಅನುಭವಿಸುತ್ತಿರುತ್ತೇವೆ.
7. *ಗಮನದ ನಿಯಮ*
ನಾವು ಎರಡೆರೆಡು ಕೆಲಸಗಳ ಮೇಲೆ ಗಮನ ವಹಿಸುವುದು ವ್ಯರ್ಥ. ಮಾಡುವ ಒಂದು ಕೆಲಸ ಅಥವಾ ಕಾರ್ಯದಲ್ಲಿ ಗಮನವಿರಲಿ.
8. *ಅತಿಥ್ಯದ ನಿಯಮ*
ನಮ್ಮ ನೆಡವಳಿಕೆ, ನಮ್ಮ ಆಚಾರ, ವಿಚಾರ ಹಾಗೂ ಚಿಂತನೆಗೆ ಕನ್ನಡಿ ಇದ್ದಂತೆ.
9. *ಇಂದು ಮತ್ತು ಈಗಿನ ನಿಯಮ*
ವರ್ತಮಾನದ ಬಗ್ಗೆ ಹೆಚ್ಚು ಗಮನವಿರಬೇಕು ಭೂತ -ಭವಿಷ್ಯದ ಬಗ್ಗೆ ಅಲ್ಲ.
10. *ಪರಿವರ್ತನೆಯ ನಿಯಮ*
ಹಿಂದಿನ ಕರ್ಮಗಳು ಮತ್ತೆ ಮತ್ತೆ ಮರುಕಳಿಸುತ್ತದೆ. ನಾವು ಪರಿವರ್ತನೆಯಾಗಲು ಪ್ರಯತ್ನಿಸಿದರೆ ಮಾತ್ರ ಪರಿವರ್ತನೆ ಸಾಧ್ಯ.
11. *ತಾಳ್ಮೆಯ ನಿಯಮ*
ತಾಳ್ಮೆ, ಸಹನೆ ಮತ್ತು ಛಲದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಇವು ಜೀವನದಲ್ಲಿ ಬಹಳ ಮುಖ್ಯ.
12. *ಯಶಸ್ಸಿನ ನಿಯಮ*
ಯಶಸ್ಸು ನಾವು ಹಾಕುವ ಪರಿಶ್ರಮದಷ್ಟೇ ದೊಡ್ಡದಾಗಿ ಕಾಣುತ್ತದೆ. ನಾವು ಜೀವನದಲ್ಲಿ ಯಶಸ್ಸನ್ನು ಒಮ್ಮೆ ಗಳಿಸಲು ಪ್ರಾರಂಭಿಸಿದರೆ ನಮ್ಮ ಪರಿಶ್ರಮ ಲೆಕ್ಕಕ್ಕೆ ಬರುವುದಿಲ್ಲ. ಆ ಯಶಸ್ಸಿನ ಖುಷಿಯ ಮುಂದೆ ಎಲ್ಲಾ ಪರಿಶ್ರಮವೂ, ಅದರ ನೋವು, ನಾವು ಪಟ್ಟ ಕಷ್ಟ ಎಲ್ಲವೂ ಮರೆತು ಹೋಗುತ್ತದೆ.
Monday, September 4, 2023
ಭಾರತೀಯರು ಸ್ವಭಾವತಃ ದೇವರನ್ನು ನಂಬುವ ಜನರು, ಇದಕ್ಕೆ ವಿಜ್ಞಾನಿಗಳೂ ಹೊರತಲ್ಲ.
ಭಾರತೀಯರು ಸ್ವಭಾವತಃ ದೇವರನ್ನು ನಂಬುವ ಜನರು, ಇದಕ್ಕೆ ವಿಜ್ಞಾನಿಗಳೂ ಹೊರತಲ್ಲ. ಅವರು ವಿಜ್ಞಾನವು ದೇವರು, ಧರ್ಮ ಮತ್ತು ಆಧ್ಯಾತ್ಮಿಕತೆಯ ವಿರುದ್ಧವಾಗಿದೆ ಎಂದು ನಂಬುವುದಿಲ್ಲ. ನಮ್ಮ ವಿಜ್ಞಾನಿಗಳ ನೀತಿಯು ವಿಶಾಲವಾಗಿದೆ - ಅವರು ತಮ್ಮ ನಂಬಿಕೆಗೆ ಬೇರೂರಿರುವುದರ ಜೊತೆ ಜೊತೆಗೆ ಹೊಸ ಹೊಸ ಆಲೋಚನೆಗಳು, ಜ್ಞಾನ ಮತ್ತು ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತಾರೆ. ನಮ್ಮ ವಿಜ್ಞಾನಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ, ವಿಜ್ಞಾನ ಮತ್ತು ದೇವರ ನಡುವೆ ಯಾವುದೇ ಮೂಲಭೂತ ವ್ಯತ್ಯಾಸವಿಲ್ಲ, ಎಂದು ಹಾಗೂ ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು.
ಪ್ರಪಂಚದ ಬಹುಪಾಲು ವಿಜ್ಞಾನಿಗಳು ದೇವರ ಅಸ್ತಿತ್ವ ಅಥವಾ ಈ ವಿಶ್ವದ ಹಿಂದಿರುವ, ಇದರ ಅಸ್ತಿತ್ವಕ್ಕೆ ಕಾರಣೀಭೂತವಾದ ಯಾವುದೋ ಒಂದು ದಿವ್ಯಶಕ್ತಿಯೊಂದು ಇರಲೇಬೇಕು ಮತ್ತು ಅದು ಇದ್ದೇ ಇದೆ ನಂಬುತ್ತಾರೆ. ಹಾಗೆಯೇ ಬಹುಪಾಲು ಭಾರತೀಯ ವಿಜ್ಞಾನಿಗಳು ತಾವು ಆಧ್ಯಾತ್ಮಿಕರು ಎಂದು ಭಾವಿಸುತ್ತಾರೆ. ಧರ್ಮ, ಆಧ್ಯಾತ್ಮ ಅಥವಾ ದೇವರ ಮೇಲಿನ ನಂಬಿಕೆಯು ಸನಾತನ ಭಾರತೀಯ ಮೌಲ್ಯ ವ್ಯವಸ್ಥೆಯ ಭಾಗವಾಗಿದೆ. ಇದು ನಮ್ಮ ಕೌಟುಂಬಿಕ ಮೌಲ್ಯ ಮತ್ತು ಸಾಮಾಜಿಕ ಜನಜೀವನದಲ್ಲಿ ಅತ್ಯಗತ್ಯವಾದ ಒಂದು ಭಾಗವಾಗಿದೆ.
ವಂದನೆಗಳೊಂದಿಗೆ
ನಂಜುಂಡಸ್ವಾಮಿ.
Sunday, September 3, 2023
*ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ.
*ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.*
*ಬಾಲ ಗಣಪತಿ*
ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
*ತರುಣ ಗಣಪತಿ*
ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
*ಭಕ್ತಿ ಗಣಪತಿ*
ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.
*ವೀರ ಗಣಪತಿ*
ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
*ಶಕ್ತಿ ಗಣಪತಿ*
ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
*ದ್ವಿಜ ಗಣಪತಿ*
"ದ್ವಿಜ" ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.
*ಸಿದ್ಧಿ ಗಣಪತಿ*
ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
*ಉಚ್ಚಿಷ್ಟ ಗಣಪತಿ*
ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.
*ವಿಘ್ನ ಗಣಪತಿ*
ಗಣಪತಿಯನ್ನು "ವಿಘ್ನೇಶ್ವರ, ವಿಘ್ನನಾಶಕ" ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.
*ಕ್ಷಿಪ್ರ ಗಣಪತಿ*
ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
*ಹೇರಂಬ ಗಣಪತಿ*
ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.
*ಲಕ್ಷ್ಮೀ ಗಣಪತಿ*
ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
*ಮಹಾ ಗಣಪತಿ*
"ಮಹಾ" ಎಂಬ ಮಾತೇ "ಶ್ರೇಷ್ಟ" ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.
*ವಿಜಯ ಗಣಪತಿ*
ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ "ವಿಜಯ"ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.
*ನೃತ್ಯ ಗಣಪತಿ*
ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?
*ಊರ್ಧ್ವ ಗಣಪತಿ*
ಊರ್ಧ್ವ ಗಣಪತಿ ಎಂದರೆ" ಉದ್ದವಾಗಿ ಇರುವ ಗಣಪತಿ" ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.
*ಏಕಾಕ್ಷರ ಗಣಪತಿ*
"ಏಕಾಕ್ಷರ ಗಣಪತಿ"ಯು ಹೆಸರೇ ಸೂಚಿಸುವಂತೆ "ಒಂದೆ ಅಕ್ಷರದ "ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
*ವರದ ಗಣಪತಿ*
ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ "ಮೂರನೆ ಕಣ್ಣು" ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
*ತ್ರಯಾಕ್ಷರ ಗಣಪತಿ*
ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.
*ಕ್ಷಿಪ್ರ ಪ್ರಸಾದ ಗಣಪತಿ*
ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.
*ಹರಿದ್ರ ಗಣಪತಿ*
ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.
*ಏಕದಂತ ಗಣಪತಿ*
ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.
*ಸೃಷ್ಟಿ ಗಣಪತಿ*
ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್ನಲ್ಲಿ ಕಾಣಿಸಿಕೊಳ್ಳುತ್ತಾನೆ.
*ಉದ್ಧಂಡ ಗಣಪತಿ*
ಉದ್ಧಂಡ ಗಣಪತಿಯು ವಿಶ್ವದಲ್ಲಿ 'ಧರ್ಮವನ್ನು ಪರಿಪಾಲಿಸುತ್ತಾನೆ" . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
*ಋಣಮೋಚನ ಗಣಪತಿ*
ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.
*ದುಂಧಿ ಗಣಪತಿ*
ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.
*ದ್ವಿಮುಖ ಗಣಪತಿ*
ದ್ವಿಮುಖ ಗಣಪತಿಯು ಹೆಸರೇ ಸೂಚಿಸುವಂತೆ, ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡೆಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
*ತ್ರಿಮುಖ ಗಣಪತಿ*
ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು, ಚಿನ್ನದ ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.
*ಸಿಂಹ ಗಣಪತಿ*
ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
*ಯೋಗ ಗಣಪತಿ*
ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.
*ದುರ್ಗಾ ಗಣಪತಿ*
ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು, ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.
*ಸಂಕಷ್ಟ ಹರ ಗಣಪತಿ*
ಗಣಪತಿಯ ಈ ಅದ್ಭುತ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತದೆ.
💐 *ಸರ್ವೇ ಜನಃ ಸುಖಿನೋ ಭವಂತು* 💐
Subscribe to:
Posts (Atom)
29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .
29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .
Green World
-
SAVE NATURE, HEALTHY, WEALTHY & WISE. dgnsgreenworld FAMILY. Picture of Kaner (Yellow Oleander): This is an large orname...