www.dgnsgreenworld.blogspot.com

Wednesday, May 14, 2025

ರವಿ ಕುಮಾರ್ ಹರವೇ

"ಸಾವಿರ ಮೈಲಿಗಳ ಪ್ರಯಾಣ ಕೂಡ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ". ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಸಾಧಿಸುವ ಛಲವಿರಬೇಕು ಅಷ್ಟೇ, ಸಾಧನೆ ಹಾದಿಯಲ್ಲಿ ನೋವು ನಲಿವು, ಕಷ್ಟ ಸುಖ, ಸುಖ-ದುಃಖ, ಸೋಲು ಗೆಲುವು, ಕಹಿ ಸಿಹಿ, ಎಲ್ಲವೂ ಸರ್ವಸಾಮಾನ್ಯವಾಗಿ ಸಾಧನೆಯು ಉದ್ದಕ್ಕೂ ಉದ್ಭವಿಸುತ್ತವೆ, ಪ್ರತಿಯೊಬ್ಬ ಸರ್ವ ಶ್ರೇಷ್ಠ ಸಾಧಕರೂ ಈ ಎಲ್ಲಾ ಮೆಟ್ಟಿಲುಗಳನ್ನು ಮೆಟ್ಟಿ ಸಾಧನೆಗೈದಿರುತ್ತಾರೆ, ಅದಕ್ಕೆ ಸನ್ಮಾನ್ಯ, ಡಿ, ವಿ, ಗುಂಡಪ್ಪನವರು ಹೇಳುತ್ತಾರೆ, 
"ಯಶಸ್ಸು ಎಂಬುದು ಕಂಡ ಕಂಡಲ್ಲಿ ಬೆಳೆಯುವ ಕಾಡು ಕುಸುಮವಲ್ಲ ಎಡಬಿಡದ ಕಾಯಕದಿಂದ ಒಡಮೂಡಿ ಬರುವ ಮಂದಾರ ಪುಷ್ಪ"ಎಂದು.
ಸಾಧನೆ ಹಾದಿಯಲ್ಲಿ ಬರುವ ಪ್ರತಿ ಸಂದರ್ಭಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ, ನಾವು ಮಾಡುವ ಪ್ರತಿ ಕೆಲಸದಲ್ಲೂ ಭಗವಂತನ ಅನುಗ್ರಹ ಇರುತ್ತದೆ, ನಾವು ಏನನ್ನು ಬಯಸುತ್ತೇವೆಯೋ ಅದನ್ನು ನಮಗೆ ಈ ನಿಸರ್ಗ ಕೊಡುತ್ತದೆ, ನೇರ ಮಾರುಕಟ್ಟೆಯಲ್ಲಿ ನಿಮ್ಮ ಸುದೀರ್ಘ ಅನುಭವ ಯಶಸ್ಸಿಗೆ ಮೆಟ್ಟಲಾಗಿ ನಿಲ್ಲುತ್ತದೆ, ನಿಮ್ಮ ಅನುಭವ ನಮ್ಮಂತ ಎಷ್ಟೋ ಜನರ ಜ್ಞಾನಾರ್ಜನೆಗೆ ಸಹಕಾರವಾಗಲಿ, ಭಗವಂತ ಆ ಅದ್ಭುತ ಶಕ್ತಿಯನ್ನು ತಮಗೆ ಅನುಗ್ರಹಿಸಲಿ ಎಂದು ಬೇಡಿಕೊಳ್ಳುತ್ತೇವೆ.ನಿಮ್ಮ ಆಶಾಭಾವನೆಯ ಸಂದೇಶವನ್ನು ಓದಿ ಬಹಳ ಸಂತೋಷವಾಯಿತು.
 ದೇವರು ತಮಗೆ ಆಯಸ್ಸು, ಆರೋಗ್ಯ, ಐಶ್ವರ್ಯ ಸಕಲವನ್ನು ಅನುಗ್ರಹಿಸಲಿ ನಿಮ್ಮಿಂದ ಸರ್ವರಿಗೂ ಒಳಿತಾಗಲೆಂದು ಬಯಸುತ್ತೇವೆ. ವಂದನೆಗಳೊಂದಿಗೆ 🙏💐

No comments:

Post a Comment

welcome to dgnsgreenworld Family

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ ?

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ? ​ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿಯನ್ನು ಸಂಪೂರ್ಣವಾಗಿ ...

Green World