www.dgnsgreenworld.blogspot.com

Thursday, October 3, 2024

*ಜೀವನದಲ್ಲಿ ದುಃಖಕ್ಕೆ ಯಾರು ಕಾರಣ?*

*ಜೀವನದಲ್ಲಿ ದುಃಖಕ್ಕೆ ಯಾರು  ಕಾರಣ?*

ದೇವರೇ?                         ಅಲ್ಲ 
ಗ್ರಹ -ನಕ್ಷತ್ರಗಳೇ?             ಅಲ್ಲ 
ಭಾಗ್ಯವೇ?                        ಅಲ್ಲ 
ಸಂಬಂಧಿಗಳೇ?                ಅಲ್ಲ 
ನೆರೆಹೊರೆಯವರೇ?          ಅಲ್ಲ 
ಸರಕಾರವೇ?                    ಅಲ್ಲ 

ನಮ್ಮ ದುಃಖಗಳಿಗೆ ನಾವೇ 
ಸ್ವಯಂ ಜವಾಬ್ದಾರರು 

ತಲೆನೋವು, ಬಿ ಪಿ ಮುಂತಾದವುಗಳಿಗೆ 
ಕಾರಣ -ಅನಗತ್ಯ ವಿಚಾರಗಳು 

ಹೊಟ್ಟೆನೋವು, ಮತ್ತಿತರ ತೊಂದರೆಗಳಿಗೆ ಕಾರಣ -ತಿನ್ನಬಾರದ್ದನ್ನು ತಿನ್ನುವುದು  

ಸಾಲ ಹೆಚ್ಚಲು ಕಾರಣ, -ಅವಶ್ಯಕತೆ ಮೀರಿ ಖರ್ಚು ಮಾಡುವುದು 

ಕೋರ್ಟ್ ಸುತ್ತುವಿಕೆ ಕಾರಣ
-ಪ್ರತಿಷ್ಠೆ, ಅಹಂಕಾರಗಳು 

ದುರ್ಬಲ /ದಪ್ಪ /ರೋಗಮಯ 
ಶರೀರಕ್ಕೆ ಕಾರಣ -ತಪ್ಪು ಜೀವನ ಶೈಲಿ 

ಅನಗತ್ಯ ವಿವಾದಗಳಿಗೆ ಕಾರಣ -ಹೆಚ್ಚು ಮತ್ತು ವ್ಯರ್ಥ ಮಾತನಾಡುವಿಕೆ 

ಮೇಲಿನ ಕಾರಣಗಳಲ್ಲದೇ ಇನ್ನೂ ನೂರಾರು ಕಾರಣಗಳಿರಬಹುದು. ನಾವು ದೋಷವನ್ನು ಇನ್ನೊಬ್ಬರ ಮೇಲೆ ಹೊರಿಸುತ್ತೇವೆ. ಕಷ್ಟಗಳ ಕಾರಣವನ್ನು ಸೂಕ್ಷ್ಮ ವಾಗಿ ಪರಿಶೀಲಿಸಿದರೆ ಅವುಗಳ ಹಿಂದೆ ನಮ್ಮ ಮೂರ್ಖತೆಯೇ ಅಡಗಿರುತ್ತದೆ. 
ದೂರು -ದುಮ್ಮಾನಗಳನ್ನು ಉಸಿರು ಇರುವ ತನಕ ಮಾಡಬಹುದಷ್ಟೆ 

ಕೊನೆಯಲ್ಲಿ ಉಳಿಯುವುದು 
ಪಶ್ಚಾತಾಪ ಮಾತ್ರ 

ಧರ್ಮಮಯ ಬದುಕು 
ಜೀವನಕೆ ಬೆಳಕು 

ಪ್ರಾಮಾಣಿಕವಾಗಿರಿ 
ಸಂತೋಷವಾಗಿರಿ 
ನಗುನಗುತ್ತಾ ಇರಿ... ಮುದ್ದು ಮಕ್ಕಳ ತರಹ

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World