www.dgnsgreenworld.blogspot.com

Wednesday, December 18, 2024

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹಳೆಯ ಲೇಖನ ಆದರೂ ಕೂಡ ..
#ಕಡಲೆಕಾಯಿ ಬೀಜ...( ಶೇಂಗಾ )ಇಷ್ಟಪಡದವರುಂಟೇ....???

ಇದು ಬಾದಾಮಿ ,ಪಿಸ್ತಾ ,ಗೋಡಂಬಿ ಗಿಂತ ಹೆಚ್ಚಿನ ಸತ್ವ ತುಂಬಿದ ಇದು ##ಬಡವರ ಬಾದಾಮಿ ###ಎಂದೇ ಕರೆಯಲಾಗುವ ಕಡಲೆಕಾಯಿ ಬೀಜದ ಬಗ್ಗೆ ಮಾಹಿತಿ ನೀಡುವ ಲೇಖನ .
ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..
ಕಡಲೆ ಕಾಯಿಬೀಜವನ್ನು ಹೆಚ್ಚಾಗಿ ಸೇವಿಸುತ್ತಾ ಬಂದಲ್ಲಿ ಹೃದಯ ಸಂಬಂದಿ ಕಾಯಿಲೆಗಳು ಬರದಂತೆ ತಡೆಯುತ್ತದೆ ಎಂದು ಅಧ್ಯಯನ ಗಳು ತಿಳಿಸಿವೆ .
ಕಡಲೆ ಕಾಯಿಯಲ್ಲಿ ಇರುವ ಒಳ್ಳೆಯ ಕೊಬ್ಬಿನಂಶ 
Monounsaturated fats ,ಮತ್ತು oleic acid ಮುಂತಾದ ಆಂಟಿ accident ಗಳು ಹೃದಯವನ್ನು ಬಲವಾಗಿಸಲು ಅನುಕೂಲಮಾಡಿಕೊಡುತ್ತದೆ.

ಕೊನೆಪಕ್ಷ ವಾರಕ್ಕೆ 4ದಿನ ವಾದರೂ ಈ ಕಡಲೆ ಕಾಯಿ ಬೀಜವನ್ನು ನಿಮ್ಮ ಆಹಾರದಲ್ಲಿ ಸೇವಿಸಿದರೆ ಹೃದಯಸಂಬಂದಿ ಸಮಸ್ಯೆಗಳಿಂದ ದೂರವಿರಬಹುದು .
ನೆಲಕಡಲೆ ಯಲ್ಲಿ ಮ್ಯಾಂಗನೀಸ್ ಸತ್ವ ತುಂಬಿರು ತ್ತದೆ .ಮ್ಯಾಂಗ್ ನಿಸ್ ಲಕ್ಟೊಸ್ ಮತ್ತು ಕೊಬ್ಬುಗಳ ಬದಲಾವಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ .
ಆದ್ದರಿಂದ ನಾವು ಸೇವಿಸುವ ಆಹಾರದಿಂದ ದೇಹಕ್ಕೆ ಕ್ಯಾಲ್ಸಿಯಂ ಸೇರುತ್ತದೆ .
ಅದರಲ್ಲೂಮಹಿಳೆಯರು ಹೆಚ್ಚು ಕಡಲೆ ಕಾಯಿ ಬೀಜವನ್ನು ಅಗಾಗ ಆಹಾರದಲ್ಲಿ ಸೇರಿಸಿ ಕೊಂಡರೆ ,ಅವರಿಗೆ ಮೂಳೆ ಸಂಬಂದಿ ಸಮಸ್ಯೆಗಳು ಬರುವ ಸಾಧ್ಯತೇ ಕಡಿಮೆಆಗುತ್ತದೆ .
***ಜ್ಞಾಪಕ ಶಕ್ತಿ ಹೆಚ್ಚುವುದು .***
ಇದರಲ್ಲಿರುವ ವೈಟಮಿನ್ B3 ಮಿದುಳಿನ ಚಟುವಟಿಕೆಯನ್ನು ಹೆಚ್ಚಿಸುವುದರೊಂದಿಗೆ ,ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ .
ಪ್ರೊಟೀನ್ ಆಗರವಾಗಿರುವ ಕಡಲೆ ಯಲ್ಲಿ ,ಐರನ್ಕಂಟೆಂಟ್ ,ಝಿನ್ಕ್ ,ಮೆಗ್ನಿಶಿಯಂ ,ಮತ್ತು ವೈಟಮಿನ್ ದ ಹೆಚ್ಚಿನ ಪ್ರಮಾಣದಲ್ಲಿದೆ .
ಅಂದರೆ ಮಾಂಸಾಹಾರ ದಲ್ಲಿರುವ ಅಷ್ಟು ಸತ್ವಗಳು ಇದರಲ್ಲಿ ಅಧಿಕ ವಾಗಿರುವುದರಿಂದ ,ಶಾಖಾಹಾರಿಗಳು ಇದನ್ನು ಹೆಚ್ಚು ಸೇವಿಸುವುದು ಒಳಿತು .
ಯೌವನವನ್ನು ಅಂದರೆ ವಯೋಸಹಜ ಮುಪ್ಪಿಗಿಂತ ಮುಂಚೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ .
ಕಡಲೆಯಲ್ಲಿ palipinals ಎಂಬ ಆಂಟಿಆಕ್ಸಿಡೆಂಟ್ ರೋಗ ನಿರೋಧಕ ಶಕ್ತಿಯನ್ನು ನೀಡಿ ಮುದಿತನವನ್ನು ಹೋಗಲಾಡಿಸಲು ಅನುಕೂವಾಗಿದೆ .

**ಮೂತ್ರನಾಳಗಳಲ್ಲಿ ಕಲ್ಲು **
ಕಡಲೆ ಕಾಯಿ ಬೀಜವನ್ನು ದಿನವೂ 30ಒನ್ಸ್ (30gram)ಅಳತೆಗೆ ಸೇವಿಸುತ್ತಾ ಬಂದರೆ ಪಿತ್ತ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ .20ವರ್ಶಗಳ ಸತತ ಸಂಶೋಧನೆಯಿಂದ 25%ಪಿತ್ತ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ ಎಂದು ತಿಳಿದು ಬಂದಿದೆ .
**ಮಾಂಸಗಳ ಬಲ ವರ್ಧನೆ ***
ಕಡಲೆಯಲ್ಲಿ ಉಳ್ಳ ವಿಟಮಿನ್ ಬಿ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ .ಮಾಂಸಖಂಡಗಳು ಬಲಗೊಳ್ಳುವಲ್ಲೂ ಇದು ಒಂದು .
ದೇಹದಲ್ಲಿ metabaolisam ಬದಲಾವಣೆಯನ್ನು ಹೆಚ್ಚಿಸುತ್ತದೆ .ಅದರಲ್ಲೂ ಜಿಮ್ ಗೆ ಹೋಗಿ ದೇಹವನ್ನು ಫಿಟ್ನೆಸ್ ನಲ್ಲಿಡುವವರಿಗೆ ಅತ್ಯುತ್ತಮ ಶಕ್ರಿಯನ್ನು ನೀಡುವ ಆಗರ ಕಡಲೆ ಯಲ್ಲಿದೆ .

**ಕೊಬ್ಬನ್ನು ಕರಗಿಸುತ್ತದೆ **
ಕಡಲೆ ತಿಂದರೆ ಕೊಬ್ಬು ಜಾಸ್ತಿಯಾಗುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ಕೆಲವರು ಇದನ್ನು ತಿನ್ನುವುದಿಲ್ಲ .
ಅದರಲ್ಲೂ ಮನುಷ್ಯನಿಗೆ ಒಳ್ಳೆಯದು ಮಾಡುವ ಒಳ್ಳೆಯ ಕೊಬ್ಬು ಗಳು ಈ ಕಡಲೆಯಲ್ಲಿದೆ .
ಇದರಲ್ಲಿರುವ ತಾಮ್ರಸತ್ತು ದೇಹದಲ್ಲಿ LDL ಎಂಬ ಕೆಟ್ಟ ಕೊಬ್ಬನ್ನು ಕಮ್ಮಿ ಮಾಡಿ ,ಒಳ್ಳೆಯ ಕೊಬ್ಬಾದHDL ಕೊಬ್ಬನ್ನು ಹೆಚ್ಚಿಸುತ್ತದೆ .
***ನ್ಯೂಟ್ರಿಯೆಂಟ್ಸ್ಗಗಳು ***
ಕಡಲೆಯಲ್ಲಿ ಕಾರ್ಬೋಹೈಡ್ರೇಡ್ಟ್ಸ್ ,ಫೈಬರ್ ,ಕರಗುವ ಕೊಬ್ಬು (HDL)ಪ್ರೊಟೀನ್ ,ವಿಟಮಿನ್ ,ಕಬ್ಬಿಣ ಅಂಶ ,ಕ್ಯಾಲ್ಸಿಯಂ ,ಝಿನ್ಕ್ ,ಮ್ಯಾಂಗನೀಸ್ ,ಪಾಸ್ಪರಸ್ ,ಪೊಟ್ಟ್ಯಾಷಿಯಂ ,ಮತ್ತು ನಮ್ಮ ದೇಹಕ್ಕೆ ಬೇಕಾದ ಅತ್ಯವಶ್ಯಕ ನ್ಯೂಟ್ರಿಯೆಂಟ್ಸ್ಗಳು ಅಷ್ಟೂ ಇರುವ ಕಡಲೆ ಸೇವಿಸಿದರೆ ನಮಗೆ ಸಿಗುವ ಪೋಷಕಾಂಶಗಳು ಎಷ್ಟೊಂದು ಎಂದು ಇದರಿಂದ ತಿಳಿದು ಬರುತ್ತದೆ .
ಮತ್ತೆ ಕಡಲೆ ತಿನ್ನುವವರು ಧೀರ್ಘಾಯುಷ್ಯವಾಗಿ ಬಾಳಬಹುದು ಮತ್ತು ಹಾರ್ಟ್ ಅಟ್ಯಾಕ್ ಅಂತವುಗಳನ್ನು ತಡೆಯಬಹುದೆಂದು ಅಧ್ಯಯನಗಳು ತಿಳಿಸಿವೆ.

Friday, December 6, 2024

*ನಮ್ಮ ಆತ್ಮಸಾಕ್ಷಿ ಒಪ್ಪುವಂತೆ ನಾವು ಬದುಕಿದರೆ ಅದುವೇ ನಿಜವಾದ ಸಹಜ ಜೀವನ.

*'ಅಹಂ'* ತಿಳಿಸಿತು ಅಲ್ಪ ಮಾನವ ನೀನೆಂದು.
*'ಅವಕಾಶ'* ತಿಳಿಸಿತು ಇಂಥಹ ಸಂದರ್ಭ ಮರಳಿ ಬಾರದೆಂದು.
*'ಆರೋಗ್ಯ'*  ತಿಳಿಸಿತು ಅಯೋಗ್ಯ ನನ್ನನ್ನು ಮರೆಯದಿರೆಂದು.
*'ಒಂಟಿತನ'*  ತಿಳಿಸಿತು ಕುಟುಂಬದ ಮೌಲ್ಯವೇನೆಂದು.
*'ಕಷ್ಟ'*  ತಿಳಿಸಿತು ನೈಜ ಬದುಕು ಯಾವುದೆಂದು.
*'ಗರ್ವ'*  ತಿಳಿಸಿತು ಬದುಕಿನ ಮರ್ಮ ಅರಿಯೆಂದು.
*'ಬಾಂಧವ್ಯ'*  ತಿಳಿಸಿತು ಭಾವನೆಗಳ ಬೆಲೆ ಏನೆಂದು.
*'ಪ್ರೀತಿ-ವಿಶ್ವಾಸ'*  ತಿಳಿಸಿತು ಇದೇ ನಿಜವಾದ ಬದುಕೆಂದು.
*'ಮಾರ್ಗದರ್ಶನ'*  ತಿಳಿಸಿತು ನಿಜವಾದ ಬದುಕಿನ ದಾರಿಯಾವುದೆಂದು.
*'ಸ್ನೇಹ'*  ತಿಳಿಸಿತು ಭಯ ಪಡಬೇಡ ಎಲ್ಲದಕ್ಕೂ ನಾನಿದ್ದೇನೆಂದು.
*'ಸಮಯ'*  ತಿಳಿಸಿತು ಮತ್ತೆ ನಾನು ಸಿಗುವುದಿಲ್ಲ ವೆಂದು.
*'ಸಹಪಾಠಿ'* ಗಳು ತಿಳಿಸಿದರು ನಮ್ಮ ನಿಜ ಸಾಮರ್ಥ್ಯ ವೇನೆಂದು.
*'ಸೊಕ್ಕು'*   ತಿಳಿಸಿತು ಸುಟ್ಟು ಹೋಗ್ತಿಯಾ ಎಚ್ವರವೆಂದು.
*'ಹಣ'*  ತಿಳಿಸಿತು ಉಳಿತಾಯದ ಮೌಲ್ಯವೇನೆಂದು.
*'ಹಸಿವು'*  ತಿಳಿಸಿತು ತುತ್ತಿನ ಮೌಲ್ಯವೇನೆಂದು.
ನನ್ನ ಮನಸ್ಸು ಹೇಳಿತು ಯಾರು ನಿಷ್ಕಲ್ಮಶ ಪ್ರೀತಿ, ಪ್ರಾಮಾಣಿಕತೆ, ಮತ್ತು ಆತ್ಮಸಾಕ್ಷಿಯಾಗಿ ಜೀವನ  ನಡೆಸುವರೋ ಅದುವೇ ನಿಜವಾದ ಬದುಕು ಇದನ್ನು ಬಿಟ್ಟು ಬೇರೇನೂ ಇಲ್ಲವೆಂದು.
*ನಮ್ಮ ಆತ್ಮಸಾಕ್ಷಿ ಒಪ್ಪುವಂತೆ ನಾವು ಬದುಕಿದರೆ ಅದುವೇ ನಿಜವಾದ ಸಹಜ ಜೀವನ.

Sunday, November 17, 2024

ಆರೋಗ್ಯವೇ ಶ್ರೇಷ್ಠ ಉಡುಗೊರೆ. ಸಂತೃಪ್ತಿಯೇ ಶ್ರೇಷ್ಠ ಸಂಪತ್ತು. ವಿಶ್ವಾಸದ ನಂಬಿಕೆಯೇ ಶ್ರೇಷ್ಠ ಸಂಬಂಧ.

ನಮ್ಮ ಕೋಪ ಎಷ್ಟು ದುಬಾರಿಯಾಗಿರಬೇಕೆಂದರೆ ಅದು ಯಾರಿಗೂ ಸಿಗದಂತೆ ಇರಬೇಕು.
  ನಮ್ಮ ನಗು ಎಷ್ಟು ಅಗ್ಗವಾಗಿರಬೇಕೆಂದರೆ ಅದನ್ನು ಯಾರು ಬೇಕಾದರೂ ಕೊಂಡು ಕೊಳ್ಳುವಂತಿರಬೇಕು.
    ಆರೋಗ್ಯವೇ ಶ್ರೇಷ್ಠ ಉಡುಗೊರೆ. 
        ಸಂತೃಪ್ತಿಯೇ ಶ್ರೇಷ್ಠ ಸಂಪತ್ತು.
 ವಿಶ್ವಾಸದ ನಂಬಿಕೆಯೇ ಶ್ರೇಷ್ಠ ಸಂಬಂಧ.

Friday, November 15, 2024

ಇವುಗಳ ಪೈಕಿ ಯಾವುದಾದರೂ ಐದನ್ನು ಅಳಿಸು'

*ಮದುವೆಯಾಗಿದ್ದರೆ ಮರೆಯದೇ ಓದಿ.*
ಜೀವನವು ನಮಗಿರುವುದು ಒಂದು ಬಾರಿ ಮಾತ್ರ. ಬಂದು ಹೋಗುವ ಈ ಬದುಕಿನಲ್ಲಿ ಆರೂ ಸಂಗಡ ಬಾಹೋರಿಲ್ಲ. ಸತ್ಯವೇ. ಆದರೆ?!?. ಬನ್ನಿ ಮನವಿಟ್ಟು ಓದಿರಿ. 
ಒಂದುದಿನ, ದೊಡ್ಡವರಿಗೆ ಏರ್ಪಡಿಸಿದ್ದ ಮನೋಶಾಸ್ತ್ರ ತರಗತಿಯಲ್ಲಿ ಮನಶಾಸ್ತ್ರ ಶಿಕ್ಷಕ 'ಇವತ್ತು ಒಂದು ಆಟ ಆಡೋಣ' ಎನ್ನುತ್ತಾನೆ.
'ಯಾವ ಆಟ?' ಎಂದು ಪ್ರಶ್ನಿಸಿದಾಗ, ವಿದ್ಯಾರ್ಥಿನಿಯೊಬ್ಬಳಿಗೆ ಬರಲು ಹೇಳುತ್ತಾನೆ.
ಹೇಮಾ ಎಂಬ ಹೆಣ್ಣುಮಗಳು ಎದ್ದು ಬರುತ್ತಾಳೆ. 
ಹೇಮಾ ನೀನು
ನಿನ್ನ ಜೀವನದಲ್ಲಿ ತುಂಬಾ ಮುಖ್ಯ ಅನಿಸುವ 30 ಜನರ ಹೆಸರುಗಳನ್ನು ಬೋರ್ಡ್ ಮೇಲೆ ಬರೆಯಬೇಕು ಎಂದರು ಶಿಕ್ಷಕರು.
ಹೇಮಾ 30 ಹೆಸರು ಬರೆದಳು. ಅದರಲ್ಲಿ ಆಕೆಯ ಕುಟುಂಬದ ಸದಸ್ಯರು, ಸಂಬಂಧಿಕರು, ಗೆಳೆಯ-ಗೆಳತಿಯರು, ಸಹೋದ್ಯೋಗಿಗಳು ಹಾಗೂ ನೆರೆಹೊರೆಯವರ ಹೆಸರುಗಳಿದ್ದವು.
'ಇವುಗಳ ಪೈಕಿ ಯಾವುದಾದರೂ ಐದನ್ನು ಅಳಿಸು'
ಆಕೆ ತನ್ನ ಸಹೋದ್ಯೋಗಿಗಳ ಹೆಸರು ಅಳಿಸಿದಳು.
ಅತಿಮುಖ್ಯ ಅನಿಸದ ಇನೈದು ಹೆಸರುಗಳನ್ನು ಅಳಿಸು'.
ತನ್ನ ನೆರೆಹೊರೆಯವರ ಹೆಸರುಗಳನ್ನು ಅಳಿಸಿದಳು ಹೇಮಾ.
ಹೀಗೆ ಅಳಿಸುವ ಕೆಲಸ ಮುಂದುವರೆದು, ಕೊನೆಗೆ ಕೇವಲ ನಾಲ್ಕು ಹೆಸರುಗಳು ಮಾತ್ರ ಬೋರ್ಡ್ ಮೇಲೆ ಉಳಿದವು. ಅವು, ಹೇಮಾಳ ತಂದೆತಾಯಿ, ಗಂಡ ಮತ್ತು ಮಗನದಾಗಿತ್ತು.
ಇಷ್ಟೊತ್ತಿಗೆ ಇಡೀ ಕ್ಲಾಸು ಸ್ತಬ್ದವಾಗಿತ್ತು. ಏಕೆಂದರೆ, ಈ ಅಳಿಸುವ ಆಟ ಕೇವಲ ಹೇಮಾಳೊಬ್ಬಳಿಗೇ ಸಂಬಂಧಿಸಿದ್ದಲ್ಲ ಎಂಬುದು ಅಲ್ಲಿರುವ ಎಲ್ಲರಿಗೂ ಬಹುತೇಕ ಸ್ಪಷ್ಟವಾಗಿತ್ತು.
ಈಗ, ಶಿಕ್ಷಕ ಇವುಗಳೊಳಗೆ ಅತೀ ಪ್ರಮುಖವೆನಿಸದ  ಇನ್ನೆರಡು ಹೆಸರು ಅಳಿಸಲು ಹೇಳಿದ.
ಇದು ನಿಜಕ್ಕೂ ಸವಾಲಿನದಾಗಿತ್ತು. ಅತ್ಯಂತ ಕಷ್ಟದಿಂದ ಹೇಮಾ ತನ್ನ ತಂದೆ ತಾಯಿಗಳ ಹೆಸರುಗಳನ್ನು ಅಳಿಸಿದಳು.
ಉಳಿದಿದ್ದು ಗಂಡ ಮತ್ತು ಮಗನ ಹೆಸರುಗಳು ಮಾತ್ರ.
'ದಯವಿಟ್ಟು ಹೇಮಾ, ಇನ್ನೊಂದು ಹೆಸರನ್ನು ಅಳಿಸು, ಇಲ್ಲಿಗೆ ಆಟವನ್ನು ಮುಗಿಸೋಣ ಎಂದರು. 
ನಿಸ್ತೇಜಳಾದಳು ಹೇಮಾ. ಕೈಗಳು ನಡುಗಲಾರಂಭಿಸಿದವು. ಕಣ್ಣುಗಳು ತುಂಬಿ ಬಂದವು. ಅಳುತ್ತಲೇ ಆಕೆ ತನ್ನ ಮಗನ ಹೆಸರನ್ನು ಅಳಿಸಿದಳು. ನಂತರ ಜೋರಾಗಿ ಅತ್ತುಬಿಟ್ಟಳು.
ಹೇಮಾಳನ್ನು ಆಕೆಯ ಆಸನದಲ್ಲಿ ಕುಳಿತುಕೊಳ್ಳಲು ಹೇಳಿದ ಶಿಕ್ಷಕ ತರಗತಿಯನುದ್ದೇಶಿಸಿ ಕೇಳಿದ: 
'ನಿನ್ನ ಗಂಡನ ಹೆಸರನ್ನಷ್ಟೇ ಏಕೆ ಉಳಿಸಿಕೊಂಡೆ?!.ತಂದೆ ತಾಯಿ ನಿನಗೆ ಜನ್ಮವಿತ್ತು, ಸಾಕಿ ಸಲಹಿದವರು. ಇನ್ನು ಒಬ್ಬ ಮಗನಿಗೆ ನೀನೇ ಜನ್ಮವಿತ್ತಿದ್ದೀ. ಅವರ್ಯಾರೂ ನಿನಗೆ ಮತ್ತೆ ಸಿಗುವವರಲ್ಲ. ಆದರೆ, ಬೇಕೆಂದರೆ ಬೇರೊಬ್ಬನನ್ನು ನೀನು ಗಂಡನನ್ನಾಗಿ ಮಾಡಿಕೊಳ್ಳುವ ಅವಕಾಶ ಇದ್ದೇ ಇದೆ'.
ಇಡೀ ತರಗತಿ ಉಸಿರು ಬಿಡದೇ ಹೇಮಾಳ ಉತ್ತರಕ್ಕಾಗಿ ಕಾಯುತ್ತಿತ್ತು.
ಹೇಮಾ ಶಾಂತಳಾಗಿ, ನಿಧಾನವಾಗಿ ಉತ್ತರಿಸಿದಳು:
ಒಂದಿಲ್ಲೊಂದು ದಿನ ತಂದೆತಾಯಿ ನನ್ನನ್ನು ಬಿಟ್ಟು ಹೋಗುವರು.ಹೋಗಬೇಕಾಗುವುದು.
ಮಗನು ಕೂಡಾ ದೊಡ್ಡವನಾದ ಮೇಲೆ ತನ್ನ ಓದು, ತನ್ನ ಕೆಲಸ, ತನ್ನ ಸಂಸಾರದ ಹೊಣೆಗಾರಿಕೆ, ಅಥವಾ ಇತರ ಕಾರಣಗಳಿಗಾಗಿ ನನ್ನನ್ನು ಬಿಟ್ಟು ಹೋಗಬಹುದು.
'ಆದರೆ, ಗಂಡ ಜೀವನದುದ್ದಕ್ಕೂ ನನ್ನ ಜೊತೆಗೇ ಇರುವವನು'.ಒಮ್ಮೆ ವಿವಾಹಿತಳಾದ ಹೆಣ್ಣು ಸರ್ವಸ್ವವನ್ನೂ ಅರ್ಪಿಸಿದ ಮೇಲೆ ಅನ್ಯ ವಿಷಯಗಳನ್ನು ಅಪೇಕ್ಷಿಸಳು. 
ಇಡೀ ತರಗತಿ ಎದ್ದು ನಿಂತು ಚಪ್ಪಾಳೆ ತಟ್ಟಿತು.
ಇದೇ ಜೀವನದ ಸತ್ಯ. ಆದ್ದರಿಂದ, ನಿಮ್ಮ ಸಂಗಾತಿಯೇ ಮುಖ್ಯ. ಇದು ಹೆಂಡತಿಯರಿಗಷ್ಟೇ ಅಲ್ಲ, ಗಂಡಂದಿರಿಗೂ ಅನ್ವಯಿಸುತ್ತದೆ.
ವಂದನೆಗಳೊಂದಿಗೆ .

Tuesday, November 12, 2024

ನೀರಿನಿಂದ ದಡಕ್ಕೆ ಎಸೆದ ಮೀನಿನ ಪರಿಸ್ಥಿತಿ?

ನೀರಿನಲ್ಲಿರುವ ಮೀನನ್ನು ತೆಗೆದು ದಡಕ್ಕೆ ಎಸೆದು, ನನ್ನ ಬಗ್ಗೆ ಚಿಂತಿಸಬೇಡ ನೀನು ಚೆನ್ನಾಗಿರು ಎಂದು ಹೇಳಿದರೆ ಮೀನಿನ  ಪರಿಸ್ಥಿತಿ ಹೇಗಾಗಿರಬಹುದು?

ನಮ್ರತೆಯು ಜನರನ್ನು ಪ್ರೀತಿಯಿಂದ ಹತ್ತಿರ ತರುತ್ತದೆ.

*ಎಲ್ಲರಿಗೂ ಆರೋಗ್ಯ ದಿನದ ಶುಭಾಶಯಗಳು*

🄷🄰🄿🄿🅈 🄸🄽🅃🄴🅁🄽🄰🅃🄸🄾🄽🄰🄻

🄷🄴🄰🄻🅃🄷

🄳🄰🅈

ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು:

1. ಬಿಪಿ: 120/80

2. ನಾಡಿ: 70 -100

3. ತಾಪಮಾನ: 36.8 - 37

4. ಉಸಿರಾಟ: 12-16

5. ಹಿಮೋಗ್ಲೋಬಿನ್: ಪುರುಷ 13.50 - 18

ಹೆಣ್ಣು 11.50 - 16

6. ಕೊಲೆಸ್ಟ್ರಾಲ್: 130 - 200

7. ಪೊಟ್ಯಾಸಿಯಮ್: 3.50 - 5

8. ಸೋಡಿಯಂ: 135 - 145

9. ಟ್ರೈಗ್ಲಿಸರೈಡ್‌ಗಳು : 220

10. ದೇಹದಲ್ಲಿ ರಕ್ತದ ಪ್ರಮಾಣ : PCV 30-40%

11. ಸಕ್ಕರೆ ಮಟ್ಟ:

70-130 ಮಕ್ಕಳಿಗೆ

ವಯಸ್ಕರಿಗೆ: 70 - 115

12. ಕಬ್ಬಿಣ : 8-15 ಮಿಗ್ರಾಂ

13. ಬಿಳಿ ರಕ್ತ ಕಣಗಳು WBC : 4000 - 11000

14. ಕಿರುಬಿಲ್ಲೆಗಳು : 1,50,000- 4,00,000

15. ಕೆಂಪು ರಕ್ತ ಕಣಗಳು RBC : 4.50 - 6 ಮಿಲಿಯನ್

16. ಕ್ಯಾಲ್ಸಿಯಂ : 8.6 -10.3 mg/dL

17. ವಿಟಮಿನ್ D3 : 20 - 50 ng/ml.

18. ವಿಟಮಿನ್ B12 : 200 - 900 pg/ml

*40/50/60 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ವಿಶೇಷ ಸಲಹೆಗಳು:*
*ಮೊದಲ ಸಲಹೆ:* ನಿಮಗೆ ಬಾಯಾರಿಕೆ ಇಲ್ಲದಿದ್ದರೂ ಅಥವಾ ಅವಶ್ಯಕತೆಯಿಲ್ಲದಿದ್ದರೂ ಯಾವಾಗಲೂ ನೀರನ್ನು ಕುಡಿಯಿರಿ, ಹೆಚ್ಚಿನ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನವು ದೇಹದಲ್ಲಿ ನೀರಿನ ಕೊರತೆಯಿಂದ ಉಂಟಾಗುತ್ತವೆ. 
ದಿನಕ್ಕೆ ಕನಿಷ್ಠ 2 ಲೀಟರ್. 
*ಎರಡನೇ ಸಲಹೆ:* ನಿಮ್ಮ ಕೈಲಾದಷ್ಟು ಕೆಲಸ ಮಾಡಿ, ದೇಹದ ಚಲನೆ ಇರಬೇಕು.. ವಾಕಿಂಗ್, ಈಜು, ಅಥವಾ ಯಾವುದೇ ರೀತಿಯ ಕ್ರೀಡೆ.

*ಮೂರನೇ ಸಲಹೆ:* ಕಡಿಮೆ ತಿನ್ನಿ.. ಹೆಚ್ಚು ಆಹಾರಕ್ಕಾಗಿ ಹಂಬಲಿಸುವುದನ್ನು ನಿಲ್ಲಿಸಿ... ಏಕೆಂದರೆ ಅದು ಎಂದಿಗೂ ಒಳ್ಳೆಯದಕ್ಕೆ ಕಾರಣವಾಗುವುದಿಲ್ಲ. 
ನಿಮ್ಮನ್ನು ವಂಚಿತಗೊಳಿಸಬೇಡಿ, ಆದರೆ ಪ್ರಮಾಣವನ್ನು ಕಡಿಮೆ ಮಾಡಿ. 
ಹೆಚ್ಚು ಪ್ರೋಟೀನ್, ಕಾರ್ಬೋಹೈಡ್ರೇಟ್ ಭರಿತ ಆಹಾರಗಳನ್ನು ಬಳಸಿ.

*ನಾಲ್ಕನೇ ಸಲಹೆ:* ತೀರಾ ಅಗತ್ಯವಿದ್ದಲ್ಲಿ ವಾಹನವನ್ನು ಬಳಸಬೇಡಿ. 
ನೀವು ದಿನಸಿ ಪಡೆಯಲು, ಯಾರನ್ನಾದರೂ ಭೇಟಿ ಮಾಡಲು ಅಥವಾ ಯಾವುದೇ ಕೆಲಸವನ್ನು ಮಾಡಲು ಎಲ್ಲಿಯಾದರೂ ಹೋಗುತ್ತಿದ್ದರೆ, ನಿಮ್ಮ ಕಾಲುಗಳ ಮೇಲೆ ನಡೆಯಲು ಪ್ರಯತ್ನಿಸಿ. 
ಲಿಫ್ಟ್, ಎಸ್ಕಲೇಟರ್ ಬಳಸುವ ಬದಲು ಮೆಟ್ಟಿಲುಗಳನ್ನು ಹತ್ತಬೇಕು.

*ಐದನೇ ಸಲಹೆ:* ಕೋಪವನ್ನು ಬಿಡಿ, ಚಿಂತಿಸುವುದನ್ನು ನಿಲ್ಲಿಸಿ, ವಿಷಯಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ. 
ತೊಂದರೆದಾಯಕ ಸಂದರ್ಭಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. 
ಅವರೆಲ್ಲರೂ ಆರೋಗ್ಯವನ್ನು ಹಾಳುಮಾಡುತ್ತಾರೆ ಮತ್ತು ಆತ್ಮದ ವೈಭವವನ್ನು ಕಸಿದುಕೊಳ್ಳುತ್ತಾರೆ. 
ಸಕಾರಾತ್ಮಕ ಜನರೊಂದಿಗೆ ಮಾತನಾಡಿ ಮತ್ತು ಅವರ ಮಾತುಗಳನ್ನು ಆಲಿಸಿ.


*ಆರನೇ ಸಲಹೆ:* ಮೊದಲನೆಯದಾಗಿ, ಹಣದ ಬಾಂಧವ್ಯವನ್ನು ಬಿಡಿ. 
ನಿಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕ ಸಾಧಿಸಿ, ನಗು ಮತ್ತು ಮಾತನಾಡಿ! 
ಹಣವನ್ನು ಬದುಕಲು ಮಾಡಲಾಗುತ್ತದೆ, ಜೀವನವು ಹಣಕ್ಕಾಗಿ ಮಾಡಲ್ಪಟ್ಟಿಲ್ಲ.


*ಏಳನೇ ಟಿಪ್ಪಣಿ:* ನಿಮ್ಮ ಬಗ್ಗೆ, ಅಥವಾ ನೀವು ಸಾಧಿಸಲು ಸಾಧ್ಯವಾಗದ ವಿಷಯದ ಬಗ್ಗೆ ಅಥವಾ ನೀವು ಬೆಂಬಲಿಸಲು ಸಾಧ್ಯವಾಗದ ವಿಷಯದ ಬಗ್ಗೆ ಪಶ್ಚಾತ್ತಾಪ ಪಡಬೇಡಿ. 
ಅದನ್ನು ನಿರ್ಲಕ್ಷಿಸಿ ಮತ್ತು ಮರೆತುಬಿಡಿ.


*ಎಂಟನೇ ಸಲಹೆ:* ಸಂಪತ್ತು, ಸ್ಥಾನ, ಪ್ರತಿಷ್ಠೆ, ಅಧಿಕಾರ, ಸೌಂದರ್ಯ, ಜಾತಿ ಮತ್ತು ಪ್ರಭಾವ; 
ಇವೆಲ್ಲವೂ ಅಹಂಕಾರವನ್ನು ಹೆಚ್ಚಿಸುತ್ತವೆ. 
ನಮ್ರತೆಯು ಜನರನ್ನು ಪ್ರೀತಿಯಿಂದ ಹತ್ತಿರ ತರುತ್ತದೆ.


*ಒಂಬತ್ತನೇ ಸಲಹೆ:* ನೀವು ಬೂದು ಕೂದಲು ಹೊಂದಿದ್ದರೆ ಅದು ಜೀವನದ ಅಂತ್ಯ ಎಂದು ಅರ್ಥವಲ್ಲ. 
ಇದು ಉತ್ತಮ ಜೀವನಕ್ಕೆ ನಾಂದಿ. 
ಆಶಾವಾದಿಯಾಗಿರಿ, ನೆನಪಿನೊಂದಿಗೆ ಬದುಕಿ, ಪ್ರಯಾಣಿಸಿ ಮತ್ತು ಆನಂದಿಸಿ... ನೆನಪುಗಳನ್ನು ಮಾಡಿಕೊಳ್ಳಿ. 
*ಹತ್ತನೇ ಸೂಚನೆ:* ನಿಮ್ಮ ಕಿರಿಯರನ್ನು ಪ್ರೀತಿ, ಸಹಾನುಭೂತಿ ಮತ್ತು ಪ್ರೀತಿಯಿಂದ ಭೇಟಿ ಮಾಡಿ! 
ಯಾರೊಂದಿಗೂ ವ್ಯಂಗ್ಯವಾಗಿ ಏನನ್ನೂ ಹೇಳಬೇಡಿ. 
ನಿಮ್ಮ ಮುಖದಲ್ಲಿ ನಗುವನ್ನು ಇಟ್ಟುಕೊಳ್ಳಿ. 
ಹಿಂದೆ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವರ್ತಮಾನದಲ್ಲಿ ಅದನ್ನು ಮರೆತು ಎಲ್ಲರೊಂದಿಗೆ ಬೆರೆಯಿರಿ!


ತಪ್ಪನ್ನು ತಪ್ಪು ಎಂದು ಕರೆಯಿರಿ ಆದರೆ ಅದನ್ನು ಹೃದಯಕ್ಕೆ ತೆಗೆದುಕೊಳ್ಳಬೇಡಿ.


*🍁 ಆರೋಗ್ಯ ದಿನದ ಶುಭಾಶಯಗಳು 🍁*

*ಎಲ್ಲರಿಗೂ ಆರೋಗ್ಯಕರ ಜೀವನಕ್ಕಾಗಿ ಶುಭಾಶಯಗಳು*💐

ವಂದನೆಗಳೊಂದಿಗೆ 
ನಂಜುಂಡಸ್ವಾಮಿ

Thursday, October 3, 2024

*ಜೀವನದಲ್ಲಿ ದುಃಖಕ್ಕೆ ಯಾರು ಕಾರಣ?*

*ಜೀವನದಲ್ಲಿ ದುಃಖಕ್ಕೆ ಯಾರು  ಕಾರಣ?*

ದೇವರೇ?                         ಅಲ್ಲ 
ಗ್ರಹ -ನಕ್ಷತ್ರಗಳೇ?             ಅಲ್ಲ 
ಭಾಗ್ಯವೇ?                        ಅಲ್ಲ 
ಸಂಬಂಧಿಗಳೇ?                ಅಲ್ಲ 
ನೆರೆಹೊರೆಯವರೇ?          ಅಲ್ಲ 
ಸರಕಾರವೇ?                    ಅಲ್ಲ 

ನಮ್ಮ ದುಃಖಗಳಿಗೆ ನಾವೇ 
ಸ್ವಯಂ ಜವಾಬ್ದಾರರು 

ತಲೆನೋವು, ಬಿ ಪಿ ಮುಂತಾದವುಗಳಿಗೆ 
ಕಾರಣ -ಅನಗತ್ಯ ವಿಚಾರಗಳು 

ಹೊಟ್ಟೆನೋವು, ಮತ್ತಿತರ ತೊಂದರೆಗಳಿಗೆ ಕಾರಣ -ತಿನ್ನಬಾರದ್ದನ್ನು ತಿನ್ನುವುದು  

ಸಾಲ ಹೆಚ್ಚಲು ಕಾರಣ, -ಅವಶ್ಯಕತೆ ಮೀರಿ ಖರ್ಚು ಮಾಡುವುದು 

ಕೋರ್ಟ್ ಸುತ್ತುವಿಕೆ ಕಾರಣ
-ಪ್ರತಿಷ್ಠೆ, ಅಹಂಕಾರಗಳು 

ದುರ್ಬಲ /ದಪ್ಪ /ರೋಗಮಯ 
ಶರೀರಕ್ಕೆ ಕಾರಣ -ತಪ್ಪು ಜೀವನ ಶೈಲಿ 

ಅನಗತ್ಯ ವಿವಾದಗಳಿಗೆ ಕಾರಣ -ಹೆಚ್ಚು ಮತ್ತು ವ್ಯರ್ಥ ಮಾತನಾಡುವಿಕೆ 

ಮೇಲಿನ ಕಾರಣಗಳಲ್ಲದೇ ಇನ್ನೂ ನೂರಾರು ಕಾರಣಗಳಿರಬಹುದು. ನಾವು ದೋಷವನ್ನು ಇನ್ನೊಬ್ಬರ ಮೇಲೆ ಹೊರಿಸುತ್ತೇವೆ. ಕಷ್ಟಗಳ ಕಾರಣವನ್ನು ಸೂಕ್ಷ್ಮ ವಾಗಿ ಪರಿಶೀಲಿಸಿದರೆ ಅವುಗಳ ಹಿಂದೆ ನಮ್ಮ ಮೂರ್ಖತೆಯೇ ಅಡಗಿರುತ್ತದೆ. 
ದೂರು -ದುಮ್ಮಾನಗಳನ್ನು ಉಸಿರು ಇರುವ ತನಕ ಮಾಡಬಹುದಷ್ಟೆ 

ಕೊನೆಯಲ್ಲಿ ಉಳಿಯುವುದು 
ಪಶ್ಚಾತಾಪ ಮಾತ್ರ 

ಧರ್ಮಮಯ ಬದುಕು 
ಜೀವನಕೆ ಬೆಳಕು 

ಪ್ರಾಮಾಣಿಕವಾಗಿರಿ 
ಸಂತೋಷವಾಗಿರಿ 
ನಗುನಗುತ್ತಾ ಇರಿ... ಮುದ್ದು ಮಕ್ಕಳ ತರಹ

Monday, September 9, 2024

ಬುದ್ಧ 2600 ವರ್ಷಗಳ ಹಿಂದೆ ಹೇಳಿದ್ದು, "ಇತರರಿಗಾಗಿ ಬದುಕುವವರು ನಿಜವಾಗಿಯೂ ಬದುಕುತ್ತಾರೆ,"

ಇತರರಿಗಾಗಿ~ 
                 ಬದುಕಿರಿ~
ಅದೇ ನಿಜವಾದ *ಯಶಸ್ಸು*

ಪ್ರೊಫೆಸರ್ ಒಬ್ಬರು ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದವೊಂದರಲ್ಲಿ  "ಯಶಸ್ಸು" ಎಂದರೇನು?  ಎಂದು ಕೇಳಿದರು.ಆಗ ಯುವತಿಯೊಬ್ಬಳು, "ಯಶಸ್ಸು" ಎಂದರೆ ಹಣ ಮಾಡುವುದು!  ಎಂದಳು.

ಆಗ ಪ್ರಾಧ್ಯಾಪಕರು "ಇಪ್ಪತ್ತು ವರ್ಷಗಳ ಹಿಂದೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?" ಎಂದು ಕೇಳಿದಾಗ  ಯಾರೂ ಉತ್ತರಿಸಲಿಲ್ಲ.
(ಏಕೆಂದರೆ ಇದು ಪ್ರತಿ ವರ್ಷ ಬದಲಾಗುತ್ತದೆ)

ಬದುಕಲು  ಹಣ ಬೇಕು, ಆದರೆ ಹಣವೇ ಬದುಕಲ್ಲವಲ್ಲ!  
ಹಾಗಾದರೆ "ಯಶಸ್ಸು" ಎಂದರೆ ಹಣ ಗಳಿಸುವುದಲ್ಲ.
   
ಮತ್ತೊಬ್ಬ ಯುವಕ ಎದ್ದುನಿಂತು ಯಶಸ್ಸು ಎಂದರೆ ಶಕ್ತಿ/ಬಲ ಎಂದನು.

ಹಾಗಿದ್ದಲ್ಲಿ ಅಲೆಕ್ಸಾಂಡರ್, ನೆಪೋಲಿಯನ್, ಮುಸೊಲಿನಿ, ಹಿಟ್ಲರ್, ಸ್ಟಾಲಿನ್, ಬಿನ್ ಲಾಡೆನ್... ಇವರೆಲ್ಲ ಬಲಿಷ್ಠರಾಗಿದ್ದು, ಜಗತ್ತನ್ನೇ ಗೆಲ್ಲಬೇಕೆಂದುಕೊಂಡವರು, ಅವರುಗಳು ಜೀವನದಲ್ಲಿ ಸುಖವಾಗಿರಬಹುದಿತ್ತು ಅಲ್ಲವೇ?  ಅವರ ಜೀವನವು ಹೇಗೆ ಸಾಗಿತು ಮತ್ತು ಕೊನೆಗೊಂಡಿತು ಎಂಬುದನ್ನು ಇತಿಹಾಸ ಹೇಳುತ್ತದೆ ಅಲ್ಲವೇ?  
ತನ್ನ ಶಕ್ತಿ ಮತ್ತು ಪಂಚ್‌ಗಳಿಂದ ಪರಾಕ್ರಮಿಗಳನ್ನು ಸೋಲಿಸಿದ ವಿಶ್ವ ಚಾಂಪಿಯನ್ ಬಾಕ್ಸರ್ ಮುಹಮ್ಮದ್ ಅಲಿ, ಕೆಲವು ವರ್ಷಗಳ ನಂತರ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ,ಮತ್ತು ಒಂದು  ಕಾಫಿಯ ಕಪ್ಪನ್ನು ಸಹ ಎತ್ತಿಕೊಳ್ಳಲು ಸಾಧ್ಯವಾಗಲಿಲ್ಲ. 
ಆದ್ದರಿಂದ "ಯಶಸ್ಸು" ಎಂದರೆ ಶಕ್ತಿ/ಬಲ ಅಂತೂ ಅಲ್ಲ.

ಮತ್ತೋರ್ವ ಯುವತಿ, "ಯಶಸ್ಸು" ಎಂದರೆ ಕೀರ್ತಿ ಮತ್ತು ಸೌಂದರ್ಯ!ಎಂದಳು.

ಹಾಗಾದರೆ ಕೇಟ್ ,ಮಾಸ್, ಸೋಫಿಯಾ ಲಾರೆನ್, ಮರ್ಲಿನ್ ಮನ್ರೋ...ರಂತಹ ಲೌಕಿಕ ಸುಂದರಿಯರ ಬದುಕು ಎಷ್ಟು ನೋವಿನಿಂದ ಕೂಡಿತ್ತು ಎಂಬುದು ಹಲವರಿಗೆ ತಿಳಿದಿಲ್ಲ.!
ಭಾರತದ ಮಟ್ಟಿಗೆ ಹೇಳುವುದಾದರೆ ಪರ್ವೀನ್ ಬಾಬಿ ಎಂಬ ಹಿಂದಿ ನಾಯಕಿ ಇದ್ದಳು.  ಅಮಿತಾಬ್ ಬಚ್ಚನ್ ಸೇರಿದಂತೆ ಹಿಂದಿ ಚಿತ್ರರಂಗದ ಪ್ರತಿಯೊಬ್ಬರೂ ಆಕೆಯನ್ನು ಮದುವೆಯಾಗಲು ಪರದಾಡುತ್ತಿದ್ದರು, ಅಷ್ಟು ಸುಂದರಿ.  ಡ್ಯಾನಿ, ಕಬೀರ್ ಬೇಡಿ ಮತ್ತು ಮಹೇಶ್ ಭಟ್ ಅವರೊಂದಿಗಿನ ಅವಳ ಪ್ರಣಯ ಮತ್ತು ಮದುವೆಗಳು ವಿಫಲವಾದವು,ಮತ್ತು ನಂಬಿದವರೇ ಅವಳನ್ನು ಮೋಸಗೊಳಿಸಿದಾಗ ಕುಡಿತದ ಚಟಕ್ಕೆ ಬಿದ್ದು, ಒಂದು ಹಂತದಲ್ಲಿ ಅವಳ ಕಾಲಿಗೆ ಹುಣ್ಣಾದಾಗ, ಅದು ದೇಹಕ್ಕೆಲ್ಲ ವ್ಯಾಪಿಸಿತು. ಯಾವ ದೇಹಕ್ಕೆ ಅದೆಷ್ಟು ಗಂಡಸರು ಹುಚ್ಚೆದ್ದು ಕುಣಿಯುತ್ತಿದ್ದರೋ, ಅದೇ ದೇಹ ಅವಳಿಗೆ ವಿಚಿತ್ರ ಕಾಯಿಲೆಯೊಂದು  ಬಂದು
ದುರ್ವಾಸನೆ ಬೀರುತ್ತಿತ್ತೆಂದು ಜನ ಆಕೆಯನ್ನು ಹಗ್ಗದಿಂದ ಕಟ್ಟಿ, ಮುಂಬೈನ ಬೀದಿಗಳಲ್ಲಿ ಎಳೆದೊಯ್ದು ಆಕೆಯ ಮನೆಗೆ ಕರೆದೊಯ್ದರು.ಕೊನೆಗೆ, ಆಕೆಯ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ದೂರು ನೀಡಿದಾಗ, ಕಾರ್ಪೊರೇಷನ್ನವರು ಬಂದು 3 ದಿನಗಳ ನಂತರ ಆಕೆಯನ್ನು ಶವವಾಗಿ ಕಂಡು ಹೂತುಹಾಕಿದರು.  
ಹಾಗಾಗಿ  ಸೌಂದರ್ಯ ಮತ್ತು ಖ್ಯಾತಿ/ಕೀರ್ತಿ *ಯಶಸ್ಸು* ಎನಿಸದು ಎಂದರು ಪ್ರೊಫೆಸರ್ .

 ಆಗ ಇನ್ನೊಬ್ಬರು "ಅಧಿಕಾರ,ಪದವಿ" ಗಳೇ ಯಶಸ್ಸು ಎಂದರು.

ಹಾಗಾದರೆ ಈ ದೇಶವನ್ನು ಆಳಿದ ಎಲ್ಲಾ ಪ್ರಧಾನಿಗಳ ಹೆಸರನ್ನು ಕಾಗದದ ಮೇಲೆ ಬರೆಯಿರಿ!" ಎಂದರು ಪ್ರೊಫೆಸರ್ .          ಆದರೆ 50ರಲ್ಲಿ 39 ಮಂದಿಗೆ ಎಲ್ಲ  ಪ್ರದಾನಿಗಳ ಹೆಸರನ್ನು ಬರೆಯಲಾಗಲಿಲ್ಲ.
ಆದ್ದರಿಂದ  ಅಧಿಕಾರ,ಪದವಿಗಳೂ "ಯಶಸ್ಸು" ಅಲ್ಲ ಎಂದಾಯಿತು. 
ಕೆಲವು ಕ್ಷಣ ನೀರವ ಮೌನ ಆವರಿಸಿತು,,,,,,
ಎಲ್ಲರೂ ಉತ್ತರಿಸದೆ ಸುಮ್ಮನಿರುವಾಗ, ಪ್ರೊಫೆಸರ್
"ನಿಮಗೆ ನಿಮ್ಮ ಅಜ್ಜ,ಅಜ್ಜಿಯ ಹೆಸರುಗಳು ಗೊತ್ತಾ?" ಎಂದರು.

 ಎಲ್ಲರೂ ‘ಗೊತ್ತು’ ಎಂದರು.

ಅವರ ತಾತ ಅಜ್ಜಿಯರ ಹೆಸರು ನಿಮಗೆ ತಿಳಿದಿದೆಯೇ?"  ಎಂದು ಕೇಳಿದಾಗ ಐದು ಜನ ಮಾತ್ರ "ನನಗೆ ಗೊತ್ತು" ಎಂದರು.
ಆಗ ಪ್ರೊಫೆಸರ್ ಮುಂದುವರೆದು
ಅವರ ತಾತ ಅಜ್ಜಿಯರ ಹೆಸರು ನಿಮಗೆ ತಿಳಿದಿದೆಯೇ?" ಎಂದರು.
ಅವರು ‘ಗೊತ್ತಿಲ್ಲ’ ಎಂದರು.

 ಆಗ ಪ್ರೊಫೆಸರ್ ಕೇಳಿದರು, "ಶ್ರೀರಾಮ, ಶ್ರೀಕೃಷ್ಣ, ಬುದ್ಧ, ಆದಿಶಂಕರ, ಎಲ್ಲರೂ...?"

"ಒಹ್ ನಮಗೆ ಗೊತ್ತು!" ಎಂದು ಎಲ್ಲರೂ ಒಕ್ಕೊರಲಿನಿಂದ  ಉತ್ತರಿಸಿದರು.

ನಿಮ್ಮ ಸ್ವಂತ ತಾತ ಅಜ್ಜಿಯರು ನಿಮಗೆ ನೆನಪಿರುವುದಿಲ್ಲ, ಆದರೆ ನೀವು ಎಂದಿಗೂ ಭೇಟಿಯಾಗದ ಈ ಎಲ್ಲ ಜನರನ್ನು ಹೇಗೆ ನೆನಪಿಟ್ಟುಕೊಂಡಿರುವಿರಿ????"  

ಪ್ರೊಫೆಸರ್ ನೀಡಿದ  ಉಪನ್ಯಾಸದಿಂದ ತುಂಬಾ ಪ್ರಭಾವಿತರಾದ ಒಬ್ಬ ವಿದ್ಯಾರ್ಥಿ  ಹೇಳಿದ ಉತ್ತರ: “ಸರ್, ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ_ ಇಂದಿಗೂ ರಾಮ, ಕೃಷ್ಣ, ಬುದ್ಧನ ಹೆಸರುಗಳು ನೆನಪಾಗುತ್ತವೆ...  ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಮಾತ್ರ ಬದುಕುವವರನ್ನು ಜಗತ್ತು ಮರೆತುಬಿಡುತ್ತದೆ, ಆದರೆ ಇತರರಿಗಾಗಿ ಬದುಕುವವರನ್ನು ಜಗತ್ತು ಯಾವಾಗಲೂ ನೆನಪಿಸಿಕೊಳ್ಳುತ್ತದೆ.  
ಇದೇ ನಿಜವಾದ ಯಶಸ್ಸು! ”

ಅದನ್ನೇ ಬುದ್ಧ 2600 ವರ್ಷಗಳ ಹಿಂದೆ ಹೇಳಿದ್ದು, "ಇತರರಿಗಾಗಿ ಬದುಕುವವರು ನಿಜವಾಗಿಯೂ ಬದುಕುತ್ತಾರೆ,"

ವಂದನೆಗಳೊಂದಿಗೆ 
 ಇತಿ 
 ನಂಜುಂಡಸ್ವಾಮಿ 

Saturday, August 31, 2024

*ಐದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವ ಮಹಾಭಾರತದ ಸಾರವನ್ನು ಕೇವಲ ಒಂಬತ್ತು ಸಾಲುಗಳಲ್ಲಿ ಅರ್ಥಮಾಡಿಕೊಳ್ಳಿ*

*ಐದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವ ಮಹಾಭಾರತದ ಸಾರವನ್ನು ಕೇವಲ ಒಂಬತ್ತು ಸಾಲುಗಳಲ್ಲಿ ಅರ್ಥಮಾಡಿಕೊಳ್ಳಿ* 
ನೀವು ಹಿಂದೂ ಆಗಿರಲಿ ಅಥವಾ ಬೇರೆ ಯಾವುದೇ ಧರ್ಮದವರಾಗಿರಲಿ. ನೀವು ಮಹಿಳೆಯಾಗಿರಲಿ ಅಥವಾ ಪುರುಷರಾಗಿರಲಿ, ನೀವು ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ನೀವು ನಿಮ್ಮ ದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ಸಂಕ್ಷಿಪ್ತವಾಗಿ, ನೀವು ಮನುಷ್ಯರಾಗಿದ್ದರೆ, ಕೆಳಗಿನ ಮಹಾಭಾರತದಿಂದ ಅಮೂಲ್ಯವಾದ *"9 ಮುತ್ತುಗಳನ್ನು"* ಓದಿ ಮತ್ತು ಅರ್ಥಮಾಡಿಕೊಳ್ಳಿ: 

1. ನಿಮ್ಮ ಮಕ್ಕಳ ವಿವೇಚನಾರಹಿತ ಬೇಡಿಕೆಗಳು ಮತ್ತು ಆಸೆಗಳನ್ನು ನೀವು ಸಮಯಕ್ಕೆ ನಿಯಂತ್ರಿಸದಿದ್ದರೆ, ನೀವು ಜೀವನದಲ್ಲಿ ಅಸಹಾಯಕರಾಗುತ್ತೀರಿ... **"*ಕೌರವರು"** 
2. ನೀವು ಎಷ್ಟೇ ಬಲಶಾಲಿಯಾಗಿದ್ದರೂ, ನೀವು ಅಧರ್ಮವನ್ನು ಬೆಂಬಲಿಸಿದರೆ, ನಿಮ್ಮ ಶಕ್ತಿ, ಆಯುಧಗಳು, ಕೌಶಲ್ಯಗಳು ಮತ್ತು ಆಶೀರ್ವಾದಗಳು ಎಲ್ಲವೂ ನಿಷ್ಪ್ರಯೋಜಕವಾಗುತ್ತವೆ... **"*ಕರ್ಣ"** 
3. ನಿಮ್ಮ ಮಕ್ಕಳು ಮಹತ್ವಾಕಾಂಕ್ಷೆಯಿಂದ ತಮ್ಮ ಜ್ಞಾನವನ್ನು ದುರುಪಯೋಗಪಡಿಸಿಕೊಳ್ಳದಂತೆ  ನೋಡಿಕೊಳ್ಳಿ, ಇಲ್ಲವಾದರೆ ಸಂಪೂರ್ಣ ವಿನಾಶವುಂಟಾಗುತ್ತದೆ..  **" *ಅಶ್ವತ್ಥಾಮ"** 
4. ಅಧರ್ಮಿಗಳಿಗೆ ಶರಣಾಗುವಂಥ ಭರವಸೆಗಳನ್ನು ಎಂದಿಗೂ ನೀಡಬೇಡಿ...   **" *ಭೀಷ್ಮ ಪಿತಾಮಹ"*** 
5. ಸಂಪತ್ತು, ಅಧಿಕಾರ, ಆಡಳಿತ ಮತ್ತು ತಪ್ಪು ಮಾಡುವವರ ಬೆಂಬಲದ ದುರುಪಯೋಗವು ಅಂತಿಮವಾಗಿ ಸಂಪೂರ್ಣ ವಿನಾಶಕ್ಕೆ ಕಾರಣವಾಗುತ್ತದೆ... **" *ದುರ್ಯೋಧನ"***
6. ಕುರುಡನಿಗೆ ಅಧಿಕಾರವನ್ನು ಎಂದಿಗೂ ಹಸ್ತಾಂತರಿಸಬೇಡಿ, ಅಂದರೆ ಸ್ವಾರ್ಥ, ಸಂಪತ್ತು, ಹೆಮ್ಮೆ, ಜ್ಞಾನ, ಮೋಹ ಅಥವಾ ಕಾಮದಿಂದ ಕುರುಡನಾದವನು, ಅದು ವಿನಾಶಕ್ಕೆ ಕಾರಣವಾಗುತ್ತದೆ ... **"*ಧೃತರಾಷ್ಟ್ರ"*** 
7. ಜ್ಞಾನದ ಜೊತೆಯಲ್ಲಿ ಬುದ್ಧಿವಂತಿಕೆ ಇದ್ದರೆ, ನೀವು ಖಂಡಿತವಾಗಿಯೂ ವಿಜಯಶಾಲಿಯಾಗುತ್ತೀರಿ... **" *ಅರ್ಜುನ"***
8. ಮೋಸವು ನಿಮ್ಮನ್ನು ಎಲ್ಲಾ ಸಮಯದಲ್ಲೂ ಪ್ರತಿಯೊಂದು ವಿಷಯಗಳಲ್ಲಿ ಯಶಸ್ಸಿನತ್ತ ಕೊಂಡೊಯ್ಯುವುದಿಲ್ಲ... **" *ಶಕುನಿ"***
9. ನೀವು ನೈತಿಕತೆ, ಸದಾಚಾರ ಮತ್ತು ಕರ್ತವ್ಯವನ್ನು ಯಶಸ್ವಿಯಾಗಿ ಎತ್ತಿ ಹಿಡಿದರೆ, ಜಗತ್ತಿನ ಯಾವ ಶಕ್ತಿಯೂ ನಿಮಗೆ ಹಾನಿ ಮಾಡಲಾರದು...**" *ಯುಧಿಷ್ಠಿರ"***

 
*ಸರ್ವೇ ಜನಾ ಸುಖಿನೋ ಭವಂತು.*
🙏🚩

Thursday, August 29, 2024

ವಸ್ತ್ರಾಪಹರಣವಾಗುವ...ಸಂಧರ್ಭದಲ್ಲಿ**********ದ್ರೌಪದಿ ದುಃಖದ ಕಣ್ಣುಗಳಿಂದ..ಭೀಷ್ಮ ಪಿತಾಮಹರತ್ತ ನೋಡುತ್ತಾಳೆ.

********ವಸ್ತ್ರಾಪಹರಣವಾಗುವ...ಸಂಧರ್ಭದಲ್ಲಿ**********ದ್ರೌಪದಿ ದುಃಖದ ಕಣ್ಣುಗಳಿಂದ..ಭೀಷ್ಮ ಪಿತಾಮಹರತ್ತ ನೋಡುತ್ತಾಳೆ....ಅವ್ರು ಅಸಹಾಯಾಕರಾಗಿ... ತಲೆಯನ್ನ ತಗ್ಗಿಸುತ್ತಾರೆ... ದೃತರಾಷ್ಟ್ರ ಕಣ್ಣು ಕಾಣದವನು...ಇನ್ನೂ ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳು....ಆರ್ಥನಾದ ಕೇಳಿಸುತ್ತಿದ್ದರೂ.. ಏನೂ ಮಾಡದ ಸ್ಥಿತಿ...ಇನ್ನೂ ದ್ರೋಣಾಚಾರ್ಯ ಆಶ್ವತ್ತಾಮ..ವಿಧುರ.. ಕರ್ಣ...ದುರ್ಯೋಧನನ ಆಜ್ಞೆಗೆ ಕಟ್ಟು ಬಿದ್ದವರು....ಇನ್ನೂ ಪಾಂಡವರು...ಸ್ಥಿತಿ ಅಂತೂ ಅಯೋಮಯ... ಈ ಕಡೆ ಪಗಡೆ ಆಟದಲ್ಲಿ... ಸಕಲವನ್ನೂ ಕಳೆದುಕೊಂಡು..ಕೊನೆಯದಾಗಿ  ತಮ್ಮ ಪತ್ನಿಯಾದ ಪಾಂಚಾಲಿಯನ್ನ ಪಣಕ್ಕಿಟ್ಟು.. ಅವಳನ್ನು ಸಹ ಕಳೆದುಕೊಂಡು...ತಲೆ ತಗ್ಗಿಸಿ ಕೂತವರು...ಈಗ ದ್ರೌಪದಿ  ಕೌರವರ ಕೈ ಗೊಂಬೆ...ಆ ಕಡೆ ದುಷ್ಯಾಸನ ದ್ರೌಪದಿ ಕೂದಲನ್ನ... ಹಿಡಿಡೆಳೆದು...ಅವಳ ಸೆರಗಿಗೆ ಕೈ ಹಾಕಿ ಎಳೆಯುವಾಗ....ಕೌರವರು ಧೂರ್ಯೋಧನನ... ಅಟ್ಟಹಾಸದ ನಗು... ಮತ್ತು ಶಕುನಿಯ... ಕರ್ಕಶವಾದ.. ನಗು....ದ್ರೌಪದಿ.. ಮತ್ತೊಮ್ಮೆ... ಎಲ್ಲರ ಹೆಸರು ಕೂಗಿ ಕೂಗಿ... ಕಾಪಾಡುವಂತೆ ಅಂಗಲಾಚಿ ಬೇಡುತ್ತಾಳೆ..." ಓ ರಥರೇ. ಅತಿರಥರೇ..ಮಹಾ ರಥರೇ...ಕುರುಕುಲ ಸೊಸೆಗೆ  ಇಷ್ಟು ಅನ್ಯಾಯವಾಗುತ್ತಿದ್ದರೂ ಒಬ್ಬರಾದರೂ... ತಡೆಯಬಲ್ಲಿರಾ..ಎಂದು..ರಾಗವಾಗಿ ಗೋಳಾಡುತ್ತ ಇರುವಾಗ... ಭೀಮನ ಕಣ್ಣು ಕೆಂಪಾಗಿರತ್ತೆ.... ಅರ್ಜುನನ ಆವೇಶ ಮಿತಿಮೀರತ್ತೆ...ಆದರೂ ಏನೂ ಮಾಡದ ಸ್ಥಿತಿ......ಕಟ್ಟ ಕಡೆಯದಾಗಿ... ದ್ರೌಪದಿಯ ಸ್ಮರಣೆಗೆ ಬಂದಿದ್ದು... ಭಗವಂತ... ಈ ಸಂಧರ್ಭದಲ್ಲಿ ನನ್ನನ್ನು ಕಾಪಾಡುವ ಏಕ ಮಾತ್ರ ಶಕ್ತಿ ಅದು ಭಗವಂತನೇ ಎಂದು ಅವಳಿಗೆ ಆಗ ಅರಿವಾಗಿತ್ತು.. ಜೋರಾಗಿ....ಗೂಪಾಲ... ಮಾಧವಾ.....ಪರ0ಧಾಮ.. ಅಣ್ಣಾ...ಕೃಷ್ಣಾ...ಎಂದು ಕೈ ಮೇಲೆತ್ತಿ  ಮುಗಿದಾಗ..ಸರ್ವಲOಕೃತ ಭೂಷಿತನಾಗಿ....ತೂಗು ಮಂಚದ ಮೇಲೆ ಅಷ್ಟ ಪತ್ನಿಯರ ಮಧ್ಯ ಹಾಯಾಗಿ ಕೊಳಲು ಹಿಡಿದು ಅದೇ ತಾನೇ ಭೋಜನವಾಗಿ ತಾOಬೂಲ  ಸವೇಯುತ್ತ ಪವಡಿಸಿದವನಿಗೆ...ಅವಳ ಆರ್ಥನಾದ ಕೇಳಿ... ರುಕ್ಮಿಣಿಯ  ಮಡಿಲಲ್ಲಿ  ತಲೆ ಇಟ್ಟು.. ಸತ್ಯಭಾಮೆಯ ತೊಡೆಯ ಮೇಲೆ ಕಾಲಿಟ್ಟು ಮಲಗಿದವನು ತಟ್ ಅಂತ ಮಾಯವಾಗಿಬಿಡುತ್ತಾನೆ...ಆ ಕಡೆ ಶ್ರೀಕೃಷ್ಣನ ಪತ್ನಿಯರಿಗೆ ಗೊಂದಲ.. ನನ್ನ ಗಂಡನಿಗೆ ಇಷ್ಟು ತುರ್ತಾದ ಕೆಲ್ಸವೆನಿರಬಹುದು ಅಂತ... ತಕ್ಷಣ ಈ ಕಡೆ ಬಂದವನೇ...ನಿರಂತರವಾಗಿ ಅವಳಿಗೆ ವಸ್ತ್ರ ಕೊಟ್ಟು ಅವಳ ಮಾನವನ್ನ ಉಳಿಸುತ್ತಾನೆ....ಕೊನೆಗೆ ದುಷ್ಯಾಸನ...ಸೀರೆ ಸೆಳೆದು ಸೆಳೆದು... ಸುಸ್ತಾಗಿ...ನೆಲಕಚ್ಚಿ ಬಿದ್ದಿರುತ್ತಾನೆ...ಕೋಪದಿಂದ ಧುರ್ಯೋಧನ... ಶಕುನಿ.. ಕೃಷ್ಣ ಲೀಲೆಯನ್ನ ನೋಡುತ್ತಾ...ಬುಸುಗುಟ್ಟುತ್ತಿರುತ್ತಾರೆ... ದೃತರಾಷ್ಟ್ರನಿಗೆ.. ಪಶ್ಚಾತಾಪದ ಅರಿವಾಗಿ... ತಪ್ಪಾಯಿತೆOದು... ದ್ರೌಪದಿಗೆ ಕ್ಷಮೆ ಕೋರಿ...3 4 ಇಚ್ಛೆಯ ವರವನ್ನ ಕೊಟ್ಟು... ಕಳುಹಿಸುತ್ತಾರೆ.... ಇತ್ತ ರೂಷಾವೇಶದಿಂದ...ಪಾಂಡವರು ಅರಮನೆಗೆ ಬಂದ ನಂತರ... ದ್ರೌಪದಿ.. ಸ್ವಲ್ಪ ಕೋಪದಿಂದ ಅಣ್ಣಾ... ನೀನೇಕೆ ಇಷ್ಟು ತಡವಾಗಿ ಬಂದೆ... ನೀನು ಮುಂಚೆಯೇ ಬಂದಿದ್ದರೆ ಇಷ್ಟೆಲ್ಲ ನಡೆಯುತ್ತಿರಲಿಲ್ಲವೆಂದು  ಹೇಳಿದಾಗ... ಶ್ರೀಕೃಷ್ಣನ ಉತ್ತರ ತುಂಬಾ ಅದ್ಭುತವಾಗಿತ್ತು... " ದ್ರೌಪದಿ...ನನ್ನನ್ನು ಕೇಳಿ ನಿನ್ನ ಪತಿಯರು ಜೂಜಾಟಕ್ಕೆ ಇಳಿದಿದ್ದರಾ? ಜೂಜಾಡುವುದು.. ತಪ್ಪು ಎಂದು ಗೊತ್ತಿದ್ದರೂ ಅಂತಹದೊಂದು... ಆಟವಾಡಲು ತುದಿಗಾಲಲ್ಲಿ ತಿಂತಿದ್ದರು... ಅದು.. ಆ ಕುತಂತ್ರಿ ಶಕುನಿಯ ಜೊತೆ... ಆಗ ನೀನು ಕರೆದಿದ್ದರೆ... ಧರ್ಮರಾಯನ ಬದಲಿಗೆ ನಾನೇ ಆಟಕ್ಕೆ ಕೂತು... ಕೌರವರಿಗೆ ಶಕುನಿಗೆ ಮಣ್ಣು ಮುಕ್ಕಿಸುತ್ತಿದ್ದೆ....ಇನ್ನೂ ನೀನೂ...ಇಷ್ಟೆಲ್ಲ ನಡೆಯುತ್ತಿರುವಾಗ... ನೀನು... ಯಾರಾದರೂ ನನ್ನ ಸಹಾಯಕ್ಕೆ ಬರುವರಾ ಎಂದು ಅಂಗಲಾಚಿ ಬೇಡಿದೆ... ಅಲ್ಲಿ ಇದ್ದದ್ದು ಯಾರು ಸಾಮಾನ್ಯರಲ್ಲ ಅತಿರಥ ಮಹಾರಥರು... ಅವರ್ಯಾರು ಬರಲಿಲ್ಲ...ಕೊನೆಗೆ ನೀನು ಕರೆದಿದ್ದು ನನ್ನನ್ನ... ನೀನು ಅವರೆಲ್ಲರಿಗಿಂತ ಮುಂಚೆಯೇ ನನ್ನ ಕರೆದಿದ್ದರೆ... ನಾನು ಮುಂಚೆಯೇ ಬರುತ್ತಿದ್ದೆ... ಅದಿಷ್ಟು ಜನರಲ್ಲಿ ಒಬ್ಬರಾದರೂ ನಿನ್ನ ಸಹಾಯಕ್ಕೆ ಬಂದಿದ್ದರೆ... ನಿನಗೆ ನನ್ನ ಅವಶ್ಯಕತೆಯಾದರೂ ಎಲ್ಲಿ ಇರುತಿತ್ತು... ನೀನು ಯಾವುದೇ ದಾರಿ ಕಾಣದೆ ಇದ್ದಾಗ...ನನ್ನನ್ನು ಪ್ರಾರ್ಥಿಸಿದೆ ನಾನು ತಕ್ಷಣ ಬಂದೆ.... ದೋಷವೆಲ್ಲ ನಿಮ್ಮ ಬಳಿ ಇಟ್ಟುಕೊಂಡು ತಡವಾಗಿ ಬಂದೆ ಎಂದು ನನ್ನನ್ನೇ ದೂರುತ್ತೀಯಲ್ಲ ಇದ್ಯಾವ ನ್ಯಾಯ ಹೇಳಮ್ಮ ತಂಗಿ ಎಂದಾಗ " ಇದನ್ನು ಕೇಳಿ... ಅವಳೆಗೆ...ತಪ್ಪಿನ ಅರಿವಾಗಿ ಪಶ್ಚಾತಾಪದ ಕಣ್ಣೀರು ಹರಿಯದೊಡಗುತ್ತೆ..... "ಈ ಒಂದು ಸಂಧರ್ಭ ನಮ್ಮ ಜೀವನಕ್ಕೂ ಅನ್ವಯವಾಗತ್ತೆ...ಅವರು ನಮ್ಮವರು ಇವರು ನಮ್ಮವರು ಅನ್ನುವ ಭ್ರಮೆಯಲ್ಲಿ ಇರ್ತೀವಿ...ನಮಗೆ ಕಷ್ಟ ಬಂದಾಗ ನಾವು ಸಹ ಅವರಿವರಿಗೆ...ಸಹಾಯ ಕೋರಿ...ಕೊನೆಗೆ...ಯಾವುದೇ ದಾರಿ ಕಾಣದೆ ಇದ್ದಾಗ...ಹೋಗಿ ಭಗವಂತನ ಪಾದಕ್ಕೆ ಬೀಳುತ್ತೇವೆ....ನೀನೇ ಗತಿ ಭಗವಂತ ಅಂತ ಶರಣಾಗತಿ ಬೇಡುತ್ತೇವೆ...ಕೆಲವೊಮ್ಮೆ ಯಾರು ಅಂದ್ರೆ ಯಾರು ಸಹ ನಮ್ಮ ಸಹಾಯಕ್ಕೆ ಬಾರದೆ ಇರುವ ಸ್ಥಿತಿ...ಅವರಿವರಿಗೆ ಸಹಾಯ ಕೂರುವ ಮುನ್ನವೇ ಒಂದೇ ಒಂದು ಕ್ಷಣ ಭಗವಂತನ   ಸ್ಮರಣೆ ಮಾಡಿದರೆ...ಅವನೇ ಯಾವುದೋ ಒಂದು ರೂಪದಲ್ಲಿ ದಾರಿಯನ್ನ ತೋರಿಸುತ್ತಾನೆ...ಎಂಬುವದಕ್ಕೆ  ಈ ಸಂಧರ್ಭವೇ ಸಾಕ್ಷಿ...🙏🙏"ಕೃಷ್ಣO ಒಂದೇ ಜಗತ್ ಗುರುO" 🙏🙏
ವಂದನೆಗಳೊಂದಿಗೆ
  ಇತಿ 
ನಂಜುಂಡಸ್ವಾಮಿ 

Tuesday, August 27, 2024

“ನಾನು ಒಂಬತ್ತು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೂ, ಯಾರೂ ನನ್ನನ್ನು ಅಭಿನಂದಿಸಲಿಲ್ಲ ಆದರೆ ನಾನು ಒಂದು ಪ್ರಶ್ನೆಗೆ ತಪ್ಪು ಉತ್ತರ ಬರೆದಾಗ, ಎಲ್ಲರೂ ನಗಲು ಪ್ರಾರಂಭಿಸಿದಿರಿ. ಇದರರ್ಥ ಒಬ್ಬ ವ್ಯಕ್ತಿಯು ತುಂಬಾ ಯಶಸ್ವಿಯಾಗಿದ್ದರೂ, ಸಮಾಜವು ಅವನ ಸಣ್ಣ ತಪ್ಪನ್ನು ಗಮನಿಸುತ್ತದೆ

ಒಂದು ದಿನ ಅಲ್ಬರ್ಟ್ ಐನ್‍ಸ್ಟೈನ್ ಬೋರ್ಡ್ ಮೇಲೆ ಬರೆದರು:
9 x 1 = 09
9 x 2 = 18
9 x 3 = 27
9 x 4 = 36
9 x 5 = 45
9 x 6 = 54
9 x 7 = 63
9 x 8 = 72
9 x 9 = 81
9 x 10 = 91
ಅವರ ಸ್ಟೂಡೆಂಟ್ಸ್ ಗಳಲ್ಲಿ ಗೊಂದಲ ಉಂಟಾಯಿತು ಏಕೆಂದರೆ ಆಲ್ಬರ್ಟ್ ಐನ್‌ಸ್ಟೈನ್ ತಪ್ಪು ಮಾಡಿದ್ದರು! 
9 x 10 ಗೆ ಸರಿಯಾದ ಉತ್ತರ 90 
ಎಲ್ಲಾ ವಿದ್ಯಾರ್ಥಿಗಳು ಅವರನ್ನು ಗೇಲಿ ಮಾಡಿದರು.ಆದರೆ ಆಲ್ಬರ್ಟ್ ಐನ್‌ಸ್ಟೈನ್ ಎಲ್ಲರೂ ಮೌನವಾಗಿರಲು ಕಾಯ್ದು  ಹೇಳಿದರು:
“ನಾನು ಒಂಬತ್ತು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೂ, ಯಾರೂ ನನ್ನನ್ನು ಅಭಿನಂದಿಸಲಿಲ್ಲ ಆದರೆ ನಾನು ಒಂದು ಪ್ರಶ್ನೆಗೆ  ತಪ್ಪು ಉತ್ತರ ಬರೆದಾಗ, ಎಲ್ಲರೂ ನಗಲು ಪ್ರಾರಂಭಿಸಿದಿರಿ. ಇದರರ್ಥ ಒಬ್ಬ ವ್ಯಕ್ತಿಯು ತುಂಬಾ ಯಶಸ್ವಿಯಾಗಿದ್ದರೂ, ಸಮಾಜವು ಅವನ ಸಣ್ಣ ತಪ್ಪನ್ನು ಗಮನಿಸುತ್ತದೆ ಮತ್ತು ಅದನ್ನು ಆನಂದಿಸುತ್ತದೆ. ಆದ್ದರಿಂದ ಟೀಕೆಗಳು ನಿಮ್ಮ ಕನಸುಗಳನ್ನು ನಾಶಮಾಡಲು ಬಿಡಬೇಡಿ, ಎಂದಿಗೂ ತಪ್ಪು ಮಾಡದ ವ್ಯಕ್ತಿ ಏನನ್ನೂ ಮಾಡದವನು. ”

Friday, August 2, 2024

ಎಲ್ಲವೂ ಸ್ಮಾರ್ಟ್ ಫೋನ್ ಸಾಮ್ರಾಜ್ಯ...ಬೆರಳು ಜಗತ್ತನ್ನು ಮತ್ತು ಮನುಷ್ಯನ ಜೀವನವನ್ನು ಆಳುತ್ತಿದೆ.....

ನಿಜ ಅಲ್ಲವೇ...
√ಇದು ಗಡಿಯಾರವನ್ನು ತಿಂದಿತು,,
√ಇದು ಟಾರ್ಚನ್ನು ಮೂಲೆಗೆಸೆಯಿತು,,
√ಇದು ಪೋಸ್ಟ್ ಕಾರ್ಡ್‌ಗಳನ್ನು ಹರಿಯಿತು,,
√ಇದು ಪುಸ್ತಕಗಳನ್ನು ಮುಚ್ಚಿತು,,
√ಇದು ರೇಡಿಯೋವನ್ನು ನಿಲ್ಲಿಸಿತು,,
√ಟೇಪ್ ರೆಕಾರ್ಡರನ್ನು ಮೂಲೆಗುಂಪಾಗಿಸಿತು,,  √ಕ್ಯಾಮರಾವನ್ನು ನಾಶಪಡಿಸಿತು,,
√ಕ್ಯಾಲ್ಕುಲೇಟರ್ ನ ಕೆಲಸ ನಿಲ್ಲಿಸಿತು,,
√ನಮ್ಮ ಜ್ಞಾಪಕಶಕ್ತಿಯನ್ನು ಕಬಳಿಸಿತು.

√ಥಿಯೇಟರ್ ಇಲ್ಲ, ನಾಟಕ ಇಲ್ಲ,
ಆಟವಿಲ್ಲ, ಹಾಡು ಇಲ್ಲ...
 
√ಇದೇ ಬ್ಯಾಂಕ್,
√ಇದೇ ಹೋಟೆಲ್,
√ಇದೇ ಕಿರಾಣಿ ಅಂಗಡಿ,
√ಇದು ಡಾಕ್ಟರ್,
√ಇದು ಜ್ಯೋತಿಷಿ... 

ಎಲ್ಲವೂ ಸ್ಮಾರ್ಟ್ ಫೋನ್ ಸಾಮ್ರಾಜ್ಯ...
ಬೆರಳು ಜಗತ್ತನ್ನು ಮತ್ತು ಮನುಷ್ಯನ ಜೀವನವನ್ನು ಆಳುತ್ತಿದೆ.....

ಮನುಷ್ಯನಿಗೆ ಹುಚ್ಚು ಹಿಡಿಯುತ್ತಿದೆ,,,
ಆದರೆ ಫೋನ್ ಮಾತ್ರ ಮತ್ತೂ 
ಮತ್ತೂ ಸ್ಮಾರ್ಟ್ ಆಗುತ್ತಲಿದೆ,,,
ಬಾಯಿ ಮ್ಯೂಟ್ ಆಗುತ್ತಲಿದೆ...
ಎಸ್, ನಿಜ...  
ಕೇವಲ ಬೆರಳ ಸ್ಪರ್ಶದಿಂದ ಜೀವನ...
ಆದರೆ ಯಾರೂ ನಿಜವಾದ ಸಂಪರ್ಕದಲ್ಲಿಲ್ಲ...

ಕೆಲವು ವರ್ಷಗಳ ಹಿಂದೆ luxury ಆಗಿದ್ದ ಮೊಬೈಲು ಈಗ ಆಗಿದೆ necessary

_ಅಳುವ ಮಗುವ ಸಂತೈಸಲು ಬೇಕು ಮೊಬೈಲು,
_ಸಮಯ ಕಳೆಯಲು ಬೇಕೇ ಬೇಕು 
ತಾತಂಗೂ ಮೊಬೈಲ್

ಭೂಮಿಗೆ ಬಂದ ಮೊದಲ ಕ್ಷಣದಿಂದ ಹಿಡಿದು ಭೂಮಿ ಸೇರುವ ಕೊನೆಯ ಕ್ಷಣದವರೆಗೂ 
ಆ ಬಾಲ ವೃದ್ಧರಾಗಿ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುವ  ಈ ಮಾಯಾಂಗನೆಯಿಂದ ಮುಕ್ತಿ ಇಲ್ಲವೇ!!??
Dgns

ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.

ವಯಸ್ಸು 20 ಇರುವಾಗ *"ಸ್ವದೇಶ" ಮತ್ತು "ವಿದೇಶ" ಎರಡೂ ಒಂದೇ.* (ನೀವು ಎಲ್ಲಿದ್ದರೂ ಪರವಾಗಿಲ್ಲ. ಅಲ್ಲಿಗೆ ಹೊಂದಿಕೊಳ್ಳುವಿರಿ)

ವಯಸ್ಸು 30 ಆದಾಗ *"ರಾತ್ರಿ" ಮತ್ತು "ಹಗಲು " ಎರಡೂ ಒಂದೇ.* ( ಕೆಲವು ದಿನ ನಿದ್ದೆ ಇಲ್ಲ ದಿದ್ದರೂ ಏನೂ ತೊಂದರೆ ಆಗಲ್ಲ)

ವಯಸ್ಸು 40 ಆದಾಗ *"ಅತಿ ಹೆಚ್ಚು ಓದಿದವರು" ಮತ್ತು "ಕಡಿಮೆ ಓದಿದವರು" ಒಂದೇ.* ( ಕಡಿಮೆ ಓದಿದವರೂ ಕೆಲವೊಮ್ಮೆ ಹೆಚ್ಚು ಸಂಪಾದಿಸುತ್ತಾರೆ)

ವಯಸ್ಸು 50 ಆದಾಗ 
*"ಸೌಂದರ್ಯ" ಮತ್ತು "ಕುರೂಪ" ಒಂದೇ.* (ನೀವು ಎಷ್ಟೇ ಸುಂದರವಾಗಿದ್ದರೂ, ಚರ್ಮ ನೆರಿಗೆ ಬೀಳುವುದು, ಅಲ್ಲಲ್ಲಿ ಕಪ್ಪಾಗುವುದು, ಮುಚ್ಚಿಡಲು ಸಾಧ್ಯವಿಲ್ಲ)

ವಯಸ್ಸು 60 ಆದಾಗ *"ಎತ್ತರದ ಸ್ಥಾನ", "ಕೆಳಗಿನ ಸ್ಥಾನ" ಒಂದೇ.* (ಅಧಿಕಾರಿಯು ನಿವೃತ್ತಿಗೊಂಡ ಮೇಲೆ ಪೇದೆ ಆಗಿದ್ದವನೂ ಗೌರವ ಕೊಡಲಾರ)

ವಯಸ್ಸು 70 ಆದಾಗ *"ದೊಡ್ಡ ಮನೆ" ಮತ್ತು "ಸಣ್ಣ ಮನೆ" ಒಂದೇ.* (ಸಂದು ನೋವು, ಚಲಿಸಲು ಕಷ್ಟ, ಇದ್ದವರಿಗೆ ಸ್ವಲ್ಪ ಜಾಗ ಕೂರಲು ಸಿಕ್ಕರೆ ಸಾಕು)

ವಯಸ್ಸು 80 ಆದಾಗ *"ಹಣ ಇರುವುದು" ಮತ್ತು "ಹಣ ಇಲ್ಲದಿರುವುದು" ಒಂದೇ.* (ನಿಮಗೆ ಹಣ ಖರ್ಚು  ಮಾಡಬೇಕೆನ್ನಿಸಿದರೂ ಎಲ್ಲಿ ಖರ್ಚು ಮಾಡಬೇಕೆಂದು ತಿಳಿಯುವುದಿಲ್ಲ)

ವಯಸ್ಸು 90 ಆದಾಗ *"ನಿದ್ದೆ ಮಾಡೋದು" ಹಾಗೂ "ಎಚ್ಚರದಿಂದಿರುವುದು" ಎರಡೂ ಒಂದೇ.* (ಎದ್ದ ಮೇಲೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ)

ಜೀವನವನ್ನು ಹಗುರವಾಗಿ ತೆಗೊಳ್ಳಿ. ಅಲ್ಲಿ ಭೇದಿಸಬೇಕಾದ ರಹಸ್ಯಗಳು ಇಲ್ಲ.

*ದೀರ್ಘಾವಧಿಯ ಜೀವನ ನೋಡಿದರೆ ನಾವೆಲ್ಲಾ ಒಂದೇ. ಆದ್ದರಿಂದ ಎಲ್ಲಾ ಒತ್ತಡ / ಆತಂಕ ಗಳನ್ನು ಮರೆತು ಜೀವನವನ್ನು ಆನಂದಿಸಿರಿ.*

Thursday, April 25, 2024

ಹಲವು ಮುಂಚೂಣಿ ದೇಶಗಳಲ್ಲಿ ಹೆಮ್ಮೆಯಿಂದ ಯಶಸ್ಸನ್ನು ಸಾಧಿಸುತ್ತಲೆ ಬಂದಿರುವ *_ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ಅನ್ನು_* ಭಾರತದಲ್ಲಿ ಮಾತ್ರ ಕೀಳಾಗಿ ಕಾಣಲು ಕಾರಣವೇನು?

ಹಲವು ಮುಂಚೂಣಿ ದೇಶಗಳಲ್ಲಿ ಹೆಮ್ಮೆಯಿಂದ ಯಶಸ್ಸನ್ನು ಸಾಧಿಸುತ್ತಲೆ ಬಂದಿರುವ *_ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ಅನ್ನು_* ಭಾರತದಲ್ಲಿ ಮಾತ್ರ ಕೀಳಾಗಿ ಕಾಣಲು ಕಾರಣವೇನು?

ಇದಕ್ಕೆ ನಮ್ಮ ದೇಶದ *_ಕಲಿಕಾ ವ್ಯವಸ್ಥೆ_*(Education System)  ಕಾರಣ. ಹಿರಿಯರಿಂದ ಇಡಿದು ಮನೆಯವರ ವರೆಗೂ, ಅಕ್ಕಪಕ್ಕದವರಿಂದ ಇಡಿದು ನಮ್ಮ ಶಾಲಾ ಕಾಲೇಜುಗಳ ಶಿಕ್ಷಕರ ವರೆಗೂ ನಮ್ಮೆಲ್ಲರ Mindset ಅನ್ನು ಯಾವ ರೀತಿ ರೂಪಿಸಿದ್ದಾರೆ ಅಂದರೆ ನಮಗೆ ಚಿಕ್ಕ ವಯಸ್ಸಿನಿಂದಲೂ ಹೇಳಿಕೊಟ್ಟ ಒಂದೇ ಒಂದು ವಿಷಯವೆಂದರೆ ಒಳ್ಳೇ ಮಾರ್ಕ್ ತಗೋ, ಒಳ್ಳೆ ಕಂಪನಿಯಲ್ಲಿ  *_JOB_* ಮಾಡು..!! 

Job ಎಂದರೆ *_(Just Obey the Boss/Join Others Business)_* ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದನ್ನ ಹೇಳಿಕೊಟ್ಟರೆ ಹೊರತು ಯಾರ ಮನೆಯಲ್ಲಿಯೂ ಯಾವ ಅಪ್ಪ ಅಮ್ಮಂದಿರೂ ತಮ್ಮ ಮಕ್ಕಳಿಗೆ #ನೆಟ್‌ವರ್ಕ್_ಮಾರ್ಕೆಟಿಂಗ್_ಬ್ಯುಸಿನೆಸ್ ಮಾಡುವುದನ್ನ ಹೇಳಿ ಕೊಡಲೆ ಇಲ್ಲ ಹಾಗಾಗಿ ಇವತ್ತು ನಮ್ಮ ದೇಶದಲ್ಲಿ ಅವಕಾಶ ಇದ್ದರೂ ಎಷ್ಟೋ ಯುವಕ ಯುವತಿಯರು ವಿಧ್ಯಾಭ್ಯಾಸ ಮುಗಿಸಿ ಕೆಲಸದ ಹುಡುಕಾಟದಲ್ಲಿ ಬ್ಯುಸಿ ಆಗಿಬಿಟ್ಟಿದ್ದಾರೆ. ಕೆಲವರಿಗೆ ಕೆಲಸ ಹುಡುಕುವುದೇ ಒಂದು ಕೆಲಸವಾಗಿ ಬಿಟ್ಟಿದೆ.  

ಅಮೆರಿಕ, ಸಿಂಗಾಪುರ, ಮಲೇಶಿಯಾ ಮೊದಲಾದ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ವಿಷಯವನ್ನು ಕಾಲೇಜುಗಳಲ್ಲಿ ಕಳೆದ 40-50 ವರ್ಷಗಳಿಂದ ಕಲಿಸುತ್ತಲೆ ಬಂದಿದ್ದಾರೆ. ಹಾಗಾಗಿ ಆ ದೇಶಗಳ 30-50 ಶೇಕಡಾ ಜನ ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ನಲ್ಲಿ  ತೊಡಗಿಸಿ ಕೊಂಡಿದ್ದಾರೆ. ಅದೇ ನಮ್ಮ ದೇಶದಲ್ಲಿ 0.007 ಶೇಕಡಾ ಜನರು ಮಾತ್ರ ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ನಲ್ಲಿ  ತೊಡಗಿಸಿ ಕೊಂಡಿದ್ದಾರೆ.ಹಾಗಾಗಿಯೇ ಭಾರತ ಇವತ್ತಿಗೂ  ಮುಂದುವರಿಯುತ್ತಿರುವ ದೇಶವಾಗಿಯೆ ಉಳಿದಿದೆ. 

*_ಇದೆಲ್ಲವನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಲೆ ಬಂದ ಭಾರತ ಸರಕಾರ ನೆಟ್‌ವರ್ಕ್ ಮಾರ್ಕೆಟಿಂಗ್ ಅಥವಾ ಡೈರೆಕ್ಟ್ ಸಲ್ಲಿಂಗ್ ಅಥವಾ ಮೊಡೆರ್ನ್ ಮಾರ್ಕೆಟಿಂಗ್ ಎಂಬ ವಿಷಯವನ್ನು MBA, Bcomನಲ್ಲಿ ಇತ್ತೀಚೆಗಷ್ಟೇ ಕಲಿಸಲು ಆರಂಭಿಸಿದೆ._* 

ನಮ್ಮ ದೇಶದ ಯುವಕ ಯುವತಿಯರಿಗೆ ಹೇಳುವ ಒಂದು ಕಿವಿಮಾತು ಏನೆಂದರೆ ಕೆಲಸ ಸಿಗಲಿಲ್ಲ ಅಂತ Tension ಮಾಡಿಕೊಳ್ಳುವ ಬದಲು ಒಂದು ಒಳ್ಳೆಯ ನೆಟ್‌ವರ್ಕ್ ಮಾರ್ಕೆಟಿಂಗ್ ಕಂಪೆನಿಯನ್ನು ಆಯ್ಕೆಮಾಡಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ.. 

ನೆಟ್‌ವರ್ಕ್ ಮಾರ್ಕೆಟಿಂಗ್ ನಲ್ಲಿ ನಾವು ಹಾಗೂ ನಮ್ಮೊಂದಿಗೆ ಕೈ ಜೋಡಿಸುವವರು ಆರ್ಥಿಕ ಸ್ವಾತಂತ್ರ್ಯ ಪಡೆಯಬಹುದು ಹಾಗೂ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸೇರಿಸಬಹುದು... 

*_ಆಯ್ಕೆ ನಿಮ್ಮದು... ಸಹಕಾರ ನಮ್ಮದು...
ವಂದನೆಗಳೊಂದಿಗೆ 
 ನಂಜುಂಡಸ್ವಾಮಿ 
9886801163

Friday, April 12, 2024

ಬದುಕಿನಲ್ಲಿ ಈ ಏಳು ಸಂಗತಿಗಳನ್ನು ಯಾವತ್ತೂ ಮರೆಯಬೇಡಿ

ಆಲೋಚಿಸಿ... 

ಬದುಕಿನಲ್ಲಿ ಈ ಏಳು ಸಂಗತಿಗಳನ್ನು ಯಾವತ್ತೂ ಮರೆಯಬೇಡಿ.

1. ಇನ್ನೊಬ್ಬರೊಡನೆ ಸುಮ್ಮನೆ ವಾಗ್ವಾದಕ್ಕೆ ಇಳಿಯಬೇಡಿ ಯಾಕೆಂದರೆ ಅಲ್ಲೊಬ್ಬನಿಗೆ ಮಾತನಾಡಲೇ ಬರುವುದಿಲ್ಲ.

2. ಆಹಾರದ ರುಚಿಯ ಬಗ್ಗೆ ದೂರಬೇಡಿ ಕೆಲವರಿಗೆ ಒಂದು ಹೊತ್ತಿನ ಊಟವೂ ಸಿಗುವುದಿಲ್ಲ.

3. ನಿಮ್ಮ ಸಂಗಾತಿಯ ಬಗ್ಗೆ ಸಹನೆ ಕಳೆದುಕೊಳ್ಳದಿರಿ ನಿನ್ನೆಯಷ್ಟೇ ಒಬ್ಬ ತನ್ನ ಸಂಗಾತಿಯನ್ನು ಮಣ್ಣು ಮಾಡಿದ ದುಃಖದಲ್ಲಿದ್ದಾನೆ.

4. ನಿಮ್ಮ ಮನೆ ಸೋರುತ್ತಿದೆ ಎಂದು ಬೇಸರ ಪಡಬೇಡಿ ಅಲ್ಲೊಬ್ಬನ ತಲೆಯ ಮೇಲೆ ಸೂರೇ ಇಲ್ಲ.

5. ನಿಮ್ಮ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ ಅವೆಷ್ಟೋ ದಂಪತಿಗಳಿಗೆ ತಂದೆ ತಾಯಿಯಾಗುವ ಭಾಗ್ಯವೇ ಇರುವುದಿಲ್ಲ.

6. ನಿಮ್ಮ ಉದ್ಯೋಗದ ಬಗ್ಗೆ ಅಸಡ್ಡೆ ತೋರಬೇಡಿ ಅಲ್ಲೊಬ್ಬ ಯುವಕನಿಗೆ ಓದಿದ್ದರೂ ಕೆಲಸವೇ ಸಿಕ್ಕಿಲ್ಲ.

7. ನಿಮ್ಮ ಜೀವನವನ್ನು ಶಪಿಸುತ್ತಾ ಕುಳಿತುಕೊಳ್ಳಬೇಡಿ ಎಷ್ಟೋ ಮಂದಿ ಯೌವನದಲ್ಲೇ ಹಾಸಿಗೆ ಹಿಡಿದು ನರಳುತ್ತಿದ್ದಾರೆ.

 *ಜೀವನವೆಂಬುದು ಸುಂದರವಾದ ಉಡುಗೊರೆ. ವ್ಯರ್ಥಾಲಾಪದಲ್ಲಿ ಅದನ್ನು ಹಾಳು ಮಾಡಿಕೊಳ್ಳಬೇಡಿ. ಬದುಕಿನಲ್ಲಿ ಏನೋ ಸರಿಯಿಲ್ಲ ಎನ್ನಿಸುತ್ತಿದ್ದರೆ ಒಮ್ಮೆ ಯೋಚಿಸಿ, ನೀವಿನ್ನೂ ಬದುಕಿದ್ದೀರಿ ನಿಮಗಿಷ್ಟವಾಗದ ಸಂಗತಿಯನ್ನು ಬದಲಾಯಿಸುವ ಅವಕಾಶ ನಿಮಗಿದೆ. ನಿಮಗೆ ಬೇಕಾದಂತೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ.* ಸಾಧ್ಯವಾದರೆ ಷೇರ್ ಮಾಡಿ, ನೊಂದ ಮನಗಳಿಗೆ ಟಾನಿಕ್ ಕೂಡಾ ಆಗಬಲ್ಲದು ಈ ಸಂದೇಶ.
ಇಂತಿ 
ನಂಜುಂಡಸ್ವಾಮಿ

Wednesday, April 3, 2024

ಪ್ರಕೃತಿಯಲ್ಲಿ ಕೋಟ್ಯಾಂತರ ಜೀವರಾಶಿಗಳಲ್ಲಿ ನಾನು ಒಂದು ಜೀವಿ ಎಂದು ಎಲ್ಲರೊಳಗೊಂದಾಗಿ ಬದುಕೋಣ.



*ಸಿಟ್ಟಿನಿಂದ ಯಕೃತ್ತು (ಲಿವರ್) ಹಾಳಾದರೆ, ದುಃಖದಿಂದ ಶ್ವಾಸಕೋಶ ದುರ್ಬಲವಾಗುತ್ತದೆ. ಹೆದರಿಕೆಯಿಂದ ಕಿಡ್ನಿ ಹಾಳಾಗುತ್ತದೆ.*

*ಚಿಂತೆಗಳಿಂದ ಹೊಟ್ಟೆ ದುರ್ಬಲವಾದರೆ, ಒತ್ತಡಗಳಿಂದ ನಿಮ್ಮ ಹೃದಯ ಹಾಗೂ ಮೆದುಳು ದುರ್ಬಲವಾಗುತ್ತದೆ.*

ವಂದನೆಗಳೊಂದಿಗೆ
 ಇಂತಿ 
ನಂಜುಂಡಸ್ವಾಮಿ
8453503736

Sunday, March 24, 2024

ಜೀವನದ ಅರ್ಥಶಾಸ್ತ್ರ:-

ಜೀವನದ ಅರ್ಥಶಾಸ್ತ್ರ:-
 ಉತ್ತಮ ನಡವಳಿಕೆಯು ಯಾವುದೇ ವಿತ್ತೀಯ ಮೌಲ್ಯವನ್ನು ಹೊಂದಿಲ್ಲ...
 ಆದರೆ, ಇದು ಮಿಲಿಯನ್ ಹೃದಯಗಳನ್ನು ಖರೀದಿಸುವ ಶಕ್ತಿಯನ್ನು ಹೊಂದಿದೆ ...
 ಶುಭೋದಯ.😊💐👍
ಇಂತಿ
ನಂಜುಂಡಸ್ವಾಮಿ

Economics of Life:- 
Good Behaviour does Not have any Monetary Value...
But, it has the Power to Purchase a Million Hearts...
Good Morning.😊💐👍
Thanks & Regards
Nanjundaswamy 

Friday, March 8, 2024

ಬದುಕಿನ ಕೊನೆಯ ತುಣುಕು

ಬದುಕಿನ ಕೊನೆಯ ತುಣುಕು
*************************
ಎಲ್ಲ ಮಿತ್ರರೂ ಮುಪ್ಪಾಗುತ್ತಿದ್ದಾರೆ
ನಿಧಾನಕ್ಕೆ ನಡೆಯುತ್ತಿದ್ದಾರೆ ನನ್ನ ಹಾಗೇ

ಹರೆಯದಲ್ಲಿ ಮಿಂಚುತ್ತಿದ್ದ ಪಟ್ಟುಗಳೆಲ್ಲ
ಈಗ ಮಾಯವಾಗಿವೆ

ಯಾರಿಗೋ ಬೊಜ್ಜು ಬಂದಿದೆ
ಇನ್ಯಾರಿಗೋ ಕೂದಲು ಹಣ್ಣಾಗುತ್ತಿವೆ

ಎಲ್ಲರ ತಲೆಯ ಮೇಲೆ ಜವಾಬ್ದಾರಿ
ಎಲ್ಲರಿಗೂ ಸಣ್ಣ ಪುಟ್ಟ ಅಜಾರಿ

ಯಾರಿಗೋ ದೇಹದ ನೋವು
ಯಾರಿಗೋ ಮನದ ಅಳಲು

ದಿನವಿಡೀ ಓಡುತ್ತಿದ್ದವರು
ಈಗ ನಡೆಯುವಾಗಲೂ ದಣಿವಾರಿಸಿಕೊಳ್ಳುತ್ತಿದ್ದಾರೆ.

ಯಾರಿಗೂ ಸಮಯವಿಲ್ಲ
ಎಲ್ಲರ ಕಣ್ಣಲ್ಲೂ ನೋವಿನ ಛಾಯೆ

ಎಲ್ಲರಿಗೂ (ನನ್ನ ಸೇರಿ)
ಅಪ್ಪನನ್ನು ಇನ್ನಷ್ಟು ಆರೈಕೆ ಮಾಡಬೇಕಿತ್ತು
ಕೊನೆಯ ದಿನಗಳಲ್ಲಿ ಅಮ್ಮನ ಸೇವೆ ಮಾಡಬೇಕಿತ್ತು
ಆ ಮಿತ್ರನೊಂದಿಗೆ ಪರಲು ಹರಿದುಕೊಳ್ಳಬಾರದಿತ್ತು
ಎಂಬ ಏನೇನೋ ಹಳವಂಡಗಳು
ಕಾಡುತ್ತವೆ.

ಅಂತೂ ಇಷ್ಟಾದರೂ ಸಾಧಿಸಿದೆನಲ್ಲ
ಎಂಬ ನೆಮ್ಮದಿಯೂ ಇದೆ

ಹಳೆಯ ಭಾವಚಿತ್ರಗಳ ನೋಡಿ
ಈಗಲೂ ಮನಸ್ಸು ತುಂಬಿ ಬರುತ್ತದೆ

ಈ ಸಮಯವೂ ಎಂಥ ವಿಚಿತ್ರ ನೋಡಿ!
ಹೇಗೆ ಸವೆದು ಹೋಗುತ್ತದೆ

ನಿನ್ನೆಯ ನವಯುವಕ ನನ್ನ ಮಿತ್ರ
ಇಂದು ವೃದ್ಧನಂತೆ ಕಾಣುತ್ತಾನೆ

ಒಂದೊಮ್ಮೆ ಕನಸು ಕಾಣುತ್ತಿದ್ದವರು
ಗತಿಸಿದ ದಿನಗಳಲ್ಲಿ ಕಳೆದು ಹೋಗಿದ್ದಾರೆ

ಆದರೆ ಇದು ಪರಮ ಸತ್ಯ!
ಎಲ್ಲಾ ಮಿತ್ರರೂ ಹಣ್ಣಾಗುತ್ತಿದ್ದಾರೆ.

ಮಿತ್ರರೇ , 
ಮುಂದೆ ಸಮಯದ ಲಯ
ಇನ್ನೂ ತೀವ್ರವಾಗಲಿದೆ.
ಈಗ ಉಳಿದ ಬದುಕೇ 'ಬಹುಮಾನ'

ಆದ್ದರಿಂದ,
ಮಾಡುವುದನ್ನು ಮಾಡಿ ಮುಗಿಸಿ
ಕೊಡುವುದನ್ನು ಕೊಟ್ಟು ಮುಗಿಸಿ
ನಿರಾಳ ಮನಸ್ಸಿನಿಂದ ಬದುಕಿ

ಪ್ರತಿಯೊಬ್ಬ ಹಳೆಯ ಮಿತ್ರ
'ಕೊಹಿನೂರ್ ವಜ್ರ'
ಹಳೆಯ ಮಿತ್ರರೊಂದಿಗೆ
ಬದುಕಿನ ಕೊನೆಯ ತುಣುಕು
ನಗುನಗುತ್ತ ಕಳೆಯಿರಿ.

ಎಲ್ಲಾ ಮಿತ್ರರಿಗೂ ಸಮರ್ಪಣೆ...... 🌹🙏.

Tuesday, February 13, 2024

ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು..

ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಮುಂದಿನ ದಿನಗಳಲ್ಲಿ ಪ್ರಪಂಚ ಆಳೋದು..

1998 ರಲ್ಲಿ, ಕೊಡಾಕ್‌ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು.ಕೊಡಾಕ್ ದಿವಾಳಿಯಾಯಿತು ಮತ್ತು ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು.

 HMT (ವಾಚ್)
 ಬಜಾಜ್ (ಸ್ಕೂಟರ್)
 ಡೈನೋರಾ (ಟಿವಿ)
 ಮರ್ಫಿ (ರೇಡಿಯೋ)
 ನೋಕಿಯಾ (ಮೊಬೈಲ್)
 ರಾಜ್‌ದೂತ್ (ಬೈಕ್)
 ಅಂಬಾಸಿಡರ್ (ಕಾರು)
 ದಿನೇಶ್ (ಬಟ್ಟೆ)

 ಸ್ನೇಹಿತರೇ,
 ಈ ಎಲ್ಲದರ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಬಿದ್ದವು !!
 ಕಾರಣ ???
 ಕಾಲಕ್ಕೆ ತಕ್ಕಂತೆ ಅವು ಬದಲಾಗಲಿಲ್ಲ.!!

 ಮುಂಬರುವ 10 ವರ್ಷಗಳಲ್ಲಿ ಪ್ರಪಂಚವು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಇಂದು ನಡೆಯುತ್ತಿರುವ 70% ರಿಂದ 90% ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ.

 ಉಬರ್ ಕೇವಲ ಸಾಫ್ಟ್‌ವೇರ್ ಆಗಿದೆ. ತನ್ನದೇ ಆದ ಒಂದು ಕಾರು ಹೊಂದಿಲ್ಲದಿದ್ದರೂ, ಅವರು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿ.

 ಏರ್ಬನ್ಬಿ ತಮ್ಮದೇ ಆದ ಹೋಟೆಲ್ ಹೊಂದಿಲ್ಲದಿದ್ದರೂ ವಿಶ್ವದ ಅತಿದೊಡ್ಡ ಹೋಟೆಲ್ ಕಂಪನಿಯಾಗಿದೆ.

 Paytm, ola cabs, oyo ಕೊಠಡಿಗಳಂತಹ ಅನೇಕ ಉದಾಹರಣೆಗಳಿವೆ.

 ಯುಎಸ್ ನಲ್ಲಿ ವಕೀಲರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ, ಏಕೆಂದರೆ ಐಬಿಎಂ ವ್ಯಾಟ್ಸನ್ ಸಾಫ್ಟ್‌ವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆಯನ್ನು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ, 90% ಯುಎಸ್ ವಕೀಲರು ನಿರುದ್ಯೋಗಿಗಳಾಗುತ್ತಾರೆ ..10% ಉಳಿದಿರುವವರು ... ಸೂಪರ್ ಸ್ಪೆಷಲಿಸ್ಟ್ ಆಗುತ್ತಾರೆ.

 ವ್ಯಾಟ್ಸನ್ ಹೆಸರಿನ ಸಾಫ್ಟ್‌ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡುತ್ತದೆ. 2030 ರ ವೇಳೆಗೆ ಕಂಪ್ಯೂಟರ್‌ಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತವಾಗಿರುತ್ತವೆ.

 ಮುಂದಿನ 10 ವರ್ಷಗಳಲ್ಲಿ, 90% ಕಾರುಗಳು ಪ್ರಪಂಚದಾದ್ಯಂತದ ರಸ್ತೆಗಳಿಂದ ಕಣ್ಮರೆಯಾಗುತ್ತವೆ… ಉಳಿದಿರುವುವು ಎಲೆಕ್ಟ್ರಿಕ್ ಕಾರುಗಳು ಅಥವಾ ಹೈಬ್ರಿಡ್ ಆಗಿರುತ್ತವೆ… ರಸ್ತೆಗಳು ಖಾಲಿಯಾಗುತ್ತವೆ, ಪೆಟ್ರೋಲ್ ಬಳಕೆ 90% ರಷ್ಟು ಕಡಿಮೆಯಾಗುತ್ತದೆ, ಎಲ್ಲಾ ಅರಬ್ ರಾಷ್ಟ್ರಗಳು  ದಿವಾಳಿಯಾಗುತ್ತವೆ.

 ನೀವು ಉಬರ್‌ನಂತಹ ಸಾಫ್ಟ್‌ವೇರ್‌ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ ... ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಸವಾರಿ ನಿಮ್ಮ ಬೈಕ್‌ಗಿಂತ ಅಗ್ಗವಾಗಿರುತ್ತದೆ.

 ಕಾರುಗಳು ಚಾಲಕರಹಿತವಾಗಿರುವುದರಿಂದ 99% ಅಪಘಾತಗಳು ನಿಂತುಹೋಗುತ್ತವೆ.. ಇದು ಕಾರ್ ವಿಮೆ ಎಂಬ ವ್ಯವಹಾರವನ್ನು ನಿಲ್ಲಿಸುತ್ತದೆ.

 ಚಾಲಕನಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ 90% ಕಾರುಗಳು ಕಣ್ಮರೆಯಾದಾಗ, ಟ್ರಾಫಿಕ್ ಮತ್ತು ಪಾರ್ಕಿಂಗ್‌ನಂತಹ ಸಮಸ್ಯೆಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ ... ಏಕೆಂದರೆ ಒಂದು ಕಾರು ಇಂದು 20 ಕಾರುಗಳಿಗೆ ಸಮಾನವಾಗಿರುತ್ತದೆ.

 5 ಅಥವಾ 10 ವರ್ಷಗಳ ಹಿಂದೆ, ಪಿಸಿಒ ಇಲ್ಲದಂತಹ ಸ್ಥಳ ಇರಲಿಲ್ಲ. ನಂತರ ಎಲ್ಲರ ಜೇಬಿನಲ್ಲಿ ಮೊಬೈಲ್ ಫೋನ್ ಬಂದಾಗ, ನಂತರ ಪಿಸಿಒ ಸ್ಥಗಿತಗೊಳ್ಳಲು ಪ್ರಾರಂಭಿಸಿತು .. ನಂತರ ಆ ಎಲ್ಲಾ ಪಿಸಿಒ ಜನರು ಫೋನ್ ರೀಚಾರ್ಜ್ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಆನ್‌ಲೈನ್‌ನಲ್ಲಿ ರೀಚಾರ್ಜ್ ಕೂಡ ಪ್ರಾರಂಭಿಸಲಾಗಿದೆ.

 ನೀವು ಎಂದಾದರೂ ಗಮನಿಸಿದ್ದೀರಾ ..?

 ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿನ ಪ್ರತಿ ಮೂರು ಅಂಗಡಿಗಳಲ್ಲಿ ಒಂದು ಅಂಗಡಿಯಲ್ಲಿ ಮೊಬೈಲ್ ಫೋನ್‌
 ಮಾರಾಟ, ಸೇವೆ, ರೀಚಾರ್ಜ್, ಪರಿಕರಗಳು, ದುರಸ್ತಿ, ನಿರ್ವಹಣೆ ಮಾಡಲಾಗುತ್ತಿದೆ.

 ಈಗ ಎಲ್ಲವನ್ನೂ ಪೇಟಿಎಂ ಮೂಲಕ ಮಾಡಲಾಗುತ್ತದೆ .. ಈಗ ಜನರು ತಮ್ಮ ಫೋನ್‌ಗಳಿಂದಲೂ ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ .. ಈಗ ಹಣದ ವಹಿವಾಟುಗಳು ಸಹ ಬದಲಾಗುತ್ತಿವೆ .. ಕರೆನ್ಸಿ ನೋಟ್ ಅನ್ನು ಮೊದಲು ಪ್ಲಾಸ್ಟಿಕ್ ಮನಿ ಮೂಲಕ ಬದಲಾಯಿಸಲಾಗಿತ್ತು.ಈಗ ಅದು ಡಿಜಿಟಲ್ ಆಗಿ ಮಾರ್ಪಟ್ಟಿದೆ.

 ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ .. ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ, ಇಲ್ಲದಿದ್ದರೆ ನೀವು ಹಿಂದೆ ಉಳಿಯುತ್ತೀರಿ….

 ಆದ್ದರಿಂದ ...
 ಒಬ್ಬ ವ್ಯಕ್ತಿಯು ಸಮಯಕ್ಕೆ ತಕ್ಕಂತೆ ತನ್ನ ವ್ಯವಹಾರ ಮತ್ತು ಸ್ವಭಾವವನ್ನು ಬದಲಾಯಿಸುತ್ತಲೇ ಇರಬೇಕು.

ಮುಂದಿನ ದಿನಗಳಲ್ಲಿ ಕೇವಲ ನೆಟ್ವರ್ಕ್ ಮಾರ್ಕೆಟಿಂಗ್ ಮಾತ್ರ ಇಡೀ ಜಗತ್ತನ್ನು ಆವರಿಸುವುದರಲ್ಲಿ ಸಂಶಯವಿಲ್ಲ. 

 ಸಮಯದೊಂದಿಗೆ ಸಾಗಿ ಮತ್ತು ಯಶಸ್ಸನ್ನು ಸಾಧಿಸಿ.

ವಂದನೆಗಳೊಂದಿಗೆ ನಂಜುಂಡಸ್ವಾಮಿ 🙏💐

Monday, February 5, 2024

'ಡಿಜಿಟಲ್ ಇಂಡಿಯಾ' ಅಂದರೆ ಏನು?

'ಡಿಜಿಟಲ್ ಇಂಡಿಯಾ' ಅಂದರೆ ಏನು?

ಇದು ಶ್ರೀ ಸಾಮಾನ್ಯನಿಗೆ ಅರ್ಥವಾಗೋದು ಕಷ್ಟ.  ಅದಕ್ಕೇ  ಉತ್ತರ ಇಲ್ಲಿದೆ.

ವರ್ಷ : ಕ್ರಿಸ್ತ ಶಕ 2030

ಗುಂಡ ಎಂಬಾತ ಮಸಾಲೆ ದೋಸೆ ಬೇಕಾಗಿ "ಅಡಿಗಾಸ್ ಹೋಟೆಲ್ ಗೆ ಕಾಲ್ ಮಾಡುತ್ತಾನೆ.

ಅಡಿಗಾಸ್: ಹಲೊ ಅಡಿಗಾಸ್, ಹೇಳಿ....

ಗುಂಡ: ನನ್ನ ಆರ್ಡರ್ ತಗೊಳ್ಳಿ.

ಅ: ಸರ್, ನಿಮ್ಮ ಆಧಾರ್ ನಂಬರ್ ಹೇಳಿ....

ಗುಂಡ: ಆಧಾರ್?..... k ತಗೊಳ್ಳಿ 6113-0676-4727.

ಅ: ನಿಮ್ಮ ಹೆಸರು Mr.ಗುಂಡ. ನಿಮ್ಮ. ಮನೆ ವಿಳಾಸ ನಂಬರ್ 115, 2nd cross, 5th main, Teacher colony, Bangalore.ನಿಮ್ಮ ಮನೆ ದೂರವಾಣಿ ಸಂಖ್ಯೆ 080-23545678.  ನಿಮ್ಮ ಮೊಬೈಲ್ ಸಂಖ್ಯೆ 9900858333.

ಗುಂಡ: ನಿಮಗೆ ಇದೆಲ್ಲಾ ಹೇಗೆ  ತಿಳಿತು?

ಅ: ನಿಮ್ಮ ಆಧಾರ ಸಂಖ್ಯೆ "ಡಿಜಿಟಲ್ ಇಂಡಿಯಾ " ಜೊತೆ ಕನೆಕ್ಟಿಂಗ್ ಮಾಡಿದ್ವಿ ಅದರಿಂದ ತಿಳಿತು.

ಗುಂಡ:  ಸರಿ. ನನಗೆ ಮಸಾಲ ದೋಸೆ ಬೇಕಿತ್ತು.

ಅ: ಅದು ಬೇಡ ಸರ್

ಗುಂಡ: ಯಾಕೆ

ಅ: ನಿಮ್ಮ. ದೇಹದ ಅರೋಗ್ಯಕ್ಕೆ ಅನುಗುಣವಾಗಿ ನಿಮಗೆ ಬೊಜ್ಜು ಮತ್ತೆ ವಾಯು ಸಮಸ್ಯೆ ಇರುವುದರಿಂದ ಅದು ಬೇಡ.

ಗುಂಡ: ಹೌದಾ...ನನಗೆ ತಿನ್ನೋಕೆ  ಏನಿದೆ?

ಅ: ನಿಮ್ಮ. ಇಷ್ಟದ ರವಾ ಇಡ್ಲಿ  ಇದೆ.

ಗುಂಡ: ನನಗೆ ಇಷ್ಟ ಅಂತ ಹೇಗೆ ಗೊತ್ತಾಯ್ತು?

ಅ:ನೀವು ಹೋದವಾರ ಸದಾಶಿವನಗರ ಸ್ವಪ್ನಾ ಬುಕ್ ಹೌಸ್ ನಲ್ಲಿ "ರವಾ ಇಡ್ಲಿ ಮಾಡುವ ವಿಧಾನಗಳು" ಎಂಬ ಪುಸ್ತಕ ಖರೀದಿ ಮಾಡಿದಿರಲ್ಲವೆ?

ಗುಂಡ: ನಿಜ, ರವಾ ಇಡ್ಲಿ ಕಳಿಸಿ.

ಅ: ನಿಮ್ಮ ಮನೆಯಲ್ಲಿ 7 ಜನ ಇದ್ದಿರಿ. 14 ಇಡ್ಲಿ ಸಾಕು. 350 ರೂಪಾಯಿ ಆಗುತ್ತದೆ. 

ಗುಂಡ: ಸರಿ  ನಾ ಕ್ರೆಡಿಟ್  ಕಾರ್ಡ್  ಕೊಡ್ತೀನಿ.

ಅ: ಬೇಡ ಸಾರ್, ನಿಮ್ಮ ಸಂಬಳದಲ್ಲಿ ಎಲ್ಲಾ ಖರ್ಚು  ಹೋಗಿ ನಿನ್ನೆ ನಿಮ್ಮ ಮನೆ ಲೋನ್ 12,357.50 ಕಟ್ ಆಗಿ ಈಗ ಬರಿ 180 ರೂಪಾಯಿ ಇದೆ.

ಗುಂಡ: ತೊಂದರೆ ಇಲ್ಲ. ನನ್ನ ಹತ್ತಿರ ATM ಕಾರ್ಡ ಇದೆ.

ಅ: ಸಾರಿ ಸರ್, ಅದರಲ್ಲಿ  ಬರೀ 30 ರೂಪಾಯಿ ಇದೆ.

ಗುಂಡ: ಸರಿ ನಾ ಕ್ಯಾಶ್ ಕೊಡ್ತೇನೆ. ರವಾ ಇಡ್ಲಿ ಬರೋಕೆ ಎಷ್ಟು ಹೊತ್ತಾಗುತ್ತೆ?

ಅ: 45 ನಿಮಿಷ ಅಗುತ್ತೆ. ನೀವು ಸುಮ್ಮನೆ  ಕಾಯಬೇಕು . ಅದರ ಬದಲು ನಿಮ್ಮ ಹೀರೋ ಹೊಂಡ KA 02 EA 3641 ಗಾಡಿ ಇದೆ ಅಲ್ವಾ. ಅದರಲ್ಲಿ ಬಂದು ತೆಗೆದು ಕೊಂಡು ಹೋಗಬಹುದಲ್ವಾ?

ಗುಂಡ: ಅದು ನಿಮಗೆ  ಗೊತ್ತಾ? ಸರಿ 10 ರವಾ ಇಡ್ಲಿಗೆ  ಅರ್ಧ ಲೀ ಪೆಪ್ಸಿ free ಅಂತ ಆಫರ್ ಇದೆ ಅಲ್ವಾ?

ಅ: ಹೌದು ಸರ್, ಆದರೆ ನಿಮಗೆ ಕೊಡೋಕೆ  ಆಗೋಲ್ಲ. ಹೋದ ವಾರ ರಾಮಯ್ಯ ಆಸ್ಪತ್ರೆಯಲ್ಲಿ  ಮೆಡಿಕಲ್ ಚೆಕಪ್ ಗೆ ಅಂತಾ ಹೋದಾಗ ನಿಮ್ಮ. ಶುಗರ್ ಲೆವೆಲ್ ಜಾಸ್ತಿ ಆಗಿದೆ ಅಂತ ಡಾಕ್ಟರ ಸುರೇಶ್ ರಾವ್ ಹೇಳಿದ್ದಾರಲ್ವಾ?

ಗುಂಡ: ನಿಮ್ಮ. ಅಜ್ಜಿ ...

ಅ: ಸರ್ ಹಾಗೆಲ್ಲ ಕೆಟ್ಟದಾಗಿ  ಮಾತಾಡಬೇಡಿ. 1999 ರಲ್ಲಿ ಇಂದಿರಾನಗರದಲ್ಲಿ ಗಲಾಟೆ ಆದಾಗ ನೀವು ಇದೇ ರೀತಿ ಕೆಟ್ಟದಾಗಿ  ಮಾತಾಡಿದ್ದಕ್ಕೆ ಪೋಲಿಸನವರು 500 ರೂಪಾಯಿ ದಂಡ ಹಾಕಿದ್ದು ನೆನಪಿದೆಯಾ?

ಗುಂಡ ಸುಸ್ತೋ ಸುಸ್ತು.

ಇದೇ  ಡಿಜಿಟಲ್ ಇಂಡಿಯಾ.

Sunday, February 4, 2024

🌹 ನಿತ್ಯಸತ್ಯ ಜ್ಞಾನದ ಭಂಡಾರ🌹

🌹 ನಿತ್ಯಸತ್ಯ  ಜ್ಞಾನದ ಭಂಡಾರ🌹

ಇದನ್ನ ಯಾವ ಪುಣ್ಯಾತ್ಮ ಬರೆದಿದ್ದು ಅಂತ ಗೊತ್ತಿಲ್ಲ. ವಾಟ್ಸಪ್ ಲ್ಲಿ ಬಂತು. ಲೇಖಕರ ಹೆಸರಿರ್ಲಿಲ್ಲ. ಅರ್ಥ ಮಾಡ್ಕೊಂಡ್ರೆ ತುಂಬ ಚೆನಾಗಿದೆ.

ಮಗಳು:-  ಅಮ್ಮ ಪ್ರಪಂಚದ 6 ಹೆಸರಾಂತ ವೈದ್ಯರುಗಳು ಯಾರಮ್ಮ?

ತಾಯಿ:- ಮಗಳೇ ಪ್ರಪಂಚದ 6 ಹೆಸರಾಂತ ವೈದ್ಯರುಗಳ ಬಗ್ಗೆ ಸರಿಯಾಗಿ ಗಮನವಿಟ್ಟು ಕೇಳು ಒಳ್ಳೆಯ ಪ್ರಶ್ನೆಯನ್ನೇ ಕೇಳಿದ್ದೀಯಾ

1 ಸೂರ್ಯನ :-ಬೆಳಕು ಅಥವಾ ಸೂರ್ಯನ ಕಿರಣಗಳು

ದಿನನಿತ್ಯ ಬೆಳಿಗ್ಗೆ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳಬೇಕು ಅಥವಾ ನಿಧಾನವಾಗಿ ನಡೆಯಬೇಕು ಸೂರ್ಯನ ಬೆಳಕು ಭಗವಂತನ ಶಕ್ತಿ ಆ ದಿವ್ಯಶಕ್ತಿ ನಮ್ಮ ದೇಹದಲ್ಲಿ  ಡಿ ವಿಟಮಿನ್ ಆಗಿ ಪ್ರವೇಶಿಸಿ ದಿನನಿತ್ಯ ನವಚೈತನ್ಯವನ್ನು ಉಂಟುಮಾಡುತ್ತದೆ

2 .ವಿಶ್ರಾಂತಿ:-   ನಾವು ದಿನನಿತ್ಯ ಅತಿಯಾದ ಕೆಲಸಗಳನ್ನು ಮಾಡುತ್ತಿರುವಾಗ ನಮ್ಮ ದೇಹದ ಶಕ್ತಿ ಕುಂದುತ್ತದೆ ಅದಕ್ಕಾಗಿ ಸಾಧ್ಯವಾದಷ್ಟು ಸಮಯ ಸಿಕ್ಕಾಗ ವಿಶ್ರಾಂತಿ ಪಡೆಯಬೇಕು ದೇಹದ ಅಂಗಾಂಗಗಳ ವಿಶ್ರಾಂತಿಯು ದೇಹವನ್ನು ಚೈತನ್ಯ ದಲ್ಲಿಡಿತ್ತದೆ

3.  ವ್ಯಾಯಾಮ:-  ಭಗವಂತ ನಮ್ಮ ದೇಹವನ್ನು ಅದ್ಭುತವಾಗಿ ಸೃಷ್ಟಿಸಿದ್ದಾನೆ 72000 ನಾಡಿಗಳಿ ವೆ ಇಡೀ ಪೃಥ್ವಿಯ ಎಲ್ಲಾ ಮಾಹಿತಿಗಳನ್ನು ನಮ್ಮ ಮೆದುಳಿನ ಚಿಪ್ಪಿನಲ್ಲಿ ಇಟ್ಟು ತುಂಬಿದರೆ ಅದು ಕೇವಲ ಶೇಕಡ ಒಂದರಷ್ಟು ಮಾತ್ರ ಎನ್ನುವುದು ಎಷ್ಟು ಅದ್ಭುತ  ಭಗವಂತ ನಮ್ಮನ್ನು ದೇವರ ಸ್ವರೂಪ ದಂತೆ  ಸರ್ವಶಕ್ತಿಯನ್ನು ಕೊಟ್ಟು ಸೃಷ್ಟಿಸಿದ್ದಾನೆ  ಇಂತಹ ಅದ್ಭುತವಾದ ದೇಹವನ್ನು ದಿನನಿತ್ಯದ ಚಟುವಟಿಕೆಗಾಗಿ ವ್ಯಾಯಾಮ  ತುಂಬಾ ಅವಶ್ಯಕತೆ

4. ಮಿತ :-ಆಹಾರ ದೇಹಕ್ಕೆ ಅವಶ್ಯಕತೆಯಾದಷ್ಟು ಮಾತ್ರ ಪ್ರೋಟಿನ್ ಯುಕ್ತ ಆಹಾರ ಸೇವಿಸಬೇಕು ಹಣ್ಣು ಸೊಪ್ಪು ತರಕಾರಿ ಹಾಗೂ ಒಣ ಹಣ್ಣುಗಳು ದೇಹಕ್ಕೆ ಅವಶ್ಯಕತೆ ಇವೆಲ್ಲವನ್ನು ಮಿತವಾಗಿ ಸೇವಿಸಬೇಕು  ಈ ರೀತಿ  ನಿತ್ಯ ಸೇವಿಸಿದಾಗ ದೇಹವು ಚೈತನ್ಯ ಪೂರಕವಾಗಿ ನಮ್ಮ ದೇಹದ  ಎಲ್ಲ ಅಂಗಾಂಗಗಳು ಆರೋಗ್ಯಪೂರ್ಣವಾಗಿರಲು
ಸಾಧ್ಯವಾಗುತ್ತದೆ

5.ಆತ್ಮಸ್ಥೈರ್ಯ:- ನಾವು ಏನೇ ಕಳೆದುಕೊಂಡರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಆತ್ಮಸ್ಥೈರ್ಯ ನಮಗೆ ಸದಾ ಸಂಜೀವಿನಿ ಜೀವರಕ್ಷಕ ಆಪದ್ಬಾಂಧವ ನಾವು ಸದಾ ಚಟುವಟಿಕೆಯಿಂದ ಇರಲು ನೆರವಾಗುತ್ತದೆ ಭಯ ಭೀತಿ 
ಸಂಕುಚಿತ ಮನೋಭಾವ
ಗಾಬರಿ ನಾಳೆ ಏನಾಗುತ್ತದೋ ಏನೋ ಎಂಬ ಅನುಮಾನ ಸದಾ ಕೆಟ್ಟದ್ದನ್ನೇ ಯೋಚಿಸುವುದು
ಪ್ರಸ್ತುತ ಮಹಾಮಾರಿಯ ಬಗ್ಗೆ ಚಿಂತಿಸುವುದು ಇವೆಲ್ಲವೂ ಋಣಾತ್ಮಕ ಚಿಂತನೆ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ
ಆತ್ಮಸ್ಥೈರ್ಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಆದ್ದರಿಂದ ಧನಾತ್ಮಕ ಚಿಂತನೆಗಳು ಆತ್ಮಸ್ಥೈರ್ಯದ ಜೀವನದ ಆಧಾರ ಸ್ತಂಭಗಳು

6. ಸ್ನೇಹಿತರು:-    ಜೀವನದಲ್ಲಿ ಕನಿಷ್ಠ ಐದಾರು ಜನ ಉತ್ತಮ ಸ್ನೇಹಿತರನ್ನು ಪ್ರತಿಯೊಬ್ಬರು ಹೊಂದಬೇಕು ಅವರೊಡನೆ ಪ್ರತಿನಿತ್ಯ ಭೇಟಿಯಾಗಲಿ ಅಥವಾ ದೂರವಾಣಿಯಲ್ಲಾಗಲಿ ಮಾತನಾಡಬೇಕು ಸ್ನೇಹಿತರೊಡನೆ ಮುಕ್ತವಾಗಿ
 ಮಾತನಾಡುವುದರಿಂದ ಮನಸ್ಸು ಹಗುರವಾಗುತ್ತದೆ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
 ದಿನನಿತ್ಯ ಸದಾ ನಾವು ಚಟುವಟಿಕೆಯಿಂದ ಇರಲು
ಸ್ನೇಹ ಸಂಜೀವಿನಿಯಂತೆ ಕೆಲಸ ಮಾಡುತ್ತದೆ

 ತಾಯಿ :-     ಮಗಳೇ.   ಪ್ರಪಂಚದ ಅತ್ಯುತ್ತಮ ವೈದ್ಯರ ಬಗ್ಗೆ ಅರ್ಥವಾಯಿತೇ

Thursday, February 1, 2024

ಎಲ್ಲಿಯವರೆಗೆ ನೀವು ಪ್ರಾಮಾಣಿಕರಾಗಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ನಾವು ನಿಮ್ಮನ್ನು ನಂಬುವ ಮಾತೇ ಇಲ್ಲ."

ಹಾಂಕಾಂಗ್‌ನಲ್ಲಿರುವ ಸ್ನೇಹಿತನಿಂದ ತಿಳಿದುಬಂದ 
*'ಬಹಳ ಆಘಾತಕಾರಿ ಸಂದೇಶ'*

ದಯವಿಟ್ಟು ಪೂರ್ಣ ಓದಿ 👇

*ಹಾಂಗ್ ಕಾಂಗ್ ನಲ್ಲಿ ಬಹಳಷ್ಟು ಜನರು ಅಲ್ಲಿರುವ ಭಾರತೀಯರೊಂದಿಗೆ ಹೆಚ್ಚು ಸ್ನೇಹ ಬೆಳೆಸುವುದಿಲ್ಲ  ಮತ್ತು ಕೆಲವರು ಭಾರತೀಯರನ್ನು ದ್ವೇಷಿಸುತ್ತಾರೆ!* 

ಆದರೆ *ಯಾಕೆ??*

ಅಲ್ಲಿ ವಾಸಿಸುವ ನನ್ನ ಸ್ನೇಹಿತರೊಬ್ಬರು ಹೀಗೆ ವಿವರಿಸಿದ್ದಾರೆ:

ಹಾಂಗ್ ಕಾಂಗ್ ನಲ್ಲಿ  ಸುಮಾರು ಒಂದು ವರ್ಷ ಕಳೆದ ನಂತರ, ನಾನು ಅನೇಕ ಸ್ಥಳೀಯರೊಂದಿಗೆ ಸ್ನೇಹ ಬೆಳೆಸಿದ್ದೆ. ಆದರೆ ಇಲ್ಲಿನ ಜನರು ನನ್ನೊಂದಿಗೆ ಸಂಶಯಮುಕ್ತರಾಗಿರಲಿಲ್ಲ ಮತ್ತು ನನ್ನಿಂದ ಅಂತರವನ್ನು ಕಾಯ್ದುಕೊಂಡಿದ್ದರು!!

ಇಲ್ಲಿಯ ಯಾವುದೇ ಸ್ಥಳೀಯ ಸ್ನೇಹಿತ ನನ್ನನ್ನು ತನ್ನ ಮನೆಗೆ ಆಹ್ವಾನಿಸಲಿಲ್ಲ ಮತ್ತು ನಮ್ಮ ಸ್ನೇಹ ಕೇವಲ ಔಪಚಾರಿಕವಾಗಿರುತ್ತಿತ್ತು. ನನ್ನ ಮತ್ತು ಅವರ ನಡುವೆ ಹಾರ್ದಿಕ ಸ್ನೇಹ ಬೆಳೆಸುವ ದಿಶೆಯಲ್ಲಿ ನನ್ನ ಪ್ರಯತ್ನ ಪ್ರಾಮಾಣಿಕವಾಗಿದ್ದರೂ ಕೂಡ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿರಲಿಲ್ಲ.

ಆಗಾಗ್ಗೆ ಅದರ ಬಗ್ಗೆ ನನಗೆ ಆಶ್ಚರ್ಯವಾಗುತ್ತಿತ್ತು. ಒಂದು ದಿನ ನಾನು ಸಾಹಸ ಮಾಡಿ ನನ್ನ ಸಹೋದ್ಯೋಗಿ ಸ್ನೇಹಿತನನ್ನು ಇದರ ಬಗ್ಗೆ ಕೇಳಿಯೇಬಿಟ್ಟೆ.

ಮೊದಲು ಉತ್ತರಿಸಲು ಸ್ವಲ್ಪ ಹಿಂಜರಿಕೆ ಮಾಡಿದ ಆ ನನ್ನ ಹಾಂಗ್ ಕಾಂಗ್ ಸ್ನೇಹಿತ, ನಂತರ ನನ್ನ ಒತ್ತಾಯಕ್ಕೆ ಮಣಿದು ಆಡಿದ ಮಾತುಗಳು ಮತ್ತು ಆ ಗಂಭೀರ ವಿಷಯಗಳು ನನ್ನನ್ನು ಅಚ್ಚರಿಗೊಳಿಸಿತು, ಮಾತ್ರವಲ್ಲ ಅವನ ಅಭಿಪ್ರಾಯ ಕೇಳಿ ನನಗೆ ಬಹಳ ಬಹಳ ನಾಚಿಕೆಯಾಯಿತು.

ಹಾಂಗ್ ಕಾಂಗ್ ಸ್ನೇಹಿತ ಕೇಳಿದ್ದು *"200 ವರ್ಷಗಳ ಕಾಲ ಆಳ್ವಿಕೆ ನಡೆಸಲು ಭಾರತದಲ್ಲಿ ಎಷ್ಟು ಬ್ರಿಟಿಷರು ವಾಸಿಸುತ್ತಿದ್ದರು?"* ನಾನೆಂದೆ "ಸುಮಾರು 10,000 ಬ್ರಿಟಿಷರಿರಬಹುದು"

 "ಹಾಗಾದರೆ 32 ಕೋಟಿ ಭಾರತದ ಜನರನ್ನು ಹಿಂಸಿಸಿದವರು, ಮತ್ತು ಇಷ್ಟು ವರ್ಷಗಳ ಕಾಲ ಆಳಿದವರು ಯಾರು? ಅವರು ನಿಮ್ಮ ಸ್ವಂತ ಜನರೇ ತಾನೇ??"

 "ಜಲಿಯನ್ ವಾಲಭಾಗ್ ನಲ್ಲಿ ಜನರಲ್ ಡೈಯರ್ #ಫೈರ್ ಎಂದು ಹೇಳಿದಾಗ 1300 ನಿರಾಯುಧ ಜನರನ್ನು ಹೊಡೆದು ಕೊಂದವರು ಯಾರು?? ಅಲ್ಲಿ ಬ್ರಿಟಿಷ್ ಸೈನ್ಯವೇನೂ ಇರಲಿಲ್ಲವಲ್ಲ!
*ಒಬ್ಬನೇ ಒಬ್ಬ ಗನ್‌ಮ್ಯಾನ್ ಏಕೆ ಹಿಂದೆ ತಿರುಗಿ ಜನರಲ್ ಡೈಯರ್‌ನನ್ನು ಕೊಲ್ಲಲು ಸಾಧ್ಯವಾಗಲಿಲ್ಲ??"*

ಮುಂದುವರೆದು ಆತ ಕೇಳಿದ:

"ಟರ್ಕಿ ಅಥವಾ ಮಧ್ಯ ಏಷ್ಯಾದಿಂದ ಎಷ್ಟು ಮೊಘಲರು ಮತ್ತು ಇತರರು ಭಾರತಕ್ಕೆ ಬಂದರು? ಹೇಗೆ ಅವರು ಸುಮಾರು 800 ವರ್ಷಗಳ ಕಾಲ ಭಾರತವನ್ನು ಲೂಟಿ ಮಾಡಿದರು ಮತ್ತು ಭಾರತವನ್ನು ಆಳಿದರು ಮತ್ತು ಭಾರತೀಯರನ್ನು ಗುಲಾಮರನ್ನಾಗಿ ಇಟ್ಟುಕೊಂಡರು???"

"ಹೇಗೆ ನಿಮ್ಮ ಸ್ವಂತ ಜನರನ್ನು ತಮ್ಮ ಇಸ್ಲಾಮ್ ಮತಕ್ಕೆ ಮತಾಂತರಿಸಿದರು ಮತ್ತು ಅದೇ ಮತಾಂತರಿಗಳನ್ನು ನಿಮ್ಮ ವಿರುದ್ಧ ನಿಲ್ಲುವಂತೆ ಮಾಡಿದರು??"
 
ಅವನ ಈ ಎಲ್ಲ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವೇ ಇಲ್ಲವಾಗಿತ್ತು, ಏನು ಹೇಳಬೇಕೆಂದೇ ತೋಚಲಿಲ್ಲ..

ಅವನೇ ಹೇಳಿದ:

"ಉತ್ತರ ಇಷ್ಟೇ..
ಹಣ ಮತ್ತು ಅಧಿಕಾರದ ದುರಾಸೆಯಲ್ಲಿ ಆ ವಿದೇಶಿಗರ ಅಮಿಷಕ್ಕೊಳಗಾಗಿ ನಿಮ್ಮವರು ತಮ್ಮ ಸಹೋದರರನ್ನೇ ಹಿಂಸಿಸಲು ಮತ್ತು ಲೂಟಿ ಮಾಡಲು ಶತ್ರುಗಳೊಂದಿಗೇ ಸೇರಿಕೊಂಡರಲ್ಲವೇ??  
ಈಗ ಅವರು ವಿದೇಶಿಯರು ಎಂದು ಹೇಳಬೇಡಿ!

*ನಿಮ್ಮ ಸ್ವಂತ ಜನರೇ, ಭಾರತೀಯರೇ ವಿದೇಶಿಯರ ದಾಸರಾಗಿ, ಕೂಲಿಗಳಾಗಿ, ಸೈನಿಕರಾಗಿ ಶತಮಾನಗಳಿಂದ ಹಣ, ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ತಮ್ಮ ಸ್ವಂತ ಸಹೋದರ ಸಹೋದರಿಯರನ್ನೇ ಕೊಂದು ಅತ್ಯಾಚಾರ ಮಾಡುತ್ತಿದ್ದಾರೆ, ನಿಜವಲ್ಲವೇ??"*

"ದೇಶದ್ರೋಹದಲ್ಲಿ ನಿಮ್ಮ ಜನರ ಪಾತ್ರದ ಬಗ್ಗೆ ನಮಗೆ ಬಲವಾದ ತಿರಸ್ಕಾರವಿದೆ. ನಮ್ಮಲ್ಲಿ ಅನೇಕರು ನಿಮ್ಮ *ಸ್ವಾರ್ಥ, ದುರಾಸೆ ಮತ್ತು ದ್ರೋಹದ ಕಾರಣಕ್ಕಾಗಿ* ನಿಮ್ಮನ್ನು ಬಲವಾಗಿ ದ್ವೇಷಿಸುತ್ತಾರೆ."

"ನಮ್ಮಲ್ಲಿ ಅಂತಹ ಜನರು ಇಲ್ಲವೇ ಇಲ್ಲ ಎಂದಲ್ಲ, ಆದರೆ *ನಾವು ನಮ್ಮ ಮೇಲೆ ದಬ್ಬಾಳಿಕೆ ನಡೆಸುವವರೊಂದಿಗೆ ಸಹಕರಿಸುವುದಿಲ್ಲ. ನಮ್ಮ ದೇಶ ಅಥವಾ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡುವ ಅಥವಾ ವರ್ತಿಸುವ ಜನರನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದು ನಾನು ನಿಮಗೆ ಪ್ರಮಾಣ ಮಾಡಿ ಹೇಳಬಲ್ಲೆ!*

ಕಮ್ಯುನಿಸ್ಟ್ ದೇಶವಾಗಿದ್ದರೂ ಚೀನಾದಲ್ಲಿ ಅಂತಹ ಜನರು ನಿಮಗೆ ಕಾಣುವುದಿಲ್ಲ!

*ನಾವು ಎಂದಿಗೂ ನಮ್ಮ ರಾಷ್ಟ್ರಕ್ಕೆ ದ್ರೋಹ ಮಾಡಲು ಸಾಧ್ಯವೇ ಇಲ್ಲ.  ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ನಮಗೆ ಸದಾ ಹೆಮ್ಮೆ ಇದೆ.*

ನಾವು ಸಾಧ್ಯವಾದಷ್ಟು ಭಾರತೀಯರ ಬಗ್ಗೆ ಹೆದರುವುದಿಲ್ಲ ??

ಬ್ರಿಟಿಷರು ನಮ್ಮ ದೇಶ ಹಾಂಕಾಂಗ್‌ಗೆ ಬಂದಾಗ, ಒಬ್ಬ ವ್ಯಕ್ತಿಯೂ ಅವರ ಸೈನ್ಯಕ್ಕೆ ಸೇರಲಿಲ್ಲ ಏಕೆಂದರೆ ನಮ್ಮ ಪೂರ್ವಜರು ತಮ್ಮ ಜನರ ವಿರುದ್ಧ ಹೋರಾಡಲು ಸಿದ್ಧರಿರಲಿಲ್ಲ??

*ಸ್ವಲ್ಪವೂ ಯೋಚಿಸದೇ ಸಂಪೂರ್ಣವಾಗಿ ಮಾರಾಟವಾಗಲು ಸಿದ್ಧರಾಗಿರುವ ಭಾರತೀಯರ ದ್ವಿಪಾತ್ರ ಇದು. ಇಂದಿಗೂ ಭಾರತದಲ್ಲಿ ಅದೇ ನಡೆಯುತ್ತಿದೆ! ಸ್ವತಂತ್ರಗೊಂಡ ಮೇಲೂ ಭಾರತೀಯರ ಪರಿಸ್ಥಿತಿ ಮತ್ತು ಮನಸ್ಸು ಬದಲಾಗಲೇ ಇಲ್ಲ.*

ಪ್ರಾಕೃತಿಕ, ಆಕ್ರಾಮಕ ಅಥವಾ ಇನ್ನಾವುದೇ ಸಮಸ್ಯೆಗಳಿರಲಿ *ನೀವು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಎರಡನೇ ಸ್ಥಾನವನ್ನು ನೀಡುತ್ತೀರಿ ಮತ್ತು ನಿಮ್ಮ ಸ್ವಂತ ಲಾಭಕ್ಕಾಗಿ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಸೇರಲು ನಿಮಗೆ ಹಿಂಜರಿಕೆಯೇ ಇಲ್ಲ.*

ದೇಶದ ಸಂಕಷ್ಟದ ಸಮಯದಲ್ಲಿಯೂ ನಿಮ್ಮಲ್ಲಿ ಮೂಡುವ ಮೊದಲ ಭಾವನೆ *ದೇಶ ನಾಶವಾಗಿ ಹೋದರೂ 'ನಾನು ಮತ್ತು ನನ್ನ ಕುಟುಂಬ ಮೊದಲು ಉಳಿಯಬೇಕು!!'.* ಎನ್ನುವುದು.

ಎಲ್ಲಿಯವರೆಗೆ ನೀವು ಪ್ರಾಮಾಣಿಕರಾಗಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ನಾವು ನಿಮ್ಮನ್ನು ನಂಬುವ ಮಾತೇ ಇಲ್ಲ."

"ಹಾಂಗ್ ಕಾಂಗ್ ನ ಆ ಸ್ನೇಹಿತ ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ನನಗೆ  ಅವರೇನೆಂದು ಮತ್ತು ನಾವೇನೆಂದು ಅರ್ಥವಾಗಿ ಹೋಗಿತ್ತು."
---
ಸ್ನೇಹಿತರೇ,
ಇದು ನಮಗೆಲ್ಲಾ ನಾಚಿಕೆಗೇಡಿನ ವಿಷಯವಲ್ಲವೇ?
ನಮಗೆ ಗಂಭೀರ ಆತ್ಮಾವಲೋಕನದ ಅಗತ್ಯವಿಲ್ಲವೇ.

ಈ ಬರಹ ನಿಮ್ಮ ಮನಸ್ಸನ್ನು ಮುಟ್ಟಿದ್ದಲ್ಲಿ ಆದಷ್ಟು ಜನರಿಗೆ ಮತ್ತು ಗುಂಪುಗಳಿಗೆ ಫಾರ್ವರ್ಡ್ ಮಾಡಿ ಭಾರತೀಯರನ್ನು ಎಚ್ಚರಿಸುವ ಕಾರ್ಯದಲ್ಲಿ ಕೈಜೋಡಿಸಿ.

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World