www.dgnsgreenworld.blogspot.com

Wednesday, July 31, 2019

dgnsgreenworld

Add me as a friend on YouTube! https://youtu.be/addme/KIcmdgVPQl_5JaxtS7Gu-2Bx9QApng

ಆರೋಗ್ಯವೇ ಭಾಗ್ಯ, ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ

SAVE NATURE, HEALTHY, WEALTHY & WISE. dgnsgreenworld FAMILY.

ಹೃದಯಘಾತ ದಿಡೀರ್ ಎಂದು ಬರುವುದಿಲ್ಲ, ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು.  ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣ,  ಮುನ್ಸೂಚನೆ ಎಂದು ಅರಿವಾಗುವುದಿಲ್ಲ.  ಬೇರೆಯವರಿಗೂ ಮನೆಯವರಿಗೂ  ಹೇಳುವುದಿಲ್ಲ.

*ಇಪರೀತ ಬೆವರುವುದು,*
*ಸುಸ್ತಾಗುವುದು,*
*ಯಾವುದಾದರು ರಟ್ಟೆ ವಿಪರೀತ ನೋಯುವುದು,*
*ಎದೆ ಕಿವುಚಿದಂತೆ ಆಗುವುದು*
ನಿರ್ಲಕ್ಷಿಸಬಾರದು

ಇಂಥ ಲಕ್ಷಣಗಳು ಹೆಚ್ಚಾಗಿ ನಡಿಗೆ ಮಾಡುವಾಗಲೂ, ಮೆಟ್ಟಿಲು ಹತ್ತುವಾಗಲೂ  ಕಾಣಿಸುತ್ತವೆ, ತಕ್ಷಣ ಆಸ್ಪತ್ರೆಯನ್ನು  ಸೇರಬೇಕು.

*ಗೊಲ್ಡನ್ ಅವರ್* - ಹೃದಯಾಘಾತವಾದ  ಮೊದಲ ಅರ್ಧ ಗಂಟೆಯ ಸಮಯ ವ್ಯರ್ಥ ಮಾಡಬಾರದು.

40 ವರ್ಷದ ನಂತರ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

*ವಯಸ್ಸಾದವರು, ಈಗಾಗಲೇ ನಿತ್ಯ ಚಿಕಿತ್ಸೆಯಲ್ಲಿ  ಇರುವವರು ಹೊರಗೆ ಹೋಗುವಾಗ ಯಾವಾಗಲು ಸಾಕಷ್ಟು ಹಣ, ಜಾರ್ಜ್ ಮಾಡಿದ ಮೊಬೈಲ್* (ಯಾವುದಾದರು), *ಎಟಿಎಂ ಕಾರ್ಡ್, ಐಡಿ ಕಾರ್ಡ್  ಮತ್ತು ನೀರಿನ ಬಾಟಲಿ* (200 ಎಂ.ಎಲ್. ಆದರೂ ಪರವಾಗಿಲ್ಲ) *ಜೊತೆಯಲ್ಲಿ  ತೆಗೆದುಕೊಂಡು ಹೋಗವುದು ಶ್ರೇಯಕರ*

ಸಾವಿಗೆ ಹೆದರಬಾರದು, ಸಾವು ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು.

ಯೋಗ ಮಾಡುವುದರಿಂದ, ನಿತ್ಯ ನಡಿಗೆ ಮಾಡುವುದರಿಂದ, ಮಾಂಸಾಹಾರ, ಮೊಟ್ಟೆ ತಿನ್ನದೆ ಶುದ್ಧ ಶಾಕಹಾರಿ ಯಾಗಿರುವುದರಿಂದ, ಬೊಜ್ಜು ದಪ್ಪ ಇಲ್ಲದೆ ಇರುವುದರಿಂದ, ತೆಳ್ಳಗೆ ಇರುವುದರಿಂದ, ಚಿಕ್ಕ ವಯಸ್ಸು ಇರುವುದರಿಂದ  ಹೃದಯಾಘಾತ ಆಗುವುದಿಲ್ಲ ಎಂಬುದು ತಪ್ಪು ತಿಳುವಳಿಕೆ. ಅನುವಂಶಿಕ ಕಾರಣಗಳು ಜೊತೆಗೆ ಇತರೆ ಕಾರಣಗಳು ಇರುತ್ತವೆ.

ಪ್ರತಿಯೊಬ್ಬರಿಗೂ ಹೃದಯದಲ್ಲಿ ರಕ್ತದ ಹೆಪ್ಪು (ಕ್ಲಾಟ್ )  ಸ್ವಲ್ಲವಾದರೂ ಇದ್ದೇ ಇರುತ್ತದೆ, ನಿಧಾನವಾಗಿ ಹೆಚ್ಚಾಗುತ್ತಿರುತ್ತದೆ. ನಡಿಗೆ, ವ್ಯಾಯಾಮ, ಸದಾ  ಚಟುವಟಿಕೆ, ಸರಿಯಾದ ಆಹಾರ ಕ್ರಮ, ಸರಳ ಜೀವನ ಇಲ್ಲವಾದಲ್ಲಿ ಬೇಗ ಹೆಪ್ಪುಗಟ್ಟುವುದು (ಕ್ಲಾಕ್) ಹೆಚ್ಚಾಗುತ್ತಿರುತ್ತದೆ, ಆದರೆ  ಮೇಲಿನ ಕಾರ್ಯ ಚಟುವಟಿಕೆಗಳನ್ನು ಪಾಲಿಸಿದರೆ  ನಿಯಂತ್ರಣದಲ್ಲಿರುತ್ತದೆ.

ಈ ಹೃದಯದ ಖಾಯಿಲೆ ಇ.ಸಿ.ಜಿ ಮಾಡಿದಾಗ ಗೊತ್ತಾಗುತ್ತದೆ. ಆಶ್ಚರ್ಯವೆಂದರೆ ಎಷ್ಟೋ ಜನಕ್ಕೆ ಇ.ಸಿ.ಜಿ ಮತ್ತು ಎಕೋಗ್ರಾಮ್ ಮಾಡಿದಾಗ ಹೃದಯದ ಖಾಯಿಲೆ ತಿಳಿಯುವುದಿಲ್ಲ. ಆದರೆ ಟಿ.ಎಂ.ಟಿ ಪರೀಕ್ಷೆ ಮಾಡಿದಾಗ ಖಂಡಿತ ಸ್ವಲ್ಲ ಪ್ರಮಾಣವಾದರು ಪತ್ತೆ ಹಚ್ಚುತ್ತಾರೆ, ಆಗ ಅಂಜಿಯೋಗ್ರಾಮ್ ಮಾಡಿಸಬೇಕಾಗುತ್ತದೆ. ಅಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಅತ್ಯಂತ ನಿಖರವಾಗಿ ಸ್ಪಷ್ಟವಾಗಿ ಕ್ಲಾಟ್ ಪ್ರಮಾಣ ಗೊತ್ತಾಗುತ್ತದೆ. ಕ್ಲಾಟ್‌ಗಳು ಒಂದಕ್ಕಿಂತ ಹೆಚ್ಚು ಕೂಡ  ಮೇಲ್ಪಟ್ಟು ಕೂಡ ಪತ್ತೆಯಾಗಿರುವುದು.  ನಂತರ ಸೂಕ್ತ ಚಿಕೆತ್ಸೆ ಪಡೆದುಕೊಂಡು  ಆರಾಮವಾಗಿ ಆರೋಗ್ಯವಾಗಿರಬಹುದು. ಏನು ಹೆದರುವ ಅವಶ್ಯಕತೆ ಇಲ್ಲ. ಸದಾ ಚಟುವಟಿಕೆಯಿಂದ ಇದ್ದರೆ ತಾನು ಹೃದ್ರೋಗಿ ಎಂದು ಅನಿಸುವುದೇ ಇಲ್ಲ, ಎಲ್ಲರಂತೆ ಸುಖ ಜೀವನ ನಡೆಸಬಹುದು.

ಬೇರೆ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ಹೊಂದಲು ಸಮಯವಿರುತ್ತದೆ.
ಆದರೆ..
*ಹೃದಯ  ಖಾಯಿಲೆ ಹಾಗಲ್ಲ, ಕೆಲವೊಮ್ಮೆ ಒಂದು ನಿಮಿಷ ಕೂಡ  ಸಮಯವನ್ನೇ ನೀಡುವುದಿಲ್ಲ, ತಕ್ಷಣ  ಸಾವಿಗೆ  ನೂಕಿ ಬಿಡುತ್ತದೆ. ಬದುಕಲು  ಅದೃಷ್ಟ ಬೇಕು*

ವೈದ್ಯರು ಹೇಳುವುದು ಒಂದೇ...

*ಉತ್ತಮ ಆಹಾರ ಕ್ರಮ ಅನುಕರಿಸುವುದು ಸೂಕ್ತ.
*ಸದಾ ಚಟುವಟಿಕೆಯಿಂದ ಇರುವುದು ಸೂಕ್ತ.
*ಸರಳ ಜೀವನ ನಡೆಸುವುದು ಸೂಕ್ತ.   ಸ್ನೇಹಿತರೆ ಆರೋಗ್ಯವೇ ಭಾಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.                ವಂದನೆಗಳೊಂದಿಗೆ.    💐🙏           dgnsgreenworld

ಹಾವು ಕಂಡಾಗ ಹುಲಿಗೂ ಒಂದು ಕ್ಷಣ ಭಯವಾಗುತ್ತೆ ನೋಡಿ



SAVE NATURE, HEALTHY, WEALTHY & WISE. dgnsgreenworld FAMILY.

ಬೆಲೆ ಕಟ್ಟಲಾಗದ ನೃತ್ಯಕಲೆ ಅಭಿನಯವನ್ನು ನೋಡಿ



SAVE NATURE, HEALTHY, WEALTHY & WISE. dgnsgreenworld FAMILY.

Friday, July 26, 2019

ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯ ಇತಿಹಾಸ



SAVE NATURE, HEALTHY, WEALTHY & WISE. dgnsgreenworld FAMILY.

ಶ್ರೀ ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, 'ದೇವಿ ಮಹಾತ್ಮೆ' ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ 'ದೇವಿ ಮಹಾತ್ಮೆ' ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟ ವೆಂಬ ಹೆಸರು ಬಂದಿದೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಅದರ ಪಶ್ಚಿಮ ಭಾಗದಲ್ಲಿರುವ ಚಾಮುಂಡಿಬೆಟ್ಟವು ಎಂಟು ಬೆಟ್ಟಗಳ ಪೈಕಿ ಒಂದಾಗಿದೆ. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಹಿಂದೆ ಬೆಟ್ಟವನ್ನು ಮಹಾಬಲಾದ್ರಿ ಎಂದೂ ಸಹ ಕರೆಯಲಾಗುತ್ತಿತ್ತು.
ಹಿಂದೆ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನವೆಂಬ ದೊಡ್ಡ ದೇವಸ್ಥಾನವಾಗಿ ಅಭಿವೃದ್ಧಿಯಾಗಿದೆ ಎಂದು ತಿಳಿದುಬರುತ್ತದೆ. 1799 ರಲ್ಲಿ ಅಧಿಕಾರಕ್ಕೆ ಬಂದ ಮೈಸೂರು ಅರಸರು ಈ ದೇವಿ ಆರಾಧಕರಾಗಿದ್ದು, ಶ್ರಧ್ದಾ ಭಕ್ತಿಯಿಂದ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವನ್ನಾಗಿಸಿದ್ದಾರೆ. ಹಾಗೂ ಹೆಚ್ಚಿನ ಮಹತ್ವ ತಂದಿದ್ದಾರೆ.
ಚಾಮುಂಡಿಬೆಟ್ಟ ಚಾರಿತ್ರಿಕ ಹಿನ್ನಲೆಯಲ್ಲಿ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕೊಡುಗೆಯಿದೆ. 12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರದ ಅರಸರ ಹಿನ್ನಲೆಯನ್ನು ಗುರುತಿಸಲಾಗಿದೆ. ಕ್ರಿ.ಶ. 1573 ರಲ್ಲಿ ಚಾಮರಾಜ ಒಡೆಯರು ದೇವಿಯನ್ನು ಪೂಜಿಸಲು ಹೋಗುತ್ತಿದ್ದಾಗ ಅವರಿಗೆ ಸಿಡಿಲು ಬಡಿದು ಅವರ ತಲೆಯ ಕೂದಲೆಲ್ಲಾ ಉದುರಿ ಹೋದವೆಂದು ಇತಿಹಾಸ ಹೇಳುತ್ತದೆ.
ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಚೌಕಾಕೃತಿಯಲ್ಲಿ ನಿರ್ಮಾಣವಾಗಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿರುವ ದೇವಸ್ಥಾನ, ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ, ಮತ್ತು ಪ್ರಾಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ `ಗೋಪುರ` ಮತ್ತು ಗರ್ಭಗುಡಿಯ ಮೇಲೆ 'ವಿಮಾನ' ಶಿಖರಗಳಿವೆ. ಏಳು ಅಂತಸ್ತುಗಳ ಗೋಪುರ 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದು ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದೆ. ಶಿಖರದ ಮೇಲೆ ಏಳು ಚಿನ್ನದ ಲೇಪಿತ ಕಲಶಗಳಿವೆ.
ಗರ್ಭಗುಡಿಯಲ್ಲಿ ಮಹಿಷಮರ್ಧಿನಿಯಾದ ಚಾಮುಂಡೇಶ್ವರಿಯ ವಿಗ್ರಹವು ವಿರಾಜಮಾನವಾಗಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದದ್ದು. ಈ ಶಿಲಾಮೂರ್ತಿಯನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ. 1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ಸಾವಿರ ವರ್ಷಕ್ಕೂ ಹಿಂದಿನ ಹಿನ್ನಲೆಯಿರುವ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದರು. 'ಸಿಂಹವಾಹನ' ಒಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದರು. 'ಸಿಂಹ ವಾಹನ' ವನ್ನು ರಥೋತ್ಸವ ಸಂಧರ್ಭದಲ್ಲಿ ಬಳಸಲಾಗುತ್ತಿದ್ದು ಅದರಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥವನ್ನು ಎಳೆಯಲಾಗುತ್ತದೆ. ದ್ವಾರದ ಮೇಲ್ಭಾಗದಲ್ಲಿ ಸಣ್ಣದೊಂದು ಗಣಪತಿಯ ವಿಗ್ರಹವನ್ನು ನೋಡಬಹುದು. ದ್ವಾರದ ಬೃಹತ್ ಮರದ ಬಾಗಿಲನ್ನು ಬೆಳ್ಳಿಯ ತಗಡಿನಿಂದ ಹೊದಿಸಲಾಗಿದ್ದು, ಬೆಳ್ಳಿಯ ಬಾಗಿಲಿನ ಮೇಲೆ ದೇವಿಯ ಹಲವು ಸ್ವರೂಪಗಳನ್ನು ತೋರಲಾಗಿದೆ. ಮಹಾದ್ವಾರದ ಕೆಳ ಪಾರ್ಶ್ವದಲ್ಲಿ ಇಂದ್ರಾದಿ ಅಷ್ಠದಿಕ್ಪಾಲಕರ ವಿಗ್ರಹಗಳಿವೆ.
ಮಹಾದ್ವಾರದಿಂದ ಒಳಗೆ ಹೋದರೆ ಬಲಭಾಗದಲ್ಲಿ ದಕ್ಷಿಣಾಭಿಮುಖವಾಗಿ ಗಣಪತಿಯ ಸಣ್ಣ ವಿಗ್ರಹವು ಸ್ಥಾಪಿಸಲ್ಪಟ್ಟಿದೆ. ವಿಘ್ನರಾಜನಿಗೆ ನಮಿಸಿ ಕೆಲವು ಕಲ್ಲಿನ ಮೆಟ್ಟಿಲುಗಳನ್ನು ಹತ್ತಿಹೋದರೆ ದೇವಸ್ಥಾನದ ಬಲಿಪೀಠ ಮತ್ತು ಧ್ವಜ ಸ್ಥಂಭ ಕಂಡುಬರುತ್ತದೆ. ಬಲಿಪೀಠದ ಮೇಲೆ ದೇವಿಯ ಪಾದಗಳನ್ನು ರೂಪಿಸಲಾಗಿದೆ. ಇವೆರಡರ ಮುಂಭಾಗದಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ಸಣ್ಣದೊಂದು ನಂದಿ ವಿಗ್ರಹವಿದೆ. ಮಾತೆ ಚಾಮುಂಡಿಯನ್ನು ಅದು ವೀಕ್ಷಿಸುತ್ತಾ ಕುಳಿತಿದೆ. ಧ್ವಜ ಸ್ಥಂಭಕ್ಕೆ ಈಶಾನ್ಯದಲ್ಲಿ ಗೋಡೆಯ ಮೇಲೆ ಆಂಜನೇಯನ ವಿಗ್ರಹವಿದ್ದು ಅದಕ್ಕೂ ನಿತ್ಯ ಪೂಜೆ ಜರುಗುತ್ತದೆ. ಇಲ್ಲಿನ ಪ್ರವೇಶ ದ್ವಾರದಲ್ಲಿ ನಂದಿನಿ ಮತ್ತು ಕಮಲಿನಿ ಎಂಬ ದ್ವಾರಪಾಲಿಕೆಯರ ವಿಗ್ರಹಗಳು ದ್ವಾರದ ಎಡ ಮತ್ತು ಬಲ ಭಾಗದಲ್ಲಿವೆ.
ಗರ್ಭಗುಡಿಗೆ ಮುಂಚೆ ಇರುವ ಅ0ತರಾಳದ ಎಡಭಾಗದಲ್ಲಿ ಮುದ್ದಾದ ಗಣಪತಿ ವಿಗ್ರಹ ಮತ್ತು ಬಲಭಾಗದಲ್ಲಿ ಭೈರವ ದೇವರ ವಿಗ್ರಹಗಳಿವೆ. ಭೈರವ ದೇವರ ಎಡಭಾಗದಲ್ಲಿ ಚಾಮುಂಡಿಯ ಪಂಚಲೋಹದ ಸುಂದರ ಉತ್ಸವ ಮೂರ್ತಿಯಿದೆ. ಗಣಪತಿಯ ಬಲಭಾಗದಲ್ಲಿ ಭಕ್ತನ ದಿರಿಸು ತೊಟ್ಟಿರುವ ಮುಮ್ಮಡಿ ಕೃಷ್ಣರಾಜ ಒಡೆಯರ ಆರು ಅಡಿ ಎತ್ತರದ ಸುಂದರ ಭಕ್ತ ವಿಗ್ರಹ ಕಾಣಬರುತ್ತದೆ. ಮಹಾರಾಜರು ತಮ್ಮ ಮೂವರು ಪತ್ನಿಯರೊಂದಿಗೆ ದೇವಿಗೆ ಕೈಮುಗಿದು ನಿಂತಿದ್ದಾರೆ. ಮಹಾರಾಜರ ಎಡಭಾಗಗಳಲ್ಲಿ ನಿಂತಿರುವವರೆಂದರೆ ರಮಾವಿಲಾಸ, ಲಕ್ಷ್ಮಿವಿಲಾಸ ಮತ್ತು ಕೃಷ್ಣವಿಲಾಸ ಮಹಾರಾಣಿಯರು. ಇವರುಗಳ ಶಿಲಾ ವಿಗ್ರಹಗಳ ಪಾದದ ಬಳಿಯ ಪೀಠದ ಮೇಲೆ ಇವರುಗಳ ಹೆಸರುಗಳನ್ನು ಕೆತ್ತಲಾಗಿದೆ.
ದೇವಾಲಯದ ಅರ್ಚಕರು ತಾಯಿ ಸ್ವರೂಪದ ಶಿಲಾ ಪ್ರತಿಮೆಯನ್ನು ಪ್ರತಿ ದಿನ ಅಲಂಕರಿಸಿ ಪೂಜೆ ಮಾಡುತ್ತಾರೆ. ಯದುಕುಲದ ದೇವತೆಯಾಗಿ ಬೆಳೆದು ಬಂದಿರುವ ಶ್ರೀ ಚಾಮುಂಡೇಶ್ವರಿಗೆ ಮೈಸೂರಿನ ಮಹಾರಾಜರುಗಳು ಹಲವಾರು ಬೆಲೆಬಾಳುವ ಹಾಗೂ ಅಪರೂಪವಾದ ಕಾಣಿಕೆಗಳನ್ನು ಶ್ರಧ್ಧಾಭಕ್ತಿಯಿಂದ ಒಪ್ಪಿಸಿದ್ದಾರೆ. ಈ ಶಕ್ತಿ ದೇವತೆಗೆ ಮಾನವ ಮತ್ತು ಪ್ರಾಣಿ ಬಲಿಯನ್ನು ಹಿಂದೆ ಕೊಡಲಾಗುತ್ತಿತ್ತು. ಆದರೆ 18ನೇ ಶತಮಾನದಲ್ಲಿ ಅದಕ್ಕೆ ಕಡಿವಾಣ ಬಿತ್ತು. ಈಗೇನಿದ್ದರೂ ಫಲಪುಷ್ಪಗಳ ಅರ್ಚನೆ, ಹಣ್ಣು ಹೂವು ಸಮರ್ಪಣೆ ಮಾತ್ರ ಮಾಡಲಾಗುತ್ತದೆ.
ಗರ್ಭಗುಡಿಯ ಮೇಲ್ಭಾಗದಲ್ಲಿ ಇನ್ನೊಂದು ಸಣ್ಣ ಗೋಪುರ ಕಂಡು ಬರುತ್ತದೆ. ದೇವಾಲಯದ ಹೊರಗಿನಿಂದ 'ವಿಮಾನವನ್ನು' ಕಾಣಬಹುದು. ಒಳ ಪಾರ್ಶ್ವದಲ್ಲಿರುವ ಪ್ರಾಕಾರದಲ್ಲಿ ಹಲವು ಸಣ್ಣ ಮೂರ್ತಿಗಳಿದ್ದು ಅಲ್ಲಿಯೂ ಪೂಜೆ ಪುನಸ್ಕಾರಗಳು ಜರುಗುತ್ತವೆ. ಪ್ರಾಕಾರದಲ್ಲಿ ಪ್ರದಕ್ಷಿಣೆ ಮುಗಿಸಿ ದೇವಸ್ಥಾನದಿಂದ ಹೊರಹೋಗುವಾಗ ಶ್ರೀ ಆಂಜನೇಯಸ್ವಾಮಿ ದೇವರ ದರ್ಶನವನ್ನು ಮಾಡಬಹುದಾಗಿದೆ.

REDUCE PLASTICS AND SAVE NATURE

https://youtu.be/dJu9vh73YD4

Monday, July 22, 2019

SAVE NATURE, HEALTHY, WEALTHY & WISE. dgnsgreenworld FAMILY.

ಸದಾಪುಷ್ಪದ ಔಷಧೀಯ ಉಪಯೋಗಗಳು

SAVE NATURE, HEALTHY, WEALTHY & WISE. dgnsgreenworld FAMILY.

ಔಷಧೀಯ ಉಪಯೋಗಗಳು

ಸದಾಪುಷ್ಪವು ೬೬ ಬಗೆಯ ಕ್ಷಾರಪದಾರ್ಥಗಳನ್ನು ಹೊಂದಿದೆ. ಸದಾಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಎಲೆಗಳಲ್ಲಿ ದೊರಕುವ ವಿನ್‍ಕ್ರಿಸ್ಟಿನ್ ಮತ್ತು ವಿನ್‍ಬ್ಲಾಸ್ಟಿನ್‍‍ನನ್ನು ರಕ್ತದ ಕ್ಯಾನ್ಸರ್ನ ನಿವಾರಣೆಯಲ್ಲಿ ಬಳಸುತ್ತಾರೆ. ಮಧುಮೇಹ ರೋಗದ ನಿಯಂತ್ರಕವಾಗಿ ಬಳಸುತ್ತಾರೆ. ಎಳೆ ಮಗುವಿನ ಹೊಟ್ಟೆನೋವು ನಿವಾರಣೆಗೆ ಎಲೆಗಳ ರಸವನ್ನು ಉಪಯೋಗಿಸುತ್ತಾರೆ. ರಕ್ತದ ಒತ್ತಡದ ಸಮಸ್ಯೆಯಲ್ಲೂ ಸದಪುಷ್ಪದ ಕ್ಷಾರವನ್ನು ಬಳಸುತ್ತಾರೆ.


ರಕ್ತದ ಕ್ಯಾನ್ಸರ್ ವ್ಯಾಧಿಯಲ್ಲಿ

ಒಂದು ಹಿಡಿ ಎಲೆಗಳನ್ನು ತಂದು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಚೂರ್ಣ ಅಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಒಂದು ಚೆಂಬು ನೀರಿಗೆ ಹಾಕಿ ಕಾಯಿಸಿ ಆರಿಸಿ ಕುಡಿಯುವುದು. 3ಟೀ ಚಮಚ ದಿವಸಕ್ಕೆ 2ವೇಳೆ ಬೆಳಿಗ್ಗೆ ಮತ್ತು ಸಾಯಂಕಾಲ.     ಇಡೀ ಮಾನವಕೋಟಿಯನ್ನು ರಕ್ತದ ಕ್ಯಾನ್ಸರ್‍ನಿಂದ ಉಳಿಸುವ ಸಾಮಾಥ್ಯ ಈ ಗಿಡ ಕ್ಕಿದೆ ಅಂದರೆ ಅತಿಶಯೋಕ್ತಿಯಾಗಲಾರದು.

ಸಕ್ಕರೆ ಕಾಯಿಲೆಯಲ್ಲಿ

ಈ ಗಿಡದ ನಾಲ್ಕೈದು ಹಸಿರೆಲೆಗಳನ್ನು ತಂದು ಚೆನ್ನಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ತಿನ್ನುವುದು. ಅಥವಾ ಬರಿಹೊಟ್ಟೆಯಲ್ಲಿ ನಿತ್ಯ ಪುಷ್ಟಿ ಹೂಗಳನ್ನು ಅಗಿದು ತಿನ್ನುವುದು. ನಾಲ್ಕು ಬಿಳೀ ಪುಷ್ಪವನ್ನು ಅರ್ಧ ಬಟ್ಟಲು ನೀರಿಗೆ ಹಾಕಿ ಕಾಯಿಸಿ ಕಾಲು ಬಟ್ಟಲು ಕಷಾಯವನ್ನು ತಣ್ಣಗೆ ಮಾಡಿ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸುವುದು.

ಅಧಿಕ ರಕ್ತ ಒತ್ತಡದಲ್ಲಿ

ನಿತ್ಯಪುಷ್ಟಿ ಎಲೆಗಳನು ತಂದು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಳ್ಳುವುದು. ಒಂದು ಟೀ ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು. ತಣ್ಣಗಾದ ಮೇಲೆ 1/8 ಬಟ್ಟಲು ಕಷಾಯವನ್ನು ಸೇವಿಸುವುದು.

ಸುಟ್ಟ ಗಾಯ ಮತ್ತು ಬೊಬ್ಬಗಳಿಗೆ

ನಿತ್ಯಪುಷ್ಟಿಯ ಒಂದು ಹಿಡಿ ಹಸಿ ಎಲೆಗಳನ್ನು ತಂದು ಚೆನ್ನಗಿ ರಸ ತೆಗೆಯುವುದು ಈ ರಸದಲ್ಲಿ ಸ್ವಲ್ಪ ಹಸಿ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಮಡಿ ಗಾಯದ ಮೇಲೆ ಮಂದವಾಗಿ ಲೇಪಿಸುವುದು.

ಬೇಧಿ ಮತ್ತು ರಕ್ತ ಭೇಧಿಯಲ್ಲಿ

10ಗ್ರಾಂ ನಿತ್ಯಪುಷ್ಟೀಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು .ತಣ್ಣಗಾದ ಮೇಲೆ ಈ ಕಷಾಯವನ್ನು ಎರಡು ಭಾಗ ಮಾಡಿ ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಹೀಗೆ 5 ರಿಂದ 7 ದಿವಸ ಉಪಚಾರವನ್ನು ಮುಂದುವರೆಸುವುದು. ಮಲಬದ್ದತೆಯನ್ನು ಸಹ ನಿವಾರಿಸಬಲ್ಲ ಗುಣ ಈ ಮೂಲಿಕೆಗೆ ಇದೆ ಎಂದುತಿಳಿದು ಬಂದಿದೆ.

ಗಾಯಳುಗಳಿಂದ ರಕ್ತಸ್ರಾವ

ಗಾಯ ವಾಸಿಯಾಗಲು ಒಣಗಿದ ನಿತ್ಯಪುಷ್ಟಿ ಎಲೆಯನ್ನು ಗಾಯಗಳ ಮೇಲೆ ಹಾಕುವುದು.ಗಾಯಗಳು ವಾಸಿಯಾಗುವವು

ವಂದನೆಗಳೊಂದಿಗೆ
Dgnsgreenworld

Saturday, July 20, 2019

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ವಿಗ್ರಹದ ಇತಿಹಾಸದ ಬಗ್ಗೆ ವಿವರ ನೋಡಿ

SAVE NATURE, HEALTHY, WEALTHY & WISE. dgnsgreenworld FAMILY.
ಮೈಸೂರು ನಗರದಿಂದ ಸುಮಾರು 8- 10 ಕಿ.ಮೀ. ಸುತ್ತಳತೆಯ ಅಂತರದಲ್ಲಿರುವವರು ಚಾಮುಂಡಿ ಬೆಟ್ಟವನ್ನು ಸುಲಭವಾಗಿ ವೀಕ್ಷಿಸಬಹುದು ಹಾಗೂ ಚಾಮುಂಡಾಂಬೆ ದೇವಿಯು ಈ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ ಸುಮಾರು 3,489 ಅಡಿಗಳ ಎತ್ತರದಲ್ಲಿದ್ದು ಮತ್ತು ಮೈಸೂರುವಿನಿಂದ 13 ಕಿ.ಮೀ ಗಳ ಅಂತರದಲ್ಲಿರುತ್ತದೆ. ಈ ದೇವಿ ದೇವಸ್ಥಾನವನ್ನು ಮಹಾರಾಜರ ಕುಟುಂಬದವರಿಗೆ ಮನೆ ದೇವರಾಗಿತ್ತು ಮತ್ತು ಮಹಿಷಾಸುರನನ್ನು ಸಂಹರಿಸಿದ ಕಾರಣದಿಂದ "ಮಹಿಷಾಸುರಮರ್ದಿನಿ" ಎಂಬ ನಾಮಾಂಕಿತದಲ್ಲಿ ಮನೆ ದೇವಿಯಂತೆ ನಿರ್ಮಿಸಲಾಗಿತ್ತು. ಚಾಮುಂಡೇಶ್ವರಿ ದೇವಿಯನ್ನು ದುರ್ಗಾ ದೇವಿ ಅವರಾವತಾರವೆಂದು, ಕಾಳೀದೇವಿ ಮತ್ತು ಚಾಮುಂಡಾಂಬೆ ಎಂಬ ಹೆಸರುಗಳಿಂದ ವರ್ಣಿಸಲಾಗುತ್ತಿದೆ. ಚಾಮುಂಡೇಶ್ವರಿ ದೇವಸ್ಥಾನವನ್ನು ಬಹುಪಾಲು ಮಹಾರಾಜರ ಮನೆದೇವಿಯಂತೆ ನಿರ್ವಹಣೆ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿರುತ್ತದೆ. 1659 ರಲ್ಲಿ ದೊಡ್ಡ ದೇವರಾಜ ಒಡೆಯರ್ ಇವರ ಅವಧಿಯಲ್ಲಿ 1000 ಮೆಟ್ಟಿಲುಗಳನ್ನು ಮತ್ತು ಈಶ್ವರನಿಗೆ ಬಹುಪ್ರಿಯವಾದ ನಂದಿಯ ಬಹುದೊಡ್ಡ ನಂದಿ ವಿಗ್ರಹವನ್ನು ನಿರ್ಮಿಸಲಾಯಿತು. ಈ ವಿಗ್ರಹವು 16 ಅಡಿ (4.8 ಮೀಟರ್) ಮುಂಭಾಗ ಮತ್ತು 25 ಅಡಿ (7.5 ಮೀ) ಉದ್ದವಿರುತ್ತದೆ. ಈ ನಂದಿ ವಿಗ್ರಹಕ್ಕೆ ಬಹು ದೊಡ್ಡ ಮತ್ತು ಆಕರ್ಷಣೆಯಿಂದ ಕೂಡಿದ ಘಂಟೆಗಳನ್ನು ಇದರ ಕುತ್ತಿಗೆ ಭಾಗದಲ್ಲಿ ನಿರ್ಮಿಸಲಗಿದೆ. ನಂದಿ ಮತ್ತು ದೇವಸ್ಥಾನವು ಪಕ್ಕದಲ್ಲಿಯೇ ಇದ್ದು ಚಾಮುಂಡಿ ಬೆಟ್ಟಕ್ಕೆ ಹತ್ತುವ 700 ನೇ ಮೆಟ್ಟಿಲಿನ ಬಳಿಯೇ ನಿರ್ಮಿಸಲಾಗಿದೆ. ಕೃಷ್ಣದೇವರಾಜ ಒಡೆಯರ್ - III ಈ ದೇವಸ್ಥಾನದ 3 ಮಹಡಿಯ ಗೋಪುರವನ್ನು ಪ್ರವೇಶದ್ವಾರದಲ್ಲಿ ಚಿನ್ನದ ಲೇಪನಗಳಿಂದ ಇವರ ಮೂವರು ರಾಣಿಯರ ವಿಗ್ರಹಗಳೊಂದಿಗೆ 1827 ರಲ್ಲಿ ನಿರ್ಮಿಸಿರುತ್ತಾರೆ. ಇವರ ಅವಧಿಯಲ್ಲಿಯೇ ಉತ್ಸವಗಳನ್ನು ಮತ್ತು ಸಿಂಹವಾಹನ ಗಳನ್ನು 1843 ರಂದಲೂ ನಡೆಸುತ್ತಾ ಬಂದಿರುತ್ತದೆ. ಇಲ್ಲಿ ಲಕ್ಷ್ಮಿ ನಾರಾಯಣ ಸ್ವಾಮಿ ಮತ್ತು ಮಹಾಬಲೇಶ್ವರ ಸ್ವಾಮಿ ಎಂಬ ಎರಡು ದೇವಸ್ಥಾನಗಳನ್ನೂ ಸಹ ಶಿವನ ಲಿಂಗಾಕಾರವಾಗಿ ನಿರ್ಮಿಸಲಾಗಿದೆ. ಇದನ್ನು 1128 ಕಿ.ಶ.ದಿಂದಲೂ ಹೊಯ್ಸಳ ಆಳ್ವಿಕೆಯಲ್ಲಿ ಚತುರೋಕ್ತಿಯಲ್ಲಿ ಈ ಆವರಣವನ್ನು ಮಭಲಾ ಅಥವಾ ಮಬ್ಬಲಾ ತೀರ್ಥ ಮತ್ತು ಹೊಯ್ಸಳ ರಾಜನಾದ ವಿಷ್ಣುವರ್ದನ ರ ಸೇವಾರ್ಥವಾಗಿ ನಿರ್ಮಿತವಾಗಿರುವುದು ಕಂಡು ಬರುತ್ತದೆ.
ವಂದನೆಗಳೊಂದಿಗೆ
dgnsgreenworld

ನೊಣ ಕುಳಿತ ಆಹಾರ ತಿನ್ನಬಾರದೆಂದು ಯಾಕೆ ಹೇಳುತ್ತಾರೆ ಗೊತ್ತಾ? ಈ ಕೆಳಗಿನ ವಿಡಿಯೋ ನೋಡಿ

SAVE NATURE, HEALTHY, WEALTHY & WISE. dgnsgreenworld FAMILY.
ನೊಣ ಕುಳಿತ ಆಹಾರ ತಿನ್ನಬಾರದೆಂದು ಯಾಕೆ ಹೇಳುತ್ತಾರೆ ಗೊತ್ತಾ? ಈ  ವಿಡಿಯೋ  ನೋಡಿ
ಒಂದು ನೊಣ  ನಾವು  ತಿನ್ನುವ  ಆಹಾರದ  ಮೇಲೆ ಕುಳಿತಾಗ  ಆಗುವ  ಸನ್ನಿವೇಶ  ಇಲೆಕ್ಟ್ರಾನಿಕ್  ಮೈಕ್ರೋಸ್ಕೋಪ್ ಕ್ಯಾಮೆರಾ ಮುಖಾಂತರ  ಸೆರೆಹಿಡಿದದ್ದು  .
 ವಂದನೆಗಳೊಂದಿಗೆ
dgnsgreenworld

Thursday, July 18, 2019

Bramhi ( Bacopa Monnieri ) Health Benefits

SAVE NATURE, HEALTHY, WEALTHY & WISE. dgnsgreenworld FAMILY.


Brahmi is the small creeping herb with the numerous branchesLeaves are formed in pairs along the stems. Small- tubular, five petaled flowers are white- purple in colour. Its stem is soft, succulent, and hairy with the glands. Its ability to grow in water makes it a popular aquarium plant. It can even grow in slightly brackish conditions.

Medicinal uses :

It is used for curing problems on study, poor memory and concentration, work-related mental fatigue.
For the treatment of bronchitis, chronic cough, asthma, hoarseness, arthritis, rheumatism, backache, fluid retention, blood cleanser, chronic skin conditions, constipation, hair loss, fevers, digestive problems, depression, mental and physical fatigue and many more.
It is used to treat all sorts of skin problems like eczema, psoriasis, abscess and ulceration.
It stimulates the growth of skin, hair and nails. Brahmi posses anticancer activity.
It is taken to get relief from stress and anxiety.
According to the Ayurveda Brahmi has antioxidant properties. It has been reported to reduce oxidation of fats in the blood stream, which is the risk factor for cardiovascular diseases. Brahmi is considered as the main rejuvenating herb for the nerve and brain cells.

Wednesday, July 17, 2019

ಅತ್ಯುತ್ತಮ ಆರೋಗ್ಯಕ್ಕಾಗಿ ಬಿಲ್ವಪತ್ರೆ ಮರ

SAVE NATURE, HEALTHY, WEALTHY & WISE. dgnsgreenworld FAMILY.


ಬಿಲ್ವಪತ್ರೆಯು ಶಿವನಿಗೆ ಪ್ರಿಯವಾದುದು ಮತ್ತು ಶಿವಪೂಜೆಗೆ ಅತ್ಯಗತ್ಯವಾದದ್ದು. ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಬಿಲ್ವ ಎಂಬ ಪದಕ್ಕೆ ಎಲ್ಲ ನೋವನ್ನು ನಿವಾರಿಸುವ ಎಂಬವೂ ಅರ್ಥವಿದೆ. ಅದರಂತೆಯೇ ಈ ಬಿಲ್ವಪತ್ರೆಯಿಂದ ಆಗುವ ಉಪಯೋಗಗಳು ಅನೇಕ. ಬಿಲ್ವವೃಕ್ಷದ ವಿವಿಧ ಭಾಗಗಳು ವಿವಿಧ ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲಿ ನಾವು ಬಿಲ್ವಪತ್ರೆಯ ಗುಣಗಳನ್ನು ತಿಳಿಯೋಣ.
ಬಿಲ್ವದ ಎಲೆಯಲ್ಲಿನ ಲಾಕ್ಸೇಟಿವ್ ಅಂಶವು ಮಧುಮೇಹ ನಿಯಂತ್ರಣಕ್ಕೆ ಬಹು ಉಪಕಾರಿಯಾಗಿದೆ. ಬಿಲ್ವಪತ್ರೆಯು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸುವುದರಿಂದ ಮಧುಮೇಹಿಗಳು ದಿನಕ್ಕೊಂದು ಎಲೆಯನ್ನು ಸೇವಿಸಬಹುದು. ಬಿಲ್ವಪತ್ರೆಯಲ್ಲಿನ ಒಳ್ಳೆಯ ಅಂಶವು ಕಾಲರಾ ಹಾಗೂ ಭೇದಿಯನ್ನು ಗುಣಪಡಿಸುವುದರಲ್ಲಿ ಸಹಾಯಕಾರಿ. ಅತಿಸಾರ, ಜ್ವರ, ಮೂತ್ರಸಂಬಂಧಿತ ರೋಗಗಳಿಗೆ ಬಿಲ್ವಪತ್ರೆ ಸಿದ್ಧೌಷಧ. ಈ ಸಮಸ್ಯೆಗಳಿಂದ ಬಳಲುತ್ತಿರುವವರು ನಿಯತವಾಗಿ ಬಿಲ್ವದ ಎಲೆಯ ಕಷಾಯಸೇವನೆ ಮಾಡಬೇಕು. ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಬಿಲ್ವಪತ್ರೆ ಉತ್ತಮ ಔಷಧ.ಬಿಲ್ವಪತ್ರೆಯು ಕೂದಲಿನ ಆರೋಗ್ಯಕ್ಕೂ ಸಹಾಯಕಾರಿ. ತಲೆಸ್ನಾನವನ್ನು ಮಾಡುವ ಅರ್ಧಗಂಟೆಯ ಮೊದಲು ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಬೇಕು. ಇದರಿಂದ ತಲೆಹೊಟ್ಟು ಮತ್ತು ಅಕಾಲ ನರೆಕೂದಲು ನಿವಾರಣೆಯಾಗುತ್ತದೆ. ದಿನಕ್ಕೆ ಎರಡರಿಂದ ಮೂರು ಚಮಚ ಬಿಲ್ವಪತ್ರೆಯ ರಸ ಸೇವಿಸುವುದರಿಂದ ನಿಶ್ಶಕ್ತಿ ದೂರವಾಗುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಬಿಲ್ವಪತ್ರೆಯ ಜೊತೆ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಮಲಬದ್ಧತೆಯು ನಿವಾರಣೆಯಾಗುತ್ತದೆ. ಬಿಲ್ವಪತ್ರೆಯಲ್ಲಿನ ಆಂಟಿ ಫಂಗಲ್ ಮತ್ತು ಆಂಟಿ ವೈರಲ್ ಗುಣಗಳು ದೇಹದಲ್ಲಾಗುವ ಅನೇಕ ಇನ್​ಫೆಕ್ಷನ್​ಗಳನ್ನು ಗುಣಪಡಿಸುವುದರಲ್ಲಿ ಸಹಕಾರಿಯಾಗಿದೆ.
ವಂದನೆಗಳೊಂದಿಗೆ dgnsgreenworld

Saturday, July 13, 2019

ದೇಹದ ತೂಕ ಹೆಚ್ಚಳಕ್ಕೆ ಹಾಗೂ ಕಣ್ಣಿನ ಆರೋಗ್ಯಕ್ಕೆ ಸಿಹಿಗುಂಬಳ ಅತ್ಯುತ್ತಮ

SAVE NATURE, HEALTHY, WEALTHY & WISE. dgnsgreenworld FAMILY.
ದೇಹ ತೂಕ ಹೆಚ್ಚಳಕ್ಕೆ, ಕಣ್ಣಿನ ಆರೋಗ್ಯಕ್ಕೆ ಸಿಹಿಗುಂಬಳ ಅತ್ಯುತ್ತಮ.

pumpkin
1. ಈ ತರಕಾರಿಯಲ್ಲಿ ಎ ಜೀವಸತ್ವ ಹೇರಳವಾಗಿರುವುದರಿಂದ ಕಣ್ಣುಗಳ ದೃಷ್ಟಿ ತೀಕ್ಷ್ಣ ಗೊಳಿಸುತ್ತದೆ


2. ಮೂಲವ್ಯಾಧಿ ಪೀಡಿತರಿಗೂ ಈ ತರಕಾರಿಯ ಸೇವನೆ ತುಂಬಾ ಒಳ್ಳೆಯದು.

3. ಇದರ ಬೀಜವನ್ನು ನುಣ್ಣಗೆ ಅರೆದು ಹಸುವಿನ ಹಾಲು ಮತ್ತು ಜೇನುತುಪ್ಪಗಳೊಂದಿಗೆ ಬೆರೆಸಿ ಸೇವಿಸುತ್ತಿದ್ದರೆ ಶರೀರದ ತೂಕ ಹೆಚ್ಚುತ್ತದೆ.
4. ಸಿಹಿಗುಂಬಳದಿಂದ ಮಾಡಿದ ಆಹಾರಗಳ ಸೇವನೆಯಿಂದ ಜ್ಞಾಪಕಶಕ್ತಿಯೂ ಉತ್ತಮಗೊಳ್ಳುತ್ತದೆ.

5. ಇದರ ಬೀಜಗಳಲ್ಲಿ ಜಂತುನಾಶಕ ಗುಣಗಳಿವೆ. ಸುಟ್ಟ ಗಾಯ, ಊತ ಮುಂತಾದ ಸಮಸ್ಯೆಗಳಿಗೆ ಇದರ ಎಲೆಗಳನ್ನು ಬಿಸಿ ಮಾಡಿ ಹೊದಿಸಿ ಕಟ್ಟಿದರೆ ಗಾಯ ಉಪಶಮನವಾಗುತ್ತದೆ.

6. ಸಿಹಿಗುಂಬಳ ಪೌಷ್ಟಿಕ ತರಕಾರಿ. ಅದರಲ್ಲಿ ಅಧಿಕ ಪ್ರಮಾಣದ ಶರ್ಕರ ಪಿಷ್ಟ, ಪ್ರೋಟೀನ್‌, ಖನಿಜಾಂಶ ಹಾಗೂ ವಿವಿಧ ಜೀವಸತ್ವಗಳು ಇರುತ್ತವೆ. ಇದರ ಎಲೆ ಮತ್ತು ಹೂಗಳೂ ಪೌಷ್ಟಿಕವಾಗಿರುತ್ತವೆ.

7. 100 ಗ್ರಾಂ ಸಿಹಿಗುಂಬಳದಲ್ಲಿ ತೇವಾಂಶ 92.8 ಗ್ರಾಂ, ಶರ್ಕರ ಪಿಷ್ಟ-4.6 ಗ್ರಾಂ, ಪ್ರೋಟೀನ್‌-1.4 ಗ್ರಾಂ, ಜಿಡ್ಡು-0.1 ಗ್ರಾಂ, ಖನಿಜಾಂಶ 0.6 ಗ್ರಾಂ ಇವೆ.

8. ಇದೇ ರೀತಿ ರಂಜಕ 30 ಮಿ.ಗ್ರಾಂ, ಕ್ಯಾಲ್ಷಿಯಂ 10 ಮಿ.ಗ್ರಾಂ, ಕಬ್ಬಿಣ-2.7 ಮಿ.ಗ್ರಾಂ ಇವೆ. 
ವಂದನೆಗಳೊಂದಿಗೆ
dgnsgreenworld

Friday, July 12, 2019

ಬಹುಪಯೋಗಿ ಬೇವಿನಸೊಪ್ಪು

SAVE NATURE, HEALTHY, WEALTHY & WISE. dgnsgreenworld FAMILY.
ಬಹುಪಯೋಗಿ ಬೇವಿನ ಸೊಪ್ಪು

ಒಂದು ಹಿಡಿ ಬೇವಿನ ಸೊಪ್ಪನ್ನು ಅರ್ಧ ಲೀಟರ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಆರಿದ ಮೇಲೆ ಸೋಸಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಹತ್ತಿಯಿಂದ ಈ ರಸವನ್ನು ಅದ್ದಿ ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕರಿ ಮಚ್ಚೆ ಮಾಯಾವಾಗುತ್ತದೆ.

1. ಬೇವಿನ ಮರ ಮನೆಯ ಬಳಿ ಇದ್ದರೆ ಬೇರೆ ಸೌಂದರ್ಯ ಸಾಧನೆಗಳಿಗೆ ಕೆಲಸ ಇರದು.

2. ಇದರ ಎಣ್ಣೆ ಔಷಧಿಯ ರೂಪದಲ್ಲಿ ಮತ್ತು ಸೌಂದರ್ಯ ವರ್ಧನೆ ವಸ್ತುವಾಗಿ ಹೆಚ್ಚು ಪ್ರಯೋಜನಕಾರಿ.
3. ಇದರಿಂದ ಚರ್ಮದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

4. ಮುಖದ ಮೇಲಿನ ಕಪ್ಪು ಕಲೆ, ಮೊಡವೆಗಳಿಗೆ ಬೇವಿನ ಸೊಪ್ಪಿನಿಂದ ಪರಿಹಾರ ಸಿಗುತ್ತದೆ.

5. ಒಂದು ಹಿಡಿ ಬೇವಿನ ಸೊಪ್ಪನ್ನು ಅರ್ಧ ಲೀಟರ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಆರಿದ ಮೇಲೆ ಸೋಸಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಹತ್ತಿಯಿಂದ ಈ ರಸವನ್ನು ಅದ್ದಿ ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕರಿ ಮಚ್ಚೆ ಮಾಯಾವಾಗುತ್ತದೆ.

6. ಚರ್ಮ ಶುಷ್ಕಗೊಂಡು ನವೆಯಾದರೆ ಬೇವಿನ ಕಷಾಯವನ್ನು ಸ್ನಾನದ ನೀರಿನಲ್ಲಿ ಸೇರಿಸಿ ಸ್ನಾನ ಮಾಡಿದರೆ ಒಳ್ಳೆಯದು.

7. ಬಿಸಿಲಿಗೆ ಮುಖ ಕಳೆಗುಂದಿದರೆ ಬೇವಿನ ಎಲೆ ಮತ್ತು ಗುಲಾಬಿ ದಳಗಳನ್ನು ಒಣಗಿಸಿ ಪುಡಿ ಮಾಡಿ. ಈ ಎರಡು ಚಮಚ ಪುಡಿಗೆ ಒಂದು ಚಮಚ ಮೊಸರು ಬೆರೆಸಿ ಮಿಕ್ಸ್‌ ಮಾಡಿ ಜೊತೆಗೆ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ಮುಖವನ್ನು ತಣ್ಣೀರಿನಲ್ಲಿ ತೊಳೆಯಿರಿ.

8. ಮುಖದಲ್ಲಿ ಜಿಡ್ಡಿದ್ದರೆ ಬೇವಿನ ಎಲೆಗಳ ಪುಡಿ, ಗಂಧದ ಪುಡಿ ಮತ್ತು ಗುಲಾಬಿ ದಳದ ಪುಡಿಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್‌ ಮಾಡಿ. ಒಂದು ಚಮಚ ಪುಡಿಗೆ ನಾಲ್ಕು ಹನಿ ಬೇವಿನ ಎಣ್ಣೆ, ಸ್ವಲ್ಪ ಜೇನು, ನಿಂಬೆ ರಸ ಹಾಕಿ ಕಲಸಿ ಮುಖಕ್ಕೆ ಹಚ್ಚಿ. ಇದು ಒಣಗಿದ ಮೇಲೆ ಬೆಚ್ಚನೆಯ ನೀರಿನಿಂದ ಮುಖ ತೊಳೆಯಿರಿ.  
 ವಂದನೆಗಳೊಂದಿಗೆ, dgnsgreenworld

KANER (YellowOleander) health benefits

SAVE NATURE, HEALTHY, WEALTHY & WISE. dgnsgreenworld FAMILY.   

Picture of Kaner (Yellow Oleander):
This is an large ornamental flowering shrub with beautiful sweet-smelling yellow flowers and glossy deep green leaves which have a waxy coating that reduces water loss. It is found in different variety like pink variety (Nerium oleander) and the related Yellow Oleander (sweet-smelling yellow, peach and white flowers and bright green clusters of thin long leaves) .Oleander is an easy growing plant in most conditions, especially in dry warm climates.It is very popular in India.

Medicinal uses :

Oleander has been used in the treatment of cardiac illness, asthma, diabetes, corns, scabies, cancer, and epilepsy.

Caution : All parts of the plant are toxic if eaten, particularly the fruit and seeds. In fact, oleander is reportedly a favorite suicide agent in Sri Lanka, where oleander poisonings exceed 150 per 100,000 each year.

There is no clinical evidence to support specific doses of oleander. Extreme caution should be used because of its acute cardiotoxicity.

NO MATTER WHAT YOU LOOK LIKE

SAVE NATURE, HEALTHY, WEALTHY & WISE. dgnsgreenworld FAMILY.

WE MUST SAVE TREES AND FORESTS

SAVE NATURE, HEALTHY, WEALTHY & WISE. dgnsgreenworld FAMILY.

Wednesday, July 10, 2019

HUMAN AND ANIMALS GOOD RELATIONSHIP



SAVE NATURE, HEALTHY, WEALTHY & WISE. GREEN WORLD FAMILY

REDUCE PLASTICS USE BANANA LEAVES IN SUPERMARKET VERY GOOD INFORMATION



SAVE NATURE, HEALTHY, WEALTHY & WISE. GREEN WORLD FAMILY

ANIMALS RELATIONSHIP



SAVE NATURE, HEALTHY, WEALTHY & WISE. GREEN WORLD FAMILY

11 IMPRESSIVE BENEFITS OF TOMATOES

SAVE NATURE, HEALTHY, WEALTHY & WISE. GREEN WORLD FAMILY
11 Impressive Benefits Of Tomatoes

The health benefits of tomatoes include eye care, good stomach health, and a reduced blood pressure. They provide relief from diabetes, skin problems, and urinary tract infections too. Furthermore, they improve digestion, stimulate blood circulation, reduce cholesterol levels, improve fluid balance, protect the kidneys, detoxify the body, prevent premature aging, and reduce inflammation. Tomatoes consist of a large number of antioxidants may help fight different types of cancer. They are also a rich source of vitamins and minerals and exert a protective effect against cardiovascular diseases.

ಚರ್ಮದ ಸಮಸ್ಯೆ ನಿವಾರಿಸುವಲ್ಲಿ ತೊಂಡೆಕಾಯಿ ಅತಿ ಉಪಯುಕ್ತ

ಮನೆ ಮದ್ದು: ಚರ್ಮದ ಸಮಸ್ಯೆ ನಿವಾರಿಸುವ ತೊಂಡೆಕಾಯಿ

ಮನೆ ಮದ್ದು ಚರ್ಮದ ಸಮಸ್ಯೆ ನಿವಾರಿಸುವ ತೊಂಡೆಕಾಯಿ - ದೇಹದಲ್ಲಿ ಹುಳು ಕಚ್ಚಿ ಗಾಯ , ಗಂದೆ ಅಥವಾ ತುರಿಕೆಯಾಗಿದ್ದರೆ, ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ಹಚ್ಚಿದರೆ ಗಾಯ, ಗಂದೆ, ...
thonde
ಮನೆ ಮದ್ದು

ಚರ್ಮದ ಸಮಸ್ಯೆ ನಿವಾರಿಸುವ ತೊಂಡೆಕಾಯಿ

- ದೇಹದಲ್ಲಿ ಹುಳು ಕಚ್ಚಿ ಗಾಯ , ಗಂದೆ ಅಥವಾ ತುರಿಕೆಯಾಗಿದ್ದರೆ, ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ಹಚ್ಚಿದರೆ ಗಾಯ, ಗಂದೆ, ತುರಿಕೆ ಕಡಿಮೆಯಾಗುತ್ತದೆ .

-ತೊಂಡೆಕಾಯಿ ಎಲೆಯ 5 ಚಮಚ ರಸಕ್ಕೆ 1 ಲೋಟ ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿಸಿ. ನಂತರ ಸೇವಿಸಿದರೆ ದೇಹದ ಉಷ್ಣತೆ ಮತ್ತು ಕಣ್ಣುರಿ ಕಡಿಮೆಯಾಗುತ್ತದೆ.

- ತೊಂಡೆಕಾಯಿಯ ಹಸಿ ಹಣ್ಣನ್ನು ದಿನಕ್ಕೆ 2 ರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದುವಾಗುತ್ತದೆ ಹಾಗೂ ಮಧುಮೇಹ ಗುಣವಾಗುತ್ತದೆ.

-ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿದರೆ ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.

-ಅತಿಯಾಗಿ ಭೇದಿಯಾಗುತ್ತಿದ್ದರೆ 2 ಚಮಚ ತೊಂಡೆಕಾಯಿ ಎಲೆಯ ರಸವನ್ನು ಅರ್ಧ ಬಟ್ಟಲು ಮೊಸರಿನ ಜತೆ ದಿನಕ್ಕೆ 2 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ.

-ಎಳೆಯ ತೊಂಡೆ ಹಣ್ಣನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
 dgnsgreenworld
ವಂದನೆಗಳೊಂದಿಗೆ

ಆರೋಗ್ಯದ ಸಮಸ್ಯೆಗೆ ಮುತ್ತುಗದ ಹೂವು ಅತ್ಯುತ್ತಮ ಔಷಧ

ಐದರಿಂದ ಎಂಟು ಮುತ್ತಗದ ಹೂವುಗಳನ್ನು ತಣ್ಣೀರಿನಲ್ಲಿ ರಾತ್ರಿ ಇಡೀ ನೆನೆಸಿ, ಬೆಳಗ್ಗೆ ಸೋಸಿ, ಆ ನೀರಿಗೆ ಕಲ್ಲು ಸಕ್ಕರೆ ಬೆರೆಸಿ ಕುಡಿದರೆ ಮೂಗು ಸೋರುವಿಕೆ ಮತ್ತು ಗುಣವಾಗುತ್ತವೆ.
muttuga
ಆರೋಗ್ಯ ಸಮಸ್ಯೆಗೆ ಮುತ್ತಗ ಬೆಸ್ಟ್‌

-ಐದರಿಂದ ಎಂಟು ಮುತ್ತಗದ ಹೂವುಗಳನ್ನು ತಣ್ಣೀರಿನಲ್ಲಿ ರಾತ್ರಿ ಇಡೀ ನೆನೆಸಿ, ಬೆಳಗ್ಗೆ ಸೋಸಿ, ಆ ನೀರಿಗೆ ಕಲ್ಲು ಸಕ್ಕರೆ ಬೆರೆಸಿ ಕುಡಿದರೆ ಮೂಗು ಸೋರುವಿಕೆ ಮತ್ತು ಗುಣವಾಗುತ್ತವೆ.

-ಹೊಟ್ಟೆ ಹುಳು ಹೋಗಲಾಡಿಸಲು ಮುತ್ತಗದ ಬೀಜದ ಪುಡಿಯನ್ನು ನೀರಲ್ಲಿ ಕಲಸಿ ಕುಡಿಯಬೇಕು.

-ಮುತ್ತಗದ ಎಲೆಯ ಕಷಾಯ ಕುಡಿದರೆ ಹೊಟ್ಟೆ ಉಬ್ಬರ, ಗ್ಯಾಸ್‌ ಮತ್ತು ಹೊಟ್ಟೆ ನೋವು ಕಡಿಮೆಯಾಗುತ್ತವೆ.

-ಪೈಲ್ಸ್‌ ಸಮಸ್ಯೆಯಿದ್ದರೆ ಮುತ್ತಗದ ಎಲೆಗಳನ್ನು ತುಪ್ಪದಲ್ಲಿ ಹುರಿದು ಮೊಸರಿನ ಕೆನೆ ಜೊತೆ ಸೇವಿಸಿದರೆ ಉತ್ತಮ ಪರಿಣಾಮ ಬೀರುವುದು.

-ಮಂಡಿ ನೋವಿದ್ದರೆ ಮುತ್ತಗದ ಬೀಜದ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಮಂಡಿಗಳ ಮೇಲೆ ಪ್ಯಾಕ್‌ ಮಾಡಿದರೆ ನೋವು ಕಡಿಮೆಯಾಗುತ್ತದೆ.

-ದೇಹದ ಯಾವುದೇ ಭಾಗದಲ್ಲಿ ಊತವಿದ್ದರೆ ಮುತ್ತಗದ ಹೂವಿನ ಮಿಶ್ರಣ ಲೇಪಿಸಿದರೆ ಊತ ಕಡಿಮೆಯಾಗುತ್ತದೆ.

-ಮುತ್ತಗದ ಬೀಜದ ಪುಡಿಗೆ ನಿಂಬೆ ರಸ ಕಲಸಿ ಸ್ಕಿನ್‌ ಅಲರ್ಜಿಗೆ ಲೇಪಿಸಿದೆ ತುರಿಕೆ, ಕಡಿತ ನಿವಾರಣೆಯಾಗುತ್ತವೆ.

-ತಲೆಕೂದಲು ಹೆಚ್ಚಿಸಲು ಹಾಗೂ ದೇಹದ ಶಕ್ತಿ ಹೆಚ್ಚಿಸಲು ಬೆಟ್ಟದ ನೆಲ್ಲಿಕಾಯಿ ಪುಡಿ, ತುಪ್ಪ, ಸಕ್ಕರೆ ಮತ್ತು ಮುತ್ತಗದ ಬೀಜದ ಪುಡಿಯನ್ನು ಸಮಪ್ರಮಾಣದಲ್ಲಿ ಕಲಸಿ ರಾತ್ರಿ ಮಲಗುವ ಮುನ್ನ ಸೇವಿಸಿ.

-ಮುತ್ತಗದ ಬೀಜದ ಕಷಾಯವನ್ನು ಆಡಿನ ಹಾಲಿನ ಜೊತೆ ಊಟದ ನಂತರ ಕುಡಿದರೆ ಬೇಧಿ ನಿಲ್ಲುತ್ತದೆ.

-ಸರಿಯಾಗಿ ಮೂತ್ರ ವಿಸರ್ಜನೆ ಆಗದೆ ನೋವಿದ್ದರೆ ಮುತ್ತಗದ ಹೂವಿನ ಕಷಾಯಕ್ಕೆ ಸೈಂಧವ ಉಪ್ಪು ಸೇರಿಸಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಆರೋಗ್ಯ ಸಮಸ್ಯೆಗೆ ಮುತ್ತುಗದ ಹೂವು ಬಾಳ ಅತ್ಯುತ್ತಮ

Tuesday, July 9, 2019

ಸೊಪ್ಪುಗಳನ್ನು ಬಳಸೋಣ, ಆರೋಗ್ಯವನ್ನು ಕಾಪಾಡಿಕೊಳ್ಳೋಣ, ದೇಶದ ಬೆನ್ನೆಲುಬಾದ ರೈತರು ದೇಶದ ಆಸ್ತಿ

*ಸೊಪ್ಪು...

ಮುದ್ದೆ ಬಸ್ಸಾರಿಗೆ ಹರಿವೇ ಚಿಲಕರಿವೆ ಸೊಪ್ಪು...
ಬಾಯಿ ಹುಣ್ಣಿಗೆ ಬಸಳೇ ಸೊಪ್ಪು...
ಮಧುಮೇಹಿಗಳಿಗೊಳಿತು ಮೆಂತೆ ಸೊಪ್ಪು

ತಂಪಾಗಲು ಬಳಸಿ ದಂಟಿನ‌‌ ಸೊಪ್ಪು..
ಅಪರೂಪಕೆ ಬಳಸಿ ಗೋಣಿ‌ ಸೊಪ್ಪು
ಕೆಮ್ಮು ಶೀತ ನೆಗಡಿಗೆ ಗಾಣಿಕೆ ಸೊಪ್ಪು...
ಉಪ್ಪು ಸಾರಿಗೆ ಬಳಸಿ ಕೀರೆ ಸೊಪ್ಪು...
ಬೆರಕೆ ಮಾಡಿ ಬಳಸಲು ಸೀಗೆ ಸೊಪ್ಪು...
ಕಣ್ಣಿಗೆ ಒಳ್ಳೇದು ಒನಗೊನ್ನೇ ಸೊಪ್ಪ...
ಕರುಳಿಗೆ ಒಳ್ಳೇದು ಕೆಸವೇ ಸೊಪ್ಪು...
ಕಾಮಾಲೆಗೆ ಮದ್ದು ಹಸಿರು ಸೊಪ್ಪು...
ಎಲ್ಲಾ ಜ್ವರಕ್ಕೆ ಮದ್ದು ಪರಂಗಿ ಸೊಪ್ಪು...
ಚೆಂದ ಕಾಣಲು ತಿನ್ನಿ ಚಕೋತ ಸೊಪ್ಪು...
ಘಮ ಘಮ ಅಡುಗೆಗೆ ಪುದೀನ ಸೊಪ್ಪು...
ಮಸೊಪ್ಪಿಗೆ ಚೆನ್ನ ಕುಂಬಳ ಸೊಪ್ಪು...
ಸರ್ವ ರೋಗಗಳಿಗೂ
ಜಾಗಡಿ ಸೊಪ್ಪು..
ವಡೆ ಪಕೊಡಕೆ ಸಬ್ಬಕ್ಕಿ ಸೊಪ್ಪು...

ಒಗ್ಗರಣೆಗೆ ಬೇಕು ಕರಿಬೇವಿನ‌ ಸೊಪ್ಪು
ನೆನಪಿನ‌ ಶಕ್ತಿ ಹೆಚ್ಚಲು ಸರಸ್ವತಿ ಸೊಪ್ಪು
ಪಚನವಾಗಲು ಸಬ್ಬಸಿಗೆ ಸೊಪ್ಪು

ನಮ್ಮಜ್ಜಿ‌ ಇಷ್ಟದ ಕನ್ನೇ ಸೊಪ್ಪು..
ಬೆನ್ನೆಲುಬು ಕಾಯಲು ಅಣ್ಣೆ ಸೊಪ್ಪು...
ನನ್ಮಗಳ‌ ಇಷ್ಟದ ಪಾಲಕ್ ಸೊಪ್ಪು
ನನ್ನಾಕೆ ಇಷ್ಟದ ಒಂದೆಲಗದ ಸೊಪ್ಪು

ತುಸುವೇ ಹುಳಿಯಾಗಿರುವ ಪುಂಡಿ ಸೊಪ್ಪು
ಮಲಬದ್ಧತೆಗೆ ಒಳಿತಂತೆ ಆಕ್ರಿಕಿ ಸೊಪ್ಪು
ಬಹುಸೊಪ್ಪುಗಳನಾಕಿ ಮಾಡುವ ಹುಣ್ಷೆಪ್ಪು

ಪಿಜ್ಜಾ ಬರ್ಗರಿಗೆ ಲೆಟ್ಯೂಸ್ ಸೊಪ್ಪು
ಪರದೇಸಿಗಳಿಷ್ಟ ಪಾರ್ಸ್ಲಿ ಸೊಪ್ಪು
ಮತ್ತೆ ಕೆಲವರಿಗಿಷ್ಟ ಸೆಲೆರಿ ಸೊಪ್ಪು
ಲವಲವಿಕೆಗೆ ಒಳ್ಳೇದು ಲೀಕ್ಸ್ ಸೊಪ್ಪು...
ಪಲ್ಯಕೆ ಇರಲಿ ಈರುಳ್ಳಿ ಸೊಪ್ಪು,
ಕಬ್ಬಿಣದಂಶ ಹೆಚ್ವಿರುವ ನುಗ್ಗೇ ಸೊಪ್ಪು
"ಸಿ" ಜೀವಸತ್ವ ಹೆಚ್ಚಿರುವ ಹುಳಿ ಸೊಪ್ಪು
ನಾರಿನಂಶಕೆ ಬಳಸಿ ಬಗೆಬಗೆಯ ಸೊಪ್ಪು
ಗೊಜ್ಜಿಗೆ ಬೇಕೇ ಬೇಕು ಗೋಂಗುರು ಸೊಪ್ಪು..
ಹುಡುಕಿ ತಂದು ತಿನ್ನಿ ಅಡುಕು ಪುಡುಕನ ಸೊಪ್ಪು
ಸರ್ವ ರೋಗಗಳಿಗೂ ಅಮೃತಬಳ್ಳಿ ಸೊಪ್ಪು...
ಸಕ್ಕರೆ ಖಾಯಿಲೆಗೆ ಮಧುನಾಶಿನಿ ಸೊಪ್ಪು..
ಬಹೂಪಯೋಗಿ ಚಕ್ರಮುನಿ ಸೊಪ್ಪು,
ಆಗೊಮ್ಮೆ ಹೀಗೊಮ್ಮೆ ಬಳಸಿ ಮೂಲಂಗಿ ಸೊಪ್ಪು,
ಘಮಘಮ್ಮೆನ್ನುವ ಕಸ್ತೂರಿ ಸೊಪ್ಪು,
ದೇವಪೂಜೆಗೆ ತುಳಸಿ ಮರುಗದ ಸೊಪ್ಪು
ಕಸೂರಿ‌ ಮೇಥಿ ಘಮ್ಮೆನ್ನುವ ಸೊಪ್ಪು
ಮರೆತೇ ಬಿಟ್ಟಿದ್ದೆ ನೋಡಿ ಕೊತ್ತಂಬರಿ ಸೊಪ್ಪು

ಈಗಲೇ ಬೆಳೆಸಿ..ಬಳಸಿ..ಉಳಿಸಿ... ಈ‌ ಸೊಪ್ಪುಗಳನು......
ವಂದನೆಗಳೊಂದಿಗೆ

AVOID PLASTIC, SAVE NEXT GENERATION, SAVE NATURE

Monday, July 8, 2019

Middle class boy's life all ways struggling. This is very danger for next future?


ಈ ಮರದ ಎಲೆಗಳನ್ನು ಉಪಯೋಗಿಸುವುದರಿಂದ ಹೃದಯಾಘಾತ ನಿಯಂತ್ರಿಸಬಹುದು

ಹಾರ್ಟ್ ಅಟ್ಯಾಕ್ ಸಂಪೂರ್ಣವಾಗಿ ತಡೆಯಲು ಒಂದು ಪರಿಣಾಮಕಾರಿ ಉಪಾಯ ಬಂದೇಬಂತು..

ಈ ಮರದ ಎಲೆಗಳನ್ನು ಇಲ್ಲಿ ಹೇಳಿದಂತೆ ಐದು ದಿನ ಸೇವಿಸಿದರೆ ನಿಮ್ಮ ಇಡೀಯ ಜೀವನದಲ್ಲಿ ನಿಮಗೆ ಹೃದಯಾಘಾತ ಸಂಭವಿಸುವುದಿಲ್ಲ. ಹೌದು. ಈ ಮರದ ಎಲೆಗಳಲ್ಲಿ ಅಷ್ಟೊಂದು ಶಕ್ತಿ ಇದೆಯಂತೆ! ಆ ಮರ ಯಾವುದು ತಿಳಿಯಲು ಮುಂದೆ ಓದಿ.

ಬದಲಾದ ಜೀವನಶೈಲಿಯ ಈ ದಿನಗಳಲ್ಲಿ ಯಾವ ರೋಗ ಯಾವಾಗ ಎಲ್ಲಿ, ಹೇಗೆ ಬರುತ್ತೊ ಗೊತ್ತಾಗಲ್ಲ. ಅಂತಹ ರೋಗಗಳಲ್ಲಿ ಹೃದಾಯಾಘಾತ ಕೂಡ ಒಂದು. ಈ ಹೃದಯಾಘಾತಕ್ಕೆ ಒಂದು ಸುಲಭ ಹಾಗೂ ಪರಿಣಾಮಕಾರಿ ಪರಿಹಾರ ಇಲ್ಲಿದೆ. ಈ ಮರದ ಎಲೆಗಳನ್ನು ಐದು ದಿನ ನಿಯಮಿತವಾಗಿ ಸೇವಿಸಿದರೆ ನಿಮ್ಮ ಜೀವನದಲ್ಲಿ ಎಂದೆಂದಿಗೂ ಹೃದಯಾಘಾತ ಆಗುವುದಿಲ್ಲ.

ಸಾಕಷ್ಟು ಹಣ ಖರ್ಚು ಮಾಡಿ ಅನೇಕ ಡಾಕ್ಟರ್ ‌ಗಳ ಬಳಿ ತೆರಳುವುದಕ್ಕಿಂತ ಮೊದಲು ನಾವು ಆರೋಗ್ಯದಿಂದಿರಲು ಜಾಗೃತೆ ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಆರೋಗ್ಯಕ್ಕಿಂತ ದೊಡ್ಡ ಆಸ್ತಿ ಯಾವುದು ಇಲ್ಲ, ಹಣ ಕೊಟ್ಟರೇ ಏನು ಬೇಕಾದರೂ ಖರೀದಿಸಬಹುದು ಆದರೇ ಆರೋಗ್ಯವನ್ನಲ್ಲ ಎಂಬುದು ನಮಗೆಲ್ಲ ತಿಳಿದಿರುವ ವಿಷಯ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಬನ್ನಿ ಹಾಗಾದರೆ ಹೃದಯಾಘಾತ ಆಗದಂತೆ ಅದನ್ನು ಹೇಗೆ ತಡೆಗಟ್ಟಬಹುದು ಎಂದು ತಿಳಿದುಕೊಳ್ಳೊಣ.

ಇದು ನಿಸರ್ಗದಲ್ಲಿ ಉಚಿತವಾಗಿ ಹಾಗು ಸುಲಭವಾಗಿ ಸಿಗುವ ವಸ್ತು. ಅರಳೀ ವೃಕ್ಷದ ಎಲೆಯನ್ನು ಸೇವಿಸುವುದರಿಂದ ಕೇವಲ ಹೃದಯ ಸಂಬಂಧಿ ಕಾಯಿಲೆ ಅಷ್ಟೇ ಅಲ್ಲ ಬದಲಾಗಿ ಅನೇಕ ರೋಗಗಳಿಗೂ ಈ ಎಲೆ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ.

ಇದನ್ನು ಉಪಯೋಗಿಸುವ ವಿಧಾನ ಬಲು ಸುಲಭ. ಅರಳೀ ಮರದ 10 ರಿಂದ 12 ಎಲೆಗಳನ್ನು ಒಂದು ಗ್ಲಾಸ್‌ ನೀರಿನಲ್ಲಿ ಕುದಿಸಬೇಕು, ನಂತರ ಆ ನೀರಿನ ಒಂದು ಭಾಗದಷ್ಟು ಆವಿಯಾದ ನಂತರ ಅದನ್ನು ಹೊರತೆಗೆದು ತಣ್ಣಗಾಗಲು ಇಡಿ, ನಂತರ ಆ ನೀರನ್ನು ಮೂರ್ನಾಲ್ಕು ಗಂಟೆಯ ಒಳಗಾಗಿ ಸಂಪೂರ್ಣವಾಗಿ ಕುಡಿದು ಖಾಲಿಮಾಡಬೇಕು, ಈ ರೀತಿಯಾಗಿ ಸತತ ಐದು ದಿನ ಸೇವಿಸುವುದರಿಂದ ಹೃದಯಾಘಾತ ಸಂಭವಿಸುವುದಿಲ್ಲ.

ಈ ಅಮೂಲ್ಯ ಮಾಹಿತಿಯನ್ನು ನಿಮ್ಮ ಆತ್ಮಿಯರಿಗೆ ತಿಳಿಸಿ. ಇತರರನ್ನು ಹೃದಯಾಘಾತದಿಂದ ತಪ್ಪಿಸಿ ಆರೋಗ್ಯಕರವಾಗಿರಲು ಸಹಾಯ ಮಾಡಿ.

Tuesday, July 2, 2019

Kindness of dolphin

SAGE HEALTH BENEFITS

Sage

Salvia, the Latin name for sage, means ‘to heal’. Internally, the sage is used for :
  • indigestion
  • flatulence
  • liver complaints
  • excessive lactation
  • excessive perspiration
  • excessive salivation
  • anxiety
  • depression
  • female sterility
  • menopausal problems
On the other hand, it is used externally for :
  • insect bites
  • skin infections
  • throat infections
  • mouth infections
  • gum infections
  • skin infections
  • vaginal discharge

FENUGREEK, METHI

Fenugreek, Methi

Fenugreek seeds are nourishing and taken to :
  • encourage weight gain (take note, anorexics)
  • inhibit cancer of the liver
  • lower blood cholesterol levels
  • treat inflammation and ulcers of the stomach and intestines
  • drain off sweat ducts
  • for body building
  • for late onset diabetes
  • poor digestion
  • insufficient lactation
  • painful menstruation
  • labor pains
  • freshen bad breath
  • restore a dull sense of taste
www.dgnsgreenworld.blogspot.com

TULSI HEALTH BENEFITS

Tulsi

There are four types of tulsi mentioned in ayurvedic texts ie Rama, Krishna, Vana & Kapoor Tulsi.
For over the centuries Tulsi (the queen of herbs) has been known for its remarkable healing properties.
  • Tulsi is taken as the herbal tea.
  • The oil extracted from the Karpoora Tulsi is mostly used in the herbal toiletry. Its oil is also used against the insects and bacteria.
  • The Rama Tulsi is the effective remedy for the Severe acute Respiratory Syndrome. Juice of its leaves gives relief in cold, fever, bronchitis and cough.
  • Tulsi oil is also used as the ear drop.
  • Tulsi helps in curing malaria.
  • It is very effective against indigestion, headache, hysteria, insomnia and cholera.
  • The fresh leaves of Tulsi are taken by the million of people everyday.
  • Many people wears the Tulsi beads, which is said to have certain physical and medicinal properties.

CALENDULA HEALTH BENEFITS

Calendula

It grows in almost any type of soil condition. It has no problem with nutritionally poor, very acidic or very alkaline soils, just as long as it’s moist. Well known as a remedy for skin problems, the deep-orange flowered pot marigold variety is applied externally to :
  • bites
  • stings
  • sprains
  • wounds
  • sore eyes
  • varicose veins
  • Internally it is used to treat fevers and chronic infections.
  • The tea of the petals tones up circulation and, taken regularly, eases varicose veins.
  • Applying the crushed stems of the pot marigold to corns and warts will soon have them easily removable.
www.dgnsgreenworld.com

THYME HEALTH BENEFITS

Thyme

It is mostly known for its strong antiseptic nature. It is wonderful when it comes to the treatment of:
  • Congestion
  • Stomach gas
  • Coughs
www.dgnsgreenworld.com

BASIL HEALTH BENEFITS

Basil

You must have used basil lot many times in food but have you ever tried it to heal flatulence? It has the power to treat:
  • Cuts
  • Lack of appetite
  • Stomach gas
  • scrapes

Ashwangandha Health Benefits

Ashwangandha

Ashwagandha is best known for stress Reduction, Neural Protection, and a Lot More from an Ancient Herb
The benefits of ashwagandha are many; in addition to promoting fertility, aiding in wound care, and boosting the immune system, some other benefits are:
  • Diuretic, Sleep aid
  • Galactogogue
  • Anti-epileptic
  • Anti-tumor, Pain relief
  • Eye health
  • Heart tonic
  • Lowers cholesterol & Regulates blood sugar
  • Reduces depression and anxiety, Combats stress
  • Fights cognitive decline due to brain cell degeneration
www.dgnsgreenworld.blogspot.com

ರೈತ ಮತ್ತು ಯೋಧ ದೇಶದ ಆಸ್ತಿ ?


ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World