www.dgnsgreenworld.blogspot.com

Saturday, December 31, 2022

ನರಿ, ತೋಳ,ಗೂಬೆ, ಗಿಡುಗಗಳ ನಡುವಿನ ರಾಜಸಿಂಹನಿಗೆ 8 ವರ್ಷದ ಸಾಧನೆಯ ಅಭಿನಂದನೆಗಳು ….

ಒಂದು ಸಣ್ಣ ಪೆಪ್ಪರ್ಮಿಂಟ್ ತಿಂದರೂ ಪ್ಲಾಸ್ಚಿಕ್ ಚೀಟಿಯನ್ನು ನೆಲಕ್ಕೆಸೆಯುವಾಗ ಬೇಡವೆಂದನಿಸಿ ಜೇಬಿನಲ್ಲಿಟ್ಟಕೊಂಡು ಮನೆಗೆ ಬಂದು ಕಸದಬುಟ್ಚಿಗೆ ಎಸೆಯುವಷ್ಟು ಬೆಳೆದ ಅಂತರ್ಪ್ರಜ್ಞೆಗೆ ……..

ರಸ್ತೆಬದಿಯಲ್ಲಿ  ಒಂದು ಕೇಜಿ ಸಪೋಟಾ ಹಣ್ಣು ಕೊಂಡು ನಲವತ್ತು ರೂಪಾಯಿಯ ವಹಿವಾಟಿಗೆ ಐನೂರರ ನೋಟು ಹಿಡಿದು  ಚಿಲ್ಲರೆಗಾಗಿ ಅಲೆಯುತ್ತಿದ್ದಾಗ, ಹಣ್ಣು ಮಾರುವವ Paytm ಮಾಡಿ ಎಂದು QR Code Scanner ಹಿಡಿಯುವಷ್ಟು ಬಂದ ಆಧುನಿಕತೆಗೆ …..

ಮೂಗು ಮುಚ್ಚಿಕೊಂಡು, ಹೀಕರಿಸಿಕೊಂಡು, ಮನೆಯಿಂದ ಒಯ್ದ tissue paperನಲ್ಲಿ  ಸೀಟುಗಳನ್ನು clean ಮಾಡಿ, ಕಷ್ಟಪಟ್ಟು ಮುಗಿಸುತ್ತಿದ್ದ ರೈಲು ಪ್ರಯಾಣದಿನಗಳು ದೂರವಾಗಿ, ಶುಚಿಯಾದ ನಿಲ್ದಾಣ, ಶುಭ್ರ ಆಸನಗಳು, ಸ್ವಚ್ಛ ಶೌಚಾಲಯಗಳ ರೈಲಿನಲ್ಲಿ ರಾಜಾರೋಷವಾಗಿ ನೆಮ್ಮದಿಯಿಂದ ಪ್ರಯಾಣ ಮಾಡುವ ಸೌಲಭ್ಯಕೆ…….

ಹೊರದೇಶಗಳಲ್ಲಿ ಸುತ್ತುವಾಗ, ಅಲ್ಲಿನವರು ಸೂರ್ಯ ನಮಸ್ಕಾರ, ಸರ್ವಾಂಗಾಸನ, ಭುಜಂಗಾಸನವೆಂದು ಯೋಗದ ವಿಷಯವಾಗಿ, ಭಾರತವನ್ನು ಕುರಿತು ಮಾತನಾಡುವ ಹೆಮ್ಮೆಯ ಕ್ಷಣಗಳಿಗೆ……

ಪಕ್ಕದ ಪಾಕಿಸ್ತಾನ, ಶ್ರೀಲಂಕಾ, ನೇಪಾಳದಲ್ಲಿ ಹದಗೆಟ್ಟ ಪರಿಸ್ಥಿತಿ ಇದ್ದರೂ ನಾವು  ನಮ್ಮ ದೇಶದಲ್ಲಿ ನೆಮ್ಮದಿಯಾಗಿದ್ದು  ನಮ್ಮ ಕರ್ಮಯೋಗಿ ಪ್ರಧಾನಿಗೆ ಬಾಯಿಗೆ ಬಂದಂತೆ ಬಯ್ಯುವ ಈ luxuryಗೆ…….

ಪ್ರಪಂಚದ ಮುಂದುವರೆದ ದೇಶಗಳೂ ಒಮ್ಮೆ ಭಾರತದತ್ತ ಮುಖ ಮಾಡಿ India’s opinion matters ಎನ್ನುವ ಈ ದಿನಗಳಿಗೆ, 

ಯುದ್ಧದ ಕಾರ್ಮೋಡದ ನಡುವೆಯೂ ಭರವಸೆಯ ಬದುಕು ಕಾಣುತ್ತಿರುವ  ನಮ್ಮ ಈ ಅದೃಷ್ಟಕ್ಕೆ ….

ಕೊರೊನಾ ಮಹಾಮಾರಿಯ ವಿರುದ್ಧ ಕೋಟ್ಯಾಂತರ ಭಾರತೀಯರಿಗೆ ಉಚಿತ ಚುಚ್ಚುಮದ್ದಿನ ಕವಚ ನೀಡಿದ ಹೆಗ್ಗಳಿಕೆಗೆ ……..

ಸಾವರ್ಕರ್, ಸರ್ದಾರ್ ಪಟೇಲ್, ಶಾಸ್ತ್ರೀಜಿ, ಅಂಬೇಡ್ಕರ್, ಶಿವಾಜಿ ಮುಂತಾದ ಈವರೆಗೂ ಅನಾಮಧೇಯರಾಗಿದ್ದ ದೇಶಭಕ್ತರ ಜೀವನದ ಯಶೋಗಾಥೆಯ ಅನುರಣನೆಯ ಈ ಕಾಲಘಟ್ಟಕ್ಕೆ …

ಹೀನ, ದೀನ, ಕಡೆಗಣಿಸಿದ ಮಂದಿಯ ನಡುವೆ ಎದ್ದು ಬಂದ ಸಾಧಕರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದಾಗ ದೇಶಕ್ಕೆ ದೇಶವೇ ನೀಡಿದ ಚಪ್ಪಾಳೆಯ ಕರತಾಡನದ ಸಂಭ್ರಮಕ್ಕೆ  ….

ಕೇದಾರ, ಕಾಶಿ, ಅಯೋಧ್ಯೆ, ಮಥುರೆಯಲ್ಲಿ ಮೊಳಗುವ ನಿರ್ಭೀತ ಘಂಟಾನಾದಕ್ಕೆ……. 

ಒಂದು ಕ್ಷಣವೂ ದಣಿವಿರದೆ ಸದಾ “ರಾಷ್ಟ್ರದೇವೋಭವ” ಎಂದು ನಂಬಿ ನಡೆಯುತ್ತಿರುವ ಸಿಂಹಗಾಂಭೀರ್ಯಕ್ಕೆ ….

ನಮ್ಮಲ್ಲಿ ಮೊಳೆತ ದೇಶಾಭಿಮಾನದ ಕಿಚ್ಚಿಗೆ,  

ಒಂದು ಕ್ಷಣ ಎದೆಗುಂದಿದಾಗ ಸ್ಫೂರ್ತಿಯಾಗಿ ಕಾಣುವ ಮೇರುಸದೃಷ ವ್ಯಕ್ತಿಯ ರಾಷ್ಟ್ರಸೇವೆಯ ನಿರಂತರ ಕೈಂಕರ್ಯಕ್ಕೆ …… 

ಎಂಟು ವರ್ಷಗಳು !!

ಮಿಂಚುಗಳ ನಡುವಿನ ದೇದೀಪ್ಯಮಾನ ಸೂರ್ಯನಿಗೆ,

ನೂರು ಹತಾಶೆಗಳ ನಡುವಿನ ಭರವಸೆಯ ಬೆಳಕಿಗೆ,                  

ಮಾತಿನ ರಣಭೇರಿ ನಗಾರಿಯ  ಗದ್ದಲದ ನಡುವಿನ ಮೌನಕ್ಕೆ,
                                                                     
ನರಿ, ತೋಳ,ಗೂಬೆ, ಗಿಡುಗಗಳ ನಡುವಿನ ರಾಜಸಿಂಹನಿಗೆ 8 ವರ್ಷದ ಸಾಧನೆಯ ಅಭಿನಂದನೆಗಳು ….

❤❤👍👌🙏🏽
 ಇಂತಹ ಬರಹಗಳು ಖಂಡಿತ ಸಮಾಜಕ್ಕೇ ಮಾನವಕುಲಕ್ಕೆ ಅತ್ಯವಶ್ಯಕ ಅಗತ್ಯವೆನಿಸಿದರೆ ಹಂಚಿಕೊಳ್ಳಿ
ವಂದನೆಗಳೊಂದಿಗೆ
 ನಂಜುಂಡಸ್ವಾಮಿ.

Wednesday, August 31, 2022

ಶ್ರೀ ಗೌರಿ ಅಷ್ಟೋತ್ತರ ಶತನಾಮವಳಿ

ಶ್ರೀ ಗೌರಿ ಅಷ್ಟೋತ್ತರ ಶತನಾಮವಳಿ

ಓಂ ಶಿವಾಯೈ  ನಮಃ ।
ಓಂ ಶ್ರೀಮಹಾವಿದ್ಯಾಯೈ ನಮಃ ।
ಓಂ ಶ್ರೀಮನ್ಮಕುಟಮಂಡಿತಾಯೈ  ನಮಃ ।
ಓಂ ಕಲ್ಯಾಣ್ಯೈ ನಮಃ ।
ಓಂ ಕರುಣಾರಸಸಾಗರಾಯೈ  ನಮಃ ।
ಓಂ ಕಮಲಾರಾಧ್ಯಾಯೈ  ನಮಃ ।
ಓಂ ಕಲಿಪ್ರಭೃತಿಸಂಸೇವಾಯೈ  ನಮಃ ।
ಓಂ ಕಮಲಾಸನಸಂಸ್ತುತಾಯೈ  ನಮಃ ।
ಓಂ ಅಂಬಿಕಾಯೈ  ನಮಃ ।
ಓಂ ಅನೇಕಸೌಭಾಗ್ಯದಾತ್ರ್ಯೈ  ನಮಃ ।               (೧೦)

ಓಂ ಆನಂದವಿಗ್ರಹಾಯೈ  ನಮಃ ।
ಓಂ ಈಷಣತ್ರಯನಿರ್ಮುಕ್ತಾಯೈ  ನಮಃ ।
ಓಂ ಹೃತ್ಸರೋರುವಾಸಿನ್ಯೈ  ನಮಃ ।
ಓಂ ಆದ್ಯಂತರಹಿತಾಯೈ  ನಮಃ ।
ಓಂ ಅನೇಕಕೋಟಿಭಾಸ್ಕರವಲ್ಲಭಾಯೈ ನಮಃ ।
ಓಂ ಈಶರೋತ್ಸಂಗನಿಲಯಾಯೈ  ನಮಃ ।
ಓಂ ಈತಿಭಾದಾವಿನಾಶಿನ್ಯೈ  ನಮಃ ।
ಓಂ ಇಂದಿರಾರತಿಸಂಸೇವ್ಯಾಯೈ  ನಮಃ ।
ಓಂ  ಈಶ್ವರಾರ್ಧಶರೀರಿಣ್ಯೈ ನಮಃ ।
ಓಂ ಲಕ್ಷ್ಯಾರ್ಥರೂಪಾಯೈ  ನಮಃ ।                        (೨೦)
ಓಂ ಲಕ್ಷ್ಮೀಶಬ್ರಹ್ಮೇಶಾಮರ  ಪೂಜಿತಾಯೈ  ನಮಃ ।
ಓಂ ಉತ್ಪತ್ಯಾದಿವಿನಿರ್ಮುಕ್ತಾಯೈ  ನಮಃ ।
ಓಂ ವಿದ್ಯಾಪ್ರತಿಪಾದಿನ್ಯೈ  ನಮಃ ।
ಓಂ ಊರ್ಧ್ವಲೋಕಪ್ರದಾತ್ರ್ಯೈ  ನಮಃ ।
ಓಂ ಹಾನಿವೃದ್ಧಿವಿವರ್ಜಿತಾಯೈ  ನಮಃ ।
ಓಂ ಸರ್ವೇಶ್ವರ್ಯೈ  ನಮಃ ।
ಓಂ ಸರ್ವಲಭ್ಯಾಯೈ  ನಮಃ ।
ಓಂ ಗುರುಮೂರ್ತಿಸ್ವರೂಪಿಣ್ಯೈ ನಮಃ ।
ಓಂ ಸಮಸ್ತಪ್ರಾಣಿನಿಲಯಾಯೈ ನಮಃ ।
ಓಂ ಸರ್ವಮಂಗಳಾಯೈ  ನಮಃ ।             (೩೦)
ಓಂ ಸರ್ವಲೋಕಸುಂದರ್ಯೈ  ನಮಃ ।
ಓಂ ಕಾಮಾಕ್ಷ್ಯೈ  ನಮಃ ।
ಓಂ ಕಾಮದಾತ್ರ್ಯೈ ನಮಃ ।
ಓಂ ಕಾಮೇಶಾಂಕನಿವಾಸಿನ್ಯೈ  ನಮಃ ।
ಓಂ ಹರಾರ್ಧದೇಹಾಯೈ  ನಮಃ ।
ಓಂ ಕಲ್ಹಾರಭೂಷಿತಾಯೈ  ನಮಃ ।
ಓಂ ಹರಿಲೋಚನಾಯೈ  ನಮಃ ।
ಓಂ ಲಲಿತಾಯೈ  ನಮಃ ।
ಓಂ ಲಾಕಿನೀಸೇವ್ಯಾಯೈ  ನಮಃ ।
ಓಂ ಲಬ್ಧೈಶ್ವರ್ಯಪ್ರವರ್ತಿನ್ಯೈ  ನಮಃ ।            (೪೦)
ಓಂ ಹ್ರೀಂಕಾರಪದ್ಮನಿಲಯಾಯೈ  ನಮಃ ।
ಓಂ ಹ್ರೀಂಕಾರಾರ್ಣವಕೌಸ್ತುಭಾಯೈ  ನಮಃ ।
ಓಂ ಸಮಸ್ತಲೋಕಜನನ್ಯೈ  ನಮಃ ।
ಓಂ ಸರ್ವಭೂತೇಶ್ವರ್ಯೈ  ನಮಃ ।
ಓಂ ಕರೀಂದ್ರರೂಢಸಂಸೇವ್ಯಾಯೈ  ನಮಃ ।
ಓಂ ಕಮಲೇಶಸಹೋದರ್ಯೈ  ನಮಃ ।
ಓಂ ಕಷ್ಟದಾರಿದ್ರ್ಯಶಮನ್ಯೈ  ನಮಃ ।
ಓಂ ಲಕ್ಷಗಾಘೋಷಾಂಬಾಯೈ  ನಮಃ ।
ಓಂ ಹ್ರೀಂಕಾರ ಬಿಂದುಲಕ್ಷಿತಾಯೈ  ನಮಃ ।
ಓಂ ಏಕಾಕ್ಷರ್ಯೈ  ನಮಃ ।                           (೫೦)
ಓಂ ಏಕರೂಪಾಯೈ  ನಮಃ ।
ಓಂ ಐಶ್ವರ್ಯಫಲದಾಯಿನ್ಯೈ  ನಮಃ ।
ಓಂ ಓಂಕಾರವರ್ಣನಿಲಯಾಯೈ  ನಮಃ ।
ಓಂ ಔದಾರ್ಯಾದಿಪ್ರದಾಯೈ  ನಮಃ ।
ಓಂ ಗಾಯತ್ರ್ಯೈ  ನಮಃ ।
ಓಂ ಗಿರಿಜಾಕನ್ಯಾಯೈ  ನಮಃ ।
ಓಂ ಗೂಢಾರ್ಥಬೋಧಿನ್ಯೈ  ನಮಃ ।
ಓಂ ಚಂದ್ರಶೇಕರರ್ಧಾಂಗ್ಯೈ  ನಮಃ ।
ಓಂ ಚೂಡಾಮಣಿವಿಭೂಷಿತಾಯೈ  ನಮಃ ।
ಓಂ ಜಾಜಿಚಂಪಕಪುನ್ನಾಗಕೇತಕೀಕುಸುಮಾರ್ಚಿತಾಯೈ  ನಮಃ ।          (೬೦)
ಓಂ ತನುಮಧ್ಯಾಯೈ  ನಮಃ ।
ಓಂ ದಾನವೇಂದ್ರಸಂಹೃತ್ಯೈ  ನಮಃ ।
ಓಂ ದೀನರಕ್ಷಿಣ್ಯೈ ನಮಃ ।
ಓಂ ಸ್ವಧರ್ಮಪರಸಂಸೇವ್ಯಾಯೈ  ನಮಃ ।
ಓಂ ಧನಧಾನ್ಯಾಭಿವೃದ್ಧಿದಾಯೈ  ನಮಃ ।
ಓಂ ನಾಮರೂಪವಿವರ್ಜಿತಾಯೈ  ನಮಃ ।
ಓಂ ಅಪರಾಜಿತಾಯೈ  ನಮಃ ।
ಓಂ ಪರಮಾನಂದರೂಪಾಯೈ  ನಮಃ ।       (೭೦)
ಓಂ ಪಾಶಾಂಕುಶಭಯಾವರವಿಲಸತ್ಕರಪಲ್ಲವಾಯೈ  ನಮಃ ।
ಓಂ ಪುರಾಣಪುರುಷಸೇವ್ಯಾಯೈ  ನಮಃ ।
ಓಂ ಪುಷ್ಪಮಾಲಾವಿರಾಜಿತಾಯೈ  ನಮಃ ।
ಓಂ ಫಣೀಂದ್ರರತ್ನಶೋಭಾಢ್ಯಾಯೈ  ನಮಃ ।
ಓಂ ಬದರೀವನವಾಸಿನ್ಯೈ  ನಮಃ ।
ಓಂ ಬಾಲಾಯೈ  ನಮಃ ।
ಓಂ ವಿಕ್ರಮಸಂಹೃಷ್ಟಾಯೈ  ನಮಃ ।
ಓಂ ಬಿಂಬೋಷ್ಟ್ಯೆೈ   ನಮಃ ।
ಓಂ ಬಿಲ್ವಪೂಜಿತಾಯೈ  ನಮಃ ।           (೮೦)
ಓಂ ಬಿಂದುಚಕ್ರೈಕನಿಲಯಾಯೈ  ನಮಃ ।
ಓಂ ಭವಾರಣ್ಯದವಾನಲಾಯೈ  ನಮಃ ।
ಓಂ ಭವಾನ್ಯೈ  ನಮಃ ।
ಓಂ ಭವರೋಗ್ಯೈ   ನಮಃ ।
ಓಂ ಭಾವದೇಹಾರ್ಧಧಾರಿಣ್ಯೈ  ನಮಃ ।
ಓಂ ಭಕ್ತಸೇವ್ಯಾಯೈ  ನಮಃ ।
ಓಂ ಭಕ್ತಗಣ್ಯಾಯೈ  ನಮಃ ।
ಓಂ ಭಾಗ್ಯವೃದ್ಧಿಪ್ರದಾಯಿನ್ಯೈ  ನಮಃ ।
ಓಂ ಭೂತಿದಾತ್ರ್ಯೈ  ನಮಃ ।
ಓಂ ಭೈರವಾದಿಸಂವೃತಾಯೈ  ನಮಃ ।
ಓಂ ಶ್ರೀ ಮಹೇಶ್ವರ್ಯೈ  ನಮಃ ।           (೯೦)
ಓಂ ಸರ್ವೇಷ್ಟಾಯೈ  ನಮಃ ।
ಓಂ ಶ್ರೀ ಮಹಾದೇವ್ಯೈ  ನಮಃ ।
ಓಂ ತ್ರಿಪುರಸೌಂದರ್ಯೈ  ನಮಃ ।
ಓಂ ಮುಕ್ತಿದಾತ್ರೇ  ನಮಃ ।
ಓಂ ರಾಜರಾಜೇಶ್ವರ್ಯೈ  ನಮಃ ।
ಓಂ ವಿದ್ಯಾಪ್ರದಾಯಿನ್ಯೈ  ನಮಃ ।
ಓಂ ಭಾವರೂಪಾಯೈ  ನಮಃ ।
ಓಂ ವಿಶ್ವಮೋಹಿನ್ಯೈ   ನಮಃ ।
ಓಂ ಶಾಂಕರ್ಯೈ  ನಮಃ ।
ಓಂ ಶತೃಸಂಹತ್ರ್ಯೈ  ನಮಃ ।                (೧೦೦)
ಓಂ ತ್ರಿಪುರಾಯೈ  ನಮಃ ।
ಓಂ ತ್ರಿಪುರೇಶ್ವರ್ಯೈ  ನಮಃ ।
ಓಂ ಶ್ರೀ ಶಾರದಾಸಂಸೇವ್ಯಾಯೈ  ನಮಃ ।
ಓಂ ಮದ್ಸಿಂಹಾಸನೇಶ್ವರ್ಯೈ  ನಮಃ ।
ಓಂ ಶ್ರೀ ಮನ್ಮುನೀಂದ್ರ  ಸಂಸೇವ್ಯಾಯೈ  ನಮಃ ।
ಓಂ ಮನ್ನಮರನಾಯಿಕಾಯೈ  ನಮಃ ।
ಓಂ ಶ್ರೀ ರಾಜರಾಜೇಶ್ವರ್ಯೈ  ನಮಃ ।
ಓಂ ಶ್ರೀ ಸ್ವರ್ಣಗೌರ್ಯೈ  ನಮಃ ।                    (೧೦೮)

                                               ।।ಶ್ರೀ ಗೌರಿ ಅಷ್ಟೋತ್ತರ  ಶತನಾಮಾವಳಿ  ಸಂಪೂರ್ಣಂ।।

Sunday, July 17, 2022

ಆ ಮಹಿಳೆ ಯಾರು ಅಂದರೆ , ಇದೀಗ ಭಾರತದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ , " ಶ್ರೀಮತಿ ದ್ರೌಪದಿ ಮುಮು೯ ".

ಯಾವಾಗ ತಾನು ಭುವನೇಶ್ವರದಲ್ಲಿ ಜಿಲ್ಲಾಧಿಕಾರಿಯಾಗಿದ್ದೆನೊ, ಆಗ  ಒಂದು ದಿನ ಮಧ್ಯಾಹ್ನ ನಾನು ಸರ್ಕಾರಿ ಪ್ರವಾಸ ಮುಗಿಸಿ ಕಚೇರಿಗೆ ಬಂದಾಗ ಓರ್ವ ಮಹಿಳೆ ಅಲ್ಲಿಯ ಬಾಕಿನ ಮೇಲೆ ಕುಳಿತಿದ್ದಳು. 

ನಾನು ಅವಳನ್ನು ಒಳಗೆ ಕರೆದು ಬಂದ ಕಾರಣ ಕೇಳಿದಾಗ, ಆಕೆ ಬಹಳ ದಿನಗಳಿಂದ ತಾನು ಒಂದು ಅರ್ಜಿ ಸಲ್ಲಿಸಿದ್ದು , ತನ್ನ ಭೂಮಿಯನ್ನು ಮಾರಾಟ ಮಾಡುವದಿದ್ದು ಅದಕ್ಕಾಗಿ ಅನುಮತಿ ಪತ್ರ ಬೇಕಾಗಿದೆ ಎಂದು ಹೇಳಿದಳು.

ಆಕೆಯ ಕಡತ ( ಫೈಲ್ ) ತಪಾಸಣೆ ಮಾಡಿದಾಗ, ಆಕೆ ಈ ಮೊದಲು ಕೂಡ ಆ ಒಂದೇ ಜಮೀನು ಮಾರುವುದಕ್ಕೆ ಮೂರು ಸಲ ಪರವಾನಗಿ ಪಡೆದಿರುವ ಬಗ್ಗೆ ತನ್ನ ಗಮನಕ್ಕೆ ಬಂತು. ಆದಾಗ್ಯೂ ಇನ್ನೂ ಜಮೀನು ಮಾರಾಟ ಮಾಡದೇ ಇರುವ ಕಾರಣ ಕೇಳಿದಾಗ, ಆಕೆ ಹೇಳಿದ್ದು ಕೇಳಿ ,  ನನಗೆ ಮಾತೇ ಹೊರಡಲಿಲ್ಲ. 

ಮೊದಲ ಸಲ ಪರವಾನಗಿ ಪಡೆದಾಗ , ಅವಳ ಒಬ್ಬ ಪುತ್ರ ಆಕಸ್ಮಿಕವಾಗಿ ತೀರಿಕೊಂಡ.  

ಎರಡನೇ ಸಲ ಮಾರಾಟ ಮಾಡುವ ವೇಳೆ ತನ್ನ ಗಂಡ ಸಾವನ್ನಪ್ಪಿದ್ದನು.  ಅದೆಲ್ಲಾ ಆಘಾತದಿಂದ ತಾನು ಹೊರಗೆ ಬರುತ್ತಿದ್ದಂತೆ, ಮೂರನೇ ಬಾರಿ ಅನುಮತಿ ಪಡೆದು ಮಾರಾಟ ಮಾಡುವ ವೇಳೆ ತನ್ನ ಏಕೈಕ ಆಧಾರವಾಗಿದ್ದ ಇನ್ನೊಬ್ಬ ಪುತ್ರ ಅಪಘಾತದಲ್ಲಿ ಅಸುನೀಗಿದ.
ಹೀಗಾಗಿ ಇದೀಗ ಸಾಲ ತೀರಿಸಲು ಸದರಿ  ಜಮೀನನ್ನು ಮಾರಾಟ ಮಾಡುವ ಸಲುವಾಗಿ ನಾಲ್ಕನೇ ಬಾರಿಗೆ ಅನುಮತಿ ಪಡೆಯಲು ಬಂದಿರುವೆ ಎಂದಳು.

ನಾನು ಅವಳನ್ನು ಏನೂ ಪ್ರಶ್ನಿಸದೇ ಕೂಡಲೇ ಮಂಜೂರಾತಿ ಪತ್ರ ಅವಳ ಕೈಗೆ ಕೊಟ್ಟೆ.

ಆ ಮಹಿಳೆ ಯಾರು ಅಂದರೆ , ಇದೀಗ ಭಾರತದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ , 
" ಶ್ರೀಮತಿ  ದ್ರೌಪದಿ  ಮುಮು೯ ". 

ಅವರು ಆಗ ಸ್ವತಃ ತಾವು ಓಡಿಸಾದ ಸಚಿವೆಯಾಗಿದ್ದರೂ ಕೂಡ ಇತರರಂತೆ ಧಿಮಾಕು ತೋರಿಸದೇ , ಸಾಮಾನ್ಯ ಪ್ರಜೆಗಳ ಹಾಗೆ ಕಚೇರಿಗೆ ಬಂದು ಸರದಿಯಲ್ಲಿ ನಿಂತು ತನ್ನ ಜಮೀನು ಮಾರಾಟ ಮಾಡುವ ಸಲುವಾಗಿ ಪರವಾನಗಿ ಪಡೆದರು.

ಇಂಥ ವ್ಯಕ್ತಿ , ಇಂಥ ಸಾಮಾನ್ಯ  ಮಹಿಳೆ  ನಮ್ಮ ದೇಶದ   " ರಾಷ್ಟ್ರಪತಿ " ಆಗುವಳೆಂದರೆ ನಾವೆಲ್ಲರೂ ಹೆಮ್ಮೆ ಪಡುವಂತಹ ಸಂಗತಿ ಅಲ್ಲವೇ ?

      ಲೇಖಕರು:  
ಶ್ರೀಮತಿ ವಿಜಯಾ ವಾಷ್ಣೆರ್ಯ.
ಜಿಲ್ಲಾಧಿಕಾರಿಗಳು, ಭುವನೇಶ್ವರ.

 ಅನುವಾದ :  
      -  ನೀಲಕಂಠ ದಾತಾರ.

Friday, June 24, 2022

ಜೀವನಗಂಗೆ

ಜೀವನಗಂಗೆ

ನಮ್ಮ ಜೀವನದ ನದಿಗೆ ಎರಡು ದಂಡೆಗಳು. ಒಂದು ಆದಿ, ಇನ್ನೊಂದು ಅಂತ್ಯ. ಒಂದು ದಿನ ಆರಂಭವಾದ ಈ ಜೀವನದ ನದಿಯು ಜೀವನದ ಕೊನೆಯವರೆಗೆ ನಿರಂತರ ಹರಿಯುತ್ತದೆ. ಜೀವನದ ಈ ನದಿಗೆ ಮೂರು ಅಂಗಗಳು ೧) ಜ್ಞಾನಾಂಗ ೨) ಕ್ರಿಯಾಂಗ ೩) ಭಾವಾಂಗ !

ಮೊದಲನೆಯದು

ಜ್ಞಾನಾಂಗ ಈ ಜಗತ್ತು ವಿಶಾಲವೂ,

ವೈವಿಧ್ಯಮಯವೂ ಆಗಿದೆ. ಇದು ಶಬ್ದ ಸ್ಪರ್ಶ, ರೂಪ, ರಸ, ಗಂಧ ಎಂಬ ಐದು ವಿಷಯಗಳಿಂದ ಕೂಡಿದೆ. ಮೃದು ಮಧುರ ಶಬ್ದಗಳನ್ನ ಕೇಳುವುದಕ್ಕೆ ಕಿವಿಗಳಿವೆ. ಶೀತೋಷ್ಣಾದಿ ಹಿತವಾದ ಸ್ಪರ್ಶವನ್ನು ಅನುಭವಿಸುವುದಕ್ಕೆ ತ್ವಚೆಯಿದೆ. ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ನೋಡುವುದಕ್ಕೆ ಎರಡು ಕಣ್ಣುಗಳಿವೆ. ಷಡ್ರಸಗಳನ್ನು ಸವಿಯುವುದಕ್ಕೆ ನಾಲಿಗೆ ಇದೆ. ಸುಗಂಧಮಯ ಶ್ರೀಗಂಧ ಜಗತ್ತನ್ನು ಅನುಭವಿಸಲು ನಾಸಿಕವಿದೆ. ಸಿರಿವಂತರು, ಬಡವರು, ಮಹಾತ್ಮರು, ಅಲ್ಪಾತ್ಮರು, ದೇವತೆಗಳು ಎಲ್ಲರೂ ಮಾಡುವುದು ಇಷ್ಟೇ ! ಈ ಪಂಚವಿಷಯಗಳನ್ನು ಅನುಭವಿಸುವುದಕ್ಕೆ ಪ್ರಪಂಚವೆಂದು ಕರೆಯುತ್ತಾರೆ. ತೊಟ್ಟಿಲಕ್ಕೆ ಇಳಿದಾಗಿನಿಂದ ಕೊನೆಯ ಉಸಿರು ಇರುವವರೆಗೆ ಎಲ್ಲರೂ ಮಾಡುವುದು ಪಂಚವಿಷಯಗಳ ಒಡನಾಟ. ಈ ಪಂಚವಿಷಯಗಳ ಪರಿಪೂರ್ಣ ಜ್ಞಾನಮಾಡಿಕೊಂಡರೆ ಅದು ನಮ್ಮನ್ನು ಬಂಧಿಸುವುದಿಲ್ಲ. ಈ ಪ್ರಪಂಚದ ಅರಿವನ್ನು ಮಾಡಿಕೊಳ್ಳುವುದೇ ಜ್ಞಾನಾಂಗ,

ಎರಡನೆಯದು ಕ್ರಿಯಾಂಗ : ನಿಸರ್ಗವು ನಮಗೆ ಸಮರ್ಥ ದೇಹ, ಮನ, ಬುದ್ಧಿಯನ್ನು ಕೊಟ್ಟಿದ್ದು ಮೈ ಮುರಿದು ದುಡಿಯಲಿಕ್ಕೆ ವಿನಾ ಮೈಗಳ್ಳರಾಗಿ ಕೂಡಲಿಕ್ಕೆ ಅಲ್ಲ, ಕೈ ಕಾಲುಗಳು ಸಮರ್ಥವಾಗಿರುವ ವರೆಗೆ ನಾವು ದುಡಿದು ಮಾಡಿ ನಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು. ಒಬ್ಬ ವಿದ್ವಾಂಸರು ಹೇಳುತ್ತಾರೆ - “ನಮ್ಮ ದೇಹದ ಅವಯವಗಳನ್ನು ನಾವು ಬಳಸಿದರೆ ಉಳಿಯುತ್ತವೆ. ಇಲ್ಲದಿದ್ದರೆ ಅಳಿಯುತ್ತವೆ !' ಈ ಮಣ್ಣಿನ ಕಾಯವು ಮಣ್ಣು ಕೂಡುವ ಮೊದಲೇ ನಾವು ಬದುಕಿಗೆ ಬಂಗಾರದ ಬಣ್ಣಕೊಡಬೇಕು. ಈ ಮೃಣ್ಮಯ ದೇಹದಲ್ಲಿಯೇ ಚಿನ್ಮಯ ದೇವನನ್ನು ಕಾಣುವ ಸತ್ಯ ಶುದ್ಧ ಕಾಯಕ ಕರ್ಮ ಮಾಡಬೇಕು ಇದುವೆ ಕ್ರಿಯಾಂಗ !

ಮೂರನೆಯದು ಭಾವಾಂಗ : ನಾವು ಜೀವನದ ಉದ್ದಕ್ಕೂ ಬರೀ ಗಳಿಸುವುದು. ಉಳಿಸುವುದು ಮಾಡಿದರಾಗದು. ಗಳಿಸಿದ್ದನ್ನು ಸತ್ಕಾರ್ಯಕ್ಕೆ ಬಳಸಿ- ಸಂತಸ ಪಡಬೇಕು. ಅನುಭವಿಸಿ ಆನಂದಿಸಬೇಕು. ಆಗ ನಮ್ಮ ಗಳಿಕೆಯು ಸಾರ್ಥಕತೆ ಪಡೆಯುತ್ತದೆ. ಕಷ್ಟ ಪಟ್ಟು ಆಯುಷ್ಯದ ಉದ್ದಕ್ಕೂ ಗಳಿಸಿದ್ದನ್ನು ಅನುಭವಿಸದಿದ್ದರೆ. ಆನಂದಿಸದಿದ್ದರೆ ; ಅದೆಲ್ಲವೂ ನಿರರ್ಥಕ ವಾಗುತ್ತದೆ.

ಒಬ್ಬ ಆಗರ್ಭ ಸಿರಿವಂತ ಭವ್ಯವಾದ ಮನೆ. ಸುತ್ತಮುತ್ತ ಸುಂದರವಾದ ಹೂದೋಟ. ಆದರೆ ಹಣಗಳಿಕೆಯ ವ್ಯಾಮೋಹದಲ್ಲಿ ಮುಳುಗಿಹೋಗಿದ್ದ. ಆ ಸಿರಿವಂತನು ಎಂದೂ ತನ್ನ ಹೂದೋಟದಲ್ಲಿ ಕಾಲಿಟ್ಟಿರಲಿಲ್ಲ. ಒಂದು ದಿನ ಅವನ ಊರಿನಲ್ಲಿ ಜಗತ್ಪಸಿದ್ಧ ಕಲಾವಿದರು ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದರು. ಅಲ್ಲಿ ಒಂದು ಅತ್ಯಂತ ಸುಂದರವಾದ ಒಂದು ಹೂವಿನ ಚಿತ್ರ. ಅದಕ್ಕೆ ಲಕ್ಷಾಂತರ ಹಣಕೊಟ್ಟು ಆ ಸಿರಿವಂತನು ಅದನ್ನು ಮನೆಗೆ ತಂದ. ನೋಡಿದವರೆಲ್ಲ ಸಿರಿವಂತನನ್ನು ಬಾಯಿತುಂಬ ಹೊಗಳಿದರು. ಸಿರಿವಂತನೂ ಅವರಿಗೆ ಹೊಟ್ಟೆ ತುಂಬ ಉಣಿಸಿದ. ಆದರೆ ಆ ಸಿರಿವಂತನ ತೋಟದಲ್ಲಿ ಓರ್ವ ಸಂತರು ಬಂದು ಭಗವಂತನ ಸೃಷ್ಟಿ ಸೌಂದರ್ಯವನ್ನು ಅನುಭವಿಸುತ್ತಿದ್ದರು. ಸಿರಿವಂತನು ಆ ಸಂತರನ್ನು ಕಂಡು ಪೂಜ್ಯರೇ, ಒಳಗೆ ಬನ್ನಿ, ಇಲ್ಲೊಂದು ಲಕ್ಷಾಂತರ ಬೆಲೆಕೊಟ್ಟು ತಂದಿರುವ ಹೂವಿನ ಚಿತ್ರವಿದೆ ನೋಡಬನ್ನಿ'' ಎಂದು ಕರೆದ. ಸಂತರು ಹೇಳಿದರು- “ಸಿರಿವಂತನೆ, ನೀನು ಲಕ್ಷಾಂತರ ಹಣ ತೆತ್ತು ತಂದಿರುವ ಹೂವು ನಿರ್ಜಿವ. ನಾನು ಅನುಭವಿಸುತ್ತಿರುವ ದೇವನು ನಿರ್ಮಿಸಿರುವ ಈ ಅಮೂಲ್ಯವಾದ ಹೂವು ಸಜೀವ !! ಸಚೇತನ !! ಆ ಮಹಾದೇವನ ಅಭಿವ್ಯಕ್ತರೂಪ !!'' ಆ ಸಂತರ ಈ ಅನುಭವದ ಮಾತು ಕೇಳಿ ಸಿರಿವಂತನ ಕಣ್ಣು ತೆರೆದಿತ್ತು!! ಅನುಭವದಿಂದ ಜೀವನ ಸಿರಿವಂತವಾಗುತ್ತದೆ ವಿನಾ ಕೇವಲ ಗಳಿಕೆಯಿಂದಲ್ಲ ಎಂಬುದು ತಿಳಿದಿತ್ತು.

ಓರ್ವ ಸಿರಿವಂತ ಆಯುಷ್ಯದ ಉದ್ದಕ್ಕೂ ಗಳಿಸಿ ಗಳಿಸಿ ಕೋಟ್ಯಾದೀಶನಾದ, ಒಂದು ಬಿಡಿ ಕಾಸನ್ನೂ ಸತ್ಕಾರ್ಯಕ್ಕೆ ಬಳಸಲಿಲ್ಲ. ಒಂದು ದಿನ ಎದೆ ನೋಯುತ್ತದೆಂದು ವೈದ್ಯರ ಬಳಿಗೆ ಹೋದ. ವೈದ್ಯರು ಹೇಳಿದರು. ಸಿರಿವಂತರೆ, ನಿಮ್ಮ ಹೃದಯವು ನಿಮಗಾಗಿ ದುಡಿದು ದುಡಿದು ದಣಿದಿದೆ. ಈಗ ಅದು ಶಾಶ್ವತವಾಗಿ ವಿಶ್ರಾಂತಿ ಪಡೆಯಲಿದೆ !!” ವೈದ್ಯರ ಮಾತು ಕೇಳಿ ಸಿರಿವಂತನ ಕಣ್ಣು ತೆರೆದಿತ್ತು. ನಾನು ಬರೀ ಗಳಿಸಿದೆ. ನನಗಾಗಿ ನನ್ನವರಿಗಾಗಿ ಬಳಸಲಿಲ್ಲ. ಅನುಭವಿಸಲಿಲ್ಲ. ಆನಂದಿಸಲಿಲ್ಲ! ಎಂಬ ಅರಿವಾಗಿತ್ತು. ಆದರೆ ಕಾಲ ಮಿಂಚಿತ್ತು. ಹೃದಯ ನಿಂತಿತ್ತು!!

ನಮ್ಮ ಬದುಕಿನಲ್ಲಿರುವ ಈ ಜ್ಞಾನಾಂಗ, ಕ್ರಿಯಾಂಗ, ಅನುಭಾವಾಂಗ ಸರಿಸಮನಾಗಿ ಬೆಳೆಯಬೇಕು, ಅದು ಆದರ್ಶ ಅನುಕರಣೀಯ ಬದುಕು, ಇಂಥ ಬದುಕನ್ನು ಸಾಗಿಸಿದವರು ನಮಗೆಲ್ಲ ಆದರ್ಶರು. ನೆಪೋಲಿಯನ್ ಬೋನಾಪಾರ್ಟ ಪ್ರಾನ್ಸ್ ದೇಶದ ದೊರೆ. ಶಾಲಾ ಬಾಲಕನಿದ್ದಾಗ ಶಾಲೆಯ ಎದುರಿನ ಹಣ್ಣು ಮಾರುವ ಅಂಗಡಿಯ ಅಜ್ಜಿಯಿಂದ ಹಣ್ಣನ್ನು ತೆಗೆದುಕೊಂಡು ತಿಂದಿದ್ದ, ಆದರೆ ಆಗ ಅವನಲ್ಲಿ ಅದಕ್ಕೆ ಕೊಡುವಷ್ಟು ಹಣವಿಲ್ಲದ್ದರಿಂದ ನಂತರ ಕೊಡುತ್ತೇನೆಂದು ಹೇಳಿದ್ದ. ಅದು ಉಳಿದು ಹೋಗಿತ್ತು. ಮುಂದೆ ಪ್ರಾನ್ಸ್ ದೇಶದ ದೊರೆಯಾದಾಗ ಆ ಹಣ್ಣು ಮಾರುವ ಅಂಗಡಿಗೆ ಸ್ವತಃ ಹೋಗಿ ಸಾಕಷ್ಟು ಹಣವನ್ನು ಕೊಟ್ಟು ಧನ್ಯವಾದ ಹೇಳಿದಾಗ, ಆ ಹಣ್ಣು ಮಾರುವ ಅಜ್ಜಿಗೆ ತನ್ನ ಕಣ್ಣನ್ನೇ ತಾನು ನಂಬದಾದಳು. ದೇಶದ ದೊರೆಯ ಪ್ರಾಮಾಣಿಕತೆ ಸರಳತೆ ಸೌಜನ್ಯತೆ ಕಂಡು ಅವಳು ಮೂಕ ವಿಸ್ಮಿತಳಾದಳು. ಅವಳ ಕಂಗಳಿಂದ ಆನಂದ ಭಾಷ್ಪ ಧಾರೆ ಇಟ್ಟಿತು. ಅವಳಲ್ಲಿ ಜೀವಮಾನದ ಧನ್ಯತೆಭಾವ ಮೂಡಿತು! ಇಂಥ ಆದರ್ಶ ಪುರುಷನ ಜೀವನಗಂಗೆಯು ಎಂದೆಂದಿಗೂ ಆದರ್ಶ, ಅನುಕರಣೀಯ!

ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳವರ ಪ್ರವಚನಗಳು

ವಂದನೆಗಳೊಂದಿಗೆ

Saturday, May 7, 2022

ದ್ವೇಷ, ಉದ್ವೇಗಕ್ಕಿಂತ ಪ್ರೀತಿ ಸಹನೆ ದೊಡ್ಡವು.

ಒಂದು ರಾತ್ರಿ ಒಬ್ಬ ಬಡಿಗನ ಅಂಗಡಿಯಲ್ಲಿ ಒಂದು ಹಾವು ಬಂತು.

ಅದು ಕತ್ತಲೆಯಲ್ಲಿ ಹರಿದಾಡುತ್ತಿದಂತೆ ಗರಗಸದ ಹತ್ತಿರ ಸುಳಿಯಿತು, ಗರಗಸದ ಮೊನಚಾದ ಒಂದು ಹಲ್ಲಿಗೆ ಅದರ ಬಾಲ ತಾಗಿ ಸ್ವಲ್ಪ ಗಾಯವಾಯಿತು, ತಕ್ಷಣವೇ ಅದು ತಿರುಗಿ ಗರಗಸವನ್ನು ಕಡಿಯಲು ಪ್ರಯತ್ನಿಸಿತು, ಅದರಿಂದ ಹಾವಿನ ಬಾಯಿಗೆ ಗಾಯವಾಯಿತು, ಗಾಯದಿಂದ ವಿಚಲಿತವಾದ ಹಾವು ಕೋಪದಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ತಿಳಿಯದೇ, ಗರಗಸ ತನ್ನನ್ನು ಕಚ್ಚುತ್ತಿದೆ ಎಂದು ಭಾವಿಸಿತು, ಗರಗಸವನ್ನು ಉಸಿರುಗಟ್ಟಿಸಿ ಸಾಯಿಸುವ ಉದ್ದೇಶದಿಂದ ಅದು ಗರಗಸವನ್ನು ಸುತ್ತಿಕೊಳ್ಳಲು ಶುರುಮಾಡಿತು, ಗಾಯ ಹೆಚ್ಚಾದಂತೆ ಗರಗಸವನ್ನು ಮತ್ತಷ್ಟು ಶಕ್ತಿ ಮೀರಿ ಬಿಗಿಯಾಗಿಸಿತು, ಆದರೇ ಮೈಯೆಲ್ಲಾ ಗಾಯವಾಗಿದ್ದು ಹಾವಿಗೆ ಹೊರತು, ಗರಗಸಕ್ಕೇನೂ ಆಗಲಿಲ್ಲ, ಗಾಯದಿಂದ ಅತೀ ಯಾದ ರಕ್ತಸ್ರಾವವಾಗಿ ಹಾವು ಸತ್ತೇಹೋಯಿತು..

ಹೀಗೆ

ಒಮ್ಮೊಮ್ಮೆ ನಮಗೆ ತೊಂದರೆ ಮಾಡಿದವರನ್ನು ಶಿಕ್ಷಿಸುವ ಭರದಲ್ಲಿ ನಾವು ಉದ್ವೇಗಗೊಳ್ಳುತ್ತೇವೆ. ಕೋಪದಲ್ಲಿ ಪ್ರತಿಕ್ರಿಯಿಸಿ ಅವರಿಗೆ ಹಾನಿ ಮಾಡಲು ಪ್ರಯತ್ನಿಸುತ್ತೇವೆ. ಆದರೆ ನಿಜವಾಗಿಯೂ ನಾವು ನಮಗೇ ಶಿಕ್ಷಿಸಿಕೊಂಡಿರುತ್ತೇವೆ, ನಮಗೇನೆ ಹಾನಿಯಾಗಿರುತ್ತದೆ.

ಕೆಲ ಅಹಿತಕರ ಘಟನೆಗಳನ್ನು, ಕೆಲವು ನಮಗಾಗದ ವ್ಯಕ್ತಿಗಳನ್ನು, ಅವರ ಕಟು ಮಾತುಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು.
ನಮಗಾದ ಕ್ಷಣಿಕ ನೋವಿನಿಂದ ನಾವು ತಪ್ಪು ಹೆಜ್ಜೆಇಟ್ಟು ಪರಿತಪಿಸುವಂತೆ ಆಗಬಾರದು.

ದ್ವೇಷ, ಉದ್ವೇಗಕ್ಕಿಂತ ಪ್ರೀತಿ ಸಹನೆ ದೊಡ್ಡವು.
Dgns
ವಂದನೆಗಳೊಂದಿಗೆ

Wednesday, April 27, 2022

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿದರೆ ಪಾಪ ಮತ್ತು ದರಿದ್ರ ವನ್ನು ಮನೆಗೆ ಒಟ್ಟಿಗೆ ನೀವೇ ತೆಗೆದುಕೊಂಡು ಹೋದಂತೆ!

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿದರೆ ಪಾಪ ಮತ್ತು ದರಿದ್ರ ವನ್ನು ಮನೆಗೆ ಒಟ್ಟಿಗೆ ನೀವೇ ತೆಗೆದುಕೊಂಡು ಹೋದಂತೆ! 

ಈ ವರ್ಷ ಮತ್ತೆ ಅಕ್ಷಯ ತೃತೀಯ ಬರುತ್ತಿದೆ (May 3). ಆಗಲೇ ಬಂಗಾರದ ಅಂಗಡಿಗಳು ಭಾರಿ ಆಫರ್ ಗಳನ್ನು ಕೊಡಲು ಆರಂಭಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಟಿವಿಗಳಲ್ಲಿ ಬ್ರಹ್ಮಾಂಡ ಬೃಹಸ್ಪತಿಗಳು ಬಂದು ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡುವುದರಿಂದ ಮಹಾಲಕ್ಷ್ಮಿ ಮನೆಗೆ ಹೇಗೆ ಬರುತ್ತಾಳೆ ಅಂತ ಪುಂಖಾನುಪುಂಖವಾಗಿ ಪುಗುತ್ತಾರೆ. ನೆನಪಿಡಿ ಈ ಕಾರ್ಯಕ್ರಮಗಳನ್ನು ಸ್ಪಾನ್ಸರ್ ಮಾಡುವುದು ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳೇ!ಗೋಲ್ಡ್ ಶೋರೂಮ್ ಗಳಂತೂ ಭರ್ಜರಿ ಆಫರ್ ಜೊತೆಗೆ ಅದೃಷ್ಟ ಲಕ್ಷ್ಮಿಯನ್ನು ನಿಮ್ಮ ಮನೆಗೆ ಇವರೇ ಖುದ್ದು ಕಳಿಸಿಕೊಡುವವರಂತೆ ವರ್ತಿಸುತ್ತಾರೆ. 

ಒಂದು ಚೂರು ಯೋಚನೆ ಮಾಡಿ ನೋಡಿ...ಒಂದು ಹದಿನೈದು ಇಪ್ಪತ್ತು ವರ್ಷ ಹಿಂದಕ್ಕೆ ಹೋಗಿ. ಆಗ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳು ಇರಲಿಲ್ಲ, ಖಾಸಗಿ ಟಿವಿ ಚಾನಲ್ ಗಳು ದೊಡ್ಡದಾಗಿರಲಿಲ್ಲ...ಬ್ರಹ್ಮಾಂಡ ಬೃಹಸ್ಪತಿಗಳು ಟಿವಿಗಳಲ್ಲಿ ಕಾಣುತ್ತಿರಲಿಲ್ಲ.ಜನರು ಮುಗಿದು ಬಿದ್ದು ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿ ಕೂಡ ಮಾಡುತ್ತಿರಲಿಲ್ಲ.ಈಗಂತೂ ವಾರಕ್ಕೆ ಮೊದಲೇ ಪ್ರತಿವರ್ಷ
ಅಕ್ಷಯ ತೃತೀಯ ಕಾರ್ಯಕ್ರಮಗಳು ಪ್ರಸಾರ ಶುರುವಾಗುತ್ತದೆ. ಅಕ್ಷಯ ತೃತೀಯ ಸ್ಪೆಷಲ್ ಕಾರ್ಯಕ್ರಮಗಳ ಹಿಂದೆ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳ ಕೈವಾಡ ಇರುತ್ತದೆ. ಜ್ಯೋತಿಷ್ಯಗಳ ಮೂಲಕ ಇದೇ ದಿನ ಬಂಗಾರ ಖರೀದಿ ಮಾಡಬೇಕು. ಈ ದಿನ ಬಂಗಾರ ಖರೀದಿ ಮಾಡುವುದರಿಂದ ಅಕ್ಷಯ ಅಂದರೆ ವೃದ್ಧಿಸುತ್ತದೆ ಎಂಬ ಭಾವನೆಯನ್ನು ಬಿತ್ತುತ್ತಿದ್ದಾರೆ.
ತಿಂಗಳಿಗೆ ಮೊದಲೇ ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿಗೆ ಮುಂಗಡ ಬುಕಿಂಗ್ ಗೋಲ್ಡ್ ಶೋರೂಮ್ ಗಳು ಆರಂಭಿಸುತ್ತವೆ. ಬೃಹಸ್ಪತಿ ಗಳ ಮಾತನ್ನು ನಂಬಿಕೊಂಡು
ಅದೆಷ್ಟೋ ಮಧ್ಯಮವರ್ಗದವರು ಸಾಲಸೋಲ ಮಾಡಿ ಇದೇ ದಿನ ಬಂಗಾರ ಖರೀದಿಗೆ ಮುಗಿದು ಬೀಳುತ್ತಿದ್ದಾರೆ. 

ಇಷ್ಟಕ್ಕೂ ಅಕ್ಷಯ ತೃತೀಯ ಎಂದರೇನು?

ವೈಶಾಖ ಮಾಸದ ಶುಕ್ಲಪಕ್ಷದ ಮೂರನೆಯ ದಿನವನ್ನು ಅಕ್ಷಯ ತೃತೀಯ ಅಂತ ಕರೆಯುತ್ತಾರೆ. 'ಅಕ್ಷಯ' ಎಂದರೆ ಸದಾ ವೃದ್ಧಿಯಾಗುವುದು, ಎಂದಿಗೂ ಕೂಡ ಕರಗದೆ ಇರುವ ಸಂಪತ್ತು ಎಂಬ ಅರ್ಥ ಕೊಡುತ್ತದೆ. ಅಕ್ಷಯ ತೃತೀಯ ಎಂದರೆ ದಾನ ಮಾಡುವ ದಿನ. ಹೌದು ನಮ್ಮ ಬಳಿಯಲ್ಲಿ ಇರುವಂತಹ ಧವಸ-ಧಾನ್ಯಗಳು ಜೊತೆಗೆ ಬಡವರಿಗೆ ಬಟ್ಟೆಗಳನ್ನುದಾನ ಮಾಡುವ ಮೂಲಕ ಪುಣ್ಯವನ್ನು ಅಕ್ಷಯ ಮಾಡಿಕೊಳ್ಳುವ ದಿನ.

ಅಕ್ಷಯ ತೃತೀಯ ದಿನ ಮಾಡಬೇಕಾದದು ಬರೀ ದಾನ... ದಾನ...ದಾನ...ಈ ದಿನ ತನ್ನಲ್ಲಿರುವ  ಸಂಪತ್ತನ್ನು  ಬಡವರಿಗೆ -ಅಸಹಾಯಕರಿಗೆ ದಾನ ಮಾಡುವುದರಿಂದ ಪುಣ್ಯ ದಕ್ಕಿ ಅದರಿಂದ ದಾನ ಮಾಡಿದವರ ಬದುಕಿನಲ್ಲಿ,
ಕುಟುಂಬಗಳಲ್ಲಿ ಸಂತೋಷ ನೆಮ್ಮದಿ ಶಾಂತಿ ಮತ್ತು ಆರೋಗ್ಯಗಳು ಅಕ್ಷಯವಾಗಲಿ ಎಂಬ ಸದುದ್ದೇಶ 'ಅಕ್ಷಯ ತೃತೀಯ' ದಿನದ ಆಚರಣೆಯ ಹಿನ್ನೆಲೆಯಲ್ಲಿ ಇರುವಂತಹದು. ಅಕ್ಷಯ ತೃತೀಯ ದಿನ ನೀವು ಬಡಬಗ್ಗರು, ನಿರ್ಗತಿಕರಿಗೆ ಅಸಹಾಯಕರಿಗೆ ಏನನ್ನು ದಾನ ರೂಪದಲ್ಲಿ (ಅನ್ನ-ನೀರು, ದವಸ-ಧಾನ್ಯ, ಹಣ ಹೀಗೆ) ನೀವು ಏನನ್ನು ನೀಡಿದರೂ ಅದು ನಿಮಗೆ ಮತ್ತೆ ಅಕ್ಷಯವಾಗಲಿ ಎಂಬ ಹಾರೈಕೆಯ ಹಿನ್ನೆಲೆ ಅಕ್ಷಯ ತೃತೀಯ ಆಚರಣೆ.

ಅಕ್ಷಯ ತೃತೀಯ ದಿನ ಮುಖ್ಯವಾಗಿ ಮೂರು ದಾನಗಳನ್ನು ಮಾಡುತ್ತಿದ್ದರು.

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಆಚರಣೆಗೂ ಒಂದು ವೈಜ್ಞಾನಿಕ ಕಾರಣಗಳಿವೆ. ಆಚರಣೆಗಳ ಒಳಗೆ ಮಡಿ-ಮೈಲಿಗೆ-ಕಂದಾಚಾರಗಳು ಪ್ರವೇಶಮಾಡಿ ಅರ್ಥಗಳು  ಕಳೆದುಹೋಗಿ ಅನರ್ಥಗಳು ಮಾತ್ರ ಉಳಿದು ಹೋಗಿವೆ. ಇದರಿಂದ ಅಕ್ಷಯತೃತಿಯ ಕೂಡ ಹೊರತಾಗಿಲ್ಲ. 

ಅಕ್ಷಯ ತೃತೀಯ ವೈಶಾಖ ಮಾಸದಲ್ಲಿ ಬರುತ್ತದೆ ಅಂದರೆ ಸುಡುಬಿಸಿಲಿನ ಕಾಲ. ಹೀಗಾಗಿ ದಾನದ ರೂಪದಲ್ಲಿ ಬಡವರಿಗೆ ಮತ್ತು ಅಸಹಾಯಕ ನಿರ್ಗತಿಕರಿಗೆ ನೀರಿನ (ಮಣ್ಣಿನ) ಮಡಿಕೆ ಈ ದಿನ ದಾನದ ರೂಪದಲ್ಲಿ ನೀಡುತ್ತಿದ್ದರು. ಜೊತೆಗೆ ಮತ್ತೊಂದು ವಿಶಿಷ್ಟವಾದದ್ದು ಅಂದರೆ ಸುವಾಸನಾಭರಿತವಾದ ನೀರಿನ ದಾನ. ಹೌದು ಹೇಗೆ ನಾವು ಈಗ ರಾಮನವಮಿಗೆ  ಪಾನಕ -ಹೆಸರುಬೇಳೆ ಕೊಡುತ್ತೇವೆ ಹಾಗೆ ಹಿಂದಿನ ಕಾಲದಲ್ಲಿ ಅಕ್ಷಯತೃತಿಯ ದಿನ ಬಿಸಿಲಿಗೆ ಬಳಲಿ ಬೆಂಡಾಗಿದ್ದ ಸಾಮಾನ್ಯರಿಗೆ ರಸ್ತೆ ಬದಿಯಲ್ಲಿ ನಿಂತು ಸುವಾಸನಾಭರಿತವಾದ ನೀರನ್ನು ನೀಡುತ್ತಿದ್ದರು. (ನೀರನ್ನು ದಾನದ ರೂಪದಲ್ಲಿ ನೀಡುವುದಕ್ಕೆ ಬಹುಮುಖ್ಯ ಕಾರಣವೆಂದರೆ ಮನುಷ್ಯನಿಗೆ ಆಹಾರವಿಲ್ಲದೆ ಹೋದರೂ ಪರವಾಗಿಲ್ಲ ಆದರೆ ನೀರು ಇದ್ದರೆ ಮಾತ್ರ ಜೀವ. ಸತ್ತು ಸ್ವರ್ಗದ ದಾರಿಯಲ್ಲಿ ನಡೆಯಬೇಕಾದ ಕೂಡ ಮುಂದೆ ನೀರಿನ ಹಾಹಾಕಾರ ಬರೆದೆ ಇರಲಿ ಎಂದು ನೀರನ್ನು ದಾನದ ರೂಪದಲ್ಲಿ ಕೊಡುತ್ತಿದ್ದರು)

ಅಷ್ಟಕ್ಕೂ ಸುವಾಸನಾಭರಿತವಾದ ನೀರು ಹೇಗೆ ತಯಾರು ಮಾಡುತ್ತಿದ್ದರು ಗೊತ್ತೇ?

ಅಕ್ಷಯ ತೃತೀಯ ಹಿಂದಿನ ದಿನ ಮಾರುಕಟ್ಟೆಯಿಂದ ಹೊಸದಾದ ನೀರಿನ ಮಡಿಕೆಯನ್ನು ತೆಗೆದುಕೊಂಡು ಬಂದು ಅದನ್ನು ಶುದ್ಧವಾಗಿ ತೊಳೆದು ಅದರ ತುಂಬಾ ಕುಡಿಯುವ ನೀರನ್ನು ಹಾಕಿ, ಒಂದೆರಡು ಲವಂಗ- ಏಲಕ್ಕಿ- ಜಾಜಿಕಾಯಿ- ಜಾಪತ್ರೆ-ಪಚ್ಚ (ಹಸಿ)ಕರ್ಪೂರಮತ್ತು ಕಸ್ತೂರಿ ಇದನ್ನೆಲ್ಲವನ್ನು ಒಟ್ಟಿಗೆ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಂಡು ಮಡಿಕೆ ಒಳಗಿನ ಕುಡಿಯುವ ನೀರಿನ ಒಳಗೆ ಹಾಕುತ್ತಾರೆ. ಅದನ್ನು ಮುಚ್ಚಳದಿಂದ ಚೆನ್ನಾಗಿ ಮುಚ್ಚಿಡುತ್ತಾರೆ. ಬೆಳಗ್ಗೆ ಮುಚ್ಚಳವನ್ನು ತೆರೆದಾಗ ಕುಡಿಯುವ ನೀರು ಸುವಾಸನಾಭರಿತವಾಗಿರುತ್ತದೆ ಮತ್ತು ಅದು ಶಕ್ತಿಯುತ ಮತ್ತು ಆರೋಗ್ಯವಂತವಾದ ಪಾನೀಯವಾಗುತ್ತದೆ. ಈ ಸುವಾಸನಾಭರಿತ ವಾದ ನೀರನ್ನು ತೆಗೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತು ಸುಡುಬಿಸಿಲಿನಲ್ಲಿ ನಡೆದು ಹೋಗುತ್ತಿರುವ ದಾರಿಹೋಕರಿಗೆ ನೀಡುವ ಮೂಲಕ ಅವರ ಸಂತೋಷಪಡಿಸಿ ತಾವು ಸಂತೃಪ್ತರಾಗಿದ್ದರು.

ಇನ್ನು ಇದೇ ಸಮಯದಲ್ಲಿ ಇನ್ನು ಎರಡು ಮುಖ್ಯ ದಾನಗಳನ್ನು ಕೂಡ ಮಾಡುತ್ತಿದ್ದರು. ಒಂದು ಬಿಸಿಲಿನ ಕಾರಣಕ್ಕಾಗಿ ಪಾದರಕ್ಷೆಗಳು ಇನ್ನೊಂದು ಕೊಡೆಯನ್ನು ಕೂಡ ದಾನದ ರೂಪದಲ್ಲಿ ನೀಡುತ್ತಿದ್ದರು. ಬಡವರು-ನಿರ್ಗತಿಕರಿಗೆ ದಾನದ ರೂಪದಲ್ಲಿ ಇದೆಲ್ಲವನ್ನೂ ನೀಡುವುದರಿಂದ ತಮ್ಮ ಜೀವನದಲ್ಲಿ ಪುಣ್ಯ -ಸಂತೋಷ- ನೆಮ್ಮದಿಗಳು ಅಕ್ಷಯವಾಗುತ್ತದೆ ಎಂಬ ನಂಬಿಕೆ ಅಂದಿನ ಜನರಲ್ಲಿತ್ತು.
ಅಕ್ಷಯ ತೃತೀಯ ಅರ್ಥವೇ ದಾನ...

ಬಂಗಾರ ಖರೀದಿ ಮಾಡಿದರೆ ದರಿದ್ರವನ್ನು ಮನೆಗೆ ತೆಗೆದುಕೊಂಡು ಹೋದಂತೆ!

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ಯಾವ ಶಾಸ್ತ್ರದಲ್ಲೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ನೆನಪಿಡಬೇಕಾದ ವಿಷಯವೆಂದರೆ ಇದು ಕಲಿಯುಗ, ಕಲಿಪುರುಷ ಇನ್ನಿಲ್ಲದಂತೆ ಜನರನ್ನು ಹಿಂಸಿಸುತ್ತಾನೆ ಮತ್ತು ಕಾಡುತ್ತಾನೆ. ಕಲಿಪುರುಷನ ವಾಸಸ್ಥಾನದಲ್ಲಿ ಮೊದಲನೆಯದು ಬಂಗಾರ. ಹೀಗಾಗಿ ನಿಮ್ಮ ಮನೆಯಲ್ಲಿ ಎಷ್ಟು ಬಂಗಾರವಿರುತ್ತದೆ ಅಷ್ಟು ಅಶಾಂತಿ ಮನೆಮಾಡಿರುತ್ತದೆ. ಮನೆಗೆ ಕನ್ನ ಹಾಕುವ ಕಳ್ಳರು ಕೂಡ ಮೊದಲು ದೋಚುವುದು ಕೂಡ ದರಿದ್ರ ಬಂಗಾರವನ್ನೆ. ಅಂತಹ ಬಂಗಾರವನ್ನು ನೀವು ಅಕ್ಷಯ ತೃತೀಯ ದಿನ ಖರೀದಿ ಮಾಡಿದರೆ ಕಲಿಪುರುಷನ ಪ್ರವೇಶ ನಿಮ್ಮ ಮನೆಗೆ ಆಗುತ್ತದೆ. ಮನೆಯಲ್ಲಿ ಅಶಾಂತಿ, ನಿತ್ಯ ಗಲಾಟೆಗಳು,ರಂಪಾಟಗಳು ಅಕ್ಷಯವಾಗುತ್ತದೆ. 

ನಿಮ್ಮ ಬಳಿ ಹಣವಿದ್ದಾಗ ಬಂಗಾರವನ್ನು ಖರೀದಿ ಮಾಡಿ ಆದರೆ ಯಾವನೋ ಟಿವಿಯಲ್ಲಿ ಬೃಹಸ್ಪತಿ ಹೇಳಿದ ಅಂತ ಹೇಳಿ ಅಪ್ಪಿತಪ್ಪಿ ಕೂಡ ಅಕ್ಷಯ ತೃತೀಯ ದಿನ ಸಾಲ ಮಾಡಿ ಬಂಗಾರದ  ಖರೀದಿ ಮಾಡಿ ಸಂಕಷ್ಟಗಳಿಗೆ ಸಿಲುಕಬೇಡಿ. ಅಕ್ಷಯ ತೃತೀಯ ದಿನ ನೀವು ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋದರೆ ಮುಂದಿನ ಅಕ್ಷಯತೃತೀಯ ದಿನದವರೆಗೂ ನಿಮ್ಮ ಮನೆಯಲ್ಲಿ ಕಲಿ ಪುರುಷ ಸ್ಥಿರನಾಗುತ್ತಾನೆ.ಅಶಾಂತಿಯ ಗೂಡು ನಿಮ್ಮ ಮನೆಯಾಗುತ್ತದೆ, ನೆಮ್ಮದಿಯ ನಿದ್ದೆ ಹೋಗುತ್ತದೆ, ಅಪಮಾನಗಳು ಎದುರಾಗುತ್ತದೆ...ಹೀಗಾಗಿ ಆಯ್ಕೆ ನಿಮ್ಮದು!

ಅಕ್ಷಯ ತೃತೀಯ ದಿನದಂದು ಸಾಧ್ಯವಾದರೆ ಯಾವುದಾದರೂ ಒಂದು ಅನಾಥಾಶ್ರಮದ ಮಕ್ಕಳಿಗೆ  ಊಟ ಹಾಕಿಸಿ, ಪರಿಸರ ಸಂರಕ್ಷಿಸಲು ಒಂದು ಗಿಡ ನೆಡಿ. ಸಾಧ್ಯವಾದಷ್ಟು ಒಳ್ಳೆಯ ವಿಷಯಗಳನ್ನು ಒಳ್ಳೆಯತರದಲ್ಲಿ  ಬದುಕಿನ ಆಲೋಚನೆಗಳನ್ನು ಮಾಡಿ ಇದರಿಂದ ಬದುಕು ಅಕ್ಷಯವಾಗುತ್ತದೆ.
💐💐💐💐💐💐💐💐💐
 ಚಿನ್ನವೇ ಬದುಕಲ್ಲ
ಬದುಕೇ   ಚಿನ್ನ. 
🌹🌹🌹🌹🌹🌹🌹🌹🌹

Tuesday, April 26, 2022

ವೈದ್ಯೋ ನಾರಾಯಣ ಹರಿ.

🇳🇪🇳🇪🇳🇪🇳🇪🇳🇪
*( ಆಧುನಿಕ ರಾಕ್ಷಸರ ಬಗ್ಗೆ  ಒಬ್ಬ ವೈದ್ಯ ಬಹಳ ಅರ್ಥಪೂರ್ಣವಾಗಿ ಬರೆದಿದ್ದಾರೆ ಒಮ್ಮೆ ಓದಿ...)

*ಕಪ್ಪು ಹಣ ಸಂಪಾದಿಸುವ ಮಾರ್ಗಗಳು ಕೊನೆಗೊಳ್ಳಬೇಕು......*

_ನಾನು ವೈದ್ಯ, ಅದಕ್ಕಾಗಿಯೇ_
_ನಾನು ಎಲ್ಲಾ ಪ್ರಾಮಾಣಿಕ_ _ವೈದ್ಯರಲ್ಲಿ ಕ್ಷಮೆಯಾಚಿಸುತ್ತೇನೆ_........ 

*ಹೃದಯಾಘಾತ* ನಡೆದಿದೆ ವೈದ್ಯರು ಹೇಳುತ್ತಾರೆ - *ಸ್ಟ್ರೆಪ್ಟೋಕಿನೇಸ್*  ಚುಚ್ಚುಮದ್ದು ನೀಡಿ ... 9,000 /- ರೂ . ಇಂಜೆಕ್ಷನ್‌ನ ನಿಜವಾದ ವೆಚ್ಚ ರೂ. 700 /- ರಿಂದ 900 /- ರೂ., ಆದರೆ MRP ರೂ.  9,000 /- !  ನೀವೇನು ಮಾಡುವಿರಿ ?...

*ಟೈಫಾಯಿಡ್* ಬಂತು
  ವೈದ್ಯರು ಬರೆದರು . ಒಟ್ಟು 14 *ಮೊನೊಸೆಫ್* ತೆಗೆದುಕೊಳ್ಳಿ!  ಸಗಟು ಬೆಲೆ ರೂ.25 /=  ಆಸ್ಪತ್ರೆಯ ರಸಾಯನಶಾಸ್ತ್ರಜ್ಞ ರೂ.53 / = ಕೊಡುತ್ತಾನೆ . ಏನು ಮಾಡುತ್ತೀರಿ ??...

ಕಿಡ್ನಿ ವೈಫಲ್ಯ .ಮೂರು ದಿನಕ್ಕೆ ಒಮ್ಮೆ ಡಯಾಲಿಸಿಸ್ ಮಾಡ್ತಾರೆ .., ಡಯಾಲಿಸಿಸ್ ಮಾಡಿ ಇಂಜೆಕ್ಷನ್ ಕೊಡ್ತಾರೆ . MRP 1800 ರೂ.  
ನಾನು ಅದನ್ನು ಸಗಟು ಮಾರುಕಟ್ಟೆಯಿಂದ ತೆಗೆದುಕೊಳ್ಳುತ್ತೇನೆ ಎಂದು ನೀವು ಭಾವಿಸುತ್ತೀರಿ...! 

ಭಾರತದಾದ್ಯಂತ ಹುಡುಕಿದರೂ ಎಲ್ಲಿಯೂ ಸಿಗಲ್ಲ... ಏಕೆ ?  
ಕಂಪನಿಯ ಸರಬರಾಜು ವೈದ್ಯರಿಗೆ ಮಾತ್ರ !!  
ಚುಚ್ಚುಮದ್ದಿನ ಮೂಲ ಬೆಲೆ 500 / -,  ಆದರೆ ವೈದ್ಯರು ತಮ್ಮ ಆಸ್ಪತ್ರೆಯಲ್ಲಿ MRP 1,800 /-
 ಏನು ಮಾಡುತ್ತೀರಿ ??...

*ಸೋಂಕು* ಉಂಟಾಗಿದೆ.ವೈದ್ಯರು ಬರೆದ ಆ್ಯಂಟಿಬಯೋಟಿಕ್ ರೂ.540/-
ಅದೇ ಬೇರೆ ಕಂಪನಿಯಿಂದ 150 /- ಮತ್ತು ಜೆನೆರಿಕ್ ರೂ 45 /-
ಆದರೆ ರಸಾಯನಶಾಸ್ತ್ರಜ್ಞ ನಿರಾಕರಿಸುತ್ತಾನೆ. ನಾವು ಯಾವುದೇ ಜೆನೆರಿಕ್ ನೀಡುವುದಿಲ್ಲ .., 
ವೈದ್ಯರ ಪ್ರಿಸ್ಕ್ರಿಪ್ಷನ್ ಅನ್ನು ಮಾತ್ರ ನೀಡುತ್ತೇವೆ ... 
ಅಂದರೆ 540 /- ನೀವೇನು ಮಾಡುವಿರಿ...??

ಮಾರುಕಟ್ಟೆಯಲ್ಲಿ  ಅಲ್ಟ್ರಾಸೌಂಡ್ ಪರೀಕ್ಷೆಯು ರೂ.  750 /- , ಟ್ರಸ್ಟ್ ಫಾರ್ಮಸಿ ರೂ.  240 /- ರೂ.750 ರಲ್ಲಿ ವೈದ್ಯರ ಕಮೀಷನ್ 300 /- ರೂ.....!
 
MRI ನಲ್ಲಿ ವೈದ್ಯರ ಕಮಿಷನ್ ರೂ.  2,000 /- ದಿಂದ 3,000/-
ವೈದ್ಯರು ಮತ್ತು ಆಸ್ಪತ್ರೆಗಳ ಈ ದರೋಡೆ, ಅತಿರಂಜಿತ, ನಿರ್ಭೀತ, ನಿರ್ಭೀತ ಭಾರತ ದೇಶದಲ್ಲಿ ನಡೆಯುತ್ತಿದೆ...!

ದೇಶವನ್ನು ನೇರವಾಗಿ ಒತ್ತೆ ಇಡುವಷ್ಟು ಔಷಧ ಕಂಪನಿಗಳ ಲಾಬಿ ಪ್ರಬಲವಾಗಿದೆ....!

ವೈದ್ಯರು ಮತ್ತು ಔಷಧೀಯ ಕಂಪನಿಗಳು ಇದರಲ್ಲಿ ಶಾಮೀಲು!  ಇಬ್ಬರೂ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ...!!  

ದೊಡ್ಡ ಪ್ರಶ್ನೆ ...
ಮಾಧ್ಯಮಗಳು ಹಗಲು ರಾತ್ರಿ ಏನು ತೋರಿಸುತ್ತವೆ ?  

ಹಳ್ಳಕ್ಕೆ ಬಿದ್ದ ರಾಜಕುಮಾರ, ಡ್ರೈವರ್ ಲೆಸ್ ಕಾರು, ರಾಕಿ ಸಾವಂತ್, ಬಿಗ್ ಬಾಸ್, ಅತ್ತೆ-ಮಾವ , ಕ್ರೈಂ ರಿಪೋರ್ಟ್, ಕ್ರಿಕೆಟಿಗನ ಗೆಳತಿ ಇದನ್ನೆಲ್ಲ ತೋರಿಸುತ್ತಾರೆ...

ಆದರೆ ...

ವೈದ್ಯರ ಕಂಪನಿಗಳು, ಆಸ್ಪತ್ರೆ ಮತ್ತು ಔಷಧೀಯ ಕಂಪನಿಗಳು ಅದರ ಸ್ಪಷ್ಟ ದರೋಡೆಯನ್ನು ಏಕೆ ತೋರಿಸುವುದಿಲ್ಲ ?

ಸಮಾಜದ ನೆರವಿಗೆ ಮಾಧ್ಯಮಗಳು ಬರದಿದ್ದರೆ ಯಾರು ಬರುತ್ತಾರೆ ?

ವೈದ್ಯಕೀಯ ಲಾಬಿಯ ಕ್ರೌರ್ಯವನ್ನು ತಡೆಯುವುದು ಹೇಗೆ ?

ಈ ಲಾಬಿ ಸರ್ಕಾರವನ್ನು ಕುಣಿಸುತ್ತಿದೆಯೇ ? 

ಮಾಧ್ಯಮಗಳು ಏಕೆ ಮೌನವಾಗಿವೆ ?

20 ರೂ ಹೆಚ್ಚು ಕೇಳಿದರೆ ಆಟೋರಿಕ್ಷಾ ಚಾಲಕನಿಗೆ,  ಹೊಡೆಯುತ್ತೀರಿ...

ವೈದ್ಯರರಿಗೆ ಏನು ಮಾಡುತ್ತೀರಿ ???

ಇನ್ನಾದರೂ " ವೈದ್ಯೋ ನಾರಾಯಣ ಹರಿ "  ಎನ್ನುವ ಮನುಕುಲಕ್ಕೆ ಮೋಸವಾಗದಿರಲಿ
   
ಇಂತಹ ಮಾನವೀಯತೆಯಿಲ್ಲದ ಕಾಳದಂಧೆಗೆ ದಿಕ್ಕಾರವಿರಲಿ.
ವಂದನೆಗಳೊಂದಿಗೆ

🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪

ಈ ವರ್ಷ ಮತ್ತೆ ಅಕ್ಷಯ ತೃತೀಯ ಬರುತ್ತಿದೆ??

ಗಂಡಸರಿಗೆ ಶುಭ ಸುದ್ದಿ:
*******************

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿದರೆ ಪಾಪ ಮತ್ತು ದರಿದ್ರ ವನ್ನು ಮನೆಗೆ ಒಟ್ಟಿಗೆ ನೀವೇ ತೆಗೆದುಕೊಂಡು ಹೋದಂತೆ! 

ಈ ವರ್ಷ ಮತ್ತೆ ಅಕ್ಷಯ ತೃತೀಯ ಬರುತ್ತಿದೆ (May 3). ಆಗಲೇ ಬಂಗಾರದ ಅಂಗಡಿಗಳು ಭಾರಿ ಆಫರ್ ಗಳನ್ನು ಕೊಡಲು ಆರಂಭಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಟಿವಿಗಳಲ್ಲಿ ಬ್ರಹ್ಮಾಂಡ ಬೃಹಸ್ಪತಿಗಳು ಬಂದು ಅಕ್ಷಯ ತೃತೀಯ ದಿನ ಬಂಗಾರ ಖರೀದಿ ಮಾಡುವುದರಿಂದ ಮಹಾಲಕ್ಷ್ಮಿ ಮನೆಗೆ ಹೇಗೆ ಬರುತ್ತಾಳೆ ಅಂತ ಪುಂಖಾನುಪುಂಖವಾಗಿ ಪುಗುತ್ತಾರೆ. ನೆನಪಿಡಿ ಈ ಕಾರ್ಯಕ್ರಮಗಳನ್ನು ಸ್ಪಾನ್ಸರ್ ಮಾಡುವುದು ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳೇ!ಗೋಲ್ಡ್ ಶೋರೂಮ್ ಗಳಂತೂ ಭರ್ಜರಿ ಆಫರ್ ಜೊತೆಗೆ ಅದೃಷ್ಟ ಲಕ್ಷ್ಮಿಯನ್ನು ನಿಮ್ಮ ಮನೆಗೆ ಇವರೇ ಖುದ್ದು ಕಳಿಸಿಕೊಡುವವರಂತೆ ವರ್ತಿಸುತ್ತಾರೆ. 

ಒಂದು ಚೂರು ಯೋಚನೆ ಮಾಡಿ ನೋಡಿ...ಒಂದು ಹದಿನೈದು ಇಪ್ಪತ್ತು ವರ್ಷ ಹಿಂದಕ್ಕೆ ಹೋಗಿ. ಆಗ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳು ಇರಲಿಲ್ಲ, ಖಾಸಗಿ ಟಿವಿ ಚಾನಲ್ ಗಳು ದೊಡ್ಡದಾಗಿರಲಿಲ್ಲ...ಬ್ರಹ್ಮಾಂಡ ಬೃಹಸ್ಪತಿಗಳು ಟಿವಿಗಳಲ್ಲಿ ಕಾಣುತ್ತಿರಲಿಲ್ಲ.ಜನರು ಮುಗಿದು ಬಿದ್ದು ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿ ಕೂಡ ಮಾಡುತ್ತಿರಲಿಲ್ಲ.ಈಗಂತೂ ವಾರಕ್ಕೆ ಮೊದಲೇ ಪ್ರತಿವರ್ಷ
ಅಕ್ಷಯ ತೃತೀಯ ಕಾರ್ಯಕ್ರಮಗಳು ಪ್ರಸಾರ ಶುರುವಾಗುತ್ತದೆ. ಅಕ್ಷಯ ತೃತೀಯ ಸ್ಪೆಷಲ್ ಕಾರ್ಯಕ್ರಮಗಳ ಹಿಂದೆ ದೊಡ್ಡ ದೊಡ್ಡ ಗೋಲ್ಡ್ ಶೋರೂಮ್ ಗಳ ಕೈವಾಡ ಇರುತ್ತದೆ. ಜ್ಯೋತಿಷ್ಯಗಳ ಮೂಲಕ ಇದೇ ದಿನ ಬಂಗಾರ ಖರೀದಿ ಮಾಡಬೇಕು. ಈ ದಿನ ಬಂಗಾರ ಖರೀದಿ ಮಾಡುವುದರಿಂದ ಅಕ್ಷಯ ಅಂದರೆ ವೃದ್ಧಿಸುತ್ತದೆ ಎಂಬ ಭಾವನೆಯನ್ನು ಬಿತ್ತುತ್ತಿದ್ದಾರೆ.
ತಿಂಗಳಿಗೆ ಮೊದಲೇ ಅಕ್ಷಯ ತೃತೀಯ ದಿನ ಗೋಲ್ಡ್ ಖರೀದಿಗೆ ಮುಂಗಡ ಬುಕಿಂಗ್ ಗೋಲ್ಡ್ ಶೋರೂಮ್ ಗಳು ಆರಂಭಿಸುತ್ತವೆ. ಬೃಹಸ್ಪತಿ ಗಳ ಮಾತನ್ನು ನಂಬಿಕೊಂಡು
ಅದೆಷ್ಟೋ ಮಧ್ಯಮವರ್ಗದವರು ಸಾಲಸೋಲ ಮಾಡಿ ಇದೇ ದಿನ ಬಂಗಾರ ಖರೀದಿಗೆ ಮುಗಿದು ಬೀಳುತ್ತಿದ್ದಾರೆ. 

ಇಷ್ಟಕ್ಕೂ ಅಕ್ಷಯ ತೃತೀಯ ಎಂದರೇನು?

ವೈಶಾಖ ಮಾಸದ ಶುಕ್ಲಪಕ್ಷದ ಮೂರನೆಯ ದಿನವನ್ನು ಅಕ್ಷಯ ತೃತೀಯ ಅಂತ ಕರೆಯುತ್ತಾರೆ. 'ಅಕ್ಷಯ' ಎಂದರೆ ಸದಾ ವೃದ್ಧಿಯಾಗುವುದು, ಎಂದಿಗೂ ಕೂಡ ಕರಗದೆ ಇರುವ ಸಂಪತ್ತು ಎಂಬ ಅರ್ಥ ಕೊಡುತ್ತದೆ. ಅಕ್ಷಯ ತೃತೀಯ ಎಂದರೆ ದಾನ ಮಾಡುವ ದಿನ. ಹೌದು ನಮ್ಮ ಬಳಿಯಲ್ಲಿ ಇರುವಂತಹ ಧವಸ-ಧಾನ್ಯಗಳು ಜೊತೆಗೆ ಬಡವರಿಗೆ ಬಟ್ಟೆಗಳನ್ನುದಾನ ಮಾಡುವ ಮೂಲಕ ಪುಣ್ಯವನ್ನು ಅಕ್ಷಯ ಮಾಡಿಕೊಳ್ಳುವ ದಿನ.

ಅಕ್ಷಯ ತೃತೀಯ ದಿನ ಮಾಡಬೇಕಾದದು ಬರೀ ದಾನ... ದಾನ...ದಾನ...ಈ ದಿನ ತನ್ನಲ್ಲಿರುವ  ಸಂಪತ್ತನ್ನು  ಬಡವರಿಗೆ -ಅಸಹಾಯಕರಿಗೆ ದಾನ ಮಾಡುವುದರಿಂದ ಪುಣ್ಯ ದಕ್ಕಿ ಅದರಿಂದ ದಾನ ಮಾಡಿದವರ ಬದುಕಿನಲ್ಲಿ,
ಕುಟುಂಬಗಳಲ್ಲಿ ಸಂತೋಷ ನೆಮ್ಮದಿ ಶಾಂತಿ ಮತ್ತು ಆರೋಗ್ಯಗಳು ಅಕ್ಷಯವಾಗಲಿ ಎಂಬ ಸದುದ್ದೇಶ 'ಅಕ್ಷಯ ತೃತೀಯ' ದಿನದ ಆಚರಣೆಯ ಹಿನ್ನೆಲೆಯಲ್ಲಿ ಇರುವಂತಹದು. ಅಕ್ಷಯ ತೃತೀಯ ದಿನ ನೀವು ಬಡಬಗ್ಗರು, ನಿರ್ಗತಿಕರಿಗೆ ಅಸಹಾಯಕರಿಗೆ ಏನನ್ನು ದಾನ ರೂಪದಲ್ಲಿ (ಅನ್ನ-ನೀರು, ದವಸ-ಧಾನ್ಯ, ಹಣ ಹೀಗೆ) ನೀವು ಏನನ್ನು ನೀಡಿದರೂ ಅದು ನಿಮಗೆ ಮತ್ತೆ ಅಕ್ಷಯವಾಗಲಿ ಎಂಬ ಹಾರೈಕೆಯ ಹಿನ್ನೆಲೆ ಅಕ್ಷಯ ತೃತೀಯ ಆಚರಣೆ.

ಅಕ್ಷಯ ತೃತೀಯ ದಿನ ಮುಖ್ಯವಾಗಿ ಮೂರು ದಾನಗಳನ್ನು ಮಾಡುತ್ತಿದ್ದರು.

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಆಚರಣೆಗೂ ಒಂದು ವೈಜ್ಞಾನಿಕ ಕಾರಣಗಳಿವೆ. ಆಚರಣೆಗಳ ಒಳಗೆ ಮಡಿ-ಮೈಲಿಗೆ-ಕಂದಾಚಾರಗಳು ಪ್ರವೇಶಮಾಡಿ ಅರ್ಥಗಳು  ಕಳೆದುಹೋಗಿ ಅನರ್ಥಗಳು ಮಾತ್ರ ಉಳಿದು ಹೋಗಿವೆ. ಇದರಿಂದ ಅಕ್ಷಯತೃತಿಯ ಕೂಡ ಹೊರತಾಗಿಲ್ಲ. 

ಅಕ್ಷಯ ತೃತೀಯ ವೈಶಾಖ ಮಾಸದಲ್ಲಿ ಬರುತ್ತದೆ ಅಂದರೆ ಸುಡುಬಿಸಿಲಿನ ಕಾಲ. ಹೀಗಾಗಿ ದಾನದ ರೂಪದಲ್ಲಿ ಬಡವರಿಗೆ ಮತ್ತು ಅಸಹಾಯಕ ನಿರ್ಗತಿಕರಿಗೆ ನೀರಿನ (ಮಣ್ಣಿನ) ಮಡಿಕೆ ಈ ದಿನ ದಾನದ ರೂಪದಲ್ಲಿ ನೀಡುತ್ತಿದ್ದರು. ಜೊತೆಗೆ ಮತ್ತೊಂದು ವಿಶಿಷ್ಟವಾದದ್ದು ಅಂದರೆ ಸುವಾಸನಾಭರಿತವಾದ ನೀರಿನ ದಾನ. ಹೌದು ಹೇಗೆ ನಾವು ಈಗ ರಾಮನವಮಿಗೆ  ಪಾನಕ -ಹೆಸರುಬೇಳೆ ಕೊಡುತ್ತೇವೆ ಹಾಗೆ ಹಿಂದಿನ ಕಾಲದಲ್ಲಿ ಅಕ್ಷಯತೃತಿಯ ದಿನ ಬಿಸಿಲಿಗೆ ಬಳಲಿ ಬೆಂಡಾಗಿದ್ದ ಸಾಮಾನ್ಯರಿಗೆ ರಸ್ತೆ ಬದಿಯಲ್ಲಿ ನಿಂತು ಸುವಾಸನಾಭರಿತವಾದ ನೀರನ್ನು ನೀಡುತ್ತಿದ್ದರು. (ನೀರನ್ನು ದಾನದ ರೂಪದಲ್ಲಿ ನೀಡುವುದಕ್ಕೆ ಬಹುಮುಖ್ಯ ಕಾರಣವೆಂದರೆ ಮನುಷ್ಯನಿಗೆ ಆಹಾರವಿಲ್ಲದೆ ಹೋದರೂ ಪರವಾಗಿಲ್ಲ ಆದರೆ ನೀರು ಇದ್ದರೆ ಮಾತ್ರ ಜೀವ. ಸತ್ತು ಸ್ವರ್ಗದ ದಾರಿಯಲ್ಲಿ ನಡೆಯಬೇಕಾದ ಕೂಡ ಮುಂದೆ ನೀರಿನ ಹಾಹಾಕಾರ ಬರೆದೆ ಇರಲಿ ಎಂದು ನೀರನ್ನು ದಾನದ ರೂಪದಲ್ಲಿ ಕೊಡುತ್ತಿದ್ದರು)

ಅಷ್ಟಕ್ಕೂ ಸುವಾಸನಾಭರಿತವಾದ ನೀರು ಹೇಗೆ ತಯಾರು ಮಾಡುತ್ತಿದ್ದರು ಗೊತ್ತೇ?

ಅಕ್ಷಯ ತೃತೀಯ ಹಿಂದಿನ ದಿನ ಮಾರುಕಟ್ಟೆಯಿಂದ ಹೊಸದಾದ ನೀರಿನ ಮಡಿಕೆಯನ್ನು ತೆಗೆದುಕೊಂಡು ಬಂದು ಅದನ್ನು ಶುದ್ಧವಾಗಿ ತೊಳೆದು ಅದರ ತುಂಬಾ ಕುಡಿಯುವ ನೀರನ್ನು ಹಾಕಿ, ಒಂದೆರಡು ಲವಂಗ- ಏಲಕ್ಕಿ- ಜಾಜಿಕಾಯಿ- ಜಾಪತ್ರೆ-ಪಚ್ಚ (ಹಸಿ)ಕರ್ಪೂರಮತ್ತು ಕಸ್ತೂರಿ ಇದನ್ನೆಲ್ಲವನ್ನು ಒಟ್ಟಿಗೆ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಂಡು ಮಡಿಕೆ ಒಳಗಿನ ಕುಡಿಯುವ ನೀರಿನ ಒಳಗೆ ಹಾಕುತ್ತಾರೆ. ಅದನ್ನು ಮುಚ್ಚಳದಿಂದ ಚೆನ್ನಾಗಿ ಮುಚ್ಚಿಡುತ್ತಾರೆ. ಬೆಳಗ್ಗೆ ಮುಚ್ಚಳವನ್ನು ತೆರೆದಾಗ ಕುಡಿಯುವ ನೀರು ಸುವಾಸನಾಭರಿತವಾಗಿರುತ್ತದೆ ಮತ್ತು ಅದು ಶಕ್ತಿಯುತ ಮತ್ತು ಆರೋಗ್ಯವಂತವಾದ ಪಾನೀಯವಾಗುತ್ತದೆ. ಈ ಸುವಾಸನಾಭರಿತ ವಾದ ನೀರನ್ನು ತೆಗೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತು ಸುಡುಬಿಸಿಲಿನಲ್ಲಿ ನಡೆದು ಹೋಗುತ್ತಿರುವ ದಾರಿಹೋಕರಿಗೆ ನೀಡುವ ಮೂಲಕ ಅವರ ಸಂತೋಷಪಡಿಸಿ ತಾವು ಸಂತೃಪ್ತರಾಗಿದ್ದರು.

ಇನ್ನು ಇದೇ ಸಮಯದಲ್ಲಿ ಇನ್ನು ಎರಡು ಮುಖ್ಯ ದಾನಗಳನ್ನು ಕೂಡ ಮಾಡುತ್ತಿದ್ದರು. ಒಂದು ಬಿಸಿಲಿನ ಕಾರಣಕ್ಕಾಗಿ ಪಾದರಕ್ಷೆಗಳು ಇನ್ನೊಂದು ಕೊಡೆಯನ್ನು ಕೂಡ ದಾನದ ರೂಪದಲ್ಲಿ ನೀಡುತ್ತಿದ್ದರು. ಬಡವರು-ನಿರ್ಗತಿಕರಿಗೆ ದಾನದ ರೂಪದಲ್ಲಿ ಇದೆಲ್ಲವನ್ನೂ ನೀಡುವುದರಿಂದ ತಮ್ಮ ಜೀವನದಲ್ಲಿ ಪುಣ್ಯ -ಸಂತೋಷ- ನೆಮ್ಮದಿಗಳು ಅಕ್ಷಯವಾಗುತ್ತದೆ ಎಂಬ ನಂಬಿಕೆ ಅಂದಿನ ಜನರಲ್ಲಿತ್ತು.
ಅಕ್ಷಯ ತೃತೀಯ ಅರ್ಥವೇ ದಾನ...

ಬಂಗಾರ ಖರೀದಿ ಮಾಡಿದರೆ ದರಿದ್ರವನ್ನು ಮನೆಗೆ ತೆಗೆದುಕೊಂಡು ಹೋದಂತೆ!

ಅಕ್ಷಯ ತೃತೀಯ ದಿನ ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ಯಾವ ಶಾಸ್ತ್ರದಲ್ಲೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ನೆನಪಿಡಬೇಕಾದ ವಿಷಯವೆಂದರೆ ಇದು ಕಲಿಯುಗ, ಕಲಿಪುರುಷ ಇನ್ನಿಲ್ಲದಂತೆ ಜನರನ್ನು ಹಿಂಸಿಸುತ್ತಾನೆ ಮತ್ತು ಕಾಡುತ್ತಾನೆ. ಕಲಿಪುರುಷನ ವಾಸಸ್ಥಾನದಲ್ಲಿ ಮೊದಲನೆಯದು ಬಂಗಾರ. ಹೀಗಾಗಿ ನಿಮ್ಮ ಮನೆಯಲ್ಲಿ ಎಷ್ಟು ಬಂಗಾರವಿರುತ್ತದೆ ಅಷ್ಟು ಅಶಾಂತಿ ಮನೆಮಾಡಿರುತ್ತದೆ. ಮನೆಗೆ ಕನ್ನ ಹಾಕುವ ಕಳ್ಳರು ಕೂಡ ಮೊದಲು ದೋಚುವುದು ಕೂಡ ದರಿದ್ರ ಬಂಗಾರವನ್ನೆ. ಅಂತಹ ಬಂಗಾರವನ್ನು ನೀವು ಅಕ್ಷಯ ತೃತೀಯ ದಿನ ಖರೀದಿ ಮಾಡಿದರೆ ಕಲಿಪುರುಷನ ಪ್ರವೇಶ ನಿಮ್ಮ ಮನೆಗೆ ಆಗುತ್ತದೆ. ಮನೆಯಲ್ಲಿ ಅಶಾಂತಿ, ನಿತ್ಯ ಗಲಾಟೆಗಳು,ರಂಪಾಟಗಳು ಅಕ್ಷಯವಾಗುತ್ತದೆ. 

ನಿಮ್ಮ ಬಳಿ ಹಣವಿದ್ದಾಗ ಬಂಗಾರವನ್ನು ಖರೀದಿ ಮಾಡಿ ಆದರೆ ಯಾವನೋ ಟಿವಿಯಲ್ಲಿ ಬೃಹಸ್ಪತಿ ಹೇಳಿದ ಅಂತ ಹೇಳಿ ಅಪ್ಪಿತಪ್ಪಿ ಕೂಡ ಅಕ್ಷಯ ತೃತೀಯ ದಿನ ಸಾಲ ಮಾಡಿ ಬಂಗಾರದ  ಖರೀದಿ ಮಾಡಿ ಸಂಕಷ್ಟಗಳಿಗೆ ಸಿಲುಕಬೇಡಿ. ಅಕ್ಷಯ ತೃತೀಯ ದಿನ ನೀವು ಬಂಗಾರವನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋದರೆ ಮುಂದಿನ ಅಕ್ಷಯತೃತೀಯ ದಿನದವರೆಗೂ ನಿಮ್ಮ ಮನೆಯಲ್ಲಿ ಕಲಿ ಪುರುಷ ಸ್ಥಿರನಾಗುತ್ತಾನೆ.ಅಶಾಂತಿಯ ಗೂಡು ನಿಮ್ಮ ಮನೆಯಾಗುತ್ತದೆ, ನೆಮ್ಮದಿಯ ನಿದ್ದೆ ಹೋಗುತ್ತದೆ, ಅಪಮಾನಗಳು ಎದುರಾಗುತ್ತದೆ...ಹೀಗಾಗಿ ಆಯ್ಕೆ ನಿಮ್ಮದು!

ಅಕ್ಷಯ ತೃತೀಯ ದಿನದಂದು ಸಾಧ್ಯವಾದರೆ ಯಾವುದಾದರೂ ಒಂದು ಅನಾಥಾಶ್ರಮದ ಮಕ್ಕಳಿಗೆ  ಊಟ ಹಾಕಿಸಿ, ಪರಿಸರ ಸಂರಕ್ಷಿಸಲು ಒಂದು ಗಿಡ ನೆಡಿ. ಸಾಧ್ಯವಾದಷ್ಟು ಒಳ್ಳೆಯ ವಿಷಯಗಳನ್ನು ಒಳ್ಳೆಯತರದಲ್ಲಿ  ಬದುಕಿನ ಆಲೋಚನೆಗಳನ್ನು ಮಾಡಿ ಇದರಿಂದ ಬದುಕು ಅಕ್ಷಯವಾಗುತ್ತದೆ....(ಸಂಗ್ರಹ)

Sunday, April 17, 2022

ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು

ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು.

ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‌ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ. ಇನ್ನು ಮನೆಯಲ್ಲೂ ಅಷ್ಟೇ ಮಕ್ಕಳಿಗೆ ಸ್ಫೂನ್ ಅಭ್ಯಾಸ ಮಾಡುತ್ತಿದ್ದಾರೆ ತಂದೆತಾಯಿ. ಅದಕ್ಕೆ ಅವರು ಕೊಡುತ್ತಿರುವ ಮುಖ್ಯ ಕಾರಣ…ಕೈಗಳು ಸ್ವಚ್ಛವಾಗಿರಲ್ಲ ಅನ್ನೋದು. ಆದರೆ ಒಮ್ಮೆ ಕೈಯಲ್ಲಿ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳನ್ನು ನೋಡೋಣ. ಇದನ್ನು ಓದಿದ ಮೇಲೆ ನೀವು ಎಲ್ಲೇ ಇರಿ…? ನೀವು ಮಟ್ಟಸವಾಗಿ ಕೈಯನ್ನು ಉಪಯೋಗಿಸಿ ಭೋಜನ ಮಾಡುತ್ತೀರಿ ಎಂದು ಆಶಿಸುತ್ತೇವೆ.

ಕೈಯಲ್ಲಿ ಆಹಾರ ತಿನ್ನಿವುದರಿಂದ ಆಗುವ ಪ್ರಯೋಜನಗಳು: ( As Per Science).

1. ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ.

2. ಕೈಯಲ್ಲಿ ಆಹಾರ ತಿನ್ನುವುದರಿಂದ ಕೆಲವು ಮಿಲಿಯನ್ ನರಗಳು ನಮ್ಮ ಮಿದುಳಿಗೆ ಸಂಕೇತ ಕಳುಹಿಸುತ್ತವೆ.
 
3. ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮಿದುಳು ಉದರಕ್ಕೆ ಸಂಕೇತ ರವಾನಿಸುತ್ತದೆ. ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ.

4. ಕೈಯಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವಾಗಿರುವುದಷ್ಟೇ ಅಲ್ಲದೆ, ಯಾವುದೇ ಆಲೋಚನೆಗಳು ಬರದೆ ಒಂದೇ ಆಲೋಚನೆಯಲ್ಲಿ ಇರುತ್ತೇವೆ.

5. ನಮ್ಮ ಆಹಾರದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ತಯಾರಿಸಿದ ಆಹಾರವನ್ನು ಸ್ಫೂನ್ಸ್, ಫೋರ್ಕ್ಸ್‌ನಿಂದ ತಿನ್ನುವುದರಿಂದ ಪ್ರತಿಕ್ರಿಯೆ ಏರ್ಪಟ್ಟು ರುಚಿ ಕೆಡುತ್ತದೆ.

6. ಕೈ ಬೆರಳಲ್ಲಿ ಆಹಾರವನ್ನು ಕಲೆಸಿಕೊಂಡು, ಒಂದೊಂದೇ ತುತ್ತು ತಿನ್ನುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.

7. ಕೈಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ, ಬೆರಳು ತುಟಿಗೆ ತಾಗುತ್ತಿದ್ದಂತೆ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ.

8. ಇನ್ನು ಕೈ ಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅನಾರೋಗ್ಯ ಪಾಲಾಗದೆ, ಆರೋಗ್ಯವಾಗಿರುತ್ತೇವೆ. ಜೀರ್ಣ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇದು ಒಂದು ರೀತಿ ವ್ಯಾಯಾಮದಂತಿರುತ್ತದೆ.

ಪುರಾಣಗಳ ಪ್ರಕಾರ…

* ಕೈಯಲ್ಲಿರುವ ಒಂದೊಂದು ಬೆರಳು ಒಂದೊಂದು ತತ್ವವನ್ನು ಹೊಂದಿರುತ್ತವೆ.

* ಹೆಬ್ಬೆರಳು: ಅಗ್ನಿತತ್ವ

* ತೋರು ಬೆರಳು: ವಾಯುತತ್ವ

* ಮಧ್ಯ ಬೆರಳು: ಆಕಾಶ

* ಉಂಗುರ ಬೆರಳು: ಭೂಮಿ

* ಕಿರುಬೆರಳು: ಜಲತತ್ವ

ಈ ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ.

ಫ್ಯಾಷನ್‌ಗೆ ಕೊಟ್ಟಷ್ಟು ಬೆಲೆ… ಸಂಸ್ಕೃತಿಗೆ ಕೊಟ್ಟರೆ…ಮಾನವನ ಜೀವನ ಸ್ವಲ್ಪ ಸರಳವಾಗುತ್ತದೆ ಅನ್ನಿಸುತ್ತದೆ.
ವಂದನೆಗಳೊಂದಿಗೆ,
                        

Saturday, April 16, 2022

ಆಯುರ್ವೇದ ಚಿಕಿತ್ಸೆಗಳು

ಆಯುರ್ವೇದ ಚಿಕಿತ್ಸೆಗಳು

ಪಂಚಕರ್ಮ

ಆಯುರ್ವೇದ ಸಂಪೂರ್ಣ ನಿರ್ವಿಶೀಕರಣ ಮತ್ತು ಶುದ್ಧೀಕರಣ

ಪಂಚಕರ್ಮವು ಆಯುರ್ವೇದದ ಪ್ರಾಥಮಿಕ ಶುದ್ಧೀಕರಣ ಮತ್ತು ನಿರ್ವಿಶೀಕರಣ ಚಿಕಿತ್ಸೆಯಾಗಿದೆ. ಪಂಚಕರ್ಮ ಎಂದರೆ "ಐದು ಚಿಕಿತ್ಸೆಗಳು". ದೇಹದಿಂದ ವಿಷವನ್ನು ತೆಗೆದುಹಾಕುವ ಈ 5 ಚಿಕಿತ್ಸಕ ವಿಧಾನಗಳೆಂದರೆ ವಾಮನ, ವಿರೇಚನ, ನಾಸ್ಯ, ಬಸ್ತಿ ಮತ್ತು ರಕ್ತಮೋಕ್ಷಣೆ. ಐದು ಚಿಕಿತ್ಸೆಗಳ ಈ ಸರಣಿಯು ದೋಶಗಳನ್ನು (ಎಲ್ಲಾ ಜೈವಿಕ ಕ್ರಿಯೆಗಳನ್ನು ನಿಯಂತ್ರಿಸುವ ಶಕ್ತಿಗಳು) ಸಮತೋಲನಗೊಳಿಸುವಾಗ ದೇಹದಿಂದ ವಿಷವನ್ನು ಉಂಟುಮಾಡುವ ಆಳವಾದ ಬೇರೂರಿರುವ ಒತ್ತಡ ಮತ್ತು ಅನಾರೋಗ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಪಂಚಕರ್ಮ ಆಹಾರ ಪದ್ಧತಿ

ಚಿಕಿತ್ಸೆಗಳ ಜೊತೆಗೆ ವಿಶೇಷ ನಿರ್ವಿಶೀಕರಣ ಆಹಾರವನ್ನು ನೀಡದಿದ್ದರೆ ಪಂಚಕರ್ಮವು ನಿಷ್ಪರಿಣಾಮಕಾರಿಯಾಗಿದೆ. ಆಯುರ್ವೇದ ರಿಟ್ರೀಟ್‌ನಲ್ಲಿ ನಾವು ಇದರ ಬಗ್ಗೆ ಬಹಳ ತಿಳಿದಿರುತ್ತೇವೆ ಮತ್ತು ಪಂಚಕರ್ಮಕ್ಕೆ ಒಳಗಾಗುವ ಪ್ರತಿಯೊಬ್ಬ ವ್ಯಕ್ತಿಯು ವಿಶೇಷ ಆಹಾರವನ್ನು ಪಡೆಯುತ್ತಾನೆ, ಇದನ್ನು ವೈದ್ಯರು ಪ್ರತಿದಿನ ಮೇಲ್ವಿಚಾರಣೆ ಮಾಡುತ್ತಾರೆ. ಹೆಚ್ಚುವರಿ ಚಿಕಿತ್ಸೆಯನ್ನು ವೈದ್ಯರು ಶಿಫಾರಸು ಮಾಡಬಹುದು ಆದರೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ.

1) ವಾಮನ

ವಾಮನ ಒಂದು ಔಷಧೀಯ ವಾಂತಿ ಚಿಕಿತ್ಸೆಯಾಗಿದ್ದು ಅದು ದೇಹ ಮತ್ತು ಶ್ವಾಸನಾಳದಲ್ಲಿ ಸಂಗ್ರಹವಾಗಿರುವ ಕಫಾ ವಿಷವನ್ನು ತೆಗೆದುಹಾಕುತ್ತದೆ. ಹೆಚ್ಚಿನ ಕಫಾ ಅಸಮತೋಲನ ಹೊಂದಿರುವ ಜನರಿಗೆ ಇದನ್ನು ನೀಡಲಾಗುತ್ತದೆ. ದೈನಂದಿನ ಚಿಕಿತ್ಸೆಯು ಅಂತಿಮವಾಗಿ ಅವುಗಳನ್ನು ತೊಡೆದುಹಾಕುವ ಪ್ರಯತ್ನದಲ್ಲಿ ವಿಷವನ್ನು ಸಡಿಲಗೊಳಿಸುವುದು ಮತ್ತು ಸಜ್ಜುಗೊಳಿಸುವುದನ್ನು ಒಳಗೊಂಡಿರುತ್ತದೆ.

ವಾಮನ ಪ್ರಯೋಜನಗಳು: ಶ್ವಾಸನಾಳದ ಆಸ್ತಮಾ, ದೀರ್ಘಕಾಲದ ಅಲರ್ಜಿಗಳು, ಹೇ ಜ್ವರ, ವಿಟಲಿಗೋ, ಸೋರಿಯಾಸಿಸ್, ಹೈಪರ್ಆಸಿಡಿಟಿ, ದೀರ್ಘಕಾಲದ ಅಜೀರ್ಣ ಮೂಗಿನ ದಟ್ಟಣೆ, ಎಡಿಮಾ, ಬೊಜ್ಜು, ಮಾನಸಿಕ ಅಸ್ವಸ್ಥತೆಗಳು, ಚರ್ಮದ ಅಸ್ವಸ್ಥತೆಗಳು.

2) ವಿರೇಚನ (ಶುದ್ಧೀಕರಣ)

ವಿರೇಚನವು ಔಷಧೀಯ ಶುದ್ಧೀಕರಣ ಚಿಕಿತ್ಸೆಯಾಗಿದ್ದು, ಇದು ಯಕೃತ್ತು ಮತ್ತು ಪಿತ್ತಕೋಶದಲ್ಲಿ ಸಂಗ್ರಹವಾಗಿರುವ ದೇಹದಿಂದ ಪಿಟ್ಟಾ ವಿಷವನ್ನು ತೆಗೆದುಹಾಕುತ್ತದೆ, ಇದು ಜಠರಗರುಳಿನ ಪ್ರದೇಶವನ್ನು ಸಂಪೂರ್ಣವಾಗಿ ಶುದ್ಧಗೊಳಿಸುತ್ತದೆ. ಇದು ಅಡ್ಡಪರಿಣಾಮಗಳಿಲ್ಲದ ಸುರಕ್ಷಿತ ವಿಧಾನವಾಗಿದೆ. ವಿರೇಚನದ ಪ್ರಯೋಜನಗಳು ದೀರ್ಘಕಾಲದ ಜ್ವರ, ಮಧುಮೇಹ, ಅಸ್ತಮಾ, ಚರ್ಮದ ಕಾಯಿಲೆಗಳಾದ ಹರ್ಪಿಸ್, ಪಾರ್ಶ್ವವಾಯು, ಹೆಮಿಪ್ಲೆಜಿಯಾ ಜಂಟಿ ಅಸ್ವಸ್ಥತೆಗಳು, ಜೀರ್ಣಕಾರಿ ಅಸ್ವಸ್ಥತೆಗಳು, ಮಲಬದ್ಧತೆ, ಹೈಪರ್ಆಸಿಡಿಟಿ, ವಿಟಲಿಗೋ, ಸೋರಿಯಾಸಿಸ್, ತಲೆನೋವು, ಎಲಿಫಾಂಟಿಯಾಸಿಸ್ ಮತ್ತು ಸ್ತ್ರೀ ರೋಗಶಾಸ್ತ್ರದ ಅಸ್ವಸ್ಥತೆಗಳನ್ನು ಬೇರುಬಿಡಲು ಸಹಾಯ ಮಾಡುತ್ತದೆ.

3) ಬಸ್ತಿ (ಎನಿಮಾ ಅಥವಾ ಕೊಲೊನಿಕ್ ನೀರಾವರಿ)

ಬಸ್ತಿ (ಎನಿಮಾ) ಅನ್ನು ಎಲ್ಲಾ ಪಂಚಕರ್ಮ ಚಿಕಿತ್ಸೆಗಳ ತಾಯಿ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಕರುಳಿನ ಮೂಲಕ ಎಲ್ಲಾ 3 ದೋಷಗಳಾದ ವಾತ, ಪಿತ್ತ ಮತ್ತು ಕಫಗಳಿಂದ ಸಂಗ್ರಹವಾದ ವಿಷವನ್ನು ಶುದ್ಧೀಕರಿಸುತ್ತದೆ. ಪುನರ್ಯೌವನಗೊಳಿಸುವ ಚಿಕಿತ್ಸೆಯಾಗಿ ಬಸ್ತಿ ಕೂಡ ಹೆಚ್ಚು ಪ್ರಯೋಜನಕಾರಿಯಾಗಿದೆ. ಕೊಲೊನ್ ಅನ್ನು ಸ್ವಚ್ಛಗೊಳಿಸಲು ಮತ್ತು ಸ್ನಾಯುವಿನ ನಾದವನ್ನು ಹೆಚ್ಚಿಸಲು ಔಷಧೀಯ ಎಣ್ಣೆ ಅಥವಾ ತುಪ್ಪ ಮತ್ತು ಗಿಡಮೂಲಿಕೆಗಳ ಕಷಾಯವನ್ನು ಎನಿಮಾವಾಗಿ ನೀಡಲಾಗುತ್ತದೆ. ವ್ಯಕ್ತಿಯ ವೈದ್ಯಕೀಯ ಸ್ಥಿತಿಯನ್ನು ಆಧರಿಸಿ ಈ ವಿಧಾನವನ್ನು ಸಾಮಾನ್ಯವಾಗಿ 8 ರಿಂದ 30 ದಿನಗಳವರೆಗೆ ಅನ್ವಯಿಸಲಾಗುತ್ತದೆ. ಪ್ರಯೋಜನಗಳು ಹೆಮಿಪ್ಲೆಜಿಯಾ, ಪಾರ್ಶ್ವವಾಯು, ಕೊಲೈಟಿಸ್, ಚೇತರಿಕೆ, ಗರ್ಭಕಂಠದ ಸ್ಪಾಂಡಿಲೋಸಿಸ್, ಕೆರಳಿಸುವ ಕರುಳಿನ ಸಹಲಕ್ಷಣಗಳು ಮಲಬದ್ಧತೆ, ಜೀರ್ಣಕಾರಿ ಅಸ್ವಸ್ಥತೆಗಳು, ಬೆನ್ನುನೋವು ಮತ್ತು ಸಿಯಾಟಿಕಾ, ಹೆಪಟೊಮೆಗಾಲಿ ಮತ್ತು ಸ್ಪ್ಲೇನೋಮೆಗಾಲಿ, ಬೊಜ್ಜು, ಪೈಲ್ಸ್, ಲೈಂಗಿಕ ದೌರ್ಬಲ್ಯ ಮತ್ತು ಬಂಜೆತನ.

4) ನಾಸ್ಯ (ಮೂಗು ಶುಚಿಗೊಳಿಸುವಿಕೆ)

ತಲೆ ಮತ್ತು ಕತ್ತಿನ ಪ್ರದೇಶದಿಂದ ಸಂಗ್ರಹವಾದ ಕಫಾ ವಿಷವನ್ನು ಶುದ್ಧೀಕರಿಸಲು ಮೂಗಿನ ಮೂಲಕ ಔಷಧೀಯ ಎಣ್ಣೆಯ ಆಡಳಿತವನ್ನು Nasya ಒಳಗೊಂಡಿರುತ್ತದೆ. ವ್ಯಕ್ತಿಯ ವೈದ್ಯಕೀಯ ಸ್ಥಿತಿಯನ್ನು ಆಧರಿಸಿ, ಇದನ್ನು 30 ದಿನಗಳವರೆಗೆ ನೀಡಬಹುದು. ಟ್ರೈಜಿಮಿನಲ್ ನ್ಯೂರಾಲ್ಜಿಯಾ, ಬೆಲ್ಸ್ ಪಾಲ್ಸಿ, ಸ್ಮರಣಶಕ್ತಿ ಮತ್ತು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ, ನಿದ್ರಾಹೀನತೆ, ಮುಖದಲ್ಲಿನ ಹೆಚ್ಚುವರಿ ಲೋಳೆಯ ಹೈಪರ್ ಪಿಗ್ಮೆಂಟೇಶನ್ ನಿವಾರಣೆ, ಕೂದಲು ಪ್ರಬುದ್ಧವಾಗಿ ಬಿಳಿಯಾಗುವುದು, ಧ್ವನಿಗೆ ಸ್ಪಷ್ಟತೆ, ವಿವಿಧ ಮೂಲದ ಹೆಮಿಪ್ಲೆಜಿಯಾ ತಲೆನೋವು, ವಾಸನೆ ಮತ್ತು ರುಚಿಯ ನಷ್ಟ, ನಸ್ಯ ಪ್ರಯೋಜನಗಳು ಸೇರಿವೆ. ಹೆಪ್ಪುಗಟ್ಟಿದ ಭುಜ, ಮೈಗ್ರೇನ್, ಕುತ್ತಿಗೆಯ ಬಿಗಿತ, ಮೂಗಿನ ಅಲರ್ಜಿಗಳು ನಾಸಲ್ ಪಾಲಿಪ್, ನರವೈಜ್ಞಾನಿಕ ಅಪಸಾಮಾನ್ಯ ಕ್ರಿಯೆ, ಪ್ಯಾರಾಪ್ಲೆಜಿಯರ್, ಸೈನುಟಿಸ್.

5) ರಕ್ತಮೋಕ್ಷನ

ರಕ್ತಮೋಕ್ಷನವು ರಕ್ತವನ್ನು ಶುದ್ಧೀಕರಿಸುವ ವಿಧಾನವಾಗಿದೆ ಮತ್ತು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಸೂಚಿಸಲಾಗುತ್ತದೆ. ಸಾಮಾನ್ಯ ಪಂಚಕರ್ಮದ ಸಮಯದಲ್ಲಿ ಇದು ಸೂಕ್ತವಲ್ಲ. ನಮ್ಮದು ಸೇರಿದಂತೆ ಹೆಚ್ಚಿನ ಆಯುರ್ವೇದ ಕೇಂದ್ರಗಳು ರಕ್ತ ಶುದ್ಧೀಕರಣದಲ್ಲಿ ಸೋಂಕಿನ ಹೆಚ್ಚಿನ ಅಪಾಯದ ಕಾರಣ ರಕ್ತಮೋಕ್ಷನವನ್ನು ನೀಡುವುದಿಲ್ಲ.

ಪಂಚಕರಾಮದ ಚಿಕಿತ್ಸೆಗಳು

ಪಂಚಕರ್ಮ ಚಿಕಿತ್ಸೆ

ಪಂಚಕರ್ಮ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ "ಐದು ಕ್ರಿಯೆಗಳು" ಅಥವಾ "ಐದು ಚಿಕಿತ್ಸೆಗಳು". ರೋಗ ಮತ್ತು ಕಳಪೆ ಪೋಷಣೆಯಿಂದ ಉಳಿದಿರುವ ವಿಷಕಾರಿ ವಸ್ತುಗಳ ದೇಹವನ್ನು ಸ್ವಚ್ಛಗೊಳಿಸಲು ಇದು ಒಂದು ಪ್ರಕ್ರಿಯೆಯಾಗಿದೆ. ಅಸಮತೋಲನ ದೋಷಗಳು ತ್ಯಾಜ್ಯವನ್ನು ಸೃಷ್ಟಿಸುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಈ ತ್ಯಾಜ್ಯ ವಸ್ತುವನ್ನು ಆಯುರ್ವೇದದಲ್ಲಿ ಅಮ ಎಂದು ಕರೆಯಲಾಗುತ್ತದೆ. ಅಮಾ ಒಂದು ದುರ್ವಾಸನೆ, ಜಿಗುಟಾದ, ಹಾನಿಕಾರಕ ವಸ್ತುವಾಗಿದ್ದು, ದೇಹದಿಂದ ಸಾಧ್ಯವಾದಷ್ಟು ಸಂಪೂರ್ಣವಾಗಿ ಹೊರಹಾಕಬೇಕು.

ಪಂಚಕರ್ಮವು ಹೆಚ್ಚುವರಿ ದೋಷಗಳನ್ನು (ಅಥವಾ ದೋಷದಲ್ಲಿನ ಅಸಮತೋಲನ) ಜೊತೆಗೆ ನಿಮ್ಮ ವ್ಯವಸ್ಥೆಯಿಂದ ಜಿಗುಟಾದ ಅಮಾವನ್ನು ಹೊರಹಾಕುತ್ತದೆ, ದೇಹದ ತ್ಯಾಜ್ಯವನ್ನು ಹೊರಹಾಕುವ ಮಾರ್ಗಗಳಾದ ಬೆವರು ಗ್ರಂಥಿಗಳು, ಮೂತ್ರದ ಪ್ರದೇಶ, ಕರುಳುಗಳು ಇತ್ಯಾದಿಗಳ ಮೂಲಕ ಪಂಚಕರ್ಮವು ಸಮತೋಲನಗೊಳಿಸುತ್ತದೆ. ಕಾರ್ಯಾಚರಣೆ ಇದು ದೈನಂದಿನ ಮಸಾಜ್ ಮತ್ತು ಎಣ್ಣೆ ಸ್ನಾನವನ್ನು ಒಳಗೊಂಡಿರುತ್ತದೆ ಮತ್ತು ಇದು ಅತ್ಯಂತ ಆಹ್ಲಾದಕರ ಅನುಭವವಾಗಿದೆ. ಆಯುರ್ವೇದವು ಪಂಚಕರ್ಮವನ್ನು ನಿಮ್ಮ ಮನಸ್ಸಿನ ದೇಹ ವ್ಯವಸ್ಥೆಯನ್ನು ಟೋನ್ ಮಾಡಲು ಕಾಲೋಚಿತ ಚಿಕಿತ್ಸೆಯಾಗಿ ಶಿಫಾರಸು ಮಾಡುತ್ತದೆ. ಪಂಚಕರ್ಮವು ಐದು ಪಟ್ಟು ಚಿಕಿತ್ಸೆಯಾಗಿದೆ; ದೇಹದ ಪ್ರಕಾರ, ದೋಷದ ಅಸಮತೋಲನವನ್ನು ಅವಲಂಬಿಸಿ ವ್ಯಕ್ತಿಯ ಅಗತ್ಯತೆಗಳ ಆಧಾರದ ಮೇಲೆ ಇದು ಹೆಚ್ಚು ವೈಯಕ್ತೀಕರಿಸಲ್ಪಟ್ಟಿದೆ

ಆಯುರ್ವೇದ ಚಿಕಿತ್ಸೆಗಳು/ ಚಿಕಿತ್ಸೆಗಳು

ಶಿರೋ ಧಾರಾ

ವಿಶೇಷವಾದ ಮರದ ಹಾಸಿಗೆಯ ಮೇಲೆ ರೋಗಿಯನ್ನು ಮಲಗಿಸಿ ನಂತರ ಔಷಧೀಯ ಎಣ್ಣೆ/ಹಾಲು ಅಥವಾ ಮಜ್ಜಿಗೆ ಇತ್ಯಾದಿಗಳನ್ನು ಸೂಚಿಸಿದ, ನಿರಂತರ ಸ್ಟ್ರೀಮ್‌ನಲ್ಲಿ ಅವನ ತಲೆಯ ಮೇಲೆ ಸುರಿಯುವ ಚಿಕಿತ್ಸಾ ಪ್ರಕ್ರಿಯೆಯು ಚಿಕಿತ್ಸಕರಿಂದ ಈ ಚಿಕಿತ್ಸೆಯಲ್ಲಿ ಸಹಾಯವಾಗುತ್ತದೆ. ಚಿಕಿತ್ಸಕರು ಥೆರಪಿ ತೆಗೆದುಕೊಳ್ಳುವವರ ದೇಹದ ಮೇಲೆ ತೈಲವನ್ನು ಅನ್ವಯಿಸಲು ಸಹಾಯ ಮಾಡುತ್ತಾರೆ.

ಸ್ವೀಡನಾ

ಈ ಸಮಯದಲ್ಲಿ ಆಯುರ್ವೇದ ಥೆರಪಿ ಎಣ್ಣೆಯನ್ನು ನಿರ್ದಿಷ್ಟ ರೀತಿಯ ಮಸಾಜ್‌ನೊಂದಿಗೆ ಇಡೀ ದೇಹಕ್ಕೆ ಅನ್ವಯಿಸಲಾಗುತ್ತದೆ, ಇದು ವಿಷವನ್ನು ಜಠರ-ಕರುಳಿನ ಕಡೆಗೆ ಚಲಿಸಲು ಸಹಾಯ ಮಾಡುತ್ತದೆ. ಆಯುರ್ವೇದ ತೈಲ ಮಸಾಜ್ ಮೇಲ್ಮೈ ಮತ್ತು ಆಳವಾದ ಅಂಗಾಂಶಗಳನ್ನು ಮೃದುಗೊಳಿಸುತ್ತದೆ ಮತ್ತು ಒತ್ತಡವನ್ನು ತೆಗೆದುಹಾಕಲು ಮತ್ತು ನರಮಂಡಲವನ್ನು ಪೋಷಿಸಲು ಸಹಾಯ ಮಾಡುತ್ತದೆ.

ನಾಸ್ಯ

ಗಿಡಮೂಲಿಕೆಗಳ ರಸಗಳು, ಔಷಧೀಯ ತೈಲಗಳು ಇತ್ಯಾದಿಗಳನ್ನು ಮೂಗಿನ ಮೂಲಕ ಅನ್ವಯಿಸಲಾಗುತ್ತದೆ. ನಾಸ್ಯದ ಈ ಪ್ರಯೋಜನಗಳು ಅಗಾಧವಾಗಿವೆ ಮತ್ತು ಕೆಲವು ರೀತಿಯ ತಲೆನೋವುಗಳಿಗೆ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿದೆ, ಕೂದಲು ಪ್ರಬುದ್ಧವಾಗಿ ಬಿಳಿಯಾಗುವುದು, ಧ್ವನಿ ಸ್ಪಷ್ಟತೆ, ವಿವಿಧ ಮೂಲದ ತಲೆನೋವು.

ಅಭ್ಯಂಗ

ಇದು ಮೃದುವಾದ ಆದರೆ ದೃಢವಾದ ಇಡೀ ದೇಹ ಆಯುರ್ವೇದದ ಬೆಚ್ಚಗಿನ ಔಷಧೀಯ ಎಣ್ಣೆಯನ್ನು ಬಳಸಿ ತಲೆಯಿಂದ ಪಾದದವರೆಗೆ ಮಸಾಜ್ ಆಗಿದೆ. ವ್ಯಕ್ತಿಗಳು ಅಭ್ಯಂಗ ಮಸಾಜ್ ಗಿಡಮೂಲಿಕೆಗಳ ಸಾರವನ್ನು ಬಳಸಿದರೆ ದೇಹದ ಸ್ವಭಾವಕ್ಕೆ ಅನುಗುಣವಾಗಿ ಆಯುರ್ವೇದ ತಜ್ಞರು ತೈಲಗಳನ್ನು ಆಯ್ಕೆ ಮಾಡುತ್ತಾರೆ.

ಪಿಜಿಚಿಲ್

: ಒಂದು ವಿಶೇಷ ಚಿಕಿತ್ಸೆಯಾಗಿದೆ, ಇದನ್ನು ರಾಯಲ್ ಟ್ರೀಟ್ಮೆಂಟ್ ಎಂದೂ ಕರೆಯುತ್ತಾರೆ, ಅಂದರೆ ದೇಹದ ಮೇಲೆ ಎಣ್ಣೆಯಲ್ಲಿ ನೆನೆಸಿದ ಬಟ್ಟೆಯನ್ನು ಹಿಸುಕಿಕೊಳ್ಳುವುದು. ಈ ಚಿಕಿತ್ಸೆಯ ಸಮಯದಲ್ಲಿ ಅತಿಥಿಯು ಕುಳಿತುಕೊಳ್ಳುವ ಸ್ಥಾನದಲ್ಲಿ ಉಳಿಯುತ್ತಾನೆ ಮತ್ತು ಔಷಧೀಯ ತೈಲಗಳನ್ನು ತಲೆ ಮತ್ತು ದೇಹದ ಮೇಲೆ ಅನ್ವಯಿಸಲಾಗುತ್ತದೆ.

ಶಿರೋ ವಸ್ತಿ

ಆಯುರ್ವೇದ ವೈದ್ಯರು ಸೂಚಿಸಿದ ಸಮಯಕ್ಕೆ ಬೆಚ್ಚಗಿನ ಗಿಡಮೂಲಿಕೆಗಳ ಎಣ್ಣೆಗಳ ಮಿಶ್ರಣವನ್ನು ದಿನಕ್ಕೆ 15 ರಿಂದ 60 ನಿಮಿಷಗಳ ಕಾಲ ತಲೆಯ ಮೇಲೆ ಅಳವಡಿಸಲಾಗಿರುವ ಕ್ಯಾಪ್ನಲ್ಲಿ ಸುರಿಯಲಾಗುತ್ತದೆ. ಶಿರೋ ವಸ್ತಿ ಆಯುರ್ವೇದ ಚಿಕಿತ್ಸೆಯು ಮುಖದ ಪಾರ್ಶ್ವವಾಯು, ಮೂಗಿನ ಹೊಳ್ಳೆಗಳು, ಬಾಯಿಯ ಶುಷ್ಕತೆಗೆ ಹೆಚ್ಚು ಪರಿಣಾಮಕಾರಿಯಾಗಿದೆ. ಮತ್ತು ಗಂಟಲು, ತೀವ್ರ ತಲೆನೋವು.

ನೇತ್ರ ತರ್ಪಣ

ನೇತ್ರ ತರ್ಪಣವು ಕಣ್ಣುಗಳಿಗೆ ಆಯಾಸದಿಂದ ಮುಕ್ತಿ ಪಡೆಯಲು ಮತ್ತು ದೃಷ್ಟಿ ಸುಧಾರಿಸಲು ವಿಶೇಷ ಆಯುರ್ವೇದ ಚಿಕಿತ್ಸೆಯಾಗಿದೆ. ತೀವ್ರ ಕಣ್ಣಿನ ದೃಷ್ಟಿ ಕೆಲಸ ಅಗತ್ಯವಿರುವ ಕಂಪ್ಯೂಟರ್ ಇತ್ಯಾದಿಗಳಲ್ಲಿ ನಿಯಮಿತವಾಗಿ ಕೆಲಸ ಮಾಡುವ ವೃತ್ತಿಪರರಿಗೆ ಚಿಕಿತ್ಸೆಯನ್ನು ಸೂಚಿಸಲಾಗಿದೆ.

ಖಿಝಿ

ಖಿಝಿ ಆಯುರ್ವೇದ ಚಿಕಿತ್ಸೆಯು ಸಿಂಕ್ರೊನೈಸ್ ಮಾಡಿದ ವಿಶೇಷ ಮಸಾಜ್, ಹರ್ಬಲ್ ಸ್ಟೀಮ್ ಬಾತ್ ಇತ್ಯಾದಿಗಳನ್ನು ಒಳಗೊಂಡಿರುವ ಸಂಪೂರ್ಣ ಪುನರ್ಯೌವನಗೊಳಿಸುವ ಚಿಕಿತ್ಸೆಯಾಗಿದೆ. ಈ ಎಚ್ಚರಿಕೆಯಿಂದ ಯೋಜಿಸಲಾದ ಆರೋಗ್ಯ ಕಾರ್ಯಕ್ರಮವು ಚೈತನ್ಯ ಮತ್ತು ಚೈತನ್ಯವನ್ನು ಸುಧಾರಿಸುವ ಕಡೆಗೆ ನಿರ್ದೇಶಿಸಲ್ಪಟ್ಟಿದೆ.

ಪಿಂಡ ಸ್ವೇದ

ವಿಶೇಷವಾಗಿ ತಯಾರಿಸಿದ ಮಿಶ್ರಣದಿಂದ ತುಂಬಿದ ಸಣ್ಣ ಲಿನಿನ್ ಚೀಲಗಳನ್ನು ನೋವನ್ನು ನಿವಾರಿಸಲು ಸ್ಥಳೀಯವಾಗಿ ಅನ್ವಯಿಸಲಾಗುತ್ತದೆ. ಗಿಡಮೂಲಿಕೆಗಳ ಸಾರಗಳ ಪರಿಣಾಮವು ನೋವನ್ನು ನಿವಾರಿಸುತ್ತದೆ ಮತ್ತು ಪೀಡಿತ ಪ್ರದೇಶವನ್ನು ವಿಶ್ರಾಂತಿ ಮಾಡುವುದು ಮತ್ತು ನಿರ್ಮಿಸುವುದು.

ದೇಹದಲ್ಲಿ ಸೆಲ್ಯುಲೈಟ್ ಶೇಖರಣೆಯನ್ನು ಕಡಿಮೆ ಮಾಡಲು ವಿಶೇಷ ಆಯುರ್ವೇದ ಗಿಡಮೂಲಿಕೆಗಳ ಪುಡಿ ಮಿಶ್ರಣವನ್ನು ಬಳಸಿಕೊಂಡು ಉತ್ತೇಜಿಸುವ ಮಸಾಜ್. ಈ ಚಿಕಿತ್ಸೆಯ ಮೂಲಕ ಇಡೀ ದೇಹವು ಆಯುರ್ವೇದದ ಪುಡಿಗಳ ತೀವ್ರವಾದ ಮಿಶ್ರಣವನ್ನು ಬಳಸಿಕೊಂಡು ಪುನರುಜ್ಜೀವನಗೊಳ್ಳುತ್ತದೆ, ಇದು ಕೊಬ್ಬಿನ ನಿಕ್ಷೇಪಗಳನ್ನು ಒಡೆಯುತ್ತದೆ ಮತ್ತು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.

ವಷ್ಪಸ್ವೇದನಮ್

ಇದು ಅತ್ಯುತ್ತಮ ಆಯುರ್ವೇದ ಚಿಕಿತ್ಸೆಯಾಗಿದ್ದು, ಇದರಲ್ಲಿ ಔಷಧೀಯ ಸಸ್ಯಗಳ ಎಲೆಗಳನ್ನು ಕುದಿಸಿ ಮತ್ತು ಪರಿಣಾಮವಾಗಿ ಹಬೆಯನ್ನು ಇಡೀ ದೇಹಕ್ಕೆ ನೀಡಲಾಗುತ್ತದೆ. ಈ ಆಯುರ್ವೇದ ಚಿಕಿತ್ಸೆಯು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ಕೆಲವು ಚರ್ಮ ರೋಗಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಆಯುರ್ವೇದ ಚಿಕಿತ್ಸೆಯು ಪಂಚಕರ್ಮ ಕಾರ್ಯವಿಧಾನಗಳ ಒಂದು ಭಾಗವಾಗಿದೆ.

ದೇಹದ ಆರೈಕೆ

ಆಯುರ್ವೇದ ದೇಹ ಶುದ್ಧೀಕರಣ ಅಥವಾ ಶೋಧನ್ ಚಿಕಿತ್ಸಾ ಎನ್ನುವುದು ಆಯುರ್ವೇದದ ಪಂಚಕರ್ಮ ಸಿದ್ಧಾಂತದ ಆಧಾರದ ಮೇಲೆ ಸರಿಯಾದ ಸಮತೋಲನವನ್ನು ಪಡೆಯಲು ಇಡೀ ದೇಹವನ್ನು ಶುದ್ಧೀಕರಿಸುವ ಪ್ರಕ್ರಿಯೆಯಾಗಿದೆ. ಫೇಸ್ ಪ್ಯಾಕ್, ಹರ್ಬಲ್ ಕ್ರೀಮ್ ಮಸಾಜ್, ಹರ್ಬಲ್ ಆಯಿಲ್ ಮಸಾಜ್, ಹರ್ಬಲ್ ಟೀ ಸೇವನೆ ಮತ್ತು ಸ್ಟೀಮ್ ಬಾತ್ ಅನ್ನು ಶಿಫಾರಸು ಮಾಡಲಾಗುತ್ತದೆ. ಈ ಚಿಕಿತ್ಸೆಯು ಚರ್ಮದ ಬಣ್ಣವನ್ನು ಹೆಚ್ಚಿಸುತ್ತದೆ, ದೀರ್ಘಕಾಲದವರೆಗೆ ಚರ್ಮದ ಟೋನ್ ಅನ್ನು ಹೆಚ್ಚಿಸುತ್ತದೆ!

ಉರೋವಸ್ತಿ

ವಿಶೇಷವಾಗಿ ತಯಾರಿಸಲಾದ ಬೆಚ್ಚಗಿನ ಗಿಡಮೂಲಿಕೆ ಎಣ್ಣೆಯನ್ನು ಎದೆಯ ಮೇಲೆ ಸುರಿಯಲಾಗುತ್ತದೆ ಮತ್ತು 45 ನಿಮಿಷಗಳ ಕಾಲ ಗಿಡಮೂಲಿಕೆಗಳ ಪೇಸ್ಟ್ ಗಡಿಯೊಳಗೆ ಇಡಲಾಗುತ್ತದೆ. ಈ ಮಸಾಜ್‌ಗೆ ಬಳಸಲಾಗುವ ಗಿಡಮೂಲಿಕೆಗಳ ತೈಲಗಳ ಗುಣಪಡಿಸುವ ಗುಣಲಕ್ಷಣಗಳು ರಕ್ತವನ್ನು ಸಮೃದ್ಧಗೊಳಿಸುತ್ತದೆ ಮತ್ತು ಬಲವಾದ ಸ್ನಾಯು ಮತ್ತು ಸಂಯೋಜಕ ಅಂಗಾಂಶಗಳನ್ನು ನಿರ್ವಹಿಸುತ್ತದೆ. ಸ್ನಾಯುವಿನ ಎದೆ ನೋವಿಗೆ ಉತ್ತೇಜಕ ಮತ್ತು ಚಿಕಿತ್ಸಕ ಚಿಕಿತ್ಸೆ.

ಬಸ್ತಿ

ಆಯುರ್ವೇದ ಬಸ್ತಿಯು ಗುದನಾಳದೊಳಗೆ ಎಳ್ಳಿನ ಎಣ್ಣೆಯ ಗಿಡಮೂಲಿಕೆಗಳ ಮಿಶ್ರಣಗಳನ್ನು ಮತ್ತು ಕೆಲವು ಗಿಡಮೂಲಿಕೆಗಳ ಸಿದ್ಧತೆಗಳನ್ನು ದ್ರವ ಮಾಧ್ಯಮದಲ್ಲಿ ಪರಿಚಯಿಸುವುದನ್ನು ಒಳಗೊಂಡಿರುತ್ತದೆ. ಬಸ್ತಿ, ವಾತ ಅಸ್ವಸ್ಥತೆಗಳ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ, ಆದಾಗ್ಯೂ ನಿಗದಿತ ಅವಧಿಯಲ್ಲಿ ಅನೇಕ ಎನಿಮಾಗಳು ಸಾಮಾನ್ಯವಾಗಿ ಅಗತ್ಯವಿರುತ್ತದೆ.

ವಂದನೆಗಳೊಂದಿಗೆ

Tuesday, March 22, 2022

ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ.

*ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ !!!* 
ಹೆತ್ತ ತಂದೆತಾಯಿ ಇರುವವರೆಗೆ ಮಾತ್ರ ಊರು ಒಡಹುಟ್ಟಿದವರು ಬಂಧು ಮಿತ್ರರು ಎಂಬ ಕೊಂಡಿ ಬೆಸೆದುಕೊಂಡಿರುತ್ತದೆ, ಅವರೇ ಕಾಲವಾದ ನಂತರ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ದೂರಾಗುತ್ತಲೇ ಹೋಗುತ್ತಾರೆ. ಇದು ಎಲ್ಲಾ ರೀತಿಯ ಕುಟುಂಬಗಳಿಗೂ ಅನ್ವಯಿಸುವುದಂತೂ ನಿಜ. ನಾವು ಎಷ್ಟೇ ಕಷ್ಟಪಟ್ಟು ಹಿಡಿದಿಟ್ಟುಕೊಂಡ ಬಾಂಧವ್ಯದ ಕೊಂಡಿಗಳು ಕಾಲಕ್ರಮೇಣ ಸಡಿಲವಾಗಿ ಎಲ್ಲೋ ಒಂದು ಕಡೆ ಜಾರುವ ಸಂದರ್ಭಗಳು ಬರಬಹುದು.   ಕೆಲವರು ತುಂಬಾ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ, ಅಂತಹವರಿಗೆ ಇಂತಹ ಪರಿಸ್ಥಿತಿಯನ್ನು ತಕ್ಷಣವೇ ಸುಧಾರಿಸಿಕೊಳ್ಳಲು ಕಷ್ಟವಾಗಬಹುದು. ಆದರೂ ಇದಂತೂ ಕಟುಸತ್ಯ, ಕಾಲಕ್ರಮೇಣ ಕುಟುಂಬ ಬೆಳೆದಂತೆ ಪ್ರತಿಯೊಬ್ಬರೂ ಅವರವರ ಸಂಸಾರಕ್ಕೆ ಪ್ರಾಮುಖ್ಯತೆ ಕೊಟ್ಟು ಹೆಂಡತಿ ಮಕ್ಕಳೆನ್ನುವ ಮಮಕಾರಕ್ಕೆ ಸಿಲುಕಿ ಅಸಹಾಯಕರಾಗಿ ಹಿಂದಿನಷ್ಟು ಕುಟುಂಬದೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹಾಗೋ ಹೀಗೋ ತಂದೆತಾಯಿ ಬದುಕಿರುವವರೆಗೆ ಅವರ ಮನಸ್ಸಂತೋಷಕ್ಕಾಗಿ ಯಾದರೂ ಅಗಾಗ್ಗೆ ಉಳಿದ ಅಣ್ಣತಮ್ಮಂದಿರೊಂದಿಗೆ ಹಾಗೂ ಅಕ್ಕತಂಗಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಒಮ್ಮೆ ಹಳೆಯ ಕೊಂಡಿ ಎನಿಸಿಕೊಂಡ ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ.
ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ನಿದರ್ಶನಗಳು ನೋಡಲು ಸಿಗುತ್ತದೆ. ಇಂತಹ ಒಂದು ಬೆಳವಣಿಗೆಗೆ ಮುಖ್ಯ ಕಾರಣ ನಮ್ಮ ಒಳಗಿರುವ ಸ್ವಾರ್ಥ ಹಾಗೂ ಅಹಂ ಕಾರಣವಷ್ಟೇ ಅಲ್ಲದೆ ಬೇರೇನೂ ಅಲ್ಲ. ಒಂದೇ ಕುಟುಂಬದವರಾದರೂ ಕೂಡ ಪ್ರತ್ಯೇಕ ಸಂಸಾರಹೂಡಿದ ಮೇಲೆ ತಮ್ಮ ಪ್ರತಿಷ್ಠೆ ಮೆರೆಯಲು ಇತರರನ್ನು ತುಚ್ಚವಾಗಿ ಕಾಣುವುದು ಹಾಗೂ ಎಲ್ಲಾ ವಿಷಯದಲ್ಲೂ ತಮಗೇ ಪ್ರಾಮುಖ್ಯತೆ ಸಿಗಬೇಕೆಂದು ಬಯಸುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. 
  ಇಂತಹ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾವು ನಮ್ಮವರೊಂದಿಗೇ ಅಪರಿಚಿತರಾಗುತ್ತಿರುವ ಸಂಶಯ ಮನಸ್ಸಿನಲ್ಲಿ ಮೂಡುವುದು ನಿಜವಲ್ಲವೇ ಸ್ನೇಹಿತರೆ.
ಹೆತ್ತವರು ಬದುಕಿರುವವರೆಗೂ ಕುಟುಂಬದಲ್ಲಿ ಒಂದು ಭದ್ರತೆ ಇರುತ್ತದೆ, ಯಾವುದೇ ವಿಚಾರವಾದರೂ ಸಮಯೋಚಿತವಾಗಿ ಯೋಚಿಸಿ ಬುದ್ದಿಹೇಳುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರತಿಯೊಬ್ಬ ಮಕ್ಕಳನ್ನು ಆಗಾಗ ನೋಡಬೇಕೆಂಬ ಹಂಬಲದಿಂದ ಎಷ್ಟೇ ದೂರವಿದ್ದರೂ ತಮ್ಮಲ್ಲಿಗೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಬ್ಬಹರಿದಿನಗಳೆಂದರೆ ಎಲ್ಲರೂ ಜೊತೆಯಾಗಿಯೇ ಆಚರಿಸಿಕೊಳ್ಳಬೇಕೆನ್ನುವ ಅಪೇಕ್ಷೆಯಂತೆ ಸಾಧ್ಯವಾದಷ್ಟು ಕುಟುಂಬದ ಐಕ್ಯತೆಯನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಇದನ್ನು ಎಲ್ಲರೂ ತಮ್ಮ ಕಾಲಾನಂತರವೂ ನಡೆಸಿಕೊಂಡು ಹೋಗಬೇಕೆನ್ನುವ ಅಪೇಕ್ಷೆಯನ್ನು ಹೊಂದಿರುತ್ತಾರೆ. ಅದರೆ ಇಂದಿನ ಜೀವನ ಶೈಲಿ ಈ ತಲೆಮಾರಿನ ತೋರಿಕೆಯ ಪ್ರೀತಿ ವಿಶ್ವಾಸ ಇಂತಹ ಒಂದು ಬಾಂಧವ್ಯದ ಕೊಂಡಿಬೆಸೆಯುವಲ್ಲಿ ವಿಫಲವಾಗಿದೆ ಎನ್ನಬಹುದು. ಬಹಳಷ್ಟು ಕುಟುಂಬಗಳು ಹಂಚಿಹರಡಿ ಪ್ರತ್ಯೇಕ ಸಂಸಾರಗಳಾಗಿ ಅಷ್ಟಕ್ಕೇ ಸೀಮಿತಗೊಂಡಿವೆ ಅವರ ಆಚರಣೆ ಹಾಗೂ ಬಾಂಧವ್ಯ...ತವರಿನ ಸಂಪರ್ಕಕಳೆದುಕೊಂಡು ಮನಸ್ಸಿನಲ್ಲೇ ದುಃಖಿಸುತ್ತಿರುವ ಎಷ್ಟೋ ಜನರನ್ನು ನಾವು ನೋಡುತ್ತಿದ್ದೇವೆ... ಇವತ್ತಿಗೂ ಜನಮಾನಸದಲ್ಲಿ ಉಳಿದಿರುವುದು ಮಾತ್ರ ತಂದೆತಾಯಿಗಳು ಬದುಕಿರುವವರೆಗೆ ಅನುಭವಿಸಿದ ಸಂಭ್ರಮದ ದಿನಗಳು ಹಾಗೂ ಆದರಾಥಿತ್ಯದ ಪ್ರೀತಿ ವಿಶ್ವಾಸದಿಂದ ಒಡಹುಟ್ಟಿದವರೊಂದಿಗೆ ನಕ್ಕುನಲಿದ ಕ್ಷಣಗಳು. ಎಲ್ಲಾ ಸದಸ್ಯರನ್ನೂ ಸಮಾನವಾಗಿ ಕಾಣುವ ಮನಸ್ಸು ಇರಬೇಕು ..‌ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೂ ಬೆರೆತು ಬಾಳಿನ ಸಂತೋಷವನ್ನು ಸವಿಯುವ ಮನಸ್ಸು ಮಾಡಿದರೆ ಜೀವನ ಸುಂದರವಾಗಿರುವುದು.
ಕುಟುಂಬ ಸದಸ್ಯರಿಗೆ ಪ್ರೀತಿಯಿಂದ ಕಾಣಿ ,ಗೌರವದಿಂದ ನೋಡಿ ಎಲ್ಲವೂ ಹಣದಿಂದ ತೂಗಬೇಡಿ ,ಹಳೆಯ ಮನಸ್ತಾಪದ ಬಗ್ಗೆ ಮೆಲಕು ಹಾಕಬೇಡಿ ,ನಾನು ಸರಿ ಅವರು ಕೆಟ್ಟವರು ಅನ್ನುವುದನ್ನು ಬಿಡಿ,ಉಳಿದ ಜೀವನವನ್ನು ಸಂತೋಷವಾಗಿರಿ, ಎಲ್ಲರನ್ನೂ ಖುಷಿ ಪಡಿಸುವ ಹಾಗೆ ಮಾತನಾಡಿ.

ನಮ್ಮ ಸಂಸಾರ, ಆನಂದ ಸಾಗರ
ಪ್ರೀತಿಯೆಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ.
ವಂದನೆಗಳೊಂದಿಗೆ.

Saturday, February 26, 2022

ಎಲ್ಲಾ ಮಹಿಳೆಯರು ದಯವಿಟ್ಟು ಇದನ್ನು ಓದಿ..." ಪುರುಷರೆಂದರೆ ಯಾರು?"

ಎಲ್ಲಾ ಮಹಿಳೆಯರು ದಯವಿಟ್ಟು ಇದನ್ನು ಓದಿ..." ಪುರುಷರೆಂದರೆ ಯಾರು?"
 ಮೊದಲ ಬಾರಿ  ಯಾರೊ ಒಬ್ಬರು ಪುರುಷರ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಆಡಿದ್ದಾರೆ....!!!!
ಪುರುಷ ಎಂದರೆ ಯಾರು?
❗ಪುರುಷ ಎಂದರೆ ದೇವರ ಸೃಷ್ಟಿಯ ಸುಂದರವಾದ ಭಾಗ
❗ಆತ ತನ್ನಲ್ಲಿರುವ ಚೋಕ್ಲೇಟನ್ನು ತನ್ನ ಅಕ್ಕ ತಂಗಿಯರಿಗಾಗಿ ತ್ಯಾಗ ಮಾಡುವವನು..
❗ಆತ ತನ್ನ ಕನಸುಗಳನ್ನು ತನ್ನ ಹೆತ್ತವರ ಮುಖದಲ್ಲಿ ನಗು ತರಿಸಲು ತ್ಯಾಗ ಮಾಡುವವನು..
❗ತನ್ನಲ್ಲಿರುವ ಎಲ್ಲಾ pocket money ಯನ್ನು ತಾನು ಪ್ರೀತಿಸುವ ಹುಡುಗಿಯ ನಗು ನೋಡಲು ಉಡುಗೊರೆಯ ಖರೀದಿಸಿ ಖಾಲಿ ಮಾಡುವವನು..
❗ತನ್ನ ಇಡೀ ಯೌವನ ವನ್ನು ತನ್ನ ಪತ್ನಿ ಮಕ್ಕಳಿಗಾಗಿ ತಡರಾತ್ರಿವರೆಗೆ ದುಡಿದು ಸವೆಸುವವನು..
❗ಮುಂದಿನ ಭವಿಷ್ಯಕ್ಕಾಗಿ ಮನೆ ನಿರ್ಮಾಣ ಮಾಡಲು ಬ್ಯಾಂಕಿನಿಂದ loan ತೆಗೆದುಕೊಂಡು ತನ್ನ ಜೀವನ ಪೂರ್ತಿ ಆ ಲೋನ್ ಪಾವತಿಸುವವನು.
❗ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಆತ ತಾಯಿ,   ಪತ್ನಿ, ,ಹಾಗೂ boss ನ ಕೈಯಿಂದ ಬೈಗುಳ ಕೇಳ್ಬೇಕು....
❗ಆತನ ಜೀವನ ಬೇರೆಯವರಿಗೆ ಸಂತೋಷ ನೀಡುವುದರಲ್ಲೇ ಕೊನೆಯಾಗುತ್ತದೆ.....
ಒಂದು ವೇಳೆ ಆತ ಹೊರಗಡೆ ಹೋದರೆ ಜವಾಬ್ದಾರಿ ಇಲ್ಲದ ಮನುಷ್ಯ ..❓
ಆತ ಮನೆಯಲ್ಲೇ ಇದ್ದರೆ ಸೋಮಾರಿ...❓
ಒಂದು ವೇಳೆ ಮಕ್ಕಳಿಗೆ ಬೈದರೆ ಆತ ರಾಕ್ಷಸ ❓
ಮಕ್ಕಳಿಗೆ ಬೈಯ್ಯದಿದ್ದರೆ ಆತ ಜವಾಬ್ದಾರಿ ಇಲ್ಲದ ಮನುಷ್ಯ. ❓
 ಪತ್ನಿಯನ್ನು ಕೆಲಸದಿಂದ ಬಿಡಿಸಿದರೆ ಪತ್ನಿಯ ಮೇಲೆ ಅಪನಂಬಿಕೆ ಹೊಂದಿರುವವ❓ 
ಒಂದು ವೇಳೆ ಪತ್ನಿಯನ್ನು ಕೆಲಸಕ್ಕೆ ಕಲಿಸಿದರೆ ಪತ್ನಿಯನ್ನು ದುಡಿಸಿ ತಿನ್ನುವವನು...❓
ಒಂದು  ವೇಳೆ ತಾಯಿಯ ಮಾತು ಕೇಳಿದರೆ ತಾಯಿಯ ಮಗ ❓
ಪತ್ನಿಯ ಮಾತು ಕೇಳಿದರೆ ಹೆಂಡತಿಯ ಗುಲಾಮ ❓
💎 ಆತ ನಿಮಗಾಗಿ ಅದೆಷ್ಟು ತ್ಯಾಗ ಮಾಡಿರಬಹುದೆಂಬ ಅರಿವು ನಿಮಗಿರಲಿಕ್ಕಿಲ್ಲ.. ಹಾಗಾಗಿ ಪ್ರತಿ ಪುರುಷರನ್ನು ಗೌರವಿಸಿ....

ನುಂಗುವ ಮನಸಿದ್ದರೆ* ಕೋಪವನ್ನು ನುಂಗು*ಮಾಡುವ ಮನಸಿದ್ದರೆ* ಸತ್ಕಾರ್ಯವನ್ನು ಮಾಡು

*ನುಂಗುವ ಮನಸಿದ್ದರೆ*
       ಕೋಪವನ್ನು ನುಂಗು
*ಮಾಡುವ ಮನಸಿದ್ದರೆ*
       ಸತ್ಕಾರ್ಯವನ್ನು ಮಾಡು
*ತ್ಯಜಿಸುವ ಮನಸಿದ್ದರೆ*
         ಆಹಂಕಾರ ತ್ಯಜಿಸು
*ಹೇಳುವ ಮನಸಿದ್ದರೆ*
        ಸತ್ಯವನ್ನು ಹೇಳು
*ಕೊಡುವ ಮನಸಿದ್ದರೆ*
       ವಿದ್ಯೆ,ಅನ್ನವನ್ನು ಕೋಡು
*ನೆನಯುವ ಮನಸಿದ್ದರೆ*
   ಸಹಾಯ ಮಾಡಿದವರನ್ನು ನೆನೆ
*ಬಾಳುವ ಮನಸಿದ್ದರೆ*
       ಹಕ್ಕಿಯಂತೆ ಬಾಳು
*ನಡೆಯುವ ಮನಸಿದ್ದರೆ*
      ಧರ್ಮದಂತೆ ನಡೆ
*ಪೂಜಿಸುವ ಮನಸಿದ್ದರೆ*
    ತಂದೆ ತಾಯಿಯನ್ನು ಪೂಜಿಸು
*ಉತ್ತಮ ಆರೋಗ್ಯಕ್ಕೆ ಮನಸಿದ್ದರೆ* 
ಪ್ರತಿ ದಿನ ಬೆಳಿಗ್ಗೆ ಯೋಗ ಮಾಡು
*ಚಂಚಲ ಮನಸ್ಸಿದ್ದರೆ*
ಪ್ರತಿ ನಿತ್ಯ ಧ್ಯಾನ ಮಾಡು
     *🙏ಶುಭೋದಯ*🙏

Friday, February 25, 2022

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು...????

*ಈ ಲೇಖನ ತುಂಬಾ ಅರ್ಥಪೂರ್ಣವಾಗಿದೆ.* 
🙏🏼😊💐💐🙏🙏

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು...????
                                                        ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ... ಆದರೆ ಪ್ಲಾಸ್ಟಿಕ್ ಕೊಡ ಹಾಗಲ್ಲ.ನೀರು ತುಂಬಿಸಲು ಪ್ರಯಾಸ ಪಡಬೇಕು... ಬೇಗನೇ ಬಾಗುವುದೂ ಇಲ್ಲ. ಎತ್ತಿ ಕುಕ್ಕಿ ತುಂಬಿಸಬೇಕು. ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ.

ಯಾವುದು ಬಾಗುತ್ತದೆಯೋ...  ಅದು ಪೂರ್ಣ ತುಂಬಿಕೊಳ್ಳುತ್ತದೆ. ಯಾವುದು ಬಾಗುವುದಿಲ್ಲವೊ ಅದು ಅಪೂರ್ಣವೇ... 
ಇದೇ ಬದುಕಿನ ಸತ್ಯವೂ ಕೂಡ.... 
ನೈವೇದ್ಯಕ್ಕೆ ನಾವು ಭತ್ತದ ಅಕ್ಕಿಯ ಅನ್ನವನ್ನೇ ಶ್ರೇಷ್ಠವೆನ್ನುತ್ತೇವೆ. ಜೋಳದ ರೊಟ್ಟಿ  ನೈವೇದ್ಯ ಮಾಡುವುದಿಲ್ಲ.. 
ಕಾರಣ.. 
ಭತ್ತದ ತೆನೆಗಳು ತನಗೆ ಜನ್ಮನೀಡಿದ ಭೂತಾಯಿಗೆ ತಲೆಬಾಗಿಸುತ್ತದೆ. ಆದರೆ ಜೋಳದ ತೆನೆ ಕಾಳು ತುಂಬಿಕೊಂಡರೂ ಸಹ ಯಾವ ಕಾರಣಕ್ಕೂ ಭೂಮಿಗೆ ತಲೆ ಬಗ್ಗಿಸದೇ ಆಕಾಶ ನೋಡುತ್ತ ನಿಲ್ಲುತ್ತವೆ.

ಇದರರ್ಥ ಇಷ್ಟೇ... ಸಂಸ್ಕೃತಿಗೆ, ಸಂಪ್ರದಾಯಕ್ಕೆ, ಗುರುಹಿರಿಯರಿಗೆ,  ಆ ಭಗವಂತನಿಗೆ, ಭೂ ತಾಯಿಗೆ, ದೇಶಕ್ಕೆ ಹಾಗೂ ಹಲವು ಪೂಜ್ಯರಿಗೆ ತಲೆಬಾಗುವದನ್ನು ನಾವು ಕಲಿಯಬೇಕು.ಆಗಲೇ ಮನುಷ್ಯನ ವ್ಯಕ್ತಿತ್ವ ಬೆಳೆಯುವುದು.. ಅಹಂಕಾರ ಅಧಿಕಾರ ಶಾಶ್ವತವಲ್ಲ... ನಾನು ಎಂಬ ಗರ್ವ ತನ್ನೊಡಲನ್ನೇ  ಸುಡುತ್ತದೆ. ಕೋಪ, ಅಪಹಾಸ್ಯ ಅವಮಾನ, ದರ್ಪ, ಹಾಗೂ ಭ್ರಷ್ಠತೆ ಮನುಷ್ಯನ ಸರ್ವನಾಶಕ್ಕೆ ಕಾರಣ..

ಎಲ್ಲವನ್ನೂ ನೋಡುತ್ತಿರುವ 
ಆ ಭಗವಂತ ಅಲ್ಲಿ ಕುಳಿತು ನಮ್ಮಾಟವ ನೋಡುತ್ತಿರುತ್ತಾನೆ...

ಇದು ಅವನ ಮೈದಾನ ನಾವಿಲ್ಲಿ ಆಟಗಾರರಷ್ಟೇ...
ಎಂಬ ಸತ್ಯದ ಅರಿವಾಗಬೇಕು ... 

ಜಾಸ್ತಿ ಓದಿದ್ದೀನಿ, 
ಎನ್ನುವ ಗರ್ವ ಬೇಡ....
ಓದಲು ಸಾಗರದಷ್ಟಿದೆ ಇನ್ನೂ... 

ನಾನೊಬ್ಬನೇ ಎಲ್ಲವನ್ನೂ ಬರೆಯುತ್ತೇನೆ... 
ಎನ್ನುವ ಅಹಂ ಬೇಡ....
ದಿನಕ್ಕೆ ಸಾವಿರಾರು ಪುಸ್ತಕಗಳು ಮುದ್ರಣವಾಗುತ್ತಲೇ ಇವೆ... ಎಲ್ಲ ಬಲ್ಲವರಿಲ್ಲ !!
ಬಲ್ಲವರು ಬಹಳಿಲ್ಲ!!!

ಮಗುವಿನಿಂದ ಹಿಡಿದು 
ಗುರು ಹಿರಿಯರವರೆಗೂ ನಾವಿನ್ನೂ ಕಲಿಯುವುದು ತುಂಬಾ ಇದೆ..

ಇಷ್ಟೇ ಮುಗಿಯಿತು ರಾತ್ರಿಯಾಯ್ತು ಅಂತ ತಿಳಿದರೆ ಇನ್ನೆಲ್ಲೋ ಬೆಳಕಿನ ಆರಂಭವಾಗಿರುತ್ತದೆ..

ನೀ ಸಾಗುವ ಪಥ ಹೊಸಹೊಸ ಪಾಠಗಳನ್ನು ಕಲಿಸುತ್ತಾ ಅನುಭವಗಳನ್ನು ನೀಡುತ್ತಾ ಸಾಗುತ್ತದೆ, ಕೆಡಕನ್ನು ಒಳಿತನ್ನು ಆಯ್ಕೆ ಮಾಡಿಕೊಳ್ಳುವದು ನಿನಗೆ ಬಿಟ್ಟಿದ್ದು...

ಏಕೆಂದರೆ ಪ್ರತಿಯೊಂದಕ್ಕೂ ಫಲಾಫಲ ನಮಗಿದೆ.
ಆದ್ದರಿಂದ  ಯೋಚಿಸಿ ನಡೆಯಬೇಕು...!
ಆಲೋಚಿಸಿ ನುಡಿಯಬೇಕು.

ಗುರು ಕಲಿಸಿದ ವಿದ್ಯೆ..
ತಾಯಿ ನೀಡಿದ ಮಮತೆ.. 
ತಂದೆ ಹೇಳಿದ ಸಲಹೆ..
 ಕಿರಿಯರು ನೀಡಿದ ಪ್ರೀತಿ.. 
ರೈತ ಕೊಟ್ಟ ಅನ್ನ..
ಯೋಧ ನೀಡಿದ ರಕ್ಷಣೆ..
ನಿನ್ನ ಹೊತ್ತ ಭೂಮಿತಾಯಿ.. ನಿನಗೆ ಭಾಷೆ ಸಂಸ್ಕೃತಿ ಕಲಿಸಿದ ನಾಡು..
ದೇಶ ಕಷ್ಟಕಾಲದಲ್ಲಿ ಜೊತೆಯಾದ ಸ್ನೇಹ ಬಾಂಧವ್ಯಗಳನ್ನು  ಎಂದಿಗೂ ಮರೆಯದಿರು..

ಬದುಕಿನಲ್ಲಿ ತಲೆ ಬಾಗುವುದನ್ನು ಕಲಿಯೋಣ
ಬದುಕುವುದನ್ನು ಕಲಿಯೋಣ
ಇತರರು ಬದುಕಲು ಸಹಕರಿಸೋಣ

ವಂದನೆಗಳೊಂದಿಗೆ

ಏ ಹೆಂಡತಿ ನೀ ಭಾಳ ಕಾಡುತಿ

ಏ ಹೆಂಡತಿ 
ನೀ ಭಾಳ ಕಾಡುತಿ,
ನಂದೆಲ್ಲಾ ನಿಂದೇ ಅಂದ್ರೂ ,
ನಂಗೇನ್ ಮಾಡಿದಿ 
ಎಂದು ಕೇಳುತಿ .,
ಹೆಂಡತಿ ನೀ ಭಾಳ ಕಾಡುತಿ ..,

ಹೊರಕ್ಕ್ ಹೋಗಿ ಬಂದ್ಮ್ಯಾಕೆ 
ಜನ್ಮಾ ನೀ ಜಾಲಾಡತಿ ,
ಸ್ವಲ್ಪ್ ಹೊತ್ತಾದ್ರೂ ಥಕಥೈ 
ಅಂತ ಕುಣಿಯುತಿ ,
ಸಂಜೆ ಹೊರಬಿದ್ದೊಡೆ 
ಕಣ್ಣು ಕೆಂಪ ಮಾಡುತಿ ,
ಪ್ರಾಣಾನ ನೀನ್ ಹಿಂಡುತಿ.,
ಹೆಂಡತಿ ನೀ ಭಾಳ ಕಾಡುತಿ ..,

ವಾರವಾದ್ರೂ ಹೊರಗೆಲ್ಲೂ 
ಕರೆದೊಯ್ದಿಲ್ಲ ಎಂದು ಕೆಣುಕುತಿ ,
ಮನೆಯೂಟ ಒಂದ್ತುತ್ತು ಕಮ್ಮಿ 
ತಿಂದ್ರುನೂ ಅನುಮಾನ ನೀ ಪಡತೀ ,
ಕಣ್ಣಂಚಿನಲಿ ಗಂಗಾಭಾಗೀರತಿಯ 
ನೀನು ತೋರುತೀ.,
ಹೆಂಡತಿ ನೀ ಭಾಳ ಕಾಡುತಿ ..,

ಮೊದಮೊದಲು ಚೆಲುವು ವಯ್ಯಾರಗಳ ಒಡತಿ ,
ಈಗೀಗ ಚಿನ್ನ ರನ್ನ ಎಂದರೂ 
ನೀ ಮೂಗು ಮುರಿಯುತಿ ,
ತವರಿನ ಮಾತೆತ್ತಿದ್ರ 
ಮಾತ್ರ ನೀ ಬಳುಕುತಿ .,
ಹೆಂಡತಿ ನೀ ಭಾಳ ಕಾಡುತಿ ..,

ಮಕ್ಕಳನು ಕಣ್ಣಲ್ಲಿ ಕಣ್ಣಿಟ್ಟು 
ನೀನ್ ಸಾಕುತಿ ,
ಅವರಾ ಆಗಸ ಮುಟ್ಟಲೆಂದ್ 
ನೀನು ಬಯಸುತಿ ,
ಅವರೆದುರುತ್ತರಕೆ ಮುಖವ 
ಸಣ್ಣ ಮಾಡುತಿ ,
ಅದಕಾಗಿ ನನ್ಮ್ಯಾಲೆ 
ನೀನ್ ಸಿಡುಕುತಿ .,
ಹೆಂಡತಿ ನೀ ಭಾಳ್ ಕಾಡುತಿ ..,

ಈಗೀಗ ದ್ಯಾವ್ರ ಮ್ಯಾಕೆ 
ಜಾಸ್ತಿಯಾತು ನಿಂದ ಭಕುತಿ ,
ಏನೇನೊ ಹರಕೆ ನೀನು ಹೊರತಿ ,
ಅದನೆಲ್ಲ ತೀರಿಸೆಂದು ನನ್ನ ಬೇಡುತಿ ,
ತುಳಸಿಕಟ್ಟೆ ಪ್ರತಿದಿನ 
ನೀನು ಸುತ್ತುತಿ ,
ನಿನಹಿಂದೆ ನಾ ಸುತ್ತಲೆಂದ್ ಬಯಸುತಿ .,
ಹೆಂಡತಿ ನೀ ಭಾಳ ಕಾಡುತಿ ..,

ಏನಾದರೆಂತು 
ನನ್ನೊಲವಿಗೆ  ನೀನೊಡತಿ ,
ನನ ಜೀವನದ ಜೋಕಾಲಿ 
ನೀ ಜೀಕುತಿ ,
ನನ ಬಾಳೆಂಬ ಗಾಳಿಪಠದ 
ಸೂತ್ರ ನೀ ಎಳೆಯುತಿ ,
ನನ ಸಂಸಾರವ ನೀ ಬೆಳಗುತಿ ,
ನನ ಕಷ್ಟ ಸುಖಗಳ ಸಮಪಾತಿ ,
ಹಂಗಂತಲೇ ನಿನ್ಮ್ಯಾಗ 
ನಂಗೈತಿ ಬಲು ಪ್ರೀತಿ .....

 ವಂದನೆಗಳೊಂದಿಗೆ

ಮನದಮಾತು

✍...ಮನದಮಾತು.

👉 ನೋವು ಕೊಟ್ಟವರೆ ನನಗೆ ಮಾರ್ಗದರ್ಶಕರು.
👉 ನಂಬಿಸಿ ಮೋಸ ಮಾಡಿದವರೆ ನನಗೆ ಗುರುಗಳು.
👉 ಕಷ್ಟ ಕೊಟ್ಟವರೆ ನನಗೆ ಹಿತೈಸಿಗಳು.
👉 ಅವಮಾನ ಮಾಡಿದವರೆ ನನಗೆ ಸ್ಫೂರ್ತಿದಾತರು.
👉 ಕಾಲೆಳೆದವರೆ ನನಗೆ ಶಕ್ತಿದಾತರು.
👉 ತಿರಸ್ಕಾರ ಮಾಡಿದವರೆ ನನಗೆ ಪುರಸ್ಕೃತರು.
👉 ಹಂಗಿಸಿದವರೆ ನನಗೆ ಅನ್ನದಾತರು.
👉 ನಿಂದಿಸಿದವರೆ ನನಗೆ ಬದುಕನ್ನಿತ್ತವರು.
👉 ದೂರ ತಳ್ಳಿದವರೆ ನನಗೆ ಬಂಧುಗಳು.
👉👉 ಎಲ್ಲಕ್ಕೂ ಮಿಗಿಲಾಗಿ ಪ್ರೀತಿ ಕೊಟ್ಟವರೇ ನನ್ನ ದೇವರುಗಳು, ಹಾಗಾಗಿ ಈ ಜಗದಲ್ಲಿ ನನಗೆ ಯಾರೂ ಶತೃಗಳಲ್ಲ. ..👍👍

Monday, February 21, 2022

ಪ್ರಕೃತಿಯ ಮೂರು ಕಟು ಸತ್ಯಗಳು

ಪ್ರಕೃತಿಯ ಮೂರು ಕಟು ಸತ್ಯಗಳು :-
1) ಹೊಲವನ್ನು ಉತ್ತು, ಬಿತ್ತದಿದ್ದರೆ, ಪ್ರಕೃತಿ ಅದನ್ನು ಹುಲ್ಲಿನಿಂದ ತುಂಬಿಸುತ್ತದೆ. ಅದೇ ರೀತಿ, ಧನಾತ್ಮಕ  ಆಲೋಚನೆಗಳು ಮನಸ್ಸಿನಲ್ಲಿ ತುಂಬದಿದ್ದರೆ,  ನಕಾರಾತ್ಮಕ ಆಲೋಚನೆಗಳು ತಾನೇ ತಾನಾಗಿ  ಸ್ಥಾನವನ್ನು ಪಡೆದುಕೊಳ್ಳುತ್ತವೆ.
2) ಯಾರು ಏನನ್ನು ಹೊಂದಿದ್ದಾರೋ,  ಅದನ್ನು ಮಾತ್ರ ಹಂಚುತ್ತಾರೆ. ಮನದಲ್ಲಿ ಸಂತೋಷ ಹೊಂದಿರುವವರು, ಸಂತೋಷವನ್ನು ಹಂಚುತ್ತಾರೆ. ಭ್ರಮೆಯನ್ನು ಹೊಂದಿರುವವರು ಭ್ರಮೆಯನ್ನೇ ಬಿತ್ತರಿಸುತ್ತಾರೆ, ಭಯವನ್ನೇ ತುಂಬಿಕೊಂಡವರು ಭಯವನ್ನೇ ವಿತರಿಸುತ್ತಾರೆ.
3) ನಾವು ಜೀವನದಲ್ಲಿ ಜೀರ್ಣವಾಗುವಷ್ಟೇ ಪಡೆಯಬೇಕು. ಅದನ್ನೇ  ಜೀರ್ಣಿಸಿಕೊಳ್ಳಲು ಕಲಿಯಬೇಕು. ಏಕೆಂದರೆ, ಆಹಾರ ಜೀರ್ಣವಾಗದಿದ್ದರೆ ರೋಗಗಳು ಹೆಚ್ಚಾಗುತ್ತವೆ. ಹಣ ಜೀರ್ಣವಾಗದಿದ್ದರೆ, ತೋರಿಕೆ, ಗರ್ವ ಹೆಚ್ಚಾಗುತ್ತದೆ. ಮಾತು  ಜೀರ್ಣವಾಗದಿದ್ದರೆ, ಮನಸ್ತಾಪಗಳು ಹೆಚ್ಚಾಗುತ್ತವೆ. ಹೊಗಳಿಕೆ ಜೀರ್ಣವಾಗದಿದ್ದರೆ, ದುರಹಂಕಾರ ಬೆಳೆಯುತ್ತದೆ. ತೆಗಳಿಕೆ ಜೀರ್ಣವಾಗದಿದ್ದರೆ, ದ್ವೇಷ ಬೆಳೆಯುತ್ತದೆ. ಸಂಸಾರದ ಗುಟ್ಟು ಜೀರ್ಣವಾಗದಿದ್ದರೆ, ಮನಃಕ್ಲೇಶ ಹೆಚ್ಚಾಗುತ್ತದೆ. ದುಃಖ ಜೀರ್ಣವಾಗದಿದ್ದರೆ, ಹತಾಶೆ ಬೆಳೆಯುತ್ತದೆ. ಸಂತೋಷ ಜೀರ್ಣವಾಗದಿದ್ದರೆ, ವಿಕೃತಿ ಹೆಚ್ಚಾಗುತ್ತದೆ.
*****
ವಂದನೆಗಳೊಂದಿಗೆ

ಮನಸ್ಸಿನಲ್ಲಿ ವೈರತ್ವವನ್ನು ಹುಟ್ಟಿಸುವ ಬದಲು ಚೆನ್ನಾಗಿ ಯೋಚಿಸಿ ನೋಡೋಣ

ಒಮ್ಮೆ ಒಂದು ಏಡಿ ಸಮುದ್ರದ ತೀರದಲ್ಲಿ ನಡೆದುಕೊಂಡು ಹೋಗುತ್ತಾ ಇತ್ತು , ಹಾಗೆಯೇ ಸ್ವಲ್ಪ ಮುಂದಕ್ಕೆ ಹೋಗಿ ತಿರುಗಿ ತಿರುಗಿ ತನ್ನ ಕಾಲಿನ ಅಚ್ಚು ನೋಡಿ ಖುಷಿ ಪಡುತ್ತಾ ಇತ್ತು. ಇನ್ನು ಮುಂದಕ್ಕೆ ನಡೆದು ತನ್ನ ಕಾಲಿನ ಅಚ್ಚ ಒಂದು ಡಿಸೈನ್ ಆಗಿದೆ ಎಂದು ಅದನ್ನು ನೋಡಿ ಇನ್ನು ಖುಷಿ ಪಟ್ಟಿತು.
        ಅಷ್ಟರಲ್ಲೇ ಜೋರಾಗಿ ಸಮುದ್ರದ ಅಲೆ ಬಂದು ಏಡಿಯ ಕಾಲಿನ ಅಚ್ಚು ಎಲ್ಲಾ ಅಳಸಿ ಹೋಯಿತು. ಇದನ್ನು ಕಂಡು ಕೋಪಿತನಾಗಿ ಏಡಿಯು ಸಮುದ್ರದ ಅಲೆಗೆ ಕೇಳಿತು : " ಎ ಅಲೆಯೇ ನಾನು ನಿನ್ನನ್ನು ನನ್ನ ಗೆಳೆಯನೆಂದು ಅಂದು ಕೊಂಡಿದ್ದೆ , ಇದು ಏನು ಮಾಡಿದೆ ನೀನು ನನ್ನ ಕಾಲಿನ ಸುಂದರ ಅಚ್ಚನ್ನು ಯಾಕೆ ಅಳಿಸಿ ಬಿಟ್ಟೆ ನೀನೊಬ್ಬ ಗೆಳೆಯನಾ " .

       ಆಗ ಅಲೆಯು ಹೇಳಿತು : " ಅಲ್ಲಿ ನೋಡು ಮೀನುಗಾರರು ಕಾಲಿನ ಅಚ್ಚನ್ನು ನೋಡಿ ಏಡಿಯನ್ನು ಹಿಡಿಯುತ್ತಾ ಇದ್ದಾರೆ, ಓ ಗೆಳೆಯ ಅವರು ನಿನ್ನನು ಹಿಡಿಯ ಬಾರದೆಂದು ನಿನ್ನ ಕಾಲಿನ ಅಚ್ಚನ್ನು ಅಳಿಸಿಬಿಟ್ಟೆ ಕಣೋ ".
      
        ನಿಜ..... ನಾವು ಕೆಲವೊಮ್ಮೆ ನಮ್ಮ ಎದುರಿನವರ ಮಾತನ್ನು ಕೇಳುವುದಿಲ್ಲ, ಮತ್ತು ನಾವು ನಮ್ಮ ಯೋಚನೆಯ ಅನುಗುಣವಾಗಿ ಅವರನ್ನು ತಪ್ಪೆಂದು ಬಾವಿಸುತ್ತೇವೆ. 
*ಮನಸ್ಸಿನಲ್ಲಿ ವೈರತ್ವವನ್ನು ಹುಟ್ಟಿಸುವ ಬದಲು ಚೆನ್ನಾಗಿ ಯೋಚಿಸಿ , ಮಾತಿನ ತಿರುಳನ್ನು ಅರಿತು ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವುದೇ ಲೇಸು ...*
ವಂದನೆಗಳೊಂದಿಗೆ

ಬಿಸಿ ಹಾಲಿಗೆ ಬೆಲ್ಲ ಹಾಕಿ ಕುಡಿದರೆ ಏನು ಪ್ರಯೋಜನವಾಗುತ್ತದೆ ತಿಳಿದುಕೊಳ್ಳೋಣ.

ಬಿಸಿ ಹಾಲಿಗೆ ಬೆಲ್ಲ ಹಾಕಿ ಕುಡಿದರೆ ಏನು ಪ್ರಯೋಜನವಾಗುತ್ತದೆ ತಿಳಿದುಕೊಳ್ಳೋಣ.

ಹಾಲು ಸಂಪೂರ್ಣ ಆಹಾರ. ನಮ್ಮ ಶರೀರಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಗಳನ್ನು ಒದಗಿಸುತ್ತದೆ.ಬೆಲ್ಲವನ್ನು ಸಕ್ಕರಗೆ ಬದಲಿಯಾಗಿ ಉಪಯೋಗಿಸುತ್ತಾರೆ. ಬೆಲ್ಲದಿಂದ ಅನೇಕ ಸಿಹಿ ಪದಾರ್ಥಗಳನ್ನೂ ಮಾಡುತ್ತಾರೆ. ಸಕ್ಕರೆಗಿಂತ ಬೆಲ್ಲವನ್ನು ಸೇವಿಸುವುದರಿಂದ ಹೆಚ್ಚಿನ ಲಾಭವಿದೆ. ಬಿಸಿ ಬಿಸಿ ಹಾಲಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವಿಸಿದರೆ ಹೇಗಿರುತ್ತದೆಂದು ಗೊತ್ತೆ? ತುಂಬಾ ರುಚಿಕರವಾಗಿರುತ್ತದೆ…! ಕೆಲವರು ಹೀಗೆ ಬಿಸಿ ಹಾಲಿಗೆ ಬೆಲ್ಲವನ್ನು ಸೇರಿಸಿ ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಕೇವಲ ರುಚಿಕರವಾಗಿರುವುದೇ ಅಲ್ಲದೇ ಇತರೆ ಅನಾರೋಗ್ಯ ಸಮಸ್ಯೆಗಳು ಸಹ ನಿವಾರಣೆ ಆಗುತ್ತವೆ. ಈ ರೀತಿ ಕುಡಿಯುವುದರಿಂದ ನಮಗಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ

1.ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಸೇವಿಸುವುದರಿಂದ ಶರೀರದ ತೂಕ ಸಮತೋಲನದಲ್ಲಿರುತ್ತದೆ.

2. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ. ಇದರ ಪರಿಣಾಮವಾಗಿ ಆರೋಗ್ಯ ಏರು ಪೇರಾಗುತ್ತದೆ. ಶರೀರಕ್ಕೆ ಪೋಷಕಾಂಷಗಳು ಸೇರ್ಪಡೆಯಾಗುವುದಿಲ್ಲ. ಆದರೆ,ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.

3. ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸಿದರೆ, ಅದರಲ್ಲಿರುವ ಪೋಷಕಾಂಶಗಳಿಂದ ತಲೆ ಕೂದಲು ಹೊಳಪಾಗುತ್ತವೆ. ಕೂದಲು ಉದುರುವುದು ನಿಂತುಹೋಗುತ್ತದೆ, ತಲೆಹೊಟ್ಟು ನಿವಾರಣೆಯಾಗುತ್ತದೆ.

4. ಮಹಿಳೆಯರಿಗೆ ಋತುಚಕ್ರದಲ್ಲಿ ಪೀಡಿಸುವ ವಿವಿಧ ಸಮಸ್ಯೆಗಳು,ಮುಖ್ಯವಾಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ.

5.ಬೆಲ್ಲ ಬೆರೆಸಿದ ಹಾಲಿಗೆ ಪ್ರಾಕೃತಿಕವಾದ ಆಂಟಿಬಯಾಟಿಕ್,ಆಂಟಿ ವೈರಲ್ ಗುಣಗಳಿರುತ್ತದೆ. ಆದುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಸೊಂಕುಗಳು ಕಡಿಮೆಯಾಗುತ್ತವೆ.

6. ವೃದ್ಧಾಪ್ಯದಲ್ಲಿ ಬಹಳಷ್ಟು ಮಂದಿ ಕೀಲು ನೋವುಗಳ ಸಮಸ್ಯೆಗೆ ಗುರಿಯಾಗುತ್ತಾರೆ. ಅಂತಹವರು ಪ್ರತಿದಿನ ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ನೋವಿನಿಂದ ಉಪಶಮನ ಲಭಿಸುತ್ತದೆ ಮತ್ತು ಕೀಲುಗಳು ದೃಢವಾಗುತ್ತವೆ.

ವಂದನೆಗಳೊಂದಿಗೆ

ಇಂದಿನ ಸತ್ಯವಿಷಯಗಳು



""""""""ಇಂದಿನ ಸತ್ಯವಿಷಯಗಳು”"""""""""""

🔹ರಸ್ತೆಗಳು ವಿಶಾಲವಾಗಿವೆ, ಆದರೆ 
      ದೃಷ್ಟಿಕೋನ ಸಂಕುಚಿತವಾಗಿವೆ!
🔹ನಾವು ಹೆಚ್ಚು ಖರೀದಿಸುತ್ತೇವೆ, ಆದರೆ 
     ಕಡಿಮೆ ಉಪಯೋಗಿಸುತ್ತೇವೆ!
🔹ನಮ್ಮ ಮನೆಗಳು ದೊಡ್ಡದಾಗುತ್ತಿವೆ,
      ಆದರೆ ಕುಟುಂಬ ಚಿಕ್ಕದಾಗಿರುತ್ತದೆ !
🔹ಅನುಕೂಲಗಳು ಹೆಚ್ಚಿವೆ, ಆದರೆ 
     ಅನುಭವಿಸಲು ಸಮಯವೇ ಇಲ್ಲ!
🔹ಅಸಾಮಾನ್ಯ ವಿದ್ಯಾರ್ಹತೆಗಳಿವೆ,ಆದರೆ 
      ಸಾಮಾನ್ಯ ಜ್ಙಾನ ಕಡಿಮೆಯಾಗಿದೆ!
🔹ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ 
      ವಿವೇಚನೆ ಕಡಿಮೆಯಾಗಿದೆ!
🔹ಪರಿಣತರು ಹೆಚ್ಚಿದ್ದಾರೆ,
      ಸಮಸ್ಯೆಗಳು ಹೆಚ್ಚಿವೆ!
🔹ಔಷಧಿಗಳು ಹೆಚ್ಚಿವೆ,
     ಆರೋಗ್ಯ ಕಡಿಮೆಯಾಗಿದೆ!
🔹ನಾವು ಹೆಚ್ಚು ಗಳಿಸುತ್ತೇವೆ, ಆದರೂ
     ನೆಮ್ಮದಿಯಿಂದ ಜೀವಿಸುತ್ತಿಲ್ಲ.
🔹ತುಂಬ ವೇಗವಾಗಿ ಹೋಗುತ್ತೇವೆ,ತುಂಬ 
     ಬೇಗ ಕೋಪಿಸಿಕೊಳ್ಳುತ್ತೇವೆ!
🔹ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ,
     ಬೆಳಿಗ್ಗೆ ತುಂಬ ಬಳಲುತ್ತೇವೆ
🔹ಕಡಿಮೆ ಓದುತ್ತೇವೆ,
      ತುಂಬ ಟೀವಿ ನೋಡುತ್ತೇವೆ:
🔹ತೋರಿಕೆಯ ಭಕ್ತಿ ಜಾಸ್ತಿ,
      ಪರಿಶುದ್ಧ ಮನದ ಪ್ರಾರ್ಥನೆ ಕಡಿಮೆ
🔹ನಮ್ಮ ಆಸ್ತಿ ಪಾಸ್ತಿಗಳ ಬೆಲೆ ಏರಿದೆ,ಆದರೆ 
      ನಮ್ಮ ಮೌಲ್ಯಗಳು ಕುಸಿದಿವೆ!
🔹ತುಂಬಾ ಹೆಚ್ಚು ಮಾತನಾಡುತ್ತೇವೆ,ತುಂಬ 
      ಕಡಿಮೆ ಪ್ರೀತಿಸುತ್ತೇವೆ ಜೊತೆಗೆ ತುಂಬ 
      ಸುಳ್ಳು  ಹೇಳುತ್ತೇವೆ!
🔹ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತೇವೆ,
      ಆದರೆ ವರ್ಷಗಳಿಗೆ ಜೀವ ತುಂಬುವುದಿಲ್ಲ!
🔹ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ, 
     ಆದರೆ ನಮ್ಮ ಕಾಂಪೌಂಡ ದಾಟಿ ನೆರೆಯವರನ್ನು  
     ಭೇಟಿಯಾಗಲು ಹೋಗುವುದಿಲ್ಲ.
🔹ನಾವು ಬಹಿರಂಗದಲ್ಲಿ ಗೆದ್ದವರಂತೆ ಅಂದುಕೊಳ್ಳುತ್ತೇವೆ,
      ಆದರೆ ಅಂತರಂಗದಲ್ಲಿ  ಸೋಲುತ್ತಿದ್ದೇವೆ!
🔹ಗಾಳಿಯನ್ನು ಶುದ್ಧಿಗೊಳಿಸಲು ಹೆಣಗುತ್ತೇವೆ, 
     ಆದರೆ ನಮ್ಮ ಆತ್ಮ ಮಲೀನಗೊಂಡಿದ್ದು ನಮಗೆ
      ಗೋಚರವಾಗುವುದಿಲ್ಲ.
🔹ಬರವಣಿಗೆ ಹೆಚ್ಚಾಗಿದೆ, ಆದರೆ 
      ಅರಿವು ಕಡಿಮೆಯಾಗಿದೆ!
🔹ಹೆಚ್ಚು ಆಲೋಚಿಸುತ್ತೇವೆ, ಆದರೆ 
     ಕಡಿಮೆ ಸಾಧಿಸುತ್ತೇವೆ!
🔹ನಮ್ಮ ಆರ್ಥಿಕ ಸ್ಥಿತಿ  ಸುಧಾರಿಸಿದೆ,ಆದರೆ 
     ನೈತಿಕತೆ ಕುಸಿದಿದೆ!
🔹ಇದು ವಿವಿಧ ಭಕ್ಷಗಳ ಕಾಲ, ಆದರೆ 
      ಕಡಿಮೆ ಜೀರ್ಣಶಕ್ತಿಯ ಕಾಲ
🔹ಎತ್ತರದ ನಿಲುವು ಠೀವಿ, ಆದರೆ ಕುಬ್ಜ ವ್ಯಕ್ತಿತ್ವ
🔹ವಿಶ್ವಶಾಂತಿಯ ಬಗ್ಗೆ ಮಾತನ್ನಾಡುತ್ತೇವೆ,
      ಆದರೆ ಮನೆಯಲ್ಲಿ ಕಾದಾಡುತ್ತೇವೆ!
🔹ಗಂಡ ಹೆಂಡಿರ  ದುಡಿಮೆ ಹೆಚ್ಚಾಗಿದೆ,
     ಆದರೆ ಸಂಬಂಧಗಳು ಛಿದ್ರಗೊಂಡು 
     ವಿಚ್ಛೇದನಗಳು ಹೆಚ್ಚಾಗಿವೆ!
🔹ಅದ್ಬುತ ವಿನ್ಯಾಸದ ನಿವಾಸಗಳಿವೆ,ಆದರೆ 
     ಮನಶ್ಯಾಂತಿ  ಮುರಿದುಬಿದ್ದಿದೆ.
ವಂದನೆಗಳೊಂದಿಗೆ

Thursday, February 17, 2022

*Care or control ??*

*Care or control ??*

I was in a  a consultation with a middle age couple.They started fighting right in front of me.  The upset husband said- See doc....I 'care' so much for her & this is what I get in return..To which the fuming wife replied- He doesn't care...he just 'controls'...!

The care from one person was perceived as control by another ! 

Made me think...what is care and what is control?? How to identify them??

Soon I received the answer.

I had an argument with my teenage daughter over a trivial disciplinery issue...Harsh words were exchanged leaving both of us in tears...😪
After sometime, as our emotions settled down , we said sorry to each other...My daughter hugged me  
and said-Papa ,you know why you got upset?  You were not  upset because I did wrong..but u were upset because I didnt follow your instructions....there is a big difference..!

I was stunned with her mature thinking pattern. ..I received my answer too... I was trying to control her under the disguise of care...that caused the conflict ....

If I really 'care' for someone , I will not get upset or angry with that person...I will keep searching different ways to help him..

If I am struggling in any relationship...I need to closely observe if there is any subtle  control hidden behind my apparent care...because 

Care is an expression of love while control is an expression of ego...

Control cuts...Care connects ...

Control hurts...Care heals...

Keep caring for people but dont control them ... because 

Often people are not wrong...
they are just 'different'...

Keep caring... 
dgns
Thank you

Tuesday, February 8, 2022

*ಹಣ ದುಬಾರಿ ಎಂದು ವಿಮಾನದಲ್ಲಿ ಊಟ ಮಾಡದ ಸೈನಿಕರು ..*

*ಹಣ ದುಬಾರಿ ಎಂದು ವಿಮಾನದಲ್ಲಿ ಊಟ ಮಾಡದ ಸೈನಿಕರು ..*  

*2 ನಿಮಿಷ ಸಮಯವಿದ್ದರೆ ತಪ್ಪದೇ ಓದಿ ..*🥲

ವಿಮಾನದಲ್ಲಿ ನನ್ನ ಜಾಗದಲ್ಲಿ ಕುಳಿತೆ. ಡೆಲ್ಲಿ ತಲುಪಲು ಐದಾರು ಗಂಟೆಗಳ ಪ್ರಯಾಣ. ಒಂದು ಉತ್ತಮವಾದ ಪುಸ್ತಕ ಓದುವುದು, ಒಂದು ಗಂಟೆ ನಿದ್ರೆ ನನ್ನ ಪ್ರಯಾಣದ ಕಾರ್ಯಕ್ರಮ. ವಿಮಾನ ಹೊರಡುವುದಕ್ಕೆ ಐದು ನಿಮಿಷಗಳ ಮುಂಚೆ ನನ್ನ ಅಕ್ಕ ಪಕ್ಕದ ಸೀಟುಗಳಲ್ಲಿ ಹತ್ತು ಜನ ಯೋಧರು ಕುಳಿತು ಕೊಂಡಿದ್ದರು. ವಿಮಾನ ತುಂಬಿತ್ತು. ಕಾಲಕ್ಷೇಪಕ್ಕೆ ನನ್ನ ಪಕ್ಕದಲ್ಲಿ ಕುಳಿತ ಯೋಧನನ್ನು “ಎಲ್ಲಿಗೆ ಪ್ರಯಾಣ” ಎಂದು ವಿಚಾರಿಸಿದೆ. “ಆಗ್ರಾಗೆ ಸಾರ್, ಅಲ್ಲಿ ಎರಡುವಾರ ಶಿಕ್ಷಣ, ನಂತರ ಆಪರೇಷನ್ ಗೆ ಕಳಿಸುತ್ತಾರೆ” ಎಂದನು.
ಒಂದು ಗಂಟೆ ಕಳೆಯಿತು .. ಅನೌಸಮೆಂಟ್ “ಬೇಕಾದವರು ಹಣ ಕೊಟ್ಟು ಊಟ ಪಡೆಯ ಬಹುದು” ಎಂದು. ಸರಿ ತುಂಬಾ ಸಮಯವಿದೆ ಊಟ ಮುಗಿಸಿದರೆ ಒಂದು ಕೆಲಸವಾಗುತ್ತದೆ ಎಂದು ನನ್ನ ಪರ್ಸ ತೆಗೆದು ಊಟ ಖರೀದಿಸಲು ಮುಂದಾದಾಗ ಈ ಮಾತುಗಳು ನನ್ನ ಕಿವಿಗೆ ಬಿದ್ದವು ..
”ನಾವು ಸಹಾ ಊಟಮಾಡೋಣವೇ? ಎಂದು ಒಬ್ಬ ಯೋಧ ಮತ್ತೊಬ್ಬನನ್ನು ಕೇಳುತ್ತಾನೆ …. ಅದಕ್ಕೆ ಆತನು “ಬೇಡ .. ಇಲ್ಲಿ ಊಟ ದುಬಾರಿ … ವಿಮಾನದಿಂದ ಇಳಿದ ತಕ್ಷಣ ಯಾವುದಾದರೂ ಸಾಧಾರಣವಾದ ಕಡೆ ಊಟಮಾಡೋಣ” ಎಂದನು.
ಅದಕ್ಕೆ ಆ ಮೊದಲಿನ ಯೋಧ “ಸರಿ” ಎಂದು ಸುಮ್ಮನಾದನು.
ನಾನು ವಿಮಾನದ ಪರಿಚಾರಕಿಯ ಬಳಿ ಹೋಗಿ “ದಯವಿಟ್ಟು ನೀವು ಆ ಯೋಧರೆಲ್ಲರಿಗೂ ಊಟ ಕೊಡಿ ಅದರ ಹಣ ನಾನು ಸಂದಾಯಿಸುತ್ತೇನೆ“ ಎಂದೆನು. ಹಣ ಪಡೆದು ಎಲ್ಲರಿಗೂ ಊಟದ ಡಬ್ಬಿಗಳನ್ನು ಕೊಟ್ಟರು.

ಆ ಪರಿಚಾರಕಿ ಕಣ್ಣಲ್ಲಿ ನೀರು .. “ಸಾರ್ ನನ್ನ ತಮ್ಮ ಕಾರ್ಗಿಲ್ ನಲ್ಲಿ ಇದ್ದಾನೆ. ಅವನಿಗೆ ನೀವು ಊಟ ಬಡಿಸಿದಷ್ಟು ಸಂತಸವಾಗುತ್ತಿದೆ” ಎನ್ನುತ್ತಾ ಕೈ ಮುಗಿದಳು. ನನಗೆ ಕಣ್ಣೀರು ತಡೆಯಲಾಗಲಿಲ್ಲ . ದುಃಖದಿಂದ ಬಂದು ನನ್ನ ಸೀಟಿನಲ್ಲಿ ಕುಳಿತೆ. ನಾನು ಊಟ ಮುಗಿಸಿ ಕೈ ತೊಳೆಯಲು ವಾಶ್ ರೂಂ ಕಡೆ ಹೊರಟೆ … ನನ್ನ ಹಿಂದೆಯೇ ಒಬ್ಬ ವಯಸ್ಸಾದವರು ಬಂದು, ”ನಾನು ನಡೆದದ್ದೆಲ್ಲವನ್ನೂ ಗಮನಿಸಿದ್ದೇನೆ. ನಿಮಗೆ ಅಭಿನಂದನೆಗಳು, ಈ ನಿಮ್ಮ ಸಂತೋಷದಲ್ಲಿ ನನಗೂ ಸ್ವಲ್ಪ ಪಾಲು ಕೊಡಿ” ಎಂದು ಒಂದೈದು ನೂರು ರೂಪಾಯಿಯ ಹೊಸ ನೋಟನ್ನು ನನ್ನ ಕೈಯಲ್ಲಿ ತುರುಕಿ, “ನಿಮ್ಮ ಆನಂದದಲ್ಲಿ ನನ್ನ ಭಾಗ ಎಂದರು."

ನಾನು ನನ್ನ ಸೀಟಿನಲ್ಲಿ ಬಂದು ಕುಳಿತೆ. ಒಂದು ಕಾಲು ಗಂಟೆ ಕಳೆದಿರಬಹುದು, ವಿಮಾನದ ಕ್ಯಾಪ್ಟನ್… ಯಾರನ್ನೊ ಹುಡುಕುತ್ತಾ .. ಸೀಟು ನಂಬರು ಗಳನ್ನು ನೋಡುತ್ತಾ ನನ್ನ ಬಳಿ ಬಂದು, ನನ್ನನ್ನು ನೋಡಿ ಮುಗುಳು ನಗೆ ಬೀರುತ್ತಾ “ನಿಮಗೆ ಶೇಕ್ ಹ್ಯಾಂಡ್ ಕೊಡ ಬಹುದೇ “,ಎಂದು ನನ್ನ ಕೈ ಕುಲುಕಿದರು. ನಾನು ನನ್ನ ಸೀಟಿನ ಪಟ್ಟಿ ಯನ್ನು ಕಳಚಿ, ನಿಂತುಕೊಂಡೆ .. ಆತನು “ನಾನು ಹಲವು ವರ್ಷ ಪೈಲೆಟ್ ಆಗಿ ಕೆಲಸಮಾಡಿದ್ದೇನೆ, ಆಗ ಯಾರೋ ಒಬ್ಬರು ನಿಮ್ಮ ಹಾಗೆ ಊಟ ಕೊಡಿಸಿದರು. ಅದು ನಿಮ್ಮಂತಹ ಜನರ ಪ್ರೇಮದ ಕುರುಹು … ನಾನು ಅದನ್ನು ಎಂದೆಂದಿಗೂ ಮರೆಯಲಾರೆ” ಎಂದನು…
ಸಹ ಪ್ರಯಾಣಿಕರೆಲ್ಲಾ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು. ನನಗೆ ತುಂಬಾ ಸಂಕೋಚವಾಯಿತು. ನಾನು ಒಂದು ಉತ್ತಮವಾದ ನಡವಳಿಕೆ ತೋರಿರಬಹುದು ಆದರೆ ಹೊಗಳಿಕೆಗಾಗಿ ಅಲ್ಲ.

ನಾನು ನನ್ನ ಸೀಟಿನಿಂದ ಮುಂದಿನ ಸೀಟುಗಳತ್ತ ಬಂದೆ. ಒಬ್ಬ 18 ವರ್ಷದ ಹುಡುಗ ನನ್ನ ಕೈ ಕುಲುಕುತ್ತಾ ಒಂದು ನೋಟನ್ನು ಕೊಟ್ಟ . 
ಪ್ರಯಾಣ ಮುಗಿಯಿತು. ನಾನು ವಿಮಾನದಿಂದ ಹೊರ ಬರಲು ಬಾಗಿಲ ಬಳಿ ನಿಂತಿದ್ದೆ. ಯಾರೋ ಒಬ್ಬರು ನನ್ನ ಜೇಬಿನಲ್ಲಿ ಎನನ್ನೋ ಇಟ್ಟರು …. ಮತ್ತೊಂದು ನೋಟು,
ನಾನು ಹೊರ ಬಂದು ನೋಡಿದಾಗ ಆ ಯೋಧರೆಲ್ಲರೂ ಒಂದು ಕಡೆ ನಿಂತಿದ್ದರು, ನಾನು ಬೇಗ ಬೇಗ ಅವರ ಹತ್ತಿರ ಹೋಗಿ, ವಿಮಾನದಲ್ಲಿ ಸಹ ಪ್ರಯಾಣಿಕರು ಬಲವಂತದಿಂದ ನನಗೆ ಕೊಟ್ಟ ಹಣವನ್ನು ಜೇಬಿನಿಂದ ತೆಗೆದು ಅವರಿಗೆ ಕೊಡುತ್ತಾ, “ನೀವು ನಿಮ್ಮ ಶಿಕ್ಷಣ ನಡೆಯುವ ಊರು ತಲುಪುವ ಮುಂಚೆ ಏನ್ನಾದರೂ ತಿನ್ನಲು ಪ್ರಯೋಜನವಾಗುತ್ತದೆ. ನೀವು ನಮ್ಮ ದೇಶವನ್ನು ರಕ್ಷಿಸಲು ಪಡುತ್ತಿರುವ ಶ್ರಮದ ಮುಂದೆ ಈ ನಮ್ಮ ಸಹಾಯ ಬಹಳಾ ಚಿಕ್ಕದು. ನಿಮ್ಮಗಳಿಗೆ ಆ ಭಗವಂತನು ದಯೆತೋರಲಿ, ನಿಮ್ಮ ಪರಿವಾರದ ಸದಸ್ಯರೆಲ್ಲರೂ ಸುಖವಾಗಿರಲಿ” ಎಂದಾಗ ನನಗೆ ಅರಿವಿಲ್ಲದೇ ಧಾರಾಕಾರವಾದ ಕಣ್ಣೀರು.
ಆ ಹತ್ತು ಜನ ಯೋಧರೂ ಸಹ ಪ್ರಯಾಣಿಕರ ಒಲವನ್ನೂ ಸೂರೆಗೊಂಡಿದ್ದರು. ನಾನು ಕಾರು ಹತುತ್ತಾ … ನಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಧಾರೆಯೆರೆಯಲು ಸಿದ್ಧರಾದ ಈ ಯುವಕರಿಗೆ ನೂರುಕಾಲ ಸುಖವಾಗಿ ಬಾಳುವಂತೆ ಹರಸು ಸ್ವಾಮಿ”, ಎಂದು ಭಗವಂತನಲ್ಲಿ ಕೇಳಿಕೊಂಡೆ.
ಸೈನಿಕನೆಂದರೆ ತನ್ನ ಬಾಳನ್ನು ನಾಡಿಗಾಗಿ ತ್ಯಾಗ ಮಾಡುವ ಬ್ಲಾಂಕ್ ಚೆಕ್ ನಂತೆ. “ಬಾಳೆಲ್ಲವೂ ತನ್ನ ಬದುಕನ್ನು ಮುಡುಪಾಗಿಡುವ ಬ್ಲಾಂಕ್ ಚೆಕ್ಕು”
ಎಷ್ಟು ಸಾರಿ ಓದಿದರೂ ಈ ಪ್ರಸಂಗ ಮನ ತಣಿಸುತ್ತದೆ.
ಭಾರತ ಮಾತೆಯ ಈ ಮುದ್ದು ಮಕ್ಕಳನ್ನು ಗೌರವಿಸುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ
ಜೈ ಜವಾನ್. ….🇮🇳 
ಭಾರತ್ ಮಾತಾಕೀ ಜೈ 🇮🇳….
(ವಾಟ್ಸಪ್ ಸಂದೇಶ)

Monday, February 7, 2022

ನಿತ್ಯಸತ್ಯ ಜ್ಞಾನದ ಭಂಡಾರ

ನಿತ್ಯಸತ್ಯ  ಜ್ಞಾನದ ಭಂಡಾರ🌹

ಯಾವಾಗ ಭಕ್ತಿ ಆಹಾರ ಹೊಕ್ಕುತ್ತದೋ, ಅದು ಪ್ರಸಾದವಾಗುತ್ತದೆ 

ಯಾವಾಗ ಭಕ್ತಿ ಹಸಿವನ್ನು ಹೊಕ್ಕುತ್ತದೋ, ಅದು ಉಪವಾಸವಾಗುತ್ತದೆ

ಯಾವಾಗ ಭಕ್ತಿ‌ ನೀರನ್ನು ಹೊಕ್ಕುತ್ತದೋ ಅದು ಅಮೃತವಾಗುತ್ತದೆ

ಯಾವಾಗ ಭಕ್ತಿ ಸಂಗೀತವನ್ನು ಹೊಕ್ಕುತ್ತದೋ ಅದು ಕೀರ್ತನೆಯಾಗುತ್ತದೆ

ಯಾವಾಗ ಭಕ್ತಿ ಮನೆಯನ್ನು ಹೊಕ್ಕುತ್ತದೋ ಅದು‌‌ ದೇವಾಲಯವಾಗುತ್ತದೆ

ಯಾವಾಗ ಭಕ್ತಿ ಕಾಯಕದಲ್ಲಿ ಹೊಕ್ಕುತ್ತದೋ ಅದು‌ ಕರ್ಮವಾಗುತ್ತದೆ

ಯಾವಾಗ ಭಕ್ತಿ ಯಾತ್ರೆ ಹೊಕ್ಕುತ್ತದೋ ಅದು ತೀರ್ಥಯಾತ್ರೆಯಾಗುತ್ತದೆ

ಯಾವಾಗ ಭಕ್ತಿ ವ್ಯಕ್ತಿಯಲ್ಲಿ ಬರುತ್ತೋ ಅವನು ಭಕ್ತನಾಗುತ್ತಾನೆ.
ವಂದನೆಗಳೊಂದಿಗೆ

Thursday, February 3, 2022

*ನರಸ್ಯಾಭರಣಂ ರೂಪಂ**ರೂಪಸ್ಯಾಭರಣಂ ಗುಣಾಃ|**ಗುಣಸ್ಯಾಭರಣಂ ಜ್ಞಾನಂ**ಜ್ಞಾನಸ್ಯಾಭರಣಂ ಕ್ಷಮಾ ||*

*ನರಸ್ಯಾಭರಣಂ ರೂಪಂ*
*ರೂಪಸ್ಯಾಭರಣಂ ಗುಣಾಃ|*
*ಗುಣಸ್ಯಾಭರಣಂ ಜ್ಞಾನಂ*
*ಜ್ಞಾನಸ್ಯಾಭರಣಂ ಕ್ಷಮಾ ||*

   _ಮನುಷ್ಯ ಸುಂದರವಾಗಿ ಕಾಣುವುದು ತನ್ನ ರೂಪದಿಂದ.._

   _ರೂಪ ಸುಂದರವಾಗಿ ಕಾಣುವುದು ಸದ್ಗುಣಗಳಿಂದ.._

   _ಸದ್ಗುಣಗಳು ಸುಂದರವಾಗಿ ಕಾಣುವುದು ಜ್ಞಾನದಿಂದ.._

   _ಜ್ಞಾನ ಸುಂದರವಾಗಿ ಕಾಣುವುದು ಕ್ಷಮೆಯಿಂದ..!_

       *_ಕ್ಷಮಾಗುಣವಿಲ್ಲದಿದ್ದರೆ ಮನುಷ್ಯನ ರೂಪ, ಗುಣ, ಜ್ಞಾನ.. ಎಲ್ಲವೂ ವ್ಯರ್ಥ..._*
     
        🔯 ಶುಭ ದಿನ💐🙏🏼

*ನೀವೇ ನಿಮ್ಮ ದೇಹಕ್ಕೆ ಭಯೋತ್ಪಾದಕರು*

*ನೀವೇ ನಿಮ್ಮ ದೇಹಕ್ಕೆ ಭಯೋತ್ಪಾದಕರು* 
😱😲🤥😨😰🥵🤐😵

1) ನೀವು ಬೆಳಿಗ್ಗೆ ಉಪಾಹಾರ ಮಾಡದಿದ್ದಾಗ ಹೊಟ್ಟೆ ಹೆದರುತ್ತದೆ.😟

(2) ನೀವು 24 ಗಂಟೆಗಳಲ್ಲಿ 10 ಲೋಟ ನೀರು ಕುಡಿಯದಿದ್ದಾಗ ಮೂತ್ರಪಿಂಡಗಳು ಭಯಪಡುತ್ತವೆ.🥵

(3) ನೀವು 11 ಗಂಟೆಯವರೆಗೆ ನಿದ್ರೆ ಮಾಡದಿದ್ದಾಗ ಮತ್ತು ಸೂರ್ಯೋದಯದಲ್ಲಿ ಎಚ್ಚರಗೊಳ್ಳದಿದ್ದಾಗ ಪಿತ್ತಕೋಶವು ಹೆದರುತ್ತದೆ.😔

(4) ನೀವು ಶೀತ ಮತ್ತು ಹಳೆಯ ಆಹಾರವನ್ನು ಸೇವಿಸಿದಾಗ ಸಣ್ಣ ಕರುಳು ಹೆದರುತ್ತದೆ.😖🤒

(5) ನೀವು ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ ದೊಡ್ಡ ಕರುಳುಗಳು ಹೆದರುತ್ತವೆ.🤬

(6) ಸಿಗರೇಟ್ ಮತ್ತು ಬೀಡಿಗಳ ಹೊಗೆ, ಕೊಳಕು ಮತ್ತು ಕಲುಷಿತ ವಾತಾವರಣದಲ್ಲಿ ನೀವು ಉಸಿರಾಡುವಾಗ ಶ್ವಾಸಕೋಶವು ಹೆದರುತ್ತದೆ.😱🤢

(7) ನೀವು ಭಾರವಾದ ಕರಿದ ಆಹಾರ, ಜಂಕ್ ಮತ್ತು ತ್ವರಿತ ಆಹಾರವನ್ನು ಸೇವಿಸಿದಾಗ ಯಕೃತ್ತು ಭಯವಾಗುತ್ತದೆ.🥶

(8) ನಿಮ್ಮ ಊಟವನ್ನು ಹೆಚ್ಚು ಉಪ್ಪು ಮತ್ತು ಕೊಲೆಸ್ಟ್ರಾಲ್ ನೊಂದಿಗೆ ಸೇವಿಸಿದಾಗ ಹೃದಯ ಭಯವಾಗುತ್ತದೆ.💔❣

(9) ರುಚಿ ಮತ್ತು ಮುಕ್ತವಾಗಿ ಲಭ್ಯವಿರುವುದರಿಂದ ನೀವು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದಾಗ ಮೇದೋಜ್ಜೀರಕ ಗ್ರಂಥಿಯು ಹೆದರುತ್ತದೆ.☹

(10) ನೀವು ಮೊಬೈಲ್ ಮತ್ತು ಕಂಪ್ಯೂಟರ್ ಪರದೆಯ ಬೆಳಕಿನಲ್ಲಿ ಕತ್ತಲೆಯಲ್ಲಿ ಕೆಲಸ ಮಾಡುವಾಗ ಕಣ್ಣುಗಳು ಭಯಭೀತರಾಗುತ್ತವೆ.😵

ಮತ್ತು

(11) ನೀವು ನಕಾರಾತ್ಮಕ ವಿಷಯಗಳನ್ನು ಯೋಚಿಸಲು ಪ್ರಾರಂಭಿಸಿದಾಗ ಮೆದುಳು ಹೆದರುತ್ತದೆ.🤔

ನಿಮ್ಮ ದೇಹದ ಭಾಗಗಳನ್ನು ನೋಡಿಕೊಳ್ಳಿ ಮತ್ತು ಅವರನ್ನು ಹೆದರಿಸಬೇಡಿ.🤝

ಈ ಭಾಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಲಭ್ಯವಿರುವವುಗಳು ತುಂಬಾ ದುಬಾರಿಯಾಗಿದೆ ಮತ್ತು ಬಹುಶಃ ನಿಮ್ಮ ದೇಹದಲ್ಲಿ ಹೊಂದಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ದೇಹದ ಭಾಗಗಳನ್ನು ಆರೋಗ್ಯವಾಗಿಡಿ
💪👍🏻🤝

Friday, January 21, 2022

ಶ್ರೀ ಶಿವಕುಮಾರ ಸ್ವಾಮಿಜಿ (1907~2019) ಜೀವನಚರಿತ್ರೆ

ಶ್ರೀ ಶಿವಕುಮಾರ ಸ್ವಾಮಿಜಿ (1907~2019) ಜೀವನಚರಿತ್ರೆ

ಶತಾಯುಷಿ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಯವರು ಜಗತ್ತು ಕಂಡ ಒಂದು ಅಚ್ಚರಿ. ನಡೆದಾಡುವ ದೇವರೆಂದೇ ಖ್ಯಾತಿಯಾಗಿರುವ ಶ್ರೀಗಳು ತಾರುಣ್ಯದಲ್ಲಿಯೇ ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ಧಪುರುಷರು ಸಿದ್ದಗಂಗೆಯ  ಪೂಜ್ಯ ಸ್ವಾಮೀಜಿಯವರು. 

ಬಾಲ್ಯ-ವೈರಾಗ್ಯ-ವಿರಕ್ತಾಶ್ರಮ
ಡಾ.ಶಿವಕುಮಾರ ಸ್ವಾಮೀಜಿ 01.04.1907ರಲ್ಲಿ ಮಾಗಡಿ ತಾಲೂಕಿನ ವೀರಾಪುರದಲ್ಲಿ  ಹೊನ್ನಪ್ಪ ಪಟೇಲ್ ಮತ್ತು ಗಂಗಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ವೀರಾಪುರ ಮತ್ತು ನಾಗವಲ್ಲಿಯಲ್ಲಿ ಮುಗಿಸದ ಶ್ರೀಗಳು ತುಮಕೂರಿನ ಸರಕಾರಿ ಶಾಲೆಯಲ್ಲಿ  ಫ್ರೌಡ ಶಿಕ್ಷಣವನ್ನು ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದ ಶ್ರೀಗಳು ಆಂಗ್ಲಭಾಷೆ ಮತ್ತು ಸಂಸ್ಕೃತ ಬಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ.

ಅನೀರೀಕ್ಷೀತ ಮಠಾಧಿಪತಿ

ಬೆಂಗಳೂರಿನ ಗುಬ್ಬಿ ತೋಟದಪ್ಪ ಛತ್ರದಲ್ಲಿದ್ದುಕೊಂಡು, ಪದವಿ ವಿಧ್ಯಾಭ್ಯಾಸ ಮಾಡುತ್ತಿದ್ದರು. 1930 ರಲ್ಲಿ ಉದ್ಧಾನ ಶಿವಯೋಗಿಗಳ ನಂತರದ ಉತ್ತರಾಧಿಕಾರಿ ಸ್ವಾಮಿಗಳಾದ ಶ್ರಿ ಮರುಳಾಧ್ಯರ ನಿಧನರಾಗುತ್ತಾರೆ. ಅವರ ಸಮಾಧಿ ಕಾರ್ಯಕ್ರಮಗಳಿಗೆ ಬಂದಿದ್ದ ಮೊದಲೇ ಪರಿಚಯವಿದ್ದ ಶಿವಕುಮಾರ ಸ್ವಾಮಿಗಳ ಕಡೆಗೆ ಉದ್ಧಾನ ಶಿವಯೋಗಿಗಳ ನೋಟ ಹರಿಯುತ್ತದೆ.ತಕ್ಷಣವೇ ಉದ್ಧಾನ ಶಿವಯೋಗಿಗಳು ಶಿವಣ್ಣನೇ ತಮ್ಮ ಮುಂದಿನ ಉತ್ತರಾಧಿಕಾರಿ ಎಂದು ಘೋಷಿಸುತ್ತಾರೆ.

ಹೀಗೆ ಸನ್ಯಾಸಿಯಾದ ಶಿವಕುಮಾರ ಸ್ವಾಮಿಗಳು ತಮ್ಮ ಸನ್ಯಾಸ ಧರ್ಮಗಳನ್ನು ಪಾಲಿಸುತ್ತಲೇ ಪದವಿ ಮುಗಿಸಿ ನಂತರ 1930ರಲ್ಲಿ ತಮ್ಮ ಯವ್ವನಾವಸ್ಥೆಯಲ್ಲಿಯೇ ವಿರಕ್ತಾಶ್ರಮ ದೀಕ್ಷೆ ಪಡೆದು  ಸಿದ್ಧಗಂಗಾ ಕ್ಷೇತ್ರ ಪ್ರವೇಶಿಸಿದರು. ಅಂದಿನಿಂದ ಸಿದ್ಧಗಂಗಾ ಮಠದಲ್ಲಿ ಹೊಸ ಬೆಳಕು ಮೂಡಿತು. ಜಂಗಮ ಮೂರ್ತಿಗಳಾದ ಶಿವಕುಮಾರ ಮಹಾಸ್ವಾಮಿಗಳು ಉದ್ಧಾನ ಶಿವಯೋಗಿಗಳ ಅಣತಿಯಂತೆ 1941ರಲ್ಲಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ನಂತರ ಸಿದ್ಧಗಂಗಾ ಕ್ಷೇತ್ರದ ಸ್ವರೂಪ ಆಮೂಲಾಗ್ರವಾಗಿ ಬದಲಾವಣೆಯಾಯಿತು.

ತ್ರಿವಿಧ ದಾಸೋಹಿ 

ಈ ಶತಮಾನ ಕಂಡ ಅಪರೂಪದ ಶರಣರಾಗಿರುವ ಶ್ರೀಗಳು ಅನ್ನ,ಅಕ್ಷರ ಮತ್ತು ಜ್ಞಾನ ದಾಸೋಹಗಳ ಮೂಲಕ ತ್ರಿವಿಧ ದಾಸೋಹದಲ್ಲಿ ತೊಡಗಿದ್ದಾರೆ.

ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅದರ ಅಡಿಯಲ್ಲಿ  ಬಾಲ್ಯದಿಂದ ಪದವಿಯವರೆಗೂ ಸಂಪೂರ್ಣ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಇಲ್ಲಿ ಯಾವುದೇ ಜಾತಿ-ಧರ್ಮ ಭೇದವಿಲ್ಲದೇ ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣದೊಂದಿಗೆ ಉಚಿತ ವಸತಿ ಮತ್ತು ಉಚಿತ ಆಹಾರ ಕೂಡ ನೀಡಲಾಗುತ್ತದೆ.ಪ್ರಸ್ತುತ ಸುಮಾರು 10000 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.ಕರ್ನಾಟಕದ ವಿವಿಧ ಮೂಲೆಗಳಿಂದ ವಿಧ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಮಾತ್ರವಲ್ಲದೇ ರೈತಾಪಿ ವರ್ಗದ ಅನುಕೂಲಕ್ಕಾಗಿ ಪ್ರತಿವರ್ಷ ಒಂದು ತಿಂಗಳ ಕಾಲ ರೈತಜಾತ್ರೆಯನ್ನು ನೆಡಿಸಿಕೊಡುತ್ತಿದ್ದರು.

ಪ್ರಶಸ್ತಿಗಳು

ಜಂಗಮ, ಸಮಾಜದ ಯಾವುದೇ ಪ್ರಖ್ಯಾತಿ-ಪುರಸ್ಕಾರಕ್ಕೆ ಆಸೆ ಪಡೆದೆ ಮುನ್ನೆಡೆದರೂ ಅವರ ಕಾರ್ಯಕ್ಕೆ ಋಣಭಾರ ಸಲ್ಲಿಸುವ ಹೊಣೆ ಸಮಾಜದ್ದು. ಶ್ರೀಗಳ ಸಮಾಜಿಮುಖಿ ಜೀವನಕ್ಕೆ ಪದ್ಮಭೂಷಣ, ಕರ್ನಾಟಕ ರತ್ನ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ. 1965 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಕೂಡ ಪಡೆದಿದ್ದಾರೆ. ಶ್ರೀಗಳ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ `ಭಾರತ ರತ್ನ' ಪ್ರಶಸ್ತಿ ನೀಡಬೇಕು ಎಂಬುದು ಇಡೀ ಕನ್ನಡ ಜನತೆಯ ಬಯಕೆ.

ಆರೋಗ್ಯ ಸಮಸ್ಯೆ

2016 ರಿಂದ ಶ್ರೀಗಳ ಆರೋಗ್ಯದಲ್ಲಿ ಏರು-ಪೇರು ಆಗಲು ಶುರುವಾಯಿತು. ಜಾಂಡೀಸ್, ನ್ಯೂಮೋನಿಯಾ ಮುಂತಾದ ಹಲವು ಇನಫೆಕ್ಷನ್ ಗಳಿಂದ ಬಳಲಿದ ಶ್ರೀಗಳು ನಂತರ ಒಂದು ವರ್ಷದೊಳಗೆ ಚೇತರಿಸಿಕೊಂಡರು. 2018 ಡಿಸೆಂಬರ್‌ನಲ್ಲಿ ಲಿವರ್ ಸೋಂಕಿಗೆ ತುತ್ತಾದ ಶ್ರೀಗಳು ಲಿವರ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಪಟ್ಟರು. 2019 ಜನೇವರಿಯಲ್ಲಿ ಶ್ವಾಸಕೋಶ ಸಮಸ್ಯೆಯಿಂದ ಬಳಲಿದ ಶ್ರೀಗಳು ಚೆನ್ನೆನ ಆಸ್ಪತ್ರೆಗೆ ದಾಖಲಾಗಿ ಹಿಂತುರಿಗಿದರು.

ಆರದ ಚೇತನ 

ಶ್ರೀಗಳು ಜನೇವರಿ 21,2019ರ ರಂದು ಮಧ್ಯಾಹ್ನ ಇಹಯಾತ್ರೆ ಮುಗಿಸಿದರು. ಶ್ರೀಗಳು ದೈಹಿಕಾವಾಗಿ ದೂರವಾದರೂ ತಮ್ಮ ಕಾರ್ಯಗಳ ಮೂಲಕ ಸದಾ ಬೆಳುಗುತ್ತಾರೆ. ಲಕ್ಷಾಂತರ ವಿಧ್ಯಾರ್ಥಿಗಳ ಸ್ಮೃತಿಪಟಲದಲ್ಲಿ ಜ್ಞಾನವಾಗಿ, ಸಾವಿರಾರು ಭಕ್ತರ ಹೃದಯದಲ್ಲಿ ಅರಿವಿನ ಜ್ಯೋತಿಯಾಗಿ ಅದಮ್ಯವಾಗಿ ಅನಂತಕಾಲ ಬೆಳುಗುತ್ತಾರೆ.

ಅಂಕಿ-ಅಂಶಗಳು,ವಿಶೇಷ

ಪೂರ್ವಾಶ್ರಮ ಹೆಸರು -ಶಿವಣ್ಣ

1922- ಫ್ರೌಢಶಾಲಾ ಶಿಕ್ಷಣಕ್ಕೆ ತುಮಕೂರಿಗೆ ಬಂದರು

1926- ಮೆಟ್ರಿಕುಲೇಷನ್ ಪೂರ್ಣ

1927- ಸಿದ್ಧಗಂಗಾ ಮಠದ ಸಂಪರ್ಕಕ್ಕೆ ಬಂದರು

1927- ಸಾಮಾನ್ಯ ಪರೀಕ್ಷೆ ಉತ್ತೀರ್ಣ ಮತ್ತು ಪದವಿ ಸೇರ್ಪಡೆ

1930- ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು

1965-ಕರ್ನಾಟಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪ್ರದಾನ

1975- ಎರಡು ಸಾವಿರ ಮಕ್ಕಳಿಗಾಗಿ ಶಾಲೆ ತೆರೆದರು.

1977 - ನಾಲ್ಕು ಸಾವಿರ ದಾಟಿದ ಶಾಲಾ ಮಕ್ಕಳು 

2007-ಕರ್ನಾಟಕ ರತ್ನ ಪ್ರಶಸ್ತಿ

2015-ಭಾರತ ಸರ್ಕಾರದ ಪದ್ಮಭೂಷಣ

128 - ಶೈಕ್ಷಣಿಕ ಸಂಸ್ಥೆಗಳು

2255 -ಶಿಕ್ಷಕ ಮತ್ತು ಭೋಧಕ ವರ್ಗ 

25000- ಪ್ರತಿದಿನ ದಾಸೋಹ ಮಾಡುವ ಭಕ್ತಾದಿಗಳು

250000-ಪ್ರತಿದಿನ ವಿಧ್ಯಾರ್ಥಿಗಳಿಗೆ ಊಟಕ್ಕೆ ತಗುಲುವ ವೆಚ್ಚ. 
ಎಷ್ಟು ಬರೆದರೂ ಸಾಲುವುದಿಲ್ಲ ಶ್ರೀಗಳ ಅನ್ನದಸೋಹ ಹಾಗೂ ಅಕ್ಷರ ದಾಸೋಹದ ಬಗ್ಗೆ.
ಶ್ರೀಗಳ ಪಾದಾರವಿಂದಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇವೆ, ವಂದನೆಗಳೊಂದಿಗೆ.

Monday, January 3, 2022

ಮಹಾಪ್ರಭುವಿನ ಮಹಾ ರಹಸ್ಯ ಚಿನ್ನದ ಪೊರಕೆಯಿಂದ ಸ್ವಚ್ಛತೆ....!

ಶ್ರೀ ಕೃಷ್ಣನು ದೇಹವನ್ನು ತೊರೆದಾಗ,ಅವರ ಅಂತಿಮ ಸಂಸ್ಕಾರ ಮಾಡಲಾಯಿತು,ಅವರ ಇಡೀ ದೇಹವು ಪಂಚಭೂತಗಳಲ್ಲಿ ಬೆರೆತುಹೋಯಿತು, ಆದರೆ ಅವರ ಹೃದಯವು ಸಾಮಾನ್ಯ ಮನುಷ್ಯನಂತೆ ಬಡಿಯುತ್ತಿತ್ತಂತೆ ಮತ್ತು ಅವರ ಹೃದಯವು ಸಂಪೂರ್ಣವಾಗಿ ಸುರಕ್ಷಿತವಾಗಿತ್ತಂತೆ ಮತ್ತು ಇಂದಿಗೂ ಸುರಕ್ಷಿತವಾಗಿದೆ, ಜಗನ್ನಾಥನು ಮರದ ವಿಗ್ರಹದೊಳಗೆ ನೆಲೆಸಿದ್ದಾನೆ ಮತ್ತು ಅದೇ ರೀತಿಯಲ್ಲಿ ಅವರ ಹೃದಯವು ಬಡಿತವನ್ನು ಕೇಳಿಬರುತ್ತದೆ..ಈ ವಿಷಯ ಕೆಲವರಿಗೆ ಮಾತ್ರ ತಿಳಿದಿದೆ...

 ಮಹಾಪ್ರಭುವಿನ ಮಹಾ ರಹಸ್ಯ
 ಚಿನ್ನದ ಪೊರಕೆಯಿಂದ ಸ್ವಚ್ಛತೆ....!

ಮಹಾಪ್ರಭು ಜಗನ್ನಾಥ (ಶ್ರೀ ಕೃಷ್ಣ) ಅನ್ನು ಕಲಿಯುಗದ ದೇವರು ಎಂದೂ ಕರೆಯುತ್ತಾರೆ.ಜಗನ್ನಾಥ ಸ್ವಾಮಿಯು ತನ್ನ ಸಹೋದರಿ ಸುಭದ್ರ ಮತ್ತು ಸಹೋದರ ಬಲರಾಮ್‌ನೊಂದಿಗೆ ಪುರಿ (ಒರಿಸ್ಸಾ) ದಲ್ಲಿ ನೆಲೆಸಿದ್ದಾನೆ, ಆದರೆ ರಹಸ್ಯವು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ...!
ಪ್ರತಿ 12 ವರ್ಷಗಳಿಗೊಮ್ಮೆ ಮಹಾಪ್ರಭುವಿನ ವಿಗ್ರಹವನ್ನು ಬದಲಾಯಿಸಲಾಗುತ್ತದೆ, ಆ ಸಮಯದಲ್ಲಿ ಇಡೀ ಪುರಿ ನಗರದಲ್ಲಿ ಕತ್ತಲೆ ಇರುತ್ತದೆ, ಅಂದರೆ, ಇಡೀ ನಗರದ ದೀಪಗಳನ್ನು ಸ್ವಿಚ್ ಆಫ್ ಮಾಡಲಾಗುತ್ತದೆ, ದೀಪಗಳನ್ನು ಆಫ್ ಮಾಡಿದ ನಂತರ, CRPF ಯೋಧರು ದೇವಾಲಯದ ಸಂಕೀರ್ಣವನ್ನು ಸುತ್ತುವರೆದಿರುತ್ತಾರೆ. ಮತ್ತು ಆ ಸಮಯ.ಯಾರೂನ್ನು ದೇವಸ್ಥಾನ ಒಳಗೆ ಪ್ರವೇಶಿಸಲು ಬಿಡುವುದಿಲ್ಲ..

ದೇವಾಲಯದ ಒಳಗೆ ದಟ್ಟವಾದ ಕತ್ತಲೆ ಇರುತ್ತದೆ, ಪೂಜಾರಿಯ ಕಣ್ಣುಗಳನ್ನು  ಬಟ್ಟೆಯಿಂದ ಕಟ್ಟಲಾಗುತ್ತದೆ, ಪುರೋಹಿತರ ಕೈಯಲ್ಲಿ ಕೈಗವಸುಗಳಿರುತ್ತವೆ ನಂತರ ಪೂಜಾರಿಯು ಹಳೆಯ ವಿಗ್ರಹದಿಂದ "ಬ್ರಹ್ಮ ದ್ರವ್ಯ" ವನ್ನು ತೆಗೆದು ಹೊಸ ವಿಗ್ರಹಕ್ಕೆ ಸುರಿಯುತ್ತಾರೆ.ಈ ಬ್ರಹ್ಮ ಪದಾರ್ಥ ಯಾವುದು ಎಂಬುದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ.  ಇಲ್ಲಿಯವರೆಗೆ ಯಾರೂ ನೋಡಿಲ್ಲ. ಸಾವಿರಾರು ವರ್ಷಗಳಿಂದ ಇದು ಒಂದು ವಿಗ್ರಹದಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತಿದೆ....

ಇದು ಅಲೌಕಿಕ ವಸ್ತುವಾಗಿದೆ, ಇದನ್ನು ಸ್ಪರ್ಶಿಸಿದರೆ, ವ್ಯಕ್ತಿಯ ದೇಹವು ಚಿದ್ರವಾಗುತ್ತದೆ ಅಂತೆ. ಈ ಬ್ರಹ್ಮ ಪದಾರ್ಥವು ಭಗವಾನ್ ಶ್ರೀ ಕೃಷ್ಣನಿಗೆ ಸಂಬಂಧಿಸಿದೆ.  ಆದರೆ ಇದು ಏನು,ಯಾರಿಗೂ ತಿಳಿದಿಲ್ಲ, ಜಗನ್ನಾಥ ದೇವರು ಮತ್ತು ಇತರ ವಿಗ್ರಹಗಳನ್ನು ಅದೇ ವರ್ಷದಲ್ಲಿ ಬದಲಾಯಿಸಲಾಗುತ್ತದೆ, ಯಾವ ವರ್ಷದಲ್ಲಿ ಎರಡು ಆಷಾಢ ಬರುತ್ತದೆ.ಈ ಅವಕಾಶವು 19 ವರ್ಷಗಳ ನಂತರ ಬಂದಿದೆ, ಕೆಲವೊಮ್ಮೆ ಇದು 14 ವರ್ಷಗಳಲ್ಲಿ ಸಂಭವಿಸಿದೆ ಅಂತೆ, ಈ ಸಂದರ್ಭವನ್ನು ನವ್-ಕಲ್ವರ್ ಎಂದು ಕರೆಯಲಾಗುತ್ತದೆ....

ಆದರೆ ಮಹಾಪ್ರಭು ಜಗನ್ನಾಥನ ವಿಗ್ರಹದಲ್ಲಿ ಏನಿದೆ ಎಂದು ಹೇಳಲು ಇಲ್ಲಿಯವರೆಗೂ ಯಾವ ಅರ್ಚಕರಿಗೂ ಸಾಧ್ಯವಾಗಿಲ್ಲ ???

ಕೆಲವು ಪುರೋಹಿತರು ಹೇಳುತ್ತಾರೆ ನಾವು ಅವನನ್ನು ಕೈಗೆ ತೆಗೆದುಕೊಂಡಾಗ ಅವನು ಮೊಲದಂತೆ ಜಿಗಿಯುತ್ತಿರುತ್ತಾನೆ ... ನಮ್ಮ ಕೈಯಲ್ಲಿ ಗ್ಲೌಸ್  ಕಣ್ಣುಗಳನ್ನು ಬಟ್ಟೆಗಳಿಂದ ಕಟ್ಟಲಾಗಿರುತ್ತದೆ ಕೇವಲ ನಾವು ಅದನ್ನು ಅನುಭವಿಸಿದ್ದೆವೇ..

ಇಂದಿಗೂ, ಜಗನ್ನಾಥ ಯಾತ್ರೆಯ ಸಂದರ್ಭದಲ್ಲಿ, ಪುರಿಯ ರಾಜ ಸ್ವತಃ ಚಿನ್ನದ ಪೊರಕೆಯೊಂದಿಗೆ ಪೂರ್ತಿ ದೇವಸ್ಥಾನವನ್ನು ಸ್ವಚ್ಛ ಮಾಡಲು ಬರುತ್ತಾರೆ...

ಜಗನ್ನಾಥ ದೇಗುಲದ ಸಿಂಹದ್ವಾರದಿಂದ ಒಳಗೆ ಮೊದಲ ಹೆಜ್ಜೆ ಇಟ್ಟ ತಕ್ಷಣ ಒಳಗೆ ಸಮುದ್ರದ ಅಲೆಗಳ ಸದ್ದು ಕೇಳಿಸುವುದಿಲ್ಲ, ಆದರೆ ಅಚ್ಚರಿಯ ವಿಷಯವೆಂದರೆ ದೇವಾಲಯದಿಂದ ಒಂದು ಹೆಜ್ಜೆ ಹಿಂದೆ ಇಟ್ಟ ತಕ್ಷಣ ಸಾಗರದ ಸದ್ದು. ಕೇಳಿಸುತ್ತೆ.. .!

ಹೆಚ್ಚಿನ ದೇವಾಲಯಗಳ ಶಿಖರದಲ್ಲಿ ಪಕ್ಷಿಗಳು ಕುಳಿತು ಹಾರುವುದನ್ನು ನೀವು ನೋಡಿರಬೇಕು, ಆದರೆ ಜಗನ್ನಾಥ ದೇವಾಲಯದ ಮೇಲೆ ಯಾವುದೇ ಪಕ್ಷಿಗಳು ಹಾದುಹೋಗುವುದಿಲ್ಲ, ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ, ದಿನದ ಯಾವುದೇ ಸಮಯದಲ್ಲಿಯೂ ಸಹ  ಜಗನ್ನಾಥ್ ಮಂದಿರದ ಮುಖ್ಯ ಶಿಖರ ನೆರಳು ಬಿಳಲ್ಲ...

ಜಗನ್ನಾಥ ದೇವಾಲಯದ 45 ಅಂತಸ್ತಿನ ಶಿಖರದಲ್ಲಿರುವ ಧ್ವಜವನ್ನು ಪ್ರತಿದಿನ ಬದಲಾಯಿಸಲಾಗುತ್ತದೆ, ಒಂದು ದಿನವೂ ಧ್ವಜವನ್ನು ಬದಲಾಯಿಸದಿದ್ದರೆ, ದೇವಾಲಯವನ್ನು 18 ವರ್ಷಗಳವರೆಗೆ ಮುಚ್ಚಲಾಗುತ್ತದೆ ಎಂದು ನಂಬಲಾಗಿದೆ...

ಅಂತೆಯೇ, ಜಗನ್ನಾಥ ದೇವಾಲಯದ ಮೇಲ್ಭಾಗದಲ್ಲಿ ಸುದರ್ಶನ ಚಕ್ರವಿದೆ, ಅದು ಪ್ರತಿ ದಿಕ್ಕಿನಿಂದ ನೋಡಿದಾಗ, ನಿಮ್ಮ ಕಡೆಗೆ ಮುಖ ಮಾಡುತ್ತದೆ!

ಭಗವಾನ್ ಜಗನ್ನಾಥ ದೇವಾಲಯದ ಅಡುಗೆಮನೆಯಲ್ಲಿ, ಪ್ರಸಾದವನ್ನು ಬೇಯಿಸಲು 7 ಮಣ್ಣಿನ ಮಡಕೆಗಳನ್ನು ಒಂದರ ಮೇಲೊಂದು ಇರಿಸಲಾಗುತ್ತದೆ, ಇದನ್ನು ಮರದ ಬೆಂಕಿಯಿಂದ ಬೇಯಿಸಲಾಗುತ್ತದೆ, ವಿಚಿತ್ರವೆಂದರೆ ಈ ಸಮಯದಲ್ಲಿ ಮೇಲಿನ ಪಾತ್ರೆಯ ಭಕ್ಷ್ಯ ಮೊದಲು ಬೇಯ್ದಿರುತ್ತದೆ..

ಜಗನ್ನಾಥ ದೇವಸ್ಥಾನದಲ್ಲಿ ಪ್ರತಿದಿನ ಮಾಡುವ ಪ್ರಸಾದವು ಭಕ್ತರಿಗೆ ಎಂದಿಗೂ ಕಡಿಮೆಯಾಗುವುದಿಲ್ಲ, ಆದರೆ ಆಶ್ಚರ್ಯಕರ ವಿಷಯವೆಂದರೆ ದೇವಾಲಯದ ಬಾಗಿಲು ಮುಚ್ಚಿದ ತಕ್ಷಣ ಪ್ರಸಾದವೂ ಕೊನೆಗೊಳ್ಳುತ್ತದೆ ಮತ್ತು ಹೇಳುತ್ತಾ ಹೋದರೆ ಇನ್ನು ಹಲವಾರು ಅದ್ಭುತ ಸಂಗತಿಗಳು ನಮ್ಮ ಸನಾತನ ಧರ್ಮದಲ್ಲಿ ಇದ್ದಾವೆ.....

ಸನಾತನ ಧರ್ಮಕ್ಕೆ ಜಯವಾಗಲಿ...

ಜೈ  ಶ್ರೀ ಜಗನ್ನಾಥ 🙏🙏🙏🌹🌹

Saturday, January 1, 2022

ನಮಗೆ ಎರಡು ಹೊಸ ವರುಷಗಳು ಜನವರಿ 1 ಮತ್ತು ಚೈತ್ರ ಮಾಸದ ಯುಗಾದಿ.ಆಚರಣೆ ಮಾತ್ರ ಭಿನ್ನ. ಯಾವದು ಸರಿ ??

ನಮಗೆ ಎರಡು ಹೊಸ ವರುಷಗಳು ಜನವರಿ 1 ಮತ್ತು ಚೈತ್ರ ಮಾಸದ ಯುಗಾದಿ.ಆಚರಣೆ ಮಾತ್ರ ಭಿನ್ನ. ಯಾವದು ಸರಿ ??
ಎಲ್ಲರಿಗೂ ಹೊಸ ವರುಷದ 
ಶುಭಾಶಯಗಳು.
🌹🌹🌹🌹🌹🌹🌹
ಜನವರಿ 1 =ಜ 
ಯುಗಾದಿ = ಯು

ಜ = ಕುಡಿದು ಮಜಾ ಮಾಡುವ ದಿನ
ಯು = ಮಡಿ ಉಟ್ಟು ಪೂಜೆ ಮಾಡುವ ದಿನ
ಜ = ಮರ ಗಿಡ ಎಲೆ ಉದುರುವ ದಿನ
ಯು = ಎಲೆಗಳು ಚಿಗುರುವ ದಿನ
ಜ = ರಮ್ಮು ಸೋಡಾ ಮಿಶ್ರಣ
ಯು = ಬೇವು ಬೆಲ್ಲ ಮಿಶ್ರಣ
ಜ = ಕುಡಿದು ವಿಕೃತ ಪೂಜೆ
ಯು = ಪ್ರಕೃತಿ ಪೂಜೆ ಆರಾಧನೆ
ಜ = ಹೋಟೆಲ್ ಊಟ ಘಮ ಘಮ
ಯು = ಹಬ್ಬದ ಮನೆ ಹೋಳಿಗೆ ಸಂಭ್ರಮ
ಜ = ಪರಸ್ಪರ ಆಲಿಂಗನ
ಯು = ಹಿರಿಯರಿಗೆ ಅಭಿನಂದನ
ಜ = ಇರುವದಿಲ್ಲ ಶರೀರ ಸಮತೋಲನ
ಯು = ಮನಸಿನ ಸಮತೋಲನ ಪಾಠ ಪ್ರವಚನ
ಜ = ಶೇಂಗಾ ಜೊತೆ ಎಣ್ಣೆ ಪಾನ
ಯು = ಶೇಂಗಾ ಎಣ್ಣೆ ಯಿಂದ ರುಚಿ ಅಡಿಗೆ ವಿಧಾನ
ಜ = ಮತ್ತಿನಲ್ಲಿ ಬೀದಿಯಲ್ಲಿ ಶಯನ
ಯು = ಗುಡಿಯಲ್ಲಿ ಪಂಚಾಂಗ ಶ್ರವಣ.

ಆಯ್ಕೆ ನಿಮಗೆ ಬಿಟ್ಟದ್ದು

ವಂದನೆಗಳೊಂದಿಗೆ

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World