www.dgnsgreenworld.blogspot.com

Wednesday, August 28, 2019

ದೇವರಿಗೂ ಆಸ್ಪತ್ರೆಗೂ ಇರುವ ವ್ಯತ್ಯಾಸ?

SAVE NATURE, HEALTHY, WEALTHY & WISE. dgnsgreenworld Family



                ಒಬ್ಬ 80 ವರ್ಷದ ಮುದುಕನಿಗೆ ಹೃದಯ ಶಸ್ತ್ರಚಿಕಿತ್ಸೆಯಾಯಿತು. ಆಸ್ಪತ್ರೆ ಬಿಲ್ 8 ಲಕ್ಷ ಬಿಲ್ ನೋಡಿ ಮುದುಕ ಕಣ್ಣೀರು ಹಾಕಿದ ಅದನ್ನು ಕಂಡ  ವೈದ್ಯರು ಅಳಬೇಡಿ ನಿಮ್ಮ ಬಿಲ್ ಸ್ವಲ್ಪ ಕಡಿಮೆ ಮಾಡುತ್ತೇವೆ.
                 ಮುದುಕ.... ಸರ್ ಬಿಲ್ ತುಂಬಾ ಕಡಿಮೆ 10 ಲಕ್ಷ ತುಂಬಲು ನಾನು ಯೋಗ್ಯನಾಗಿರುವೆ, ನಾನು ಅತ್ತಿದ್ದು ಅದಕ್ಕಲ್ಲ ಯಾಕೆಂದರೆ ಆ ಪರಮಾತ್ಮ 80 ವರ್ಷ ನನ್ನ ಹೃದಯವನ್ನು ಜೋಪಾನವಾಗಿ ಕಾಪಾಡಿದ್ದಕ್ಕೆ ಯಾವುದೇ ಬಿಲ್ ನನಗೆ ಕಳಿಸಲಿಲ್ಲ, ನೀವೂ ಕೇವಲ ಮೂರು ಗಂಟೆ ನನ್ನ ಹೃದಯ ಬಡಿತ ಕೆಲಸ ಕಾರ್ಯನಿರ್ವಹಿಸಲು  ಎಂಟು ಲಕ್ಷ ರೂಪಾಯಿಯೇ... ??

                ಓ ಪರಮಾತ್ಮ ನೀನೇ ನಮ್ಮ ಮೇಲೆ ಎಷ್ಟು ಕಾಳಜಿ ವಹಿಸುತ್ತೀಯಾ, ನೀನು ನಮ್ಮ ಒಂದೊಂದು ಅಂಗಾಂಗದ ಮೇಲು ಬೆಲೆ ಕಟ್ಟಲಾಗದ ಹೂಡಿಕೆ ಮಾಡಿದ್ದಿಯ, ನಮ್ಮ ದೇಹದ ಯಾವುದೊ ಒಂದು ಅಂಗ ಕೆಲಸ ಮಾಡಲಿಲ್ಲ ಅಂತ ಡಾಕ್ಟರ್ ಬಳಿ ಹೋದಾಗಲೇ ನಿನ್ನ ಬೆಲೆ ನಮಗೆ ಅರ್ಥವಾಗುವುದು. ನೀನು ಯಾವುದೇ ಪ್ರತಿಫಲ ಬಯಸದ ಉತ್ಪಾದಕ ನೀನು ಉತ್ಪಾದಿಸಿದ ಅಂಗವನ್ನು ಊನ ಮಾಡಿ ರಿಪೇರಿ ಮಾಡಿಸಲು ಲಕ್ಷಾಂತರ ಹಣ ಕೊಟ್ಟು,ಭ ಭಕ್ತಿಯಿಂದ ನಿಮಗಿಂತಲೂ ಒಂದು ಮಾರು ಮೇಲೆ ಎಂಬಂತೆ ವೈದ್ಯರಿಗೆ ನಮಸ್ಕಾರ ಹೇಳಿ ಬರುತ್ತೇವೆ.
           ಆದರೂ
ನೀನು ಕೋಪಗೊಳ್ಳುವುದಿಲ್ಲ ನಮ್ಮ ಯೋಗಕ್ಷೇಮದ ಹೊಣೆ ಹೊತ್ತಿದ್ದೀಯ ಎಂಥಹ ಕರುಣಾಳು ನೀನು
ನಿನಗೆ ಕೊಡಲು ನನ್ನ ಬಳಿ ಏನಿದೆ
...... ರಾತ್ರಿ ಕರೆಂಟು ಬಳಿಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಬಿಸಾಡುತ್ತಾರೆ
ಸೂರ್ಯನ ಬೆಳುಕು ಬಿಸಿಲಿಗೆ ಯಾವುದೇ ಬಿಲ್ಲಿಲ್ಲ.
..... ನೀರು ಬಲಿಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಬಿಸಾಡುತ್ತಾರೆ
ಕಾಲುವೆ ಬಾವಿ ಏರಿ ಕೆರೆ ಸಮುದ್ರಗಳು ಕೊಟ್ಟ ನಿನಗೆ ಯಾವುದೇ ಬಿಲ್ ಕಟ್ಟುವುದಿಲ್ಲ.
..... a  c ಗಾಳಿಗಾಗಿ ಲಕ್ಷಾಂತರ ವ್ಯಯಸುತ್ತೇವೆ
ನೀನು ಕೊಟ್ಟ ಪರಿಶುದ್ಧ ಗಾಳಿಗೆ ಯಾವುದೇ ಬಿಲ್ಲಿಲ್ಲ.
ಯಾವ ಪಾವತಿಯನ್ನು ಅಪೇಕ್ಷಿಸದೆ ಸಕಲ ಜೀವರಾಶಿಯನ್ನು ಕಾಪಾಡುತ್ತಿರುವ ದೇವರೇ ನಿಮಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು.

ವಂದನೆಗಳೊಂದಿಗೆ

          ಸರ್ವೇಜನಾ ಸುಖಿನೋಭವಂತೋ

Monday, August 26, 2019

ರತನ್ ಟಾಟಾ ಹೇಳಿದ ಊಟದ ಸ್ಟೋರಿ.

SAVE NATURE, HEALTHY, WEALTHY & WISE. dgnsgreenworld Family
*ರತನ್ ಟಾಟಾ* ಹೇಳಿದ
“ *ಊಟದ ಸ್ಟೋರಿ*”:

ವಿಶ್ವದ ಶ್ರೀಮಂತ ಉಧ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ ರತನ್ ಟಾಟಾ ಜರ್ಮನಿಯಲ್ಲಿ  ತಮಗೆ ಎದುರಾದ ಒಂದು ಸನ್ನಿವೇಶವನ್ನ ಹಂಚಿಕೊಂಡಿದ್ದಾರೆ.

ಒಂದು ಸಾರಿ ನಾವು ಜರ್ಮನಿಗೆ ಹೊಗಿದ್ದೆವು.
ಅದು ಪ್ರಪಂಚದ ಅಭಿವೃದ್ಧಿ ದೇಶಗಳಲ್ಲಿ ಒಂದು.

ಹಂಬರ್ಗ್ ನಲ್ಲಿ  ಊಟ ಮಾಡಲು ಅಲ್ಲಿನ ಹೋಟೆಲ್’ಗೆ ಹೋದೆವು.
ಬಹಳ ಟೇಬಲ್ ಖಾಲಿ ಇವೆ.

ನಮಗೆ ಆಶ್ಚರ್ಯವಾಯಿತು.

ಅಲ್ಲಿ ಎಲ್ಲರೂ ಒಂದು-ಎರಡು ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದಾರೆ.

ಒಂದು ಮೂಲೆಯ ಟೇಬಲ್ ನಲ್ಲಿ ವೃದ್ಧರು ಒಂದೇ ಊಟ ತರಿಸಿಕೊಂಡು ಅದನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು.

ನಮಗೆ ಶ್ರೀಮಂತ ದೇಶದಲ್ಲಿ ಹೀಗೆ ತಿನ್ನುತ್ತಿದ್ದರಲ್ಲ ಎನ್ನಿಸಿತು.

ನಾವು ನಮ್ಮ ಸ್ಟೇಟಸ್ ಗೆ ತಕ್ಕಂತೆ ತರತರದ ತಿನಿಸುಗಳನ್ನು ತರಿಸಿಕೊಂಡು ತಿಂದೆವು.
ನಮ್ಮವರು ಕೆಲವು ತಿನಿಸುಗಳು ಇಷ್ಟವಾಲಿಲ್ಲವೆಂದು,
ಜಾಸ್ತಿ ಆಯಿತೆಂದು ಆಹಾರವನ್ನು ಪ್ಲೇಟ್ ನಲ್ಲಿಯೇ ಬಿಟ್ಟರು.!!

ನಾವು ಅಲ್ಲಿಂದ ಹೊರಡುವ ಸಮಯದಲ್ಲಿ ವೃದ್ಧ ಮಹಿಳೆಯೊಬ್ಬರು ನಮ್ಮ ಬಳಿ ಬಂದು ಹಾಗೆ ವೆಸ್ಟ್ ಮಾಡಬಾರದು ಅದು ನಮ್ಮ ಆಹಾರ ಎಂದಳು.!!

ನಮ್ಮವರು ಅದು ನಮ್ಮಿಷ್ಟ ಎಂದರು. ತಕ್ಷಣ ಪೋನ್ ತೆಗೆದು ಆಕೆ ಯಾರಿಗೋ ಪೋನ್ ಮಾಡಿದಳು.!!

ಪೊಲೀಸರು ಬಂದರು.!!!!

ನಡೆದಿದ್ದನ್ನು ಕೇಳಿದರು.
ನಮಗೆ 50 ಯೂರೋ ದಂಡ ಹಾಕಿದರು. ಮರುಮಾತನಾಡದೇ ಕಟ್ಟಿ ಬಂದೆವು.

ಅವರು ಹೇಳಿದರು
"ಹಣ ನಿಮ್ಮದು ಅಷ್ಟೇ,
ಇಲ್ಲಿಯ ಸಂಪನ್ಮೂಲಗಳಲ್ಲ.!!

ಇನ್ನೊಬ್ಬರು ತಿನ್ನುವುದನ್ನು ನೀವು ಹಾಳು ಮಾಡಿದ್ದೀರಿ.!!

ಆಮೂಲಕ ನೀವು ನಮ್ಮ ದೇಶದ ಸಂಪತ್ತನ್ನು ನಷ್ಟ ಮಾಡಿದ್ದೀರಿ.!!!

ದೇಶದ ಸಂಪತ್ತನ್ನು ನಷ್ಟ ಮಾಡುವ ಹಕ್ಕು ನಿಮಗಿಲ್ಲ.!!!"

ಇದು ನಮಗೆ ಒಂದು ಗುಣಪಾಠವಲ್ಲವೇ…?

“ *MONEY* *IS* *YOURS*
*BUT RESOURCES BELONGS TO THE SOCIETY*”

ವಂದನೆಗಳೊಂದಿಗೆ

Tuesday, August 13, 2019

Watch how Vijayapur-Solapur bridge is being collapsed!



SAVE NATURE, HEALTHY, WEALTHY & WISE. dgnsgreenworld Family

ಕೃಷ್ಣರಾಜಸಾಗರ ತುಂಬಿ ಅಣೆಕಟ್ಟೆಯಿಂದ ನೀರು ಹೊರಹೋಗುತ್ತಿರುವ ಮನಮೋಹಕ ದೃಶ್ಯವನ್ನು ನೋ...



SAVE NATURE, HEALTHY, WEALTHY & WISE. dgnsgreenworld Family

Fantastic martial arts skills with teamwork



SAVE NATURE, HEALTHY, WEALTHY & WISE. dgnsgreenworld Family

ವೈಜ್ಞಾನಿಕವಾಗಿ, ತಾಂತ್ರಿಕವಾಗಿ, ಮನುಷ್ಯ ಸಾಧನೆ ಗೈದರು ಪ್ರಕೃತಿಯ ಮುಂದೆ ಶೂನ್ಯ.



SAVE NATURE, HEALTHY, WEALTHY & WISE. dgnsgreenworld Family

ಜಲಾವೃತಗೊಂಡಿರುವ ಸುತ್ತೂರಿನ ಶ್ರೀ ಶಿವರಾತ್ರೇಶ್ವರ ಮಠದ ವಿಹಂಗಮ ನೋಟ.



SAVE NATURE, HEALTHY, WEALTHY & WISE. dgnsgreenworld Family

ಜಲಾವೃತಗೊಂಡಿರುವ ಸುತ್ತೂರಿನ ಶ್ರೀ ಶಿವರಾತ್ರೇಶ್ವರ ಮಠದ ವಿಹಂಗಮ ನೋಟ.



SAVE NATURE, HEALTHY, WEALTHY & WISE. dgnsgreenworld Family

Saturday, August 10, 2019

ಹೆಣ್ಣಿನ ಸೃಷ್ಟಿ

SAVE NATURE, HEALTHY, WEALTHY & WISE. dgnsgreenworld Family

ಹೆಣ್ಣಿನ ಸೃಷ್ಟಿ...
                                                                        ದೇವದೇವನು ಹೆಣ್ಣನ್ನು ಸೃಷ್ಟಿ ಮಾಡಿದಾಗ ಆರನೆಯ ದಿನ ಸರಿ ರಾತ್ರಿಯ ವರೆಗೂ ಕೆಲಸ ಮಾಡುತ್ತಿದ್ದ...
ಒಬ್ಬ ದೇವತೆ ಬಂದು ಕೇಳಿದಳು. 'ಏಕೆ ಅವಳಿಗಾಗಿ ಅಷ್ಟೊಂದು ಸಮಯ ಖರ್ಚು ಮಾಡುತ್ತಿರುವೆ?' 
ದೇವದೇವ ಉತ್ತರಿಸಿದ.  'ಇವಳನ್ನು ಸೃಷ್ಟಿಸಲು ನಾನು ಏನೇನು ಅಂಶಗಳನ್ನು ಪೂರ್ಣಗೊಳಿಸಬೇಕು ಎಂದು ನೋಡಿದೆಯಾ? '
'ಎಲ್ಲ ತರಹದ ತಿನಿಸುಗಳನ್ನು ಮಾಡಬೇಕು. ಅನೇಕ ಮಕ್ಕಳನ್ನು ಒಂದೇ ಸಮಯದಲ್ಲಿ ಅಪ್ಪಿಕೊಳ್ಳಲು ಸಮರ್ಥಳಾಗಿರಬೇಕು. ಗಾಯಗೊಂಡ ಮೊಣಕಾಲಿನ ಗಾಯದಿಂದ ಹಿಡಿದು ಘಾಸಿಗೊಂಡ ಹೃದಯದವರನ್ನು ಕೂಡ ಒಮ್ಮೆ ಆಲಿಂಗಿಸಿಕೊಂಡು ಅವರಿಗೆ ಸಾಂತ್ವನ ನೀಡಬೇಕು. ಇವೆಲ್ಲವನ್ನೂ ಅವಳು ಕೇವಲ ಎರಡು ಕೈಗಳಿಂದ ಮಾಡಬೇಕು. ಅಷ್ಟೇ ಅಲ್ಲ.
ಅವಳಿಗೆ ಅನಾರೋಗ್ಯ ಉಂಟಾದರೂ ತಾನೇ ಔಷಧಿ ಮಾಡಿಕೊಂಡು 18 ಗಂಟೆಗಳ ಕಾಲ ಕೆಲಸ ಮಾಡಬಲ್ಲಳು'.
ದೇವತೆಗೆ ಅಚ್ಚರಿಯ ಸಂತಸ.  'ಕೇವಲ ಎರಡೇ ಕೈಗಳಾ? ಅಸಾಧ್ಯ! 'ಎಂದಳು. 'ಇದೇನಾ ಸ್ಟ್ಯಾಂಡರ್ಡ್ ಮಾದರಿ? ' ಎಂದು ಹತ್ತಿರ ಬಂದು ಆ ಹೆಣ್ಣನ್ನು ಮುಟ್ಟಿದಳು.  'ಓ ದೇವದೇವಾ...  ಇವಳನ್ನು ಬಹಳ ಮೃದುವಾಗಿ ಮಾಡಿದ್ದೀ' ಎಂದಳು.
'ಹೌದು. ಇವಳು ಮೃದು. ಆದರೆ ಬಹಳ ಶಕ್ತಿವಂತಳಾಗಿ ಮಾಡಿದ್ದೇನೆ. ಅವಳು ಏನೇನು ತಡೆದುಕೊಳ್ಳಬಲ್ಲಳು... ಏನೇನು ಕ್ರಮಿಸಬಲ್ಲಳು ಎಂದು ನೀನು ಊಹಿಸಲಾರೆ.'
'ಇವಳು ಆಲೋಚನೆ ಮಾಡಬಲ್ಲಳಾ? '
'ಆಲೋಚನೆ ಮಾಡುವುದಷ್ಟೇ ಅಲ್ಲ... ತರ್ಕಬದ್ಧವಾಗಿ, ಸಕಾರಣವಾಗಿ ಮಾತಾಡಬಲ್ಲಳು ಮತ್ತು ವಿಚಾರಿಸಬಲ್ಲಳು'
ದೇವತೆ ಅವಳ ಕೆನ್ನೆಗಳನ್ನು ಮುಟ್ಟಿ 'ದೇವದೇವಾ, ಈ ಸೃಷ್ಟಿ ಸೋರುತ್ತಿದೆ. ಇವಳ ಮೇಲೆ ತುಂಬಾ ಹೊರೆ ಹೊರೆಸಿರುವೆ ನೀನು' ಎಂದಳು.
' ಅದು ಸೋರುವಿಕೆ ಅಲ್ಲ. ಕಣ್ಣೀರು' ಅವಳ ಮಾತನ್ನು ತಿದ್ದಿದ ದೇವದೇವ.
' ಈ ಕಣ್ಣೀರು ಯಾಕೆ? '
' ಕಣ್ಣೀರು ಅವಳ ಅಭಿವ್ಯಕ್ತಿ. ದುಃಖ, ಅನುಮಾನ, ಪ್ರೇಮ, ಒಂಟಿತನ, ನೋವು, ಕಷ್ಟಗಳು,ಹೆಮ್ಮೆ ಎಲ್ಲದಕ್ಕೂ'
ದೇವತೆ ಬಹಳ ಆನಂದದಿಂದ ,  'ದೇವದೇವಾ... ನೀನು ಎಲ್ಲವನ್ನೂ ಆಲೋಚಿಸಿರುವೆ. ಹೆಣ್ಣು ಒಂದು ಅದ್ಭುತ  ಸೃಷ್ಟಿ' ಎಂದಳು.
ದೇವದೇವ ನಗುತ್ತಾ' ಹೌದು. ಅವಳ ಶಕ್ತಿಗೆ ಗಂಡು ಅಚ್ಚರಿಗೊಳ್ಳುತ್ತಾನೆ. ತೊಂದರೆ, ಹೊರೆಗಳನ್ನು ಅವಳು ತಡೆದುಕೊಳ್ಳಬಲ್ಲಳು. ಅವಳದೇ ಆದ ಅಭಿಪ್ರಾಯ ಹೊಂದಿರಬಲ್ಲಳು. ಸಂತಸದ ಮತ್ತು ಪ್ರೀತಿಯ ಚಿಲುಮೆ ಅವಳು. ಚೀರಬೇಕು ಎನ್ನಿಸಿದಾಗಲೂ ಮುಗುಳ್ನಗಬಲ್ಲಳು. ಅಳಬೇಕೆನ್ನಿಸಿದಾಗ ಹಾಡಬಲ್ಲಳು. ಸಂತಸವಾದಾಗ ಅಳಬಲ್ಲಳು. ಹೆದರಿಕೆ ಆದಾಗ ನಗಬಲ್ಲಳು. ತಾನು ನಂಬಿದ್ದರ ಪರವಾಗಿ ಹೋರಾಡಬಲ್ಲಳು. ಬೇಷರತ್ತಿನ ಪ್ರೀತಿ ಅವಳದು. ಸನಿಹದವರು ಸತ್ತರೆ ಅವಳ ಮನ ಒಡೆಯುತ್ತದೆ. ಆದರೆ ಜೀವನದಲ್ಲಿಯೇ ಮತ್ತೆ ಶಕ್ತಿಯನ್ನು ಕಂಡುಕೊಳ್ಳುತ್ತಾಳೆ.'
ದೇವತೆ ಎಂದಳು. 'ಇವಳು ಪರಿಪೂರ್ಣಳಾ?'
'ಇಲ್ಲ. ಇವಳಲ್ಲಿ ಒಂದು ಲೋಪ ಇದೆ. ಅವಳ ಮೌಲ್ಯ ಎಷ್ಟು ಎಂಬುದನ್ನು ಬಹಳ ಸಲ ಮರೆಯುತ್ತಾಳೆ' ಎಂದ ದೇವದೇವ.
ಓ ಹೆಣ್ಣೇ ನೀನೊಂದು ನಿರಂತರ ಅದ್ಬುತ....
ಆಂಗ್ಲ ಲೇಖನದ ಭಾವಾನುವಾದ
ವಂದನೆಗಳೊಂದಿಗೆ
dgnsgreenworld

ಸಮುದ್ರವನ್ನು ಸೇರಲು, ಪ್ರವಾಹದಲ್ಲಿ ತೇಲಿ ಬಂದ ಬೋರ್ಡ್ ಗಳು.

SAVE NATURE, HEALTHY, WEALTHY & WISE. dgnsgreenworld Family

*ಸಮುದ್ರವನ್ನು ಸೇರಲು,  ಪ್ರವಾಹದಲ್ಲಿ  ತೇಲಿ ಬಂದ ಬೋರ್ಡ್ ಗಳು.*👇🏻

*ನಾಯಿ ಇದೆ ಎಚ್ಚರಿಕೆ...*

*ಅನುಮತಿ ವಿನಃ ಪ್ರವೇಶವಿಲ್ಲ...*

*ನೋಟೀಸ್ ಹಚ್ಚಬಾರದು*


*ಅನ್ಯ ಧರ್ಮೀಯರಿಗೆ ಅನುಮತಿ ನಿಷೇಧ*

*ಕೀಳು ಜಾತಿಯವರಿಗೆ ಪ್ರವೇಶವಿಲ್ಲ*

*ಭಂಟರ ಭವನ, ಕ್ರೈಸ್ತರ ಭವನ, ಮುಸ್ಲಿಂ ಜಮಾಹ, ಲಿಂಗಾಯತರ ಖಾನಾವಳಿ, ವೀರಶೈವ ಸಂಘ,*
*ಹಿಂದೂ ಸೇನೆ,ಶ್ರೀರಾಮ ಸೇನೆ. ಕ್ರಿಶ್ಚಿಯನ್ ಸಂಘಟನೆ,  ಮುಸ್ಲಿಂ ಸಂಘಟನೆ*

*ಬ್ರಾಹ್ಮಣರಿಗೆ ಮಾತ್ರ ಪ್ರವೇಶ*


*ಏಸುವಿನ ಮಕ್ಕಳು ಅಲ್ಲಾಹನ ಪ್ರಜೆಗಳು,*


*ಖಾಸಗಿ ಜಮೀನು, ಕಾಲು ದಾರಿಗೆ ಅವಕಾಶವಿಲ್ಲ*

*ಮನೆಯ ಮುಂದೆ ವಾಹನ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ*


*ಮನುಷ್ಯನ  ಅಹಂದತೆಗೆ ಸಮುದ್ರ ಈಗಲೂ ನಗುತ್ತಲೇ ಇದೆ...!*


*ಇನ್ನಾದರೂ ಬದಲಾಗು ಮಾನವ.! ಪ್ರೀತಿಯ ಸಂಕೇತದ‌ ಪ್ರತಿಫಲವಾಗಿ ಭೂಮಿಗೆ ಬಂದ್ದಿದಿಯಾ. ಬದುಕಿದಷ್ಟು‌ ದಿನ ಪ್ರೀತಿಯ ಹಂಚಿ ಹೋಗು.*🙏🏻
ವಂದನೆಗಳೊಂದಿಗೆ
dgnsgreenworld

Thursday, August 8, 2019

ಆತ್ಮಜ್ಞಾನದಿಂದ ಅಮೃತತ್ವ

SAVE NATURE, HEALTHY, WEALTHY & WISE. dgnsgreenworld Family

ಆತ್ಮಜ್ಞಾನದಿಂದ ಅಮೃತತ್ವ

 ಶ್ರೀವಾಣಿ

ಆತ್ಮಜ್ಞಾನದಿಂದ ಅಮೃತತ್ವ


ಶ್ರೀ ಸಿದ್ಧೇಶ್ವರ ಸ್ವಾಮೀಜಿ

ನಾವು ತೊಡುವ ಬಟ್ಟೆ ಸ್ವಚ್ಛವಾಗಿದ್ದರೆ, ಸುಂದರವಾಗಿದ್ದರೆ ನಮ್ಮ ಜೀವನವೂ ಅಷ್ಟೇ ಸುಂದರವಾಗಿರುತ್ತದೆ, ಸ್ವಚ್ಛವಾಗಿರುತ್ತದೆ. ಬಟ್ಟೆ ಎಂದಮೇಲೆ ಹಾಸು-ಹೊಕ್ಕು ಎರಡೂ ಇರಲೇಬೇಕು. ವಿದ್ಯೆ, ಅವಿದ್ಯೆ ಅಥವಾ ಜ್ಞಾನ ಮತ್ತು ಕರ್ಮ ಇವೆರಡೂ ನಮ್ಮ ಬಾಳ-ಬಟ್ಟೆಯ ಹಾಸು-ಹೊಕ್ಕು. ಅವೆರಡರಲ್ಲಿ ಒಂದಿಲ್ಲದಿದ್ದರೂ ನಮ್ಮ ಬಾಳಬಟ್ಟೆಯು ಸಿದ್ಧವಾಗಲಾರದು. ವಿದ್ಯೆ ಎಂದರೆ ಜ್ಞಾನ ಮಾಡಿಕೊಳ್ಳುವುದು, ಅವಿದ್ಯೆ ಎಂದರೆ ಕರ್ಮ ಅಥವಾ ದುಡಿಯುವುದು ಎಂದರ್ಥ. ಲಕ್ಷಾಂತರ ವರುಷದ ಜೀವವಿಕಾಸದ ಕಥೆಯನ್ನು ನೋಡಿದರೂ ಜ್ಞಾನ ಮತ್ತು ಕರ್ಮ ಇವೆರಡೇ ಮಾನವನ ಎಲ್ಲ ಪ್ರಗತಿಗೆ ಕಾರಣವಾಗಿವೆ.

ವಿದ್ಯಾಂಚಾವಿದ್ಯಾಂಚ ಯಸ್ತದ್ವೇದೋಭಯಂ ಸಹ |

ಅವಿದ್ಯಯಾ ಮೃತ್ಯುಂ ತೀತ್ರ್ವಾ ವಿದ್ಯಯಾಮೃತತ್ವಮಶ್ನುತೇ ||

(ಈ.ಉ.11)

ಆತ್ಮವಿದ್ಯೆ ಹಾಗೂ ನಿಷ್ಕಾಮಕರ್ಮಗಳೆರಡೂ ಭಿನ್ನವಲ್ಲ. ಅವೆರಡನ್ನು ಕೂಡಿಯೇ ಅರಿಯಬೇಕು; ಅಳವಡಿಸಿಕೊಳ್ಳಬೇಕು. ಸಾಧಕನು ನಿಷ್ಕಾಮ ಕರ್ಮದಿಂದ ಮೃತ್ಯುವನ್ನು ದಾಟುತ್ತಾನೆ. ಆತ್ಮಜ್ಞಾನದಿಂದ ಅಮೃತತ್ವವನ್ನು ಹೊಂದುತ್ತಾನೆ.

ನಾವು ಮಾಡುವ ಕರ್ಮಗಳ ಉದ್ದೇಶ ಸರಿಯಾಗಿಲ್ಲದಿದ್ದರೆ ಆತ್ಮಜ್ಞಾನ ಅಥವಾ ಅತ್ಮಾನಂದವು ದೊರೆಯಲಾರದು. ಪರಮಸತ್ಯ ಪರಮಾತ್ಮನ ಅರಿವಿಲ್ಲದೆ ಮಾಡಿದ ಕರ್ಮವು ಬಂಧನಕ್ಕೆ ಕಾರಣವಾಗುತ್ತದೆ. ಬರೀ ಪ್ರಾಪಂಚಿಕ ಆಶೆ-ಆಕಾಂಕ್ಷೆಗಳ ಪೂರೈಸುವುದೇ ಕರ್ಮಗಳ ಉದ್ದೇಶವಲ್ಲ. ಅದಕ್ಕಿಂತಲೂ ಶ್ರೇಷ್ಠವಾದ ಉದ್ದೇಶವು ನಾವು ಮಾಡುವ ಕರ್ಮಕ್ಕೆ ಇದೆ. ಜೀವನದಲ್ಲಿ ಪರಮಶಾಂತಿ, ಪರಮಾನಂದವನ್ನು ಪಡೆಯುವುದೇ ನಾವು ಮಾಡುವ ಎಲ್ಲ ಕರ್ಮಗಳ ಪರಮೋದ್ದೇಶವಾಗಿದೆ.

ಓರ್ವ ಕಲಾವಿದನ ಕೈಯಲ್ಲಿ ಒಂದು ಕುಂಚ ಸಿಕ್ಕರೆ ಸಾಕು ಒಂದು ಸುಂದರವಾದ ಕಲಾಕುಸುಮವು ಅರಳಿಬಿಡುತ್ತದೆ. ಬೇರೆಯವರ ಕೈಯಲ್ಲಿ ಸಿಕ್ಕರೆ ಸುಂದರವಾದ ಕಲೆಯೂ ಕೆಟ್ಟು ಹೋಗುತ್ತದೆ. ನೂರು ವಸಂತಗಳ ನಮ್ಮ ಆಯುಷ್ಯವೇ ಚಿತ್ರ ಬರೆಯುವ ಪರದೆ. ಸುಂದರವಾದ ಕರ್ಮಗಳೆಂಬ ಕುಂಚನ್ನು ಹಿಡಿದು, ಭಾವದ ಬಣ್ಣನ್ನು ಬಳಸಿ, ಜ್ಞಾನದ ಬೆಳಕಿನಲ್ಲಿ ನಾವು ನಮ್ಮ ಜೀವನದ ಅಪ್ರತಿಮವಾದ ಚಿತ್ರವನ್ನು ಬರೆಯಬಹುದಾಗಿದೆ. ಹೀಗೆ ಸುಜ್ಞಾನ, ಸತ್ಕರ್ಮಗಳಿಂದ ನಾವು ಈ ಜಗತ್ತಿನಲ್ಲಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು. ಪರಮಶಾಂತಿ, ಪರಮಾನಂದವನ್ನು ಅನುಭವಿಸಬೇಕು, ಇಲ್ಲದಿದ್ದರೆ ನಮ್ಮ ಜೀವನವು

ನಿರರ್ಥಕವಾದಂತೆಯೇ!

ಪ್ರಜಾಪ್ರೇಮಿಯಾದ ಮಹಾರಾಜ. ಅಂದು ಅವನ ಹುಟ್ಟುಹಬ್ಬ. ತನ್ನಿಮಿತ್ಯ ರಾಜನು ತನ್ನ ಪ್ರಜೆಗಳಿಗೆಲ್ಲ ಸಂತೋಷಕೂಟವನ್ನು ಏರ್ಪಡಿಸಿದ್ದ. ಇಷ್ಟೇ ಅಲ್ಲ ತನ್ನ ಹುಟ್ಟುಹಬ್ಬದ ದಿವಸ ಯಾರಾದರೂ ಅರಮನೆಗೆ ಬಂದು ತನ್ನನ್ನು ಭೇಟಿಯಾಗಬಹುದು ಎಂದು ಡಂಗುರ ಸಾರಿಸಿದ. ರಾಜನ ದರ್ಶನ ಹಾಗೂ ಸಂತೋಷಕೂಟ ಎರಡೂ ದೊರೆಯುತ್ತವೆ ಎಂದಮೇಲೆ ಕೇಳುವುದೇನಿದೆ? ಊರಿಗೆ ಊರೇ ಅರಮನೆಯತ್ತ ಮುಖ ಮಾಡಿತು. ರಾಜನ ದರ್ಶನಕ್ಕಾಗಿ ಅರಮನೆಗೆ ಬರುವವರಿಗೆಲ್ಲ ದಾರಿಯುದ್ದಕ್ಕೂ ಬಗೆ ಬಗೆಯಾದ ತಿಂಡಿ-ತಿನುಸುಗಳು, ಬಟ್ಟೆ-ಬರೆ, ಉಡಿಗೆ-ತೊಡಿಗೆಗಳನ್ನು, ಸಂಗೀತ-ನೃತ್ಯವನ್ನೂ ಉಚಿತವಾಗಿ ಕೊಡುವ ಏರ್ಪಾಡು ಮಾಡಿದ್ದರು. ಬಂದವರೆಲ್ಲರೂ ಉಚಿತವಾಗಿದ್ದ ತಿಂಡಿ-ತಿನುಸು, ಉಡಿಗೆ-ತೊಡಿಗೆ, ಸಂಗೀತ-ನೃತ್ಯಗಳಲ್ಲಿಯೇ ಮಗ್ನರಾಗಿ ಬಿಟ್ಟರು. ಅರಮನೆಯ ಹೂದೋಟದಲ್ಲಿದ್ದ ರಾಜನತ್ತ ಯಾರೊಬ್ಬರೂ ಹೋಗಲಿಲ್ಲ. ಸಂಜೆಯ ಸಮಯಕ್ಕೆ ಒಬ್ಬ ಹಿರಿಯ ಅನುಭವಿಕ ರೈತನು ಅರಮನೆಗೆ ಬಂದ. ತಕ್ಷ ಣ ರಸ್ತೆಯ ಬದಿಯಲ್ಲಿದ್ದ ಅಂಗಡಿಯವರು ಬನ್ನಿ ಬನ್ನಿ ಎಂದು ಕರೆದು 'ಇದರಲ್ಲಿ ನಿಮಗೇನು ಬೇಕು ತೆಗೆದುಕೊಳ್ಳಿ, ಎಲ್ಲವೂ ಉಚಿತ' ಎಂದು ಹೇಳಿದರು. ರೈತ ಹೇಳಿದ 'ನನಗೇನೂ ಬೇಡ, ಮಹಾರಾಜನಿಗೆ ಭೆಟ್ಟಿಯಾಗಬೇಕು ಅಷ್ಟೇ!' ಇಷ್ಟು ಹೇಳಿ ರೈತನು ನೇರವಾಗಿ ಹೂದೋಟದಲ್ಲಿದ್ದ ರಾಜನಿಗೆ ಭೇಟಿಯಾದ. 'ಬೆಳಗಿನಿಂದ ಸಂಜೆಯವರೆಗೆ ದಾರಿ ಕಾಯ್ದರೂ ಯಾರೂ ಬಂದಿರಲಿಲ್ಲ, ಈಗ ನೀನೊಬ್ಬನಾದರೂ ಬಂದೆಯಲ್ಲಾ' ಎಂದು ರಾಜನು ವಾತ್ಸಲ್ಯದಿಂದ ರೈತನನ್ನು ಆಲಂಗಿಸಿದಾಗ ಈರ್ವರ ಕಣ್ಣುಗಳಲ್ಲಿ ಆನಂದ ಭಾಷ್ಪ ಧಾರೆಯಿಟ್ಟಿತ್ತು!!

ನಾವಿರುವ ಈ ಪ್ರಪಂಚವೇ ಪರಮಾತ್ಮನ ಹೂದೋಟ. ನಾವೆಲ್ಲರೂ ಪ್ರಜೆಗಳು. ಭಕ್ತ ವತ್ಸಲನಾದ ಪರಮಾತ್ಮನು ನಮಗೆ ದರ್ಶನವನ್ನಿತ್ತು ನಮ್ಮನ್ನು ಉದ್ಧರಿಸಬೇಕೆಂದು ನಮಗಾಗಿ ನಿತ್ಯ ದಾರಿ ಕಾಯುತ್ತಾನೆ. ಪ್ರಪಂಚದ ವಿಷಯ ವ್ಯಾಮೋಹಗಳಲ್ಲಿ ಆಕಂಠಪೂರ್ತಿ ಮುಳುಗಿದ ನಮಗೆ ಆ ಮಹಾದೇವನತ್ತ ಹೋಗಲು ಸಮಯವೆಲ್ಲಿದೆ? ಬುದ್ಧ, ಬಸವ, ಮಹಾವೀರ, ಜ್ಞಾನೇಶ್ವರ ಮೊದಲಾದ ಬೆರಳಣಿಕೆಯ ಮಹಾತ್ಮರು ಮಾತ್ರ ಪ್ರಪಂಚದ ಎಲ್ಲ ಬಂಧನಗಳನ್ನು ಹರಿದೊಗೆದು ಆ ಪರಮಾತ್ಮನ ದಿವ್ಯ ದರ್ಶನ ಪಡೆದು ಧನ್ಯರಾದರು.

ಆಧಾರ : ಈಶ ಪ್ರಸಾದ

ವಂದನೆಗಳೊಂದಿಗೆ dgnsgreenworld

ಮಾನವೀಯತೆ ಎಂಬುದು ಆಸ್ತಿ ಅಂತಸ್ತಿನಲ್ಲಿಲ್ಲ. ಮನಸ್ಸಿನಲ್ಲಿದೆ.

SAVE NATURE, HEALTHY, WEALTHY & WISE. dgnsgreenworld Family

ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ.  ಮನಸ್ಸಿನಲ್ಲಿದೆ

ಒಂದು ಕುಟುಂಬವಿತ್ತು. ಅದರಲ್ಲಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಇದ್ದರು. ಊರಿನಿಂದ ಹೊರ ಬಂದ ಅವರು ರಸ್ತೆ ಬದಿಯಲ್ಲೇ ಇರುತ್ತಿದ್ದರು. ಅಲ್ಲೇ ಇದ್ದ ಪುಟ್ಟ ಟೆಂಟ್‌ಗಳಲ್ಲಿ ವಾಸವಿದ್ದರು. ದಿನ ಬರುತ್ತಿದ್ದಂತೆ ಒಂದು ಕುಟುಂಬ ಇದ್ದದ್ದು ಮೂರು ನಾಲ್ಕು ಕುಟುಂಬ ಆಗಿತ್ತು. ಅವರ ಮನೆ ಶ್ರೀಮಂತರೊಬ್ಬರು ಅವರ ಜೀವನ ಶೈಲಿ ದಿನವೂ ನೋಡುತ್ತಿದ್ದರು. ಆ ದಿನ ದುಡಿದರೆ, ಆ ದಿನ ತಿನ್ನಲು ಅನ್ನ ಸಿಗುತ್ತಿತ್ತು. ಒಂದು ದಿನ ಅವರಿಗೆ ಯಾವ ಕೆಲಸವೂ ಸಿಗದೆ ಖಾಲಿ ಕೈಲಿ ವಾಪಾಸಾದರು. ಮನೆ ಹೊರಗೆ ದಿನವೂ ಅಡುಗೆ ಮಾಡುತ್ತಿದ್ದವರು ಒಂದು ದಿನ ಸುಮ್ಮನಿದ್ದರೆ ಕಂಡೇ ಕಾಣುತ್ತದೆ.

ಅವರ ಸ್ಥಿತಿ ನೋಡಲಾರದೆ, ಇವರೇ ಅಡುಗೆ ಮಾಡಿಕೊಂಡು ಹೋಗಿ ಕೊಟ್ಟು ಬರಲು ನಿರ್ಧರಿಸಿದರು. ಅಂತೆಯೇ ಅಡುಗೆ ಮಾಡಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಮನೆಗೆ ನೀಡಿದರು. ಹತ್ತಿರದಿಂದ ಅವರನ್ನು ನೋಡಿದಾಗ ಅವರ ಕಣ್ಣಲ್ಲಿದ್ದ ಹೊಳಪು ಕಂಡಿತು. ಹಸಿವಿನಿಂದ ಅವರ ಮುಖ ಸುಸ್ತಾದಂತೆ ಕಾಣುತ್ತಿತ್ತೇ ಹೊರತು ಬೇರಾವುದಕ್ಕೂ ಕೊರತೆ ಇದ್ದಂತೆ ಕಾಣುತ್ತಿರಲಿಲ್ಲ. ಮನೆಯ ಹೆಣ್ಣು ಮಗಳೊಬ್ಬಳು ಎಲ್ಲರಿಗೂ ಊಟ ಬಡಿಸಿ, ಅರ್ಧ ಆಹಾರ ಮಿಕ್ಕಿಸಿ ಅದನ್ನು ಹೊರಗೆ ತೆಗೆದುಕೊಂಡು ಹೋದಳು. ಇದನ್ನು ಗಮನಿಸಿದ ಶ್ರೀಮಂತರು. ಇವರು ವಿಧಿ ವಿಧಾನಗಳನ್ನು ಮಾಡುತ್ತಾರೆ ಎನಿಸುತ್ತದೆ.

ಎಡೆಯ ಹೆಸರಿನಲ್ಲೋ, ಬೇರೆ ಯಾವುದೋ ರೀತಿ ನೀತಿ ಹೆಸರಿನಲ್ಲಿ ಊಟ ಚೆಲ್ಲಬಹುದು ಇವರ ಆಲೋಚನೆ. ಅಂತೆಯೇ ಆಕೆ ಬರುವಾಗ ಪಾತ್ರೆ ಖಾಲಿಯಾಗಿತ್ತು. ಶ್ರೀಮಂತರಿಗೆ ಕೋಪ ಬಂತು. ‘ ಕೊಟ್ಟದ್ದನ್ನು ಹೀಗೆ ವೇಸ್‌ಟ್ ಮಾಡುತ್ತೀರಲ್ಲಾ, ಅದೇ ಇದ್ದಿದ್ದರೆ ನಾಳೆಗೆ ಬರುತ್ತಿರಲಿಲ್ಲವಾ? ಅಥವಾ ಹೊಟ್ಟೆ ತುಂಬ ಎಲ್ಲರೂ ತಿನ್ನುತ್ತಿರಲಿಲ್ಲವಾ? ಎಂದರು. ಅದಕ್ಕೆ ಆಕೆ‘ ನಾನು ಆಹಾರ ಚೆಲ್ಲಲಿಲ್ಲ. ಅದರ ಬಗ್ಗೆ ಆಲೋಚಿಸುವುದು ಮಹಾಪಾಪ. ಅರ್ಧ ಆಹಾರವನ್ನು ಪಕ್ಕದ ಮನೆಯವರಿಗೆ ನೀಡಿ ಬಂದೆ. ಅವರೂ ನಮ್ಮಂತೆ ಏನೂ ತಿಂದಿರಲಿಲ್ಲ’ ಎಂದರು. ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ. ಮನಸ್ಸಿನಲ್ಲಿದೆ. ಆಹಾರದ ಬೆಲೆ ಹೆಚ್ಚಾಗಿ ಕಾಣುತ್ತದೆ ಅಲ್ಲವೆ?

ವಂದನೆಗಳೊಂದಿಗೆ. dgnsgreenworld

Friday, August 2, 2019

ಹೇಗಿರಬೇಕು ಮನೆಯ ವಾಸ್ತು?

SAVE NATURE, HEALTHY, WEALTHY & WISE. dgnsgreenworld FAMILY.

*ಹೇಗಿರಬೇಕು ಮನೆಯ ವಾಸ್ತು?*
           

ಮನೆ ಬೇಕಾದರೆ ಹೇಗಾದರೂ ಇರಲಿ
ಆದರೆ ಅದರ ಒಂದು ಮೂಲೆಯಲ್ಲಿ
ಮನಬಿಚ್ಚಿ ನಗಲು ಒಂದಷ್ಟು ಜಾಗವಿರಲಿ..

ಸೂರ್ಯನು ಎಷ್ಟಾದರೂ ದೂರವಿರಲಿ
ಅವನಿಗೆ ಮನೆಗೆ ಬರಲು ದಾರಿಯಿರಲಿ..

ಒಮ್ಮೊಮ್ಮೆ ಮಾಳಿಗೆಯ ಹತ್ತಿ
ತಾರೆಗಳನ್ನು ಅವಶ್ಯವಾಗಿ ಎಣಿಸಿ..
ಸಾಧ್ಯವಾದರೆ ಕೈಚಾಚಿ
ಚಂದಿರನನ್ನು ಮುಟ್ಟಲು ಪ್ರಯತ್ನಿಸಿ..

ಮಂದಿ ಬಳಗವನ್ನು ಆಗಾಗ ಭೇಟಿಯಾಗುವಿರಾದರೆ
ಮನೆಯ ಅಕ್ಕಪಕ್ಕ ನೆರೆಹೊರೆ ಖಂಡಿತ ಇರಲಿ..

ಮಳೆಯಲ್ಲಿ ನೆನೆಯಲು ಬಿಡಿ,
ಜಿಗಿದು ಕುಣಿದಾಡಲು ಬಿಡಿ..
ಸಾಧ್ಯವಾದರೆ ಮಕ್ಕಳಿಗೆ ಒಂದು
ಕಾಗದದ ದೋಣಿ ತೇಲಿಬಿಡಿಲು ಬಿಡಿ..

ಎಂದಾದರೊಮ್ಮೆ ಬಿಡುವಿದ್ದಾಗ, ಆಕಾಶವು ಶುಭ್ರ ವಿರುವಾಗ
ಒಂದು ಗಾಳಿಪಟವನ್ನು ಆಕಾಶದಲ್ಲಿ ಹಾರಿಬಿಡಿ..
ಸಾಧ್ಯವಾದರೆ ಒಂದು ಪಂದ್ಯವೂ ಆಡಿ ಬಿಡಿ..

ಮನೆಯ ಮುಂದೆ ಒಂದು ಮರವಿರಲಿ
ಅದರ ಮೇಲೆ ಕುಳಿತ ಪಕ್ಷಿಗಳ
ಮಾತುಕತೆ ಅವಶ್ಯವಾಗಿ ಕೇಳಿರಿ..



ಎಲ್ಲಿ ಬೇಕಾದರಲ್ಲಿ ಸುಳಿದಾಡಿ
ಹಾಗೆಯೇ ಅಲ್ಲೊಂದು ಸಿಹಿಯಾದ ಕೋಲಾ‌ಹಲವನ್ನು ಹರಡಿ..

ವಯಸ್ಸಿನ ಪ್ರತಿ ಘಟ್ಟವೂ ಆನಂದದಾಯಕ
ನಿಮ್ಮ ವಯಸ್ಸಿನ ಸಂಭ್ರಮವನ್ನು ಅನುಭವಿಸಿ..

ಜೀವಂತ ಹೃದಯವಿರಲಿ ಸ್ವಾಮಿ
ಆ ಮೊಗದಲ್ಲಿ ಉದಾಸೀನತೆ ಏಕೆ?
ಸಮಯ ಹೇಗೂ ಕಳೆದು ಹೋಗುತ್ತಿದೆ
ವಯಸ್ಸಿನ ಲೆಕ್ಕವದು ಹಾಳಾಗಿಹೋಗಲಿ..

ವಂದನೆಗಳೊಂದಿಗೆ
ಡಿಜಿನ್

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World