www.dgnsgreenworld.blogspot.com

Friday, May 29, 2020

ದೇವರಿಗೆ *ಬಾಳೆ ಹಣ್ಣು* ಮತ್ತು *ತೆಂಗಿನಕಾಯಿ* ಯಾಕೆ *ಶ್ರೇಷ್ಟ ನೈವೇದ್ಯ?*

ದೇವರಿಗೆ *ಬಾಳೆ ಹಣ್ಣು* ಮತ್ತು *ತೆಂಗಿನಕಾಯಿ* ಯಾಕೆ *ಶ್ರೇಷ್ಟ ನೈವೇದ್ಯ?*

🍌🍌🍌🍌🍌🍌🍌🍌🍌🍌🍌🍌🍌🍌

ದೇವಸ್ಥಾನಕ್ಕೆ ಹೋಗವಾಗ *ಬಾಳೆಹಣ್ಣು* ಮತ್ತೆ *ತೆಂಗಿನಕಾಯಿ* ಯಾಕೆ ತೆಗೆದುಕೊಂಡು ಹೋಗುತ್ತೇವೆ?

ದೇವರಿಗೆ ಈ *ಬಾಳೆಹಣ್ಣು* ಮತ್ತು *ತೆಂಗಿನಕಾಯಿ* ಏಕೆ ಶ್ರೇಷ್ಠ?

ಬೇರೆ ಯಾವ ಹಣ್ಣನ್ನೂ ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ?

ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ *ಬಾಳೆ ಹಣ್ಣು* ನಿವೇದಿಸುತ್ತಾರೆ ಹಾಗೆಯೇ *ತೆಂಗಿನಕಾಯಿ* ಒಡೆದು ಮಂಗಳಾರತಿ ಬೆಳಗುತ್ತಾರೆ ಇವೆರಡರ ವೈಶಿಷ್ಟ್ಯವೇನು?

ಹೆಚ್ಚಾಗಿ ನಾವು ಒಂದು ಹಣ್ಣನ್ನು ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೃಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ.

ಆದರೆ *ಬಾಳೆಹಣ್ಣ* ನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ *ಬಾಳೆಹಣ್ಣನ್ನೇ* ಹಾಗೇ ಎಸೆದರೂ ಅದು ಮತ್ತೆ ಬೆಳೆಯುವುದಿಲ್ಲ. *ತೆಂಗಿನಕಾಯಿ* ಯೂ ಅಷ್ಟೆ, ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ.

ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ *ಜನ್ಮವಿಲ್ಲದ ಮುಕ್ತಿ* ಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ದತಿಯನ್ನು ನಮ್ಮ ಹಿರಿಯರು ಮಾಡಿರುವರು. ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ.

ಅಷ್ಟೇ ಅಲ್ಲ, ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ; ತೆಂಗಿನ ಮರ ಉಪಯೋಗಿಸದ ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ.*

*ಪರಿಶುದ್ಧ* ವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ ಎಂಬ ತತ್ವವು ಇದರಲ್ಲಿದೆ.

ಇನ್ನೂ ಹೇಳಬೇಕೆಂದರೆ, *ಬಾಳೆ* ಮತ್ತು *ತೆಂಗಿನ* ಮರದ ಎಲ್ಲಾ ಭಾಗಗಳು ವ್ಯರ್ಥವಾಗದೆ ಎಲ್ಲರಿಗೂ ಉಪಯುಕ್ತವಾಗಿವೆ. ಹಾಗೆಯೇ ಬೇರೆಯವರಿಗೆ ಸಹಾಯ ಮಾಡುವುದೇ ನಮ್ಮ ಜನ್ಮಕ್ಕೆ ಸಫಲತೆ ನೀಡುವುದು ಎಂಬ ಗೂಢಾರ್ಥವಿದೆ.

ತೆಂಗಿನ ಕಾಯಿಯನ್ನು ದೇವರ ಮುಂದೆ ಒಡೆದರೆ ನಮ್ಮ ಪಾಪ ಕರ್ಮ ದೋಷವೂ ಕೂಡ ಪರಿಹಾರ ಆಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಆ ಶಕ್ತಿ ತೆಂಗಿನಕಾಯಿಗೆ ಇದೆ. ಆದಕಾರಣ *ತೆಂಗಿನಮರ* ವನ್ನು *ಕಲ್ಪವೃಕ್ಷ* ಎಂದು ಕರೆಯುತ್ತಾರೆ.

ನಮ್ಮ *ಸಂಪ್ರದಾಯ* ದಲ್ಲಿ ಇಷ್ಟೊಂದು ಅರ್ಥವಿರುವುದು ನಮ್ಮ *ಭಾರತದ ಪರಂಪರೆ* ಯ ಘನತೆಗೆ ಸಾಕ್ಷಿಯಾಗಿದೆ.

No comments:

Post a Comment

welcome to dgnsgreenworld Family

ಮನಸೇ ಎಲ್ಲವೂ.

The mind is everything. What you think you become. ಮನಸ್ಸೇ ಎಲ್ಲವೂ. ನೀವು ಏನಾಗುತ್ತೀರಿ ಎಂದು ಯೋಚಿಸುತ್ತೀರೋ ಅದುವೇ ಆಗುತ್ತೀರಿ. ವಂದನೆಗಳೊಂದಿಗೆ.  Very g...

Green World