www.dgnsgreenworld.blogspot.com

Sunday, August 23, 2020

ಒಬ್ಬ ಮನುಷ್ಯ ಜೀವನದಲ್ಲಿ ಇಷ್ಟೊಂದು ವಿಕ್ರಮಗಳನ್ನು ಸಾಧಿಸಬಹುದಾ ??

ಒಬ್ಬ ಮನುಷ್ಯ ಜೀವನದಲ್ಲಿ ಇಷ್ಟೊಂದು ವಿಕ್ರಮಗಳನ್ನು ಸಾಧಿಸಬಹುದಾ ??

1. ಕೃಷ್ಣರಾಜ ಸಾಗರ ಅಣೆಕಟ್ಟು
2. ಮಹಾರಾಣಿ ಕಾಲೇಜು ಸ್ಥಾಪನೆ , ಬೆಂಗಳೂರು
3. ನಿಮಾನ್ಸ್ ಆಸ್ಪತ್ರೆ , ಬೆಂಗಳೂರು
4. ಮಿಂಟೋ ಹಾಸ್ಪಿಟಲ್ , ಬೆಂಗಳೂರು
5. ಕೆ . ಆರ್ . ಮಾರುಕಟ್ಟೆ , ಬೆಂಗಳೂರು
 6. ಬನಾರಸ್ ಹಿಂದೂ ಮಹಾವಿದ್ಯಾಲಯ , ಸಹ ನಿರ್ಮಾತೃ
7. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಬೆಂಗಳೂರು
8. ಶಿವನಸಮುದ್ರ ಜಲವಿದ್ಯುತ್ ಯೋಜನೆ
9. ವಾಣಿವಿಲಾಸ ಅಣೆಕಟ್ಟು ,  ಚಿತ್ರದುರ್ಗ
10. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ
11. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ 
12.ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ 
13. ಬೆಂಗಳೂರು ವಿಶ್ವವಿದ್ಯಾಲಯ (UVCE) ಸ್ಥಾಪನೆ
14. ಯುವರಾಜ ಕಾಲೇಜು ಮೈಸೂರು ಮೈಸೂರ್ 
15. ಮೈಸೂರು ರಾಜ್ಯ ರೈಲ್ವೆ
16. ಮೈಸೂರು ಮೆಡಿಕಲ್ ಕಾಲೇಜ್
17 ಬೆಂಗಳೂರು ಟೌನ್ ಹಾಲ್
18. ವಾಣಿವಿಲಾಸ್ ಮಹಿಳಾ ಮತ್ತು ಮಕ್ಕಳ  ಆಸ್ಪತ್ರೆ
19. ಮಂಡ್ಯ ಜಿಲ್ಲೆ ರಚನೆ
20. ದೇಶದಲ್ಲಿ ಮೊಟ್ಟಮೊದಲ ರಸ್ತೆಗಳಿಗೆ ದಾರಿದೀಪ ಅಳವಡಿಕೆ
21. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ , ಭದ್ರಾವತಿ ಸ್ಥಾಪನೆ
22. ಸೈಂಟ್ ಫಿಲೋಮಿನಾ ಚರ್ಚ್ ಸ್ಥಾಪನೆ
23. ಲಲಿತ ಮಹಲ್ ಪ್ಯಾಲೇಸ್ ಸ್ಥಾಪನೆ
24. ಹಿರೇಭಾಸ್ಕರ ಅಣೆಕಟ್ಟು ಶರಾವತಿ ನದಿಯಲ್ಲಿ ಸ್ಥಾಪನೆ
25. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಹಾಗೂ ವಿಧವಾ ಹುಡುಗಿಯರಿಗೆ ಸ್ಕಾಲರ್ಶಿಪ್
26. ಬಾಲ್ಯವಿವಾಹ ನಿಷೇಧ
27. ವಿಶ್ವೇಶ್ವರಯ್ಯ ಕಾಲುವೆ ಸ್ಥಾಪನೆ
28. ಮೈಸೂರು ರೆಸಿಡೆನ್ಶಿಯಲ್ ಕೃಷಿ ಶಾಲೆ ಸ್ಥಾಪನೆ
29. ಮೈಸೂರು ಸೋಶಿಯಲ್ ಪ್ರೋಗ್ರೆಸ್ ಅಸೋಸಿಯೇಷನ್ ಸ್ಥಾಪನೆ 
30. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜ್ , ಮೈಸೂರು ಸ್ಥಾಪನೆ
31. ವುಡ್ ಡಿಸ್ಟಿಲ್ಲೇಶನ್ ಫ್ಯಾಕ್ಟರಿ , ಭದ್ರಾವತಿ ಸ್ಥಾಪನೆ
32. ಮೈಸೂರ್ ಕ್ರೋಮ್ ಮತ್ತು ಟ್ಯಾನಿಂಗ್ ಫ್ಯಾಕ್ಟರಿ
33. ಸರ್ಕಾರಿ ವಿಜ್ಞಾನ ಕಾಲೇಜು , ಬೆಂಗಳೂರು
34. ಕೃಷ್ಣರಾಜನಗರ ಟೌನ್ ಸ್ಥಾಪನೆ
35. ಕೃಷ್ಣ ರಾಜೇಂದ್ರ ಆಸ್ಪತ್ರೆ ಮೈಸೂರು , ಸ್ಥಾಪನೆ
36. ಸಮಾಜದ ಜ್ಞಾನಿಗಳ ಜ್ಞಾನವನ್ನು ಸರ್ಕಾರದ ಉಪಯೋಗಕ್ಕೆ ಬಳಸಿಕೊಳ್ಳಲು ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಸ್ಥಾಪನೆ
37. ದೇಶದಲ್ಲಿ ಮೊಟ್ಟಮೊದಲ ಮೈಸೂರು ಬಾಯ್ಸ್ ಸ್ಕೌಟ್ಸ್ ಸ್ಥಾಪನೆ
38. ಸರ್ಕಾರಿ ಶ್ರೀಗಂಧದ ಎಣ್ಣೆಯ ಫ್ಯಾಕ್ಟರಿ ಸ್ಥಾಪನೆ
39.ಚೇಂಬರ್ ಆಫ್ ಕಾಮರ್ಸ್ , ಮೈಸೂರು
40. ಮೈಸೂರು ಶುಗರ್ ಮಿಲ್ಸ್ , ಮಂಡ್ಯ
41. ಮೈಸೂರ್ ಲ್ಯಾಂಪ್ಸ್ , ಬೆಂಗಳೂರು
42. ಮೈಸೂರ್ ಪೇಪರ್ ಮಿಲ್ಸ್ , ಭದ್ರಾವತಿ
43. ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಸ್ಥಾಪನೆಗೆ ಭೂಮಿ ಕೊಡುಗೆ
44. ಮೈಸೂರು ಕೆಮಿಕಲ್ ಹಾಗೂ ಫರ್ಟಿಲೈಸರ್ಸ್ ಕಾರ್ಖಾನೆ
45. ಗ್ಲಾಸ್ ಹಾಗೂ ಪಿಂಗಾಣಿ ಕಾರ್ಖಾನೆ , ಬೆಂಗಳೂರು
46. ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ - ದೇಶದಲ್ಲೇ ಮೊದಲು
47. ಮೈಸೂರು ಪೈಂಟ್ಸ್ ಹಾಗೂ ವಾರ್ನಿಷ್ ಲಿಮಿಟೆಡ್ ಸ್ಥಾಪನೆ
ಮುಂತಾದವು ...

ಯೆಸ್ ... 
🔸ಕರ್ನಾಟಕ ಹಾಗೂ ಭಾರತ ಕಂಡ ಅದ್ಭುತ ಆಡಳಿತಗಾರ 
🔸 ಹಲವಾರು ಪ್ರಪ್ರಥಮಗಳ ಸರದಾರ 
🔸 ತನ್ನ 11ನೇ ವರ್ಷದಲ್ಲಿ ಮೈಸೂರು ರಾಜ್ಯದ ಸಿಂಹಾಸನ ಏರಿದ ಮಹಾರಾಜ
🔸ದೇಶದ ಆಗಿನ ಸಮಯದ 2ನೇ ಶ್ರೀಮಂತ ರಾಜ 
ಶ್ರೀ #ನಾಲ್ವಡಿ_ಕೃಷ್ಣರಾಜ_ಒಡೆಯರ್ ಅವರ ಜನ್ಮದಿನದಂದು ಅವರ ಸ್ಮರಣೆ ಹಾಗೂ ಕೋಟಿ ಕೋಟಿ ನಮನಗಳು                        

Can a man accomplish these many things in one life ??

 1. Krishnaraja Sagar Dam
 2. Establishment of Maharani College, Bangalore
 3. NIMHANS Hospital, Bangalore
 4. Minto Hospital, Bangalore
 5. K. R. Market, Bangalore
  6. Banaras Hindu College, co-founder
 7. Indian Institute of Science, Bangalore
 8. Shivanasamudra Hydroelectric Project
 9. Vanivilasa Dam, Chitradurga
 10. Establishment of State Bank of Mysore
 11. Establishment of Kannada Sahitya Parishad
12. Establishment of Mysore University
 13. Establishment of Bangalore University (UVCE)
 14. Yuvaraja College Mysore 
 15. Mysore State Railway
 16. Mysore Medical College
 17 Bangalore Town Hall
 18. Vanivilas Women's and Children's Hospital
 19. Mandya District Formation
 20. Installation of street lights in Bengaluru, first of it in the country
 21. Establishment of Vishweshwaraiah Iron and Steel Factory, Bhadravati
 22. Establishment of the Church of Saint Philomena
 23. Establishment of Lalitha Mahal Palace
 24. Establishment of Hirebhaskar Dam across Sharavati River
 25. Promotion of girl child education and scholarship for widowed girls
 26. Prohibition of child marriage
 27. Establishment of Vishweshwaraiah canal
 28. Establishment of Mysore Residential Agricultural School
 29. Establishment of Mysore Social Progress Association
 30. Establishment of Maharani Women's Science College, Mysore
 31. Wood Distillation Factory, Bhadravati Establishment
 32. Mysore Chrome and Tanning Factory
 33. Government Science College, Bangalore
 34. Establishment of Krishnarajanagar Town
 35. Establishment of Krishna Rajendra Hospital, Mysore
 36. Establishment of the Mysore Legislative Council to utilize the knowledge of the society for the benefit of the Government
 37. Establishment Mysore Boys Scouts , first of it's kind in the country
 38. Establishment of Government Sandalwood Oil Factory
 39. Chamber of Commerce, Mysore
40. Mysore sugar mills , Mandya
41. Mysore lamps , Bangalore
42. Mysore Paper Mills , Bhadravathi
43. Land for Raman Research Institute ( RRI )
44. Mysore Chemical & Fertilizers Factory
45. Glass & Porcelain factory , Bangalore 
46. City Improvement Trust Board - first of it's kind in India
47. Establishment of Mysore Paints & Varnishes Ltd 
 Etc ...

Yes ... 
🔹The great administrator in the history of Karnataka and India
 🔹the king of many firsts
🔹 the Maharaja who ascended the throne of the Mysore state in his 11th year
🔹 the 2nd richest king of the country at that time  

Remembering & Crores of salutes to Sri #Nalvadi_Krishnaraja_Odeyar on his birthdate .

Thursday, August 20, 2020

*ಅಗತ್ಯವಿರುವ ಸಂದೇಶ* (ಕ್ಯಾನ್ಸರ್ ರೋಗಿಗಳಿಗೆ)

*ಅಗತ್ಯವಿರುವ ಸಂದೇಶ* 
     (ಕ್ಯಾನ್ಸರ್ ರೋಗಿಗಳಿಗೆ)

 *ಓದದೆ ಅಳಿಸಬೇಡಿ. ಸೂಕ್ತವಾದರೆ, ಅದನ್ನು ಇತರರಿಗೂ ಕಳುಹಿಸಿ.*

 *ಸೂರತ್‌  ಗುಜರಾತ್‌ನಿಂದ ಮುಂಬೈ ಕಡೆ  ಹೆದ್ದಾರಿ 4 ಕಿ.ಮೀ ದೂರದಲ್ಲಿದೆ  ವಲಸಾಡ  ಗ್ರಾಮ.  ವಲಸಾಡ  ಗ್ರಾಮನಿಂದ 16 ಕಿ.ಮೀ ಸೂರತಕಡೆ ಹೋಗಬೇಕು. ಅಲ್ಲಿ  ವಾಘಲಧಾರಾ  ಊರು ಬರುತ್ತದೆ.  ಬಲಭಾಗದಲ್ಲಿ ನೀವು*
 *"ಶ್ರೀ ಪ್ರಭವ್ ಹೇಮ ಕಾಮಧೇನು  ಗಿರಿವಿಹಾರ್ ಟ್ರಸ್ಟ್, ಪಾಲಿತಾಣಾ* " 
 *ನೋಡುತ್ತೀರಿ "ಶ್ರೀ ರಸಿಕಲಾಲ ಮಾಣಿಕ್ಚಂದ್ ಧಾರಿವಾಲ್ ಕ್ಯಾನ್ಸರ್ ಆಸ್ಪತ್ರೆ"ಯ ಕಮಾನು ಕಾಣಿಸುತ್ತದೆ.    ಸಾವಿರಾರು ಚದುರು ಮೀಟರ್ ದಲ್ಲಿ  ಹರಡಿರುವ ಜಮೀನಿನಲ್ಲಿ  ಹಣ್ಣುಗಳು, ಹೂಗಳು, ಹಸಿರನ್ನು ನೋಡಿದರೆ , ಇದು ಪಯಾವುದೇ ಆಶ್ರಮಕ್ಕಿಂತ ಕಡಿಮೆಯಿಲ್ಲ.  ಇಲ್ಲಿ ಸುಂದರವಾದ ಜೈನ ದೇವಾಲಯ ಮತ್ತು ಬೃಹತ್ ಆಹಾರ ಶಾಲೆ ಕೂಡ ಇದೆ.  ಗೌಶಾಲಾದಲ್ಲಿ ಸುಮಾರು 400 ಸ್ಥಳೀಯ ದೇಸಿ ಹಸುಗಳಿವೆ.  ಇಲ್ಲಿ, ಕ್ಯಾನ್ಸರ್ ರೋಗಿಯನ್ನು (ಪೇಶೆಂಟ) ಮತ್ತು  ಒಬ್ಬ  ಜೊತೆಗಾರನನ್ನು ಚಿಕಿತ್ಸೆ ಮತ್ತು ತರಬೇತಿಗಾಗಿ 10 ದಿನಗಳವರೆಗೆ ಇರಿಸಲಾಗುತ್ತದೆ.  80 ಹಾಸಿಗೆಗಳು ಲಭ್ಯವಿದೆ.  ನಾಸ್ಟಾ  ಲಂಚ  ಮತ್ತು ರಾತ್ರಿ ಭೋಜನದ ಸಮಯದಲ್ಲಿ  ರೋಗಿಯನ್ನು  ಕಾಣಬಹುದು.*

 *ಬೆಳಿಗ್ಗೆ  9 ಗಂಟೆಗೆ ನೀವು ಕೇವಲ 50 ರೂ.ಗೆ ಕೇಸ್ ಎಂಟ್ರಿ  ಮಾಡಿಸಬೇಕು.  ರೋಗಿಯ  ಕೇಸ್ ಫೈಲ್ ಅನ್ನು  ತಮ್ಮೊಂದಿಗೆ ತೆಗೆದುಕೊಳ್ಳಬೇಕು ಮತ್ತು ಆಪರೇಷನ್ ಮಾಡಿದರೆ, ಕೀಮೋ ಮಾಡಲಾಗುತ್ತದೆ.  ಬೆಳಿಗ್ಗೆ 10.30 ರಿಂದ 12.30 ರವರೆಗೆ ಮತ್ತು ಮಧ್ಯಾಹ್ನ 3.30 ರಿಂದ 5.30 ರವರೆಗೆ ವೈದ್ಯರು ಪರೀಕ್ಷಿಸಿದ ನಂತರ 10 ದಿನಗಳವರೆಗೆ   ರೋಗಿಯನ್ನು ದಾಖಲಿಸಲಾಗುತ್ತದೆ.  ರೋಗಿ ಮತ್ತು ಒಬ್ಬ  ಜೊತೆಗಾರನಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗಿದೆ.  ಅಂತಹ ಪರಿಸ್ಥಿತಿಯಲ್ಲಿ,  ರೋಗಿಗೆ 11 ದಿನಗಳವರೆಗೆ ಉಪಾಹಾರ  ಊಟ   ಮತ್ತು ಡಿನ್ನರ್  ಸಲುವಾಗಿ ಕೂಪನ್ಗಳನ್ನು ಕೊಡಲಾಗುತ್ತದೆ,   ಬಸ್ ಮತ್ತು ಯಾವುದೇ ಖರ್ಚುಗಳಿಲ್ಲ.  1000 ರೂ ಠೇವಣಿ ಪಾವತಿಸಬೇಕಾಗಿದೆ, ಅದನ್ನು ರಶೀದಿಯನ್ನು ತೋರಿಸಿದ ನಂತರ 11 ನೇ ದಿನಕ್ಕೆ ಹಿಂದಿರುಗಿಸಲಾಗುತ್ತದೆ (10 ದಿನಗಳ ಮೊದಲು ಅದನ್ನು ಹಿಂಪಡೆಯಲಾಗಿದ್ದರೆ ಠೇವಣಿ ಮರುಪಾವತಿ ಮಾಡಲಾಗುವುದಿಲ್ಲ).* 
 
   *ಬೆಳಿಗ್ಗೆ 5.30 ಕ್ಕೆ   ಯೋಗ,  ಪ್ರಾಣಾಯಂ,  7 ಗಂಟೆಗೆ   ಹಸುವಿನ ಸಗಣಿ, ಹಸುವಿನ ಮೂತ್ರ, ಹಸುವಿನ ಹಾಲು, ಮೊಸರು, ತುಪ್ಪದಿಂದ ಮಾಡಿದ ಪಂಚಗವ್ಯ ಮಿಶ್ರಣ*

 *ಬೆಳಿಗ್ಗೆ 8 ರಿಂದ ಸಂಜೆ 9  ರವರೆಗೆ ಉಪಹಾರ,*

 *9 ಗಂಟೆಗೆ, ಗೌಮೂತ್ರದೊಂದಿಗೆ  ಆಯುರ್ವೇದ ಮಾತ್ರೆಗಳು*

 *9 ರಿಂದ 10 ದೇಹದ  ಕ್ಯಾನ್ಸರ್ ಭಾಗದ ಮೇಲೆ, ಹಸುವಿನ ಸಗಣಿ, ಹಸುವಿನ ಮೂತ್ರವನ್ನು   ಲೇಪಿಸಿದ ನಂತರ  ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು,*

 *10 ಗಂಟೆ ಕಾಡಾ (ಕಷಾಯ),*

 *ಮಧ್ಯಾಹ್ನ 11 ರಿಂದ 1 ರ ನಡುವೆ  ಊಟ ,    ಊಟದ ನಂತರ ಆಯುರ್ವೇದ ಮಾತ್ರೆಗಳು,*

 *2 ರಿಂದ 3 ಗಂಟೆತನಕ. ಸಭಾಂಗಣದಲ್ಲಿ  ರೋಗಿಯ ಊಟ  ಮತ್ತು ಚಿಕಿತ್ಸೆಗಾಗಿ ಸಂಬಂಧಿಸಿದ  ಪ್ರಶ್ನೆ  ಉತ್ತರಗಳ ಚರ್ಚೆ*

 *3.30 ಕ್ಕೆ    ಕಾಡಾ (ಕಷಾಯ),*

 *ಸಂಜೆ 5 ರಿಂದ 6 ಗಂಟೆಯ ನಡುವೆ   ಊಟ, ನಂತರ ಆಯುರ್ವೇದ ಮಾತ್ರೆಗಳು,*

 *8 ರಿಂದ ರಾತ್ರಿ 9.30 ರವರೆಗೆ ಸತ್ಸಂಗ್, ಕೀರ್ತನ್, ಮತ್ತು ನಂತರ   ರೋಗಿಗೆ ಹಾಲು,* 

 *ಈ  10 ದಿನಗಳವರೆಗೆ ದಿನಚರಿ ಮುಂದುವರಿಯುತ್ತದೆ.  11 ನೇ ದಿನ ನೀವು 1 ತಿಂಗಳ ಔಷಧಿಯನ್ನು (ಸುಮಾರು 2500 ರಿಂದ 4000 ರೂಪಾಯಿಗಳ ವರೆಗೆ) ತೆಗೆದುಕೊಂಡು ನಿಮ್ಮ ಮನೆಗೆ ಮರಳಬಹುದು, ಮತ್ತು ಇಲ್ಲಿ ಉಪಚಾರಮಾಡಿದ   ಪದ್ಧತಿಯಂತೆ  ಮನೆಯಲ್ಲಿಯೇ ಚಿಕಿತ್ಸೆಯನ್ನು ಕನಿಷ್ಠ ಒಂದು ವರ್ಷ  ಚಿಕಿತ್ಸೆ ನೀಡಬೇಕು.   ಔಷಧಿಗಳನ್ನು ಪ್ರತಿ ತಿಂಗಳು, ಎರಡು ತಿಂಗಳಿಗೊಮ್ಮೆ  ತೆಗೆದುಕೊಂಡು ಹೋಗಬೇಕು.*

 *ಪ್ರಮುಖ ಮಾತುಗಳು*

 *ಕೋಟ್ಯಧಿಪತಿ ಅಥವಾ ಕಡುಬಡವ, ಎಲ್ಲರಿಗೂ ಸಮಾನ ಚಿಕಿತ್ಸೆ, ಏಕರೂಪದ ನಿಯಮಗಳು,*
 *ವಿಐಪಿ ಸಂಸ್ಕೃತಿ ಇಲ್ಲ.*
 *ಅತ್ಯಂತ ನಿಷ್ಠಾವಂತ, ಅಧಿಕೃತ, ವಸತಿ, ಸೇವೆ ಆಧಾರಿತ ಸಿಬ್ಬಂದಿ.*
 *ವೈದ್ಯರು ಮತ್ತು ಸೇವಾ ಮನೋಭಾವದ ಸಿಬ್ಬಂದಿ ಒಂದೇ ಆಹಾರವನ್ನು  ಊಟ ಮಾಡುತ್ತಾರೆ.*
 *ಮೂರು ಬಾರಿ ಸಭೆ, ಸತ್ಸಂಗ ಮತ್ತು   ಊಟದ ಸಮಯ ಮೊಬೈಲ್ ಬಳಕೆಯ ನಿಷೇಧ.*
 *ನೀವು 9 ನೇ ದಿನದಂದು ಬಯಸಿದರೆ ಅಥವಾ ಅನುಕೂಲಕರವಾಗಿದ್ದರೆ, ಇಲ್ಲಿರುವ ಕಚೇರಿಯಿಂದ ತಮಗೊಂದು  ಪ್ರಮಾಣೀಕೃತ ಫಾರ್ಮ್ ನೀಡಲಾಗುವುದು.  ನೀವು ಈ ಫಾರ್ಮ್ ತೆಗೆದುಕೊಳ್ಳಬೇಕು ಮತ್ತು ರೋಗಿ ಮತ್ತು ನಿಮ್ಮ ಆಧಾರ್ ಕಾರ್ಡ್ ಕೇವಲ 14 ಕಿ.ಮೀ ದೂರದಲ್ಲಿರುವ ವಲ್ಸಾಡ  ರೈಲ್ವೆ ನಿಲ್ದಾಣಕ್ಕೆ ಹೋಗಲು, ರೋಗಿಗೆ ಟೋಟಲ್ ಫ್ರೀ ಮತ್ತು  ಜೊತೆಗಾರನಿಗೆ  50% ರಿಯಾಯಿತಿ ದರದ ಕನಫರ್ಮ ಟಿಕೆಟ  ಕೊಡಲಾಗುತ್ತದೆ.   1 ತಿಂಗಳ ನಂತರ, 1 ಬಾರಿ ಬರಲು ಮತ್ತು ಹೋಗಲು ಫಾರ್ಮ್ ಅನ್ನು ತರುವ ಮೂಲಕ ನೀವು ಈ ಸೌಲಭ್ಯವನ್ನು ಮತ್ತೆ  ಪಡೆಯುತ್ತೀರಿ.*

 *ಟಾಟಾ ಆಸ್ಪತ್ರೆ ಮತ್ತು ದೇಶದ ಅತಿದೊಡ್ಡ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ವ್ಯರ್ಥ ಖರ್ಚು ಮಾಡಿ,  ಸಾವಿನ ಸಮೀಪ ತಲುಪಿದ ರೋಗಿಗಳು ದಣಿದು ನೂರಾರು ಸಂಖ್ಯೆಯಲ್ಲಿ ಭರವಸೆಯೊಂದಿಗೆ ಇಲ್ಲಿಗೆ ಬರುತ್ತಿದ್ದಾರೆ.*

  *ಶುಭಮ್ ಭವತು.*
 *ಶುಭಾಶಯಗಳೊಂದಿಗೆ*
 *ವಾಘಲ್ಧಾರಾ ಆಸ್ಪತ್ರೆ*
 *08141880808.*
  *06354514539*

  *ದಯವಿಟ್ಟು ಸಾರ್ವಜನಿಕ ಕಲ್ಯಾಣಕ್ಕಾಗಿ ಫಾರ್ವರ್ಡ್ ಮಾಡಿ* 

  *ಈ ಸಂದೇಶಗಳನ್ನು ಫಾರ್ವರ್ಡ್ ಮಾಡಿ.   ಇದರಿಂದ ಯಾವುದೇ ತುರ್ತು ವ್ಯಕ್ತಿಗೆ  ಒಳ್ಳೆಯ ಸಹಾಯ  ಆಗಬಹುದು* 

 *ಧನ್ಯವಾದ*🙏🙏

Wednesday, August 19, 2020

ಹೃದಯ ಅತ್ಯಂತ ಫಲವತ್ತಾದ ಜಾಗ.ಅಲ್ಲಿ ನೀವು ಪ್ರೇಮ ,ದ್ವೇಷ ,ಮತ್ಸರ,ಸೌಹಾರ್ದ ,ದಯೆ ಏನನ್ನೇ ಬಿತ್ತಿದರು ಸೊಂಪಾಗಿ ಬೆಳೆಯುತ್ತದೆ...

ಹೃದಯ ಅತ್ಯಂತ ಫಲವತ್ತಾದ ಜಾಗ.
ಅಲ್ಲಿ ನೀವು ಪ್ರೇಮ ,ದ್ವೇಷ ,ಮತ್ಸರ,
ಸೌಹಾರ್ದ ,ದಯೆ ಏನನ್ನೇ ಬಿತ್ತಿದರು
        ಸೊಂಪಾಗಿ ಬೆಳೆಯುತ್ತದೆ...
ಅದರಲ್ಲಿ ಬಿಡುವ ಫಲವನ್ನು ನಾವು 
ತಿನ್ನಲೆಬೇಕಿರುವುದು ಕಡ್ಡಾಯ ...
ಅದ್ದರಿಂದ .ಬಿತ್ತುವಾಗಲೇ ಫಲದ     
      ಬಗ್ಗೆ  ಎಚ್ಚರವಿರಲಿ....
🙏ಶುಭೋದಯ🙏

Tuesday, August 18, 2020

ಪೈಲೆಟ್ ಟ್ರೈನಿಂಗ್ ಕ್ಲಾಸ್ ಗೆ ಸೇರಿಕೊಳ್ಳಬೇಕು ಅಂದರೆಏನಿಲ್ಲ ಅಂದರೂ 38 ರಿಂದ 40 ಲಕ್ಷ ರೂಪಾಯಿ ಫೀಸನ್ನು ಕಟ್ಟಲೇ ಬೇಕಾಗುತ್ತದೆ.

ಪೈಲೆಟ್ ಟ್ರೈನಿಂಗ್ ಕ್ಲಾಸ್ ಗೆ ಸೇರಿಕೊಳ್ಳಬೇಕು ಅಂದರೆ
ಏನಿಲ್ಲ ಅಂದರೂ 38 ರಿಂದ 40 ಲಕ್ಷ ರೂಪಾಯಿ ಫೀಸನ್ನು ಕಟ್ಟಲೇ ಬೇಕಾಗುತ್ತದೆ. ಇಂದಿರಾಗಾಂಧಿ ನ್ಯಾಷನಲ್ ಅರ್ಬನ್ ಅಕಾಡೆಮಿ ಈ ಒಂದು ಇನ್ಸ್ಟಿಟ್ಯೂಟ್ ಗೆ ಟ್ರೈನಿಂಗಿಗೆ ಅಂತ ಸೇರಿಕೊಂಡರೆ ಇಲ್ಲಿ 38 ಲಕ್ಷ ರೂಪಾಯಿಯನ್ನು ಕಟ್ಟಬೇಕಾಗುತ್ತದೆ.
ಇಲ್ಲಿ ಒಂದು ಅಪ್ಲಿಕೇಶನ್ ತುಂಬಬೇಕು ಅಂದರೆ 6000 ರೂ ಕಟ್ಟಬೇಕಾಗುತ್ತದೆ.
ಇಷ್ಟೊಂದು ದುಬಾರಿ ಹಣವನ್ನು ಕಟ್ಟುವುದು ಮಧ್ಯಮವರ್ಗ ಹಾಗೂ ಬಡ ಜನರಿಗೆ ತುಂಬಾ ಕಷ್ಟವಾಗುತ್ತದೆ.
ಆದರೂ ಟ್ರೈನಿಂಗ್ ಮುಗಿದ ನಂತರ ಒಬ್ಬ ಕಮರ್ಷಿಯಲ್ ಪೈಲೆಟ್ ಆದ ನಂತರದಲ್ಲಿ ಆ ವ್ಯಕ್ತಿಗೆ ನಮ್ಮ ಭಾರತದಲ್ಲಿ ಒಂದುವರೆ ಲಕ್ಷ ರೂಪಾಯಿ ಸಂಬಳವನ್ನು ಕೊಡಲಾಗುತ್ತದೆ. ಇದು ಕೆಲವೊಂದು ಕಂಪನಿಗಳ ಮೇಲೆ ಅವಲಂಬಿತವಾಗಿದ್ದು ಸಂಬಳವನ್ನು ಹೆಚ್ಚು ಸಹ ಮಾಡಬಹುದು.
ಆದರೆ ಇಂಟರ್ನ್ಯಾಷನಲ್ ಪೈಲೆಟ್ ಆದರೆ ತಿಂಗಳಿಗೆ ಐದರಿಂದ ಆರು ಲಕ್ಷ ಸಂಬಳವನ್ನು ಪಡೆಯಬಹುದು.
ಇದರಲ್ಲಿ ಟ್ರೈನಿಂಗ್ ಫೀಸ್ ತುಂಬಾ ಜಾಸ್ತಿ ಇರುತ್ತದೆ ಅದರಲ್ಲಿ ಸಂಬಳ ಕೂಡಾ ಹೆಚ್ಚಾಗಿರುತ್ತದೆ.
ಇನ್ನು ಇಲ್ಲಿನ ಕೋರ್ಸ್ ಬಗ್ಗೆ ನೋಡುವುದಾದರೆ ಒಬ್ಬ ಪೈಲೆಟ್ ಗೆ SPL, PPL ಮತ್ತು CCL ಎಂದು ಈ ಮೂರು ರೀತಿಯಲ್ಲಿ ಲೈಸೆನ್ಸ್ ಗಳನ್ನು ನೀಡಲಾಗುತ್ತದೆ.
ಕೋರ್ಸಿನ ಮೊದಲ ಲೈಸೆನ್ಸ್ ಎಸ್ಪಿಎಲ್ ಅಂದ್ರೆ ಸ್ಟೂಡೆಂಟ್ ಪಾಸ್ ಲೈಸೆನ್ಸ್. ಇಲ್ಲಿ ನೇರವಾಗಿ ವಿಮಾನವನ್ನು ಹಾರಾಡಲು ಬಿಡದೆ ವಿಮಾನದ ಒಳಗೆ ಹಾಗೂ ಹೊರಗಿನ ರಚನೆಯ ಬಗ್ಗೆ ಹಾಗೂ ಅಲ್ಲಿನ ಮಾಹಿತಿಗಳನ್ನು ತಿಳಿಸಿಕೊಡಲಾಗುತ್ತದೆ ಎರಡನೇ ಲೈಸೆನ್ಸ್ ಪಿಪಿಎಲ್ ಅಂದ್ರೆ ಪ್ರೈವೇಟ್ ಪೈಲೆಟ್ ಲೈಸೆನ್ಸ್. ಇಲ್ಲಿ ಸತತವಾಗಿ 16 ಗಂಟೆಗಳ ಕಾಲ ವಿಮಾನವನ್ನು ಹಾರಾಡಿಸುತ್ತಾ ಇರಬೇಕಾಗುತ್ತದೆ.
ಇದರಲ್ಲಿ ಪಾಸಾದರೆ ನಂತರದ ಹಾಗೂ ಕೊನೆಯ ಲೈಸೆನ್ಸ್ ಸಿಪಿಎಲ್ ಅಂದರೆ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್. ಇದನ್ನು ನೀಡಲಾಗುತ್ತದೆ ಇಲ್ಲಿ 258 ಗಂಟೆಗಳ ಕಾಲ ಸತತವಾಗಿ ವಿಮಾನವನ್ನು ಹಾರಾಡಿಸುತ್ತಲೇ ಇರಬೇಕಾಗುತ್ತದೆ.
ಇಲ್ಲಿ ನಿಮ್ಮ ಕೆಪ್ಯಾಸಿಟಿ ಹಾಗೂ ನಿಮ್ಮ ಏಕಾಗ್ರತೆಯನ್ನು ಚೆಕ್ ಮಾಡಲಾಗುತ್ತದೆ. ಕೊನೆಯದಾಗಿ ಒಂದು ಮೆಡಿಕಲ್ ಟೆಸ್ಟ್ ಕೂಡಾ ಮಾಡಿ ಅದರಲ್ಲಿ ಫಿಟ್ ಅಂತ ಅನಿಸಿದರೆ ಮಾತ್ರ ನಿಮಗೆ ಸಿಪಿಎಲ್ ನೀಡಲಾಗುತ್ತದೆ. ಆದರೆ ಇವೆಲ್ಲವೂ ಓಕೆ ಪೈಲೆಟ್ ಆಗಬೇಕು ಎನ್ನುವುದು ಕೆಲವರ ಕನಸಾಗಿದ್ದು ಇಷ್ಟೊಂದು ಪೀಸ್ ಗಳನ್ನು ಕೊಡುವಷ್ಟು ಸಾಮರ್ಥ್ಯ ಅವರಲ್ಲಿ ಇರುವುದಿಲ್ಲ ಎನ್ನುವ ಪ್ರಶ್ನೆ ಇದ್ದೇ ಇರುತ್ತದೆ.
ಇದಕ್ಕೊಂದು ದಾರಿ ಇದ್ದು ಸರ್ಕಾರದ ಕಡೆಯಿಂದ NDA ಪರೀಕ್ಷೆ ನಡೆಸಲಾಗುತ್ತದೆ ಪರೀಕ್ಷೆಯನ್ನು ಬರೆದು ಇದರಲ್ಲಿ ಉತ್ತೀರ್ಣರಾಗಿದ್ದರೆ ನಿಮ್ಮ ಟ್ರೈನಿಂಗ್ ನ ಎಲ್ಲಾ ಖರ್ಚನ್ನು ಸಹ ಸರ್ಕಾರ ವಹಿಸಿಕೊಳ್ಳುತ್ತದೆ ಹಾಗೂ ಆರಂಭದಲ್ಲಿ 50000 ರೂಪಾಯಿ ಸಂಬಳವನ್ನು ಸಹ ನೀಡುತ್ತದೆ. ಈ ಮೂಲಕ ಇಂಡಿಯನ್ ಏರ್ ಫೋರ್ಸ್ ಗೆ ಜಾಯಿನ್ ಆಗಬಹುದು.

*ಕಿವಿಯ ಕಥೆ-ವ್ಯಥೆ!*

*ಕಿವಿಯ ಕಥೆ-ವ್ಯಥೆ!*

ನಾನು ಕಿವಿ. ನಾವಿಬ್ಬರಿದ್ದೇವೆ. ನಾವು ಅವಳಿಜವಳಿ! ಆದರೆ ನಮ್ಮ ದುರದೃಷ್ಟವೆಂದರೆ ಈ ತನಕ ನಾವು ಪರಸ್ಪರ ನೋಡಲಿಲ್ಲ! 

ಅದೇನು ಶಾಪವೋ ಗೊತ್ತಿಲ್ಲ, ನಮ್ಮಿಬ್ಬರನ್ನೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ತಲೆಗೆ ಅಂಟಿಸಿದ್ದಾನೆ ಅ ಸೃಷ್ಟಿಕರ್ತ!

ನಮ್ಮ ದುಃಖ ಇಷ್ಟೇ ಆದರೆ ತೊಂದರೆ ಇರಲಿಲ್ಲ. ನಮ್ಮ ಕರ್ತವ್ಯ ಬರೇ ಕೇಳುವುದು ಮಾತ್ರ. ಹೊಗಳಿಕೆಯೋ, ತೆಗಳಿಕೆಯೋ; ಒಳ್ಳೆಯದೋ, ಕೆಟ್ಟದ್ದೋ; ಕೇಳುವುದಷ್ಟೇ ನಮ್ಮ ಕೆಲಸ. ಏನು ಕೇಳಿದರೂ ಸುಮ್ಮನಿರಬೇಕು, ಮಾತನಾಡುವ ಅಧಿಕಾರವಿಲ್ಲ. ಇಷ್ಟು ಮಾತ್ರವಲ್ಲ, ಕ್ರಮೇಣ ನಮ್ಮನ್ನು ಗೂಟವೆಂದು ಕೂಡ ತಿಳಿಯಲಾಯಿತು. ಕಣ್ಣಿನ ತಪ್ಪಿಗೆ ನಮಗೆ ಶಿಕ್ಷೆ! ಕನ್ನಡಕದ ಭಾರವನ್ನು ನಾವು ಮತ್ತು ಮೂಗು ಹೊರಬೇಕು! ಕನ್ನಡಕದ ಕಡ್ಡಿಯನ್ನು ನಮ್ಮ ಮೇಲೆ ಹೊರಿಸುತ್ತಾರೆ! ನಾವು ಏನೂ ಹೇಳುವುದಿಲ್ಲ, ಬರೀ ಕೇಳುತ್ತೇವೆ ಅಂತ ಸದರದಿಂದ ಈ ರೀತಿಯ ಹೊರೆ ಹೊರಿಸುವುದೇ?

ಯಾರೇ ತಪ್ಪು ಮಾಡಿದರೂ ಶಿಕ್ಷೆ ನಮಗೆ! ಚಿಕ್ಕ ವಯಸ್ಸಿನಲ್ಲಿ ಶರೀರದ ಯಾವುದೇ ಅಂಗ(ಮುಖ್ಯವಾಗಿ ಬಾಯಿ!) ತಪ್ಪು ಮಾಡಿದರೂ ನಮ್ಮನ್ನು ಹಿಡಿದು ತಿರುಚಿ ಬಿಡುತ್ತಿದ್ದರು. ವಿಶೇಷವಾಗಿ ಶಾಲೆಯಲ್ಲಿ ಶಿಕ್ಷಕರು. ಅವರ ಕೈ ಬರುತ್ತಿದ್ದುದೇ ನಮ್ಮ ಕಡೆಗೆ!

ಯೌವನದಲ್ಲಿ ವಿಶೇಷವಾಗಿ ಹೆಂಗಸರು ಕಿವಿಗೆ ಬಗೆಬಗೆಯ ಆಭರಣಗಳನ್ನು ಹಾಕಿಕೊಂಡು ಮೆರೆದರೆ ಹೊಗಳಿಕೆ ಮುಖಕ್ಕೆ, ನಮಗೆ ಕೇವಲ ಚುಚ್ಚಿಸಿಕೊಂಡ ನೋವು ಮಾತ್ರ!

ಮತ್ತೆ ಶೃಂಗಾರಗಳ ಬಗ್ಗೆ ನೋಡಿ! ಕಣ್ಣಿಗೆ ಕಾಡಿಗೆ, ಮುಖಕ್ಕೆ ಪೌಡರು, ಕ್ರೀಮು, ಇನ್ನೂ ಅದೇನೇನೋ, ತುಟಿಗಳಿಗೆ ಬಣ್ಣಬಣ್ಣದ ಲಿಪ್ ಸ್ಟಿಕ್! ನಮಗೆ? ಏನೂ ಇಲ್ಲ! ನಾವು ಈ ತನಕ ನಮಗಾಗಿ ಏನಾದರೂ ಕೇಳಿದ್ದಿದ್ದರೆ ಹೇಳಿ! ಮುಖದ ಎಲ್ಲಾ ಭಾಗಗಳನ್ನೂ ಕವಿಗಳು ವರ್ಣಿಸುತ್ತಾರೆ. ಕಣ್ಣಿಗೆ ಕಮಲದಳ, ಮೀನು, ಇತ್ಯಾದಿ, ಮೂಗಿಗೆ ಸಂಪಿಗೆ, ತುಟಿಗೆ ತೊಂಡೆಯ ಹಣ್ಣು, ಇತ್ಯಾದಿ ಅದೇನೇನು ಹೋಲಿಕೆಗಳು! ನನಗೆ? ಕೊನೆಯ ಪಕ್ಷ ಹಲಸಿನ ಹಣ್ಣಿನ ತೊಳೆಯ ಹೋಲಿಕೆಯಾದರೂ ಮಾಡಬಹುದಿತ್ತಲ್ಲಾ? ಅದೆಷ್ಟು ನಿರ್ಲಕ್ಷ್ಯ ನಮ್ಮ ಬಗ್ಗೆ? ಕೆಲವು ಬಾರಿ ಕೂದಲು ಕತ್ತರಿಸುವಾಗ ನಮಗೂ ಕತ್ತರಿಯ ರುಚಿ ತೋರಿಸುವುದೂ ಇದೆ!

ಹೇಳಲು ಎಷ್ಟೋ ಇದೆ. ಯಾರಲ್ಲಿ ಹೇಳಲಿ? ದುಃಖವನ್ನು ಹಂಚಿಕೊಂಡರೆ ಹಗುರವಾಗುತ್ತದಂತೆ. ಕಣ್ಣಿನ ಹತ್ತಿರ ಹೇಳಿದರೆ ಕಣ್ಣೀರು ಸುರಿಸುತ್ತದೆ ಹೊರತು ಬೇರೇನಿಲ್ಲ. ಮೂಗಿನ ಹತ್ತಿರ ಹೇಳಿದರೂ ನೀರು ಸುರಿಸುವುದು ಮಾತ್ರ. ಬಾಯಿಯ ಹತ್ತಿರ ಹೇಳಿದರೆ ಅಯ್ಯೋ ಪಾಪ ಅನ್ನುವುದು ಬಿಟ್ಟರೆ ಮತ್ತೇನೂ ಇಲ್ಲ.

ಇನ್ನೂ ಇದೆ ನನ್ನ ಸಂಕಟ! ಭಟ್ಟರ ಜನಿವಾರ(ಶೌಚ ಮಾಡುವಾಗ), ದರ್ಜಿ, ಬಡಗಿಯ ಪೆನ್ಸಿಲ್, ಗುಟ್ಕಾ ಪ್ಯಾಕೆಟ್, ನಾಣ್ಯ, ಇತ್ಯಾದಿ ಎಲ್ಲಾ ನಾವು ಹೊತ್ತುಕೊಳ್ಳಬೇಕು!

ಇತ್ತೀಚೆಗೆ ಇನ್ನೊಂದು ರಗಳೆ!

ಕೊರೋನಾದಿಂದಾಗಿ ಮಾಸ್ಕನ್ನು ಕೂಡಾ ನಮಗೆ ಸಿಕ್ಕಿಸಿಬಿಡುತ್ತಾರೆ! ಅದು ಎಳೆದು ಎಳೆದು ನೋವು ಆಗುತ್ತದೆ! ಹೇಳಲು ನಮಗೆ ನಾಲಿಗೆಯೇ ಇಲ್ಲ! ಇನ್ನೂ ಏನಾದರೂ ಇದ್ದರೆ ಹೇಳಿ, ತಂದು ತೂಗುಹಾಕಿ! ನಾವಿದ್ದೇವಲ್ಲ, ಮೂಕಪ್ರಾಣಿಗಳು!

Friday, August 14, 2020

ದೇಹದ ಸೌಂದರ್ಯ ?

💐ದೇಹದ ಸೌಂದರ್ಯ ಮುಪ್ಪಾಗಿ 
ಸುಕ್ಕಾಗಿ ಹೋಗುವುದು
ಆದರೆ ಆತ್ಮದ ಸೌಂದರ್ಯ ಉಸಿರುಯಿರುವವರೆಗೆ 
    ಮಾಗದಿರುವುದು💐

     💐ಶುಭೋದಯ💐
Dgnsgreenworld

Thursday, August 13, 2020

ವಿಭೂತಿ ಮಹಿಮೆಯ ಕಥೆ

ವಿಭೂತಿ ಮಹಿಮೆಯ ಕಥೆ

ಸರಸ್ವತಿ , ಲಕ್ಷ್ಮಿ   ಬಂಗಾರ ಹಾಕಿಕೊಂಡಿದ್ದಾರೆ.  ಪಾರ್ವತಿ ತಾನು ಯಾಕೆ ಹಾಕಿಕೊಳ್ಳಬಾರದೆಂದು ಸ್ವಾಮಿ ನನಗೆ ಬಂಗಾರ
ಹಾಕಿಕೊಳ್ಳುವ ಬಯಕೆಯಾಗಿದೆ.  ನನಗೆ ಅನುಗ್ರಹಿಸು ಎಂದು.
ಆಗ ಈಶ್ವರ ಒಂದು ಚಿಟಿಕೆ ಭಸ್ಮವನ್ನು ತೆಗೆದು ಪಾರ್ವತಿ ಕೈಗೆ ಕೊಟ್ಟ

ಇದೇನು ಸ್ವಾಮಿ ಬಂಗಾರ ಕೊಡಿ ಎಂದರೆ ಭಸ್ಮ ಕೊಟ್ಟಿದ್ದೀರಿ!
ನನ್ನಲ್ಲಿರುವುದು ಇದೆ. ಇದನ್ನು ತೆಗೆದುಕೊಂಡು ಹೋಗಿ ಕುಬೇರನಲ್ಲಿ ಕೇಳು ಇದರ ತೂಕದ ಬಂಗಾರ ಕೊಡುತ್ತಾನೆ ಎಂದ.

ಪಾರ್ವತಿಯು ಅದನ್ನು ಅಲಕಪುರಕ್ಕೆ (ಕುಬೇರನ ವಾಸಸ್ಥಳ)  ಈ ಭಸ್ಮದ ತೂಕಕ್ಕೆ ಬಂಗಾರ ಕೊಡಬೇಕು ಎಂದು ಕೇಳಿದಳು. ಆಗ ಕುಬೇರ ನಗುತ್ತಾ ಇದಕ್ಕೆ ಏನು ತೂಕದ ಬಂಗಾರ ಕೊಡಲಾಗುತ್ತದೆ.
ನಿಮಗೆಷ್ಟು ಬೇಕು ತೆಗೆದುಕೊಳ್ಳಿ ಎಂದ. 

ಇಲ್ಲ ನನಗೆ ಇದರ ತೂಕವೇ ಬೇಕು. ಎಂದು ಪಾರ್ವತಿ ಕೇಳಿದಾಗ ಕುಬೇರನು ಪಾರ್ವತಿಯ ಅಣತಿಯಂತೆ,  ತಕ್ಕಡಿಯಲ್ಲಿ ಭಸ್ಮವನ್ನು ಒಂದೆಡೆ ಇಟ್ಟ. ಮತ್ತೊಂದೆಡೆಗೆ
ಬಂಗಾರ ಹಾಕಿದ. ಎಷ್ಟು ಬಂಗಾರ ಹಾಕಿದರೂ ತೂಕ ಮೇಲೆಳಲಿಲ್ಲ..  ಕೊನೆಗೆ ಕುಬೇರನು ತನ್ನ ಹೆಂಡತಿಯ ಬಂಗಾರವನ್ನು ಹಾಕತೊಡಗಿದ.

ಕುಬೇರನಿಗೂ ನಾನೆಂಬ ಅಹಂ ಭಾವವಿತ್ತು ಅದಕ್ಕೆ ಹೀಗಾಯಿತು. ಕೊನೆಗೆ ಕುಬೇರನು ತನ್ನ ಹೆಂಡತಿಯ ತಾಳಿಯನ್ನು ತಕ್ಕಡಿಯಲ್ಲಿ ಹಾಕಿದ ಆಗ ತಕ್ಕಡಿ ಸ್ವಲ್ಪ ಮೇಲೇರಿತು.

ಆಗ ಕುಬೇರನು ತಾಯಿ ನಾನು ಅಹಂಕಾರದಿಂದ ನುಡಿದೆ ಕ್ಷಮಿಸಿ. ಈ ಚಿಟಿಕೆ ಭಸ್ಮವು ಎಷ್ಟು ಬಂಗಾರ. ಹಾಕಿದರೂ, ಸರಿದೂಗಲಾರದು ಎಂದು
ಕೈ ಮುಗಿದ. 

ಪಾರ್ವತಿ ತನ್ನ ಪತಿಯ ಭಸ್ಮದ ಮಹತ್ವವನ್ನು ಗಮನಿಸಿ, ನನಗೆ ಬಂಗಾರ ಬೇಡ  "ಶಿವ ಕೊಟ್ಟ ಭಸ್ಮವೇ ಬಂಗಾರ" ಎಂದು ಧರಿಸಿಕೊಂಡಳು.

*ಓಂ ನಮಃ ‌ಶಿವಾಯ*

Friday, August 7, 2020

ನಮ್ಮ ಹಿರಿಯರು ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆದಿರುವುದರ ಹಿಂದಿರುವ ವೈಜ್ಞಾನಿಕತೆ ತಿಳಿದು ಅದನ್ನು ಸರಿಯಾಗಿ ಬಳಸಿದರೆ ಯಾವ ಔಷಧವೂ ಅಗತ್ಯವಿಲ್ಲ.

ನಮ್ಮ ಹಿರಿಯರು ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆದಿರುವುದರ ಹಿಂದಿರುವ  ವೈಜ್ಞಾನಿಕತೆ ತಿಳಿದು ಅದನ್ನು ಸರಿಯಾಗಿ ಬಳಸಿದರೆ ಯಾವ ಔಷಧವೂ ಅಗತ್ಯವಿಲ್ಲ. 

ಒಣ ಕೊಬ್ಬರಿ ತಿನ್ನುವುದರಿಂದ ಸಿಗುವ ಲಾಭ ತಿಳಿದರೆ ಆಶ್ಚರ್ಯ ವಾಗುತ್ತದೆ.

ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಸೇವಿಸುವುದರಿಂದ ಏನೆಲ್ಲ ಲಾಭಗಳಿವೆ ಹಾಗೂ ಯಾವೆಲ್ಲ ರೋಗಗಳಿಗೆ ಇದು ಒಳ್ಳೆಯದು ಎಂದು ತಿಳಿಯೋಣ ಬನ್ನಿ

ಸಾಮಾನ್ಯವಾಗಿ ಈಗ ಕಂಡು ಬರುವ ಮುಖ್ಯ ಆರೋಗ್ಯ ಸಮಸ್ಯೆಗಳೆಂದರೆ ನಿಶ್ಶಕ್ತಿ,ಆಯಾಸ ,ಗಂಟುಗಳಲ್ಲಿ ನೋವು,ಸೊಂಟ ನೋವು,ರಕ್ತಹೀನತೆ,ಅಜೀರ್ಣ,ಕೂದಲು ಉದುರುವುದು,ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದು,ಜ್ಞಾಪಕ ಶಕ್ತಿಯ ತೊಂದರೆ ಇದಕ್ಕಾಗಿ ಹಾಗೂ ಇದನ್ನು ಸರಿಪಡಿಸಿಕೊಳ್ಳಲು ಹಲವಾರು ಮೆಡಿಸಿನ್ ಟ್ಯಾಬ್ಲೆಟ್ ಗಳ ಸೇವನೆ ಕೂಡ ಮಾಡಲಾಗುತ್ತಿದೆ.ಆದರೆ ಫಲಿತಾಂಶ ಆ ಔಷಧಿಗಳನ್ನು ಸೇವಿಸುವ ತನಕ ಅಷ್ಟೇ ಆಮೇಲೆ ಯಾವುದೇ ರೀತಿಯ ಫಲಿತಾಂಶ ದೊರೆಯುವುದಿಲ್ಲ.

ಇದಕ್ಕಾಗಿ ನಾವು ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಕೆಲವು ವಸ್ತುಗಳನ್ನು ತಪ್ಪದೇ ಸೇವಿಸಬೇಕು.ಇದರಲ್ಲಿ ಸಂಪೂರ್ಣವಾದ ಪೋಷಕಾಂಶಗಳಿದ್ದು ನಮ್ಮ ದೇಹದಲ್ಲಿನ ವಿಟಮಿನ್ ಕೊರತೆಗಳನ್ನು ಪೂರ್ಣಗೊಳಿಸಬೇಕು.

ಒಣಕೊಬ್ಬರಿಇದನ್ನು ಸೂಪರ್ ಫುಡ್ ಎಂದು ಕರೆದರು ತಪ್ಪಾಗುವುದಿಲ್ಲ.ಅಷ್ಟು ಪೋಷಕಾಂಶಗಳನ್ನು ಹೊಂದಿದೆ ಈ ಒಣಕೊಬ್ಬರಿ.ತುಂಬಾ ಜನರಿಗೆ ಒಣಕೊಬ್ಬರಿ ಎಂದರೆ ತುಂಬಾನೇ ಇಷ್ಟ.ಮನೆಯಲ್ಲಿ ಹಿರಿಯರು ಇದ್ದರೆ ಅವರು ಕೂಡ ಮಕ್ಕಳಿಗೆ ಒಣ ಕೊಬ್ಬರಿಯನ್ನು ತಿನ್ನಲು ಸಲಹೆ ಮಾಡುತ್ತಾರೆ.ಒಣ ಕೊಬ್ಬರಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್,ನಾರಿನಾಂಶ,ಕಾಪರ್,ಸೆಲೆನಿಯಂ ಎನ್ನುವ ಪೋಷಕಾಂಶಗಳಿವೆ.

ಹಾಗಿದ್ರೆ ಯಾವ ರೀತಿಯಲ್ಲಿ ಒಣಕೊಬ್ಬರಿಯನ್ನು ಸೇವಿಸಿದರೆ ಒಳ್ಳೆಯದು ಎಂದು ನೋಡುವುದಾದರೆ 20 ರಿಂದ 25 ಗ್ರಾಂ ನಷ್ಟು ಪ್ರತಿ ದಿನ ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ.ಇದನ್ನು ದಿನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಚಿಕ್ಕ ತುಂಡು ಒಣಕೊಬ್ಬರಿಯನ್ನು ನೀವು ಸೇವಿಸಬಹುದು.

ಒಣಕೊಬ್ಬರಿ ಪ್ರತಿನಿತ್ಯ ಸೇವಿಸುವುದರಿಂದ ಸಿಗುವ ಲಾಭಗಳೇನು ಹಾಗೂ ಯಾವ ರೀತಿಯ ರೋಗಗಳಿಗೆ ಒಣಕೊಬ್ಬರಿ ಸೇವನೆ ಒಳ್ಳೆಯದು ಎಂಬುದನ್ನು ನೋಡುವುದಾದರೆ.ಒಣಕೊಬ್ಬರಿ ಸೇವಿಸುವುದರಿಂದ ನಮ್ಮ ದೇಹದ ಮೂಳೆಗಳು ಬಲಶಾಲಿಯಾಗುತ್ತದೆ.ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಮೂಳೆಗಳ ಅಂಗಾಂಶ ಅಂದರೆ ಟಿಶುಗಳಲ್ಲಿ ಕಣಜ ಅಂಶಗಳು ಹೆಚ್ಚಾಗಿ ಇರುತ್ತದೆ.ಇದು ಕಡಿಮೆಯಾದರೆ ದೇಹದ ಯಾವುದೇ ಭಾಗಕ್ಕೂ ಇದು ತೊಂದರೆ ನೀಡಬಹುದು.

ಒಣ ಕೊಬ್ಬರಿಯ ಸೇವನೆಯಿಂದ ಈ ಮೂಳೆಗಳಲ್ಲಿನ ಖನಿಜಾಂಶ ಅಂದ್ರೆ ಮಿನರಲ್ಗಳ ಕಡಿಮೆ ಯನ್ನು ಪೂರ್ಣಗೊಳಿಸಿ ಕೊಳ್ಳಬಹುದು.ಒಣ ಕೊಬ್ಬರಿಯಿಂದ ದೊರೆಯುವ ಈ ಮಿನರಲ್ ದೇಹಕ್ಕೆ ಬೇಗನೆ ಸೇರಿಬಿಡುತ್ತದೆ.ಇದರಿಂದಾಗಿ ಆರ್ಥರೈಟಿಸ್ ನಂತಹ ತೊಂದರೆಯಿಂದ ಪಾರಾಗಬಹುದು.ಇನ್ನು ಕೆಲವರ ಗಂಟುಗಳಲ್ಲಿ ಕಟಕಟ ಶಬ್ದವಾಗುತ್ತಿರುತ್ತದೆ. ಇದು ಮೂಳೆಗಳಲ್ಲಿರುವ ಲೂಬ್ರಿಕೇನ್ಟ್ ನ ಕೊರತೆಯಿಂದ ಆಗುತ್ತದೆ.ಇಂಥವರು ಒಣಕೊಬ್ಬರಿಯ ಸೇವನೆ ಮಾಡಬೇಕು. ಒಣಕೊಬ್ಬರಿ ಯಲ್ಲಿ ನೈಸರ್ಗಿಕವಾದ ಎಣ್ಣೆ ಹಾಗೂ ಖನಿಜ ಇರುವುದರಿಂದ ಇದು ಮೂಳೆಗಳನ್ನು ಬಲಶಾಲಿಯಾಗಿಸಿ ಈ ಸಮಸ್ಯೆಯೂ ಸರಿಹೋಗುತ್ತದೆ.

ಮೆದುಳು ಚುರುಕಾಗಿರುತ್ತದೆ. ಒಣ ಕೊಬ್ಬರಿ ಸೇವನೆಯಿಂದ ನಿಮ್ಮ ಮೆದುಳು ಚುರುಕಾಗುತ್ತದೆ.ಇದರಿಂದ ಮೆದುಳಿನ ಫಂಕ್ಷನ್ ಇಂಪ್ರೂವ್ ಆಗುತ್ತದೆ.ನಿಮಗೆ ಜ್ಞಾಪಕ ಶಕ್ತಿ ಹೆಚ್ಚಾಗಬೇಕು ಹಾಗೂ ಮೆದುಳು ಚುರುಕಾಗಿ ಇರಬೇಕು ಅಂದರೆ ತಪ್ಪದೇ ನೀವು ಒಣ ಕೊಬ್ಬರಿಯನ್ನು ಸೇವಿಸಲೇಬೇಕು.ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಯೂ ಕೂಡ ಒಣಕೊಬ್ಬರಿ ಒಳ್ಳೆಯ ಔಷಧಿ.ಇದನ್ನು ಮೂಲವ್ಯಾಧಿ ಇರುವವರು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಸರಿಹೋಗುತ್ತದೆ.ಒಣ ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವುದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಕೂಡ ಸರಿಪಡಿಸುತ್ತದೆ.

ರಕ್ತಹೀನತೆಯ ಸಮಸ್ಯೆಯನ್ನು ಗುಣಪಡಿಸುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.ರಕ್ತಹೀನತೆಯ ಸಮಸ್ಯೆ ಹೆಚ್ಚಾದರೆ ಶರೀರದಲ್ಲಿ ಶಕ್ತಿಯಿರುವುದಿಲ್ಲ,ತಲೆಸುತ್ತು,ಮೊದಲಾದ ತೊಂದರೆ ಎದುರಾಗುತ್ತದೆ.ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಒಣಕೊಬ್ಬರಿಯ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು ಏಕೆಂದರೆ ಒಣ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿದೆ ಆದ್ದರಿಂದ ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡಲು ಒಣಕೊಬ್ಬರಿಯ ಸೇವನೆಯನ್ನು ತಪ್ಪದೇ ಮಾಡಿ.

ಪದೇ ಪದೇ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಒಣಕೊಬ್ಬರಿಯನ್ನು ಹೀಗೆ ಬಳಸಿದರೆ ಸಂಪೂರ್ಣವಾಗಿ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.ತುರಿದ ಕೊಬ್ಬರಿ 20 ರಿಂದ 25 ಗ್ರಾಂ ತೆಗೆದುಕೊಳ್ಳಿ 20 ರಿಂದ 25 ಗ್ರಾಂ ನಷ್ಟು ಕಲ್ಲು ಸಕ್ಕರೆ ತೆಗೆದುಕೊಳ್ಳಿ.ಇವೆರಡನ್ನು ಸೂರ್ಯ ಉದಯಿಸುವುದಕ್ಕಿಂತ ಮೊದಲು ಸೇವಿಸಿ.ಜಗಿದು ಜಗಿದು ಸೇವಿಸಬೇಕು.ಈ ರೀತಿಯಾಗಿ ನೀವು ಪ್ರತಿನಿತ್ಯ ಸೇವಿಸಿದರೆ ಸ್ವಲ್ಪ ದಿನದಲ್ಲೇ ಎಷ್ಟೇ ಹಳೆಯದಾದ ತಲೆನೋವಿದ್ದರು ಹಾಗೂ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.

ಥೈರಾಡ್ ಸಮಸ್ಯೆ ಇರುವವರು ಒಣಕೊಬ್ಬರಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ದೇಹದಲ್ಲಿ ಸೆಲೆನಿಯಂ ಕೊರತೆಯಿಂದ ಉಂಟಾಗುತ್ತದೆ.ಒಣ ಕೊಬ್ಬರಿಯಲ್ಲಿ ಸೆಲೆನಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ.ನಿಮಗೆ ಹೈಪರ್ ಥೈರಾಯ್ಡ್ ಇರಲಿ ಅಥವಾ ಹೈಪೋ ಥೈರಾಯ್ಡ್ ಇರಲಿ ನೀವು ತಪ್ಪದೆ ಒಣಕೊಬ್ಬರಿ ಸೇವಿಸಿ.ಇದು ನಿಮ್ಮ ಥೈರಾಯ್ಡ್ ಹಾರ್ಮೋನನ್ನು ಸರಿಯಾಗಿ ಇಡುತ್ತದೆ.

ಇನ್ನು ಒಣಕೊಬ್ಬರಿ ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.ಇದರಲ್ಲಿರುವ ಫೈಬರ್ ಹೃದಯವನ್ನು ಆರೋಗ್ಯವಾಗಿಡುತ್ತದೆ.ಒಣಕೊಬ್ಬರಿಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಯನ್ನು ನಿವಾರಿಸುತ್ತದೆ.ಇದರಿಂದಾಗಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ನಿತ್ಯವೂ ತಪ್ಪದೆ ಒಣಕೊಬ್ಬರಿಯನ್ನು ಸೇವನೆ ಮಾಡುವುದು ಉತ್ತಮ.

ನಿದ್ರಾಹೀನತೆಯ ಸಮಸ್ಯೆಯನ್ನು ಸರಿಪಡಿಸುವ ಶಕ್ತಿ ಒಣಕೊಬ್ಬರಿಗಿದೆ.ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತುರಿದ ಒಣ ಕೊಬ್ಬರಿಯನ್ನು ಹಾಕಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.

ಒಣಕೊಬ್ಬರಿಯನ್ನು ಸೇವಿಸುವುದರಿಂದ ಅಜೀರ್ಣತೆಯ ಸಮಸ್ಯೆಯೂ ಕೂಡ ಸರಿ ಹೋಗುತ್ತದೆ.ಇನ್ನು ಒಣ ಕೊಬ್ಬರಿಯನ್ನು ಮಧುಮೇಹಿಗಳು ಕೂಡ ಸೇವನೆ ಮಾಡಬಹುದು.ಇದು ರಕ್ತದಲ್ಲಿ ಅಧಿಕ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಕೊಬ್ಬರಿಯ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯೂ ಬೇಗನೆ ಕಡಿಮೆಯಾಗುತ್ತದೆ.ಒಣಕೊಬ್ಬರಿ ಒಂದು ಒಳ್ಳೆಯ ಆ್ಯಂಟಿ ಬಯಾಟಿಕ್ ತರ ಕೆಲಸ ಮಾಡುತ್ತದೆ.ಇದರಿಂದಾಗಿ ಯಾವುದೇ ರೀತಿಯ ಅಲರ್ಜಿ ಅಥವಾ ಯಾವುದೇ ರೋಗಗಳು ನಮ್ಮ ದೇಹವನ್ನು ಸುಲಭವಾಗಿ ಸೇರಲು ಸಾಧ್ಯ ಇಲ್ಲ.

ಒಣ ಕೊಬ್ಬರಿ ನಮ್ಮ ಕಣ್ಣುಗಳ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.ಇನ್ನು ಇದರಿಂದ ಹಲವಾರು ಲಾಭಗಳು ದೊರೆಯುತ್ತದೆ.ಇದರ ಸೇವನೆಯ ನಂತರ ಸ್ವಲ್ಪ ದಿನಗಳಲ್ಲಿಯೇ ನಿಮ್ಮ ದೇಹದಲ್ಲಿ ಒಳ್ಳೆಯ ವ್ಯತ್ಯಾಸ ಕಂಡುಬರುತ್ತದೆ.ನಮಗೆ ಯಾವುದೇ ರೋಗ ಇರಲಿ ಇಲ್ಲದಿರಲಿ ಇಂತಹ ಅದ್ಭುತವಾದ ಆಹಾರವನ್ನು ನಮ್ಮ ಪ್ರತಿನಿತ್ಯ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ನಮ್ಮ ದೇಹವು ಆರೋಗ್ಯವಾಗಿರುತ್ತದೆ. ಯಾವುದೇ ರೋಗವು ನಮ್ಮ ಹತ್ತಿರವೂ ಸುಳಿಯುವುದಿಲ್ಲ.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ವಂದನೆಗಳೊಂದಿಗೆ

Sunday, August 2, 2020

*ನಮ್ಮ ಜೀವನ ರಥ ಈ ರೀತಿ ಸಾಗಿಸಲುಪ್ರಯತ್ನಸೋಣ*

🕉🕉🕉🕉🕉🕉🕉

 *ನಮ್ಮ ಜೀವನ ರಥ ಈ ರೀತಿ ಸಾಗಿಸಲುಪ್ರಯತ್ನಸೋಣ* 

🍀 *ಪರಮಾತ್ಮನಲ್ಲಿ ಪೂರ್ಣ ನಿಷ್ಠೆ*
🍀 *ಜ್ಞಾನದಲ್ಲಿ ಪರಿಪೂರ್ಣತೆ*
🍀 *ಆಹಾರದಲ್ಲಿ ಸಾತ್ವಿಕತೆ*
🍀 *ದೃಷ್ಟಿಯಲ್ಲಿ ಪವಿತ್ರತೆ*
🍀 *ಮನದಲ್ಲಿ ವಿಶಾಲತೆ* 
🍀 *ಬುದ್ಧಿಯಲ್ಲಿ ದಿವ್ಯತೆ* 
🍀 *ಸೇವೆಯಲ್ಲಿ ನಮ್ರತೆ* 
🍀 *ಸ್ನೇಹದಲ್ಲಿ ಪರಿಶುದ್ಧತೆ* 
🍀 *ಕರ್ಮದಲ್ಲಿ ಕುಶಲತೆ*
🍀 *ವ್ಯವಹಾರದಲ್ಲಿ ಸಭ್ಯತೆ* 
🍀 *ಮುಖದಲ್ಲಿ ಪ್ರಸನ್ನತೆ* 
🍀 *ಸಾಧನೆಯಲ್ಲಿ ದೃಢತೆ* 
🍀 *ಯೋಗದಲ್ಲಿ ತನ್ಮಯತೆ* 
🍀 *ಆಚಾರದಲ್ಲಿ ಸ್ವಚ್ಛತೆ* 
🍀 *ವಿಚಾರದಲ್ಲಿ ಶ್ರೇಷ್ಠತೆ* 
🍀 *ಪರಿವಾರದಲ್ಲಿ ಏಕತೆ* 
🍀 *ಸಂಸ್ಕಾರದಲ್ಲಿ ಶುದ್ಧತೆ* 
🍀 *ಮಾತಿನಲ್ಲಿ ಮಧುರತೆ* 
🍀 *ಸಂಬಂಧದಲ್ಲಿ ನಿರ್ಲಿಪ್ತತೆ* 
🍀 *ಬದುಕಿನಲ್ಲಿ ನಿಶ್ಚಿಂತತೆ* 
🍀 *ಕಾರ್ಯದಲ್ಲಿ ಸಫಲತೆ* 
🍀 *ಜೀವನದಲ್ಲಿ ಹಗುರತೆ* 

ಮೇಲಿನ ಎಲ್ಲ *ಉಕ್ತಿಗಳಂತೆ* ಜೀವನ ನಡೆಸಲು ನಾವೆಲ್ಲರೂ ಪ್ರಯತ್ನಿಸೋಣ
🙏🏼
 
 ☘☘☘☘☘☘☘ ವಂದನೆಗಳೊಂದಿಗೆ

ಕೋರೋಣ ತೋರಿಸುತ್ತಿದೆ ಜೀವನ

....ಪದಗಳ ಸುರಿಮಳೆ. ಒಂದೊಂದು ಪದಗಳ ಹನಿಯಲ್ಲೂ ಗುಂಡೇಟು ಇದೆ.  ಮನುಜ ಇನ್ನಾದರೂ ತಿಳಿಯಬೇಕು 
......ಸಾಗಿದೆ ಒಂಟಿ ಪಯಣ 
ಮಸಣದ ಕಡೆಗೆ...
ಮೆರವಣಿಗೆ ಇಲ್ಲ.. ಬ್ಯಾಂಡ್ ಇಲ್ಲ...ತಮಟೆ ಇಲ್ಲ..
ಹೂವಿಲ್ಲ... ಹಾರವಿಲ್ಲ...  ಪಲ್ಲಕ್ಕಿ ಇಲ್ಲ..ಪಟಾಕಿಯ ಶಬ್ದವಿಲ್ಲ...

...ಬಂಧು ಬಳಗವಿಲ್ಲ... 
ಗೆಳಯರ ದಂಡಿಲ್ಲ..
ಒಳಿತು ಕೆಡುಕುಗಳ ಮಾತಿಲ್ಲ...
ಸಂಬಂಧಿಕರ ನೋವಿನ ಆಕ್ರಂದನವಿಲ್ಲ...ಇದ್ದರೂ ಕೇಳಿಸುತ್ತಿಲ್ಲ...

..ಕೊನೆಯ ಮುಖ ನೋಡಲು ಅವಕಾಶವಿಲ್ಲ...
ಅಂತಿಮ ವಿಧಿ ವಿಧಾನಗಳಿಲ್ಲ...
ಹೊರುವವರಿಲ್ಲ...ಅದರ ಅಗತ್ಯವು ಇಲ್ಲವೇ ಇಲ್ಲ.....

....ಯಾವುದೋ ಲೋಹದ ವಾಹನ...
ಮೇಲಿಂದ ಕೆಳಗೆ ಮುಚ್ಚಿಟ್ಟು ದೇವರ ಮಕ್ಕಳು ತರುವರು ನಿನ್ನನ್ನು... 
ಹೂಳುವರು ನಿನಗೆ ಗೊತ್ತೇನು...
ಮಸಣದಲ್ಲಲ್ಲ.. ಬೇರೆಲ್ಲೋ...
ತಿರುಗಿ ನೋಡದೆ ಹೋಗುವರು ನಿನ್ನ ಹೂಳಿದ ಜಾಗವನ್ನು....

..ಇರುವಾಗ ನನ್ನದೆಂದು ಬಡಿದಾಡಿದವರು ನಾವು..
ಬದುಕಿನ ಯಾನ ಮುಗಿಸಿದಾಗ
ಯಾರೂ ಬರಲಿಲ್ಲ ಜೊತೆಗೆ  ನಾನು ನನ್ನವರೆನ್ನುವರು...

..ಬದುಕಿ ಬರಲು ಅವಕಾಶವಿಲ್ಲ
ಮನದಲಿ ಸಾವಿರ ನೋವಿದ್ದರೂ...
ಹೇಳಲು ಯಾರಿಲ್ಲ ನಿನ್ನ ಜೊತೆ ಜೀವನ ಕಳೆದವರು..

....ಕೊನೆಗೂ ಭೂಮಿಗೂ,   ರುದ್ರಭೂಮಿಗು ಬೇಡವಾದೆಯಾ ಮನುಜ ನೀನು..
..ಮುಂದಾದರು 
ಬಿಡುವೆಯಾ ದುರಾಸೆ, ದುರ್ಬುದ್ಧಿ ಎಂಬ ಲಂಪಟತನವನ್ನು...

*ಒಳಿತು ಮಾಡು ಮನುಷ್ಯ ನೀನು ಇರೋದು ಮೂರು ದಿವಸ*
*ಉಸಿರು ನಿಂತ ಮೇಲೆ ಹೆಣ ಅನ್ನುತಾರ.. ಮಣ್ಣಾಗಿ ಹೂಳುತ್ತಾರ*
🙏🙏🙏
ವಂದನೆಗಳೊಂದಿಗೆ

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World