www.dgnsgreenworld.blogspot.com
Sunday, May 25, 2025
Friday, May 16, 2025
🚩🙏*****ಎಲ್ಲರೂ ತಿಳಿಯಬೇಕಾದ ಆದ್ಯಾತ್ಮ ವಿಷಯ***** ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ
🚩🙏*****ಎಲ್ಲರೂ ತಿಳಿಯಬೇಕಾದ ಆದ್ಯಾತ್ಮ ವಿಷಯ***** ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ.
ದಿಕ್ಕುಗಳು:
1. ಪೂರ್ವ /ಮೂಡಣ
2. ದಕ್ಷಿಣ. /ತೆಂಕಣ
3. ಪಶ್ಚಿಮ /ಪಡುವಣ
4. ಉತ್ತರ /ಬಡಗಣ
ಮೂಲೆಗಳು:
1. ಆಗ್ನೇಯ
2. ನೈರುತ್ಯ
3. ವಾಯುವ್ಯ
4. ಈಶಾನ್ಯ
ವೇದಗಳು:
1. ಋಗ್ವೇದ
2. ಯಜುರ್ವೇದ
3. ಸಾಮವೇದ
4. ಅಥರ್ವಣ ವೇದ
ಪುರುಷಾರ್ಥಗಳು:
1. ಧರ್ಮ
2. ಅರ್ಥ
3. ಕಾಮ
4. ಮೋಕ್ಷ
ಪಂಚಭೂತಗಳು:
1. ಗಾಳಿ
2. ನೀರು
3. ಭೂಮಿ
4. ಆಕಾಶ
5. ಅಗ್ನಿ
ಪಂಚೇಂದ್ರಿಯಗಳು:
1. ಕಣ್ಣು
2. ಮೂಗು
3. ಕಿವಿ
4. ನಾಲಿಗೆ
5. ಚರ್ಮ
ಲಲಿತ ಕಲೆಗಳು:
1. ಕವಿತ್ವ
2. ಚಿತ್ರಲೇಖನ
3. ನಾಟ್ಯ
4. ಸಂಗೀತ
5. ಶಿಲ್ಪ ಕಲೆ
ಪಂಚಗಂಗೆಯರು:
1. ಗಂಗಾ
2. ಕೃಷ್ನಾ
3. ಗೋದಾವರಿ
4. ಕಾವೇರಿ
5. ತುಂಗಭದ್ರಾ
ದೇವತಾ ವೃಕ್ಷಗಳು:
1. ಮಂದಾರ
2. ಪಾರಿಜಾತ
3. ಕಲ್ಪವೃಕ್ಷ
4. ಸಂತಾನ
5. ಹರಿ ಚಂದನ
ಪಂಚೋಪಚಾರಗಳು:
1. ಸ್ನಾನ
2. ಪೂಜೆ
3. ನೈವೇದ್ಯ
4. ಪ್ರದಕ್ಷಿಣೆ
5. ನಮಸ್ಕಾರ
ಪಂಚಾಮೃತಗಳು:
1. ಹಸುವಿನ ಹಾಲು
2. ಮೊಸರು
3. ತುಪ್ಪ
4. ಸಕ್ಕರೆ
5. ಜೇನುತುಪ್ಪ
ಪಂಚಲೋಹಗಳು:
1. ಚಿನ್ನ
2. ಬೆಳ್ಳಿ
3. ತಾಮ್ರ
4. ಸೀಸ
5. ತವರ
ಪಂಚರಾಮರು:
1. ಅಮರಾವತಿ
2. ಭೀಮವರಂ
3. ಪಾಲಕೊಲ್ಲು
4. ಸಾಮರ್ಲಕೋಟ
5. ದ್ರಾಕ್ಷಾರಾಮಂ
ಷಡ್ರುಚಿಗಳು:
1. ಸಿಹಿ
2. ಹುಳಿ
3. ಕಹಿ
4. ಒಗರು
5. ಕಾರ
6. ಉಪ್ಪು
ಅರಿಷಡ್ವರ್ಗಗಳು:
1. ಕಾಮ
2. ಕ್ರೋಧ
3. ಲೋಭ
4. ಮೋಹ
5. ಮದ
6. ಮತ್ಸರ
ಋತುಗಳು:
1. ವಸಂತ
2. ಗ್ರೀಷ್ಮ
3. ವರ್ಷ
4. ಶರತ್
5. ಹೇಮಂತ
6. ಶಿಶಿರ
ಸಪ್ತ ಋಷಿಗಳು:
1. ಕಾಶ್ಯಪ
2. ಗೌತಮ
3. ಅತ್ರಿ
4. ವಿಶ್ವಾಮಿತ್ರ
5. ಭಾರದ್ವಾಜ
6. ವಸಿಷ್ಠ
ತಿರುಪತಿಯಲ್ಲಿನ ಸಪ್ತಗಿರಿಗಳು:
1. ಶೇಷಾದ್ರಿ
2. ನೀಲಾದ್ರಿ
3. ಗರುಡಾದ್ರಿ
4. ಅಂಜನಾದ್ರಿ
5. ವೃಷಭಾದ್ರಿ
6. ನಾರಾಯಣದ್ರಿ
7. ವೇಂಕಟಾದ್ರಿ
ಸಪ್ತ ವ್ಯಸನಗಳು:
1. ಜೂಜು
2. ಮದ್ಯಪಾನ
3. ಕಳ್ಳತನ
4. ಬೇಟೆ
5. ವ್ಯಭಿಚಾರ
6. ದುಂದು ಖರ್ಚು
7. ಕಠಿಣ ಮಾತು
ಸಪ್ತ ನದಿಗಳು:
1. ಗಂಗಾ
2. ಯಮುನಾ
3. ಸರಸ್ವತಿ
4. ಗೋದಾವರಿ
5. ಸಿಂಧು
6. ನರ್ಮದಾ
7. ಕಾವೇರಿ
ನವಧಾನ್ಯಗಳು:
1. ಗೋಧಿ
2. ಭತ್ತ/ನೆಲ್ಲು
3. ಹೆಸರು
4. ಕಡಲೆ
5. ತೊಗರಿ
6. ನವಣೆ
7. ಉದ್ದು
8. ಹುರಳಿ
9. ಅಲಸಂದೆ
ನವರತ್ನಗಳು:
1. ಮುತ್ತು
2. ಹವಳ
3. ಗೋಮೇಧಿಕ
4. ವಜ್ರ
5. ಕೆಂಪು
6. ನೀಲಿ
7. ಕನಕ ಪುಷ್ಯ ರಾಗ
8. ಪಚ್ಚೆ/ಮರಕತ
9. ವೈಡೂರ್ಯ
ನವ ಧಾತುಗಳು:
1. ಚಿನ್ನ
2. ಬೆಳ್ಳಿ
3. ಹಿತ್ತಾಳೆ
4. ತಾಮ್ರ
5. ಕಬ್ಬಿಣ
6. ಕಂಚು
7. ಸೀಸ
8. ತವರ
9. ಕಾಂತ ಲೋಹ
ನವರಸಗಳು:
1. ಹಾಸ್ಯ
2. ಶೃಂಗಾರ
3. ಕರುಣ
4. ಶಾಂತ
5. ರೌದ್ರ
6. ಭಯಾನಕ
7. ಬೀಭತ್ಸ
8. ಅದ್ಭುತ
9. ವೀರ
ನವದುರ್ಗೆಯರು:
1. ಶೈಲ ಪುತ್ರಿ
2. ಬ್ರಹ್ಮಚಾರಿಣಿ
3. ಚಂದ್ರ ಘಂಟ
4. ಕೂಷ್ಮಾಂಡ
5. ಸ್ಕಂದ ಮಾತೆ
6. ಕಾತ್ಯಾಯನಿ
7. ಕಾಳರಾತ್ರಿ
8. ಮಹಾಗೌರಿ
9. ಸಿದ್ಧಿದಾತ್ರಿ
ದಶ ಸಂಸ್ಕಾರಗಳು:
1. ವಿವಾಹ
2. ಗರ್ಭದಾನ
3. ಪುಂಸವನ
4. ಸೀಮಂತ
5. ಜಾತಕ ಕರ್ಮ
6. ನಾಮಕರಣ
7. ಅನ್ನಪ್ರಾಶನ
8. ಚೂಡಕರ್ಮ
9. ಉಪನಯನ
10. ಸಮವರ್ತನ
ದಶಾವತಾರಗಳು - ಕ್ಷೇತ್ರಗಳು
1. ಶ್ರೀಮತ್ಸ್ಯಾವತಾರ ಕ್ಷೇತ್ರ - ನಾಗಲಾಪುರಂ ತಿರುಪತಿ ಜಿಲ್ಲೆ, ಆಂಧ್ರ ಪ್ರದೇಶ.
2. ಶ್ರೀ ಕೂರ್ಮ ಕ್ಷೇತ್ರ - ಶ್ರೀ ಕೂರ್ಮಮ್, ಶ್ರೀಕಾಕುಳಂ ಜಿಲ್ಲೆ, ಆಂಧ್ರ ಪ್ರದೇಶ.
3. ಶ್ರೀ ಆದಿ ವರಾಹ ಕ್ಷೇತ್ರ - ತಿರುಮಲ, ತಿರುಪತಿ ಜಿಲ್ಲೆ, ಆಂಧ್ರಪ್ರದೇಶ.
4. ಶ್ರೀ ನರಸಿಂಹ ಕ್ಷೇತ್ರ - ಅಹೋಬಿಲಂ, ನಂದ್ಯಾಲ ಜಿಲ್ಲೆ, ಆಂಧ್ರಪ್ರದೇಶ.
5. ಶ್ರೀ ವಾಮನ ಕ್ಷೇತ್ರ - ತಿರುಕ್ಕೋಯಿಲೂರು ಕಳ್ಳಕುರಿಚಿ ಜಿಲ್ಲೆ ತಮಿಳುನಾಡು.
6. ಶ್ರೀ ಪರಶುರಾಮ ಕ್ಷೇತ್ರ - ಜನಪಾವ ಪರ್ವತ, ಇಂದೋರ್ ಜಿಲ್ಲೆ, ಮಧ್ಯ ಪ್ರದೇಶ.
7. ಶ್ರೀರಾಮ ಕ್ಷೇತ್ರ - ಅಯೋಧ್ಯ, ಉತ್ತರ ಪ್ರದೇಶ.
8. ಶ್ರೀ ಬಲರಾಮ ಕ್ಷೇತ್ರ - ಗೋಕುಲಂ, ಮಥುರಾ ಜಿಲ್ಲೆ, ಉತ್ತರಪ್ರದೇಶ.
9. ಶ್ರೀ ಕೃಷ್ಣ ಕ್ಷೇತ್ರ - ಮಥುರಾ ಉತ್ತರಪ್ರದೇಶ.
10. ಶ್ರೀ ಕಲ್ಕಿ ಕ್ಷೇತ್ರ - ಶಂಭಲ (ಅವತಾರವೆತ್ತುವ ಕ್ಷೇತ್ರ).
ಶ್ರೀ ವೆಂಕಟೇಶ್ವರ ಸ್ವಾಮಿ ಕಲಿಯುಗದೈವ - ತಿರುಮಲ ಕಲಿಯುಗ ಕ್ಷೇತ್ರ.
*ಸೃಷ್ಟಿಯಲ್ಲಿ ಏಕೈಕ ಮತ್ತ್ಯಾವತಾರ ಕ್ಷೇತ್ರ ನಾಗಲಾಪುರ ಕ್ಷೇತ್ರವನ್ನು ದರ್ಶಿಸಿ, ಸೇವಿಸಿ*
ಜ್ಯೋತಿರ್ಲಿಂಗಗಳು:
1. ಹಿಮಾಲಯ ಪರ್ವತ - ಕೇದಾರೇಶ್ವರ ಲಿಂಗ
2. ಕಾಶಿ - ಕಾಶಿ ವಿಶ್ವೇಶ್ವರ
3. ಮಧ್ಯಪ್ರದೇಶ - ಮಹಾಕಾಳೇಶ್ವರ ಲಿಂಗ, ಓಂಕಾರೇಶ್ವರ ಲಿಂಗ
4. ಗುಜರಾತ್ - ಸೋಮನಾಥಲಿಂಗ, ನಾಗೇಶ್ವರ ಲಿಂಗ.
5. ಮಹಾರಾಷ್ಟ್ರ - ಭೀಮಶಂಕರ, ತ್ರಯಂಬಕೇಶ್ವರ, ಘೃಷ್ಣೆಶ್ವರ, ವೈದ್ಯನಾಥೇಶ್ವರ.
6. ಆಂಧ್ರ ಪ್ರದೇಶ - ಮಲ್ಲಿಕಾರ್ಜುನ ಲಿಂಗ (ಶ್ರೀಶೈಲಂ )
7. ತಮಿಳುನಾಡು - ರಾಮಲಿಂಗೇಶ್ವರ
ವಾರಗಳು:
1. ಭಾನು
2. ಸೋಮ
3. ಮಂಗಳ
4. ಬುಧ
5. ಗುರು
6. ಶುಕ್ರ
7. ಶನಿ
ಚಂದ್ರಮಾನ ತಿಂಗಳುಗಳು:
1. ಚೈತ್ರ
2. ವೈಶಾಖ
3. ಜೇಷ್ಠ
4. ಆಷಾಢ
5. ಶ್ರಾವಣ
6. ಭಾದ್ರಪದ
7. ಆಶ್ವಯುಜ
8. ಕಾರ್ತೀಕ
9. ಮಾರ್ಗಶಿರ
10. ಪುಷ್ಯ
11. ಮಾಘ
12. ಫಾಲ್ಗುಣ
ರಾಶಿಗಳು:
1. ಮೇಷ
2. ವೃಷಭ
3. ಮಿಥುನ
4. ಕರ್ಕಾಟಕ
5. ಸಿಂಹ
6. ಕನ್ಯಾ
7. ತುಲಾ
8. ವೃಶ್ಚಿಕ
9. ಧನಸ್ಸು
10. ಮಕರ
11. ಕುಂಭ
12. ಮೀನ
ತಿಥಿಗಳು:
1. ಪಾಡ್ಯ
2. ಬಿದಿಗೆ
3. ತದಿಗೆ
4. ಚೌತಿ
5. ಪಂಚಮಿ
6. ಷಷ್ಠಿ
7. ಸಪ್ತಮಿ
8. ಅಷ್ಟಮಿ
9. ನವಮಿ
10. ದಶಮಿ
11. ಏಕಾದಶಿ
12. ದ್ವಾದಶಿ
13. ತ್ರಯೋದಶಿ
14. ಚತುರ್ದಶಿ
15. ಅಮಾವಾಸ್ಯೆ/ಹುಣ್ಣಿಮೆ
ನಕ್ಷತ್ರಗಳು:
1. ಅಶ್ವಿನಿ
2. ಭರಣಿ
3. ಕೃತಿಕಾ
4. ರೋಹಿಣಿ
5. ಮೃಗಶಿರ
6. ಆರುದ್ರ
7. ಪುನರ್ವಸು
8. ಪುಷ್ಯ
9. ಆಶ್ಲೇಷ
10. ಮಖ
11. ಪುಬ್ಬಾ
12. ಉತ್ತರ
13. ಹಸ್ತ
14. ಚಿತ್ತಾ
15. ಸ್ವಾತಿ
16. ವಿಶಾಖ
17. ಅನುರಾಧ
18. ಜೇಷ್ಠ
19. ಮೂಲ
20. ಪೂರ್ವಾಷಾಢ
21. ಉತ್ತರಾಷಾಢ
22. ಶ್ರವಣ
23. ಧನಿಷ್ಠ
24. ಶತಭಿಷಾ
25. ಪೂರ್ವಾಭಾದ್ರ
26. ಉತ್ತರಾಭಾದ್ರ
27. ರೇವತಿ
ಈ ಪೀಳಿಗೆಯ ಮಕ್ಕಳಿಗೆ ತಿಳಿಸಿ, ಓದಿಸಿ ಮತ್ತು ನಾವು ಸಹ ಮತ್ತೊಮ್ಮೆ ಮನನ ಮಾಡಿಕೊಳ್ಳೋಣ.
(ಸಂಗ್ರಹ)
Wednesday, May 14, 2025
ರವಿ ಕುಮಾರ್ ಹರವೇ
"ಸಾವಿರ ಮೈಲಿಗಳ ಪ್ರಯಾಣ ಕೂಡ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ". ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಸಾಧಿಸುವ ಛಲವಿರಬೇಕು ಅಷ್ಟೇ, ಸಾಧನೆ ಹಾದಿಯಲ್ಲಿ ನೋವು ನಲಿವು, ಕಷ್ಟ ಸುಖ, ಸುಖ-ದುಃಖ, ಸೋಲು ಗೆಲುವು, ಕಹಿ ಸಿಹಿ, ಎಲ್ಲವೂ ಸರ್ವಸಾಮಾನ್ಯವಾಗಿ ಸಾಧನೆಯು ಉದ್ದಕ್ಕೂ ಉದ್ಭವಿಸುತ್ತವೆ, ಪ್ರತಿಯೊಬ್ಬ ಸರ್ವ ಶ್ರೇಷ್ಠ ಸಾಧಕರೂ ಈ ಎಲ್ಲಾ ಮೆಟ್ಟಿಲುಗಳನ್ನು ಮೆಟ್ಟಿ ಸಾಧನೆಗೈದಿರುತ್ತಾರೆ, ಅದಕ್ಕೆ ಸನ್ಮಾನ್ಯ, ಡಿ, ವಿ, ಗುಂಡಪ್ಪನವರು ಹೇಳುತ್ತಾರೆ,
"ಯಶಸ್ಸು ಎಂಬುದು ಕಂಡ ಕಂಡಲ್ಲಿ ಬೆಳೆಯುವ ಕಾಡು ಕುಸುಮವಲ್ಲ ಎಡಬಿಡದ ಕಾಯಕದಿಂದ ಒಡಮೂಡಿ ಬರುವ ಮಂದಾರ ಪುಷ್ಪ"ಎಂದು.
ಸಾಧನೆ ಹಾದಿಯಲ್ಲಿ ಬರುವ ಪ್ರತಿ ಸಂದರ್ಭಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ, ನಾವು ಮಾಡುವ ಪ್ರತಿ ಕೆಲಸದಲ್ಲೂ ಭಗವಂತನ ಅನುಗ್ರಹ ಇರುತ್ತದೆ, ನಾವು ಏನನ್ನು ಬಯಸುತ್ತೇವೆಯೋ ಅದನ್ನು ನಮಗೆ ಈ ನಿಸರ್ಗ ಕೊಡುತ್ತದೆ, ನೇರ ಮಾರುಕಟ್ಟೆಯಲ್ಲಿ ನಿಮ್ಮ ಸುದೀರ್ಘ ಅನುಭವ ಯಶಸ್ಸಿಗೆ ಮೆಟ್ಟಲಾಗಿ ನಿಲ್ಲುತ್ತದೆ, ನಿಮ್ಮ ಅನುಭವ ನಮ್ಮಂತ ಎಷ್ಟೋ ಜನರ ಜ್ಞಾನಾರ್ಜನೆಗೆ ಸಹಕಾರವಾಗಲಿ, ಭಗವಂತ ಆ ಅದ್ಭುತ ಶಕ್ತಿಯನ್ನು ತಮಗೆ ಅನುಗ್ರಹಿಸಲಿ ಎಂದು ಬೇಡಿಕೊಳ್ಳುತ್ತೇವೆ.ನಿಮ್ಮ ಆಶಾಭಾವನೆಯ ಸಂದೇಶವನ್ನು ಓದಿ ಬಹಳ ಸಂತೋಷವಾಯಿತು.
ದೇವರು ತಮಗೆ ಆಯಸ್ಸು, ಆರೋಗ್ಯ, ಐಶ್ವರ್ಯ ಸಕಲವನ್ನು ಅನುಗ್ರಹಿಸಲಿ ನಿಮ್ಮಿಂದ ಸರ್ವರಿಗೂ ಒಳಿತಾಗಲೆಂದು ಬಯಸುತ್ತೇವೆ. ವಂದನೆಗಳೊಂದಿಗೆ 🙏💐
Wednesday, April 16, 2025
ಗೋಮಾತೇ :
Brutality of cow killing !!!
ಗೋಮಾತೇ :
ಕಸಾಯಿಖಾನೆಗೆ ನನ್ನನ್ನು ಹಾಕಲಾಗುತ್ತದೆ ಮತ್ತು 4 ದಿನಗಳ ವರೆಗೂ ನನ್ನ ಹೊಟ್ಟೆಗೆ ಏನೂ ಕೊಡುವುದಿಲ್ಲ!
ಯಾಕೆಂದರೆ....ನನ್ನ ರಕ್ತ ದಲ್ಲಿನ ಹಿಮೋಗ್ಲೋಬಿನ್ ಕರಗಿ ಮಾಂಸ ದಲ್ಲಿ ಆಂಟಿ ಕೊಳ್ಳಲಿ ಎಂದು!
ನಂತರ ನನ್ನನ್ನು ಎಳೆದು ಕೊಂಡು ತರಲಾಗುತ್ತದೆ ಎಕೆಂದರೆ....ನಾ ಮೂರ್ಚೆ ಹೋಗಿರುತ್ತೇನೇ.
ನನ್ನ ಮೇಲೆ 200 digree Celsius ನ ಕುದಿಯುವ ನೀರುನ್ನು ಸುರಿಯಲಾಗುತ್ತದೆ ......ನನ್ನಲ್ಲಿ ಹಾಹಾಕಾರ ಉಂಟಾಗುತ್ತದೆ .
ಆಗ ನನ್ನ ಹಾಲು ಕುಡಿಯುವ ನಿಮ್ಮನ್ನು (ಮನುಷ್ಯ)ನೆನೆಯುತ್ತೇನೆ !
ನಂತರ ನನ್ನನ್ನು ಕಠೋರವಾಗಿ ದೊಣ್ಣೆ ಯಿಂದ ಹೊಡೆಯ ಲಾಗುವುದು ....ಯಾಕೆಂದರೆ ನನ್ನ ಚರ್ಮ ಸುಲಭವಾಗಿ ಬಿಡಿಸಿ ಕೊಳ್ಳಲಿ ಎಂದು!
ನನ್ನ ಎರಡು ಕಾಲುಗಳನ್ನು ಕಟ್ಟಿ ಉಲ್ಟಾ ನೇತು ಹಾಕುತ್ತಾರೆ ನಂತರ ನನ್ನ ಶರೀರದಿಂದ ಚರ್ಮವನ್ನು ತೆಗೆದು ಹಾಕುತ್ತಾರೆ .
ಕೇಳಿ ಭೂಮಿ ಮೇಲಿನ ಜೀವಿಗಳೇ.......
ಈಗಲೂ ನನ್ನ ಪ್ರಾಣ ಹೋಗಿರುವುದಿಲ್ಲ!!
ನಾನು ಕಾತರದ ಕಣ್ಣುಗಳಿಂದ ನೋಡುವೆ ಈ ಕಸಾಯಿಖಾನೆಯವರಲ್ಲಿ ಮನುಷ್ಯತ್ವ ಜನ್ಮತಳೆಯುತ್ತದೆನೋ ಎಂದು! ಇಂತಹ ಸಮಯದಲ್ಲೂ ನನ್ನಿಂದ ಪೋಷಣೆ ಗೊ0ಡ ಯಾರಾದರೂ ಮನುಷ್ಯ ನನ್ನನ್ನು ಕಾಪಾಡುವುದಿಲ್ಲ...
ನನ್ನ ಚರ್ಮದ ಮೇಲೆ ಆಸೆ ಇಟ್ಟುಕೊಂಡ ವರೆ....ದುಷ್ಟ ಕಸಾಯಿಖಾನೆಯವ ನನ್ನ ಜೀವವಿರು ವಾಗಲೇ ನನ್ನ ಚರ್ಮ ತೆಗೆದು ಬಿಡುತ್ತಾರೆ.....ನಾನು ನರಳಿ ನರಳಿ ಹಂಬಲಿಸಿ ಪ್ರಾಣ ಬಿಡುತ್ತೇನೆ.
ಇಂತಹ ಪಾವನ ಪವಿತ್ರ ಭಾರತ ಭೂಮಿಯ ಮೇಲೆ ನನ್ನನ್ನು ಕಾಪಾಡಲು ಪಾಲನೆ ಮಾಡಲು ಯಾವುದೇ ಧರ್ಮ ಕಾನೂನು ಇಲ್ಲವೇ......
ನಿಮ್ಮಿಂದಾದ ಕ್ರೂರವಾದ ಅತ್ಯಾಚಾರವನ್ನು ಸಹಿಸಿಯು ಕೂಡ ನಾನು ನಿಮಗೆ 'ಶಾಪ ' ವನ್ನು ಕೊಡಲಾಗದು ..................
ಎಕೆಂದರೆ........ನಾನು ನಿನ್ನ ತಾಯಿಯಲ್ಲ ವೇ....
ನೀವು ಗೋಮಾತೇಯನ್ನು ಪ್ರೀತಿಸುವವರಾದರೇ ...
ಮತ್ತು ಗೋಮಾತೆಯ ಹಾಲನ್ನು ಕೂಡಿದವರೇ ಆಗಿದ್ದರೆ......ಈ message ನ್ನು share ಮಾಡಿ ಸ್ವಲ್ಪ ವಾದರೂ ಹಾಲಿನ ಋಣವನ್ನಾದರೂ ಕಮ್ಮಿ ಮಾಡಿ ಕೊಳ್ಳಿ.
ಹಿಂದೂಗಳೆಲ್ಲರ ಒಂದೇ ಕೂಗು....
ಇನ್ನು ಗೋಹತ್ಯೆ ಯನ್ನು ಸಹಿಸಲಾಗದು..!
ಗೋಮಾತೆಯ ಈ ಪೀಡನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು 2 ನಿಮಿಷ ಸಮಯ ಕೊಟ್ಟು ಸ್ನೇಹಿತ ಬಂಧು ಗಳಿಗೆಲ್ಲ share ಮಾಡಿ.
ಗೋಮಾತೆಗೆ ಜಯವಾಗಲಿ !......
ಜೈ ಶ್ರೀ ಕೃಷ್ಣ!.....
ಜೈ ಶ್ರೀರಾಮ್!....
please save cows
and value your humanity .
*ದೇವರು ನಮಗೆ ಏನು ಕೊಟ್ಟಿದ್ದಾರೆ.
*ದೇವರು ನಮಗೆ ಏನು ಕೊಟ್ಟಿದ್ದಾನೆ ಎನ್ನುವುದು ಮುಖ್ಯವಲ್ಲ. ಕೊಟ್ಟಿರುವುದನ್ನು ನಾವು ಹೇಗೆ ಬಳಸಿಕೊಂಡಿದ್ದೇವೆ ಎನ್ನುವುದೇ ಮುಖ್ಯ*
*ಶುಭೋದಯ*
ವಂದನೆಗಳೊಂದಿಗೆ
ನಂಜುಂಡಸ್ವಾಮಿ
Wednesday, March 12, 2025
*ಬೇಸಿಗೆಯಲ್ಲಿ ಮೋಸಂಬಿ ರಸ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ, ಪ್ರಯೋಜನಗಳನ್ನು ತಿಳಿದು ನೀವು ವಿಸ್ಮಿತರಾಗುತ್ತೀರಿ.
*Health is wealth and Most Important Information*
*ಬೇಸಿಗೆಯಲ್ಲಿ ಮೋಸಂಬಿ ರಸ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ, ಪ್ರಯೋಜನಗಳನ್ನು ತಿಳಿದು ನೀವು ವಿಸ್ಮಿತರಾಗುತ್ತೀರಿ.
HEALTH is Wealth
ಈಗ ಬೇಸಿಗೆ ಶುರುವಾಗಿದೆ. ಹೀಗಾಗಿ ಜನರಿಗೆ ಬಿಸಿಲಿನ ಸಮಸ್ಯೆ ಕಾಡಲಿದೆ. ಹವಾಮಾನ ಬದಲಾವಣೆಯು ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸಹ ಉಂಟುಮಾಡುತ್ತದೆ. ಆದ್ದರಿಂದ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇವುಗಳ ಪೈಕಿ ಒಂದು ಉತ್ತಮ ಪರಿಹಾರವೆಂದರೆ ಮೋಸಂಬಿ ರಸ.
*ಈ ದಿನಗಳಲ್ಲಿ ನಿಯಮಿತವಾಗಿ ಮೋಸಂಬಿ ರಸವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ...*
1) ಮೋಸಂಬಿ ರಸ ದೇಹವನ್ನು ತಂಪಾಗಿಸುತ್ತದೆ. ಮೊಸಂಬಿಯಲ್ಲಿ ವಿಟಮಿನ್ ಎ, ಬಿ, ಸಿ ಕಂಡುಬರುತ್ತದೆ. ಮೋಸಂಬಿ ಮಕ್ಕಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
2) ಮೋಸಂಬಿ ಸೌಂದರ್ಯ ವರ್ಧಕವಾಗಿದೆ. ಮೋಸಂಬಿ ಪೌಷ್ಟಿಕ, ಸಿಹಿ, ರುಚಿಕರ, ರುಚಿಕರ, ಜೀರ್ಣಕಾರಿ, ದೀಪಕ, ಹೃದಯ ಉತ್ತೇಜಕ, ವೀರ್ಯವರ್ಧಕ ಮತ್ತು ರಕ್ತ ಸುಧಾರಕ ಗುಣಗಳನ್ನು ಹೊಂದಿದೆ.
3) ಮೋಸಂಬಿ ರಸವನ್ನು ವಿವಿಧ ತಂಪು ಪಾನೀಯಗಳನ್ನು ತಯಾರಿಸಲು, ಆಹಾರಕ್ಕೆ ಪರಿಮಳ ಮತ್ತು ಸುವಾಸನೆಯನ್ನು ಸೇರಿಸಲು ಬಳಸಲಾಗುತ್ತದೆ.
4) ಮೋಸಂಬಿ ರಸವು ವಿಶೇಷವಾಗಿ ದುರ್ಬಲ, ರೋಗಿಗಳು, ವೃದ್ಧರು ಮತ್ತು ಮಕ್ಕಳಿಗೆ ಉತ್ತೇಜನಕಾರಿಯಾಗಿದೆ.
5) ತಾಜಾ ಮೋಸಂಬಿಯ ಸಿಪ್ಪೆ ಮುಖದ ಮೇಲಿನ ಮೊಡವೆ ಮತ್ತು ಮೊಡವೆಗಳನ್ನು ಹೋಗಲಾಡಿಸಲು ಇದು ಉಪಯುಕ್ತವಾಗಿದೆ. ಮೋಸಂಬಿ ಸಿಪ್ಪೆ ವಾತಹಾರಕವಾಗಿದೆ.
6) ಮೋಸಂಬಿ ರಸವು ಉತ್ತಮ ಜೀರ್ಣಕ್ರಿಯೆಗೆ ಸಹ ಪ್ರಯೋಜನಕಾರಿಯಾಗಿದೆ. ಮೋಸಂಬಿ ರಸವು ಅದರ ಪರಿಮಳ ಮತ್ತು ಆಮ್ಲದ ಕಾರಣದಿಂದಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
7) ಮೋಸಂಬಿ ರಸವನ್ನು ಪ್ರತಿದಿನ ಸೇವಿಸುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಮೋಸಂಬಿ ರಸವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಅನೇಕ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
8) ಮೋಸಂಬಿಯಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಹಾಗಾಗಿ ಇದು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಜೇನುತುಪ್ಪದೊಂದಿಗೆ ಮೋಸಂಬಿ ರಸಪಾನವು ತೂಕ ನಷ್ಟಕ್ಕೆ ಸಹಾಯಕವಾಗಿದೆ.
9) ಮೋಸಂಬಿ ರಸವು ಕಣ್ಣುಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕೆಲವು ಹನಿ ಮೋಸಂಬಿ ರಸವನ್ನು ನೀರಿನಲ್ಲಿ ಹಾಕಿ ನಿಮ್ಮ ಕಣ್ಣುಗಳನ್ನು ತೊಳೆದರೆ ಯಾವುದೇ ಸೋಂಕಿನಿಂದ ನಿಮಗೆ ಪರಿಹಾರ ಸಿಗುತ್ತದೆ.
10) ಮೋಸಂಬಿ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ ಮತ್ತು ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಮೋಸಂಬಿ ಜ್ಯೂಸ್ ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆ. ಇದರಿಂದ ಚರ್ಮದ ಕಾಂತಿ ಕೂಡ ಹೊಳೆಯುತ್ತದೆ.
11) ಮೋಸಂಬಿ ರಸವನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಬೆವರಿನ ದುರ್ವಾಸನೆಯ ಸಮಸ್ಯೆ ದೂರವಾಗುತ್ತದೆ
*ನೆನಪಿಡಿ:*
ಮೋಸಂಬಿರಸ ಕುಡಿಯುವುದಕ್ಕಿಂತ ಇಡಿ ಮೋಸಂಬಿಯ ತಿರುಳನ್ನು ತಿನ್ನುವುದು ಇನ್ನೂ ಹೆಚ್ಚಿನ ಲಾಭಗಳನ್ನು ನೀಡುತ್ತದೆ. ಆದ್ದರಿಂದ, ಮೋಸಂಬಿ ಅಥವಾ ಇತರ ಹಣ್ಣುಗಳ ರಸವನ್ನು ಮಾತ್ರ ಕುಡಿಯುವ ಬದಲು ಹಣ್ಣುಗಳನ್ನು ತಿನ್ನಿ. ಹಣ್ಣು ಹಾಗು ತರಕಾರಿಗಳನ್ನು ಕುಡಿಯುವುದಕ್ಕಿಂತ ತಿನ್ನುವುದೇ ಲೇಸು.
Tuesday, March 4, 2025
*ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಅನುಗ್ರಹ ಪ್ರಾಪ್ತಿ ?*
*ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಅನುಗ್ರಹ ಪ್ರಾಪ್ತಿ ?*
ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗಿಯೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ.
*ರವಿಯ ಅನುಗ್ರಹ* : ಬೆಳಗಿನ ಜಾವ ಬೇಗನೆ ಎದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಸೂರ್ಯನ ಕಿರಣದಲ್ಲಿರುವ 'ಡಿ' ಮತ್ತು 'ಇ' ಪ್ರೊಟೀನ್ ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ.
*ಚಂದ್ರನ ಅನುಗ್ರಹ* : ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ.
*ಕುಜನ ಅನುಗ್ರಹ* : ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ 'ಅನ್ನಂ ಬ್ರಹ್ಮ' ಎಂಬ ವೇದವಾಕ್ಯವನ್ನು ಗೌರವಿಸಬೇಕು. ಆಹಾರ ಪದಾರ್ಥವನ್ನು ವೇಸ್ಟ್ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು.
*ಬುಧನ ಅನುಗ್ರಹ* : ಬುಧ ಬುದ್ದಿಕಾರಕ. ಬುದ್ಧಿ ಹೀನನಾದರೆ ಮಾಡುವ ಕೆಲಸದಲ್ಲೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ವಿವೇಕವಿರಬೇಕು.
*ಗುರುವಿನ ಅನುಗ್ರಹ* : ಗುರು ಸಕಲ ದೋಷ ನಿವಾರಕ. ಮಾರ್ಗಸೂಚಕ. ನಮ್ಮಲ್ಲೊಂದು ಲೋಕೋಕ್ತಿಯಿದೆ. 'ಕೋಶ ಓದಬೇಕು ಲೋಕ ಸುತ್ತಬೇಕು' ಅಂತ. ಅರಿವೇ ಗುರು ಎನ್ನುವಂತೆ ಸುತ್ತಣ ಪರಿಸರವನ್ನು ನೋಡಿ ಕಲಿಯಬೇಕು. ಗಿಡ, ಮರಗಳಿಗೆ ನೀರೆಯುವ ಮೂಲಕ ಅವುಗಳನ್ನು ಪೋಷಿಸಬೇಕು. ಗುರು ಹಿರಿಯರಿಗೆ ಗೌರವ ಕೊಡುವುದು ಅತ್ಯಂತ ಮುಖ್ಯ.
*ಶುಕ್ರನ ಅನುಗ್ರಹ* : ಶುಕ್ರನೆಂದರೆ ವೀರ್ಯ. ಪೌಷ್ಟಿಕದಾಯಕ ಆಹಾರ ಸೇವನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಮನೆಗೆ ತರಬೇಕು. ಕುಟುಂಬ ಸೌಖ್ಯಕ್ಕೆ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು.
*ಶನಿಯ ಅನುಗ್ರಹ* : ಶನಿ ಕರ್ಮಾಧಿಪತಿ. ಕರ್ಮಸೂಚಕವಾದ ಪಾದರಕ್ಷೆಗಳನ್ನು ಮನೆಯಾಚೆಯೇ ಬಿಡಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು.
*ರಾಹುವಿನ ಅನುಗ್ರಹ* : ಹೊರಗಿನ ಪಾಪ ಮನೆಯೊಳಗೆ ಎನ್ನುವ ಮಾತಿನಂತೆ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಕೈಕಾಲುಗಳನ್ನು ತೊಳೆದುಕೊಳ್ಳಿ. ಮೂತ್ರ ಅಥವಾ ಮಲ ವಿಸರ್ಜನೆಯ ನಂತರ ಶುದ್ಧಾಚಮನ ಮಾಡಿ. ಕೈಕಾಲುಗಳನ್ನು ತೊಳೆಯಿರಿ.
*ಕೇತುವಿನ ಅನುಗ್ರಹ* : ಅತಿಥಿ ದೇವೋ ಭವ ಎನ್ನುವುದು ಶಾಸ್ತ್ರೋಕ್ತಿ. ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದರಿಂದ ಉತ್ತಮ ಫಲಗಳನ್ನು ಕಾಣಬಹುದು.
Subscribe to:
Posts (Atom)
29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .
29 ವರ್ಷದ ದೃಷ್ಟಿಹೀನ ಮಹಿಳೆ ಜಗತ್ತಿನ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ಬರೆದಿದ್ದಾರೆ .
Green World
-
SAVE NATURE, HEALTHY, WEALTHY & WISE. dgnsgreenworld FAMILY. Picture of Kaner (Yellow Oleander): This is an large orname...