www.dgnsgreenworld.blogspot.com

Sunday, September 3, 2023

ಶ್ರೀ ಕೃಷ್ಣ ಮತ್ತು ಎಂಟರ ಸಂಖ್ಯೆಇದರ ಒಂದು ಕಿರು ಮಾಹಿತಿ.

ಶ್ರೀ ಕೃಷ್ಣ ಮತ್ತು ಎಂಟರ ಸಂಖ್ಯೆ
ಇದರ ಒಂದು ಕಿರು ಮಾಹಿತಿ

 ಮೊದಲನೆಯದಾಗಿ ಭಗವಾನ್ ಶ್ರೀಕೃಷ್ಣ ದೇವಕಿ ಹಾಗೂ ವಸುದೇವರ
8 ನೇ ಮಗನಾಗಿ ಭೂಮಿಯ ಮೇಲೆ ಜನ್ಮತಾಳಿದ.

 ಇನ್ನು ಭಗವಾನ್ ಕೃಷ್ಣನ ಜನನವಾಗಿದ್ದು 8ನೇ ಮನ್ವಂತರದ, ಅಷ್ಟಮಿಯ ದಿನವೇ ಎಂಬುದು ಕೂಡಾ ಸತ್ಯ.

 ಅದಕ್ಕೆ ಕೃಷ್ಣಾಷ್ಟಮಿ ಎಂದೇ ಆ ದಿನವನ್ನು ಸಂಭ್ರಮದಿಂದ ಆಚರಿಸಿ ಆನಂದಿಸುವರು ಭಕ್ತವೃಂದ.

ಎರಡನೆಯದಾಗಿ, ಶ್ರೀಕೃಷ್ಣ ಭಗವಾನನಿಗೆ ಅಷ್ಟ ಪತ್ನಿಯರು ಎಂಬುದು ಒಂದು ಪ್ರಮುಖ ವಿಷಯ

 ರುಕ್ಮಿಣಿ, ಜಾಂಭವತಿ, ಸತ್ಯಭಾಮೆ, ಮಿತ್ರವಿಂದ, ಲಕ್ಷ್ಮಣಾ, ಸತ್ಯ, ಭದ್ರ, ಕಾಳಿಂದಿ.

 ಈ ಎಂಟು ಜನ ಭಗವಂತನ ಕೃಷ್ಣ ಅವತಾರದಲ್ಲಿ ಆತನ ಅಷ್ಟಭಾರ್ಯೆಯರೇ ಎಂದು ಆರಾಧಿಸಲ್ಪಟ್ಟಿದ್ದಾರೆ. 

ಇನ್ನು ಶ್ರೀಕೃಷ್ಣ ಪರಮಾತ್ಮನ ಆಪ್ತ ಮಿತ್ರರ ಸಂಖ್ಯೆ ಕೂಡಾ ಎಂಟು,

 ಶ್ರೀಧಾಮ, ಸುಧಾಮ, ಸುಬಲ,ಸ್ತೋಕ ಕೃಷ್ಣ, ಅರ್ಜುನ, ವೃಷಬಂಧು,ಸುಭಗ್ , ಬಲಿ, ಪ್ರಾಣಭಾನು ಎಂಬವವರೇ ಆ ಅಷ್ಟ ಮಿತ್ರರು. 

ಈ ಹೆಸರುಗಳು ಆದಿ ಪುರಾಣದಲ್ಲಿ ನಮೂದಿತವಾಗಿವೆ. ಹೀಗೆ ಪತ್ನಿಯರು ಎಂಟು , ಆಪ್ತ ಮಿತ್ರರೂ ಎಂಟು ಭಗವಾನ್ ಶ್ರೀಕೃಷ್ಣ ಪರಮಾತ್ಮನಿಗೆ.

ಇನ್ನು ಪತ್ನಿಯರು ಹೊರತು ಪಡಿಸಿದರೆ, ಶ್ರೀಕೃಷ್ಣ ಪರಮಾತ್ಮನಿಗೆ ಇದ್ದ ಆಪ್ತ ಸಖಿಯರ ಸಂಖ್ಯೆ ಕೂಡಾ ಎಂಟು
ಎಂದರೆ ಆಶ್ಚರ್ಯವಾಗುತ್ತದೆ.

 ಚಂದ್ರಾವಳಿ, ಭದ್ರಾ, ಶ್ಯಾಮಾ, ಶೈವ್ಯಾ, ಪಗ್ಯಾ, ರಾಧಾ, ಲಲಿತಾ, ವಿಶಾಖಾ ಎಂಬುವವರೇ ಆ ಅಷ್ಟ ಸಖಿಯರು.

 ಆದರೆ ಈ ಹೆಸರುಗಳು ಕೆಲವೆಡೆ ಬೇರೆಯಾಗಿ ನಮೂದಿಸಲಾಗಿದ್ದರೂ, ಸಾಮ್ಯತೆಯಂತೂ ಇದ್ದೇ ಇದೆ. 

ಇನ್ನು ಕೃಷ್ಣನ ಹೆಸರಿನಿಂದ ಆತನ ಮಹಿಮೆಗಳಿಂದ ಪಾವನವೆನಿಸಿರುವ ಕೃಷ್ಣ ನಗರಗಳೆಂದೇ ಖ್ಯಾತಿ ಪಡೆದಿರುವ ಪವಿತ್ರ ಎಂಟು ಸ್ಥಳಗಳಿವೆ. 

ಮಥುರಾ, ಗೋಕುಲ, ನಂದಗಾಂವ್, ಬೃಂದಾವನ, ಗೋವರ್ಧನ, ಬರ್ಸಾನಾ, ಮಧುವನ ಹಾಗೂ ದ್ವಾರಿಕಾ. ಈ ಅಷ್ಟನಗರಗಳು ಶ್ರೀಕೃಷ್ಣ ನು ನಡೆದಾಡಿದ ಪಾವನ ಭೂಮಿ ಎನಿಸಿದ್ದವು. 

ಒಟ್ಟಾರೆ ಶ್ರೀಕೃಷ್ಣ ಹಾಗೂ ಅಷ್ಟ ಅಂದರೆ ಎಂಟು ಈ ಸಂಖ್ಯೆಗೆ ಇರುವ ಸಂಬಂಧ ನಿಜವಾಗಿಯೂ ರೋಚಕ ಹಾಗೂ ಅದ್ಭುತ.

ಕೃಷ್ಣಾರ್ಪಣಮಸ್ತು.

ಸರ್ವಜನ ಸುಖಿನೋಭವಂತು.

No comments:

Post a Comment

welcome to dgnsgreenworld Family

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ ?

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ? ​ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿಯನ್ನು ಸಂಪೂರ್ಣವಾಗಿ ...

Green World