www.dgnsgreenworld.blogspot.com

Sunday, June 28, 2020

ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ...

'' ಸರ್...  ಹೆಂಡ್ತಿ ಗರ್ಭಿಣಿಯಾದಳು. ಸ್ವಲ್ಪ ತಡವಾಗಿ ಸಾಕು ಅಂತ ನಾವು ನಿರ್ಧರಿಸಿದ್ದೆವು.  ಆದರೆ ಎಲ್ಲೋ ಎಡವಟ್ಟಾಗೋಯ್ತು....... 
ಮಾತ್ರೆಗಳನ್ನೂ ನಂಬಲಾಗದಾಯಿತು......
ಇದು ಆರನೇಯ ತಿಂಗಳು...
ನನಗೆ ರಜೆ ಇಲ್ಲ....
ಆಗ ಆಕೆ ಒಂಟಿಯಾಗುತ್ತಾಳೆ...."

ಹರೀಶನಿಗೆ ಯಾವಾಗಲೂ ಪರಿಹಾರಗಳನ್ನು ಸೂಚಿಸುತ್ತಿದ್ದ ಮಾಸ್ಟರ್ ಆಗಿರುವ ವಿನಾಯಕ ಮಾಸ್ಟರ್ ಹತ್ತಿರ ಆತ ತನಗೆದುರಾದ ಸಮಸ್ಯೆಯನ್ನು ಹೇಳಿಕೊಂಡ....

ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ. 

ಏಳನೆಯ ತಿಂಗಳು ಅಡ್ಮಿಟ್ ಮಾಡಬೇಕು. ಪ್ರಸವಾನಂತರದ ಚಿಕಿತ್ಸೆಗಳ ಬಳಿಕ ಮನೆತಲುಪಿಸುತ್ತಾರೆ. ಅಡ್ರೆಸ್ ಮತ್ತು ಫೋನ್ ನಂಬರ್ ಬರೆದುಕೋ..........

ಆತ ಅಡ್ರೆಸ್ ಮತ್ತು ಫೋನ್ ನಂಬರ್ ಬರಕ್ಕೊಂಡು ಮಾಸ್ಟರ್ ಗೆ ಥ್ಯಾಂಕ್ಸ್ ಹೇಳಿ ಹಿಂತಿರುಗಿದ......

ತಿಂಗಳುಗಳ ನಂತರ ..... ಆತ ಪುನಃ ಮಾಸ್ಟರನ್ನು ಭೇಟಿಯಾಗುತ್ತಾನೆ.....

 '' ಸರ್ ... ಮಗುವಿಗೆ ನಾಲ್ಕು ತಿಂಗಳಾಗಿದೆ..... ಪತ್ನಿಗೆ ರಜೆ ಮುಂದುವರಿಸಲು ಸಾಧ್ಯವಿಲ್ಲ.... ನನಗೆ ಪ್ರಮೋಶನೂ ಆಗಿದೆ....."

ಮಾಸ್ಟರ್ ಗೆ ವಿಷಯ ಅರ್ಥವಾಯಿತು. 

ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ.

ಮೂರು ವಯಸಿನವರೆಗೆ ಮಗುವನ್ನು ನೋಡಿಕೊಳ್ಳುವ ಒಂದು ಪ್ಯಾಕೇಜ್..... ಬೆಳಿಗ್ಗಿನಿಂದ ಸಂಜೆವರೆಗೂ ನೋಡಿಕೊಳ್ಳುತ್ತಾರೆ.... ಮತ್ತೆ ಫುಲ್ ಟೈಮ್ ಬೇಕಾದರೆ ಅದಕ್ಕೆ ಸ್ವಲ್ಪ ರೇಟು ಹೆಚ್ಚು ಕೊಡಬೇಕಾಗುತ್ತೆ......
ಫೋನ್ ನಂಬರ್ ಬರೆದುಕೊ....

ಆತ ಸಂತೋಷದಿಂದ ಮಾಸ್ಟರ್ ಗೆ ನಮಿಸಿ ಹಿಂತಿರುಗಿದ.....

ಮೂರು ವರ್ಷಗಳ ಬಳಿಕ ಆತ ಪುನಃ ಮಾಸ್ಟರನ್ನು ಕಾಣಲು ಹೋಗುತ್ತಾನೆ

" ಮಾಸ್ಟರ್ ಮಗುವಿಗೆ ನಾಲ್ಕು ವರ್ಷವಯಸಾಗುತ್ತಿದೆ. ನಮ್ಮ ಕೆಲಸಗಳು ತುಂಬಾ ಬ್ಯುಸಿಯಾಗಿದೆ ಮಗುವಿನ ವಿದ್ಯಾಭ್ಯಾಸ....!?"

 ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ...

'' ಸ್ವಲ್ಪ ದೊಡ್ಡ ಪ್ಯಾಕೇಜಾಗಿದೆ. ಡಿಗ್ರಿ ಮುಗಿಯುವವರೆಗೂ ನೋಡಿಕೊಳ್ಳುತ್ತಾರೆ. ಮಗುವನ್ನು ತಿಂಗಳಿಗೊಮ್ಮೆ ಹೋಗಿ ನೋಡ್ಕೊಂಡು ಬರಬಹುದು ಅಡ್ರೆಸ್ ಬರೆದುಕೋ....." 

ಆತ ಮನಸಲ್ಲಿ ನೆನೆದ ಎಷ್ಟು ಒಳ್ಳೆಯ ಮಾಸ್ಟರ್.... ಆತ ಅಡ್ರೆಸ್ ಬರೆದು ಮಾಸ್ಟರ್ ಗೆ ಧನ್ಯವಾದಗಳನ್ನು ಹೇಳಿ ಅಲ್ಲಿಂದ ಹಿಂತಿರುಗುತ್ತಾನೆ.....

ವರ್ಷಗಳನೇಕ ಉರುಳಿದವು....

ಮಾಸ್ಟರನ್ನು ಹುಡುಕಿಕೊಂಡು ಒಬ್ಬ ಯುವಕ ಬರುತ್ತಾನೆ... 

ಮಾಸ್ಟರ್ ನ ಕಣ್ಣುಗಳು ಮಂಜಾಗತೊಡಗಿತು. ನೆನಪಿನ ಶಕ್ತಿಯೂ ಕಡಿಮೆಯಾಗಿತು.

ಯುವಕ ತನ್ನನ್ನು ಪರಿಚಯಿಸಿದ.

ಮಾಸ್ಟರ್ - ಓ... ಹರೀಶನ ಮಗನಾ..... ?

ಯುವಕ - ಹೌದು ಸರ್.....  ಪಪ್ಪ ಮಾಸ್ಟರ್ ನ ಬಗ್ಗೆ ಯಾವಾಗಲೂ ಹೇಳುತ್ತಾರೆ...

ಯುವಕ ಬಂದ ವಿಷಯವನ್ನು ಹೇಳುತ್ತಾನೆ -

" ಪಪ್ಪನಿಗೂ ಮಮ್ಮಿಗೂ ನೆನಪುಶಕ್ತಿ ತುಂಬಾ ಕಡಿಮೆಯಾಗಿದೆ. ಓವರಾಗಿ ಮಾತಾಡುತ್ತಾರೆ... ಮಕ್ಕಳ ಹಾಗೆ ಹಟ ಮಾಡುತ್ತಾರೆ. ವಯಸುಕೂಡಾ ಹೆಚ್ಚಾಯಿತು. ನನಗಂತೂ ಸಮಯವೇ ಇಲ್ಲ.... ಪತ್ನಿಯೂ ಒಳ್ಳೆಯ ಸಂಬಳದ ಕೆಲಸದಲ್ಲಿದ್ದಾಳೆ..... ಮತ್ತೆ ಆಕೆ ಇವನ್ನೆಲ್ಲಾ ಸುದಾರಿಸಿಕೊಂಡು ಹೋಗುವ ಹಳ್ಳಿಯ ಹುಡುಗಿಯಲ್ಲ..."

ಮಾಸ್ಟರ್ ಗೆ ಎಲ್ಲವೂ ಅರ್ಥವಾಗೋಯ್ತು.

ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ...‌

" ಒಳ್ಳೆಯ ಪರಿಚರಣೆಯಿಂದ ನೋಡಿಕೊಳ್ಳುವ ಒಂದು ಪ್ಯಾಕೇಜ್..... ಸಾವನ್ನಪ್ಪಿದರೆ ಅವರವರ ಮತಪ್ರಕಾರ ಶವಸಂಸ್ಕಾರವನ್ನೂ ಮಾಡುತ್ತಾರೆ.... ಸಾಧಾರಣ ವೃದ್ಧಾಶ್ರಮ ಎಂದೇ ಹೇಳಬಹುದು..... ಅಡ್ರೆಸ್ ಮತ್ತು ಫೋನ್ ನಂಬರ್ ಬರೆದುಕೊ" 

ಯುವಕ ಸಂತೋಷದಿಂದ ಅಡ್ರೆಸ್ ಮತ್ತು ಫೋನ್ ನಂಬರನ್ನು ಬರಕ್ಕೊಂಡ. ನಂಬರ್ ತಪ್ಪದ ಹಾಗೆ ಮತ್ತೊಮ್ಮೆ ನಂಬರನ್ನು ಓದಿ ಕೇಳಿಸಿದ....

ಮಾಸ್ಟರ್ ಗೆ ನಮಿಸಿ ಅಲ್ಲಿಂದ ಹಿಂತಿರುಗಿದ...

ಮಾಸ್ಟರ್ ನ ಕಣ್ಣಿಂದ ಎರಡು ಹನಿ ಕಣ್ಣೀರು ಉದುರಿದವು......

ಮಾಸ್ಟರ್ ಯೋಚಿಸಿದರು - " ನಾವು ಏನನ್ನು ಕೊಡುತ್ತೇವೋ ಅದುವೇ ನಮಗೆ ಮರಳಿ ಸಿಗುವುದು "
dgnsgreenworld 

Saturday, June 20, 2020

ನಿನ್ನ ಮೆಚ್ಚಲೆಬೇಕು ಕರೋನಾ..*👌👌???

*ನಿನ್ನ ಮೆಚ್ಚಲೆಬೇಕು ಕರೋನಾ..*👌👌

ಕಣ್ಣಿಗೆ ಕಾಣದೆ
ಮಳೆ,ಗಾಳಿ ,ಬಿಸಿಲಿನ್ನು ಲೆಕ್ಕಿಸದೆ ನಿಶ್ಯಬ್ದವಾಗಿ
ಜಗತ್ತಿನಾದ್ಯಂತ ಹಬ್ಬಿದ 
ನಿನ್ನ ಛಲ ಮೆಚ್ಚಲೇಬೇಕು
 ಕರೋನಾ..
 
ಮಸೀದಿ,ಮಂದಿರ, ಚರ್ಚಗಳ ತಂಟೆಗೆ ಹೋದರೆ ಸರಕಾರವೇ ಬೀಳುತ್ತಿತ್ತು,
ರಕ್ತದ ಕೋಡಿ ಹರಿಯುತ್ತಿತ್ತು, 
ಒಂದು ಮಾತನಾಡದೆ 
ಅವುಗಳನ್ನು ಮುಚ್ಚಿಸಿ 
ದೇವರು ಎಲ್ಲಾ ಕಡೆ  ಇದ್ದಾನೆಂದು ತೋರಿಸಿದ ನಿನ್ನ 
ರೀತಿಗೆ ಎಲ್ಲರೂ 
ಮೆಚ್ಚಲೆಬೇಕು ಕರೋನಾ..

ಎಲ್ಲಾ ಟಿವಿಗಳಲ್ಲಿ ಭಯ
ಹುಟ್ಟಿಸುವ ಭವಿಷ್ಯಕಾರರನ್ನು
ಮೂಲೆ ಗುಂಪು ಮಾಡಿದ
ನಿನ್ನ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು ಕರೋನ..

ಒಂದು ತಿಂಗಳು ಮದ್ಯಪಾನ ಇಲ್ಲದೆ ಇರಬಹುದೆಂದು ತೋರಿಸಿಕೊಟ್ಟು ,
ನಂತರ
ಮುಜರಾಯಿ ತೀರ್ಥಕ್ಕಿಂತ
ಅಬಕಾರಿ ತೀರ್ಥವೇ ಮೇಲೆಂದು ತಿಳಿಸಿದ
ನಿನ್ನನ್ನು ಮೆಚ್ಚಲೇಬೇಕು ಕರೋನ..

ಅದ್ದೂರಿತನಕ್ಕೆ ಕಡಿವಾಣ ಹಾಕಿ,
ಮದುವೆಗಳನ್ನು 50 ಜನರನ್ನ ಮಾತ್ರ ಸೇರಿಸಿ
ಸರಳವಾಗಿ, ಅರ್ಥಪೂರ್ಣವಾಗಿ 
ಮಾಡಬಹುದು ಎಂದು ತೋರಿಸಿಕೊಟ್ಟ ನಿನ್ನ ಪರಿಯನ್ನ ಎಲ್ಲರೂ
ಮೆಚ್ಚಲೇಬೇಕು ಕರೋನ..

ಸತ್ತರೆ ಯಾರು ಹಿಂದೆ ಬರಲ್ಲ
ಅಂತ ತಿಳಿಸಿ
ಅಂತ್ಯ ಸಂಸ್ಕಾರಕ್ಕೆ
ನಿಜವಾದ 
ದುಃಖತಪ್ತರು 20 ಜನರು ಸಾಕು 
ಎಂದು ಅರ್ಥೈಸಿದ ನಿನ್ನ ರೀತಿಯನ್ನ
ಮೆಚ್ಚಲೇಬೇಕು  ಕರೋನ..

ಮಾಲ್,ಮಲ್ಟಿಪ್ಲೆಕ್ಸ್,ಪಬ್
ಕ್ಲಬ್ ಮುಚ್ಚಿ
ಬಸ್ ,ರೈಲು, ವಿಮಾನಗಳಿಲ್ಲದೆ
ಸಿನೆಮಾ ನಾಟಕ ಬಿಟ್ಟು
ಮನೆಯವರ ಜೊತೆಗೆ ಸುಖವಾಗಿ ಇರಬಹುದೆಂದು ತೋರಿಸಿ ಕೊಟ್ಟ ನಿನ್ನ ಪ್ರೀತಿ ಮೆಚ್ವಲೆಬೇಕು 
ಕರೋನಾ..

ಮಾರ್ಕ್ಸ್ ಪಡೆಯುವುದೆ 
ಜೀವನವಲ್ಲ..
ನಿಜವಾದ ಪಾಠಶಾಲೆ ಜೀವನಾನುಭವ , 
ನಮ್ಮ ಅಂತರಾತ್ಮವೇ ನಿಜವಾದ 
ಪರೀಕ್ಷೆಯ ಕೊಠಡಿ ಎಂದು ತೋರಿಸಿದ ಚಾಣಕ್ಯನ ನೀತಿ 
ಮೆಚ್ಚಲೇಬೇಕು ಕರೋನ..

ಊರು ಬಿಟ್ಟುಎಲ್ಲೇಲ್ಲೋ ಹೋದವರನ್ನು ಮತ್ತೆ ಕರೆಯಿಸಿ
ಹುಟ್ಟಿದ ಊರು , ಒಕ್ಕಲುತನ
ಹೊಟ್ಟೆಗೆ ಅನ್ನ ಹಾಕುತ್ತವೆಂದು 
ತಿಳಿಸಿದ ನಿನ್ನ ಮಹಿಮೆ
ಮೆಚ್ಚಲೇಬೇಕು 
ಕರೋನ..

ಎಷ್ಟು ಆಸ್ತಿ ,ಬಂಗಾರ ಇದ್ದರೂ
ಆರೋಗ್ಯ ಮುಖ್ಯ ,
ಬಡವ ,ಶ್ರೀಮಂತ ಯಾರಾದರೂ  ಪ್ರಾಣ ಮುಖ್ಯ
ಎಂದು ಮತ್ತೊಮ್ಮೆ ತಿಳಿಸಿದ  ನಿನಗೆ ಮೆಚ್ಚಲೇಬೇಕು ಕರೋನ..

ತಂತ್ರಜ್ಞಾನದಿಂದ
ಎಲ್ಲಾ ಗ್ರಹಗಳನ್ನು ಸುತ್ತಿದರೂ,
ಮನುಷ್ಯ ವಿಜ್ಞಾನದಲ್ಲಿ ಎಷ್ಟೆ ಮುಂದುವರೆದರೂ
ಕಾಲಕ್ಕೆ ಶರಣಾಗಬೇಕೆಂದು
ತಿಳಿಸಿದ ಪರಿ
ಮೆಚ್ಚಲೇಬೇಕು ಕರೋನ..

ಅಣು ಬಾಂಬ್ ,ಯುದ್ಧ ವಿಮಾನ ,ಟ್ಯಾಂಕರ್ ಗಳು 
ಸಾವಿರ ಇದ್ದು ,ಮುಂದುವರಿದ ದೇಶವೆಂದು ಮೆರೆಯುತ್ತಿದ್ದರೂ
ಸಾಂಕ್ರಾಮಿಕ ರೋಗಕ್ಕೆ ಶರಣಾಗಬೇಕೆಂದು
ತಿಳಿಸಿದ್ದು 
ಮೆಚ್ಚಲೇಬೇಕು ಕರೋನ..

ಸಸ್ಯಹಾರ ಶ್ರೇಷ್ಠ ಎಂದು ಹೇಳುತಾ
ಪ್ರಕೃತಿಯನ್ನು ಕಾಪಾಡಿದರೆ
ನಾವು ಉಳಿಯುತ್ತೆವೆ
ಎಲ್ಲಾ ಧರ್ಮಗಳು ಪೊಳ್ಳು
ನಿಜವಾದ ಧರ್ಮ ಮನುಜ
ಧರ್ಮವೆಂದು ಹೇಳಿದ್ದು
ಮೆಚ್ಚಲೇಬೇಕು ಕರೋನ..

ಜಗತ್ತಿನ ಕಹಿ ಸತ್ಯಗಳನ್ನು
ಬಿಡಿ ,ಬಿಡಿಯಾಗಿ 
ತೋರಿಸಿ ಕೊಟ್ಟು
ಸನ್ಮಾರ್ಗದಿ 
ನಡೆಯಿರೆಂದು ಹೇಳಿದ
ನಿನ್ನ ಶಕ್ತಿ ,ಯುಕ್ತಿಯ ಕರೋನಾಗೀತ
ಎಲ್ಲರೂ ಮೆಚ್ಚಲೇಬೇಕು ಕರೋನ....   dgns                        ಸಾಕಿನ್ನು ಮನುಷ್ಯ ಸುಸ್ತಾಗಿದ್ದಾನೆ. ಬಿಟ್ಟು ಬಿಡು ಬದುಕಲಿ..... ಇನ್ನಾದರೂ ಪಶ್ಚಾತ್ತಾಪದೊಂದಿಗೆ.....  ಇಷ್ಟಕ್ಕೂ ಬುದ್ದಿ ಬರಲಿಲ್ಲವೆಂದರೆ.........? ಭಗವಂತನ ಆಟ ಬಲ್ಲವರಾರು?????                                          dgnsgreenworld  ✍️✍️✍️

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World