www.dgnsgreenworld.blogspot.com

Wednesday, January 8, 2020

ಹಾಲು ತುಪ್ಪವಾಗಿ ದೀಪದ ಮೂಲಕ ದೇವರಿಗೆ ಅರ್ಪಣೆ ಆಗುವ ಬಗ್ಗೆ

SAVE NATURE, HEALTHY, WEALTHY & WISE. dgnsgreenworld Family

*ಸಂಸ್ಕೃತದಲ್ಲಿ ಒಂದು ಕಥೆ ಇದೆ*...

*ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ*..
 *ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ*..

*ಆಗ ಹಾಲು ಹೇಳಿತಂತೆ*..' *ದೇವರೇ*.. *ನಾನು ಹಾಲು*
 *ಆಕಳು / ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ*...
 *ಆದರೆ ಈ ಪಾಪಿ ಮಾನವ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ*..
*ನನಗೆ ಹಾಲಾಗೇ ಇರುವಂತೆ ವರ ಕೊಡು ' ಎಂದು ಬೇಡಿಕೊಂಡಿತಂತೆ*..

*ಆಗ ದೇವರು ನಕ್ಕು*.
*' ಎಲೈ* .. *ಹಾಲೇ ಇಲ್ಲಿ ಕೇಳು*.. *ನೀನು ಹಾಲಾಗಿ ಇರುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು*..

*ನೀನು ಹಾಲಾದರೆ ಒಂದು ದಿನ ಮಾತ್ರ ಬದುಕುವೆ*.. *ಹಾಲಿಗೆ ಹೆಪ್ಪಾಕಿದರೆ ಎರಡು ದಿನ ಬದುಕುವೆ*.. *ಮೊಸರಾಗಿ ಕಡೆದರೆ*.. *ಹುಳಿ ಹುಳಿಯಾಗಿ ಮೂರನೇ ದಿನ ಬದುಕುವೆ*..
*ಮಜ್ಜಿಗೆಯಿಂದ ಬಂದ ಬೆಣ್ಣೆಯಾದರೆ ವಾರಗಟ್ಟಲೆ ಬದುಕುವೆ*...
*ಬೆಣ್ಣೆಯನ್ನು  ಹದವಾಗಿ ಕಾಯಿಸಿ*.. *ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಗುಡುವ ತುಪ್ಪವಾಗುವೆ ತುಂಬಾ ದಿನ ಬದುಕುವೆ ಹಾಗೂ ಔಷಧವಾಗುವೆ*..
*ಆ ತುಪ್ಪದಿಂದ ದೀಪ ಹಚ್ಚಿದರೆ ನನಗೆ ಬೆಳಕಾಗುವೆ*. 

*ಈಗ ಹೇಳು ಒಂದು ದಿನ   ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುವೆಯಾ*..
*ಅಥವಾ ಕ್ಷಣ ಕ್ಷಣವೂ*.. *ಅನುದಿನವೂ* .. *ದಿನ ದಿನವೂ*..  *ಬೆಳೆದು*.. *ರೂಪಾಂತರ ಪಡೆದು* ..  *ಭಗವಂತನಿಗೆ ಬೆಳಕಾಗುವೆಯಾ ' ಎಂದು ದೇವರು ಪ್ರಶ್ನಿಸಿದನಂತೆ*...

*ದೇವರ ಮಾತಿಗೆ*..
*ಹಾಲು ಮೂಕವಾಯಿತು*..
*ಶರಣಾಯಿತು*..
*ತನ್ನ ಮನದ ಅಂಧಕಾರ*.. *ಮದದಿಂದ ಹೊರಬಂತು*..
*ದೇವರ ಮುಂದೆ ಪ್ರಜ್ವಲಿಸುವ ಬೆಳಕಾಯಿತು*..

*ನಾವು ಹಾಗೇ ಅಲ್ವಾ*.. *ನಮ್ಮ ಮನಸ್ಸಿಗೆ ಯಾರೋ ಹುಳಿ ಹಿಂಡಿದರೆಂದು ಕೊರಗದೆ*..
 *ಹಾಲಾಗಿ ಮೊಸರಾಗಿ ಮಜ್ಜಿಗೆ ಬೆಣ್ಣೆ ತುಪ್ಪವಾಗಿ ದೇವರ ಮುಂದೆ ದೀಪವಾಗುವ ಸಾರ್ಥಕ ಬದುಕಿಗೆ ಬದಲಾಗೋಣ*..

ವಂದನೆಗಳೊಂದಿಗೆ

No comments:

Post a Comment

welcome to dgnsgreenworld Family

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ ?

ವಿಜ್ಞಾನ ಮತ್ತು ತಂತ್ರಜ್ಞಾನದ ಶರವೇಗದ ಬೆಳವಣಿಗೆಯಿಂದ,ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಏನಾಗುತ್ತಿದೆ? ​ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿಯನ್ನು ಸಂಪೂರ್ಣವಾಗಿ ...

Green World