dgns*ಕರ್ಮ ಸಿದ್ದಾಂತ*:-ಕಣ್ಣುಗಳು ಮರದ ಮೇಲಿನ ಮಾವಿನ ಹಣ್ಣನ್ನು ನೋಡಿದವು....ತಿನ್ನುವ ಇಚ್ಛೆ ಜಾಗ್ರತವಾಯಿತು....ಕಣ್ಣುಗಳೋ ಹಣ್ಣನ್ನು ಕೀಳಲಾರವು....ಅದಕ್ಕೆ ಅಂತಲೇ ಕಾಲುಗಳು ಓಡಿದವು ಮರದ ಕಡೆಗೆ ಹಣ್ಣನ್ನು ಕೀಳಲು....ಮರದ ಹತ್ತಿರ ಹೋದರೂ ಕಾಲುಗಳು ಕೀಳಲಾರದಾದವು ಹಣ್ಣನ್ನು.......ಆಗ ಕೈ ಮುಂದಾಗಿ ಮೇಲಕ್ಕೆ ಹೋದವು ಹಣ್ಣನ್ನು ಕೀಳಲು....ಕೈಯಿಂದ ಕೀಳಲಾಯಿತು ಹಣ್ಣನ್ನು....ಆದರೆ.....ಕೈ,ಕಾಲು ಮತ್ತು ಕಣ್ಣುಗಳು ಹಣ್ಣನ್ನು ತಿನ್ನಲಾಗಲಾರದಾದವು....ಆಗ ಹಣ್ಣನ್ನು ಬಾಯಿಯಿಂದ ತಿನ್ನಲಾಯಿತು....ಅದು ಬಾಯಿಯಲ್ಲೂ ಉಳಿಯದೆ ಹೋಯಿತು ಹೊಟ್ಟೆಯಲ್ಲಿ......ಆಗ ಬಂದ ತೋಟದ ಮಾಲಿ ಇದನ್ನು ನೋಡಿ, ಬಡಿಗೆಯಿಂದ ಬಡಿದ ಬೆನ್ನಿಗೆ....ಬೆನ್ನು ಹೇಳಿತು..*ನನ್ನನ್ನೇಕೆ ಬಡಿಯುತ್ತೀರಿ ?* ... ನಾನೆಲ್ಲಿ ಹಣ್ಣನ್ನು ತಿಂದೆ ?....*ಬಡಿಗೆಯಿಂದ ಹೊಡೆತ ಬಿದ್ದದ್ದು ಬೆನ್ನಿಗೆ ಆದರೆ ನೀರು ಬಂದಿದ್ದು ಕಣ್ಣುಗಳಲ್ಲಿ*...ಏಕೆಂದರೆ ಮೊದಲನೇ ತಪ್ಪು ಕಣ್ಣುಗಳದ್ದು...ಕಣ್ಣುಗಳೇ ಮೊದಲು ಮಾವಿನ ಹಣ್ಣನ್ನು ನೋಡಿದ್ದಲ್ಲವೇ ...!!!!! ಇದೇ*ಕರ್ಮ ಸಿದ್ಧಾಂತ*....*ಕರ್ಮವು ಯಾವಾಗಲೂ ತನ್ನ ವಿಳಾಸವನ್ನು ಮರೆಯುವುದಿಲ್ಲ, ಸರಿಯಾದ ಸಮಯಕ್ಕೆ ಮತ್ತು ಸೂಕ್ತ ಸ್ಥಳಕ್ಕೆ ಹೋಗಿ ಮುಟ್ಟಿಯೇ ತೀರುತ್ತದೆ ಕರ್ಮ*. ವಂದನೆಗಳೊಂದಿಗೆ
www.dgnsgreenworld.blogspot.com
Friday, June 21, 2019
ಕರ್ಮ ಸಿದ್ಧಾಂತ
Subscribe to:
Post Comments (Atom)
ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..
ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...
Green World
-
SAVE NATURE, HEALTHY, WEALTHY & WISE. dgnsgreenworld FAMILY. Picture of Kaner (Yellow Oleander): This is an large orname...
No comments:
Post a Comment
welcome to dgnsgreenworld Family