www.dgnsgreenworld.blogspot.com

Thursday, April 25, 2024

ಹಲವು ಮುಂಚೂಣಿ ದೇಶಗಳಲ್ಲಿ ಹೆಮ್ಮೆಯಿಂದ ಯಶಸ್ಸನ್ನು ಸಾಧಿಸುತ್ತಲೆ ಬಂದಿರುವ *_ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ಅನ್ನು_* ಭಾರತದಲ್ಲಿ ಮಾತ್ರ ಕೀಳಾಗಿ ಕಾಣಲು ಕಾರಣವೇನು?

ಹಲವು ಮುಂಚೂಣಿ ದೇಶಗಳಲ್ಲಿ ಹೆಮ್ಮೆಯಿಂದ ಯಶಸ್ಸನ್ನು ಸಾಧಿಸುತ್ತಲೆ ಬಂದಿರುವ *_ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ಅನ್ನು_* ಭಾರತದಲ್ಲಿ ಮಾತ್ರ ಕೀಳಾಗಿ ಕಾಣಲು ಕಾರಣವೇನು?

ಇದಕ್ಕೆ ನಮ್ಮ ದೇಶದ *_ಕಲಿಕಾ ವ್ಯವಸ್ಥೆ_*(Education System)  ಕಾರಣ. ಹಿರಿಯರಿಂದ ಇಡಿದು ಮನೆಯವರ ವರೆಗೂ, ಅಕ್ಕಪಕ್ಕದವರಿಂದ ಇಡಿದು ನಮ್ಮ ಶಾಲಾ ಕಾಲೇಜುಗಳ ಶಿಕ್ಷಕರ ವರೆಗೂ ನಮ್ಮೆಲ್ಲರ Mindset ಅನ್ನು ಯಾವ ರೀತಿ ರೂಪಿಸಿದ್ದಾರೆ ಅಂದರೆ ನಮಗೆ ಚಿಕ್ಕ ವಯಸ್ಸಿನಿಂದಲೂ ಹೇಳಿಕೊಟ್ಟ ಒಂದೇ ಒಂದು ವಿಷಯವೆಂದರೆ ಒಳ್ಳೇ ಮಾರ್ಕ್ ತಗೋ, ಒಳ್ಳೆ ಕಂಪನಿಯಲ್ಲಿ  *_JOB_* ಮಾಡು..!! 

Job ಎಂದರೆ *_(Just Obey the Boss/Join Others Business)_* ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದನ್ನ ಹೇಳಿಕೊಟ್ಟರೆ ಹೊರತು ಯಾರ ಮನೆಯಲ್ಲಿಯೂ ಯಾವ ಅಪ್ಪ ಅಮ್ಮಂದಿರೂ ತಮ್ಮ ಮಕ್ಕಳಿಗೆ #ನೆಟ್‌ವರ್ಕ್_ಮಾರ್ಕೆಟಿಂಗ್_ಬ್ಯುಸಿನೆಸ್ ಮಾಡುವುದನ್ನ ಹೇಳಿ ಕೊಡಲೆ ಇಲ್ಲ ಹಾಗಾಗಿ ಇವತ್ತು ನಮ್ಮ ದೇಶದಲ್ಲಿ ಅವಕಾಶ ಇದ್ದರೂ ಎಷ್ಟೋ ಯುವಕ ಯುವತಿಯರು ವಿಧ್ಯಾಭ್ಯಾಸ ಮುಗಿಸಿ ಕೆಲಸದ ಹುಡುಕಾಟದಲ್ಲಿ ಬ್ಯುಸಿ ಆಗಿಬಿಟ್ಟಿದ್ದಾರೆ. ಕೆಲವರಿಗೆ ಕೆಲಸ ಹುಡುಕುವುದೇ ಒಂದು ಕೆಲಸವಾಗಿ ಬಿಟ್ಟಿದೆ.  

ಅಮೆರಿಕ, ಸಿಂಗಾಪುರ, ಮಲೇಶಿಯಾ ಮೊದಲಾದ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ವಿಷಯವನ್ನು ಕಾಲೇಜುಗಳಲ್ಲಿ ಕಳೆದ 40-50 ವರ್ಷಗಳಿಂದ ಕಲಿಸುತ್ತಲೆ ಬಂದಿದ್ದಾರೆ. ಹಾಗಾಗಿ ಆ ದೇಶಗಳ 30-50 ಶೇಕಡಾ ಜನ ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ನಲ್ಲಿ  ತೊಡಗಿಸಿ ಕೊಂಡಿದ್ದಾರೆ. ಅದೇ ನಮ್ಮ ದೇಶದಲ್ಲಿ 0.007 ಶೇಕಡಾ ಜನರು ಮಾತ್ರ ನೆಟ್‌ವರ್ಕ್ ಮಾರ್ಕೆಟಿಂಗ್ ಬ್ಯುಸಿನೆಸ್ ನಲ್ಲಿ  ತೊಡಗಿಸಿ ಕೊಂಡಿದ್ದಾರೆ.ಹಾಗಾಗಿಯೇ ಭಾರತ ಇವತ್ತಿಗೂ  ಮುಂದುವರಿಯುತ್ತಿರುವ ದೇಶವಾಗಿಯೆ ಉಳಿದಿದೆ. 

*_ಇದೆಲ್ಲವನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಲೆ ಬಂದ ಭಾರತ ಸರಕಾರ ನೆಟ್‌ವರ್ಕ್ ಮಾರ್ಕೆಟಿಂಗ್ ಅಥವಾ ಡೈರೆಕ್ಟ್ ಸಲ್ಲಿಂಗ್ ಅಥವಾ ಮೊಡೆರ್ನ್ ಮಾರ್ಕೆಟಿಂಗ್ ಎಂಬ ವಿಷಯವನ್ನು MBA, Bcomನಲ್ಲಿ ಇತ್ತೀಚೆಗಷ್ಟೇ ಕಲಿಸಲು ಆರಂಭಿಸಿದೆ._* 

ನಮ್ಮ ದೇಶದ ಯುವಕ ಯುವತಿಯರಿಗೆ ಹೇಳುವ ಒಂದು ಕಿವಿಮಾತು ಏನೆಂದರೆ ಕೆಲಸ ಸಿಗಲಿಲ್ಲ ಅಂತ Tension ಮಾಡಿಕೊಳ್ಳುವ ಬದಲು ಒಂದು ಒಳ್ಳೆಯ ನೆಟ್‌ವರ್ಕ್ ಮಾರ್ಕೆಟಿಂಗ್ ಕಂಪೆನಿಯನ್ನು ಆಯ್ಕೆಮಾಡಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ.. 

ನೆಟ್‌ವರ್ಕ್ ಮಾರ್ಕೆಟಿಂಗ್ ನಲ್ಲಿ ನಾವು ಹಾಗೂ ನಮ್ಮೊಂದಿಗೆ ಕೈ ಜೋಡಿಸುವವರು ಆರ್ಥಿಕ ಸ್ವಾತಂತ್ರ್ಯ ಪಡೆಯಬಹುದು ಹಾಗೂ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸೇರಿಸಬಹುದು... 

*_ಆಯ್ಕೆ ನಿಮ್ಮದು... ಸಹಕಾರ ನಮ್ಮದು...
ವಂದನೆಗಳೊಂದಿಗೆ 
 ನಂಜುಂಡಸ್ವಾಮಿ 
9886801163

Friday, April 12, 2024

ಬದುಕಿನಲ್ಲಿ ಈ ಏಳು ಸಂಗತಿಗಳನ್ನು ಯಾವತ್ತೂ ಮರೆಯಬೇಡಿ

ಆಲೋಚಿಸಿ... 

ಬದುಕಿನಲ್ಲಿ ಈ ಏಳು ಸಂಗತಿಗಳನ್ನು ಯಾವತ್ತೂ ಮರೆಯಬೇಡಿ.

1. ಇನ್ನೊಬ್ಬರೊಡನೆ ಸುಮ್ಮನೆ ವಾಗ್ವಾದಕ್ಕೆ ಇಳಿಯಬೇಡಿ ಯಾಕೆಂದರೆ ಅಲ್ಲೊಬ್ಬನಿಗೆ ಮಾತನಾಡಲೇ ಬರುವುದಿಲ್ಲ.

2. ಆಹಾರದ ರುಚಿಯ ಬಗ್ಗೆ ದೂರಬೇಡಿ ಕೆಲವರಿಗೆ ಒಂದು ಹೊತ್ತಿನ ಊಟವೂ ಸಿಗುವುದಿಲ್ಲ.

3. ನಿಮ್ಮ ಸಂಗಾತಿಯ ಬಗ್ಗೆ ಸಹನೆ ಕಳೆದುಕೊಳ್ಳದಿರಿ ನಿನ್ನೆಯಷ್ಟೇ ಒಬ್ಬ ತನ್ನ ಸಂಗಾತಿಯನ್ನು ಮಣ್ಣು ಮಾಡಿದ ದುಃಖದಲ್ಲಿದ್ದಾನೆ.

4. ನಿಮ್ಮ ಮನೆ ಸೋರುತ್ತಿದೆ ಎಂದು ಬೇಸರ ಪಡಬೇಡಿ ಅಲ್ಲೊಬ್ಬನ ತಲೆಯ ಮೇಲೆ ಸೂರೇ ಇಲ್ಲ.

5. ನಿಮ್ಮ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ ಅವೆಷ್ಟೋ ದಂಪತಿಗಳಿಗೆ ತಂದೆ ತಾಯಿಯಾಗುವ ಭಾಗ್ಯವೇ ಇರುವುದಿಲ್ಲ.

6. ನಿಮ್ಮ ಉದ್ಯೋಗದ ಬಗ್ಗೆ ಅಸಡ್ಡೆ ತೋರಬೇಡಿ ಅಲ್ಲೊಬ್ಬ ಯುವಕನಿಗೆ ಓದಿದ್ದರೂ ಕೆಲಸವೇ ಸಿಕ್ಕಿಲ್ಲ.

7. ನಿಮ್ಮ ಜೀವನವನ್ನು ಶಪಿಸುತ್ತಾ ಕುಳಿತುಕೊಳ್ಳಬೇಡಿ ಎಷ್ಟೋ ಮಂದಿ ಯೌವನದಲ್ಲೇ ಹಾಸಿಗೆ ಹಿಡಿದು ನರಳುತ್ತಿದ್ದಾರೆ.

 *ಜೀವನವೆಂಬುದು ಸುಂದರವಾದ ಉಡುಗೊರೆ. ವ್ಯರ್ಥಾಲಾಪದಲ್ಲಿ ಅದನ್ನು ಹಾಳು ಮಾಡಿಕೊಳ್ಳಬೇಡಿ. ಬದುಕಿನಲ್ಲಿ ಏನೋ ಸರಿಯಿಲ್ಲ ಎನ್ನಿಸುತ್ತಿದ್ದರೆ ಒಮ್ಮೆ ಯೋಚಿಸಿ, ನೀವಿನ್ನೂ ಬದುಕಿದ್ದೀರಿ ನಿಮಗಿಷ್ಟವಾಗದ ಸಂಗತಿಯನ್ನು ಬದಲಾಯಿಸುವ ಅವಕಾಶ ನಿಮಗಿದೆ. ನಿಮಗೆ ಬೇಕಾದಂತೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ.* ಸಾಧ್ಯವಾದರೆ ಷೇರ್ ಮಾಡಿ, ನೊಂದ ಮನಗಳಿಗೆ ಟಾನಿಕ್ ಕೂಡಾ ಆಗಬಲ್ಲದು ಈ ಸಂದೇಶ.
ಇಂತಿ 
ನಂಜುಂಡಸ್ವಾಮಿ

Wednesday, April 3, 2024

ಪ್ರಕೃತಿಯಲ್ಲಿ ಕೋಟ್ಯಾಂತರ ಜೀವರಾಶಿಗಳಲ್ಲಿ ನಾನು ಒಂದು ಜೀವಿ ಎಂದು ಎಲ್ಲರೊಳಗೊಂದಾಗಿ ಬದುಕೋಣ.



*ಸಿಟ್ಟಿನಿಂದ ಯಕೃತ್ತು (ಲಿವರ್) ಹಾಳಾದರೆ, ದುಃಖದಿಂದ ಶ್ವಾಸಕೋಶ ದುರ್ಬಲವಾಗುತ್ತದೆ. ಹೆದರಿಕೆಯಿಂದ ಕಿಡ್ನಿ ಹಾಳಾಗುತ್ತದೆ.*

*ಚಿಂತೆಗಳಿಂದ ಹೊಟ್ಟೆ ದುರ್ಬಲವಾದರೆ, ಒತ್ತಡಗಳಿಂದ ನಿಮ್ಮ ಹೃದಯ ಹಾಗೂ ಮೆದುಳು ದುರ್ಬಲವಾಗುತ್ತದೆ.*

ವಂದನೆಗಳೊಂದಿಗೆ
 ಇಂತಿ 
ನಂಜುಂಡಸ್ವಾಮಿ
8453503736

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World