www.dgnsgreenworld.blogspot.com

Wednesday, May 31, 2023

ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ:~

ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ:~

ಒಂದು ದಿನ ಕ್ಲಾಸ್ ನಲ್ಲಿ
ಪ್ರೊಫೆಸರ್ ಸಡನ್ ಆಗಿ
ಒಂದು ಪರೀಕ್ಷೆ ಮಾಡಲು
ತಯಾರಾದರು.

ಕ್ಲಾಸ್ ಅಲ್ಲಿ ಇದ್ದ ಎಲ್ಲ ವಿಧ್ಯಾರ್ಥಿಗಳು ಶಾಕ್!! ಆದರು.
ಹೆದರಲು ಶುರು ಮಾಡಿದರು.

ಪ್ರೊಫೆಸರ್ ಎಕ್ಜಾಮ್ ಪೇಪರ್ ಕೊಟ್ಟರು. ಎಲ್ಲರಿಗೂ ಕೊಟ್ಟ ನಂತರ ಕೊಟ್ಟ ಪೇಪರ್
ತಿರುಗಿಸಲು ಹೇಳಿದರು.

ಎಲ್ಲ ಮಕ್ಕಳು ತಿರುಗಿಸಿ ನೋಡಿದಾಗ ಅಲ್ಲಿ ಯಾವುದೇ ಪ್ರಶ್ನೆ 
ಇರಲಿಲ್ಲ

ಬದಲಾಗಿ ಬಿಳಿ ಕಾಗದದ ಮದ್ಯದಲ್ಲಿ ಸಣ್ಣ ಕಪ್ಪು ಚುಕ್ಕೆ ಇತ್ತು 

ಎಲ್ಲ ವಿಧ್ಯಾರ್ಥಿಗಳ ಮುಖದಲ್ಲಿ ಪ್ರಶ್ನೆಗಳು ಮೂಡಿದವು.❓❓ .

ಪ್ರೊಫೆಸರ್ ಅವರನ್ನು ನೋಡಿ
ಹೀಗೆ ಹೇಳಿದರು,
" ನೀವು ಆ ಪೇಪರ್ ಅಲ್ಲಿ ಏನನ್ನು ಕಾಣುತ್ತಿದ್ದಿರಿ ಅದರ ಬಗ್ಗೆ ಬರೆಯಿರಿ".📝

ವಿದ್ಯಾರ್ಥಿಗಳು ಏನು ಬರೆಯಬೇಕಂತ ತಿಳಿಯದೆ ಕನ್ಫ್ಯೂಸ್ ಆದರು.

ಆದರೆ ಕ್ಲಾಸ್ ಕೊನೆಯಲ್ಲಿ,
ಪ್ರೊಫೆಸರ್
ವಿಧ್ಯಾರ್ಥಿಗಳು ಬರೆದ ಪೇಪರ್ ಗಳನ್ನು ತೆಗೆದು
ಓದಲು ಶುರು ಮಾಡಿದರು.

ಎಲ್ಲ ವಿಧ್ಯಾರ್ಥಿಗಳು ಆ ಬಿಳಿ ಕಾಗದದ ಮಧ್ಯ ಇರೋ ಆ ಕಪ್ಪು ಚುಕ್ಕೆ ಬಗ್ಗೆ ಬರೆದಿದ್ದರು.
ಎಲ್ಲರೂ ಆ ಕಪ್ಪು ಚುಕ್ಕೆ ಬಗ್ಗೆನೇ ಏನೇನೊ ಬರೆದು ವಿವರಿಸಿದ್ದರು. ಪ್ರೊಫೆಸರ್ ಎಲ್ಲರ ಉತ್ತರವನ್ನು ಓದಿ ಮುಗಿಸಿದರು . ಕ್ಲಾಸ್
ಸೈಲೆಂಟ್ ಆಗಿತ್ತು .

ಪ್ರೊಫೆಸರ್ ಮಾತನಾಡಲು
ಶುರು ಮಾಡಿದರು.
"ನಾನು ನೀವು ಬರೆದ ಉತ್ತರವನ್ನು ನೋಡಿ ಯಾವುದೇ ಗ್ರೇಡ್ ಕೊಡಲು ಹೋಗೋದಿಲ್ಲ. ನಾನು ನಿಮಗೆ ಯೋಚಿಸಲು ಬಿಡುತ್ತೇನೆ. ನೀವೆಲ್ಲರೂ ಆ ಬಿಳಿ ಕಾಗದದ ಮೇಲಿರೋ ಕಪ್ಪು ಚುಕ್ಕೆ ಬಗ್ಗೆ ಮಾತ್ರ ಬರೆದಿದ್ದೀರಿ.
ಯಾಕೆ ಆ ಕಪ್ಪು ಚುಕ್ಕೆ ಬಿಟ್ಟು ಬಿಳಿ ಭಾಗದ ಬಗ್ಗೆ ಬರೆಯಲಿಲ್ಲ?

ನೀವೆಲ್ಲರೂ ನಿಮ್ಮ ಮನಸನ್ನು ಆ ಕಪ್ಪು ಚುಕ್ಕೆ ಕಡೆಗೆ ಗಮನಹರಿಸಿದ್ದಿರಿ ಆದ್ದರಿಂದ
ನಿಮಗೆ ಬಿಳಿ ಭಾಗ ಕಾಣಲೇ ಇಲ್ಲ. 

ಇದೆ ತರಹ ನಮ್ಮ
ಜೀವನದಲ್ಲೂ ನಡೆಯುತ್ತದೆ.
ನಮ್ಮಲ್ಲಿ ಬಿಳಿ ಕಾಗದದ ಭಾಗವನ್ನು ನೋಡಿ ಖುಷಿಪಡಲು ಅವಕಾಶ ಇದ್ದರೂ ನಾವು ನಮ್ಮ ಗಮನವನ್ನು ನಮ್ಮ ಜೀವನ ಅನ್ನೋ ಬಿಳಿ ಕಾಗದದ ನಡುವೆ ಇರೋ ಒಂದು ಕಪ್ಪು ಚುಕ್ಕೆ ಬಗ್ಗೆನೇ ಹೆಚ್ಚು ಗಮನ ಕೊಡುತ್ತೇವೆ.
ನಮ್ಮ ಜೀವನ ಅನ್ನೋದು ದೇವರ ಉಡುಗೊರೆ, ಪ್ರೀತಿ ಮತ್ತು ಕಾಳಜಿ ಜೊತೆಗೆ ಯಾವಾಗಲೂ ಸಂಬ್ರಮಿಸಲು ಅವಕಾಶ ಇದೆ.

ನಿಸರ್ಗ ದಿನದಿಂದ ದಿನಕ್ಕೆ ಬದಲಾಗುತ್ತೆ, ಸ್ನೇಹಿತರ ಜೊತೆ,
ಕೆಲಸದ ಜೊತೆ,
ಕುಟುಂಬದ ಜೊತೆ
ಸಂತೋಷದಿಂದ ಇರಬಹುದು.

ಆದರೆ ನಾವು ಬರಿ ನಮ್ಮ ಜೀವನದಲ್ಲಿ ಇರೋ ಕೊರತೆ ಬಗ್ಗೆ ತಲೆಕೆಡಿಸಿ ಕೊಳ್ಳುತೇವೆ,
ಇರೋದರ ಬಗ್ಗೆ ಯೋಚಿಸೋದನ್ನೇ ಮರೆಯುತ್ತೇವೆ. 

ಕೆಲವರು ಆರೋಗ್ಯದ ಬಗ್ಗೆ,
ಕೆಲವರು ಹಣದ ಬಗ್ಗೆ,
ಸಂಭಂದಗಳ ಬಗ್ಗೆ,
ಸ್ನೇಹಿತರ ಬಗ್ಗೆ ನಿರಾಶೆ

ಮುಂತಾದವುಗಳ ಬಗ್ಗೆನೇ ತಲೆ
ಕೆಡಿಸಿಕೊಳ್ಳುತ್ತೇವೆ. 
ಆದರೆ ಕಪ್ಪು ಚುಕ್ಕೆ ಅನ್ನೋದು
ಒಂದು ಸಣ್ಣ ಭಾಗ
ನಮ್ಮ
ಜೀವನದಲ್ಲಿ ಇರೋದೆಲ್ಲದರ ಮಧ್ಯದ್ದು . 
ಆದರೆ ಆ ಸಣ್ಣ ನಕಾರತ್ಮಕತೆ ನಮ್ಮ ತಲೆಯನ್ನು
ಹಾಳುಮಾಡುತ್ತದೆ.

ನಿಮ್ಮ ಕಣ್ಣನ್ನು ಆ ನೆಗೆಟಿವ್ ಅನ್ನೋ ಕಪ್ಪು ಚುಕ್ಕೆ ಇಂದ ತೆಗೆದುಬಿಡಿ. ನಿಮ್ಮಲಿರುವುದರ ಬಗ್ಗೆ ಯೋಚಿಸಿ
ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯಿರಿ,
ಜೀವನದಲ್ಲಿ ಸಿಗೋ ಎಲ್ಲವನ್ನು
ಸಕಾರಾತ್ಮಕವಾಗಿ ಸ್ವೀಕರಿಸಿ.!!

ಸವೇ೯ ಜನ ಸುಖಿನೊಭವಂತು..

Wednesday, May 17, 2023

ಸಮಾಜದಲ್ಲಿ ಇನ್ನೂ ಒಳ್ಳೆಯ ತನವಿದೆ. ಮೊದಲು ನಾವು ನೋಡುವ ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕು

*ಒಂದು ನಿಜ ಜೀವನದ ಕಥೆ...🖋️*

ತಾಜಾ ಹಣ್ಣುಗಳನ್ನು ತೆಗೆದುಕೊಳ್ಳಲೆಂದು ತುಂಬಾ ಜನಸಂದಣಿ ಇರುವ ದಾರಿಯಲ್ಲಿ ಒಂದು ಅಂಗಡಿ ಕಾಣಿಸಿತು. ಅಂಗಡಿಯಲ್ಲಿ ತರತರವಾದ ಹಣ್ಣುಗಳು ಇವೆ, ಆದರೆ ಅಂಗಡಿಯ ಯಜಮಾನ ಮಾತ್ರ ಎಲ್ಲೂ ಕಾಣಲಿಲ್ಲ. ಹಣ್ಣುಗಳ ಬೆಲೆಯನ್ನು ಕಾಗದದ ಮೇಲೆ ಬರೆದು ಇಟ್ಟಿದ್ದಾರೆ. ಅಂಗಡಿಯ ಮಧ್ಯದಲ್ಲಿ ಒಂದು ಕಾಗದದ ಚೀಟಿ ನೇತಾಡುತ್ತಿತ್ತು .

ಅದು ನನ್ನನ್ನು ಆಕರ್ಷಿಸಿ ಕುತೂಹಲದಿಂದ ಅದರಲ್ಲಿ ಬರೆದಿರುವುದನ್ನು ಓದಿದೆ
"ನನ್ನ ತಾಯಿಯವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ಸೇವೆ ಮಾಡಲು ನಾನು ಸದಾ ಅವರ ಬಳಿ ಇರಬೇಕಾಗಿದೆ. ಆದ್ದರಿಂದ ನೀವುಗಳು ನಿಮಗೆ ಬೇಕಾದ ಹಣ್ಣುಗಳನ್ನು ಪಡೆದು ಅದಕ್ಕೆ ಸರಿಯಾದ ದರವನ್ನು ಗಲ್ಲಾ ಪೆಟ್ಟಿಗೆಯಲ್ಲಿ ಹಾಕಿ" ಎಂದು ಬರೆದಿತ್ತು .
ನನಗೆ ಆಶ್ಚರ್ಯವಾಯ್ತು.
 
ಈ ಕಾಲದಲ್ಲೂ ಇಂತಹ ಅಮಾಯಕರು ಇರುತ್ತಾರೆಯೇ ? ಯಾರಾದರೂ ಅವನ ಗಲ್ಲಾಪೆಟ್ಟಿಗೆಯನ್ನು ದೋಚಿದರೆ ? ಅವನ ಪರಿಸ್ಥಿತಿ ಏನು? ಅವನ  ಅಮಾಯಕತ್ವ ಕಂಡು ನಗು ಸುಳಿಯಿತು.

ಏನಾದರೂ ಆಗಲಿ ಇವನಿಗೆ ಈ ತರಹ ಮಾಡಬಾರದೆಂದು ತಿಳಿ ಹೇಳಬೇಕೆಂದು ನಿರ್ಣಯಿಸಿ ಸಾಯಂಕಾಲ ಅಂಗಡಿಗೆ ಬಂದು ಹಣವನ್ನು ತೆಗೆದುಕೊಳ್ಳಲು ಬರುತ್ತಾರಲ್ಲ ಆಗ ಅವನಿಗೆ ತಿಳಿ ಹೇಳಬೇಕೆಂದು  ಸಾಯಂಕಾಲ ಅವನ ಅಂಗಡಿಯ ಬಳಿ ಬರುತ್ತಾನೆ.

ಅಂಗಡಿಯ ಮಾಲೀಕ ಹಣವನ್ನು ತೆಗೆದುಕೊಂಡು ಅಂಗಡಿಯನ್ನು ಮುಚ್ಚಲು ಮುಂದಾಗುತಿರುತ್ತಾನೆ. ನನ್ನನ್ನು ನಾನು ಪರಿಚಯಿಸಿಕೊಂಡು 'ನೀನು ಎಂತಹ ಬುದ್ಧಿ ಇಲ್ಲದ ಕೆಲಸ ಮಾಡುತ್ತಿರುವೆ ತಿಳಿಯಿತೆ ?'. 
ನಿನ್ನ ಗಲ್ಲಾ ಪೆಟ್ಟಿಗೆಯಲ್ಲಿನ ಹಣವನ್ನು ಯಾರಾದರೂ ಕಳ್ಳರು ದೋಚಿದರೆ ? ಹಣ್ಣುಗಳನ್ನು ಉಚಿತವಾಗಿ ತೆಗೆದುಕೊಂಡರೆ ??' ಎಂದು ಬುದ್ಧಿ ಹೇಳಲು ಹೋದರೆ...

ಆಗ ಅವನು 'ಅಯ್ಯಾ ನಾನು ಮೊದಲು ನಿಮ್ಮ ಹಾಗೆ ನಮ್ಮ ತಾಯಿಯನ್ನು ಕೇಳಿದೆ "ನಾನು ನಿನ್ನ ಸೇವೆಯಲ್ಲಿ ಇದ್ದಾಗ ಅಂಗಡಿಯ ಪರಿಸ್ಥಿತಿ ಏನು ಎಂದು.

ಅದಕ್ಕೆ ನಮ್ಮ ತಾಯಿ ನಾನು ಈಗ ಅವಸಾನದ ಸ್ಥಿತಿಯಲ್ಲಿ ಇದ್ದೇನೆ. ನಿನ್ನನ್ನು ನೋಡದೇ ಇರಲು ಆಗೋದಿಲ್ಲ, ನಾನು ದೇವರನ್ನು ಪ್ರಾರ್ಥಿಸುತ್ತೇನೆ. ನಾನು ಹೇಳಿದ ರೀತಿಯಲ್ಲಿ ಮಾಡು ಎಂದು ಹೇಳಿದಳು.

ಆ ದಿನದಿಂದ ನಾನು ಈ ರೀತಿ ಮಾಡುತ್ತಿದ್ದೇನೆ'. ಎಂದೂ ನಿನಗೆ  ನಷ್ಟವಾಗಿಲ್ಲವೆ ? ಎಂದು ಕೇಳಿದೆನು. ಅದಕ್ಕೆ ಅವನು ಗಲ್ಲಾ ಪೆಟ್ಟಿಗೆಯನ್ನು ತೆಗೆದು ತೋರಿಸುತ್ತಾನೆ. ಆಶ್ಚರ್ಯ!! ಅದರ ತುಂಬಾ ಹಣ. 

ಅಂಗಡಿಯ ಹಣ್ಣಿನ ಬೆಲೆಗಿಂತ ಹತ್ತರಷ್ಟು ಹಣ ಅದರಲ್ಲಿದೆ. ಅಂಗಡಿಯಲ್ಲಿ ತರತರವಾದ ವಸ್ತುಗಳನ್ನು ತೋರಿಸಿದನು. ಅದರಲ್ಲಿ ಸೀರೆಗಳು, ಸ್ವೆಟರುಗಳು.

ಆಗಲೇ ತಯಾರಿಸಿದ ಪಲಾವ್, ಅನೇಕ ತರಹದ ತಿಂಡಿ ತಿನಿಸುಗಳು ಇವೆ. ಅದರ ಮೇಲೆ ಈ ರೀತಿ ಬರೆದಿದೆ, "ತಾಯಿಯವರಿಗೆ ಇವುಗಳನ್ನು ನನ್ನ ಕಡೆಯಿಂದ ಕೊಡುವುದು".
"ಅಂಕಲ್, ತಾಯಿಯವರನ್ನು ನಮ್ಮ ಹಾಸ್ಪಿಟಲ್ ಗೆ ಕರೆದು ತನ್ನಿ, ನಾನು ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುವೆನು" ಎಂದು ಬರೆದಿತ್ತು .
ಅವರ ವಿಸಿಟಿಂಗ್ ಕಾರ್ಡ್ ಇಟ್ಟಿದ್ದರು. ಇದನ್ನೆಲ್ಲಾ ನೋಡಿದ ನನಗೆ ಕಣ್ಣಲ್ಲಿ ನೀರಾಡಿತ್ತು . ಸಮಾಜವು ಸ್ವಾರ್ಥದಿಂದ ತುಂಬಿದೆ, ಒಳ್ಳೆಯತನ ಕಾಣುತ್ತಿಲ್ಲವೆಂದು ತಿಳಿದ ನಾನು, ಆಗ ನನ್ನ ಭಾವನೆಯಲ್ಲಾ ಹರಿದು ಚೂರಾಯಿತು.
ಸಮಾಜದಲ್ಲಿ ಇನ್ನೂ ಒಳ್ಳೆಯ ತನವಿದೆ. ಮೊದಲು ನಾವು ನೋಡುವ ದೃಷ್ಟಿಯನ್ನು  ಬದಲಾಯಿಸಿಕೊಳ್ಳಬೇಕು.

ತಾಯಿಯ ಸೇವೆ ಮಾಡುವುದರಿಂದ ಸಾಕ್ಷಾತ್ ದೇವರೇ ಅವನ ಅಂಗಡಿಯ ಕಾವಲುಗಾರನಾಗಿದ್ದಾನೆ.

ಎಷ್ಟೇ ಕೋಪಗೊಂಡರೂ ಮತ್ತೆ ನಮ್ಮ ಮೇಲೆ ಕೋಪಿಸಿಕೊಳ್ಳದೇ  ಇರುವವರು ಈ ಸೃಷ್ಟಿಯಲ್ಲಿ ತಾಯಿಯೊಬ್ಬರೇ. ತಾಯಿಗೆ ಮಾಡುವ ಸೇವೆ ಎಂದೂ ನಿರರ್ಥಕವಾಗದು.
ಮಾತೃ ದೇವೋಭವ.

🙏🏻🙏🏻🙏🏻🙏🏻🙏🏻🙏🏻

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World