www.dgnsgreenworld.blogspot.com

Friday, January 21, 2022

ಶ್ರೀ ಶಿವಕುಮಾರ ಸ್ವಾಮಿಜಿ (1907~2019) ಜೀವನಚರಿತ್ರೆ

ಶ್ರೀ ಶಿವಕುಮಾರ ಸ್ವಾಮಿಜಿ (1907~2019) ಜೀವನಚರಿತ್ರೆ

ಶತಾಯುಷಿ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಯವರು ಜಗತ್ತು ಕಂಡ ಒಂದು ಅಚ್ಚರಿ. ನಡೆದಾಡುವ ದೇವರೆಂದೇ ಖ್ಯಾತಿಯಾಗಿರುವ ಶ್ರೀಗಳು ತಾರುಣ್ಯದಲ್ಲಿಯೇ ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ಧಪುರುಷರು ಸಿದ್ದಗಂಗೆಯ  ಪೂಜ್ಯ ಸ್ವಾಮೀಜಿಯವರು. 

ಬಾಲ್ಯ-ವೈರಾಗ್ಯ-ವಿರಕ್ತಾಶ್ರಮ
ಡಾ.ಶಿವಕುಮಾರ ಸ್ವಾಮೀಜಿ 01.04.1907ರಲ್ಲಿ ಮಾಗಡಿ ತಾಲೂಕಿನ ವೀರಾಪುರದಲ್ಲಿ  ಹೊನ್ನಪ್ಪ ಪಟೇಲ್ ಮತ್ತು ಗಂಗಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ವೀರಾಪುರ ಮತ್ತು ನಾಗವಲ್ಲಿಯಲ್ಲಿ ಮುಗಿಸದ ಶ್ರೀಗಳು ತುಮಕೂರಿನ ಸರಕಾರಿ ಶಾಲೆಯಲ್ಲಿ  ಫ್ರೌಡ ಶಿಕ್ಷಣವನ್ನು ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದ ಶ್ರೀಗಳು ಆಂಗ್ಲಭಾಷೆ ಮತ್ತು ಸಂಸ್ಕೃತ ಬಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ.

ಅನೀರೀಕ್ಷೀತ ಮಠಾಧಿಪತಿ

ಬೆಂಗಳೂರಿನ ಗುಬ್ಬಿ ತೋಟದಪ್ಪ ಛತ್ರದಲ್ಲಿದ್ದುಕೊಂಡು, ಪದವಿ ವಿಧ್ಯಾಭ್ಯಾಸ ಮಾಡುತ್ತಿದ್ದರು. 1930 ರಲ್ಲಿ ಉದ್ಧಾನ ಶಿವಯೋಗಿಗಳ ನಂತರದ ಉತ್ತರಾಧಿಕಾರಿ ಸ್ವಾಮಿಗಳಾದ ಶ್ರಿ ಮರುಳಾಧ್ಯರ ನಿಧನರಾಗುತ್ತಾರೆ. ಅವರ ಸಮಾಧಿ ಕಾರ್ಯಕ್ರಮಗಳಿಗೆ ಬಂದಿದ್ದ ಮೊದಲೇ ಪರಿಚಯವಿದ್ದ ಶಿವಕುಮಾರ ಸ್ವಾಮಿಗಳ ಕಡೆಗೆ ಉದ್ಧಾನ ಶಿವಯೋಗಿಗಳ ನೋಟ ಹರಿಯುತ್ತದೆ.ತಕ್ಷಣವೇ ಉದ್ಧಾನ ಶಿವಯೋಗಿಗಳು ಶಿವಣ್ಣನೇ ತಮ್ಮ ಮುಂದಿನ ಉತ್ತರಾಧಿಕಾರಿ ಎಂದು ಘೋಷಿಸುತ್ತಾರೆ.

ಹೀಗೆ ಸನ್ಯಾಸಿಯಾದ ಶಿವಕುಮಾರ ಸ್ವಾಮಿಗಳು ತಮ್ಮ ಸನ್ಯಾಸ ಧರ್ಮಗಳನ್ನು ಪಾಲಿಸುತ್ತಲೇ ಪದವಿ ಮುಗಿಸಿ ನಂತರ 1930ರಲ್ಲಿ ತಮ್ಮ ಯವ್ವನಾವಸ್ಥೆಯಲ್ಲಿಯೇ ವಿರಕ್ತಾಶ್ರಮ ದೀಕ್ಷೆ ಪಡೆದು  ಸಿದ್ಧಗಂಗಾ ಕ್ಷೇತ್ರ ಪ್ರವೇಶಿಸಿದರು. ಅಂದಿನಿಂದ ಸಿದ್ಧಗಂಗಾ ಮಠದಲ್ಲಿ ಹೊಸ ಬೆಳಕು ಮೂಡಿತು. ಜಂಗಮ ಮೂರ್ತಿಗಳಾದ ಶಿವಕುಮಾರ ಮಹಾಸ್ವಾಮಿಗಳು ಉದ್ಧಾನ ಶಿವಯೋಗಿಗಳ ಅಣತಿಯಂತೆ 1941ರಲ್ಲಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ನಂತರ ಸಿದ್ಧಗಂಗಾ ಕ್ಷೇತ್ರದ ಸ್ವರೂಪ ಆಮೂಲಾಗ್ರವಾಗಿ ಬದಲಾವಣೆಯಾಯಿತು.

ತ್ರಿವಿಧ ದಾಸೋಹಿ 

ಈ ಶತಮಾನ ಕಂಡ ಅಪರೂಪದ ಶರಣರಾಗಿರುವ ಶ್ರೀಗಳು ಅನ್ನ,ಅಕ್ಷರ ಮತ್ತು ಜ್ಞಾನ ದಾಸೋಹಗಳ ಮೂಲಕ ತ್ರಿವಿಧ ದಾಸೋಹದಲ್ಲಿ ತೊಡಗಿದ್ದಾರೆ.

ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅದರ ಅಡಿಯಲ್ಲಿ  ಬಾಲ್ಯದಿಂದ ಪದವಿಯವರೆಗೂ ಸಂಪೂರ್ಣ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಇಲ್ಲಿ ಯಾವುದೇ ಜಾತಿ-ಧರ್ಮ ಭೇದವಿಲ್ಲದೇ ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣದೊಂದಿಗೆ ಉಚಿತ ವಸತಿ ಮತ್ತು ಉಚಿತ ಆಹಾರ ಕೂಡ ನೀಡಲಾಗುತ್ತದೆ.ಪ್ರಸ್ತುತ ಸುಮಾರು 10000 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.ಕರ್ನಾಟಕದ ವಿವಿಧ ಮೂಲೆಗಳಿಂದ ವಿಧ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಮಾತ್ರವಲ್ಲದೇ ರೈತಾಪಿ ವರ್ಗದ ಅನುಕೂಲಕ್ಕಾಗಿ ಪ್ರತಿವರ್ಷ ಒಂದು ತಿಂಗಳ ಕಾಲ ರೈತಜಾತ್ರೆಯನ್ನು ನೆಡಿಸಿಕೊಡುತ್ತಿದ್ದರು.

ಪ್ರಶಸ್ತಿಗಳು

ಜಂಗಮ, ಸಮಾಜದ ಯಾವುದೇ ಪ್ರಖ್ಯಾತಿ-ಪುರಸ್ಕಾರಕ್ಕೆ ಆಸೆ ಪಡೆದೆ ಮುನ್ನೆಡೆದರೂ ಅವರ ಕಾರ್ಯಕ್ಕೆ ಋಣಭಾರ ಸಲ್ಲಿಸುವ ಹೊಣೆ ಸಮಾಜದ್ದು. ಶ್ರೀಗಳ ಸಮಾಜಿಮುಖಿ ಜೀವನಕ್ಕೆ ಪದ್ಮಭೂಷಣ, ಕರ್ನಾಟಕ ರತ್ನ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ. 1965 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಕೂಡ ಪಡೆದಿದ್ದಾರೆ. ಶ್ರೀಗಳ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ `ಭಾರತ ರತ್ನ' ಪ್ರಶಸ್ತಿ ನೀಡಬೇಕು ಎಂಬುದು ಇಡೀ ಕನ್ನಡ ಜನತೆಯ ಬಯಕೆ.

ಆರೋಗ್ಯ ಸಮಸ್ಯೆ

2016 ರಿಂದ ಶ್ರೀಗಳ ಆರೋಗ್ಯದಲ್ಲಿ ಏರು-ಪೇರು ಆಗಲು ಶುರುವಾಯಿತು. ಜಾಂಡೀಸ್, ನ್ಯೂಮೋನಿಯಾ ಮುಂತಾದ ಹಲವು ಇನಫೆಕ್ಷನ್ ಗಳಿಂದ ಬಳಲಿದ ಶ್ರೀಗಳು ನಂತರ ಒಂದು ವರ್ಷದೊಳಗೆ ಚೇತರಿಸಿಕೊಂಡರು. 2018 ಡಿಸೆಂಬರ್‌ನಲ್ಲಿ ಲಿವರ್ ಸೋಂಕಿಗೆ ತುತ್ತಾದ ಶ್ರೀಗಳು ಲಿವರ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಪಟ್ಟರು. 2019 ಜನೇವರಿಯಲ್ಲಿ ಶ್ವಾಸಕೋಶ ಸಮಸ್ಯೆಯಿಂದ ಬಳಲಿದ ಶ್ರೀಗಳು ಚೆನ್ನೆನ ಆಸ್ಪತ್ರೆಗೆ ದಾಖಲಾಗಿ ಹಿಂತುರಿಗಿದರು.

ಆರದ ಚೇತನ 

ಶ್ರೀಗಳು ಜನೇವರಿ 21,2019ರ ರಂದು ಮಧ್ಯಾಹ್ನ ಇಹಯಾತ್ರೆ ಮುಗಿಸಿದರು. ಶ್ರೀಗಳು ದೈಹಿಕಾವಾಗಿ ದೂರವಾದರೂ ತಮ್ಮ ಕಾರ್ಯಗಳ ಮೂಲಕ ಸದಾ ಬೆಳುಗುತ್ತಾರೆ. ಲಕ್ಷಾಂತರ ವಿಧ್ಯಾರ್ಥಿಗಳ ಸ್ಮೃತಿಪಟಲದಲ್ಲಿ ಜ್ಞಾನವಾಗಿ, ಸಾವಿರಾರು ಭಕ್ತರ ಹೃದಯದಲ್ಲಿ ಅರಿವಿನ ಜ್ಯೋತಿಯಾಗಿ ಅದಮ್ಯವಾಗಿ ಅನಂತಕಾಲ ಬೆಳುಗುತ್ತಾರೆ.

ಅಂಕಿ-ಅಂಶಗಳು,ವಿಶೇಷ

ಪೂರ್ವಾಶ್ರಮ ಹೆಸರು -ಶಿವಣ್ಣ

1922- ಫ್ರೌಢಶಾಲಾ ಶಿಕ್ಷಣಕ್ಕೆ ತುಮಕೂರಿಗೆ ಬಂದರು

1926- ಮೆಟ್ರಿಕುಲೇಷನ್ ಪೂರ್ಣ

1927- ಸಿದ್ಧಗಂಗಾ ಮಠದ ಸಂಪರ್ಕಕ್ಕೆ ಬಂದರು

1927- ಸಾಮಾನ್ಯ ಪರೀಕ್ಷೆ ಉತ್ತೀರ್ಣ ಮತ್ತು ಪದವಿ ಸೇರ್ಪಡೆ

1930- ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು

1965-ಕರ್ನಾಟಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪ್ರದಾನ

1975- ಎರಡು ಸಾವಿರ ಮಕ್ಕಳಿಗಾಗಿ ಶಾಲೆ ತೆರೆದರು.

1977 - ನಾಲ್ಕು ಸಾವಿರ ದಾಟಿದ ಶಾಲಾ ಮಕ್ಕಳು 

2007-ಕರ್ನಾಟಕ ರತ್ನ ಪ್ರಶಸ್ತಿ

2015-ಭಾರತ ಸರ್ಕಾರದ ಪದ್ಮಭೂಷಣ

128 - ಶೈಕ್ಷಣಿಕ ಸಂಸ್ಥೆಗಳು

2255 -ಶಿಕ್ಷಕ ಮತ್ತು ಭೋಧಕ ವರ್ಗ 

25000- ಪ್ರತಿದಿನ ದಾಸೋಹ ಮಾಡುವ ಭಕ್ತಾದಿಗಳು

250000-ಪ್ರತಿದಿನ ವಿಧ್ಯಾರ್ಥಿಗಳಿಗೆ ಊಟಕ್ಕೆ ತಗುಲುವ ವೆಚ್ಚ. 
ಎಷ್ಟು ಬರೆದರೂ ಸಾಲುವುದಿಲ್ಲ ಶ್ರೀಗಳ ಅನ್ನದಸೋಹ ಹಾಗೂ ಅಕ್ಷರ ದಾಸೋಹದ ಬಗ್ಗೆ.
ಶ್ರೀಗಳ ಪಾದಾರವಿಂದಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇವೆ, ವಂದನೆಗಳೊಂದಿಗೆ.

Monday, January 3, 2022

ಮಹಾಪ್ರಭುವಿನ ಮಹಾ ರಹಸ್ಯ ಚಿನ್ನದ ಪೊರಕೆಯಿಂದ ಸ್ವಚ್ಛತೆ....!

ಶ್ರೀ ಕೃಷ್ಣನು ದೇಹವನ್ನು ತೊರೆದಾಗ,ಅವರ ಅಂತಿಮ ಸಂಸ್ಕಾರ ಮಾಡಲಾಯಿತು,ಅವರ ಇಡೀ ದೇಹವು ಪಂಚಭೂತಗಳಲ್ಲಿ ಬೆರೆತುಹೋಯಿತು, ಆದರೆ ಅವರ ಹೃದಯವು ಸಾಮಾನ್ಯ ಮನುಷ್ಯನಂತೆ ಬಡಿಯುತ್ತಿತ್ತಂತೆ ಮತ್ತು ಅವರ ಹೃದಯವು ಸಂಪೂರ್ಣವಾಗಿ ಸುರಕ್ಷಿತವಾಗಿತ್ತಂತೆ ಮತ್ತು ಇಂದಿಗೂ ಸುರಕ್ಷಿತವಾಗಿದೆ, ಜಗನ್ನಾಥನು ಮರದ ವಿಗ್ರಹದೊಳಗೆ ನೆಲೆಸಿದ್ದಾನೆ ಮತ್ತು ಅದೇ ರೀತಿಯಲ್ಲಿ ಅವರ ಹೃದಯವು ಬಡಿತವನ್ನು ಕೇಳಿಬರುತ್ತದೆ..ಈ ವಿಷಯ ಕೆಲವರಿಗೆ ಮಾತ್ರ ತಿಳಿದಿದೆ...

 ಮಹಾಪ್ರಭುವಿನ ಮಹಾ ರಹಸ್ಯ
 ಚಿನ್ನದ ಪೊರಕೆಯಿಂದ ಸ್ವಚ್ಛತೆ....!

ಮಹಾಪ್ರಭು ಜಗನ್ನಾಥ (ಶ್ರೀ ಕೃಷ್ಣ) ಅನ್ನು ಕಲಿಯುಗದ ದೇವರು ಎಂದೂ ಕರೆಯುತ್ತಾರೆ.ಜಗನ್ನಾಥ ಸ್ವಾಮಿಯು ತನ್ನ ಸಹೋದರಿ ಸುಭದ್ರ ಮತ್ತು ಸಹೋದರ ಬಲರಾಮ್‌ನೊಂದಿಗೆ ಪುರಿ (ಒರಿಸ್ಸಾ) ದಲ್ಲಿ ನೆಲೆಸಿದ್ದಾನೆ, ಆದರೆ ರಹಸ್ಯವು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ...!
ಪ್ರತಿ 12 ವರ್ಷಗಳಿಗೊಮ್ಮೆ ಮಹಾಪ್ರಭುವಿನ ವಿಗ್ರಹವನ್ನು ಬದಲಾಯಿಸಲಾಗುತ್ತದೆ, ಆ ಸಮಯದಲ್ಲಿ ಇಡೀ ಪುರಿ ನಗರದಲ್ಲಿ ಕತ್ತಲೆ ಇರುತ್ತದೆ, ಅಂದರೆ, ಇಡೀ ನಗರದ ದೀಪಗಳನ್ನು ಸ್ವಿಚ್ ಆಫ್ ಮಾಡಲಾಗುತ್ತದೆ, ದೀಪಗಳನ್ನು ಆಫ್ ಮಾಡಿದ ನಂತರ, CRPF ಯೋಧರು ದೇವಾಲಯದ ಸಂಕೀರ್ಣವನ್ನು ಸುತ್ತುವರೆದಿರುತ್ತಾರೆ. ಮತ್ತು ಆ ಸಮಯ.ಯಾರೂನ್ನು ದೇವಸ್ಥಾನ ಒಳಗೆ ಪ್ರವೇಶಿಸಲು ಬಿಡುವುದಿಲ್ಲ..

ದೇವಾಲಯದ ಒಳಗೆ ದಟ್ಟವಾದ ಕತ್ತಲೆ ಇರುತ್ತದೆ, ಪೂಜಾರಿಯ ಕಣ್ಣುಗಳನ್ನು  ಬಟ್ಟೆಯಿಂದ ಕಟ್ಟಲಾಗುತ್ತದೆ, ಪುರೋಹಿತರ ಕೈಯಲ್ಲಿ ಕೈಗವಸುಗಳಿರುತ್ತವೆ ನಂತರ ಪೂಜಾರಿಯು ಹಳೆಯ ವಿಗ್ರಹದಿಂದ "ಬ್ರಹ್ಮ ದ್ರವ್ಯ" ವನ್ನು ತೆಗೆದು ಹೊಸ ವಿಗ್ರಹಕ್ಕೆ ಸುರಿಯುತ್ತಾರೆ.ಈ ಬ್ರಹ್ಮ ಪದಾರ್ಥ ಯಾವುದು ಎಂಬುದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ.  ಇಲ್ಲಿಯವರೆಗೆ ಯಾರೂ ನೋಡಿಲ್ಲ. ಸಾವಿರಾರು ವರ್ಷಗಳಿಂದ ಇದು ಒಂದು ವಿಗ್ರಹದಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತಿದೆ....

ಇದು ಅಲೌಕಿಕ ವಸ್ತುವಾಗಿದೆ, ಇದನ್ನು ಸ್ಪರ್ಶಿಸಿದರೆ, ವ್ಯಕ್ತಿಯ ದೇಹವು ಚಿದ್ರವಾಗುತ್ತದೆ ಅಂತೆ. ಈ ಬ್ರಹ್ಮ ಪದಾರ್ಥವು ಭಗವಾನ್ ಶ್ರೀ ಕೃಷ್ಣನಿಗೆ ಸಂಬಂಧಿಸಿದೆ.  ಆದರೆ ಇದು ಏನು,ಯಾರಿಗೂ ತಿಳಿದಿಲ್ಲ, ಜಗನ್ನಾಥ ದೇವರು ಮತ್ತು ಇತರ ವಿಗ್ರಹಗಳನ್ನು ಅದೇ ವರ್ಷದಲ್ಲಿ ಬದಲಾಯಿಸಲಾಗುತ್ತದೆ, ಯಾವ ವರ್ಷದಲ್ಲಿ ಎರಡು ಆಷಾಢ ಬರುತ್ತದೆ.ಈ ಅವಕಾಶವು 19 ವರ್ಷಗಳ ನಂತರ ಬಂದಿದೆ, ಕೆಲವೊಮ್ಮೆ ಇದು 14 ವರ್ಷಗಳಲ್ಲಿ ಸಂಭವಿಸಿದೆ ಅಂತೆ, ಈ ಸಂದರ್ಭವನ್ನು ನವ್-ಕಲ್ವರ್ ಎಂದು ಕರೆಯಲಾಗುತ್ತದೆ....

ಆದರೆ ಮಹಾಪ್ರಭು ಜಗನ್ನಾಥನ ವಿಗ್ರಹದಲ್ಲಿ ಏನಿದೆ ಎಂದು ಹೇಳಲು ಇಲ್ಲಿಯವರೆಗೂ ಯಾವ ಅರ್ಚಕರಿಗೂ ಸಾಧ್ಯವಾಗಿಲ್ಲ ???

ಕೆಲವು ಪುರೋಹಿತರು ಹೇಳುತ್ತಾರೆ ನಾವು ಅವನನ್ನು ಕೈಗೆ ತೆಗೆದುಕೊಂಡಾಗ ಅವನು ಮೊಲದಂತೆ ಜಿಗಿಯುತ್ತಿರುತ್ತಾನೆ ... ನಮ್ಮ ಕೈಯಲ್ಲಿ ಗ್ಲೌಸ್  ಕಣ್ಣುಗಳನ್ನು ಬಟ್ಟೆಗಳಿಂದ ಕಟ್ಟಲಾಗಿರುತ್ತದೆ ಕೇವಲ ನಾವು ಅದನ್ನು ಅನುಭವಿಸಿದ್ದೆವೇ..

ಇಂದಿಗೂ, ಜಗನ್ನಾಥ ಯಾತ್ರೆಯ ಸಂದರ್ಭದಲ್ಲಿ, ಪುರಿಯ ರಾಜ ಸ್ವತಃ ಚಿನ್ನದ ಪೊರಕೆಯೊಂದಿಗೆ ಪೂರ್ತಿ ದೇವಸ್ಥಾನವನ್ನು ಸ್ವಚ್ಛ ಮಾಡಲು ಬರುತ್ತಾರೆ...

ಜಗನ್ನಾಥ ದೇಗುಲದ ಸಿಂಹದ್ವಾರದಿಂದ ಒಳಗೆ ಮೊದಲ ಹೆಜ್ಜೆ ಇಟ್ಟ ತಕ್ಷಣ ಒಳಗೆ ಸಮುದ್ರದ ಅಲೆಗಳ ಸದ್ದು ಕೇಳಿಸುವುದಿಲ್ಲ, ಆದರೆ ಅಚ್ಚರಿಯ ವಿಷಯವೆಂದರೆ ದೇವಾಲಯದಿಂದ ಒಂದು ಹೆಜ್ಜೆ ಹಿಂದೆ ಇಟ್ಟ ತಕ್ಷಣ ಸಾಗರದ ಸದ್ದು. ಕೇಳಿಸುತ್ತೆ.. .!

ಹೆಚ್ಚಿನ ದೇವಾಲಯಗಳ ಶಿಖರದಲ್ಲಿ ಪಕ್ಷಿಗಳು ಕುಳಿತು ಹಾರುವುದನ್ನು ನೀವು ನೋಡಿರಬೇಕು, ಆದರೆ ಜಗನ್ನಾಥ ದೇವಾಲಯದ ಮೇಲೆ ಯಾವುದೇ ಪಕ್ಷಿಗಳು ಹಾದುಹೋಗುವುದಿಲ್ಲ, ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ, ದಿನದ ಯಾವುದೇ ಸಮಯದಲ್ಲಿಯೂ ಸಹ  ಜಗನ್ನಾಥ್ ಮಂದಿರದ ಮುಖ್ಯ ಶಿಖರ ನೆರಳು ಬಿಳಲ್ಲ...

ಜಗನ್ನಾಥ ದೇವಾಲಯದ 45 ಅಂತಸ್ತಿನ ಶಿಖರದಲ್ಲಿರುವ ಧ್ವಜವನ್ನು ಪ್ರತಿದಿನ ಬದಲಾಯಿಸಲಾಗುತ್ತದೆ, ಒಂದು ದಿನವೂ ಧ್ವಜವನ್ನು ಬದಲಾಯಿಸದಿದ್ದರೆ, ದೇವಾಲಯವನ್ನು 18 ವರ್ಷಗಳವರೆಗೆ ಮುಚ್ಚಲಾಗುತ್ತದೆ ಎಂದು ನಂಬಲಾಗಿದೆ...

ಅಂತೆಯೇ, ಜಗನ್ನಾಥ ದೇವಾಲಯದ ಮೇಲ್ಭಾಗದಲ್ಲಿ ಸುದರ್ಶನ ಚಕ್ರವಿದೆ, ಅದು ಪ್ರತಿ ದಿಕ್ಕಿನಿಂದ ನೋಡಿದಾಗ, ನಿಮ್ಮ ಕಡೆಗೆ ಮುಖ ಮಾಡುತ್ತದೆ!

ಭಗವಾನ್ ಜಗನ್ನಾಥ ದೇವಾಲಯದ ಅಡುಗೆಮನೆಯಲ್ಲಿ, ಪ್ರಸಾದವನ್ನು ಬೇಯಿಸಲು 7 ಮಣ್ಣಿನ ಮಡಕೆಗಳನ್ನು ಒಂದರ ಮೇಲೊಂದು ಇರಿಸಲಾಗುತ್ತದೆ, ಇದನ್ನು ಮರದ ಬೆಂಕಿಯಿಂದ ಬೇಯಿಸಲಾಗುತ್ತದೆ, ವಿಚಿತ್ರವೆಂದರೆ ಈ ಸಮಯದಲ್ಲಿ ಮೇಲಿನ ಪಾತ್ರೆಯ ಭಕ್ಷ್ಯ ಮೊದಲು ಬೇಯ್ದಿರುತ್ತದೆ..

ಜಗನ್ನಾಥ ದೇವಸ್ಥಾನದಲ್ಲಿ ಪ್ರತಿದಿನ ಮಾಡುವ ಪ್ರಸಾದವು ಭಕ್ತರಿಗೆ ಎಂದಿಗೂ ಕಡಿಮೆಯಾಗುವುದಿಲ್ಲ, ಆದರೆ ಆಶ್ಚರ್ಯಕರ ವಿಷಯವೆಂದರೆ ದೇವಾಲಯದ ಬಾಗಿಲು ಮುಚ್ಚಿದ ತಕ್ಷಣ ಪ್ರಸಾದವೂ ಕೊನೆಗೊಳ್ಳುತ್ತದೆ ಮತ್ತು ಹೇಳುತ್ತಾ ಹೋದರೆ ಇನ್ನು ಹಲವಾರು ಅದ್ಭುತ ಸಂಗತಿಗಳು ನಮ್ಮ ಸನಾತನ ಧರ್ಮದಲ್ಲಿ ಇದ್ದಾವೆ.....

ಸನಾತನ ಧರ್ಮಕ್ಕೆ ಜಯವಾಗಲಿ...

ಜೈ  ಶ್ರೀ ಜಗನ್ನಾಥ 🙏🙏🙏🌹🌹

Saturday, January 1, 2022

ನಮಗೆ ಎರಡು ಹೊಸ ವರುಷಗಳು ಜನವರಿ 1 ಮತ್ತು ಚೈತ್ರ ಮಾಸದ ಯುಗಾದಿ.ಆಚರಣೆ ಮಾತ್ರ ಭಿನ್ನ. ಯಾವದು ಸರಿ ??

ನಮಗೆ ಎರಡು ಹೊಸ ವರುಷಗಳು ಜನವರಿ 1 ಮತ್ತು ಚೈತ್ರ ಮಾಸದ ಯುಗಾದಿ.ಆಚರಣೆ ಮಾತ್ರ ಭಿನ್ನ. ಯಾವದು ಸರಿ ??
ಎಲ್ಲರಿಗೂ ಹೊಸ ವರುಷದ 
ಶುಭಾಶಯಗಳು.
🌹🌹🌹🌹🌹🌹🌹
ಜನವರಿ 1 =ಜ 
ಯುಗಾದಿ = ಯು

ಜ = ಕುಡಿದು ಮಜಾ ಮಾಡುವ ದಿನ
ಯು = ಮಡಿ ಉಟ್ಟು ಪೂಜೆ ಮಾಡುವ ದಿನ
ಜ = ಮರ ಗಿಡ ಎಲೆ ಉದುರುವ ದಿನ
ಯು = ಎಲೆಗಳು ಚಿಗುರುವ ದಿನ
ಜ = ರಮ್ಮು ಸೋಡಾ ಮಿಶ್ರಣ
ಯು = ಬೇವು ಬೆಲ್ಲ ಮಿಶ್ರಣ
ಜ = ಕುಡಿದು ವಿಕೃತ ಪೂಜೆ
ಯು = ಪ್ರಕೃತಿ ಪೂಜೆ ಆರಾಧನೆ
ಜ = ಹೋಟೆಲ್ ಊಟ ಘಮ ಘಮ
ಯು = ಹಬ್ಬದ ಮನೆ ಹೋಳಿಗೆ ಸಂಭ್ರಮ
ಜ = ಪರಸ್ಪರ ಆಲಿಂಗನ
ಯು = ಹಿರಿಯರಿಗೆ ಅಭಿನಂದನ
ಜ = ಇರುವದಿಲ್ಲ ಶರೀರ ಸಮತೋಲನ
ಯು = ಮನಸಿನ ಸಮತೋಲನ ಪಾಠ ಪ್ರವಚನ
ಜ = ಶೇಂಗಾ ಜೊತೆ ಎಣ್ಣೆ ಪಾನ
ಯು = ಶೇಂಗಾ ಎಣ್ಣೆ ಯಿಂದ ರುಚಿ ಅಡಿಗೆ ವಿಧಾನ
ಜ = ಮತ್ತಿನಲ್ಲಿ ಬೀದಿಯಲ್ಲಿ ಶಯನ
ಯು = ಗುಡಿಯಲ್ಲಿ ಪಂಚಾಂಗ ಶ್ರವಣ.

ಆಯ್ಕೆ ನಿಮಗೆ ಬಿಟ್ಟದ್ದು

ವಂದನೆಗಳೊಂದಿಗೆ

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World